` rajanikanth - chitraloka.com | Kannada Movie News, Reviews | Image

rajanikanth

  • Kabali Not Screening At Five Star Hotels

    kabali movie image
    Rajinikanth starrer Kabali movie has created much hype in Bengaluru for getting the movie screened in five star hotels. Ticket was priced around Rs 1,300 included lunch/dinner. People had booked the tickets through 'book my show' app.
     

    kabali_notice.jpg

    Kfcc had opposed for the movie getting screened at Hotels and had given letters to police commissioner and met Bengaluru DC Shankar . On Wednesday afternoon DC Shankar denied the permission for Kabali screening in Five star hotels.
     
    Sources to chitraloka that, many had already booked the tickets for the hotel show. Now book my show will be refunding the ticket amount. But this unique screening has failed and huge investment has been lost from this.
     
    Also See
     
     
  • Kabali Scares Kannada Films

    kabali movie image

    Several Kannada films which were planning their release in July have put off their releases due to Rajinikanth's Kabali. The Tamil film was first announced to release on July 15. So films that were to release on that date postponed their release. Now when Kabali's release was changed to July 22, films once again have to re-organise their releases. One example is Santeyalli Ninta Kabeera.

    It was scheduled to release on July 22 in the belief that Kabali was releasing on 15th. But when the release was changed to 22nd, Kabeera's release has been re-scheduled to 29th. Another big film that has re-scheduled its release is Kotigobba 2. The fact that the film has been made in both Kannada and Tamil added to its problems. Even if the Kannada film could be released in Karnataka, it would have problems finding theatres in Tamil Nadu for the Tamil version.

    So the film is likely to now release only in August. Several other films also did not want to face the heat from Kabali and therefore there could hardly be any Kannada films releasing on July 22.

  • Kabali To Be Screened In Five Star Hotels

    kabali movie image

    Rajanikanth starrer Kabali which will be releasing on Friday World-Wide is all set to be screened in Five Star hotels this time apart from theaters. Lahari Audio and Rockline Entertainments will be jointly screening the film in four Five Star hotels including Lalith Ashok, Royal Orchid in Yelahanka, Crown Plaza and J W Mariott hotels in Bangalore.

    The ticket has been priced at 1000 Rs per ticket and there will be three shows in each hotel from Friday to Sunday. The shows will be held at 1.30, 4.30 and 7.30 PM for three days. The ticket includes screening plus lunch or dinner for the people who watch the film.

    Also See

    Kabali Scares Kannada Films

  • Rajanikanth Advised Ambarish To Act In Remake Of Power Pandi

    rajanikanth advised ambareesh

    Ambarish is all set to act in the remake of Tamil hit 'Power Pandi' directed by actor Dhanush. Do you now who advised Ambarish to act in the Kannada remake of the film? It's none other than Super Star Rajanikanth.

    Ambarish himself said that it was Rajanikanth to act in such a film as the film is prior to his age and star status.

    'I got a phone call from Rajanikanth one day and it was he who advised me to act in the Kannada version. The film is apt to today's audience and apt for my age also. I am looking forward to act in the film' said Ambarish.

    Related Articles :-

    ಅಂಬಿ ನಿಂಗೆ ವಯಸ್ಸಾಯ್ತಾ..? - ಶಿಫಾರಸು ರಜಿನಿಕಾಂತ್‍ರದ್ದು..!

  • ಅಣ್ಣನನ್ನು ನೋಡಲು ಓಡಿ ಬಂದ ರಜನಿಕಾಂತ್

    rajanikanth vists hs brother who underwent knee operation

    ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಬೆಂಗಳೂರು ತವರು ಮನೆ. ಸದ್ದಿಲ್ಲದೆ ಬಂದು ಹೋಗುವ ರಜನಿಕಾಂತ್, ಈಗ ಮತ್ತೊಮ್ಮೆ ಬೆಂಗಳೂರಿನಲ್ಲೇ ಇದ್ದಾರೆ. ಅದು ಅವರ ಅಣ್ಣನ ಯೋಗಕ್ಷೇಮ ವಿಚಾರಿಸಲು.

    ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ ರಾವ್ ಗಾಯಕ್‍ವಾಡ್ ಅವರಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ಆಗಿದೆ. ಶೇಷಾದ್ರಿಪುರಂನಲ್ಲಿರೋ ಆಸ್ಪತ್ರೆಯಲ್ಲಿ ಆಪರೇಷನ್ ಯಶಸ್ವಿಯೂ ಆಗಿದೆ. 77 ವರ್ಷದ ಅಣ್ಣನ ಆಪರೇಷನ್‍ಗಾಗಿ ರಜನಿ ಬೆಂಗಳೂರಿಗೆ ಬಂದಿದ್ದರು. ಸದ್ಯಕ್ಕೆ ಬೆಂಗಳೂರಿನಲ್ಲಿಯೇ ಇದ್ದಾರೆ ರಜನಿಕಾಂತ್.

  • ಅಪ್ಪುಗೆ ಸ್ವತಃ ಕಾಫಿ ಮಾಡಿಕೊಟ್ಟಿದ್ದರಂತೆ ರಜನಿಕಾಂತ್..!

    ಅಪ್ಪುಗೆ ಸ್ವತಃ ಕಾಫಿ ಮಾಡಿಕೊಟ್ಟಿದ್ದರಂತೆ ರಜನಿಕಾಂತ್..!

    ಯುವರತ್ನ ಚಿತ್ರ ರಿಲೀಸ್ ಆಗುತ್ತಿರೋ ಸಂದರ್ಭದಲ್ಲಿ ಪುನೀತ್ ಅವರಿಗೆ ಮತ್ತೆ ಮತ್ತೆ ಕಾಡಿರುವುದು ರಜನಿಕಾಂತ್ ನೆನಪು. ರಜನಿಕಾಂತ್, ರಾಜ್ ಕುಟುಂಬಕ್ಕೆ ದೂರದವರೇನಲ್ಲ. ರಜನಿಕಾಂತ್ ಅವರನ್ನೂ ರಾಜ್ ಮನೆಯವರು ಮಾಮಾ ಎಂದೇ ಪ್ರೀತಿಯಂತೆ ಕರೆಯುತ್ತಾರೆ. ಅಪ್ಪು ಚಿತ್ರ ರಿಲೀಸ್ ಆಗಿ 100 ದಿನ ಓಡಿದ ಸಂದರ್ಭದಲ್ಲಿ ರಜನಿಕಾಂತ್ ಆ ಚಿತ್ರದ ಶತದಿನೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದರು. ಹೋಟೆಲ್ನಲ್ಲಿ ರೂಂ ಮಾಡಿಕೊಂಡಿದ್ದ ರಜನಿ, ಆಗ ಪ್ರತಿದಿನ ಡಾ.ರಾಜ್ ಅವರ ಜೊತೆ ವಾಕ್ ಮಾಡುತ್ತಿದ್ದರು. ಶತದಿನೋತ್ಸವದ ದಿನ ರಜನಿಯವರೇ ಗೆಸ್ಟ್. ಒಂದ್ಸಲ ರೂಮಿಗೆ ಬಾ ಎಂದು ಕರೆದಿದ್ದರಂತೆ ರಜನಿ.

    ಫುಲ್ ಖುಷಿಯಾಗಿ ಹೋದ ಅಪ್ಪು, ಪತ್ನಿಯನ್ನೂ ಕರೆದುಕೊಂಡು, ಮನೆಯಲ್ಲಿ ವೆರೈಟಿ ವೆರೈಟಿ ಅಡುಗೆಯನ್ನೂ ಮಾಡಿಕೊಂಡು ರಜನಿ ಇದ್ದ ಹೋಟೆಲ್ಗೆ ಹೋದರೆ, ಅಲ್ಲಿ ಒಬ್ಬರೇ ಇದ್ದ ರಜನಿ, ಕುಳಿತುಕೋ ಎಂದು ಹೇಳಿ ಸ್ವತಃ ತಾವೇ ಕಾಫಿ ಮಾಡಿಕೊಟ್ಟರಂತೆ. ಸೂಪರ್ ಸ್ಟಾರ್ ಕೈಯಾರೆ ಕಾಫಿ ಮಾಡಿಕೊಡ್ತಿದ್ದಾರೆ. ಅದೃಷ್ಟ ಯಾರಿಗುಂಟು ಯಾರಿಗಿಲ್ಲ ಎಂದು ಪತ್ನಿಗೆ ಹೇಳಿ ಖುಷಿಯಾಗಿ ಕಾಫಿ ಕುಡಿದಿದ್ದರಂತೆ ಪುನೀತ್. ಆ ದಿನ ಪುನೀತ್ ಜೊತೆಯಲ್ಲೇ ಕುಳಿತು ಅಪ್ಪು ಚಿತ್ರ ನೋಡಿದ್ದ ರಜನಿ, ಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದರಂತೆ. ಇದು ರಾಜ್ ಕುಮಾರ್ ಮಗ ಅನ್ನೋ ಕಾರಣಕ್ಕಲ್ಲ, ಪುನೀತ್ ಅವರ ನಟನೆಗೆ. ಅವರದ್ದು ಅಂತರಂಗದ ಅಭಿನಯ ಎಂದು ಹೊಗಳಿದ್ದರಂತೆ.

    ಆ ಚಿತ್ರ ರಿಲೀಸ್ ಆಗಿ 20 ವರ್ಷಗಳೇ ಕಳೆದುಹೋಗಿವೆ. ಈಗ ಪುನೀತ್ ಮತ್ತೊಮ್ಮೆ ಅಪ್ಪು ಸ್ಟೈಲ್ನಲ್ಲಿಯೇ ಯುವರತ್ನದಲ್ಲಿ ಬರುತ್ತಿದ್ದಾರೆ. ಚಪ್ಪಾಳೆಯ ಸದ್ದು ಈಗಾಗಲೇ ಕರ್ನಾಟಕದಲ್ಲೆಲ್ಲ ಸದ್ದು ಮಾಡ್ತಿದೆ.

  • ಅಂಬಿ ನಿಂಗೆ ವಯಸ್ಸಾಯ್ತಾ..? - ಶಿಫಾರಸು ರಜಿನಿಕಾಂತ್‍ರದ್ದು..!

    rajanikanth ambi during ambi's 60th birthday

    ಅಂಬಿ ನಿಂಗೆ ವಯಸ್ಸಾಯ್ತಾ..? ಇದು ರೆಬಲ್‍ಸ್ಟಾರ್ ಅಂಬರೀಷ್ ಅಭಿನಯಿಸುತ್ತಿರುವ ಸಿನಿಮಾ. ಆ ಸಿನಿಮಾದಲ್ಲಿ ಅಂಬರೀಷ್ ಮತ್ತು ಸುದೀಪ್ ಜೊತೆಗೇ ನಟಿಸಲಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಅಂಬರೀಷ್ ಸೂಕ್ತ ಆಯ್ಕೆ ಎಂದು ಹೇಳಿದ್ದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್.

    ಇದು ವೊರಿಜಿನಲ್ ಅಲ್ಲ. ತಮಿಳಿನ ಪಾ ಪಾಂಡಿ ಚಿತ್ರದ ರೀಮೇಕ್. ಅದು ರಜಿನಿ ಅವರ ಅಳಿಯ ಧನುಷ್ ನಟಿಸಿದ್ದ ಸಿನಿಮಾ. ಅದರಲ್ಲಿ ರಾಜ್‍ಕಿರಣ್ ಸ್ಟಂಟ್‍ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ಅದು ವೃತ್ತಿಯಿಂದ ನಿವೃತ್ತರಾದ ನಂತರ ವೃದ್ಧನೊಬ್ಬ ಅನುಭವಿಸುವ ಸಮಸ್ಯೆಗಳ ಕಥೆ. ಹಾಗೆ ತನ್ನ ಉಳಿತಾಯದ ಹಣದಲ್ಲಿ ಬುಲೆಟ್ ಮೇಲೆ ಹಳೆಯ ಪ್ರೇಮಿಯನ್ನು ಹುಡುಕುತ್ತಾ ಹೊರಡುವ ರಾಜ್‍ಕಿರಣ್, ದಾರಿಯಲ್ಲಿ ತನ್ನ ಯೌವ್ವನದ ದಿನಗಳ ಪ್ರೇಮ ಕಥೆ ಹೇಳುತ್ತಾ ಹೋಗುತ್ತಾನೆ.

    ಆ ಯೌವ್ವನದ ದಿನಗಳ ಯುವಕನ ಪಾತ್ರದಲ್ಲಿ ನಟಿಸಿದ್ದವರು ಧನುಷ್. ಆ ಪಾತ್ರವನ್ನು ಕನ್ನಡದಲ್ಲಿ ಮಾಡುತ್ತಿರುವುದು ಕಿಚ್ಚ ಸುದೀಪ್. ವಯಸ್ಸಾದ ಮೇಲಿನ ಪಾತ್ರ ಅಂಬರೀಷ್ ಅವರದ್ದು.

    ಅದ್ಭುತ ಭಾವನೆಗಳ ಸಮ್ಮಿಲನವಾಗಿರುವ ಈ ಚಿತ್ರದಲ್ಲಿ ಅಂಬರೀಷ್ ಮತ್ತು ಸುದೀಪ್‍ಗೆ ಅಭಿಯನಯಕ್ಕೆ ಭರಪೂರ ಅವಕಾಶಗಳಿವೆ. ಕಥೆಯೇ ವಿಭಿನ್ನವಾಗಿದ್ದು, ಆ ಚಿತ್ರವನ್ನು ನಿರ್ದೇಶಿಸುತ್ತಿರುವುದು ನಂದಕಿಶೋರ್.

    ಈ ಹಿಂದೆ ವೀರಪರಂಪರೆ ಚಿತ್ರದಲ್ಲಿ ಅಂಬಿ ಮತ್ತು ಸುದೀಪ್ ಒಟ್ಟಿಗೇ ಅಭಿನಯಿಸಿದ್ದರು. ಈಗ 8 ವರ್ಷಗಳ ನಂತರ ತೆರೆಯ ಮೇಲೆ ಮತ್ತೆ ಅಂಬಿ ಮತ್ತು ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅಂಬರೀಷ್, ಬಹಳ ವರ್ಷಗಳ ನಂತರ ಲೀಡ್ ರೋಲ್‍ನಲ್ಲಿ ನಟಿಸುತ್ತಿರುವುದು ವಿಶೇಷ.

  • ಅಂಬಿ ಸ್ನೇಹಕ್ಕಾಗಿ ಭಿಕ್ಷುಕನಾಗಲೂ ರೆಡಿ ಇದ್ದ ರಜನಿಕಾಂತ್..!

    rajanaikanth was ready to act as beggar in abishek's movie

    ಅಭಿಷೇಕ್ ಅಂಬರೀಷ್ ಅಭಿನಯದ ಅಮರ್ ಸಿನಿಮಾ, ಮೇ 31ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಅಭಿಷೇಕ್ ಜೊತೆ ಅಣ್ಣ ದರ್ಶನ್, ರಂಗಿತರಂಗದ ನಿರೂಪ್ ಬಂಡಾರಿ, ರಚಿತಾ ರಾಮ್ ಮೊದಲಾದವರು ನಟಿಸಿದ್ದಾರೆ. ಕೇವಲ ಅಂಬಿಗಾಗಿ.. ದರ್ಶನ್ ಅವರ ಅಂಬಿ ಪ್ರೀತಿಯನ್ನು ಪದೇ ಪದೇ ಹೇಳುವ ಅಗತ್ಯವೇನೂ ಇಲ್ಲ. ಅಂಬರೀಷ್‍ಗೆ ತಂದೆಯ ಸ್ಥಾನ ಕೊಟ್ಟಿರುವ ದರ್ಶನ್, ಅದನ್ನು ಮುಚ್ಚಿಟ್ಟುಕೊಂಡವರೂ ಅಲ್ಲ.

    ಆದರೆ, ವಿಶೇಷವೇನು ಗೊತ್ತೇ. ಅಂಬರೀಷ್‍ರ ಆಪ್ತಮಿತ್ರರಾಗಿದ್ದ ರಜನಿಕಾಂತ್, ಅಂಬಿಯ ಮಗನ ಚಿತ್ರದಲ್ಲಿ ಒಂದು ಪುಟ್ಟ ಪಾತ್ರವನ್ನಾದರೂ ಕೊಡು ಎಂದು ನಿರ್ದೇಶಕರಿಗೆ ಕೇಳಿದ್ದರಂತೆ. ಕಡೆಗೆ ಭಿಕ್ಷುಕನ ಪಾತ್ರವಾದರೂ ಸರಿ, ನಟಿಸುತ್ತೇನೆ ಎಂದಿದ್ದರಂತೆ. ಜಸ್ಟ್ ಫಾರ್ ಅಂಬರೀಷ್ ಸ್ನೇಹ. ಅವರಷ್ಟೇ ಅಲ್ಲ, ತೆಲುಗಿನ ಸ್ಟಾರ್ ನಟ ಮೋಹನ್ ಬಾಬು, ವಿಲನ್ ಆಗಿ ನಟಿಸೋಕೆ ನಾನು ರೆಡಿ ಎಂದಿದ್ದರಂತೆ. 

    ಕಥೆಗೆ ಅಗತ್ಯವಿದ್ದರೆ, ಅವರು ಆ ಪಾತ್ರಗಳಿಗೆ ಒಪ್ಪುವಂತಿದ್ದರೆ ಮಾತ್ರ  ಹೇಳು. ಅವರು ನಟಿಸುತ್ತಾರೆ ಎಂದು ಸಿಕ್ಕ ಸಿಕ್ಕ ಪಾತ್ರಗಳನ್ನೆಲ್ಲ ಮಾಡಿಸಿದರೆ, ಅವರ ಗೌರವವೂ ಕಡಿಮೆಯಾಗುತ್ತೆ ಎಂದಿದ್ದರಂತೆ ಅಂಬರೀಷ್. 

    ಅದಕ್ಕೆ ತಕ್ಕಂತೆ ನಮ್ಮ ಕಥೆಯಲ್ಲಿ ಅವರಿಗೆ ಸೂಟ್ ಆಗುವ ಪಾತ್ರಗಳು ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ ನಾಗಶೇಖರ್. ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದಲ್ಲಿ ತಾನ್ಯಾ ಹೋಪ್ ನಾಯಕಿಯಾಗಿದ್ದು, ಸಿನಿಮಾವನ್ನು ಇಡೀ ಕನ್ನಡ ಚಿತ್ರರಂಗ ಎದುರು ನೋಡುತ್ತಿದೆ.

  • ಅಭಿಮಾನಿಗಳ ಎದುರು ಅಣ್ಣಾವ್ರನ್ನು ನೆನಪಿಸಿಕೊಂಡ ರಜಿನಿಕಾಂತ್

    rajanikanh shares an incident about rajkumar

    ತಮಿಳರ ಆರಾಧ್ಯದೈವವಾಗಿರುವ ಸೂಪರ್ ಸ್ಟಾರ್ ರಜಿನಿಕಾಂತ್, ಸರಳತೆಯನ್ನೇ ಮೈಗೂಡಿಸಿಕೊಂಡವರು. ಡಿ.31ಕ್ಕೆ ರಾಜಕೀಯ ಪ್ರವೇಶ ಕುರಿತಂತೆ ಅಧಿಕೃತವಾಗಿ ಪ್ರಕಟಿಸುವುದಾಗಿ ಹೇಳಿರುವ ರಜಿನಿಕಾಂತ್, ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ರಜಿನಿ ದರ್ಶನಕ್ಕೆ ಬಂದ ಆಭಿಮಾನಿಗಳು ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಕಂಡ ರಜಿನಿಕಾಂತ್, ಅಭಿಮಾನಿಗಳಿಗೆ ದೇವರು, ತಂದೆ, ತಾಯಿ ಕಾಲಿಗೆ ಮಾತ್ರ ಬಿದ್ದು ನಮಸ್ಕರಿಸಿ. ಜನಪ್ರಿಯತೆ, ಅಧಿಕಾರದ ಕಾರಣಕ್ಕೆ ಕಾಲಿಗೆ ಬೀಳಬೇಡಿ ಎಂದು ಮನವಿ ಮಾಡಿದರು. ಆದರೂ ಅಭಿಮಾನಿಗಳು ಕೇಳಲಿಲ್ಲ. ಆಗ ಸ್ವತಃ ತಮ್ಮ ಅನುಭವ ಹೇಳಿಕೊಂಡ ರಜಿನಿ, ಅಣ್ಣಾವ್ರನ್ನು ಸ್ಮರಿಸಿದರು.

    ತಾವು ಮೊದಲ ಬಾರಿ ಡಾ.ರಾಜ್‍ರನ್ನು ಭೇಟಿ ಮಾಡಿದಾಗ, ಅವರಾಗಲೇ ಸೂಪರ್ ಸ್ಟಾರ್. ನನಗಾಗ 16ನೇ ವಯಸ್ಸು. ಅವರನ್ನು ಆ ದಿನ ಉತ್ಸಾಹದಿಂದ ಹೋಗಿ ಮುಟ್ಟಿ ಪುಳಕಗೊಂಡಿದ್ದೆ. ಎಂಜಿಆರ್, ಶಿವಾಜಿಗಣೇಶನ್ ಇಬ್ಬರೂ ಸೇರಿದರೆ ಅದು ಡಾ.ರಾಜ್‍ಕುಮಾರ್. ಅವರ ಸರಳ ವ್ಯಕ್ತಿತ್ವ ನನಗೆ ಸದಾ ಸ್ಫೂರ್ತಿ ಎಂದು ಸ್ಮರಿಸಿದ್ದಾರೆ.

  • ತಮಿಳುನಾಡು ರಾಜಕೀಯಕ್ಕೆ ರಜಿನಿಕಾಂತ್ - ಅಧಿಕೃತ ಘೋಷಣೆ

    rajanikanth political entry

    ತಮಿಳರ ಆರಾಧ್ಯ ದೈವ ಸೂಪರ್ ಸ್ಟಾರ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..? ಇಂಥಾದ್ದೊಂದು ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿ.31ರಂದು ಅಧಿಕೃತ ಘೋಷಣೆ ಮಾಡೋದಾಗಿ ಹೇಳಿದ್ದ ರಜಿನಿಕಾಂತ್, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಹೊಸ ಪಕ್ಷ ಸ್ಥಾಪಿಸಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

    ಬೇರೆ ರಾಜ್ಯದವರು ತಮಿಳುನಾಡನ್ನು ಆಡಿಕೊಂಡು ಗೇಲಿ ಮಾಡುವಾಗ ನನಗೆ ಬೇಸರವಾಗುತ್ತೆ. ರಾಜಕಾರಣಿಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಮ್ಮನ್ನೇ ಲೂಟಿ ಮಾಡಿ, ಉದ್ಧಾರಕರಂತೆ ತೋರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಏನಾದರೂ ಬದಲಾವಣೆ ಮಾಡಬೇಕು ಎನ್ನಿಸಿ ರಾಜಕೀಯಕ್ಕೆ ಬರುತ್ತಿದ್ದೇನೆ ಎಂದು ಘೋಷಿಸಿದ್ದಾರೆ ರಜಿನಿಕಾಂತ್.

    ಅಭಿಮಾನಿಗಳ ಜೊತೆ ನಿರಂತರ ಸಂವಾದ ನಡೆಸುತ್ತಿದ್ದ ರಜನಿ, ನನಗೆ ಈಗಲೂ ತಮಿಳು ಕನ್ನಡದಷ್ಟು ಸರಾಗವಾಗಿ ಬರುವುದಿಲ್ಲ. ತಮಿಳು ನನಗೆ ಅನ್ನ ಕೊಟ್ಟ ಭಾಷೆ. ಗುರುಗಳಾದ ಬಾಲಚಂದರ್ ಅವರ ಸಲಹೆಯಂತೆ ನಾನು ತಮಿಳು ಕಲಿತೆ ಎಂದಿದ್ದ ರಜಿನಿ, ತಮ್ಮ ಕನ್ನಡತನವನ್ನು ಮೆರೆದಿದ್ದರು. ಮನೆ ಮಾತು ಕನ್ನಡ ಎಂದಿದ್ದ ರಜನಿಕಾಂತ್, ಡಾ.ರಾಜ್ ಕುಮಾರ್ ಮೇಲಿನ ಅಭಿಮಾನವನ್ನೂ ಮುಕ್ತವಾಗಿ ಹೇಳಿಕೊಂಡಿದ್ದರು.

    ಭಾಷೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಮಿಳಿಗರ ಎದುರು ರಜನಿಕಾಂತ್ ನೀಡಿದ್ದ ಈ ಹೇಳಿಕೆಗಳು, ರಜಿನಿ ರಾಜಕೀಯಕ್ಕೆ ಬರುವುದೇ ಇಲ್ಲ ಎಂಬ ಧ್ವನಿಗೆ ಮಹತ್ವ ಕೊಟ್ಟಿದ್ದವು. ಆದರೆ, ಅವೆಲ್ಲವನ್ನೂ ಸುಳ್ಳು ಮಾಡುವಂತೆ ರಜಿನಿಕಾಂತ್ ತಮ್ಮ ರಾಜಕೀಯ ಪ್ರವೇಶ ಘೋಷಿಸಿದ್ದಾರೆ.

    ಇಷ್ಟು ದಿನ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದ ರಜಿನಿಕಾಂತ್, ಈಗ ಅಧಿಕೃತವಾಗಿ, ಅನುಮಾನಕ್ಕೆ ಅವಕಾಶವೇ ಇಲ್ಲದಂತೆ ತಮ್ಮ ರಾಜಕೀಯ ಪ್ರವೇಶ ಘೋಷಿಸಿದ್ದಾರೆ.

  • ಮಗನ ಮದುವೆಗೆ ರಜನಿಕಾಂತ್‍ಗೆ ಆಮಂತ್ರಣ

    sa ra govindu meets rajanikanth

    ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಅವರ ಮಗ ಅನೂಪ್ ಅವರ ಮದುವೆ ಫೆಬ್ರವರಿ 19ರಂದು ನಡೆಯಲಿದೆ. ಗೋವಿಂದು ಅವರ ಮಗನ ಮದುವೆಯೆಂದರೆ, ಸಹಜವಾಗಿಯೇ ಇಡೀ ಚಿತ್ರರಂಗ ಅತಿಥಿಯಾಗುತ್ತೆ. ಮದುವೆಗೆ ಗಣ್ಯರನ್ನು ಆಹ್ವಾನಿಸಲೆಂದೇ ಒಂದು ತಿಂಗಳು ಸಮಯವನ್ನಿಟ್ಟುಕೊಂಡಿರುವ ಗೋವಿಂದು ಅವರ ಬಳಗ ದೊಡ್ಡದು.

    ಸ್ನೇಹಿತರು, ಹಿತೈಶಿಗಳಿಗೆ ಅಹ್ವಾನ ನೀಡಲು ಚೆನ್ನೈಗೆ ಹೋಗಿದ್ದ ಗೋವಿಂದು, ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನೂ ಮಗನ ಮದುವೆಗೆ ಆಹ್ವಾನಿಸಿದ್ದಾರೆ. ಮನೆಯಲ್ಲಿಯೇ ಗೋವಿಂದು ಅವರನ್ನು ಭೇಟಿ ಮಾಡಿರುವ ರಜಿನಿ, ಮದುವೆಗೆ ಖಂಡಿತಾ ಬರುತ್ತೇನೆ ಎಂದು ಭರವಸೆಯನ್ನೂ ಕೊಟ್ಟಿದ್ದಾರೆ. 

     

  • ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ..!

    manvitha draws sketches of rajkumar and rajanikanth

    ಟಗರು ಪುಟ್ಟಿ ಮಾನ್ವಿತಾ ಪೇಂಯ್ಟಿಂಗ್ ಕೂಡಾ ಮಾಡ್ತಾರೆ. ಹೌದು, ಟಗರು ಚಿತ್ರದ ಈ ಕೆಂಡಸಂಪಿಗೆ, ಫ್ರೀ ಇದ್ದಾಗ ಬೇರೆ ಬೇರೆ ಹವ್ಯಾಸಗಳನ್ನಿಟ್ಟುಕೊಂಡಿದ್ದಾರೆ. ಓದುವುದು ಅವರ ನೆಚ್ಚಿನ ಹವ್ಯಾಸ. ಇದರ ಜೊತೆ ಪೇಂಯ್ಟಿಂಗ್, ಡ್ರಾಯಿಂಗ್ ಹವ್ಯಾಸವೂ ಇದೆ. 

    ಹೀಗೆಯೇ ಇತ್ತೀಚೆಗೆ ಡಾ.ರಾಜ್ ಕುಮಾರ್ ಹಾಗೂ ರಜನಿಕಾಂತ್ ಚಿತ್ರಗಳನ್ನು ಡ್ರಾಯಿಂಗ್ ಮಾಡಬೇಕು ಎನಿಸಿದೆ. ತಕ್ಷಣ ಬ್ರಷ್ ತೆಗೆದುಕೊಂಡಿದ್ದಾರೆ. ಬ್ಲೂ ಇಂಕ್ ಪೆನ್‍ನಲ್ಲಿ ಒಮ್ಮೆಯೂ ಅಳಿಸದೆ ಇಬ್ಬರೂ ಸ್ಟಾರ್ ನಟರ ಚಿತ್ರವನ್ನು ಅರಳಿಸಿದ್ದಾರೆ.

    ಅನಿಮೇಷನ್ ಕೋರ್ಸ್ ಮಾಡಿರೋದ್ರಿಂದ ಪೆನ್ ಹಾಗೂ ಪೆನ್ಸಿಲ್ ಸ್ಕೆಚ್ ಮಾಡೋದು ಗೊತ್ತು. ಡ್ರಾಯಿಂಗ್ ಮಾಡೋದೆಂದರೆ ನನಗೆ ಬಹಳ ಇಷ್ಟ. ಅದು ನನ್ನ ಬಾಲ್ಯವನ್ನು ನೆನಪಿಸುತ್ತೆ ಎಂದು ಹೇಳಿಕೊಂಡಿದ್ದಾರೆ ಮಾನ್ವಿತಾ.

  • ರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ

    bomb threat to actor rajanikanth's house

    ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿದ್ದೇನೆ. ಸಾಧ್ಯವಾದರೆ ರಕ್ಷಿಸಿಕೊಳ್ಳಿ.. ಎಂದು ಪಕ್ಕಾ ಸಿನಿಮೀಯ ಸ್ಟೈಲಿನಲ್ಲೇ ಪೊಲೀಸರಿಗೆ ಒಂದು ಕರೆ ಬಂತು. ಪೊಲೀಸರು ಎದ್ದೆನೋ.. ಬಿದ್ದೆನೋ.. ಎಂದು ತಡಮಾಡದೆ ಸ್ಥಳಕ್ಕೆ ಓಡಿದರು.. ಗಂಟೆಗಟ್ಟಲೆ ಪರಿಶೀಲನೆ ನಡೆಸಿದ್ರು.

    ಏನೂ ಸಿಕ್ಕಲಿಲ್ಲ. ಬಾಂಬ್ ಕೂಡ ಇರಲಿಲ್ಲ. ಕೊನೆಗೆ ನಿಟ್ಟುಸಿರು ಬಿಟ್ಟರು. ಈಗ ಆ ಫೋನ್ ಮಾಡಿದವನು ಯಾರು ಎಂದು ಹುಡುಕುತ್ತಿದ್ದಾರೆ ಚೆನ್ನೈ ಪೊಲೀಸರು.

  • ರಜನಿಕಾಂತ್-ಬಹದ್ದೂರ್ ಗೆಳೆತನವೇ ಈ ಸಿನಿಮಾ ಕಥೆ..!

    one way has story of rajanikanth

    ರಜನಿಕಾಂತ್, ಇಂಡಿಯಾದ ಸೂಪರ್ ಸ್ಟಾರ್. ರಾಜ್ ಬಹದ್ದೂರ್, ರಜನಿಕಾಂತ್‍ರ ಗೆಳೆಯ. ಅವರ ಗೆಳೆತನಕ್ಕೆ ಅವರ ವಯಸ್ಸಿನಷ್ಟೇ ಇತಿಹಾಸವಿದೆ. ರಜನಿ, ಸೂಪರ್ ಸ್ಟಾರ್ ಆದ ನಂತರವೂ ಬಹದ್ದೂರ್ ಜೊತೆಗಿನ ಗೆಳೆತನ ಉಳಿದುಕೊಂಡಿದ್ದು ಹೇಗೆ ಅನ್ನೋದು ಹಲವರನ್ನು ಕಾಡುವ ಪ್ರಶ್ನೆ. ಈಗ ಆ ಗೆಳೆತನದ ಕಥೆಯೇ ಸಿನಿಮಾ ಆಗಿದೆ. ಅದು ಒನ್ ವೇ.

    ಕೊಟ್ಲಲ್ಲಪ್ಪೋ ಕೈ ಚಿತ್ರವನ್ನು ನಿರ್ದೇಶನ ಮಾಡಿದ್ದ ರಿಷಿ, ಈ ಚಿತ್ರಕ್ಕೆ ನಿರ್ದೇಶಕ. ರಿಷಿ ಎಂದರೆ ತಕ್ಷಣ ನೆನಪಾಗುವುದು ಒಳಿತು ಮಾಡೊ ಮನುಷ, ನೀ ಇರೋದು 3 ದಿವಸ ಹಾಡು ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿಗಳ ಕುರಿತು ರಚಿಸಿದ್ದ ಹಾಡು. ಆ ಎರಡು ಹಾಡುಗಳ ಮೂಲಕ ಕನ್ನಡಿಗರಿಗೆ ಪರಿಚಯವಾದ ರಿಷಿ, ಒಳಿತು ಮಾಡು ಮನುಷ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಚಿತ್ರ ಶೀಘ್ರದಲ್ಲೇ ತೆರೆ ಕಾಣಲಿದೆ.

  • ರಜನಿಯಾ `ಕಾಲಾ'ಗೆ ಕರ್ನಾಟಕದಲ್ಲಿಲ್ಲ ಬಿಡುಗಡೆ ಭಾಗ್ಯ

    rajanikanth's kaala not to release in karnataka

    ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರ, ಜೂನ್ 7ನೇ ತಾರೀಕು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಆದರೆ, ಕರ್ನಾಟಕದಲ್ಲಿ ಇಲ್ಲ. ರಜನಿಕಾಂತ್ ಕಾವೇರಿ ನದಿ ನೀರು ಹಂಚಿಕೆ ಕುರಿತು ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಾಲಾ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡದೇ ಇರಲು ಚಲನಚಿತ್ರ ಪ್ರದರ್ಶಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಫಿಲಂಚೇಂಬರ್‍ನಲ್ಲಿ ನಡೆದ ಸಭೆಯಲ್ಲಿ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಈ ವಿಷಯ ತಿಳಿಸಿದ್ದಾರೆ.

    ವಿತರಕರು ಹಾಗೂ ಪ್ರದರ್ಶಕರ ಜೊತೆ ಸಭೆ ನಡೆಸಿದ ಸಾ.ರಾ.ಗೋವಿಂದು, ಸಭೆಯ ನಂತರ ಈ ವಿಷಯ ತಿಳಿಸಿದರು. ಅಷ್ಟೇ ಅಲ್ಲ, ವಿವಾದಾತ್ಮಕ ಹೇಳಿಕೆ ಕೊಡುವುದು, ಆನಂತರ ಕ್ಷಮೆ ಕೇಳಿ ಸುಮ್ಮನಾಗುವುದು.. ತಮಿಳು ನಟರಿಗೆ ಮಾಮೂಲಾಗಿಬಿಟ್ಟಿದೆ. ಹೀಗಾಗಿ ರಜನಿಕಾಂತ್ ಕ್ಷಮೆ ಕೇಳಿದರೂ ಕೂಡಾ ಕಾಲ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ ಸಾ.ರಾ.ಗೋವಿಂದು.

    ವಿಶೇಷ ಅಂದ್ರೆ, ಸಾ.ರಾ.ಗೋವಿಂದು ಹಾಗೂ ರಜನಿಕಾಂತ್, ಆಪ್ತಸ್ನೇಹಿತರು. ಆದರೆ, ಭಾಷೆ, ನದಿ ವಿಚಾರದಲ್ಲಿ ಸ್ನೇಹವನ್ನೂ ಪಕ್ಕಕ್ಕಿಟ್ಟಿದ್ದಾರೆ ಸಾ.ರಾ.ಗೋವಿಂದು.

  • ಹಿಮಾಲಯದಲ್ಲಿ ರಜಿನಿಕಾಂತ್ ಆಶ್ರಮ

    rajanikanth built an ashram in himalaya

    ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿರುವ ರಜಿನಿಕಾಂತ್ ಆಗಾಗ್ಗೆ ಹಿಮಾಲಯಕ್ಕೆ ಹೋಗುವುದು, ಅನಾಮಿಕರಂತೆ ಅಲೆದಾಡುವುದು, ಧ್ಯಾನ ಮಾಡುವುದರ ಬಗ್ಗೆ ಕಥೆಗಳಷ್ಟೇ ಏನು, ದಂತಕಥೆಗಳೇ ಇವೆ. ಈಗ ಅದೇ ರಜಿನಿಕಾಂತ್ ಹಿಮಾಲಯದಲ್ಲೊಂದು ಆಶ್ರಮವನ್ನೇ ಕಟ್ಟಿದ್ದಾರೆ.

    ಉತ್ತರಾಖಂಡ್‍ನ ದ್ರೋಣಗಿರಿ ಪರ್ವತದಲ್ಲಿ ರಜಿನಿಕಾಂತ್, ಧ್ಯಾನಕೇಂದ್ರವೊಂದನ್ನು ತೆರೆದಿದ್ದಾರೆ. ರಜಿನಿಯ ಜೊತೆ ಅವರ ಗೆಳೆಯರಾದ ಬೆಂಗಳೂರಿನ ಹರಿ, ದೆಹಲಿಯ, ಶಶಿಧರ್ ರಾವ್, ಮೂರ್ತಿ, ಶ್ರೀಧರ್, ಚೆನ್ನೈನ ವಿ.ವಿಶ್ವನಾಥನ್ ಮೊದಲಾದವರು ಕೈ ಜೋಡಿಸಿದ್ದಾರೆ. ಈ ಧ್ಯಾನಕೇಂದ್ರ ನವೆಂಬರ್ 10ರಂದು ಉದ್ಘಾಟನೆಗೊಳ್ಳಲಿದೆ.

    ರಜಿನಿಕಾಂತ್ ಪರಮಹಂಸ ಯೋಗಾನಂದ ಅವರ ಅನುಯಾಯಿ. `ದ ಆಟೋಬಯೋಗ್ರಫಿ ಆಫ್ ಯೋಗಿ' ಪುಸ್ತಕದ ಲೇಖಕ ಹಾಗೂ ಯೋಗೋದಾ ಸತ್ಸಂಗ ಸೊಸೈಟಿಯ ಸಂಸ್ಥಾಪಕ ಪರಮಹಂಸ ಯೋಗಾನಂದ. ರಜಿನಿಕಾಂತ್ ಈ ಧ್ಯಾನಕೇಂದ್ರವನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಭಕ್ತರು ಇಲ್ಲಿ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆಯಂತೆ.

  • ಹೀರೋ ಮಾಡಿದ ನಿರ್ಮಾಪಕರ ಕಷ್ಟಕ್ಕೆ 1 ಕೋಟಿ ಮನೆ ಕೊಟ್ಟ ರಜನಿಕಾಂತ್..!

    rajanikanth gifts 1 crore villa to his producer

    ರಜನಿಕಾಂತ್, ಈಗ ಭಾರತದ ಸೂಪರ್ ಸ್ಟಾರ್. ಅವರ ಚಿತ್ರಗಳ ಬಾಕ್ಸಾಫೀಸ್ ಲೆಕ್ಕಾಚಾರ ಶುರುವಾಗುವುದೇ 200 ಕೋಟಿಯ ಮೇಲೆ. ಅಂತಹ ರಜನಿಕಾಂತ್, ಜೊತೆಗಿದ್ದವರು ಕಷ್ಟದಲ್ಲಿದ್ದಾಗ ನೆರವು ನೀಡೋಕೆ ಹೆಸರುವಾಸಿ. ಅದು ಮತ್ತೊಮ್ಮೆ ಸಾಬೀತಾಗಿದೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಜ್ಞಾನಂ ಅವರಿಗೆ 1 ಕೋಟಿ ಬೆಲೆ ಬಾಳುವ ಫ್ಲ್ಯಾಟ್ ಕೊಟ್ಟಿದ್ದಾರೆ ರಜನಿ.

    ರಜನಿಕಾಂತ್, ಚಿತ್ರರಂಗಕ್ಕೆ ಹೀರೋ ಆಗಿ ಬಂದವರಲ್ಲ. ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸುತ್ತಾ.. ಪೋಷಕ ಪಾತ್ರಗಳಲ್ಲಿ ಮಿಂಚಿ ಹೀರೋ ಆದವರು. ರಜನಿಕಾಂತ್ ಅವರನ್ನು ಹೀರೋ ಮಾಡಿದ ನಿರ್ಮಾಪಕ ಕಲೈಜ್ಞಾನಂ. ಕಲೈಜ್ಞಾನಂ ಅವರ ನಿರ್ಮಾಣದ ಭೈರವಿ, ರಜನಿ ಹೀರೋ ಆಗಿ ನಟಿಸಿದ ಮೊದಲ ಚಿತ್ರ. ಅದು 1975ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ತಮ್ಮನ್ನು ಹೀರೋ ಮಾಡಿದ ನಿರ್ಮಾಪಕರು ಕಷ್ಟದಲ್ಲಿದ್ದಾರೆ ಎಂದು ಇತ್ತೀಚೆಗೆ ರಜನಿ ಅವರಿಗೆ ಗೊತ್ತಾಗಿದೆ.

    ತಕ್ಷಣ ಅವರಿದ್ದ ಬಾಡಿಗೆ ಮನೆಯ ವಿಳಾಸ ಹುಡುಕಿ, ಅವರಿಗೆ ಚೆನ್ನೈನಲ್ಲಿ ಒಂದು ಕೋಟಿ ಬೆಲೆ ಬಾಳುವ ಫ್ಲ್ಯಾಟ್ ಒಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ರಜನಿ. ಚೆನ್ನೈನ ವಿರುಗಾಂಬಾಕ್ಕಂನಲ್ಲಿರುವ ಮೂರು ಬೆಡ್‌ ರೂಂ ಮನೆಯ ವಿಸ್ತೀರ್ಣ 1320 ಚದರ ಅಡಿ. ಈ ಮೂಲಕ ತಮ್ಮನ್ನು ನಾಯಕನನ್ನಾಗಿಸಿದ ನಿರ್ಮಾಪಕರ ಕಷ್ಟಕ್ಕೆ ನೆರವಾಗಿದ್ದಾರೆ ತಲೈವಾ.