` director guruprasad - chitraloka.com | Kannada Movie News, Reviews | Image

director guruprasad

  • 16 ವರ್ಷಗಳ ನಂತರ ಮತ್ತೆ ಮಠ : ಗುರುಪ್ರಸಾದ್ ಹೀರೋ. ಜಗ್ಗೇಶ್ ಇಲ್ಲ..!

    16 ವರ್ಷಗಳ ನಂತರ ಮತ್ತೆ ಮಠ : ಗುರುಪ್ರಸಾದ್ ಹೀರೋ. ಜಗ್ಗೇಶ್ ಇಲ್ಲ..!

    ಮಠ. ಕನ್ನಡ ಚಿತ್ರರಂಗದ ಒಂದು ಕಲ್ಟ್ ಸಿನಿಮಾ ಎನ್ನಬಹುದು. ಜಗ್ಗೇಶ್ ಮ್ಯಾನರಿಸಂಗೆ ಹೇಳಿ ಮಾಡಿಸಿದಂತಿದ್ದ ಸಿನಿಮಾ. ನಕ್ಕು ನಗಿಸುತ್ತಲೇ ಫಿಲಾಸಫಿ ಹೇಳಿದ್ದ ಸಿನಿಮಾಗೆ ಜಗ್ಗೇಶ್ ವೃತ್ತಿ ಜೀವನದಲ್ಲಿ ಬೇರೆಯದ್ದೇ ಸ್ಥಾನಮಾನವಿದೆ. ಆ ಚಿತ್ರದ ನಿರ್ದೇಶಕ ಹೀರೋ ಈಗ ಆಗಿದ್ದಾರೆ. ಚಿತ್ರದ ಟೈಟಲ್ ಮಠ. ಆದರೆ ನಿರ್ದೇಶಕ ಗುರುಪ್ರಸಾದ್ ಅಲ್ಲ, ರವೀಂದ್ರ ವೆಂಶಿ. ಚಿತ್ರದಲ್ಲಿ ಜಗ್ಗೇಶ್ ಒಬ್ಬರು ಮಾತ್ರ ಇಲ್ಲ.

    ಜಗ್ಗೇಶ್ ಅವರನ್ನು ಹೊರತುಪಡಿಸಿದರೆ ಮಂಡ್ಯ ರಮೇಶ್, ಸಾಧು ಕೋಕಿಲ, ತಬಲಾ ನಾಣಿ, ಬಿರಾದಾರ್ ಸೇರಿದಂತೆ ಎಲ್ಲರೂ ಇದ್ದಾರೆ. ಗುರುಪ್ರಸಾದ್ ಹೀರೋ. ಇವರೆಲ್ಲರ ಜೊತೆಗೆ 82 ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

    ಜಗ್ಗೇಶ್ ಅವರಿಗೆ ಸೂಟ್ ಆಗುವಂತಾ ಪಾತ್ರ ಸಿಗಲಿಲ್ಲ. ಹೀಗಿದ್ದರೂ ಅವರನ್ನು ಕಾಂಟ್ಯಾಕ್ಟ್ ಮಾಡಿದೆವು. ಅವರು ಒಪ್ಪಲಿಲ್ಲ ಎನ್ನುವ ರವೀಂದ್ರ ವೆಂಶಿ ಸುಮಾರು 3 ವರ್ಷಗಳ ಕಾಲ ಚಿತ್ರದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಈಗ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

    ಸುಮಾರು 25ರಿಂದ 30 ಮಠಾಧೀಶರು ಚಿತ್ರದಲ್ಲಿ ಬಂದು ಹೋಗುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಎರಡೂ ಬಗೆಯ ಮಠಾಧೀಶರನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎನ್ನುತ್ತಾರೆ ರವೀಂದ್ರ ವೆಂಶಿ.

  • Guruprasad Script School

    guruprasad image

    Mata fame director Guruprasad has stated a training institute regarding the Cinema Script Writing, Story and Dialogues. Teaching will be in Kannada only. Interested persons can contact Guruprasad

    +91 9108681469

    email - This email address is being protected from spambots. You need JavaScript enabled to view it.

    guruprasad_advt.jpg

  • Guruprasad to Release Eradane Sala in May

    eradane sala image

    Actor-director Guruprasad has decided to release his latest film 'Eradane Sala' in the month of May. Guruprasad himself has confirmed that he will be releasing the film in May. 'I have almost completed the shooting of the film by March and is planning to get the film censored by April.  Our producer Yogeesh Narayan is planning to contest the MLC election in June and we are planning to release the film by April' says Guruprasad.

    Yogeesh says though its a doubt whether he is contesting elections or not,  he requests Guru to release the film by May.

    chitraloka_group1.gif

  • ಎದ್ದೇಳು ಮಂಜುನಾಥ 2 ರೆಡಿ

    ಎದ್ದೇಳು ಮಂಜುನಾಥ 2 ರೆಡಿ

    ಡೈರೆಕ್ಟರ್ ಗುರು ಪ್ರಸಾದ್ ಮತ್ತು ಜಗ್ಗೇಶ್ ವೃತ್ತಿ ಜೀವನದ ಮರೆಯಲಾಗದ ಚಿತ್ರ ಎದ್ದೇಳು ಮಂಜುನಾಥ. ಸೂಪರ್ ಹಿಟ್ ಆಗಿದ್ದ ಅದೇ ಟೈಟಲ್ ಇಟ್ಟುಕೊಂಡು ಗುರು ಪ್ರಸಾದ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಎದ್ದೇಳು ಮಂಜುನಾಥ 2. ಹಾಗಂತ ಇದು ಆ ಮಂಜುನಾಥ ಚಿತ್ರದ ಸೀಕ್ವೆಲ್ ಅಲ್ಲ. ಹೊಸ ಚಿತ್ರ, ಹೊಸ ಕಥೆ ಮತ್ತು ಹಳೇ ಟೈಟಲ್.

    ಅಂದಹಾಗೆ ಇಲ್ಲಿ ಜಗ್ಗೇಶ್ ನಟಿಸಿಲ್ಲ. ಡೈರೆಕ್ಟರ್ ಗುರು ಪ್ರಸಾದ್ ಅವರೇ ಹೀರೋ. ಅಷ್ಟೇ ಅಲ್ಲ, ಖುದ್ದು ಗುರು ಪ್ರಸಾದ್ ಅವರದ್ದೇ ಡೈರೆಕ್ಷನ್ ಇದೆ.

    ಇದು ಸೀಕ್ವೆಲ್ ಅಲ್ಲ. ನಾನು ಯಾವುದೇ ಚಿತ್ರಕ್ಕೆ ಸೀಕ್ವೆಲ್ ಮಾಡಲ್ಲ. ನಾನು ಚಿತ್ರದ ಕಥಾನಾಯಕ ಎಂದಿದ್ದಾರೆ ಗುರುಪ್ರಸಾದ್.

    ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದೆ ಅನ್ನೋದು ಬಿಗ್ ನ್ಯೂಸ್. ಗುರುಪ್ರಸಾದ್ ಇಲ್ಲಿ ನಿಧಾನ ಚಿತ್ರೀಕರಣದ ತಮ್ಮದೇ ಸಂಪ್ರದಾಯ ಮುರಿದಿದ್ದಾರೆ. ರಚಿತಾ ಮಹಾಲಕ್ಷ್ಮಿ ಚಿತ್ರದ ನಾಯಕಿ. ಸಕಲೇಶಪುರದ ಹುಡುಗಿ. ಆದರೆ ಹೆಚ್ಚು ಮಿಂಚಿರೋದು ತಮಿಳು ಕಿರುತೆರೆಯಲ್ಲಿ. ಚಿತ್ರ ರೆಡಿಯಾಗಿದೆ ಎಂದು ಇಡೀ ಚಿತ್ರತಂಡದೊಂದಿಗೆ ಬಂದು ಹೇಳಿರುವ ಗುರುಪ್ರಸಾದ್ ಚಿತ್ರವನ್ನು ಶೀಘ್ರದಲ್ಲೇ ರಿಲೀಸ್ ಮಾಡ್ತಾರಂತೆ. 

  • ರಂಗನಾಯಕ ಜಗ್ಗೇಶ್

    ranaganayaka jaggesh

    ನವರಸ ನಾಯಕ ಜಗ್ಗೇಶ್ ರಂಗನಾಯಕರಾಗುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಇಬ್ಬರು ರಂಗನಾಯಕಿಯರಿದ್ದಾರೆ. ಒಬ್ಬರು ಆರತಿ, ಇನ್ನೊಬ್ಬರು ಆದಿತಿ. ಈಗ ರಂಗನಾಯಕ. ಜಗ್ಗೇಶ್‍ರನ್ನು ರಂಗನಾಯಕರನ್ನಾಗಿಸಿರುವುದು ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಿರ್ದೇಶಕ ಗುರು ಪ್ರಸಾದ್. ದಶಕಗಳ ನಂತರ ಇಬ್ಬರೂ ಮತ್ತೆ ಒಗ್ಗೂಡಿದ್ದಾರೆ.

    ಹಿಟ್ ಜೋಡಿಯನ್ನು ಒಂದುಗೂಡಿಸಿದ ಕೀರ್ತಿ ಪುಷ್ಪಕವಿಮಾನ ಚಿತ್ರ ನಿರ್ಮಿಸಿದ್ದ ವಿಖ್ಯಾತ್ ಅವರದ್ದು. ಗುರುಪ್ರಸಾದ್ ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಎನಿಸಿತು. ಈಗ ನಮ್ಮ ಬ್ಯಾನರ್‍ನಲ್ಲಿ ಅವರು ಹ್ಯಾಟ್ರಿಕ್ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಕಥೆ ಮಜವಾಗಿದೆ ಎಂದಿದ್ದಾರೆ ವಿಖ್ಯಾತ್.

  • ಸಂಗೀತಾ ಭಟ್ ಬೆಂಬಲಕ್ಕೆ ಪತಿ ಸುದರ್ಶನ್

    sangeetha bhat's stands by her

    ಸಂಗೀತಾ ಭಟ್ ಅವರ ಮೀಟೂ ಆರೋಪ ಕುರಿತಂತೆ ಮಾತನಾಡಿದ್ದ ನಿರ್ದೇಶಕ ಗುರು ಪ್ರಸಾದ್ ವಿರುದ್ಧ, ಸಂಗೀತಾ ಭಟ್ ಅವರ ಪತಿ ಸುದರ್ಶನ್ ಸಿಟ್ಟಾಗಿದ್ದಾರೆ. ನನ್ನ ಪತ್ನಿ ಸಂಗೀತಾ ಭಟ್, ಮೀಟೂ ಆರೋಪ ಮಾಡಿದ್ದು, ನೋವು ಹೇಳಿಕೊಳ್ಳುವುದಕ್ಕೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಚಿತ್ರರಂಗದಲ್ಲಿ ಯಾರದ್ದೋ ಹೆಸರು ಹೇಳಿ ಲಾಭ ಮಾಡಿಕೊಳ್ಳುವ ಉದ್ದೇಶವೂ ನಮಗಿಲ್ಲ. ಅವರು ತಮಗಾದ ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳೋದ್ಯಾಕೆ ಎಂದಿದ್ದಾರೆ ಸುದರ್ಶನ್.

    ಸಂಗೀತಾ ಭಟ್ ಅವರು ಮೀಟೂ ಆರೋಪ ಮಾಡಿದ ಮೇಲೆ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದ ಇಬ್ಬರು ಮೇಯ್ಲ್ ಮೂಲಕ ಕ್ಷಮೆ ಕೇಳಿದ್ದಾರಂತೆ. ನಮ್ಮ ಉದ್ದೇಶ ಇನ್ನೊಂದು ಕುಟುಂಬದ ನೆಮ್ಮದಿ ಹಾಳು ಮಾಡುವುದಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಕಿರುಕುಳ ನಿಲ್ಲಬೇಕು. ಅಷ್ಟೆ. ಹೀಗಾಗಿಯೇ ಸಂಗೀತಾ ಯಾರ ಹೆಸರನ್ನೂ ಹೇಳಿಲ್ಲ. ನಮಗೆ ಗುರುಪ್ರಸಾದ್ ಸರ್ಟಿಫಿಕೇಟ್ ಅಗತ್ಯವೂ ಇಲ್ಲ ಎಂದಿದ್ದಾರೆ ಸುದರ್ಶನ್. 

  • ಹೆಣವಾದರು ಮಠ ಗುರು ಪ್ರಸಾದ್..!

    ಹೆಣವಾದರು ಮಠ ಗುರು ಪ್ರಸಾದ್..!

    ಮಾತಿನ ಮಲ್ಲ ಮಠ ಗುರು ಪ್ರಸಾದ್ ಅವರನ್ನು ಸುಮ್ಮನೆ ಬಿದ್ದಿರಿ. ಹೆಣದಂತೆ ಬಿದ್ದಿರಿ ಎಂದರೆ ಏನು ಮಾಡಬಹುದು? ಡೈರೆಕ್ಟರ್ ಪ್ರಭು ಶ್ರೀನಿವಾಸ್ ಹಾಗೆ ಹೇಳಿದರೆ ಗುರು ಪ್ರಸಾದ್, ಕಮಕ್ ಕಿಮಕ್ ಎನ್ನದೆ ಹೆಣವಾಗುತ್ತಾರೆ. ಏಕೆಂದರೆ ಪೇಮೆಂಟು, ಕ್ಯಾರೆಕ್ಟರು ಎರಡೂ ಚೆನ್ನಾಗಿದೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

    ಪ್ರಭು ಶ್ರೀನಿವಾಸ್, ಬಾಡಿ ಗಾಡ್ ಅನ್ನೋ ಸಿನಿಮಾ ರೆಡಿ ಮಾಡುತ್ತಿದ್ದು, ಆ ಚಿತ್ರದಲ್ಲಿ ಗುರು ಪ್ರಸಾದ್ ಅವರಿಗೆ ಹೆಣದ ಪಾತ್ರ. ಅವರಿಗೆ ಹೀರೋಯಿನ್ನೂ ಇದ್ದಾರಂತೆ. ಪದ್ಮಜಾ ರಾವ್. ಮೊದಲ ಬಾರಿಗೆ ಹೆಣದ ಪಾತ್ರ ಮಾಡುತ್ತಿದ್ದೇನೆ ಎಂದಿರೋ ಗುರು ಪ್ರಸಾದ್, ಚಿತ್ರದ ಕಥೆಯ ಬಗ್ಗೆ ಥ್ರಿಲ್ಲಂತೂ ಆಗಿದ್ದಾರೆ.

    ಇದು ವಿದೇಶದಲ್ಲಿ ನೆಲೆಸಿರುವ ಮಕ್ಕಳು ಮತ್ತು ಮಕ್ಕಳಿಗಾಗಿ ಇಲ್ಲೇ ಕಾಯುತ್ತಿರುವ  ಹೆತ್ತವರ ಕಥೆ ಎಂದಿದ್ದಾರೆ ಪ್ರಭು ಶ್ರೀನಿವಾಸ್. ಶಾಸಕ ಎಚ್.ಕೆ.ಕುಮಾರಸ್ವಾಮಿ ಪುತ್ರ ಮನೋಜ್, ಇಲ್ಲಿ ಗುರು ಪ್ರಸಾದ್ ಅವರ ಹೆಣ ಕಾಯುವ ಪಾತ್ರ ಮಾಡಿದ್ದಾರೆ. ಮನೋಜ್ ಅವರು ಶಶಾಂಕ್ ಅವರ ಮೊಗ್ಗಿನ ಮನಸ್ಸು ಮೂಲಕ ಚಿತ್ರರಂಗಕ್ಕೆ ಬಂದವರು.