` aapthamitra - chitraloka.com | Kannada Movie News, Reviews | Image

aapthamitra

  • Overseas Market - NRI Talents To Sandalwood - Atlanta Nagendra

    Aapthamitra image

    In early-2000’s, lot of NRI talents were being associated with the Kannada movies (Mano Murthy, Deepali). The NRI talent wanted to show their movies to the local community. This actually gave a huge lift in expanding the Kannada market. The box problem still existed (shipping overhead and cost of the print), but response from the audiences were encouraging.  5-6 films were released every year. 

    Overseas Market - KS Prasad is First Distributor Writes Nagendra

    nanna_preethiya_hudugi.jpg

    In 2005, Actor Producer Director Mr. Dwarakish visited USA to screen his blockbuster movie “Apthamitra”; He was very surprised that there were only 500 people to watch the movie in the Bay Area, California. The movie was a golden jubilee movie in India and broke all the records. Dwarakish told the media, Kannada movies doesn’t have any market compared to all languages. I could not even recover my flight charges and print cost as well. 

    Also See

    (Article by Atlanta Nagendra)

    (to be continued)

    Also See

    Overseas Market - KS Prasad is First Distributor Writes Nagendra

    Overseas Market For Kannada Movies - Atlanta Nagendra

    Chitraloka Updates Round The Clock - Atlanta Nagendra

  • ಆಪ್ತಮಿತ್ರದಂತೆ ಹಿಟ್ ಆಗುತ್ತೆ ಆಯುಷ್ಮಾನ್ ಭವ - ರವಿಚಂದ್ರನ್ ಭವಿಷ್ಯ

    ravichandran predicts ayushmanbhava success

    ಆಪ್ತಮಿತ್ರ, ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ದ್ವಾರಕೀಶ್ ಚಿತ್ರದಲ್ಲಿ ಅತಿ ದೊಡ್ಡ ದಾಖಲೆ ಬರೆದ, ವಿಷ್ಣು ವೃತ್ತಿ ಜೀವನಕ್ಕೆ ಮತ್ತೊಂದು ಮೈಲಿಗಲ್ಲಾದ ಸಿನಿಮಾ. ಅದು ಮಲಯಾಳಂನ ಮಣಿಚಿತ್ರತ್ತಾಳ್ ಚಿತ್ರದ ರೀಮೇಕ್. ನಿರ್ದೇಶಕ ಪಿ.ವಾಸು ಇದೇ ಚಿತ್ರವನ್ನು ತಮಿಳಿನಲ್ಲೂ ನಿರ್ದೇಶಿಸಿದರು. ನಿರ್ಮಾಪಕ ದ್ವಾರಕೀಶ್ ಅವರಿಗೆ 18 ಚಿತ್ರಗಳ ಸತತ ಸೋಲಿನ ನಂತರ ಗೆಲುವು ಕೊಟ್ಟ ಸಿನಿಮಾ ಆಪ್ತಮಿತ್ರ. ತಮಿಳಿನಲ್ಲಿ ಇದೇ ಚಿತ್ರದ ರೀಮೇಕ್ ಚಂದ್ರಮುಖಿ, ಸೂಪರ್ ಸ್ಟಾರ್ ರಜಿನಿಕಾಂತ್ ಅವರಿಗೂ ಲೈಫ್ ಕೊಟ್ಟಿತು. ಈಗ ಈ ಚಿತ್ರದ ಇನ್ನೊಂದು ಗುಟ್ಟು ಹೊರಬಿದ್ದಿದೆ.

    ಆಪ್ತಮಿತ್ರ ಚಿತ್ರವನ್ನು ರವಿಚಂದ್ರನ್ ಮಾಡಬೇಕಿತ್ತಂತೆ. ಈ ವಿಷಯವನ್ನು ಸ್ವತಃ ರವಿಚಂದ್ರನ್ ಅವರೇ ಹೇಳಿರುವುದು ವಿಶೇಷ. ಆಯುಷ್ಮಾನ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರವಿಚಂದ್ರನ್ ಆಪ್ತಮಿತ್ರ ಚಿತ್ರವನ್ನು ನಾನು ಮಾಡಬೇಕಿತ್ತು. ಕಥೆ ಇಷ್ಟವಾಗಿತ್ತು. ನಾನು ಹೆಜ್ಜೆ ಹಾಕುವ ಹೊತ್ತಿಗೆ ಅಲ್ಲಾಗಲೇ ಯೋಗೇಶ್ ಇದ್ರು. ನೀನೇ ಮಾಡು ಎಂದೆ. ಆಗಲೇ ಅವರಿಗೆ ಒಂದು ಮಾತು ಹೇಳಿದ್ದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ. ನೋಡ್ತಿರು ಎಂದಿದ್ದೆ ಎಂದಿದ್ದಾರೆ ರವಿಚಂದ್ರನ್.

    ವಿಶೇಷ ಅಷ್ಟಕ್ಕೇ ಮುಗಿದಿಲ್ಲ. ಆಯುಷ್ಮಾನ್ ಭವ ಕೂಡಾ ಆಪ್ತಮಿತ್ರದಂತೆಯೇ ಹಿಟ್ ಆಗಲಿದೆ. ಏಕೆಂದರೆ ಸಿನಿಮಾ ಮಾಡಿದವರ ಮುಖದಲ್ಲಿ ಸಂಭ್ರಮವಿದೆ. ಚಿತ್ರದಲ್ಲಿ ಏನೋ ಒಂದು ವಿಶೇಷ ಕಾಣಿಸ್ತಿದೆ. ಇದೆಲ್ಲ ಇದ್ದಾಗ ಗೆಲುವಿಗೆ ಕಷ್ಟವಿಲ್ಲ. ಇದು ಕೂಡಾ ಆಪ್ತಮಿತ್ರದಂತೆಯೇ ಗೆಲುವು ಕಾಣಲಿದೆ ಎಂದಿದ್ದಾರೆ ರವಿಚಂದ್ರನ್.

    ಅಂದಹಾಗೆ ರವಿಚಂದ್ರನ್ ಜ್ಯೋತಿಷಿಯಲ್ಲ. ಆದರೆ, ಇದುವರೆಗೆ ರವಿಚಂದ್ರನ್ ಹಿಟ್ ಆಗಲಿದೆ ಎಂದು ಹೇಳಿದ ಸಿನಿಮಾಗಳು ಸೋತ ಉದಾಹರಣೆ ಇಲ್ಲ. ಶಿವಣ್ಣ, ರಚಿತಾರಾಮ್, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ನಟಿಸಿರುವ ಪಿ.ವಾಸು ನಿರ್ದೇಶನದ ಸಿನಿಮಾ ಮತ್ತೊಂದು ಆಪ್ತಮಿತ್ರ ಆಗುತ್ತಾ..? ನವೆಂಬರ್ 1ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ ಆಯುಷ್ಮಾನ್ ಭವ. 

  • ಪೋಷಕ ನಟ ಸತ್ಯಜಿತ್ ನಿಧನ

    sathyajith image

    ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಸತ್ಯಜಿತ್ ನಿಧನರಾಗಿದ್ದಾರೆ. ಇಂದು ರಾತ್ರಿ 2  ಘಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಸತ್ಯಜಿತ್ ಅವರ ಮೂಲ ಹೆಸರು ಸಯ್ಯದ್ ನಿಜಾಮುದ್ದೀನ್. 650ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರೋ ಸತ್ಯಜಿತ್‌ ಒಂದು ಕಾಲದಲ್ಲಿ ಬಹುಬೇಡಿಕೆ ಪೋಷಕ ನಟನಾಗಿದ್ದರು. ಸತ್ಯಜಿತ್‌ ವಿಲನ್ ಹಾಗೂ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಪುಟ್ನಂಜ, ಶಿವ ಮೆಚ್ಚಿದ ಕಣ್ಣಪ್ಪ, ಅಪ್ಪು, ಚೈತ್ರದ ಪ್ರೇಮಾಂಜಲಿ, ಆಪ್ತಮಿತ್ರ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. 

    ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲ ವರ್ಷಗಳ ಹಿಂದೆ ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಒಂದು ಕಾಲನ್ನು ಕಳೆದುಕೊಂಡಿದ್ದರು.   ಹೃದಯಾಘಾತವೂ ಆಗಿತ್ತು.

    ಇಂದು ಮಧ್ಯಾಹ್ನ ಮುಸ್ಲಿಂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ.

    ಮದ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.