` nagarahaavu - chitraloka.com | Kannada Movie News, Reviews | Image

nagarahaavu

  • 'Nagarahaavuu To Release On July 20th

    nagarahaavu to release on july 20th

    Dr Vishnuvardhan starrer 'Nagarahaavu' is all set to hit the screens once again. This time the film is being technically upgraded CinemaScope and 7.1 DTS sound. The work for the new version is completed and the film will be releasing on the 20th of July.  .

    nagarahavvu_ravichandran_gr.jpg'Nagarahaavu' which was released in 1972 was produced by Veeraswamy under Eshwari Enterprises banner and was directed by Puttanna Kanagal. The film starred Vishnuvardhan, Arathi, Ambarish and others in prominent roles. Now actor Balaji, son of Veeraswamy and brother of V Ravichandran has technically upgraded the film with Cinema Scope and 7.1 DTS sound and will be re releasing the film across Karnataka.

    On Tuesday afternoon, the songs and the making video of the upgraded version was exhibited at the Kalavidara Sangha building in Bangalore and many artistes including Ambarish, Uncle Lokanath, Leelavathi, Jayanthi, Shivaramanna and others were present at the occasion. All the dignitaries lauded the upgraded version and wished the film completes 100 days once again.

  • Here's How Ramya Looks In Nagarahavu

    ramya look in nagarahaavu movie

    Though Diganth-Ramya starrer Nagarahavu is in news for sometime, the film crew had not divulged any details about Diganth or Ramya or how they look in the film. Now the makers have released the first look of Ramya and this is how she looks in the film.

    Ramya plays a snake woman in this film and earlier the film was supposed to be titled as 'Nagakanye'. However, the film has been titled as 'Nagarahavu'. The trailer of the film is all set to be released on Monday night.

    Jayantilal Gada of Pen Movies is presenting 'Nagarahavu', while his son Dhaval Jayantilal Gada along with Sohail Ansari has produced the film. Though the film has been directed by well known Telugu director Kodi Ramakrishna, the film is exclusively been made only in Kannada

  • ಅಂಬರೀಷ್‍ರ ಆ ಕನಸು ಈಗ ಈಡೇರುತ್ತಾ..?

    ambareesh's dream yet to be fulfilled

    ನಾಗರಹಾವು. ಕನ್ನಡದ ಕ್ಲಾಸಿಕ್ ಸಿನಿಮಾ. 45 ವರ್ಷಗಳ ಬಳಿಕ ಬಿಡುಗಡೆಯಾಗುತ್ತಿರುವ ಈ ಸಿನಿಮಾ 150 ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಒಂದು ಹಳೆಯ ಸಿನಿಮಾ ಇಷ್ಟು ದೊಡ್ಟ ಮಟ್ಟದಲ್ಲಿ ರೀ ರಿಲೀಸ್ ಆದ ಉದಾಹರಣೆಯೇ ಇಲ್ಲ. 4 ದಿನಗಳ ಮೊದಲೇ ಟಿಕೆಟ್ ಬುಕ್ಕಿಂಗ್ ಶುರುವಾಗಲಿದೆಯಂತೆ. ಹೊಸ ತಂತ್ರಜ್ಞಾನದಲ್ಲಿ ಚಿತ್ರವನ್ನು ರೀ-ರಿಲೀಸ್ ಮಾಡಲಾಗುತ್ತಿದೆ.

    ಸಿನಿಮಾವನ್ನು ಸ್ವತಃ ಅಂಬರೀಷ್, ಜನರ ಮಧ್ಯೆ ಕುಳಿತು ನೋಡೋದಾಗಿ ಹೇಳಿದ್ದಾರೆ. ಅಂಬರೀಷ್‍ಗೆ ಆಗ ಆ ಸಿನಿಮಾವನ್ನು ಥಿಯೇಟರ್‍ನಲ್ಲಿ ನೋಡೋಕೆ ಆಗಿರಲಿಲ್ಲವಂತೆ. ಈ ಬಾರಿ ನಾನೇ ಸರದಿಯಲ್ಲಿ ನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತೇನೆ ಎಂದಿದ್ದಾರಂತೆ ಅಂಬರೀಷ್. ಅವರಷ್ಟೇ ಅಲ್ಲ, ಚಿತ್ರೋದ್ಯಮದ ಹಲವು ಗಣ್ಯರು, ಸ್ಪೆಷಲ್ ಶೋ ಬೇಡ. ನಾವು ಥಿಯೇಟರ್‍ನಲ್ಲೇ ಸಿನಿಮಾ ನೋಡುತ್ತೇವೆ ಎಂದಿದ್ದಾರಂತೆ.

  • ನಾಗರಹಾವು ನೋಡಿದ ಶಿವಣ್ಣ, ಜಗ್ಗೇಶ್

    nagarahaavu is superhit across karnataka

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ನಾಗರಹಾವು, ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸುತ್ತಿದೆ. ಹೊಸ ಸಿನಿಮಾಗೆ ಬರುವಂತೆ ಪ್ರೇಕ್ಷಕರು ಥಿಯೇಟರ್‍ಗೆ ಓಡೋಡಿ ಬರುತ್ತಿರುವುದು ಕ್ಲಾಸಿಕ್ ಸಿನಿಮಾ ಪವರ್‍ಗೆ ಸಾಕ್ಷಿಯಾಗುತ್ತಿದೆ. ಈ ಸಿನಿಮಾವನ್ನು ಥಿಯೇಟರ್‍ನಲ್ಲೇ ನೋಡೋದಾಗಿ ಚಿತ್ರೋದ್ಯಮದ ಹಲವರು ಹೇಳಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಇತ್ತೀಚೆಗೆ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಚಿತ್ರ ನೋಡಿದ್ದಾರೆ. ಜಗ್ಗೇಶ್ ಕೂಡಾ, ಸಿನಿಮಾ ನೋಡಿ, ಹೊಸ ತಂತ್ರಜ್ಞಾನದಲ್ಲಿ ಹೊಸ ನಾಗರಹಾವು ಅದ್ಭುತವಾಗಿದೆ ಎಂದಿದ್ದಾರೆ.

    ಶಿವರಾಜ್‍ಕುಮಾರ್ ಜೊತೆ ರವಿಚಂದ್ರನ್ ಸೋದರ ಬಾಲಾಜಿ ಕೂಡಾ ಸಿನಿಮಾ ನೋಡಿದರು. ಈಶ್ವರಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವರಾಜ್‍ಕುಮಾರ್, ಇದೇ ವೇಳೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಬಗ್ಗೆಯೂ ಮಾತನಾಡಿದ್ದಾರೆ.

    ವಿಷ್ಣುವರ್ಧನ್ ಸ್ಮಾರಕ ಆಗಬೇಕು. ಆಗುತ್ತೆ. ಈ ಕುರಿತು ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ ಎಂದಿದ್ದಾರೆ.

    ಇದೆಲ್ಲದರ ಮಧ್ಯೆ ಸಿನಿಮಾವನ್ನು ಹೊರರಾಜ್ಯಗಳಲ್ಲೂ ರಿಲೀಸ್ ಮಾಡೋಕೆ ವಿತರಕರು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ಅಲಹಾಬಾದ್, ಹೈದರಾಬಾದ್‍ಗಳಲ್ಲೂ ನಾಗರಹಾವು ಭುಸುಗುಟ್ಟಲಿದೆ.

  • ನಾಗರಹಾವು ನೋಡೋಕೆ ಸ್ಟಾರ್‍ಗಳ ಕ್ಯೂ

    nagarahaavu creates craze in sandalwood

    ನಾಗರಹಾವು. ಕನ್ನಡ ಚಿತ್ರರಂಗದ ಈ ಕ್ಲಾಸ್ ಸಿನಿಮಾ, ಮತ್ತೊಮ್ಮೆ ರಿಲೀಸ್ ಆಗಿದೆ. 45 ವರ್ಷಗಳ ನಂತರ ತೆರೆ ಕಂಡಿರುವ ಸಿನಿಮಾವನ್ನು ವಿಷ್ಣು ಅಭಿಮಾನಿಗಳು ಹಬ್ಬದಂತೆ ಸ್ವಾಗತಿಸುತ್ತಿದ್ದಾರೆ. ವಿಷ್ಣು ಮತ್ತು ಅಂಬರೀಷ್ ಎಂಬ ಎರಡು ಧ್ರುವತಾರೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಸಿನಿಮಾ ಅದು. ಇಷ್ಟು ವರ್ಷಗಳಾದರೂ ರಾಮಾಚಾರಿ ಅಂದ್ರೆ ನೆನಪಾಗೋದು ವಿಷ್ಣುವರ್ಧನ್. ಜಲೀಲ ಅಂದ್ರೆ ಅಂಬಿ, ಚಾಮಯ್ಯ ಮೇಷ್ಟ್ರು ಅಶ್ವತ್ಥ್, ಅಲಮೇಲು, ಮಾರ್ಗರೇಟ್.. ಹೀಗೆ ಇಡೀ ತಂಡದ ಪಾತ್ರಗಳ ಹೆಸರೂ ಕೂಡಾ ಇಷ್ಟು ವರ್ಷಗಳ ನಂತರ ಅಭಿಮಾನಿಗಳ ನಾಲಗೆ ತುದಿಯಲ್ಲಿದೆ. 5 ನಿಮಿಷದ ಹಾಡಿನಲ್ಲಷ್ಟೇ ಕಾಣಿಸಿಕೊಂಡ  ಜಯಂತಿಯನ್ನು ಒನಕೆ ಓಬವ್ವಳಾಗಿಸಿದ ಸಿನಿಮಾ ನಾಗರಹಾವು. ಹೀಗಾಗಿಯೇ ಈ ಸಿನಿಮಾ ನೋಡೋಕೆ ಪ್ರೇಕ್ಷಕರಷ್ಟೇ ಕುತೂಹಲಿಗಳಾಗಿರುವುದು ಸ್ಟಾರ್‍ಗಳು.

    ಶಿವರಾಜ್‍ಕುಮಾರ್ - ಸಿನಿಮಾ ರಿಲೀಸ್ ಆದಾಗ ನನಗೆ 11-12 ವರ್ಷ ಇರಬೇಕು. ವಿಷ್ಣು ಸರ್‍ನ ನೋಡಿ ಎಷ್ಟು ಹ್ಯಾಂಡ್‍ಸಮ್ ಆಗಿದ್ದಾರೆ ಎಂದು ಕೊಂಡಿದ್ದೆ. ಅಂಬಿ ಮಾಮಂಗೆ ಆಗ 20 ವರ್ಷ ಇತ್ತೇನೋ. ಚಿಕ್ಕ ಪಾತ್ರವಾದರೂ ಅಚ್ಚಳಿಯದೆ ಉಳಿದುಬಿಟ್ಟಿತ್ತು. ಚಾಮಯ್ಯ ಮೇಷ್ಟ್ರು ಅಶ್ವತ್ಥ್, ಆರತಿ, ಲೀಲಾವತಿ ಎಲ್ಲರದ್ದೂ ಅದ್ಭುತ ಅಭಿನಯ. ಸಂಗೀತ, ಮೇಕಿಂಗ್ ಬೊಂಬಾಟ್. ಸಿನಿಮಾಸ್ಕೋಪ್ ನಾಗರಹಾವು ನೋಡೋಕೆ ಕಾತುರನಾಗಿದ್ಧೇನೆ.

    ಸುದೀಪ್ - ಆ ಸಿನಿಮಾನ ರೀಪ್ಲೇಸ್ ಮಾಡೋಕೆ ಆಗಲ್ಲ. ರಾಮಾಯಣ, ಮಹಾಭಾರತ ಹೇಗೋ, ಸಿನಿಮಾದವರಿಗೆ ನಾಗರಹಾವು ಹಾಗೆ. ನೋಡಬೇಕು, ಸುಮ್ಮನೆ ಬಿಡಬೇಕು ಅಷ್ಟೆ. ಅದೊಂಥರಾ ಪಕ್ಕದಲ್ಲೇ ಹಾದು ಹೋಗ್ತಿರೋ ಕರೆಂಟ್ ವೈರ್ ಇದ್ದಂತೆ. ನಾವು ದೂರ ನಿಂತು ಖುಷಿ ಪಡಬೇಕು. ಅದನ್ನು ಯಾರೂ ಮರುಸೃಷ್ಟಿ ಮಾಡೋಕೆ ಸಾಧ್ಯ ಇಲ್ಲ. ಆ ಸಿನಿಮಾ ನೋಡೋಕೆ ನಾನಂತೂ ಕಾಯುತ್ತಿದ್ದೇನೆ.

    ದರ್ಶನ್ - ಸಂಪತ್‍ಕುಮಾರ್‍ರನ್ನು ವಿಷ್ಣುವರ್ಧನ್ ಆಗಿಸಿದ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡಕ್ಕೆ ಎರಡು ಅಮೂಲ್ಯ ರತ್ನಗಳನ್ನು ನೀಡಿದ ಸಿನಿಮಾ ಅದು. ಶುಭವಾಗಲಿ

    ಯಶ್ - 40 ವರ್ಷಗಳ ಹಿಂದಿನ ಸಿನಿಮಾ ಇವತ್ತಿಗೂ ರಿಲೇಟ್ ಅನ್ನಿಸುತ್ತೆ. ಚಿಕ್ಕವನಿದ್ಧಾಗ ನೋಡಿದ್ದೆ. ವಿಷ್ಣು ಸರ್ ಮಾಡಿದ ಆ ಪಾತ್ರವನ್ನು ಮಾಡೋದು ಇವತ್ತಿಗೂ ಕಷ್ಟ. ಹೊಸ ಟೆಕ್ನಾಲಜಿಯಲ್ಲಿ ಸಿನಿಮಾ ಬರ್ತಿರೋದು ನಮಗೆಲ್ಲ ಹಬ್ಬವೇ ಸರಿ. ಎಲ್ಲರೂ ಈ ಸಿನಿಮಾ ನೋಡಬೇಕು.

    ಎಲ್ಲರಿಗಿಂತ ಸ್ಪೆಷಲ್ ರವಿಚಂದ್ರನ್ ಮತ್ತು ಬಾಲಾಜಿ. ನಾಗರಹಾವು ಅವರದ್ದೇ ಈಶ್ವರಿ ಪ್ರೊಡಕ್ಷನ್ ಸಂಸ್ಥೆಯ ಸಿನಿಮಾ. ವಿಷ್ಣುವರ್ಧನ್‍ರನ್ನ ನನ್ನ ತಂದೆ ವೀರಸ್ವಾಮಿ, ದೊಡ್ಡಮಗ ಅಂತಾನೇ ಕರೀತಿದ್ರು. ರಾಮಾಚಾರಿ ಅನ್ನೋ ಪಾತ್ರದಲ್ಲಿ ವಿಷ್ಣು ಅಷ್ಟರಮಟ್ಟಿಗೆ ಬೆರೆತು ಹೋಗಿದ್ರು. ನನಗೆ ಆ ಸಿನಿಮಾ ಹೆಸರು ಕೇಳಿದ ಕೂಡಲೇ ನನ್ನ ತಂದೆ, ಪುಟ್ಟಣ್ಣ ಕಣಗಾಲ್, ಅಶ್ವತ್ಥ್ ಸೇರಿದಂತೆ ಚಿತ್ರದಲ್ಲಿ ಭಾಗಿಯಾದ ಪ್ರತಿಯೊಬ್ಬರೂ ನೆನಪಾಗ್ತಾರೆ ಅಂತಾರೆ ರವಿಚಂದ್ರನ್.

    ಸ್ಟಾರ್ ಕಲಾವಿದರ ಹೊಸ ಸಿನಿಮಾ ರಿಲೀಸ್ ಆಗುವಾಗ ಇರುವಂಥದ್ದೇ ಕ್ರೇಜ್, 45 ವರ್ಷಗಳ ನಂತರ ರೀ-ರಿಲೀಸ್ ಆಗುತ್ತಿರುವ ನಾಗರಹಾವುಗೂ ಇದೆ. ಬೆಳಗ್ಗೆ 6 ಗಂಟೆಗೇ ಶೋಗಳು ನಡೆದಿವೆ.

  • ನಾಗರಹಾವುಗೆ 50 ವರ್ಷದ ಸಂಭ್ರಮ

    ನಾಗರಹಾವುಗೆ 50 ವರ್ಷದ ಸಂಭ್ರಮ

    ಕೆಂಡದಂತ ಕೋಪ ತುಂಬಿಕೊಂಡಿದ್ದ ಹುಡುಗ.. ಚಿತ್ರದುರ್ಗದ ಕೋಟೆಯ ಮೇಲೆ.. ಹಾವಿನ ದ್ವೇಷ ಹನ್ನೆರಡು ವರುಷ.. ನನ್ನ ರೋಷ ನೂರು ವರುಷ.. ಎಂದು ಹಾಡುತ್ತಾ ಬಂದು ಸೃಷ್ಟಿಸಿದ ರೋಮಾಂಚನಕ್ಕೆ ಈಗ 50 ವರ್ಷ. 1972ರ ಡಿಸೆಂಬರ್ 29ರಂದು ನಾಗರಹಾವು ತೆರೆ ಕಂಡಿತ್ತು. ವೀರಸ್ವಾಮಿ ನಿರ್ಮಾಣದ ಚಿತ್ರಕ್ಕೆ ಪುಟ್ಟಣ್ಣ ಕಣಗಾಲ್ ನಿರ್ದೇಶನವಿತ್ತು. ವಿಷ್ಣುವರ್ಧನ್ ಹೀರೋ ಆಗಿ ಎಂಟ್ರಿ ಕೊಟ್ಟ ಚಿತ್ರವದು. ಅಂಬರೀಷ್ ಕೂಡಾ ಚಿತ್ರರಂಗ ಪ್ರವೇಶಿಸಿದ್ದು ಈ ಚಿತ್ರದಿಂದಲೇ. ರಾಮಾಚಾರಿ, ಅಲಮೇಲು, ಮಾರ್ಗರೇಟ್, ಜಲೀಲ, ಚಾಮಯ್ಯ ಮೇಷ್ಟು.. ಎಂಬ ಆಗಿನ ಪಾತ್ರಗಳು ಇವತ್ತಿಗೂ ಚಿತ್ರರಸಿಕರ ಎದೆಯಲ್ಲಿ ಜೀವಂತವಾಗಿವೆ. ತ.ರಾ.ಸು. ಅವರ ನಾಗರಹಾವು, ಒಂದು ಗಂಡು ಎರಡು ಹೆಣ್ಣು ಹಾಗೂ ಸರ್ಪ ಮತ್ಸರ ಎಂಬ ಮೂರು ಕಾದಂಬರಿಗಳ ಕಥೆಗಳ ಆಧಾರದಲ್ಲಿ ಪುಟ್ಟಣ್ಣ ಕಣಗಾಲ್ ರೂಪಿಸಿದ್ದ ಸಿನಿಮಾ ನಾಗರಹಾವು.

    ವೀರಸ್ವಾಮಿಯವರ ನಿರ್ಮಾಣದಲ್ಲಿ ಅದ್ಧೂರಿಯಾಗಿ ತೆರೆ ಕಂಡಿದ್ದ ನಾಗರಹಾವು ಚಿತ್ರದಲ್ಲಿದ್ದ ಬಹುತೇಕರು ಈಗ ನಮ್ಮೊಂದಿಗಿಲ್ಲ. ಬಹುಶಃ ಆರತಿ, ಲೀಲಾವತಿ ಬಿಟ್ಟರೆ ಉಳಿದವರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ನಾಗರಹಾವು ಸೃಷ್ಟಿಸಿದ್ದ ಸಂಚಲನ ಮಾತ್ರ ಇವತ್ತಿಗೂ ಇದೆ. ನಾಗರಹಾವು ಚಿತ್ರದ ಮೂಲಕ ಕನ್ನಡಕ್ಕೊಬ್ಬ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ವಿಷ್ಣುವರ್ಧನ್ ಪರಿಚಿತನಾಗಿದ್ದರು. ಮೊದಲ ಚಿತ್ರದಲ್ಲೇ ಆ ಮಟ್ಟದ ಸಕ್ಸಸ್ ಕಂಡ ಇನ್ನೊಬ್ಬ ನಟ ಇಲ್ಲ. ಚಿತ್ರದ ನಾಯಕ, ನಾಯಕಿ ಬಿಡಿ, ಒಂದು ಹಾಡಿನ ಮೂಲಕ ಓಬವ್ವಳಾಗಿ ಜಯಂತಿ ಅಮರರಾಗಿದ್ದು ಇದೇ ಚಿತ್ರದ ಮೂಲಕ.

    ನಾಗರಹಾವು ಎಷ್ಟು ದೊಡ್ಡ ಹಿಟ್ ಎಂದರೆ ಅದು ಹಲವು ಭಾಷೆಗಳಿಗೆ ರೀಮೇಕ್ ಆಯಿತು. ಹಿಂದಿಯಲ್ಲಿ ಜೆಹ್ರಿಲಾ ಇನ್ಸಾನ್ ಆಯ್ತು. ರಿಷಿ ಕಪೂರ್ ಹೀರೋ. ತಮಿಳಿನಲ್ಲಿ ರಾಜ ನಾಗಂ ಹಾಗೂ ತೆಲುಗಿನಲ್ಲಿ ಕೊಡೆ ನಾಗು ಹೆಸರಿನಲ್ಲಿ ರೀಮೇಕ್ ಆಯಿತು. ಆದರೆ ಕನ್ನಡದಲ್ಲಿ ಆದ ಮ್ಯಾಜಿಕ್ ಎಲ್ಲಿಯೂ ಆಗಲಿಲ್ಲ.

    ಮೊದಲ ಚಿತ್ರದಲ್ಲೇ ವಿಷ್ಣುವರ್ಧನ್ ಫಿಲ್ಮ್‍ಫೇರ್ ಹಾಗೂ ರಾಜ್ಯ ಪ್ರಶಸ್ತಿ ಎರಡನ್ನೂ ಗೆದ್ದರು. ಆರತಿ, ಅಶ್ವತ್ಥ್, ಲೀಲಾವತಿ, ತ.ರಾ.ಸು. ಪುಟ್ಟಣ್ಣ ಕಣಗಾಲ್.. ರಾಜ್ಯ ಪ್ರಶಸ್ತಿ ವಿಜೇತರಾದರು. ನಾಗರಹಾವು ಕೊರೊನಾಗೆ ಮೊದಲು ಕಲರ್ ವರ್ಷನ್‍ನಲ್ಲಿ ಹೊಸ ಸೌಂಡಿಂಗ್‍ನಲ್ಲಿ ರೀ ರಿಲೀಸ್ ಆಗಿತ್ತು. ಆಗಲೂ ಕೂಡಾ ಸಕ್ಸಸ್ ಕಂಡಿತ್ತು.

  • ರಾಮಾಚಾರಿ ಈಸ್ ಬ್ಯಾಕ್

    ramachari is back with digital touch

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಹೊಸ ತಂತ್ರಜ್ಞಾನದ ನಾಗರಹಾವು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈಶ್ವರಿ ಪ್ರೊಡಕ್ಷನ್ಸ್‍ನಲ್ಲಿ ಮೂಡಿ ಬಂದಿದ್ದ ಚಿತ್ರಕ್ಕೆ, ನಿರ್ಮಾಪಕ ಈಶ್ವರ್ ಬಾಲಾಜಿ, ಹೊಸ ಟೀಸರ್‍ನ್ನೇ ಸಿದ್ಧ ಮಾಡಿಸಿದ್ದಾರೆ. ವಿಷ್ಣು ಅವರ ಕಟೌಟ್‍ನ್ನು ಗ್ರಾಫಿಕ್ಸ್‍ನಲ್ಲಿ ರೂಪಿಸಿರುವ ಬಾಲಾಜಿ, ಹೊಸ ನಾಗರಹಾವನ್ನು ಹೊಸದಾಗಿ ತೆರೆಗೆ ತರುತ್ತಿದ್ದಾರೆ. ಚಿತ್ರದ ಟೀಸರ್‍ನ್ನು ಬಿಡುಗಡೆ ಮಾಡಿರುವುದು ಕಿಚ್ಚ ಸುದೀಪ್.

    ವಿಷ್ಣುವರ್ಧನ್ ಅವರ ನಾಗರಹಾವು ಚಿತ್ರದ ಬಿಡುಗಡೆ ಮಾಡುತ್ತಿರುವುದು ನನಗೆ ಸಿಕ್ಕ ಅತಿದೊಡ್ಡ ಗೌರವ ಎಂದು ಹೇಳಿಕೊಂಡಿರುವ ಸುದೀಪ್, ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

  • ಹಳೆ ನಾಗರಹಾವುಗೆ ಡಿಜಿಟಲ್ ಸ್ಪರ್ಶ

    old nagarahaavu gets digital touch

    ನಾಗರಹಾವು, ಕನ್ನಡಕ್ಕೆ ಇಬ್ಬರು ಸ್ಟಾರ್‍ಗಳನ್ನು ಪರಿಚಯಿಸಿದ ಸಿನಿಮಾ. ವಿಷ್ಣುವರ್ಧನ್ ಮತ್ತು ಅಂಬರೀಷ್ ತೆರೆಗೆ ಪರಿಚಿತರಾಗಿದ್ದು ಇದೇ ಚಿತ್ರದಿಂದ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾ, ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಈಗ ಈ ಚಿತ್ರ ಕಸ್ತೂರಿ ನಿವಾಸ, ಸತ್ಯಹರಿಶ್ಚಂದ್ರ, ಬಭ್ರುವಾಹನ.. ಇತ್ಯಾದಿಗಳ ಮಾದರಿಯಲ್ಲಿ ಡಿಜಿಟಲ್ ಸ್ಪರ್ಶದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

    ನಾಗರಹಾವು ಚಿತ್ರ ಇದ್ದಿದ್ದು ಹಳೆ ಟೆಕ್ನಾಲಜಿಯಲ್ಲಿ. ಒಂದೇ ಸ್ಪೀಕರ್‍ನಲ್ಲಿ ವಾಯ್ಸ್ ಕೇಳಬೇಕಿತ್ತು. ಈಗ ಚಿತ್ರಕ್ಕೆ 7.1 ಡಿಟಿಎಸ್ ಸೌಂಡ್ ಎಫೆಕ್ಟ್ ನೀಡಲಾಗಿದೆ. 35 ಎಂಎಂನಲ್ಲಿದ್ದ ಸಿನಿಮಾವನ್ನು ಹೊಸ ತಂತ್ರಜ್ಞಾನಕ್ಕೆ ಒಗ್ಗಿಸಲಾಗಿದೆ. ಹೀಗಾಗಿ ಇಡೀ ಸಿನಿಮಾ ಹೊಸದಾಗಿ ಕಾಣಿಸಿಕೊಳ್ಳಲಿದೆ.

    ಅಂದಹಾಗೆ ಇದು ಎನ್.ವೀರಸ್ವಾಮಿ(ರವಿಚಂದ್ರನ್ ಅವರ ತಂದೆ) ಅವರ ನಿರ್ಮಾಣದ ಸಿನಿಮಾ. ಬಾಲಾಜಿ ಉಸ್ತುವಾರಿ ಹೊತ್ತಿರುವ ಈಶ್ವರಿ ಸಂಸ್ಥೆಯಿಂದ ಈ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಹಣದ ಬಗ್ಗೆ ಚಿಂತೆಯಿಲ್ಲ. ಈ ಅದ್ಭುತ ಸಿನಿಮಾವನ್ನು ಈಗಿನ ಯುವಪೀಳಿಗೆ ನೋಡಬೇಕು ಅನ್ನೋದು ನನ್ನ ಕಾಳಜಿ ಎನ್ನುತ್ತಾರೆ ಬಾಲಾಜಿ.