` nagamandala, - chitraloka.com | Kannada Movie News, Reviews | Image

nagamandala,

  • Nagamandala Fame Producer Hari Khoday No More

    Hari Khoday image

    Kannada movie producer Nagamandala movie fame and Liquor Barrion Hari Khoday has expired today evening aroung 8.30 PM. Hari Khoday was suffering with his health issues from last few days. 

    His latest produced moive Allama starring Meghana Raj and Dhananjaya is directed by TS Nagabharana has been selected for panorama.

     

  • Naganna To Direct Upendra In A New Film

    Naganna To Direct Upendra In A New Film

    Well known director Naganna is all set to direct Upendra in a new film next year. Naganna had earlier directed Upendra in 'Kutumba', 'Gokarna', 'Gowramma' and 'Dubai Babu'. After a gap of 11 years, the two are associating for a film once again.

    The new film is written by G K Bharavi and has a historical storyline. The film is set in the 15th century and Upendra's role in the film is not yet revealed. There are two heroines for Upendra in this film and the film will be made in Kannada, Telugu, Tamil and Hindi languages.

    The film is being produced by producer Jagannath's son. Jagannath had earlier produced Upendra starrer 'A'. Now his son is producing a film for Upendra. Hamsalekha is the music director. The film is all set to go on floors, once after Upendra finishes 'Kabza' next year.

  • Raviprakash says he won't compromise in Vijayalakshmi case

    vijayalakshmi, raviprakash image

    Actor Raviprakash has said that he will not compromise in Vijayalakshmi case and will fight her legally. Last year, actress Vijayalakshmi had appealed in a video that she is facing a lot of health as well as financial problems. As she is undergoing treatment, she had asked for financial support from the Industry. Actor Raviprakash and his sister had helped her during the financial crisis.

    you_tube_chitraloka1.gif

    However, the actress accused Raviprakash had complained of misbehaving with her. She had even said that she will go on a hunger strike, if action is not taken against him. 

    After one year, Raviprakash has said that though Vijayalakshmi's sister had apologised to him, he is not in a mood to compromise.

    Raviprakash has released a video in this regard on Sunday. 'Vijayalakshmi's sister Usha Devi had called and apologized for her behaviour. Inspite of helping her, I was shown in a bad light, for which I am really upset. I have decided not to compromise in this regard and has decided to move on with the case' said Raviprakash.

    Also See

    Vijayalakshmi Used Me Like A Tissue Paper & Then Made False Accusation: Raviprakash

  • Uma Column 62 - ನೀ ಹಿಂಗ ಕಾಡಬ್ಯಾಡ ನನ್ನ....

    c ashwath image

    ಬೇಡ ಬೇಡ ಎಂದರೂ ಪ್ರತಿವರ್ಷ ಡಿಸೆಂಬರ್ 29ಕ್ಕೆ ಹಾಳು ನೆನಪೊಂದು ಕಾಡಿ ನನ್ನ ಕಂಗೆಡಿಸುತ್ತದೆ. ಇದು ಕ್ರೌರ್ಯವೋ ಅಥವಾ ದೃಶ್ಯಮಾಧ್ಯಮದ ಅನಿವಾರ್ಯ ಕರ್ಮವೋ ಎಂಬ ಬಗ್ಗೆ ನನಗೇ ಗೊಂದಲವಿದೆ. ಆದರೆ ಐದು ವರ್ಷದ ಹಿಂದೆ ನಡೆದ ಆ ಘಟನೆ ನೆನಪಾದಾಗಲೆಲ್ಲಾ ಒಂದು ಗಾಢವಿಷಾದ ನನ್ನನ್ನು ಆವರಿಸಿಕೊಳ್ಳುತ್ತದೆ. ಇದು ಸಿ.ಅಶ್ವತ್ಥ್ ಅವರ ಸಾವಿಗೆ ಸಂಬಂಧಪಟ್ಟಿದ್ದು. ನಾನಾಗ ಚಾನೆಲ್ಲಲ್ಲಿ ಕೆಲಸ ಮಾಡುತ್ತಿದ್ದೆ.  ಅಶ್ವತ್ಥ್ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ಅದು ಹೇಗೋ ತೇಲಿಬಂದು ನನ್ನ ಕಿವಿ ತಲುಪಿದಾಗ ನಾನು ಫೋನ್ ಮಾಡಿದ್ದು ಕಿಕ್ಕೇರಿ ಕೃಷ್ಣಮೂರ್ತಿಗೆ. ಅವರು ಅಶ್ವತ್ಥ್ ಬಲಗೈ ಬಂಟ ಎಂದೇ ಗುರುತಾದವರು. ಕಿಕ್ಕೇರಿ ಗದ್ಗದ ಕಂಠದಲ್ಲಿ ಹೇಳಿದರು “ಕಂಡೀಷನ್ ಸೀರಿಯಸ್ಸಾಗಿದೆ. ಬದುಕೋದು ಕಷ್ಟ ಅಂತಿದ್ದಾರೆ ಡಾಕ್ಟರ್”. ಈ ಸುದ್ದಿಯನ್ನು ಸಂಪಾದಕರಿಗೆ ತಿಳಿಸಿದಾಗ ಅವರು ಸಿನಿಮಾ ವಿಭಾಗದ ವರದಿಗಾರ್ತಿ ಸ್ವಾತಿ ಪತ್ರೆಯನ್ನು ತಕ್ಷಣ ಕೊಲಂಬಿಯಾ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು. ಆ ಹುಡುಗಿ ಲಗುಬಗೆಯಿಂದ ಕ್ಯಾಮರಾಮನ್ ಜೊತೆ ಹೋಗಿ  ಸಂಜೆ ಹೊತ್ತಿಗೆ ವಾಪಸ್ ಬಂತು. ಆರೋಗ್ಯದಲ್ಲೇನೂ ಸುಧಾರಣೆಯಾಗಿಲ್ಲ ಎಂಬ ಮಾಹಿತಿಯಷ್ಟೇ ಆಕೆಯ ಬಳಿಯಿತ್ತು. ಮಾರನೇ ದಿನ ಮತ್ತೆ ಸ್ವಾತಿಗೆ ಆಸ್ಪತ್ರೆ ಡ್ಯೂಟಿ, ಆವತ್ತೂ ಅಶ್ವತ್ಥ್ ‘ಅವರಿಗೇನೂ ಆಗಲಿಲ್ಲ’.  ಸ್ವಾತಿಗೆ ಇದೊಂದು ಖಾಯಂ ಅಸೈನ್ ಮೆಂಟ್ ಆಗಿಹೋಯಿತು. ಬೆಳಿಗ್ಗೆ ಕೊಲಂಬಿಯಾ ಆಸ್ಪತ್ರೆಗೆ ಹೋಗೋದು, ಸಂಜೆ ಪೆಚ್ಚುಮುಖ ಹಾಕಿಕೊಂಡು ವಾಪಸ್ ಬರೋದು. ಹೀಗೇ ಒಂದು ವಾರವೇ ಕಳೆದುಹೋಯಿತು. ಒಂದು ದಿನ ಸ್ವಾತಿ ನನ್ನ ಮುಂದೆ ನಿಂತು “ನಾನು ನಾಳೆಯಿಂದ ಕೊಲಂಬಿಯಾ ಆಸ್ಪತ್ರೆಗೆ ಹೋಗೋಲ್ಲ ಸರ್” ಅಂದಳು. ಯಾಕೆ ಏನಾಯಿತು ಎಂದು ಕೇಳಿದೆ. “ಇವತ್ತು ಅಶ್ವತ್ಥ್ ಅವರ ಪತ್ನಿ ಸಿಕ್ಕಿದ್ರು. ನೋಡಮ್ಮಾ ನೀನು ಹಗಲಿಡೀ ಇಲ್ಲಿ ಕಾಯುತ್ತಾ ನಿಂತಿರುವುದನ್ನು ನನ್ನಿಂದ ನೋಡೋಕ್ಕಾಗ್ತಿಲ್ಲ. ಅಶ್ವತ್ಥ್ ಅವರಿಗೇನಾದರೂ ಆದರೆ ನಾನೇ ನಿನಗೆ ಫೋನ್ ಮಾಡಿ ಹೇಳ್ತೀನಿ” ಅಂದ್ರು. ನಾನು ಗರಬಡಿದವನಂತೆ ನಿಂತೆ. ನನ್ನ ಗಂಡನ ಸಾವಿಗೋಸ್ಕರ ನೀವೆಲ್ಲಾ ಕಾಯುತ್ತಿದ್ದೀರಿ ಅನ್ನುವುದನ್ನು ಶ್ರೀಮತಿ ಅಶ್ವತ್ಥ್ ಬಹಳ ನಯವಾಗಿ ಹೇಳಿದ್ದರು. ವಿಪರ್ಯಾಸವೆಂದರೆ ಮಾರನೇ ದಿನವೇ ಅಶ್ವತ್ಥ್ ತೀರಿಕೊಂಡರು, ಆ ಹೊತ್ತಿಗೆ ಸ್ವಾತಿ ಸ್ಥಳದಲ್ಲಿರಲಿಲ್ಲ, ಹಾಗಾಗಿ ಬ್ರೇಕಿಂಗ್ ನ್ಯೂಸ್ ನಮ್ಮ ಚಾನೆಲ್ಲಿಗೆ ಸಿಗಲಿಲ್ಲ. ಮುಂದೆ ಸ್ವಾತಿಯ ಪರಿಸ್ಥಿತಿ ಏನಾಯಿತು ಅನ್ನುವುದು ನಿಮ್ಮ ಊಹೆಗೆ ಬಿಟ್ಟಿದ್ದು.

    ಅಶ್ವತ್ಥ್ ಸಾವಿನ ಬೆನ್ನಿಗೇ ಇನ್ನೊಂದು ಸುದ್ದಿ ಹರಿದಾಡತೊಡಗಿತ್ತು. ವಾಸ್ತವದಲ್ಲಿ ಅಶ್ವತ್ಥ್ ಎರಡು ದಿನ ಹಿಂದೆಯೇ ಅಸುನೀಗಿದ್ದರಂತೆ, ಆದರೆ ಡಿಸೆಂಬರ್ 29 ಅಶ್ವತ್ಥ್ ಜನ್ಮದಿನವಾಗಿದ್ದರಿಂದ ಆವತ್ತೇ ಅವರು ‘ತೀರಿಕೊಂಡರೆ ಚೆನ್ನಾಗಿರುತ್ತದೆ’ ಎಂದು ಅವರ ಆತ್ಮೀಯರು ತೀರ್ಮಾನಿಸಿದ್ದರಂತೆ. ಸುದೈವಶಾತ್, ಈ ಸುದ್ದಿಯನ್ನು ಯಾವ ಚಾನೆಲ್ಲೂ ಪ್ರಸಾರ ಮಾಡಲಿಲ್ಲ. ಅಶ್ವತ್ಥ್ ಏನಾದರೂ ಬದುಕುಳಿದಿದ್ದರೆ ಇಂಥಾ ಗಾಸಿಪ್ಪುಗಳನ್ನು ಖಂಡಿತಾ ಆನಂದಿಸುತ್ತಿದ್ದರು. ಯಾಕೆಂದರೆ ಅವರು ಪ್ರಚಾರಪ್ರಿಯರು, ಬಹುಜನಪ್ರಿಯರೂ ಹೌದು. ತನ್ನ ಸುತ್ತಮುತ್ತ ಹತ್ತಾರು ಜನರಿರಬೇಕು, ಅವರೆಲ್ಲರೂ ತದೇಕಚಿತ್ತದಿಂದ ತನ್ನ ಹಾಡು-ಮಾತುಗಳನ್ನು ಕೇಳಿಸಿಕೊಳ್ಳಬೇಕು, ಆಹಾ ಎಂದು ಆಗಾಗ ತಲೆದೂಗಬೇಕು, ಅವರ ಮಾತಿನ ಮಧ್ಯೆ ಬೇರೆ ಯಾರೂ ಹಸ್ತಕ್ಷೇಪ ಮಾಡಿ ರಸಭಂಗ ಮಾಡಬಾರದು, ಅವರಾಗಿಯೇ ‘ಅಲ್ವೇನ್ರೀ’ ಎಂದು ಹುಬ್ಬು ಹಾರಿಸಿದರೆ ಅಹುದಹುದು ಎನಬೇಕು. ಇವೆಲ್ಲವೂ ಅವರ ವರ್ಣರಂಜಿತ ವ್ಯಕ್ತಿತ್ವಕ್ಕೆ ಅಂಟಿಕೊಂಡ ಗುಣಗಳಾಗಿದ್ದವು. ಅವುಗಳನ್ನು ಅಶ್ವತ್ಥ್ ಅವರ ದೌರ್ಬಲ್ಯ ಎಂದು ಕರೆಯುವುದು ತಪ್ಪಾದೀತು. ಅವರ ಮಾತು ಒನ್ ವೇ ಟ್ರಾಫಿಕ್ ಆದರೂ ಅದನ್ನು ಆಲಿಸುವುದರಲ್ಲಿ ಒಂದು ಮಜಾ ಸಿಗುತ್ತಿತ್ತು. ಅವರ ಸಿಟ್ಟು, ವ್ಯಂಗ್ಯ, ತಮಾಷೆ, ತನ್ನ ರಾಗಕ್ಕೆ ತಾನೇ ಬೆರಗಾಗಿ ನಿಲ್ಲುವ ಪರಿ, ಪರನಿಂದೆಯಲ್ಲೂ ಸೃಜನಶೀಲತೆಯನ್ನು ಮೆರೆವ ರೀತಿ, ತನ್ನ ಕೈಗಳನ್ನೇ ಮಂತ್ರದಂಡದಂತೆ ಅಲ್ಲಾಡಿಸುತ್ತಾ ಥೇಟು ಜಾದೂಗಾರನಂತೆ ಶೂನ್ಯದಿಂದ ಅದೇನನ್ನೋ ಗಬಕ್ಕಂತ ಹಿಡಿದು ತೆಗೋ ಎಂದು ನಮ್ಮೆದೆರು ಕುಕ್ಕುವ ಶೈಲಿ- ಇವೆಲ್ಲವೂ ಸೇರಿಕೊಂಡು ಅವರೊಬ್ಬ ಗಾರುಡಿಗನಂತೆಯೇ ಕಾಣುತ್ತಿದ್ದರು. ವೇದಿಕೆ ಮೇಲೆಯೂ ಅಷ್ಟೆ, ಅವರು performing singer. ನಾ ಕುಣೀಬೇಕು, ನೀ ಮಣೀಬೇಕು ಅನ್ನುವ ಆಗ್ರಹ ಅವರ ಹಾವಭಾವದಲ್ಲಿರುತ್ತಿತ್ತು. ನಾವು ಮಣಿಮಣಿದು ದಣಿದರೂ ಅವರ ಕುಣಿತ ನಿಲ್ಲುತ್ತಿರಲಿಲ್ಲ.

    c ashwath image
    c ashwath (pic - KM Veeresh)

    ಹೀಗಿದ್ದರೂ ಅಶ್ವತ್ಥ್ ಸಂತನೋ, ಅನುಭಾವಿಯೋ ಆಗಲಿಲ್ಲ.  ಕೆಲವು ವಿಷಯಗಳಲ್ಲಿ ಹುಲುಮಾನವರೇ ಆಗಿದ್ದರು. ಶ್ರೇಷ್ಠತೆಯ ವ್ಯಸನ ಅವರನ್ನು ಸದಾ ಕಾಡುತ್ತಿತ್ತು, ಜೊತೆಗೆ ಜನಪ್ರಿಯತೆಯ ವ್ಯಸನವೂ ಸೇರಿಕೊಂಡು ಅವರನ್ನು ಹೊಸ ಸಾಹಸಗಳತ್ತ ತುಡಿಯುವಂತೆ ಮಾಡುತ್ತಿತ್ತು. ಪತ್ರಕರ್ತರಿಗೆ ಸಂಗೀತಜ್ಞಾನ ಇರುವುದಿಲ್ಲ ಅನ್ನುವುದು ಅವರ ಗಟ್ಟಿ ನಂಬಿಕೆ, ಅದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆಯೂ ಅವರಲ್ಲಿತ್ತು. ಹಾಗಿದ್ದೂ ಅವರ ಗಾಯನ ಶೈಲಿಯಲ್ಲಿ ಭೂಪೇನ್ ಹಜಾರಿಕಾ ಆಗಾಗ ನುಸುಳುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಅದನ್ನೊಮ್ಮೆ ನನ್ನ ಬಾಸ್ ಆಗಿದ್ದ ಸಿ.ಸೀತಾರಾಂ ಮುಂದೆ ಹೇಳಿದ್ದೆ ಕೂಡಾ. ಸೀತಾರಾಂ ಹಿಂದುಮುಂದು ನೋಡದೇ ಅಶ್ವತ್ಥ್ ಅವರ ಬಳಿ ಇದನ್ನು ಕೇಳಿಯೇ ಬಿಟ್ಟರು. ಅಶ್ವತ್ಥ್ ಸಿಟ್ಟಿನಿಂದ ಕೂಗಾಡಬಹುದು ಎಂದು ನಾನಂದುಕೊಂಡಿದ್ದೆ. ಆದರೆ ಅವರು ತಣ್ಣಗಿನ ಧ್ವನಿಯಲ್ಲಿ “ನಿಜ, ನಾನು ಭೂಪೇನ್ ಅವರಿಂದ ಕೊಂಚ ಪ್ರಭಾವಿತನಾಗಿರುವುದು ನಿಜ. ಆದರೆ ಅವರು ಮಾಡದೇ ಇರುವ ಹಲವು ಪ್ರಯೋಗಗಳನ್ನು ನಾನು ಮಾಡಿದ್ದೇನೆ” ಎಂದಿದ್ದರು. ಅದು ನಿಜ ಕೂಡಾ. ಹಾಗೆ ನೋಡಿದರೆ ಸುಗಮಸಂಗೀತ ಅನ್ನುವ ವಿಶಿಷ್ಟ ಕಲ್ಪನೆ ಚಲಾವಣೆಯಲ್ಲಿರುವುದು ಕನ್ನಡದಲ್ಲಿ ಮಾತ್ರ. ಅದನ್ನು ಬೆಳೆಸಿ, ಪೋಷಿಸಿದವರು ಕಾಳಿಂಗರಾವ್ ಮತ್ತು ಮೈಸೂರು ಅನಂತಸ್ವಾಮಿ. ಅಶ್ವತ್ಥ್ ಅದನ್ನು ಇನ್ನಷ್ಟು ಜನಪ್ರಿಯವಾಗಿಸಿದರು. ಕಾವ್ಯಪ್ರಿಯರಿಗಷ್ಟೇ ಪರಿಚಿತವಾಗಿದ್ದ ಬಿ.ಆರ್. ಲಕ್ಷ್ಮಣರಾವ್, ಎಚ್ ಎಸ್ವಿ, ಲಕ್ಷೀನಾರಾಯಣ ಭಟ್ಟ, ಜಿಎಸ್ ಎಸ್ ಅವರಂಥವರ ಹೆಸರುಗಳನ್ನು ಹೋಟೆಲ್ ಮಾಣಿಗಳ ಅಂತರಂಗಕ್ಕೂ ತಲುಪಿಸಿದರು. ಮೊದಲೇ ಜನಪ್ರಿಯವಾಗಿದ್ದ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿಯವರ ಗೀತೆಗಳು ಅಶ್ವತ್ಥ್ ಅವರ ಹೊಸರಾಗದಿಂದ ಇನ್ನಷ್ಟು ನಳನಳಿಸಿದವು. ಉದಾಹರಣೆಗೆ ಪಿಬಿಎಸ್ ಹಾಡಿದ್ದ ‘ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು’ ಎಂಬ ಚಿತ್ರಗೀತೆಯನ್ನು ಅಶ್ವತ್ಥ್ ಬೇರೆಯೇ ಸ್ತರ ಮತ್ತು ಸ್ವರದಲ್ಲಿ ಹಾಡಿದರು. ಕವಿತೆಯ ಭಾವಕ್ಕೆ ತಕ್ಕಂತೆ ಸ್ವರಸಂಯೋಜಿಸಬೇಕು, ಕಿವಿಗೆ ಇಂಪಾಗಿ ಕೇಳಿಸಲಿ ಅನ್ನುವ ಕಾರಣಕ್ಕೆ ಭಾವಕ್ಕೆ ಚ್ಯುತಿಯಾಗಬಾರದು ಅನ್ನುವುದು ಅವರ ಧೋರಣೆಯಾಗಿತ್ತು. ದೂರ ಅನ್ನುವ ಪದವನ್ನು ಕವಿ ಬಳಸಿದರೆ ಗಾಯಕ ಅದನ್ನು  ದೂ......ರ ಎಂದೇ ಹಾಡಬೇಕು, ಆಗ ಆ ದೂರದ ಕಲ್ಪನೆ ಕೇಳುಗನ ಮನಸ್ಸಿಗೆ ನಾಟುತ್ತದೆ ಅನ್ನುತ್ತಿದ್ದರು.

    ರಾಗ ಸಂಯೋಜಕರಾಗಿ ಅಶ್ವತ್ಥ್ ಅವರ ರೇಂಜು ಬಹಳ ವಿಸ್ತಾರವಾದದ್ದು. ರಂಗಭೂಮಿ, ಸಿನಿಮಾ, ಸುಗಮಸಂಗೀತ, ಜಾನಪದ, ಸೀರಿಯಲ್ಲು ಶೀರ್ಷಿಕೆ ಗೀತೆ, ಇವೆಲ್ಲ ಪ್ರಕಾರಗಳಲ್ಲೂ ಅಶ್ವತ್ಥ್ ಕೈ ಆಡಿಸಿದರು. ಎಲ್ಲೂ ಸೋಲಲಿಲ್ಲ. ವಿಶೇಷವೆಂದರೆ ಕಾಳಿಂಗರಾವ್, ಅನಂತಸ್ವಾಮಿ ಮತ್ತು ಅಶ್ವತ್ಥ್ – ಈ ಮೂವರು ಕೂಡಾ ಗಾಯಕರು ಮತ್ತು ರಾಗಸಂಯೋಜಕರೂ ಆಗಿದ್ದರು. ಗಾಯಕನಾಗಿ ನನಗೆ ಇಂದಿಗೂ ಕಾಳಿಂಗರಾಯರೇ ಇಷ್ಟ. ಅವರ ಧ್ವನಿಯಲ್ಲಿರುವ ಸೂಕ್ಷ್ಮ ಪಲುಕುಗಳು ಅಶ್ವತ್ಥ್ ಕಂಠದಲ್ಲಿ ಸಿಗುವುದಿಲ್ಲ.  ಆದರೆ ರಾಗಸಂಯೋಜನೆಯ ಮಾತು ಬಂದಾಗ, ಹೊಸಪ್ರಯೋಗಗಳ ಮಾತು ಬಂದಾಗ ಅಶ್ವತ್ಥ್ ಕೊಂಚ ಮುಂದೆ ನಿಲ್ಲುತ್ತಾರೆ. ಸುಗಮಸಂಗೀತದಲ್ಲಿ ಒಬ್ಬ ರಾಗಸಂಯೋಜಕ ಗೆಲ್ಲಬೇಕಾದರೆ ಕವಿಯ ಕಲ್ಪನೆಯನ್ನು, ಕವಿತೆ ಹೊರಹೊಮ್ಮಿಸುವ ಭಾವವನ್ನು ಮತ್ತು ಆ ಕಾವ್ಯ ಸೃಷ್ಟಿಯಾದ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ ನನ್ನ’ ಪದ್ಯವನ್ನು ಎಸ್ಪಿ. ಬಾಲಸುಬ್ರಹ್ಮಣ್ಯಂ ಸುಶ್ರಾವ್ಯವಾಗಿ ಹಾಡಿದ್ದಾರೆ. ಆದರೆ ಅಶ್ವತ್ ಅದೇ ಗೀತೆಗೆ ಹಾಕಿದ ರಾಗಸಂಯೋಜನೆ ಮತ್ತು ಹಾಡಿದ ರೀತಿಯಲ್ಲಿ ವಿಷಾದವೇ ಸ್ಥಾಯಿಯಾಗಿ ವಿಜೃಂಭಿಸಿತ್ತು. ಆ ಕವಿತೆಯ ಮೂಡನ್ನು ಪರ್ಫೆಕ್ಟ್ ಆಗಿ ಕಟ್ಟಿಕೊಟ್ಟಿದ್ದರು ಅಶ್ವತ್ಥ್. ಬೇಂದ್ರೆಯವರು ತನ್ನ ಪುತ್ರ ತೀರಿಕೊಂಡಾಗ ಪತ್ನಿಯ ಮುಖ ನೋಡುತ್ತಾ ಈ ಹಾಡು ಬರೆದಿದ್ದರು ಎಂದು ಯಾರೋ ಹೇಳಿದ ನೆನಪು.

    ಅಶ್ವತ್ಥ್ ಅವರ ವ್ಯಕ್ತಿತ್ವದಲ್ಲಿ ನಾನು ಗುರುತಿಸಿದ ವಿರೋಧಾಭಾಸವೆಂದರೆ ಅವರ ಆತ್ಮರತಿ ಮತ್ತು ಹಾಸ್ಯಪ್ರಜ್ಞೆ. ಅವರ ಸ್ವಪ್ರಶಂಸೆ ಯಾವ ಮಾದರಿಯಲ್ಲಿರುತ್ತಿತ್ತು ಅನ್ನುವುದಕ್ಕೆ ಒಂದು ಉದಾಹರಣೆಃ ಒಂದು ದಿನ ಬೆಳ್ಳಂಬೆಳಿಗ್ಗೆ ಅಶ್ವತ್ಥ್ ತಮ್ಮ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ‘ಬೆಂಗಳೂರು ಆಕಾಶವಾಣಿ ಕೇಳಿದ್ಯೇನಯ್ಯಾ’ ಎಂದರಂತೆ. ಆತ ಇಲ್ಲ ಎಂದರು. ‘ಅದ್ಯಾವನೋ ಬಡ್ಡಿಮಗ ಎಷ್ಟು ಚೆನ್ನಾಗಿ ಹಾಡುತ್ತಿದ್ದ ಗೊತ್ತಾ, ನಾನಂತೂ ಸುಸ್ತಾಗಿ ಬಿಟ್ಟೆ’ ಎಂದರಂತೆ. ಯಾರವರು ಎಂದು ಆತ ಪ್ರಶ್ನಿಸಿದಾಗ, ‘ಅದ್ಯಾರೋ ಅಶ್ವತ್ಥ್ ಅಂತೆ’ ಎಂದು ಗಹಗಹಿಸಿ ನಕ್ಕರಂತೆ.

    ಅಶ್ವತ್ಥ್ ಅಧ್ಯಕ್ಷತೆಯಲ್ಲಿ ಆಗಾಗ ನಡೆಯುತ್ತಿದ್ದ ಮೆಹಫಿಲ್ ಗಳಲ್ಲೂ ಅಷ್ಟೇ, ಬೇರೆ ಯಾರೂ ಹಾಡುವ ಹಾಗಿರಲಿಲ್ಲ. ಅದರಲ್ಲೂ ಅಶ್ವತ್ಥ್ ಅವರದೇ ರಾಗಸಂಯೋಜನೆಯನ್ನು ಇನ್ನಾರೋ ಹಾಡಿದರೆ ಅಶ್ವತ್ಥ್ ಕೆರಳಿ ಕೆಂಡವಾಗುತ್ತಿದ್ದರು. ಒಮ್ಮೆ ಬಿ.ಆರ್. ಲಕ್ಷ್ಮಣರಾಯರ ಸೋದರ ಶಂಕರ್ ಅವರು ತನ್ನಣ್ಣನೇ ರಚಿಸಿದ ‘ಅಮ್ಮಾ ನಿನ್ನ ಎದೆಯಾಳದಲ್ಲಿ’ ಹಾಡನ್ನು ಹಾಡಿದಾಗ ಅಶ್ವತ್ಥ್ ಆ ಟೇಬಲ್ಲಿಂದ ಎದ್ದುಹೋಗಿದ್ದರು. ಇನ್ನೊಂದು ಘಟನೆ ನಡೆದದ್ದು ಬಾಗಲಕೋಟೆಯ ಲಾಡ್ಜ್ ಒಂದರಲ್ಲಿ. ‘ನಾಗಮಂಡಲ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭವದು.  ಸಿನಿಮಾ ಪತ್ರಿಕಾ ಪ್ರಚಾರಕರ್ತ ನಾಗೇಂದ್ರ ಥೇಟ್ ಅಶ್ವತ್ಥ್ ಥರಾನೇ ‘ತರವಲ್ಲ ತೆಗೀ ನಿನ್ನ ತಂಬೂರಿ ಸ್ವರಾ’ ವಚನ ಹಾಡಿದರು. ಹಾಡು ಮುಗಿದ ತಕ್ಷಣ ಅಶ್ವತ್ಥ್ ಹೇಳಿದರು ‘ಇನ್ನೊಂದು ಹಾಡು ಹಾಡಿದ್ರೆ ನಿನ್ನನ್ನು ಕಿಟಿಕಿಯಿಂದಾಚೆ ಎಸೆಯುತ್ತೇನೆ’.

    prakash rai, c ashwath
    prakash rai, c ashwath (pic - KM Veeresh)

    ಇದೇ ಅಶ್ವತ್ಥ್ ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುತ್ತಿದ್ದದ್ದೂ ಉಂಟು. ಅವರೇ ಹೇಳಿದ ಅಂಥಾದ್ದೊಂದು ಕತೆ ಇಲ್ಲಿದೆಃ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದ ಬಳಿಕ ಮುಂದಿರುವ ಬಾರ್ ಅಂಡ್ ರೆಸ್ಟಾರೆಂಟಲ್ಲಿ ಅಶ್ವತ್ಥ್ ಮತ್ತು ಗೆಳೆಯರ ಬಳಗ ಗುಂಡು ಹಾಕುತ್ತಾ ಕುಳಿತಿತ್ತು. ಮಧ್ಯರಾತ್ರಿ ಕಳೆದು ಗಂಟೆ ಎರಡೂವರೆ ಆದರೂ ಗಾನ ಮತ್ತು ಪಾನಗೋಷ್ಠಿ ನಡೆದೇ ಇತ್ತು. ನೈಟ್ ಶಿಫ್ಟಲ್ಲಿದ್ದ ಸಬ್ ಇನ್ ಸ್ಪೆಕ್ಟರ್ ಮತ್ತು ಇಬ್ಬರು ಪೀಸಿಗಳು ಹೋಟೆಲ್ ಒಳಗೆ ಬಂದು ಮೆನೇಜರ್ ಗೆ ಬಾಗಿಲು ಹಾಕುವಂತೆ ಹೇಳಿದರು. ಗಲಾಟೆ ಕೇಳಿದ ಅಶ್ವತ್ಥ್ ಕೆಳಗೆ ಬಂದರು. ಎಸ್ಸೈ ಗೆ ದಬಾಯಿಸಿದರು, ಆತ ಜಗ್ಗಲಿಲ್ಲ. ಕೊನೆಗೆ ಅಶ್ವತ್ಥ್ ‘ನಾನ್ಯಾರು ಗೊತ್ತಾ’ ಎಂದು ಅಬ್ಬರಿಸಿದರು. ‘ನೀವ್ಯಾರು’ ಎಂದಾತ ಮುಗ್ಧತೆಯಿಂದ ಕೇಳಿದ. ‘ನಾನು ಅಶ್ವತ್ಥ್’  ಎಂದು ಇವರು  ಜೋರಾಗಿ ಕಿರುಚಿದರು. ‘ಅದಕ್ಕೆ ನಾನೇನು ಮಾಡ್ಲಿ, ವ್ಯಾನು ಹತ್ತಿ ಪೊಲೀಸ್ ಸ್ಟೇಷನ್ನಿಗೆ ಬನ್ನಿ’ ಅಂದನಂತೆ ಎಸ್ಸೈ. ಮಾರನೇ ದಿನ ಬೆಳಿಗ್ಗೆ ಇನ್ ಸ್ಪೆಕ್ಟರ್ ಬಂದು ಅಶ್ವತ್ಥ್ ಅವರನ್ನು ಗುರುತಿಸುವ ತನಕ ಇಡೀ ಗ್ಯಾಂಗು ಪೊಲೀಸ್ ಸ್ಟೇಷನ್ ನಲ್ಲೇ ಇತ್ತು.

    ಹಾಗಂತ ಅಶ್ವತ್ಥ್ ಜನಪ್ರಿಯತೆಯನ್ನು ಸಂದೇಹಿಸುವ ಹಾಗಿಲ್ಲ. ‘ಕೆಂಚಾಲಾ ಮಚ್ಚಾಲೋ’ ಹಾಡು ಫೇಮಸ್ ಆದನಂತರ ಅಶ್ವತ್ಥ್  ರೌಡಿಗಳಿಗೂ ಮೆಚ್ಚುಗೆಯಾದರು. ಶ್ರೀರಾಮಪುರದಲ್ಲಿದ್ದ ಅಶ್ವತ್ಥ್ ಅಭಿಮಾನಿಯೊಬ್ಬ ಗಣೇಶನ ಹಬ್ಬಕ್ಕೆ ಒತ್ತಾಯ ಮಾಡಿ ಕರಕೊಂಡು ಹೋದನಂತೆ. ಅಲ್ಲಿ ನೋಡಿದರೆ ಇನ್ನೂರು ಜನರಿದ್ದರು, ಎಲ್ಲರೂ ಎಷ್ಟು ಕುಡಿದಿದ್ದರು ಅಂದರೆ ವೇದಿಕೆಗೇ ಎಣ್ಣೆ ಘಾಟು ಬಡಿಯುತ್ತಿತ್ತು. ಕುವೆಂಪು ಕವಿತೆಯಿಂದ ಅಶ್ವತ್ಥ್ ಗಾನಗೋಷ್ಠಿ ಆರಂಭವಾಯಿತು. ತಕ್ಷಣ ಸಭೆಯಿಂದ ಆವಾಜ್ ಕೇಳಿಬಂತು  ‘ಕೆಂಚಾಲೋ ಹಾಡು ಗುರೂ’. ಕುಡುಕರನ್ನು ಎದುರು ಹಾಕಿಕೊಳ್ಳುವುದು ಜೀವಕ್ಕೆ ಒಳ್ಳೆಯದಲ್ಲ ಎಂದು ಅಶ್ವತ್ಥ್ ಅದೇ ಹಾಡು ಹಾಡಿದರು. ಹಾಡು ಮುಗಿದ ತಕ್ಷಣ ಸಿಳ್ಳೆ-ಚಪ್ಪಾಳೆ. ಯಾರೋ ಒಬ್ಬ ಪುಡಿರೌಡಿ ಬಂದು ಅಶ್ವತ್ಥ್ ಕತ್ತಿಗೆ ನೋಟಿನ ಹಾರ ಹಾಕಿ ತಬ್ಬಿಕೊಂಡ. ಜನ ಒನ್ಸ್ ಮೋರ್ ಅಂದರು. ಆವತ್ತಿನ ರಸಮಂಜರಿ ಕಾರ್ಯಕ್ರಮದಲ್ಲಿ ಅಶ್ವತ್ಥ್ ಹಾಡಿದ್ದು ಒಂದೇ ಹಾಡು, ಅದೇ  ಕೆಂಚಾಲೋ ಮಚ್ಚಾಲೋ. ಅದು ಹನ್ನೆರಡು ಸಾರಿ ರಿಪೀಟ್ ಆಗಿತ್ತು.

    ಅಶ್ವತ್ಥ್ ‘ಕನ್ನಡದ ಧ್ವನಿ’ಯಾಗಿ ಬಡ್ತಿ ಪಡೆದದ್ದು ಕನ್ನಡವೇ ಸತ್ಯ ಕಾರ್ಯಕ್ರಮದ ನಂತರ. ಅರಮನೆ ಮೈದಾನದಲ್ಲಿ ಒಂದು ಲಕ್ಷ ಜನ ಆ ಕಾರ್ಯಕ್ರಮಕ್ಕೆ ಸೇರಿದ್ದರು. ಆನಂತರ ಅಶ್ವತ್ಥ್ ತನ್ನ ಹೆಸರು ರಾಷ್ಟ್ರಮಟ್ಟದಲ್ಲೂ ಮಿಂಚುವಂಥಾಗಬೇಕು ಎಂಬ ಆಸೆ ಶುರುವಾಯಿತು. ಅದಕ್ಕೊಂದು ಮಾಸ್ಟರ್ ಪ್ಲಾನ್ ಮಾಡಿದರು. ಎಲ್ಲಾ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಸಂಪಾದಕರಿಗೋಸ್ಕರ ಒಂದು ವಿಶೇಷ ಸಂಗೀತ ಕಾರ್ಯಕ್ರಮ ಏರ್ಪಾಡು ಮಾಡಿದರು. ಬೆಂಗಳೂರಿನ ಹೊರವಲಯದಲ್ಲಿರುವ ದೊಡ್ಡ ಆಲದಮರದ ಸಮೀಪ ಖಾಲಿಜಾಗವೊಂದಲ್ಲಿ ಶಾಮಿಯಾನಾ ಹಾಕಲಾಯಿತು. ಆದರೆ ಸಂಜೆ ಕಚೇರಿ ಕೆಲಸ ಮುಗಿಸಿ ಆಫೀಸಿಂದ ಆ ಜಾಗಕ್ಕೆ ತಲುಪುವುದೇ ಅತಿಥಿಗಳಿಗೆ ದೊಡ್ಡ ಸಮಸ್ಯೆಯಾಗಿ ಕಾಡಿತು. ರಸ್ತೆ ಕೂಡಾ ಅಶ್ವತ್ಥ್ ಗಾಯನದಂತೆ ವಿಪರೀತ ಉಬ್ಬತಗ್ಗುಗಳಿಂದ ಕೂಡಿತ್ತು.  ಕೆಲವರು ಅರ್ಧದಾರಿಯಿಂದಲೇ ವಾಪಸಾದರು. ಮಿಕ್ಕವರು ತಲುಪುವ ಹೊತ್ತಿಗೆ ರಾತ್ರಿ ಹನ್ನೊಂದಾಗಿತ್ತು. ಊಟ ತಣ್ಣಗಾಗಿತ್ತು.  ಅಶ್ವತ್ಥ್ ಮುಖ ಕೆಂಪಗಾಗಿತ್ತು, ಆದರೆ ಅತಿಥಿಗಳ ಮುಖವೂ ಅಷ್ಟೇ ಕೆಂಪಗಾಗಿದ್ದನ್ನು ನೋಡಿದ ಅಶ್ವತ್ಥ್ ಒಲ್ಲದ ಮನಸ್ಸಿನಲ್ಲೇ ಹಾಡಿದರು. ಅವರ ಭಾಷೆಯಲ್ಲೇ ಹೇಳುವುದಾದರೆ ಆ ಕಾರ್ಯಕ್ರಮ ಚೊಂಬಾಗಿತ್ತು.

    ನನ್ನ ಮತ್ತು ಅಶ್ವತ್ಥ್ ಅವರ ಹದಿನೈದು ವರ್ಷಗಳ ಸಂಬಂಧದಲ್ಲಿ ಇಂಥಾ ಹಲವಾರು ರಸಭರಿತ ಸನ್ನಿವೇಶಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಅವರೊಂದಿಗೆ ಜಗಳ ಆಡಿದ್ದೇನೆ, ಅವರ ಮನೆಯ ತಾರಸಿಯಲ್ಲಿ, ಬೆಳದಿಂಗಳ ಬೆಳಕಲ್ಲಿ  ಹಿತವಾದ ಸಂಗೀತ ಸವಿದಿದ್ದೇನೆ. ಅವರ ಶ್ರೀಮತಿಯವರು ತಯಾರಿಸುತ್ತಿದ್ದ ಬಿಸಿಬೇಳ್ ಬಾತ್ ಮತ್ತು ಮೊಸರನ್ನದ ರುಚಿ ಇಂದಿಗೂ ನನ್ನ ನಾಲಿಗೆ ಮೇಲಿದೆ. ಅವರ ಮನೆಯಿದ್ದ ರಸ್ತೆಯ ಕೊನೆಯಲ್ಲೇ ನನ್ನ ಮನೆಯೂ ಇದ್ದಿದ್ದರಿಂದ ತಿಂಗಳಿಗೊಮ್ಮೆಯಾದರೂ ನಾವಿಬ್ಬರು ಸೇರುತ್ತಿದ್ದೆವು. ಆದರೆ ನಾನು ಬೆಂಗಳೂರಿನ ಹೊರವಲಯದಲ್ಲಿ ಮನೆ ಕಟ್ಟಿದ ಮೇಲೆ ಸಂಪರ್ಕ ಕಡಿಮೆಯಾಯಿತು. ನನ್ನ ಗೃಹಪ್ರವೇಶಕ್ಕೆ ಬಂದ ಮೊದಲ ಅತಿಥಿಯೆಂದರೆ ಅವರೇ. ಕೈಯಲ್ಲೊಂದು ಉಡುಗೊರೆಯ ಬಾಕ್ಸ್. ಅದನ್ನು ನನ್ನ ಕೈಯಲ್ಲಿಟ್ಟು ‘ಇದರಲ್ಲೇನಿದೆ ಗೊತ್ತಾ’ ಎಂದರು. ನಾನು ತಲೆ ಅಲ್ಲಾಡಿಸಿದೆ. ‘ಸೀಲಿಂಗ್ ಫ್ಯಾನ್ ಕಣ್ರೀ. ಬೇರೆ ಏನೇ ಉಡುಗೊರೆ ಕೊಟ್ಟರೂ ಅದು ನಾಲ್ಕೇ ದಿನದಲ್ಲಿ ಮೂಲೆ ಸೇರುತ್ತೆ. ಆದರೆ ಫ್ಯಾನ್ ಇದೆಯಲ್ಲಾ. ನಿಮ್ಮ ತಲೆ ಮೇಲೆ ತಿರುಗ್ತಾನೇ ಇರುತ್ತೆ. ಆ ಗಾಳಿ ಬೀಸಿದಾಗಲೆಲ್ಲಾ ನಿಮಗೆ ನನ್ನ ನೆನಪಾಗುತ್ತಲೇ ಇರುತ್ತದೆ’. ಗಾಳಿಯ ಮೂಲಕ ನೆನಪುಗಳು ತೇಲಿ ಬರುತ್ತದೆ ಅನ್ನುವ ಕವಿಕಲ್ಪನೆಯನ್ನು ಅಶ್ವತ್ಥ್ ಪ್ರಾಕ್ಟಿಕಲ್ ಆಗಿ ಕಾರ್ಯರೂಪಕ್ಕೆ ತಂದಿದ್ದರು!

    ಆ ಫ್ಯಾನ್ ಮೊನ್ನೆಯಷ್ಟೇ ಕೆಟ್ಟುಹೋಯಿತು, ಅಶ್ವತ್ಥ್ ನೀಡಿದ ಉಡುಗೊರೆ ಅನ್ನುವ ಏಕೈಕ ಕಾರಣಕ್ಕೆ ಅದನ್ನು  ರಿಪೇರಿ ಮಾಡಿಸಿದೆ.  ಅದು ಬೀಸುವ ಗಾಳಿಯಲ್ಲಿ ತೇಲಿ ಬರುತ್ತಿರುವ ಅಶ್ವತ್ಥ್ ನೆನಪುಗಳನ್ನು ಆಸ್ವಾದಿಸುತ್ತಾ ಈ ಅಂಕಣ ಬರೆಯುತ್ತಿದ್ದೇನೆ. ಫ್ಯಾನ್ ಕಿರ್ ಅಂದರೂ ಸಾಕು ಅಶ್ವತ್ಥ್ ಕಂಠ ಕೆಟ್ಟುಹೋಯಿತಾ ಎಂದು ಆತಂಕಕ್ಕೀಡಾಗುತ್ತೇನೆ. ಆ ಫ್ಯಾನನ್ನೇ ಅಶ್ವತ್ಥ್ ಅಂದುಕೊಳ್ಳುತ್ತಾ ಅದರ ಜೊತೆ ಆಟ ಆಡುತ್ತೇನೆ. 4ನೇ ನಂಬರಲ್ಲಿಟ್ಟರೆ ತಾರಕ ( ಶ್ರಾವಣ ಬಂತು ನಾಡಿಗೆ), ಎರಡರಲ್ಲಿಟ್ಟರೆ ಮಧ್ಯಮ ( ಬಾ ಇಲ್ಲಿ ಸಂಭವಿಸು), ಒಂದರಲ್ಲಿಟ್ಟರೆ ಮಂದ್ರ (ಬದುಕು ಮಾಯೆಯ ಮಾಟ). ಹೀಗೆ ಫ್ಯಾನ್ ಜೊತೆಗೆ ಆಡುತ್ತಾ ನಾನು ಮತ್ತೊಮ್ಮೆ ಅಶ್ವತ್ಥ್ ಫ್ಯಾನ್ ಆಗುತ್ತೇನೆ. 

  • Vijayalakshmi admitted to hospital after suicide attempt

    vijayalakshmi image

    Just a day after actor Raviprakash said that he will not compromise and will take legal action against actress Vijayalakshmi of 'Nagamandala' fame, the actress has attempted suicide and has been admitted to hospital in Chennai.

    Vijayalakshmi attempting suicide has nothing to do with Raviprakash. Instead, the actress in a video has accused actor-director-politician Seeman for mentally torturing her.

    you_tube_chitraloka1.gif

    The actress has said in her video that she has been in tremendous stress for the past four months because of Seeman and his partymen. The actress said that she had already taken a couple of BP tablets and will suffer from low blood pressure and will be dead in a few hours.

    The actress was immediately rushed to hospital and was given treatment. Vijayalakshmi is said to be out of danger.

    Also Read

    ಅಂದು ತಮಿಳು.. ಇಂದು ಕನ್ನಡ.. ನಾಗಮಂಡಲ ವಿಜಯಲಕ್ಷ್ಮಿ ನಾಟಕ ಮಂಡಲ ಕಟ್ಟಿದ್ರಾ..?

    ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

    Vijayalakshmi Profile

     

  • Well known Writer Gopal Vajpayee no more

    Gopal Vajpayee image

    Well known writer Gopal Vajpayee who has worked as a screen writer and lyricist to Shivarajakumar starrer 'Kabira' and many other films has breathed his last tonight. He was 66 and died because of Asthama.

    Gopal Vajapayee started his career as a journalist and worked in 'Samyuktha Karnataka'. Along with that, he wote for films like 'Santha Shishunala Sharifa', 'Nagamandala', 'Sangya Balya', 'Singaravva' and others. He later joined ETV Kannada and wrote for the very famous 'Ede Tumbi Haduvenu' anchored by S B Balasubramaniam.

    Gopal Vajpayee settled in Bangalore after retirement. His last film was 'Kabira'. Gopal Vajpayee will be cremated in Bangalore on Wednesday.

  • ಅಂದು ತಮಿಳು.. ಇಂದು ಕನ್ನಡ.. ನಾಗಮಂಡಲ ವಿಜಯಲಕ್ಷ್ಮಿ ನಾಟಕ ಮಂಡಲ ಕಟ್ಟಿದ್ರಾ..?

    vijayalakshmi image

    ನಾಗಮಂಡಲ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿಜಯಲಕ್ಷ್ಮಿ. ಕನಸುಗಾರ ರವಿಚಂದ್ರನ್ ಶೋಧಿಸಿದ ಪ್ರತಿಭೆ. ಈ ಪ್ರತಿಭೆಯನ್ನು ಹೊಳೆಯುವಂತೆ ಮಾಡಿದ್ದು ಟಿ.ಎಸ್.ನಾಗಾಭರಣ. ಪ್ರತಿಭಾನ್ವಿತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸುಂದರಿಯಷ್ಟೇ ಅಲ್ಲ, ಅಭಿನಯ ಪ್ರತಿಭೆಯೂ ಅಗಾಧವಾಗಿದ್ದ ಚೆಲುವೆ. ಆರಂಭದ ಚಿತ್ರ ನಾಗಮಂಡಲ, ನಂತರ ಜೋಡಿಹಕ್ಕಿ, ಅರುಣೋದಯ, ನಂ.1.. ಹೀಗೆ ವಿಭಿನ್ನ ಪಾತ್ರಗಳಲ್ಲಿ ನಟಿಸಿದ ವಿಜಯಲಕ್ಷ್ಮಿ, ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಈ ಬಾರಿಯೂ ಅಷ್ಟೆ..

    ಕೆಲವೇ ದಿನಗಳ ಹಿಂದೆ ಒಂದು ವಿಡಿಯೋ ರಿಲೀಸ್ ಮಾಡಿದ್ದ ವಿಜಯಲಕ್ಷ್ಮಿ, ತಾನು ತಮಿಳುನವಳು ಎಂದು ಕಿರುಕುಳ ಮಾಡುತ್ತಿದ್ದಾರೆ.  ನಟ ರವಿಪ್ರಕಾಶ್ ಅನ್ನುವವರು ನನಗೆ ಹಿಂಸೆ ಕೊಟ್ಟಿದ್ದರು. ಸಹಾಯಕ್ಕಾಗಿ ಬೇಡಿದರೆ ನೀನು ತಮಿಳಿನವಳು ಎಂದು ಯಾರೂ ಸಹಾಯ ಮಾಡಲ್ಲ. ಇಲ್ಲಿ ತಮಿಳಿನವರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಹೊರಗೆ ಬರೋದೇ ಇಲ್ಲ ಎಂದೆಲ್ಲ ಮಾತನಾಡಿದ್ದರು. ಆರೋಪ ಮಾಡಿರುವ ರವಿಪ್ರಕಾಶ್ ಅವರ ಜೊತೆ ಸಂಧಾನಕ್ಕೆ, ರಾಜಿಗೆ ಮುಂದಾಗಿರುವುದು ಬೇರೆ ವಿಷಯ. ಆದರೆ ಆ ವಿಡಿಯೋಗೆ ನಿರೀಕ್ಷಿಸಿದ್ದಂತೆ ಪ್ರತಿಕ್ರಿಯೆಗಳು ಸಿಗಲಿಲ್ಲ.

    you_tube_chitraloka1.gif

    ಈಗ ನನಗೆ ತಮಿಳಿನವರಿಂದ ಅನ್ಯಾಯವಾಗುತ್ತಿದೆ. ತಮಿಳಿನಲ್ಲಿ ಸೀಮನ್, ಹರೀಂದ್ರನ್ ಎನ್ನುವವರು ಕಿರುಕುಳ ಕೊಡುತ್ತಿದ್ದಾರೆ. ನಾನು ಸಾಯುತ್ತಿದ್ದೇನೆ ಎಂದು ಹೇಳಿ, 3 ಬಿಪಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಇವೆಲ್ಲವೂ ನಡೆದಿರುವುದು 2 ವಾರಗಳ ಗ್ಯಾಪ್‍ನಲ್ಲಿ. ಮೊದಲಿಗೆ ವಿಜಯಲಕ್ಷ್ಮಿ, ಕನ್ನಡಿಗರ ವಿರುದ್ಧ ತಮಿಳರನ್ನೂ, ನಂತರ ಈಗ ತಮಿಳರ ವಿರುದ್ಧ ಕನ್ನಡಿಗರನ್ನೂ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ನಿಜಕ್ಕೂ ಅನ್ಯಾಯವಾಗಿದ್ದರೆ ಕಾನೂನು ಸಮರ ನಡೆಸುವ ಮುಕ್ತ ಅವಕಾಶಗಳಿವೆ. ಆದರೆ, ಹೀಗೆ ಭಾಷಾ ಸಾಮರಸ್ಯ ಕೆಣಕುವುದು ಸರಿಯಲ್ಲ ಎನ್ನುವ ಭಾವನೆ ಚಿತ್ರರಂಗದಲ್ಲಿದೆ. ವಿಜಯಲಕ್ಷ್ಮಿ ವೈಯಕ್ತಿಕ ಸಮಸ್ಯೆಗಳನ್ನು ಇಡೀ ಕರ್ನಾಟಕದ, ಕನ್ನಡಿಗರ ಸಮಸ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಉತ್ತರಿಸಬೇಕಾದವರು ಸ್ವತಃ ವಿಜಯಲಕ್ಷ್ಮಿ.

    Also Read

    ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

    Vijayalakshmi Profile

  • ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ಎಫ್‍ಐಆರ್

    fir against vijaylakshmi

    ನಾಗಮಂಡಲ ವಿಜಯಲಕ್ಷ್ಮಿ ಮತ್ತು ಅವರ ಸೋದರಿ ಉಷಾ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ತಾನು ವಿಜಯಲಕ್ಷ್ಮಿ ಅವರಿಗೆ ಫೆ.27ರಂದು 1 ಲಕ್ಷ ರೂ. ಹಣ ನೀಡಿದ್ದು, ಅದಾದ ನಂತರ ಅವರು ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ನಟ ರವಿಪ್ರಕಾಶ್ ದೂರು ನೀಡಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ, ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರವಿಪ್ರಕಾಶ್ 1 ಲಕ್ಷ ರೂ. ನೀಡಿದ್ದರು. ಆದರೆ, ಅದಾದ ನಂತರ ರವಿಪ್ರಕಾಶ್ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ದೂರು ನೀಡಿದ್ದರು.