` s narayan - chitraloka.com | Kannada Movie News, Reviews | Image

s narayan

  • S Narayan Walks Out Of JD - Exclusive

    jd movie image

    Director S Narayan who was all set to direct his 50th film has walked out of the film. JD was launched last week and the film was in news because it was not only his 50th film, but also the costliest film of his carrier. Jagadish alias JD was the producer apart from acting as a hero in this film. Though the film was launched, the shooting was scheduled for August.

    Even before the launch of the film, S Narayan has walked out of the film due to difference of opinions with the producer. Now the team has to look out for another director to direct the film. Speaking to Chitraloka, S Narayan has confirmed this news.

    Also See

    Narayan's 50th Film JD Launched

    JD Pressmeet Images - View

    JD Movie stills - View

     

  • S Narayan's 25th Anniversary as Director - KM Veeresh Writes

    s narayan, km veeresh image

    25 years ago, he was 30 years old and already spent a few years as assistant director in Kannada films including to the veteran Bhargava. Then a magic happened. It was called Chaitrada Premanjali. S Narayan's first film as director released in 1992 and stars were born. 

    Narayan made himself a brand and Star with that film along with the mostly newcomers who had worked in the film. Composer-lyricist Hamsalekha was the only existing star who had worked in that film. From there, there was no looking back so to say. Narayan went on to become one of the most successful directors in Sandalwood. Among the way he also became a successful actor, writer, lyricist, dialogues writer, music director and Kala Samrat. 

    Narayan is also the only director to direct Rajkumar, Vishnuvardhan, Ambareesh and all three sons of Rajkumar in his career. His dedication to work is legendary. In one of the biggest compliments he received, Vishnuvardhan once said that if he would compare anyone to Puttanna Kanagal in the current directors when it comes to work ethics it would be Narayan. But it was not a bed of roses. It was a constant struggle. Only his determination, dedication, commitment and confidence saw him through. As the director of 48 movies and he has had an eventful journey.

    To Be Continued

  • S Narayan's Son Pavan Turns Hero

    s narayan's son pavan turns hero

    After Pankaj, S Narayan wanted to introduce his second son Pavan as a hero to Kannada film industry. In spite of various efforts, Narayan's dream of making his son a hero, couldn't realize due to various reasons. Now Pankaj is all set to turn hero with a new film called 'Muttu Ratna'.

    The film which is officially called as 'Chi.Ra. Muttu, Chi.Sou. Ratna' is being written and directed by Srikanth Hunasur. The film is about a love cum arranged marriage set in a village backdrop.

    'Muttu Ratna' stars Pavan along with Anjana, Charan Raj, Nagabharana, Suchendra Prasad, Ravishankar Gowda, Rajesh Nataranga, Veena Sundar and others in prominent roles. The film which is going on floors on the 01st of December is being produced by Devaki. 

  • Uma Column 64 - ಅವತರಿಸು ಬಾ ನಾರಾಯಣ.....

    s narayan image

    ಮೊನ್ನೆ ನಾರಾಯಣ್ ನಮ್ಮ ಕಚೇರಿಗೆ ಬಂದಿದ್ದರು. ಬರೀ ನಾರಾಯಣ್ ಅಂದುಬಿಟ್ಟರೆ ಅವರ್ಯಾರು ಅನ್ನುವುದು ನಿಮಗೆ ಗೊತ್ತಾಗಲಿಕ್ಕಿಲ್ಲ. ಎಸ್. ನಾರಾಯಣ್ ಎಂದೇ ಅವರು ಪ್ರಖ್ಯಾತರು. ಕೆಲವರು ತಮ್ಮ ಇನಿಷಿಯಲ್ ಗಳಿಂದಲೇ ಗುರುತಾಗುತ್ತಾರೆ. ಉದಾಹರಣೆಗೆ ವಾಟಾಳ್ ನಾಗರಾಜ್. ಹಲವು ವರ್ಷಗಳ ಹಿಂದೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರರಾಗಿದ್ದ ಚಕ್ರವರ್ತಿ (ಗೆಳೆಯರ ಪಾಲಿಗೆ ನಚ್ಚಿ) ಅವರನ್ನು ಅದೇನೋ ಕ್ಷುಲ್ಲಕ ಕಾರಣಕ್ಕೆ ವಾಟಾಳ್ ನಿಂದಿಸಿದ್ದರು. ಅದರಿಂದ ಸಿಟ್ಟಿಗೆದ್ದ ನಚ್ಚಿ ಆಯಪ್ಪಂಗೆ ಬುದ್ದಿ ಕಲಿಸಬೇಕು ಎಂಬ ನಿರ್ಧಾರಕ್ಕೆ ಬಂದರು. ಕೊನೆಗೊಂದು ದಿನ ಕಾಲಕೂಡಿ ಬಂತು. ವಿಧಾನಸಭೆಯ ಅಧಿವೇಶನ ಶುರುವಾಯಿತು. ಎಂದಿನಂತೆ ವಾಟಾಳ್ ಆಡಳಿತ ಪಕ್ಷದ ಮೇಲೆ ಹರಿಹಾಯ್ದರು. ಮಾರನೇ ದಿನ ನಚ್ಚಿ ‘ಎಕ್ಸ್ ಪ್ರೆಸ್’ ಪತ್ರಿಕೆಯಲ್ಲಿ ಅದರ ವರದಿ ಮಾಡಿದರು. ಎಲ್ಲೂ ವಾಟಾಳ್ ಅನ್ನುವ ಹೆಸರೇ ಇರಲಿಲ್ಲ, ಬದಲಾಗಿ ವಿ.ನಾಗರಾಜ್ ಎಂದೇ ವರದಿಯುದ್ದಕ್ಕೂ ಪ್ರಕಟವಾಗಿತ್ತು. ಈ ಐಡಿಯಾ ಎಷ್ಟು ಸೊಗಸಾಗಿದೆ ನೋಡಿ. ವಾಟಾಳ್ ತನ್ನ ಹೆಸರು ಹಾಕಿಲ್ಲ ಎಂದು ತಕರಾರು ಮಾಡುವ ಹಾಗಿಲ್ಲ, ಆದರೆ ಅಲ್ಲಿದ್ದ ಹೆಸರು ಅವರದ್ದೇ ಎಂದು ಚತುಷ್ಕೋಟಿ ಕನ್ನಡಿಗರಿಗೆ ಗೊತ್ತಾಗುವ ಹಾಗೂ ಇಲ್ಲ. ಕಂಗಾಲಾದ ವಾಟಾಳ್ ಕಚೇರಿಗೆ ಧಾವಿಸಿಬಂದು ನಚ್ಚಿ ಕ್ಷಮೆ ಕೇಳಿದರು. ಪತ್ರಕರ್ತರಿಗೆ ಸೇಡು ತೀರಿಸಿಕೊಳ್ಳುವುದಕ್ಕಿರುವ ಏಕೈಕ ಅಸ್ತ್ರವೆಂದರೆ ಪೆನ್ನು ಅನ್ನುವುದು ಮತ್ತೊಮ್ಮೆ ಸಾಬೀತಾಯಿತು.

    ಇದು ಉಪಕತೆ, ಈಗ ಮೂಲಕತೆಗೆ ಬರೋಣ. ಎಸ್. ನಾರಾಯಣ್ ತಮ್ಮ ಮಗಳ ಮದುವೆ ಆಮಂತ್ರಣವನ್ನು ನೀಡುವುದಕ್ಕೆ ಕಚೇರಿಗೆ ಬಂದಿದ್ದರು. ಬಹುಶಃ ನಾವಿಬ್ಬರು ಪರಸ್ಪರ ಮುಖನೋಡಿ ಮೂರ್ನಾಲ್ಕು ವರ್ಷಗಳೇ ಆಗಿರಬಹುದೇನೋ. ಹಾಗಿದ್ದೂ ನಿನ್ನೆಯಷ್ಟೇ ಭೇಟಿಯಾದವರಂತೆ ನಾವಿಬ್ಬರೂ ಮಾತಾಡಿದೆವು. ನಾರಾಯಣ್ ಬದಲಾಗಿಲ್ಲ, ಅದೇ ನಗು, ಅದೇ ಚುರುಕು ಮಾತು, ಅದೇ ವೇಷ, ಅದೇ ಭೂಷಣ. ಅವರ ವಯಸ್ಸೆಷ್ಟು? ನಾನು ಕೇಳಲಿಲ್ಲ. ಮಾತಿನ ಮಧ್ಯೆ ಅವರ ಮಗನ ಬಗ್ಗೆ ವಿಚಾರಿಸಿದೆ. ಆತ ಯಾವ ಸಿನಿಮಾದಲ್ಲೂ ನಟಿಸುತ್ತಿಲ್ಲ ಎಂದು ಅವರು ಹೇಳಲಿಲ್ಲ, ಬದಲಾಗಿ ಸಿಸಿಎಲ್ ನಲ್ಲಿ ಆಡುತ್ತಿದ್ದಾನೆ ಅಂದರು. ಅದು ನಾರಾಯಣ್ ವರಸೆ.  ಸೋಲೊಪ್ಪಿಕೊಳ್ಳುವ ಜಾಯಮಾನ ಅವರದ್ದಲ್ಲ. ಅದಕ್ಕೇ ಅವರು ಇನ್ನೂ ಚಾಲ್ತಿಯಲ್ಲಿದ್ದಾರೆ.

    ಬದಲಾಗದೇ ಇರುವ ಮನುಷ್ಯರ ಬಗ್ಗೆ ಹೇಳುವ ಹೊತ್ತಿಗೆ ಉಪೇಂದ್ರ ಮತ್ತು ನಾನು ಕೆಲವು ವರ್ಷಗಳ ಹಿಂದೆ ಮಾತಾಡಿದ್ದು ನೆನಪಾಗುತ್ತಿದೆ. ಅದರ ಸಾರಾಂಶ ಹೀಗಿದೆಃ ಅಪರೂಪಕ್ಕೆ ಭೇಟಿಯಾದ ಗೆಳೆಯರೊಬ್ಬರು ನಿಮ್ಮನ್ನು ನೋಡಿ ‘ನೀವು ಬದಲಾಗಲೇ ಇಲ್ವಲ್ಲ ಮಾರಾಯ್ರೇ, ಹತ್ತು ವರ್ಷದ ಹಿಂದೆ ಹೇಗಿದ್ರೋ ಈಗಲೂ ಹಾಗೇ ಇದ್ದೀರಿ’ ಎಂದರೆ ನೀವು ಹಿಗ್ಗಬೇಕಾಗಿಲ್ಲ. ಅದು ಕಾಂಪ್ಲಿಮೆಂಟ್ ಅಲ್ಲ, ನಿಮ್ಮನ್ನು ಗೇಲಿ ಮಾಡುವ ವಿನೂತನ ರೀತಿಯಾಗಿರಬಹುದು. ‘ಅಯ್ಯಾ ಗೂಬೆ, ಕಳೆದ ಹತ್ತು ವರ್ಷಗಳಿಂದ ನೀನು ಬೆಳೆದೇ ಇಲ್ವಲ್ಲೋ’ ಎಂದು ಹೇಳುವ ವಿಧಾನವಾಗಿರಬಹುದು. ವಯಸ್ಸಾಗುತ್ತಿದ್ದಂತೆಯೇ ಮನುಷ್ಯ ಬದಲಾಗಬೇಕು, ತನ್ನೊಳಗೆ ಬೆಳೆಯಬೇಕು, ಹಾಗಂತ ತನ್ನ ಮೂಲಗುಣಗಳನ್ನು ತೊರೆಯಬಾರದು. ದೈಹಿಕವಾಗಿ ಬದಲಾಗದೇ ಇರುವುದು ದೊಡ್ಡ ಸಂಗತಿಯಲ್ಲ, ನಿಮ್ಮ ಮುಪ್ಪನ್ನು ಮುಂದೂಡುವುದಕ್ಕೆ ಈಗ ನಾನಾ ರೀತಿಯ ಮದ್ದುಗಳಿವೆ. ಆದರೆ ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಬೌದ್ಧಿಕವಾಗಿ ಬದಲಾಗಬೇಕು ಅಥವಾ ಬೆಳೆಯಲೇಬೇಕು. ಇಲ್ಲದೇ ಇದ್ದಲ್ಲಿ ಜಗತ್ತಿನ ಪಾಲಿಗೆ ಆತ ಬಳಸಿ ಬಿಸಾಡಿದ ಬಟ್ಟೆ ಅಷ್ಟೆ.

    ಹಾಗಾದರೆ ನಾರಾಯಣ್ ಬೆಳೆಯಲಿಲ್ಲವಾ? ನಾನು ಹಿಂದೊಮ್ಮೆ ಬರೆದಿದ್ದೆ -  ನಾರಾಯಣ್ ಅವರ ಮೊದಲ ಮತ್ತು ಕೊನೆಯ ಅತ್ಯುತ್ತಮ ಚಿತ್ರ ಎಂದರೆ ‘ಚೈತ್ರದ ಪ್ರೇಮಾಂಜಲಿ’ ಎಂದು. ಆ ಮಾತಿಗೆ ನಾನೀಗಲೂ ಬದ್ಧನಾಗಿದ್ದೇನೆ. ಚೈತ್ರದ ಪ್ರೇಮಾಂಜಲಿಯ ನಂತರವೂ ನಾರಾಯಣ್ ನಿರ್ದೇಶಿಸಿದ ಚಿತ್ರಗಳು ಗೆದ್ದಿವೆ, ಕೆಲವು ಸೂಪರ್ ಹಿಟ್ ಕೂಡಾ ಆಗಿವೆ. ಆದರೆ ಅವೆಲ್ಲವೂ ನಾರಾಯಣ್ ನಿರ್ದೇಶನದ ಬಲದಿಂದಲೇ ಗೆದ್ದವು ಅನ್ನೋದಕ್ಕೆ ಯಾಕೋ ಮನಸ್ಸು ಒಪ್ಪುತ್ತಿಲ್ಲ. ಕೆಲವು ಚಿತ್ರಗಳು ರೀಮೇಕಾಗಿದ್ದವು, ಆ ಚಿತ್ರಗಳಿಗೆ ವಿಷ್ಣುವರ್ಧನ್ ಅವರಂಥಾ ಜನಪ್ರಿಯ ನಾಯಕನ ನಾಮದ ಬಲದ ಶ್ರೀರಕ್ಷೆಯಿತ್ತು, ರಾಜ್ ಕುಟುಂಬದ ಯಾರೇ ಸದಸ್ಯ ನಟಿಸಿದರೂ, ಆ ಚಿತ್ರ ಗೆಲ್ಲುವುದು ನಿಶ್ಚಿತ ಅನ್ನುವ ಪರಿಸ್ಥಿತಿಯಿತ್ತು. ಸರಳವಾಗಿ ಹೇಳಬೇಕೆಂದರೆ ನಾರಾಯಣ್ ಮುಂದೆ ಅಂಥಾ ಸವಾಲುಗಳಿರಲಿಲ್ಲ. 

    ನಾರಾಯಣ್ ಸೃಜನಶೀಲ ನಿರ್ದೇಶಕ ಹೌದೋ ಅಲ್ಲವೋ ಎಂಬ ಬಗ್ಗೆ ಕಳೆದ ಇಪ್ಪತ್ತಮೂರು ವರ್ಷಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಅವರು ತಮಿಳು ಚಿತ್ರಗಳಿಂದ ಗಾಢವಾಗಿ ಪ್ರಭಾವಿತರಾಗಿದ್ದರು, ಹಾಸ್ಯವೆಂದರೆ ಟಾಯ್ಲೆಟ್ ಜೋಕ್ಸ್ ಎಂದು ಅಷ್ಟೇ ಗಾಢವಾಗಿ ನಂಬಿದ್ದರು, ಅತಿಯಾದ ಸೆಂಟಿಮೆಂಟು ಮತ್ತು ಗದ್ದಲ ಅವರ ಇನ್ನೊಂದು ಟ್ರೇಡ್ ಮಾರ್ಕ್. ಆದರೆ ನಾರಾಯಣ್ ಕ್ರಿಯಾಶೀಲ ಅನ್ನುವ ಬಗ್ಗೆ ದೂಸ್ರಾ ಮಾತಿಲ್ಲ. ಸೆಟ್ಟಲ್ಲಿ ಶಿಸ್ತಿನ ಸಿಪಾಯಿ, ಶೂಟಿಂಗ್ ಮುಗಿಸಿ ಮನೆಗೆ ಹೋದಮೇಲೆ ಹಾಡು, ಸಂಭಾಷಣೆ ಬರೆಯುವುದರಲ್ಲಿ ಮಗ್ನ. ಮತ್ತೆ ಬೆಳ್ಳಂಬೆಳಿಗ್ಗೆ ನಾಲ್ಕೂವರೆಗೆ ಎದ್ದು, ಹಣೆಗೆ ಕುಂಕುಮ ಹಚ್ಚಿ ಆರು ಗಂಟೆಯ ಒಳಗೆ ಮೊದಲ ಶಾಟ್ ಶೂಟ್. ನಾಯಕ ಯಾರೇ ಆಗಿರಲಿ, ಬೆಳಿಗ್ಗೆ ಆರಕ್ಕೆ ಶೂಟಿಂಗ್ ಜಾಗದಲ್ಲಿರಲೇಬೇಕು.   

    ಅವರು ಕಲಾಸಾಮ್ರಾಟ್ ಬಿರುದಿಗೆ ಯೋಗ್ಯರು ಹೌದೋ ಅಲ್ಲವೋ, ಸವ್ಯಸಾಚಿ ಅಂತೂ ನಿಜ. ನಿರ್ದೇಶನ, ನಟನೆ, ಗೀತಸಾಹಿತ್ಯ, ಸಂಭಾಷಣೆ, ಸಂಗೀತ ನಿರ್ದೇಶನ, ನಿರ್ಮಾಣ, ಸೀರಿಯಲ್ಲು ನಿರ್ದೇಶನ, ಹೀಗೆ ಅವರೇ ಒಂದು ಸ್ವಯಂ ನಿರ್ಮಿತ ಫ್ಯಾಕ್ಟರಿಯಾದರು. ಫ್ಯಾಕ್ಟರಿ ಲಾಸ್ ಆಗುತ್ತಿದ್ದಂತೆಯೇ ನಾರಾಯಣ್ ರಾಜಕೀಯಕ್ಕೆ ಜಿಗಿದರು, ಅದು ತನಗಲ್ಲ ಎಂದು ಜ್ಞಾನೋದಯವಾಗುತ್ತಿದ್ದಂತೆಯೇ ಮತ್ತೆ ಸಿನಿಮಾ ಕಡೆ ಹೊರಳಿದರು. ಇಲ್ಲಿ ಮತ್ತೆ ಸೋಲು ಕಾಡಿದಾಗ ಸಂಘಟಕರಾದರು. ಅಂಬಿ ಸಂಭ್ರಮ, ಅಮರಜೀವಿಯಂಥಾ ಅದ್ದೂರಿ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಆದರ್ಶ ಫಿಲಂ ಇನ್ ಸ್ಟಿಟ್ಯೂಟಿನ ಪ್ರಾಂಶುಪಾಲರಾದರು. ಈ ಮಧ್ಯೆ ಸಿನಿಮಾ ಪತ್ರಿಕೆಯೊಂದಕ್ಕೆ ರಾಜ್ ಕುಮಾರ್ ಬಗ್ಗೆ ವಾರಕ್ಕೊಂದು ಅಂಕಣ ಬರೆದು ಲೇಖಕರೂ ಆದರು. ಇದನ್ನು ನೀವು ಬದಲಾವಣೆ ಅನ್ನುತ್ತೀರೋ ಅಥವಾ ಅವಕಾಶವಾದ ಅನ್ನುತ್ತೀರೋ ಅನ್ನುವುದು ನಿಮ್ಮ ಬುದ್ದಿಮತ್ತೆಗೆ ಬಿಟ್ಟ ವಿಚಾರ.

    ಚೈತ್ರದ ಪ್ರೇಮಾಂಜಲಿ ಚಿತ್ರ ನಾರಾಯಣ್ ಬಗ್ಗೆ ಚಿತ್ರೋದ್ಯಮ ಮತ್ತು ಪ್ರೇಕ್ಷಕರಲ್ಲಿ ವಿಪರೀತ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದವು. ಕನ್ನಡ ಚಿತ್ರರಂಗ ಹೊಸ ಮುಖಗಳಿಂದ, ಹೊಸ ಕತೆಗಳಿಂದ ಕಂಗೊಳಿಸಲಿದೆ ಎಂದು ನಂಬಲಾಗಿತ್ತು. ಆದರೆ ನಾರಾಯಣ್ ತನ್ನ ಯಶಸ್ಸನ್ನು ಸೇಫ್ ಕಸ್ಟಡಿಯಲ್ಲಿಟ್ಟರು. ಬಂಡಾಯ ಕವಿಯೊಬ್ಬ ಆಳುವರಸನ ಆಸ್ಥಾನದ ಸನ್ಮಾನವನ್ನು ಸ್ವೀಕರಿಸಿದಂತೆ,  ವ್ಯವಸ್ಥೆಯನ್ನು ಬದಲಾಯಿಸುವ ಬದಲಾಗಿ ತಾನೇ ಅದರೊಂದಿಗೆ ರಾಜಿ ಮಾಡಿಕೊಂಡರು. ಪ್ರತಿಫಲವಾಗಿ ದೊಡ್ಡ ದೊಡ್ಡ ಸ್ಟಾರುಗಳ ಚಿತ್ರಗಳು ಅವರ ಪಾಲಿಗೆ ದೊರಕಿದವು. ವಿಷ್ಣುವರ್ಧನ್ ಮುದ್ದುಮುಖಕ್ಕೆ ಉದ್ದುದ್ದ ಮೀಸೆ ಹಚ್ಚಿ ಕನ್ನಡಿಗರ ಅಭಿರುಚಿಗೇ ಸವಾಲು ಹಾಕಿದರು. ರಾಜ್ ಕುಮಾರ್ ಅವರಂಥಾ ಮಹಾನ್ ಕಲಾವಿದನನ್ನು ನಿರ್ದೇಶಿಸುವ ಅವಕಾಶ ಸಿಕ್ಕಾಗ ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅದಾದ ನಂತರ ಏನಾಯಿತೋ ಗೊತ್ತಿಲ್ಲ, ನಾರಾಯಣ್ ತಮ್ಮ ಚಿತ್ರಗಳಿಂತ ಹೆಚ್ಚಾಗಿ ಇತರೇ ಕಾರಣಗಳಿಗೆ ಜಾಸ್ತಿ ಸುದ್ದಿ ಮಾಡಿದರು. ಚಂಡ ಶೂಟಿಂಗ್ ಸಂದರ್ಭದಲ್ಲಿ ನಾಯಕ ನಟ ವಿಜಯ್ ಮೇಲೆ ಮುನಿಸಿಕೊಂಡರು, ಕೆ.ಪಿ. ನಂಜುಂಡಿ ಜೊತೆ ಹಣಕಾಸಿನ ವ್ಯವಹಾರದಲ್ಲಿ ಮನಸ್ತಾಪ ಆಯಿತು,  ಸ್ಟಾರುಗಳು ನಿರ್ಮಾಪಕ-ನಿರ್ದೇಶಕರ ಮೇಲೆ ಸವಾರಿ ಮಾಡುತ್ತಾರೆ ಎಂದು ಹೇಳಿಕೆ ನೀಡಿ ಚಿತ್ರರಂಗಕ್ಕೆ ವಿದಾಯ ಹೇಳಿದರು, ಅಂಬರೀಶ್ ಒತ್ತಾಯಕ್ಕೆ ಮಣಿದು ವಾಪಸ್ ಬಂದರು, ಮಗನನ್ನು ಹೀರೋ ಮಾಡುವುದಕ್ಕೆ ಹೋಗಿ ಕೈಸುಟ್ಟುಕೊಂಡರು...ಒಂದು ಕಾಲದಲ್ಲಿ ನಾರಾಯಣ್ ಅವರ ಹಿಂದೆ ಓಡಾಡುತ್ತಿದ್ದ ನಿರ್ಮಾಪಕರೆಲ್ಲಾ ಬೇರೆ ನಿರ್ದೇಶಕರನ್ನು ಹುಡುಕಿಕೊಂಡರು. ನಾರಾಯಣ್ ಇದ್ದಕ್ಕಿದ್ದ ಹಾಗೆ ಒಂಟಿಯಾದರು.

    narayan_daughter_engagement.jpg

    ಇವೆಲ್ಲವನ್ನು ನೆನಪಿಸಿಕೊಳ್ಳುತ್ತಾ ನಾರಾಯಣ್  ಮಗಳ ಮದುವೆಯ ಆಹ್ವಾನಪತ್ರಿಕೆಯನ್ನು ಓದುತ್ತಾ ಕುಳಿತೆ. ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ ಅದ್ದೂರಿ ಅಹ್ವಾನ ಪತ್ರಿಕೆಯದು. ಭರ್ತಿ ಎಂಟು ಹಾಳೆಗಳು, ಪೇಜು ಲೆಕ್ಕ ಹಾಕಿದರೆ ಹದಿನಾರು.  ಮುಖಪುಟದಲ್ಲಿ ಶ್ರೀನಿವಾಸ ಕಲ್ಯಾಣದ ಪೇಂಟಿಂಗ್. ಎರಡನೇ ಪುಟದಲ್ಲಿ ಅದಿಚುಂಚನಗಿರಿ ಸ್ವಾಮೀಜಿಯ ಫೋಟೋ, ಮೂರನೇ ಪುಟದಲ್ಲಿ ನಾರಾಯಣ್ ಪುತ್ರಿ ಮತ್ತು ಮದುಮಗನ ಫೋಟೋ, ನಾಲ್ಕು ಮತ್ತು ಐದನೇ ಪುಟದಲ್ಲಿ ವಿವಾಹಕ್ಕೆ ಆಹ್ವಾನ, ದಿನಾಂಕ ಮತ್ತು ಜಾಗದ ವಿವರಗಳು, ಆರನೇ ಪುಟ ಮತ್ತು ಏಳನೇ ಪುಟಗಳಲ್ಲಿ ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂದರೇನು ಅನ್ನುವ ಬಗ್ಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ವಿವರಣೆ, ಮುಂದಿನ ಪುಟಗಳಲ್ಲಿ ಕನ್ಯಾದಾನ, ಮಂಗಳ ಸೂತ್ರಗಳ ವ್ಯಾಖ್ಯಾನ, ವಧು ಮತ್ತು ವರನ ಪ್ರತಿಜ್ಞೆಗಳು, ನಾರಾಯಣ್ ಅವರೇ ರಚಿಸಿದ ಕವಿತೆಗೊಂದು ಪುಟ, ಇತ್ಯಾದಿ. ನನ್ನನ್ನು ಗಮನ ಸೆಳೆದದ್ದು ಹದಿನೈದು ಮತ್ತು ಹದಿನಾರನೇ ಪುಟಗಳು. ಅಲ್ಲಿ ನಾರಾಯಣ್ ತಾನು ಹುಟ್ಟೂರು ಭದ್ರಾವತಿಯಿಂದ ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದನ್ನು ಹೇಳಿಕೊಂಡಿದ್ದಾರೆ. ತಮ್ಮ ಸುಖಾಗಮನವನ್ನು ಬಯಸುವವರ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಸಕಲ ವಿಭಾಗಗಳನ್ನು ಹೆಸರಿಸಿದ್ದಾರೆ. ಅದರಲ್ಲಿ ವಾಣಿಜ್ಯ ಮಂಡಳಿಯಿಂದ ಹಿಡಿದು ಪೋಸ್ಟರ್ ಅಂಟಿಸುವವರನ್ನೂ ಹೆಸರಿಸಲಾಗಿದೆ. ನಾರಾಯಣ್  ವ್ಯಕ್ತಿತ್ವಕ್ಕೆ ಈ ಒಂದು ಸಾಲು ಸಾಕ್ಷಿಯಾದೀತು. ಭದ್ರಾವತಿಯಿಂದ ಬರಿಗೈಲಿ ಬೆಂಗಳೂರಿಗೆ ಬಂದ ಹುಡುಗನೊಬ್ಬ ತನ್ನ ಪರಿಶ್ರಮ, ಶ್ರದ್ಧೆ ಮತ್ತು ಆತ್ಮವಿಶ್ವಾಸವನ್ನೇ ನೆಚ್ಚಿಕೊಂಡು ಬೆಳೆದುನಿಂತರೂ ತನ್ನನ್ನು ಪೊರೆದ ಚಿತ್ರೋದ್ಯಮಕ್ಕೆ ಇನ್ನೂ ಕೃತಜ್ಞನಾಗಿದ್ದಾನೆ ಅನ್ನುವುದು ದೊಡ್ಡ ಸಂಗತಿ. 

    ನಿರ್ದೇಶಕನಾಗಿ ನಾರಾಯಣ್ ಬಗ್ಗೆ ನನ್ನ ತಕರಾರುಗಳು ಏನೇ ಇರಬಹುದು, ಪತ್ರಕರ್ತನಾಗಿ ಅದನ್ನು ಪ್ರಶ್ನಿಸುವ ನನ್ನ ಹಕ್ಕನ್ನು ನಾರಾಯಣ್ ಯಾವತ್ತೂ ಕಿತ್ತುಕೊಂಡಿಲ್ಲ. ನಾನಂದುಕೊಂಡಿದ್ದೇ ಪರಮಸತ್ಯ ಅನ್ನುವ ಟಿಪಿಕಲ್ ಪತ್ರಕರ್ತನ ಅಹಂನ್ನು ನಾರಾಯಣ್ ವಿಷಯದಲ್ಲಿ ನಾನೊಮ್ಮೆ ಬದಲಾಯಿಸಬೇಕಾಯಿತು. ಕೆಲವು ವರ್ಷದ ಹಿಂದೆ ರಾಜ್ಯ ಚಲನಚಿತ್ರ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ನಾನಿದ್ದಾಗ ನಾರಾಯಣ್ ಚಿತ್ರಗಳೂ ಕಣದಲ್ಲಿದ್ದವು. ಜಿ.ವಿ. ಅಯ್ಯರ್ ಸಮಿತಿಯ ಅಧ್ಯಕ್ಷರಾಗಿದ್ದರು. ಅವರಿಗೆ ನಾರಾಯಣ್ ಅವರು ಬರೆದ ಹಾಡೊಂದು ಬಹಳ ಇಷ್ಟವಾಗಿತ್ತು. ಆ ಹಾಡಿಗೆ ಅತ್ಯುತ್ತಮ ಗೀತೆರಚನೆಗಾಗಿ ಪ್ರಶಸ್ತಿ ನೀಡಬಹುದು ಅನ್ನುವ ಸಲಹೆಯನ್ನೂ ನೀಡಿದ್ದರು. ಬೇರೆಯವರು ಅದಕ್ಕೆ ಸಮ್ಮತಿಸಲಿಲ್ಲ. ನನಗೂ ಅಯ್ಯರ್ ನಿಲುವು ಕೊಂಚ ಅಚ್ಚರಿಯನ್ನು ಉಂಟು ಮಾಡಿತ್ತು. ಆ ಹಾಡಲ್ಲಿ ಅಂಥಾದ್ದೇನಿದೆ ಎಂದು ನೇರವಾಗಿಯೇ ಕೇಳಿದೆ. ಅವರೊಂದು ಮಾತು ಹೇಳಿದರು “ ಸಿನಿಮಾ ಹಾಡು ಬರೆಯುವುದಕ್ಕೆ ಒಂದು ಜಾಣ್ಮೆ ಬೇಕಾಗುತ್ತದೆ. ಅದು ಈ ಮನುಷ್ಯನಿಗೆ ಸಿದ್ದಿಯಾಗಿದೆ”. ಆಗ ನನಗೆ ಜ್ಞಾನೋದಯವಾಯಿತು. ಒಂದು ಚಿತ್ರಗೀತೆಯ  ಸಾಹಿತ್ಯ ಉತ್ಕೃಷ್ಟವಾಗಿರಬೇಕು ಎಂದೇನೂ ಇಲ್ಲ. ಪದಗಳು ಸರಳವಾಗಿರಬೇಕು, ಸನ್ನಿವೇಶಕ್ಕೆ ತಕ್ಕನಾಗಿರಬೇಕು, ಕೇಳುಗನಿಗೆ ಅರ್ಥವಾಗಿರುವಂತಿರಬೇಕು. ಸಿನಿಮಾಗೆ ಹಾಡು ಬರೆಯುವಾಗ ಪ್ರತಿಭೆಗಿಂತ ಜಾಣ್ಮೆಯೇ ಮುಖ್ಯ. ಕಾಯ್ಮಿಣಿ, ಯೋಗರಾಜ್ ಭಟ್ ಈ ವಾದವನ್ನು ಒಪ್ಪುತ್ತಾರೆಯೇ ಎಂಬ ಬಗ್ಗೆ ನನಗೆ ಕುತೂಹಲವಿದೆ.

    ಕಳೆದ ಕೆಲವು ವರ್ಷಗಳಿಂದ ನಾರಾಯಣ್ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಹಾಗೂ ಸನ್ ಸ್ಟ್ರೋಕೇ ಅದಕ್ಕೆ ಕಾರಣ ಎಂದು ಯಾರೋ ಹೇಳುತ್ತಿದ್ದರು. ಆದರೆ ನಾರಾಯಣ್ ಅವರು ಇದಕ್ಕಿಂತಲೂ ಕಷ್ಟದ ಸ್ಥಿತಿಯಲ್ಲಿ ಇದ್ದಿದ್ದನ್ನು ನಾನು ನೋಡಿದ್ದೇನೆ. ಅದು ಭಾಮಾ ಸತ್ಯಭಾಮಾ ಚಿತ್ರದ ಮುಂಚಿನ ದಿನಗಳು. ಆ ಚಿತ್ರಕ್ಕೆ ಕತೆ ಸಿದ್ಧಮಾಡಿಕೊಂಡು ನಾರಾಯಣ್ ಕನ್ನಡದ ಎಲ್ಲಾ ನಾಯಕರ ಬಳಿ ಅಲೆದಾಡಿದ್ದರು. ಯಾರೊಬ್ಬರೂ ಕಾಲ್ ಷೀಟ್ ಕೊಡಲಿಲ್ಲ. ಒಂದೆಡೆ ಅವಮಾನ, ಇನ್ನೊಂದೆಡೆ ಆರ್ಥಿಕ ಮುಗ್ಗಟ್ಟು. ಇವೆರಡೂ ಸೇರಿ ಜರ್ಜರಿತರಾಗಿದ್ದ ನಾರಾಯಣ್ ಇವೆಲ್ಲವನ್ನೂ ಯಾರ ಮುಂದಾದರೂ ಹೇಳಿಕೊಳ್ಳಬೇಕಾಗಿತ್ತು. ಅದಕ್ಕೆ ಅವರು ಆಯ್ಕೆಮಾಡಿಕೊಂಡಿದ್ದು ನನ್ನನ್ನು ಮತ್ತು ಮತ್ತು ಸದಾಶಿವ ಶೆಣೈಯನ್ನು. ಆ ಮಾತುಕತೆ ನಡೆದ ಜಾಗ ಈಗಲೂ ನನಗೆ ನೆನಪಿದೆ. ಮುಸ್ಸಂಜೆಯ ಕಥಾಪ್ರಸಂಗವದು. ವಿಜಯನಗರದಲ್ಲಿ ಅರೆಬರೆ ನಿರ್ಮಾಣವಾಗಿದ್ದ ಕಟ್ಟಡದವೊಂದರ ನೆಲಮಾಳಿಗೆ. ಅಲ್ಲಿ ಹರಡಿದ್ದ ಕಟ್ಟಿಗೆ ಚೂರು, ಮರಳಿನ ರಾಶಿಯ ಮೇಲೆ ಮೂರು ಮುರುಕು ಕುರ್ಚಿಗಳನ್ನು ತಂದಿರಿಸಿ ಖಾಸಗಿ ಪತ್ರಿಕಾಗೋಷ್ಠಿ ನಡೆಯಿತು. ಮಾತಾಡುತ್ತಾ ನಾರಾಯಣ್ ಕಣ್ಣು ಹನಿಗೂಡಿತ್ತು. ಈ ಬಗ್ಗೆ ಹಂಸಕ್ಷೀರ ನ್ಯಾಯ ಪಾಲಿಸಿ  ಬಗ್ಗೆ ನಾನೊಂದು ಲೇಖನ ಬರೆದಿದ್ದೆ. ಅದಾಗಿ ಕೆಲವೇ ದಿನಗಳಲ್ಲಿ ‘ಭಾಮಾ ಸತ್ಯಭಾಮಾ’ ಸೆಟ್ಟೇರಿತು, ನಾರಾಯಣ್ ಅವರೇ ಹೀರೋ. ಚಿತ್ರ ಯಶಸ್ಸಾಯಿತು. ಹಿಂದೆ ಕೈಕೊಟ್ಟ ಹೀರೋಗಳೆಲ್ಲ ನಾರಾಯಣ್ ಬಳಿಗೆ ಬಂದರು.

    ಚಿತ್ರೋದ್ಯಮ ಅನ್ನುವುದು ದಾರಾಳಿಯೂ ಹೌದು, ಕ್ರೂರಿಯೂ ಹೌದು. ಅದಕ್ಕೆ ಕೊಡುವುದೂ ಗೊತ್ತು, ಕಿತ್ತುಕೊಳ್ಳುವುದೂ ಗೊತ್ತು. ಅದು ಗೊತ್ತಿದ್ದೂ ನಾರಾಯಣ್ ಅದೇ ಚಿತ್ರೋದ್ಯಮದ ಜೊತೆ ಮತ್ತೆ ಚೌಕಾಸಿ ಮಾಡುತ್ತಿದ್ದಾರೆ. ಅವರಲ್ಲಿ ದೂರುಗಳಿವೆ, ಅದನ್ನು ಹೇಳಿಕೊಳ್ಳುವುದಕ್ಕೆ ಇದು ಸಮಯವಲ್ಲ. ನಾರಾಯಣ್ ಈ ಬಾರಿ ಯಾವ ಅವತಾರದಲ್ಲಿ ಮತ್ತೆ ಹಾಜರಾಗುತ್ತಾರೆ ಅನ್ನುವು ಕುತೂಹಲ ನನಗೂ ಇದೆ.

    Pls Note -

     

    The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

     

  • Venkat Walks Out of Dictator

    dictator image

    Actor Venkat has decided to walk out of 'Dictator' being directed by S Narayan and produced by KFCC former president B Vijaykumar. Recently, Venkat was speaking in a press meet organised by him. 'I have signed few films in the recent times and now director S Narayan is saying that I must not act in any other film, unless the 'Dictator' is finished. I have taken advances from the producers. How can I restrain from acting in this film, because of 'Dicator'' asks Venkat.

    S Narayan to Direct Huchcha Venkat's Dictator

    huccha_venkat_vijayakumar.jpg

    Venkat also accused S Narayan of delaying the film. 'The muhurath of the film was launched few months back. However, the film didn't start due to various reasons. As I had signed this film, I couldn't accommodate dates to other films also. The film is not only delayed, but they have wasted my dates also' says Venkat.

    With Venkat walking out of the film, it has to be seen who will be replacing him.

    Also See

    Gowthami is Venkat's Heroine in Dictator

    S Narayan to Direct Huchcha Venkat's Dictator

    B Vijaykumar to Produce Dictator for Venkat

     

  • ಆದಿತ್ಯ.. ಆದಿತಿ.. ಎಸ್.ನಾರಾಯಣ್ ಹೊಸ ಸಿನಿಮಾ

    ಆದಿತ್ಯ.. ಆದಿತಿ.. ಎಸ್.ನಾರಾಯಣ್ ಹೊಸ ಸಿನಿಮಾ

    3 ದಶಕಗಳ ಅನುಭವಿ ನಿರ್ದೇಶಕ ಎಸ್.ನಾರಾಯಣ್, ಬರೋಬ್ಬರಿ 3 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈ ಬಾರಿ ಅವರು ಹೀರೋ ಆಗಿ ಆಯ್ಕೆ ಮಾಡಿಕೊಂಡಿರೋದು ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಮತ್ತು ಶ್ಯಾನೆ ಟಾಪ್ ಹುಡುಗಿ ಆದಿತಿ ಪ್ರಭುದೇವ ಅವರನ್ನ.

    ಆದಿತ್ಯ, ಆದಿತಿ ಕಾಂಬಿನೇಷನ್ ಡಿಫರೆಂಟ್ ಆಗಿ ಇರಲಿದೆ. ಚಿತ್ರಕ್ಕೆ ಕಣ್ಣಿನಲ್ಲೇ ನಟಿಸುವ ಆದಿತ್ಯ ಖಂಡಿತಾ ಜೀವ ತುಂಬುತ್ತಾರೆ. ಆದಿತಿಗೂ ಇದು ಹೊಸ ಪಾತ್ರ. ಆಕೆ ಖಂಡಿತಾ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ ಎನ್ನುವುದು ನಾರಾಯಣ್ ನಂಬಿಕೆ. ಚಿತ್ರಕ್ಕೆ ಕಥೆ ಬರೆದಿರುವುದು ರವಿ ಎಂಬುವವರು. ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಶುರುವಾಗಲಿದೆ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ.

  • ಎಸ್. ನಾರಾಯಣ್ ಮನೆಯಲ್ಲಿ ಕಲ್ಯಾಣ ಮಹೋತ್ಸವ

    ಎಸ್. ನಾರಾಯಣ್ ಮನೆಯಲ್ಲಿ ಕಲ್ಯಾಣ ಮಹೋತ್ಸವ

    ಹಿರಿಯ ನಿರ್ದೇಶಕ ಕಲಾ ಸಾಮ್ರಾಟ್ ಈಗ ಮಾವನಾಗಿದ್ದಾರೆ. ನಾರಾಯಣ್ ಪುತ್ರ ಪವನ್, ಪವಿತ್ರಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಹಿರಿಯರೇ ನಿಶ್ಚಯಿಸಿದ ಮದುವೆ.

    ನಿರ್ದೇಶಕರಾಗಿ ಗುರುತಿಸಿಕೊಂಡಿರೋ ಪವನ್, ತಂದೆಯ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರೋ ಪವನ್, ಮುತ್ತುರತ್ನ ಎಂಬ ಚಿತ್ರದಲ್ಲಿ ಹೀರೋ. ಜೊತೆಗೆ ನವಮಿ ಅನ್ನೋ ಚಿತ್ರಕ್ಕೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇನ್ನೂ ಯಾವ ಚಿತ್ರಗಳೂ ಬಿಡುಗಡೆ ಆಗಿಲ್ಲ

  • ಎಸ್.ನಾರಾಯಣ್ ೨ನೇ ಪುತ್ರ ಈಗ ಹೀರೋ

    s narayan son turns hero

    ಎಸ್.ನಾರಾಯಣ್ ಅವರ ಇನ್ನೊಬ್ಬ ಪುತ್ರ ಪವನ್ ಈಗ ಹೀರೋ ಆಗುತ್ತಿದ್ದಾರೆ. ಎಸ್.ನಾರಾಯಣ್ ಮತ್ತು ಪಂಕಜ್ ನಂತರ ಅವರ ಕುಟುಂಬದಿAದ ಬರುತ್ತಿರುವ ೩ನೇ ಹೀರೋ ಪವನ್. ಆದರೆ ಮಗನನ್ನು ಹೀರೋ ಮಾಡುತ್ತಿರುವುದು ಅಪ್ಪ ಅಲ್ಲ, ಶ್ರೀಕಾಂತ್ ಹುಣಸೂರು ಎಂಬ ಹೊಸ ಪ್ರತಿಭೆ.

    ಜೋಗಿ ಪ್ರೇಮ್ ಅವರ ಜೊತೆ ಕೆಲಸ ಮಾಡಿರುವ ಶ್ರೀಕಾಂತ್, ಹಲವು ಧಾರಾವಾಹಿಗಳನ್ನೂ ನಿರ್ದೇಶಿಸಿದ ಅನುಭವವಿದೆ. ಚಿತ್ರದ ಟೈಟಲ್  ಚಿ.ರಾ.ಮುತ್ತು ಚಿ.ಸೌ. ರತ್ನ. ಅವಿದ್ಯಾವಂತ ಹುಡುಗನೊಬ್ಬ ಪಾಳೆಗಾರನ ಮಗಳನ್ನು ಪ್ರೀತಿಸುವ ಕಥೆ ಚಿತ್ರದಲ್ಲಿದೆ. ಡಿಸೆಂಬರ್ ೧ರಂದು ಚಿತ್ರದ ಮುಹೂರ್ತ.

  • ಎಸ್.ನಾರಾಯಣ್ ತೋಟದಲ್ಲಿ ಯಶ್ ಮರ..!!

    yash's tress in s narayan's farm

    ರಾಕಿಂಗ್ ಸ್ಟಾರ್ ಯಶ್ ಅವರೀಗ ಎಸ್.ನಾರಾಯಣ್ ತೋಟದಲ್ಲಿ ಮರವಾಗಿದ್ದಾರೆ. ಕನ್‍ಫ್ಯೂಸ್ ಆಗಬೇಡಿ, ನಿಮಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಹಾಗೂ ರಾಧಿಕಾ ಮದುವೆ ಆಹ್ವಾನ ಪತ್ರಿಕೆಯ ಜೊತೆ ಸಂಪಿಗೆ ಮರದ ಗಿಡವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಮದುವೆಯ ನಂತರ ಯಶ್ ಕುಟುಂಬದಲ್ಲೀಗ ಎರಡು ಹೊಸ ಕುಡಿಗಳು ಜನ್ಮ ತಳೆದಿದ್ದರೆ, ಇತ್ತ ಎಸ್.ನಾರಾಯಣ್ ಮನೆಯಲ್ಲಿ ಯಶ್ ಕೊಟ್ಟಿದ್ದ ಸಂಪಿಗೆ ಗಿಡ, ಮರವಾಗಿದೆ.

    ಎಸ್.ನಾರಾಯಣ್ ತಮ್ಮ ತೋಟದಲ್ಲಿ ಯಶ್ ಕೊಟ್ಟಿದ್ದ ಸಂಪಿಗೆ ಗಿಡವನ್ನು ನಾಟಿ ಮಾಡಿದ್ದರು. ನಾರಾಯಣ್ ಅವರು ತಮಗೆ ಉಡುಗೊರೆಯಾಗಿ ಬರುವ ಗಿಡಗಳನ್ನೆಲ್ಲ ತಮ್ಮ ತೋಟದಲ್ಲಿ ಮರವಾಗಿಸಿದ್ದಾರೆ. ಆದರೆ, ಎಸ್.ನಾರಾಯಣ್ ಕೊಟ್ಟಿದ್ದ ಸಂಪಿಗೆ ಗಿಡ ಈಗ ಮರವಾಗಿದ್ದು, ತೋಟದಲ್ಲಿನ ಜನರ ಪಾಲಿಗೆ ಇದು ಯಶ್ ಮರವೇ ಆಗಿ ಹೋಗಿದೆ. ಅಲ್ಲಿನವರು ಯಶ್ ಮರ ಇದ್ಯಲ್ಲ ಅದರ ಹತ್ರ ಬನ್ನಿ, ಹೋಗಿ ಎನ್ನುತ್ತಾರಂತೆ. ಒಟ್ಟಿನಲ್ಲಿ ಯಶ್ ಕೊಟ್ಟಿದ್ದ ಗಿಡದ ಉಡುಗೊರೆ ಈಗ ಮರವಾಗಿದೆ.  

  • ಎಸ್.ನಾರಾಯಣ್ ಪುತ್ರನ ಹೊಸ ಸಾಹಸ

    ಎಸ್.ನಾರಾಯಣ್ ಪುತ್ರನ ಹೊಸ ಸಾಹಸ

    ಕಲಾ ಸಾಮ್ರಾಟ್ ಎಸ್.ನಾರಾಯಣ್ ಪುತ್ರ  ಪವನ್ ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾರೆ. ಶಿಕ್ಷಕರ ದಿನದಂದೇ ಉದ್ಘಾಟನೆಯಾದ ಈ ಅಕಾಡೆಮಿಗೆ ಉದ್ಘಾಟಿಸಿದ್ದು ಎಸ್.ನಾರಾಯಣ್ ಅವರ ಗುರು ಭಾರ್ಗವ. ಆದಿತಿ ಪ್ರಭುದೇವ, ಮುಖ್ಯಮಂತ್ರಿ ಚಂದ್ರ, ವಿ.ಮನೋಹರ್, ನಿರ್ಮಾಪಕ ಎಂ.ಎನ್. ಸುರೇಶ್, ಆದಿತ್ಯ, ಸುಂದರ ರಾಜ್ ಸೇರಿದಂತೆ ಚಿತ್ರರಂಗದ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು ಅಕಾಡೆಮಿಗೆ ಶುಭ ಕೋರಿದರು.

    ಈ ಅಕಾಡೆಮಿಯಲ್ಲಿ ನಾಲ್ಕು ತಿಂಗಳ ಕೋರ್ಸ್ ಇರುತ್ತದೆ. ಒಂದೂವರೆ ಗಂಟೆಯ ತರಗತಿಗಳಿರುತ್ತವೆ. ನಟನೆ, ನಿರ್ದೇಶನ ಸೇರಿದಂತೆ ಚಿತ್ರರಂಗದ ಹಲವು ಶಾಖೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಅನುಭವಿ ಕಲಾವಿದರು ಹಾಗೂ ತಂತ್ರಜ್ಞರು ತರಬೇತಿ ನೀಡಲಿದ್ದಾರೆ. ಎಸ್.ನಾರಾಯಣ್ ತಮ್ಮ ವೃತ್ತಿ ಬದುಕಿನಲ್ಲಿ ಶಿಸ್ತಿಗೆ ಹೆಸರಾದವರು. ಆ ಶಿಸ್ತು ಈ ಅಕಾಡೆಮಿಯಲ್ಲೂ ಇರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

  • ಎಸ್.ನಾರಾಯಣ್ ಬಕ್ರಾ ಆದ ಕಥೆಗಳು

    s narayan's experience with producers

    ನಿರ್ದೇಶಕ ಎಸ್.ನಾರಾಯಣ್, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು. ಡಾ.ರಾಜ್ ಕುಟುಂಬದ ಎಲ್ಲರ ಚಿತ್ರವನ್ನೂ ನಿರ್ದೇಶಿಸಿರುವ ಹೆಗ್ಗಳಿಕೆ ಇರುವುದು ನಾರಾಯಣ್‍ಗೆ ಮಾತ್ರ. ವಿಷ್ಣು, ಅಂಬಿ, ರವಿಚಂದ್ರನ್, ರಮೇಶ್, ಸುದೀಪ್, ದರ್ಶನ್, ಗಣೇಶ್, ದುನಿಯಾ ವಿಜಿ ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲ ಸ್ಟಾರ್‍ಗಳನ್ನೂ ನಿರ್ದೇಶಿಸಿರುವ ಏಕೈಕ ನಿರ್ದೇಶಕ. ಶ್ರೀಮುರಳಿ, ಅಮೂಲ್ಯ ಅವರು ಚಿತ್ರರಂಗಕ್ಕೆ ಪರಿಚಯಿಸಿದ ಪ್ರತಿಭೆಗಳು. ಇಂಥ ನಾರಾಯಣ್, ಬಾಕ್ಸಾಫೀಸ್‍ನಲ್ಲಿ ಅದ್ಭುತವನ್ನೇ ಸೃಷ್ಟಿಸಿದವರು. ಅಂಥಾ ನಾರಾಯಣ್‍ಗೆ ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರು ಅದೆಷ್ಟು  ಯಾಮಾರಿಸಿದ್ದಾರೆ ಅನ್ನೋದನ್ನ ಅವರ ಬಾಯಲ್ಲೇ ಕೇಳಿ.

    ಇದುವರೆಗೆ ನಾನು ಸ್ಕ್ರಿಪ್ಟ್ ಮಾಡಿ, ಕೈ ತಪ್ಪಿದ ಚಿತ್ರಗಳ ಸಂಖ್ಯೆ 18. ನನಗೆ ಬಿಡುವೇ ಇಲ್ಲ. ಸ್ಕ್ರಿಪ್ಟ್ ವರ್ಕ್ ನಡೆಯುತ್ತಲೇ ಇದೆ. ನಿರ್ಮಾಪಕರು ಬರೋರು, ನಾನು ಕಥೆ ಬರೆಯುತ್ತಿದೆ. ಎಷ್ಟೋ ಬಾರಿ ಸಂಗೀತ ಸಂಯೋಜನೆ ಲೆವೆಲ್‍ವರೆಗೂ ಬರೋದು. ಇದ್ದಕ್ಕಿದ್ದಂತೆ ಚಿತ್ರ ನಿಂತು ಹೋಗುತ್ತಿತ್ತು. ಎಲ್ಲ ಮುಗಿದು ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಷ್ಟರಲ್ಲಿ, ಅದೇ ಕಥೆಯನ್ನಿಟ್ಟುಕೊಂಡು ಇನ್ನೊಬ್ಬ ನಿರ್ದೇಶಕರ ಕೈಯ್ಯಲ್ಲಿ ಸಿನಿಮಾ ಮಾಡಿಸೋರು. ಅದು ಎಷ್ಟೋ ಬಾರಿ ಪೇಪರ್ ನೋಡಿದ ಮೇಲಷ್ಟೆ ನನಗೆ ಗೊತ್ತಾಗುತ್ತಿತ್ತು. ಹೀಗೆ ಕೈತಪ್ಪಿದ ಚಿತ್ರಗಳ ಸಂಖ್ಯೆ 18.

    ಹೀಗೆ ತಮ್ಮ ಕಥೆ ಹೇಳಿಕೊಳ್ತಾರೆ ನಾರಾಯಣ್. ಅವರ ಮಗ ಪಂಕಜ್ ಅಭಿನಯದ ಹೊಸ ಚಿತ್ರದ ಮುಹೂರ್ತದ ವೇಳೆ ಹಳೆಯ ಅನುಭವಗಳನ್ನೆಲ್ಲ ಬಿಚ್ಚಿಟ್ಟಿರುವ ನಾರಾಯಣ್, ನಾವು ನಾವು ನತದೃಷ್ಟರೋ, ಬಕ್ರಾಗಳೋ ಗೊತ್ತಾಗ್ತಿಲ್ಲ. ಯಾರ ಮೇಲೆ ದೂರು ಹೇಳೋದು ಅನ್ನೋದು ಕೂಡಾ ಅರ್ಥವಾಗುತ್ತಿಲ್ಲ ಎಂದಿದ್ದಾರೆ. 

    ಅಂದಹಾಗೆ ಅವರ ಮಗನ ಚಿತ್ರಕ್ಕೆ ಟೈಟಲ್ ಇನ್ನೂ ಇಟ್ಟಿಲ್ಲ. ಚಿತ್ರಕ್ಕೆ ಒಳ್ಳೆಯ ಟೈಟಲ್ ಸೂಚಿಸಿದವರಿಗೆ ಡೈಮಂಡ್ ನೆಕ್ಲೆಸ್‍ನ್ನು ಬಹುಮಾನವಾಗಿ ಕೊಡ್ತಾರಂತೆ ನಾರಾಯಣ್.

  • ಎಸ್.ನಾರಾಯಣ್ ಸೀರಿಯಲ್ಲಿನ ನಾಯಕಿ ಯಾರು?

    ಎಸ್.ನಾರಾಯಣ್ ಸೀರಿಯಲ್ಲಿನ ನಾಯಕಿ ಯಾರು?

    ಎಸ್.ನಾರಾಯಣ್ ಸುದೀರ್ಘ ಗ್ಯಾಪ್ ನಂತರ ಕಿರುತೆರೆಯಲ್ಲಿ ನಿರ್ದೇಶನಕ್ಕಿಳಿದಿರುವುದು ಹಾಗೂ ಆ ಧಾರಾವಾಹಿಯ ಕೇಂದ್ರ ಪಾತ್ರದಲ್ಲಿ ಅನಿರುದ್ಧ ನಟಿಸುತ್ತಿರುವುದು ಗೊತ್ತಿರುವುದೇ. ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಂದ ನಂತರ ಅನಿರುದ್ಧ ಜತ್ಕರ್ ಮತ್ತೊಮ್ಮೆ ಮೋಡಿ ಮಾಡೋಕೆ ರೆಡಿಯಾಗಿದ್ದಾರೆ. ಸೀರಿಯಲ್ ಹೆಸರು ಸೂರ್ಯವಂಶ.

    ಸೂರ್ಯವಂಶ ಚಿತ್ರ ವಿಷ್ಣುವರ್ಧನ್ ವೃತ್ತಿಜೀವನದಲ್ಲಿ ಮೆಗಾಹಿಟ್ ಚಿತ್ರವಷ್ಟೇ ಅಲ್ಲ, ತಿರುವು ಕೊಟ್ಟ ಚಿತ್ರವೂ ಹೌದು. ಸೂರ್ಯವಂಶಕ್ಕೂ ಮೊದಲು ವೀರಪ್ಪನಾಯ್ಕ ಚಿತ್ರದ ಮೂಲಕ ಬ್ರೇಕ್ ಕೊಟ್ಟಿದ್ದ ಎಸ್.ನಾರಾಯಣ್, ವಿಷ್ಣುವರ್ಧನ್ ಕೆರಿಯರ್`ನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದರು. ಈಗ ಅದೇ ಎಸ್.ನಾರಾಯಣ್ ಮತ್ತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಸೂರ್ಯವಂಶ ಹೆಸರಿನ ಸೀರಿಯಲ್ಲಿನಲ್ಲಿ ಜೊತೆಗೂಡಿದ್ದಾರೆ.

    ಅನಿರುದ್ಧ ಪಾತ್ರಕ್ಕೆ ಜೊತೆಯಾಗಿ ನಟಿಸುತ್ತಿರುವುದು ಪಲ್ಲವಿ ಗೌಡ. ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಪಲ್ಲವಿ ಗೌಡ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದವರು. ಈಗ ಕನ್ನಡ ಮಾತ್ರವಲ್ಲದೇ, ತೆಲುಗು, ಮಳಯಾಳಂನಲ್ಲೂ ನಟಿಸಿದ್ದು, ತ್ರಿಭಾಷಾ ನಟಿಯಾಗಿದ್ದಾರೆ. ಸದ್ಯ ತೆಲುಗು ಕಿರುತೆರೆಯಲ್ಲಿರುವ ಪಲ್ಲವಿ ಗೌಡ ಈಗ 'ಸೂರ್ಯವಂಶ' ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಸೇವಂತಿ', 'ಜೋಡಿಹಕ್ಕಿ', 'ಪರಿಣಯ', 'ಸಾವಿತ್ರಿ', 'ಮನೆಯೊಂದು ಮೂರು ಬಾಗಿಲು' ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ತೆಲುಗಿನಲ್ಲಿ 'ಚಂದ್ರರಾಗಂ' ಎಂಬ ಧಾರಾವಾಹಿ ಮೂಲಕ ಹಿಟ್ ಆಗಿದ್ದರು. 2010 ರಿಂದ ಪಲ್ಲವಿ ಗೌಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಜೋಡಿಹಕ್ಕಿ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮಾಡಿದ್ದ ಪಲ್ಲವಿ ಗೌಡ ಈ ಧಾರಾವಾಹಿಯಲ್ಲಿ ಅನಿರುದ್ಧಗೆ ನಾಯಕಿ. ಜೊತೆ ಜೊತೆಯಲಿ ಯಂತಹ ಹಿಟ್ ಕೊಟ್ಟಿದ್ದ ಅನಿರುದ್ಧ, ಕಿರುತೆರೆಯಲ್ಲಿ ಪಾರ್ವತಿ, ಭಾಗೀರಥಿ.. ಮೊದಲಾದ ಧಾರಾವಾಹಿಗಳ ಮೂಲಕ ಸಂಚಲನವನ್ನೇ ಹುಟ್ಟಿಸಿದ್ದ ಎಸ್.ನಾರಾಯಣ್, ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ಸೂರ್ಯವಂಶ ಟೈಟಲ್.. ಹೀಗೆ ಎಲ್ಲವೂ ಹಿಟ್ ಕಾಂಬಿನೇಷನ್ ಜೊತೆಯಾಗಿವೆ. ಮೆಗಾ ಹಿಟ್`ಗೆ ವೇಯ್ಟಿಂಗ್.

  • ಎಸ್.ನಾರಾಯಣ್-ಆದಿತ್ಯ-ಆದಿತಿಯ 5ಡಿಗೆ ಯು/ಎ

    ಎಸ್.ನಾರಾಯಣ್-ಆದಿತ್ಯ-ಆದಿತಿಯ 5ಡಿಗೆ ಯು/ಎ

    ಎಸ್.ನಾರಾಯಣ್ ಚಿತ್ರಗಳೆಂದರೆ ಯು ಸರ್ಟಿಫಿಕೇಟ್ ಎನ್ನುವುದು ಹಳೆಯ ಮಾತು. ಕಥೆಗೆ ತಕ್ಕಂತೆ ಬದಲಾಗುವ ಎಸ್.ನಾರಾಯಣ್ ಈಗ 5ಡಿ ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಆದಿತ್ಯ ಮತ್ತು ಆದಿತಿ ಪ್ರಭುದೇವ ಪ್ರಧಾನ ಪಾತ್ರದಲ್ಲಿರೋ ಚಿತ್ರವಿದು. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

    5ಡಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಐದು ಡೈಮೆನ್ಷನ್‍ನಲ್ಲಿ ಸಾಗುವ ಕಥೆಯಾದ್ದರಿಂದ 5ಡಿ ಅನ್ನೋ ಟೈಟಲ್ ಇಟ್ಟಿದ್ದಾರೆ ಎಸ್.ನಾರಾಯಣ್. ಸ್ವಾತಿ ಕುಮಾರ್ ನಿರ್ಮಾಣದ ಚಿತ್ರವಿದು. ಇದುವರೆಗೆ ಎಸ್.ನಾರಾಯಣ್ ಲವ್ ಸ್ಟೋರಿ, ಫ್ಯಾಮಿಲಿ, ಸೆಂಟಿಮೆಂಟ್, ದೇಶಭಕ್ತಿ, ಆ್ಯಕ್ಷನ್ ಚಿತ್ರಗಳನ್ನು ಮಾಡಿದ್ದರು. ಇದೇ ಮೊದಲ ಬಾರಿಗೆ ಕ್ರೈಂ ಥ್ರಿಲ್ಲರ್ ಸಿನಿಮಾ ಮಾಡಿದ್ದಾರೆ.

  • ಎಸ್.ನಾರಾಯಣ್'ಗೆ 1 ಕೋಟಿ 60 ಲಕ್ಷ ದೋಖಾ

    s narayan gets cheates once again

    ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ಅವರಿಗೆ ಈ ಬಾರಿ ಮತ್ತೊಮ್ಮೆ ಮೋಸವಾಗಿದೆ. ಅವರಿಗೆ ಖದೀಮರು 1 ಕೋಟಿ 60 ಲಕ್ಷಕ್ಕೆ ಟೋಪಿ ಹಾಕಿದ್ದಾರೆ. ಈಗ ವಂಚಕರ ವಿರುದ್ಧ ಎಸ್.ನಾರಾಯಣ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಆಗಿದ್ದು ಇಷ್ಟೆ, ನಾರಾಯಣ್ ಪುತ್ರ ಪಂಕಜ್ ಅವರನ್ನು ಹೀರೋ ಆಗಿಟ್ಟುಕೊಂಡು ಸಿನಿಮಾ ಮಾಡುತ್ತೇವೆ ಎಂದು ಮೂವರು ನಿರ್ಮಾಪಕರು ಕಳೆದ ವರ್ಷ ನಾರಾಯಣ್ ಅವರ ಸಂಪರ್ಕಕ್ಕೆ ಬಂದರು. ನಾರಾಯಣ್ ಕೂಡಾ ಪಾರ್ಟನರ್‍ಶಿಪ್‍ನಲ್ಲಿ ನಿರ್ಮಾಪಕರಾದರು. ಅಭಿಜಿತ್ ಅವರೂ ನಟಿಸುತ್ತಿದ್ದ ಚಿತ್ರವದು. ಸಿನಿಮಾ ಸೆಟ್ಟೇರಿತು ಕೂಡಾ. ಪಂಕಜ್ ಸಂಭಾವನೆ ಎಂದು ಹೆಚ್‍ಬಿಆರ್ ಲೇಔಟ್‍ನಲ್ಲೊಂದು ಸೈಟ್ ಕೊಟ್ಟರು ನಿರ್ಮಾಪಕರು. ಆ ಸೈಟ್‍ನ್ನು ನಾರಾಯಣ್ 1 ಕೋಟಿ 60 ಲಕ್ಷ ಕೊಟ್ಟು ಖರೀದಿಸಿದರು. ಆದರೆ, ಆಮೇಲೆ ಗೊತ್ತಾಗಿದ್ದೆಂದರೆ, ಆ ಸೈಟ್ ದಾಖಲೆಯೇ ನಕಲಿ ಎನ್ನುವ ಸತ್ಯ.

    ಬೋಗಸ್ ದಾಖಲೆ ನೋಡಿ ಒಂದೂವರೆ ಕೋಟಿ ಸಾಲ ಮಾಡಿ ಖರೀದಿಸಿರುವ ಸೈಟ್‍ಗೆ ಈಗ ನಾರಾಯಣ್ ಕಂತು ಕಟ್ಟಲೇಬೇಕು. ಏನು ಮಾಡಲಿ ಎಂದು ತಲೆ ಮೇಲೆ ಕೈ ಹೊತ್ತಿರುವ ನಾರಾಯಣ್, ಪೊಲೀಸರ ಮೊರೆ ಹೋಗಿದ್ದಾರೆ.

  • ಎಸ್.ನಾರಾಯಣ್‍ಗೆ 43 ಲಕ್ಷ ನಾಮ ಹಾಕಿದ್ದ ಜ್ಯೋತಿಷಿ

    director s narayan cheated by astrologer

    ಎಸ್. ನಾರಾಯಣ್. ಕಲಾ ಸಾಮ್ರಾಟ್ ಎಂದೇ ಹೆಸರಾಗಿರುವ ನಟ, ನಿರ್ದೇಶಕ, ನಿರ್ಮಾಪಕ. ಸಿನಿಮಾಗಳಲ್ಲಿ ಟೋಪಿ ಹಾಕುವ, ಬುದ್ದಿ ಹೇಳುವ ಪಾತ್ರಗಳಲ್ಲಿ ನಟಿಸುತ್ತಿದ್ದ ನಾರಾಯಣ್‍ಗೆ ರಿಯಲ್ ಲೈಫಲ್ಲಿ ಜ್ಯೋತಿಷಿ ಗ್ಯಾಂಗೊಂದು ನಾಮ ಹಾಕಿದೆ. 

    ಕಳೆದ ವರ್ಷ ಎಸ್. ನಾರಾಯಣ್ ಅವರಿಗೆ ತುರ್ತಾಗಿ ಹಣ ಬೇಕಿತ್ತು. ಆಂಧ್ರ ಬ್ಯಾಂಕ್‍ನಲ್ಲಿ ಸಾಲಕ್ಕೆ ಪ್ರಯತ್ನಿಸಿದ್ದರು ನಾರಾಯಣ್. ಆ ವೇಳೆಯಲ್ಲೇ ಈ ಖದೀಮರ ಗ್ಯಾಂಗ್‍ನ ಒಬ್ಬ ನಾರಾಯಣ್‍ರನ್ನು ಭೇಟಿ ಮಾಡಿ, ತಾನು ತಿರುನಲ್ವೇಲಿಯ ಫೈನಾನ್ಷಿಯರ್ ಕಡೆಯವನು ಎಂದು ಪರಿಚಯಿಸಿಕೊಂಡ. ನಾಲ್ಕೇ ದಿನಗಳಲ್ಲಿ ಸಾಲ ಕೊಡಿಸುತ್ತೇನೆ. ನನಗೆ 1% ಕಮಿಷನ್ ಕೊಡಬೇಕು ಎಂದು ಡಿಮ್ಯಾಂಡ್ ಇಟ್ಟ. ನಾರಾಯಣ್ ನಂಬಿದರು.

    ಹಾಗೆ ನಾರಾಯಣ್‍ರನ್ನು ನಂಬಿಸೋಕೆ ಆ ಖದೀಮ, ಮೆಟ್ಟುಪಾಳ್ಯಂನ ಜ್ಯೋತಿಷಿ ರಮೇಶ್ ಎಂಬುವವನ ಬಳಿಗೆ ಕರೆದುಕೊಂಡು ಹೋಗಿದ್ದ. ಫೈನಾನ್ಷಿಯರ್ ಎಂದು ಕರೆಸಿಕೊಂಡಿದ್ದವನ ಬಳಿಗೆ ಕರೆದುಕೊಂಡು ಹೋಗಿದ್ದ. ನೋಂದಣಿಧಿಕಾರಿಗಳನ್ನು ಪರಿಚಯ ಮಾಡಿಸಿ, ಅಲ್ಲಿಯೇ ಡಿಡಿಯನ್ನೂ ಮಾಡಿಸಿದ್ದ. ಎಲ್ಲವೂ ನಾರಾಯಣ್ ಕಣ್ಣೆದುರೇ ನಡೆದಿತ್ತು. ಆದರೆ, ಸಾಲ ಕೊಡುವುದಕ್ಕೂ ಮೊದಲೇ ಕಮಿಷನ್ ಕೊಡಬೇಕು ಎಂದರು ಖದೀಮರು. ನಾರಾಯಣ್ ಅವರ ಅಕೌಂಟ್‍ಗೆ 43 ಲಕ್ಷ ಹಾಕಿದರು. ಆಮೇಲೆ ಖದೀಮರು ನಾಪತ್ತೆ.

    ಈಗ ಅವರನ್ನು ಅರೆಸ್ಟ್ ಮಾಡೋಕೆ ಪೊಲೀಸರೇ ಉದ್ಯಮಿಗಳ ವೇಷದಲ್ಲಿ ಹೋಗಿ ನಾಟಕವಾಡಿದ್ದಾರೆ. ಮೂವರನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಇಬ್ಬರು ಸಿಕ್ಕಿಲ್ಲ. ನಾನು ಯಾರನ್ನೂ ಅಷ್ಟು ಸುಲಭವಾಗಿ ನಂಬುವವನಲ್ಲ. ಜಾಗರೂಕನಾಗಿರುತ್ತೇನೆ. ಆದರೂ ಕೆಲವೊಮ್ಮೆ ಎಡವಟ್ಟಾಗುತ್ತೆ ಎಂದಿದ್ದಾರೆ ಎಸ್.ನಾರಾಯಣ್.

  • ಕಲಾ ಸಾಮ್ರಾಟ್ ನಾರಾಯಣ್ ಈಗ ಡಾ.ಎಸ್.ನಾರಾಯಣ್

    ಕಲಾ ಸಾಮ್ರಾಟ್ ನಾರಾಯಣ್ ಈಗ ಡಾ.ಎಸ್.ನಾರಾಯಣ್

    ಚೈತ್ರದ ಪ್ರೇಮಾಂಜಲಿ ಚಿತ್ರದ ನಿರ್ದೇಶಕರಾಗಿ ಕನ್ನಡಿಗರಿಗೆ ಚಿರಪರಿಚಿತರಾದ ಎಸ್.ನಾರಾಯಣ್, ಕನ್ನಡದ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ವಿಷ್ಣು, ಅಂಬರಿಷ್, ಶಿವಣ್ಣ, ರವಿಚಂದ್ರನ್, ಪುನೀತ್, ರಾಘವೇಂದ್ರ ರಾಜ್‍ಕುಮಾರ್, ಸುದೀಪ್, ದರ್ಶನ್, ಗಣೇಶ್, ದುನಿಯಾ ವಿಜಯ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ಜಗ್ಗೇಶ್, ರಮೇಶ್ ಅರವಿಂದ್.. ಹೀಗೆ ಕನ್ನಡದ 3 ಜನರೇಷನ್‍ನ ಎಲ್ಲ ಸ್ಟಾರ್‍ಗಳನ್ನೂ ನಿರ್ದೇಶಿಸಿರುವ ಹೆಮ್ಮೆ ನಾರಾಯಣ್ ಅವರದ್ದು. ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಎಸ್.ನಾರಾಯಣ್ ಈಗ ಡಾ.ನಾರಾಯಣ್ ಆಗಿದ್ದಾರೆ.

    ಯುನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್, ಎಸ್.ನಾರಾಯಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

  • ಕಾಂಗ್ರೆಸ್ ಕದ ತಟ್ಟಿದ ಎಸ್.ನಾರಾಯಣ್

    ಕಾಂಗ್ರೆಸ್ ಕದ ತಟ್ಟಿದ ಎಸ್.ನಾರಾಯಣ್

    ಕಲಾ ಸಾಮ್ರಾಟ್ ಎಂದೇ ಖ್ಯಾತರಾಗಿರುವ ನಟ, ನಿರ್ದೇಶಕ, ನಿರ್ಮಾಪಕ ಎಸ್.ನಾರಾಯಣ್ ರಾಜಕೀಯಕ್ಕೆ ಬರುತ್ತಿದ್ದಾರೆ. ಎಸ್. ನಾರಾಯಣ್ ಅವರಿಗೆ ರಾಜಕೀಯ ನಾಯಕರ ಪರಿಚಯ ಹೊಸದಲ್ಲ. ಹೆಚ್.ಡಿ.ಕುಮಾರಸ್ವಾಮಿ ನಾರಾಯಣ್ ಅವರಿಗೆ ಆತ್ಮೀಯರು. ಹಲವು ರಾಜಕೀಯ ನಾಯಕರೊಂದಿಗೆ ಆತ್ಮೀಯ ಒಡನಾಟವೂ ಇದೆ. ಇದೆಲ್ಲದರ ಹೊರತಾಗಿಯೂ ರಾಜಕೀಯಕ್ಕೆ ಹೊರಟಿರುವ ನಾರಾಯಣ್ ಅವರಿಗೆ ಕಾಂಗ್ರೆಸ್ ಇಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ಇದನ್ನು ಹೇಳಿಕೊಂಡಿದ್ದಾರಂತೆ.

    ನಾರಾಯಣ್ ಅವರು ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿದೆ ಎಂದು ಸ್ವತಃ ಡಿಕೆಶಿ ಹೇಳುವ ಮೂಲಕ ನಾರಾಯಣ್ ಅವರ ರಾಜಕೀಯ ಪ್ರವೇಶ ಅಧಿಕೃತಗೊಳಿಸಿದ್ದಾರೆ.

    ಅಲ್ಲಿಗೆ ನಾರಾಯಣ್ ಕಾಂಗ್ರೆಸ್‍ನಲ್ಲಿರೋ ಜಯಮಾಲಾ, ಸಾ.ರಾ.ಗೋವಿಂದು, ಉಮಾಶ್ರೀ, ರಮ್ಯಾ.. ಮೊದಲಾದವರ ಲಿಸ್ಟಿಗೆ ಸೇರಲಿದ್ದಾರೆ.

  • ಮತ್ತೆ ಸೂರ್ಯವಂಶ : ಎಸ್.ನಾರಾಯಣ್ ಜೊತೆ ಕೈಜೋಡಿಸಿದ ಅನಿರುದ್ಧ

    ಮತ್ತೆ ಸೂರ್ಯವಂಶ : ಎಸ್.ನಾರಾಯಣ್ ಜೊತೆ ಕೈಜೋಡಿಸಿದ ಅನಿರುದ್ಧ

    ಸೂರ್ಯವಂಶ. ವಿಷ್ಣುವರ್ಧನ್ ಮತ್ತು ಎಸ್.ನಾರಾಯಣ್ ಇಬ್ಬರ ವೃತ್ತಿ ಜೀವನದಲ್ಲೂ ಬಹುದೊಡ್ಡ ಸಿನಿಮಾ. 1999ರಲ್ಲಿ ರಿಲೀಸ್ ಆಗಿದ್ದ ಸೂರ್ಯವಂಶ ಆ ವರ್ಷದ ಬಹುದೊಡ್ಡ ಹಿಟ್ ಚಿತ್ರಗಳಲ್ಲೊಂದು. ಈಗ ಮತ್ತೊಮ್ಮೆ ಸೂರ್ಯವಂಶ ಸಿದ್ಧವಾಗುತ್ತಿದೆ. ಈ ಬಾರಿ ಕಿರುತೆರೆಯಲ್ಲಿ. ಉದಯ ಟಿವಿಯಲ್ಲಿ. ಸೂರ್ಯವಂಶ ಹೆಸರಿನಲ್ಲೇ ಸೀರಿಯಲ್ ರೆಡಿಯಾಗುತ್ತಿದ್ದು, ಎಸ್.ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೀರಿಯಲ್‍ನ ಮೇಯ್ನ್ ರೋಲ್ ಅನಿರುದ್ಧ ಅವರದ್ದು. ಸೀರಿಯಲ್ಲಿನಲ್ಲಿ ಎಸ್.ನಾರಾಯಣ್ ಕೂಡಾ ನಟಿಸುತ್ತಿದ್ದಾರೆ.

    ಕಿರುತೆರೆ ಧಾರಾವಾಹಿಗಳಿಗೆ ಅದ್ಧೂರಿತನ, ಮೆಲೋಡ್ರಾಮಾ ಟಚ್ ಕೊಟ್ಟವರೇ ಎಸ್.ನಾರಾಯಣ್.

    ಸುಮತಿ, ಭಾಗೀರಥಿ, ಅಂಬಿಕಾ, ಪಾರ್ವತಿ.. ಹೀಗೆ  ಹಲವು ಸೀರಿಯಲ್‍ಗಳನ್ನು ನಿರ್ದೇಶಿಸಿದ್ದವರು ಎಸ್.ನಾರಾಯಣ್. ಇತ್ತೀಚೆಗೆ ಪಾರು ಸೀರಿಯಲ್‍ನಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿ, ಅಲ್ಲಿಯೂ ಗೆದ್ದಿದ್ದರು ಈಗ ಮತ್ತೊಮ್ಮೆ ಸೂರ್ಯವಂಶ ಹೆಸರಿನ ಸೀರಿಯಲ್ ಮಾಡುತ್ತಿದ್ದು, ಆ ಧಾರಾವಾಹಿಯಲ್ಲಿ ಹೀರೋ ಅನಿರುದ್ಧ.

    ಅಪ್ಪಾಜಿಯವರಿಗೆ ಎಸ್.ನಾರಾಯಣ್ ಜೊತೆ ಕೆಲಸ ಮಾಡುವುದೆಂದರೆ ವಿಶೇಷ ಪ್ರೀತಿಯಿತ್ತು. ನಾರಾಯಣ್ ಸರ್ ನನಗೆ ಕಥೆ ಹೇಳುವಾಗ ಕಣ್ಣಲ್ಲಿ ನೀರು ಬಂತು. ಅಪ್ಪಾವರಿಗೆ ಕಥೆ ಹೇಳುತ್ತಿದ್ದವರು ನನಗೆ ಡೈರೆಕ್ಷನ್ ಮಾಡುತ್ತಿರುವುದೇ ಅಪ್ಪಾಜಿಯವರ ಆಶೀರ್ವಾದ. ಧಾರಾವಾಹಿಯ ಕಥೆ ವಿಭಿನ್ನವಾಗಿದೆ. ಆರ್ಯವರ್ಧನ್ ಪಾತ್ರಕ್ಕಿಂತ ಭಿನ್ನ. ಖಂಡಿತಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ ಅನಿರುದ್ಧ.

     

  • ಲಕ್ಷ್ಮಿಗೆ ಡಾ.ರಾಜ್, ಎಸ್.ನಾರಾಯಣ್‍ಗೆ ಪುಟ್ಟಣ್ಣ, ಲಕ್ಷ್ಮೀಪತಿಗೆ ವಿಷ್ಣು ಪ್ರಶಸ್ತಿ

    s narayan gets life time achievement award

    ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಸರ್ಕಾರ ಪ್ರಕಟಿಸಿದೆ. 2017 ಸಾಲಿನ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ಸರ್ಕಾರ ಘೋಷಿಸಿದೆ. 

    ಡಾ.ರಾಜ್‍ಕುಮಾರ್ ಪ್ರಶಸ್ತಿ, ಲಕ್ಷ್ಮಿಯವರಿಗೆ ಸಂದಿದೆ. ಜ್ಯೂಲಿ ಲಕ್ಷ್ಮಿ ಎಂದೇ ಖ್ಯಾತರಾದ ಲಕ್ಷ್ಮಿ, ಡಾ.ರಾಜ್ ಜೊತೆ ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ರವಿಚಂದ್ರ, ಒಲವು ಗೆಲುವು, ಗೋವಾದಲ್ಲಿ ಸಿಐಡಿ 999 ಚಿತ್ರಗಳಲ್ಲಿ ನಟಿಸಿದ್ದವರು.

    ಡಾ.ವಿಷ್ಣುವರ್ಧನ್ ಪ್ರಶಸ್ತಿ, ಎಸ್.ನಾರಾಯಣ್ ಅವರಿಗೆ ಸಂದಿದೆ. ಎಸ್.ನಾರಾಯಣ್ ಅವರಿಗೂ ಈ ಪ್ರಶಸ್ತಿ ವಿಭಿನ್ನವೇ. ವಿಷ್ಣು ಅವರಿಗಾಗಿ ವೀರಪ್ಪ ನಾಯ್ಕ, ಸೂರ್ಯವಂಶ, ಜಮೀನ್ದಾರ್ರು, ಸಿಂಹಾದ್ರಿಯ ಸಿಂಹ, ವರ್ಷ, ಸಿರಿವಂತ ಚಿತ್ರಗಳನ್ನು ನಿರ್ದೇಶಿಸಿದ್ದವರು.

    ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಿರಿಯ ನಿರ್ಮಾಪಕ ಜಿ.ಎನ್.ಲಕ್ಷ್ಮೀಪತಿ ಅವರಿಗೆ ನೀಡಲಾಗುತ್ತಿದೆ. ಶಂಕರ್‍ನಾಗ್ ಅಭಿನಯದ ಒಂದಾನೊಂದು ಕಾಲದಲ್ಲಿ, ಚಿತೆಗೂ ಚಿಂತೆ, ನೆಂಟರೋ ಗಂಟುಕಳ್ಳರೋ, ಕಾಡು ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ್ದವರು ಲಕ್ಷ್ಮೀಪತಿ.

    ನಟ, ನಿರ್ಮಾಪಕ ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯಲ್ಲಿ ನಟಿ ಹೇಮಾಚೌಧರಿ, ಛಾಯಾಗ್ರಾಹಕ ಬಿ.ಎಸ್.ಬಸವರಾಜು, ಸಂಕಲನಕಾರ ಸುರೇಶ್ ಅರಸ್, ಪತ್ರಕರ್ತನ ಹುಣಸವಾಡಿ ರಾಜನ್ ಸದಸ್ಯರಾಗಿದ್ದರು.

  • ವಿಷ್ಣು ಗೆಟಪ್ಪಿನಲ್ಲಿ ಎಸ್.ನಾರಾಯಣ್

    s narayan acts in paru tv serial

    ನಟ, ನಿರ್ದೇಶಕ, ನಿರ್ಮಾಪಕರಾಗಿ ಕಲಾ ಸಮ್ರಾಟ್‌ ಎಂದೇ ಕರೆಸಿಕೊಳ್ಳುವ ಎಸ್‌.ನಾರಾಯಣ್‌ ಕಿರುತೆರೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಜೀ ಕನ್ನಡ ವಾಹಿನಿಯ ಪಾರು ಧಾರಾವಾಹಿಯಲ್ಲಿ  ವಿಶೇಷ ಪಾತ್ರವೊಂದರ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

    ಎಸ್.ನಾರಾಯಣ್ಗೆ ಕಿರುತೆರೆ ಹೊಸದೇನಲ್ಲ. ಉದಯ ಟಿವಿಯಲ್ಲಿ ಪಾರ್ವತಿ ಧಾರಾವಾಹಿಯ ಮೂಲಕ ಹೊಸ ದಾಖಲೆಯನ್ನೇ ಬರೆದಿದ್ದ ಎಸ್.ನಾರಾಯಣ್, ನಂತರವೂ ಹಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಈಗ ನಟರಾಗಿ ಮರು ಪ್ರವೇಶ ಮಾಡಿದ್ದಾರೆ.

    ಇಡೀ ಧಾರಾವಾಹಿಯಲ್ಲಿ ನಾರಾಯಣ್ ಅವರ ಗೆಟಪ್ಪು, ವಿಷ್ಣುವರ್ಧನ್ ಅವರ ಸ್ಟೈಲಿನಲ್ಲಿದೆ. ಅದರಲ್ಲೂ ಎಸ್.ನಾರಾಯಣ್ ಅವರ ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರ ಹಳ್ಳಿ ಗೌಡ, ಪಟೇಲ, ಸ್ವಾತಂತ್ರ್ಯ ಹೋರಾಟಗಾರನ ವೇಷ ಭೂಷಣಗಳು ಗಮನ ಸೆಳೆದಿದ್ದವು. ಈಗ ಧಾರಾವಾಹಿಯಲ್ಲಿ ಅದೇ ಮಾದರಿಯ ಪಾತ್ರ ಮಾಡಿದ್ದಾರೆ ಎಸ್.ನಾರಾಯಣ್.