` director shashank - chitraloka.com | Kannada Movie News, Reviews | Image

director shashank

  • Upendra In Shashank's Home Banner

    upendra, shashank image

    Upendra is all set to act in a film produced and directed by Shashank. The director has named his production house as Shashank Cinemas. Shashank has narrated the storyline script to Upendra and he has accepted it. Shashank is now undertaking the work of writing the final script and dialogues. Since Upendra has other commitments the film will not start immediately. The tentative date is May 2017. The title and other details are being trashed out.

    Shashank is now undertaking the work of writing the final script and dialogues. Since Upendra has other commitments the film will not start immediately. The tentative date is May 2017. The title and other details are being trashed out.

  • Upendra's New Film Launched

    Upendra New Movie image

    Upendra's new film to be directed by well known director Shashank was launched on Independence Day at the Panchamukhi Ganapathi Temple in Mahalakshmi Layout in Bangalore.

    Shashank was supposed to direct Upendra's film long back. However, the film could not go on floors due to various reasons. Now the time has finally arrived and the film has been launched in a simple affair. Shashank's daughter sounded the clap for the first shot of the film.

    Shashank himself is producing the film apart from scripting and directing it. This is his second production after 'Thayige Thakka Maga'. Nishvika Naidu and Rukmini of 'Birbal' fame are the heroines. Sugnan is the cinematographer, while Arjun Janya is the music composer.

    The first look and the title of the film will be unveiled on Upendra's birthday on the 18th of September.

  • ಉಪ್ಪಿ-ಶಶಾಂಕ್ ಸಿನಿಮಾ ಶುರು - ಇಬ್ಬರು ಹೀರೋಯಿನ್ಸ್

    upendra new movie with shashank

    ಉಪೇಂದ್ರ ಮತ್ತು ಶಶಾಂಕ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ಶುರುವಾಗಿದೆ. ಸ್ಕ್ರಿಪ್ಟ್ ಪೂಜೆ ಮಾಡಿ ಶಶಾಂಕ್, ಹೊಸ ಸಿನಿಮಾಗೆ ಓಂಕಾರ ಹಾಕಿದ್ದಾರೆ. ಚಿತ್ರದಲ್ಲಿ ಶಶಾಂಕ್, ಸದ್ಯದ ರಾಜಕೀಯ ಬೆಳವಣಿಗೆಗಳನ್ನೇ ಇಟ್ಟುಕೊಂಡು ಕಥೆ ಮಾಡಿದ್ದಾರಂತೆ. ಶಶಾಂಕ್ ಸದ್ಯಕ್ಕೆ ಬಿಟ್ಟುಕೊಟ್ಟಿರುವ ಗುಟ್ಟು ಇಷ್ಟೇ.

    ಉಪೇಂದ್ರಗೆ ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ಹಾಗೂ ಬೀರ್‍ಬಲ್ ಖ್ಯಾತಿಯ ರುಕ್ಮಿಣಿ ನಾಯಕಿಯರು. ಸೆಪ್ಟೆಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬವಿದ್ದು, ಆ ದಿನ ಚಿತ್ರದ ಟೈಟಲ್ ಹಾಗೂ ಫಸ್ಟ್‍ಲುಕ್ ಹೊರತರಲು ನಿರ್ಧರಿಸಿದ್ದಾರೆ ಶಶಾಂಕ್.

  • ಡ್ರಗ್ಸ್ ಕೇಸ್ : ಕೆಂಪೇಗೌಡ ನಿರ್ಮಾಪಕರ ಮೇಲೆ ಪೊಲೀಸ್ ರೇಡ್

    ಡ್ರಗ್ಸ್ ಕೇಸ್ : ಕೆಂಪೇಗೌಡ ನಿರ್ಮಾಪಕರ ಮೇಲೆ ಪೊಲೀಸ್ ರೇಡ್

    ಡ್ರಗ್ಸ್ ಕೇಸ್‍ನಲ್ಲಿ ಸೆಲಬ್ರಿಟಿಗಳ ಬೆನ್ನು ಹತ್ತಿರುವ ಪೊಲೀಸರು ಈಗ ಕೆಂಪೇಗೌಡ-2 ನಿರ್ಮಾಪಕ ಶಂಕರೇಗೌಡರ ಬೆನ್ನು ಬಿದ್ದಿದ್ದಾರೆ. ಡಾಲರ್ಸ್ ಕಾಲನಿಯಲ್ಲಿರುವ ಮನೆಯ ಮೇಲೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ಮಾಡಿದ್ದು, ಕಚೇರಿ, ಮನೆ, ಕಾರುಗಳ ಪರಿಶೀಲನೆ ಮಾಡಿದ್ದಾರೆ.

    ಇತ್ತೀಚೆಗೆ ಅರೆಸ್ಟ್ ಆಗಿದ್ದ ಬಿಗ್‍ಬಾಸ್ ಮಸ್ತಾನ್ ಶಂಕರೇಗೌಡರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಕೆಲವು ಮೊಬೈಲ್ಸ್ ಹಾರ್ಡ್ ಡಿಸ್ಕ್ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.

  • ತಾಯಿಗೆ ತಕ್ಕ ಮಗ ಟ್ರೇಲರ್ ಹವಾ..

    thayige thakka maga creates craze

    ತಾಯಿಗೆ ತಕ್ಕ ಮಗ. ಶಶಾಂಕ್ ನಿರ್ದೇಶನದ ಸಿನಿಮಾ ಟೈಟಲ್‍ನಿಂದಲೇ ಸದ್ದು ಮಾಡಿದ್ದ ಸಿನಿಮಾ. ಇನ್ನು ಎಕ್ಸ್‍ಕ್ಯೂಸ್ ಮಿ ನಂತರ ಸುಮಲತಾ ಮತ್ತು ಅಜೇಯ್ ರಾವ್ ಮತ್ತೊಮ್ಮೆ ತಾಯಿ ಮಗನಾಗಿ ನಟಿಸಿದ್ದು, ಚಿತ್ರದ ನಿರೀಕ್ಷೆ ಹೆಚ್ಚಿಸಿತ್ತು. ಆ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಚಿತ್ರದ ಟ್ರೇಲರ್.

    ಕಿಚ್ಚು ಸುದೀಪ್ ಹಿನ್ನೆಲೆ ಧ್ವನಿಯೊಂದಿಗೆ ಶುರುವಾಗುವ ಚಿತ್ರದ ಟ್ರೇಲರ್‍ನಲ್ಲಿ, ತಾಯಿ-ಮಗನ ಬಾಂಧವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸಾಹಸ ದೃಶ್ಯ ಮತ್ತು ಪಂಚಿಂಗ್ ಡೈಲಾಗುಗಳ ಹಿನ್ನೆಲೆಯಲ್ಲೂ ತಾಯಿ-ಮಗನ ಸೆಂಟಿಮೆಂಟ್ ಕಾಣುವಂತೆ ಮಾಡಿರೋದು ಶಶಾಂಕ್ ಸ್ಪೆಷಾಲಿಟಿ. 

    ಚಿತ್ರದ ನಾಯಕಿ ಆಶಿಕಾ ರಂಗನಾಥ್, ಸಿನಿಮಾದ ಹಾಟ್ ಹಾಟ್ ಸಬ್ಜೆಕ್ಟ್. ಕ್ಲಾಸ್ ಮತ್ತು ಮಾಸ್ ಎರಡೂ ಮಿಕ್ಸ್ ಆಗಿರುವ ಸಿನಿಮಾ ಅಜೇಯ್ ರಾವ್ ಅವರ 25ನೇ ಸಿನಿಮಾ ಎನ್ನವುದು ವಿಶೇಷ.

  • ತಾಯಿಗೆ ತಕ್ಕ ಮಗ ನಂತರ ಶಶಾಂಕ್ ಉಪ್ಪಿ ಸಿನಿಮಾ

    shsshank all set to work with upendra

    ತಾಯಿಗೆ ತಕ್ಕ ಮಗ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಶಶಾಂಕ್, ತಮ್ಮ ಮುಂದಿನ ಚಿತ್ರವನ್ನೂ ಪ್ರಕಟಿಸಿಬಿಟ್ಟಿದ್ದಾರೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ಸಕ್ಸಸ್ ಸುದ್ದಿಗೋಷ್ಟಿಯಲ್ಲೇ ಮುಂದಿನ ಸಿನಿಮಾ ಘೋಷಿಸಿರುವ ಶಶಾಂಕ್,  ತಾಯಿಗೆ ತಕ್ಕ ಮಗ ರಿಲೀಸ್ ನಂತರ ಉಪ್ಪಿ ಸಿನಿಮಾ ಕೆಲಸಗಳು ಶುರುವಾಗಲಿವೆ ಎಂದಿದ್ದಾರೆ.

    ಚಿತ್ರದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದವರು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ. 2019ರ ಆರಂಭದಿಂದಲೇ ಉಪ್ಪಿ ಸಿನಿಮಾ ಕೆಲಸ ಶುರುವಾಗಲಿದೆ ಎಂದಿದ್ದಾರೆ ಶಶಾಂಕ್. ಸದ್ಯಕ್ಕೆ ತಾಯಿಗೆ ತಕ್ಕ ಮಗ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

    ನವೆಂಬರ್ 16ಕ್ಕೆ ತಾಯಿಗೆ ತಕ್ಕ ಮಗ ರಿಲೀಸ್ ಆಗುತ್ತಿದ್ದು, ಸುಮಲತಾ ಅಂಬರೀಷ್, ಅಜೇಯ್ ರಾವ್, ಅಶಿಕಾ ರಂಗನಾಥ್ ಪ್ರಧಾನ ಪಾತ್ರಗಳಲ್ಲಿದ್ದಾರೆ.

  • ತಾಯಿಗೆ ತಕ್ಕ ಮಗ ಶಶಾಂಕ್, ಕಾಯ್ಕಿಣಿಗೆ ತಕ್ಕ ನಿರ್ದೇಶಕ

    thayige thakka maga team image

    ಈ ಮಾತು ಹೇಳೋಕೆ ಕಾರಣ ಇದೆ. ಏಕೆಂದರೆ ಈ ಚಿತ್ರದ ನಿರ್ದೇಶಕ ಶಶಾಂಕ್. ಸಿಕ್ಸರ್‍ನಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿದೇಶಕ ಶಶಾಂಕ್, ತಮ್ಮ ಮೊದಲ ಚಿತ್ರದಿಂದಲೂ ಹೊಸಬರಿಗೆ ಬೆನ್ನು ತಟ್ಟುತ್ತಲೇ ಬಂದವರು. ಶಶಾಂಕ್ ಅವರ ಪ್ರತಿ ಚಿತ್ರದಲ್ಲೂ ಕನಿಷ್ಠ ಐದಾರು ಹೊಸ ಪ್ರತಿಭೆಗಳಿರುತ್ತವೆ. ಕಲಾವಿದರು, ತಂತ್ರಜ್ಞರು, ಸಾಹಿತಿಗಳು.. ಹೀಗೆ ಪ್ರತಿ ಕಡೆಯಲ್ಲೂ ಹೊಸ ಹೊಸಬರನ್ನು ಪರಿಚಯಿಸುತ್ತಲೇ ಇರುತ್ತಾರೆ. 

    ಇನ್ನು ಕಾಯ್ಕಿಣಿಗೆ ತಕ್ಕ ನಿರ್ದೇಶಕ ಎಂದಿದ್ದು ಇದೇ ಕಾರಣಕ್ಕೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ``ಪ್ರತಿ ಚಿತ್ರದಲ್ಲೂ ಒಬ್ಬೊಬ್ಬ ಸಾಹಿತಿಗೆ, ಹೊಸ ಪ್ರತಿಭೆಗೆ ಅವಕಾಶ ಕೊಟ್ಟರೂ ಸಾಕು. ವರ್ಷಕ್ಕೆ ಕನಿಷ್ಠ 100 ಸಾಹಿತಿಗಳು ಬೆಳಕಿಗೆ ಬರುತ್ತಾರೆ. ಚಿತ್ರ ನಿರ್ದೇಶಕರು ಈ ಬಗ್ಗೆ ಮನಸ್ಸು ಮಾಡಬೇಕು'' ಎಂದಿದ್ದರು.

    ಆದರೆ, ಕಾಯ್ಕಿಣಿ ಹೇಳಿದ್ದನ್ನು ಜಾರಿಗೇ ತಂದಿರೋ ಶಶಾಂಕ್, ತಾಯಿಗೆ ತಕ್ಕ ಮಗ ಚಿತ್ರದಲ್ಲೂ ಅದನ್ನು ಮುಂದವರೆಸಿದ್ದಾರೆ. ಚಿತ್ರದಲ್ಲಿನ ಎದೆಯ ಒಳಗೆ ಬಲಗಾಲಿಟ್ಟು ಒಳಗೆ ಬಂದೇ ನೀನು ಹಾಡನ್ನು ಬರೆದಿರುವುದು ಹೊಸ ಪ್ರತಿಭೆ ರಾಘವೇಂದ್ರ. ಹಾಡು ಹಿಟ್ ಆಗಿದೆ. 

    ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲ, ಕೃಷ್ಣನ್ ಲವ್ ಸ್ಟೋರಿ.. ಹೀಗೆ ಪ್ರತಿ ಚಿತ್ರದಲ್ಲೂ ಹೊಸಬರನ್ನು ಪರಿಚಯಿಸಿ ಗೆದ್ದಿರುವ ಶಶಾಂಕ್, ಈ ಚಿತ್ರದಲ್ಲೂ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

  • ತಾಯಿಗೆ ತಕ್ಕ ಮಗನಿಗೆ ವಿರಾಮ

    thayige thakka maga gets injury break

    ತಾಯಿಗೆ ತಕ್ಕ ಮಗ. ನಿರ್ದೇಶಕ ಶಶಾಂಕ್ ನಿರ್ಮಾಣದ, ಅವರದ್ದೇ ನಿರ್ದೇಶನದ ಸಿನಿಮಾ. ಆರಂಭದಿಂದಲೂ ನಿರ್ದೇಶಕರ ಬದಲಾವಣೆಯಿಂದಾಗಿ ಸುದ್ದಿಯಲ್ಲಿದ್ದ ಚಿತ್ರದ ಚಿತ್ರೀಕರಣಕ್ಕೆ ಈಗ ಅಲ್ಪ ವಿರಾಮ. ಶಶಾಂಕ್ ನಿರ್ದೇಶನ, ನಿರ್ಮಾಣ ಎಂಬ ಕಾರಣಕ್ಕಾಗಿಯೇ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ, ಶೇ.50ರಷ್ಟು ಚಿತ್ರೀಕರಣ ಮುಗಿಸಿದೆ. 

    ಈ ಮಧ್ಯೆ ಸಾಹಸ ದೃಶ್ಯವೊಂದರ ಚಿತ್ರೀಕರಣ ವೇಳೆ ನಾಯಕ ನಟ ಅಜೇಯ್ ರಾವ್, ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಶೂಟಿಂಗ್‍ಗೆ ಅಲ್ಪವಿರಾಮ. ಅಜೇಯ್ ರಾವ್‍ಗೆ ವಿಶ್ರಾಂತಿ.

    ಏಪ್ರಿಲ್ 2ನೇ ವಾರದಿಂದ ಮತ್ತೊಮ್ಮೆ ಚಿತ್ರೀಕರಣ ಶುರುವಾಗಲಿದೆ. ಸುಮಲತಾ ಅಂಬರೀಷ್ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿ.

  • ನಿಮ್ಮ ಲವ್ ಸ್ಟೋರಿ ನಿರ್ದೇಶಕ ಶಶಾಂಕ್`ಗೆ ಹೇಳಿ..

    ನಿಮ್ಮ ಲವ್ ಸ್ಟೋರಿ ನಿರ್ದೇಶಕ ಶಶಾಂಕ್`ಗೆ ಹೇಳಿ..

    ಮೊಗ್ಗಿನ ಮನಸು, ಸಿಕ್ಸರ್, ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಕೃಷ್ಣ ಲೀಲಾ.. ಹೀಗೆ ವೆರೈಟಿ ವೆರೈಟಿ ಲವ್ ಸ್ಟೋರಿಗಳನ್ನು ಕನ್ನಡ ಪ್ರೇಕ್ಷಕರ ಮುಂದಿಟ್ಟಿದ್ದ ನಿರ್ದೇಶಕ ಶಶಾಂಕ್ ಈಗ ಪ್ರೇಕ್ಷಕರ ಲವ್ ಸ್ಟೋರಿ ಕೇಳೋಕೆ ಹೊರಟಿದ್ದಾರೆ. ಶಶಾಂಕ್ ಈಗ ಲವ್ 360 ಅನ್ನೋ ಸಿನಿಮಾವನ್ನು ಬಹುತೇಕ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದಾರೆ.

    ಪ್ರವೀಣ್ ಅನ್ನೋ ಹೊಸ ಹುಡುಗ ಮತ್ತು ರಚನಾ ಇಂದರ್, ಕಾವ್ಯ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಆ ಚಿತ್ರದ ಒಂದು ಹಾಡು ಸಂಜಿತ್ ಹೆಗ್ಡೆ ಹಾಡುತ್ತಿದ್ದಾರೆ. ಆ ಹಾಡಿನಲ್ಲಿ ನಿಮ್ಮ ಕಥೆ  ಬಳಸಿಕೊಳ್ತಾರೆ ಶಶಾಂಕ್.

    ನೀವು ಪ್ರೇಮಿಸಿ ಮದುವೆಯಾಗಿರಬೇಕು. ಅಡೆತಡೆಗಳನ್ನು ದಾಟಿ ಗೆದ್ದಿರಬೇಕು. ಆ ಕಥೆಯನ್ನು ನೀವು ಪುಟ್ಟದಾಗಿ ಒಂದು ನಿಮಿಷದ ವಿಡಿಯೋ ಮಾಡಿ ಕಳಿಸಬೇಕು. +91 8618043067 ಈ ನಂಬರ್‍ಗೆ ವಾಟ್ಸಪ್ ಮಾಡಿದರೆ ಆಯಿತು. ಶಶಾಂಕ್ ತಮ್ಮ ಚಿತ್ರದ ಸಂಜಿತ್ ಹೆಗ್ಡೆ ಹಾಡಿನ ಪ್ರಮೋಷನ್‍ನಲ್ಲಿ ನಿಮ್ಮದೇ ಕಥೆ ಬಳಸಿಕೊಳ್ತಾರೆ..

  • ನಿರ್ದೇಶಕ ಶಶಾಂಕ್ ಬಗ್ಗೆ ಶಿವಣ್ಣ ಹೇಳಿದ್ದೇನು?

    ನಿರ್ದೇಶಕ ಶಶಾಂಕ್ ಬಗ್ಗೆ ಶಿವಣ್ಣ ಹೇಳಿದ್ದೇನು?

    ನಿರ್ದೇಶಕ ಶಶಾಂಕ್ ಅವರ ಜೊತೆ ಕೆಲಸ ಮಾಡಬೇಕು ಅನ್ನೋದು ನನ್ನ ಬಹುದಿನಗಳ ಕನಸು. ನನಗೆ ಅವರು ಕಥೆ ಹೇಳೋ ಶೈಲಿ ಇಷ್ಟ. ಇವರು ಬೇರೆ ನಿರ್ದೇಶಕರ ಹಾಗಲ್ಲ. ಮೊದಲು ಕಥೆ ಸಿದ್ಧ ಮಾಡಿಕೊಂಡು ನಂತರ ಅದಕ್ಕೆ ಸೂಟ್ ಆಗುವ ಕಲಾವಿದರಿಗಾಗಿ ಹುಡುಕಾಡುತ್ತಾರೆ. ಅದಕ್ಕೇ ಇವರು ನಿಗಿಷ್ಟ..

    ಇದು ನಿರ್ದೇಶಕ ಶಶಾಂಕ್ ಬಗ್ಗೆ ಶಿವಣ್ಣ ಹೇಳಿರೊ ಮಾತು. ಶಶಾಂಕ್ ಅವರ ಲವ್ 360 ಚಿತ್ರ ಇದೇ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ. ಹೀಗಾಗಿ ಚಿತ್ರದ ಪ್ರಚಾರ ಹಮ್ಮಿಕೊಂಡಿರೋ ಶಶಾಂಕ್ ಇಂದು ಟ್ರೇಲರ್ ಹೊರತರುತ್ತಿದ್ದಾರೆ. ಆ ಟ್ರೇಲರ್`ನ್ನು ನೋಡಿಯೇ ಶಿವಣ್ಣ ಶಶಾಂಕ್ ಅವರನ್ನು ಹೊಗಳಿದ್ದಾರೆ.

    ಎಲ್ಲರ ನಟನೆ ಚೆನ್ನಾಗಿದೆ. ಹೀರೋ ಹೊಸಬ ಎಂದು ಅನಿಸುತ್ತಿಲ್ಲ. ನಾಯಕ ನಾಯಕಿ ಇಬ್ಬರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಶಶಾಂಕ್ ಸ್ವಲ್ಪ ಟ್ರಿಕ್ಕಿಯಾಗಿ ಏನೋ ಹೊಸ ಕಥೆ ಹೇಳುತ್ತಿದ್ದಾರೆ. ಅಲ್ಲೇನೋ ಲವ್ ಸ್ಟೋರಿ ಇದೆ. ಒಂದು ಮಿಷನ್ ಫೈಟ್ ಎಲ್ಲವೂ ಇದೆ. ಇದು ಖಂಡಿತಾ ಬೇರೆಯದೇ ಸ್ಟೈಲ್ ಸ್ಟೋರಿ. ನಾನಂತೂ ಚಿತ್ರವನ್ನು ಥಿಯೇಟರಿನಲ್ಲೇ ನೋಡುತ್ತೇನೆ ಎಂದಿದ್ದಾರೆ ಶಿವಣ್ಣ.

  • ಪುಣ್ಯಾತ್ಮ ಉಪೇಂದ್ರ

    punyathma image

    ಕರ್ನಾಟಕದವರ ಪಾಲಿಗೆ ಪುಣ್ಯಾತ್ಮ ಎಂಬ ಮಾತು ಕೇಳಿದ ಕೂಡಲೇ ರಾಹುಲ್ ಗಾಂಧಿ ನೆನಪಾಗಿಬಿಡುತ್ತಾರೆ. ರಾಹುಲ್ ಗಾಂಧಿಗೆ ಅಂಥಾದ್ದೊಂದು ಬಿರುದು ನೀಡಿದ್ದವರು ಮಾಜಿ ಸಿಎಂ ಕುಮಾರಸ್ವಾಮಿ. ಆದರೆ ಚಿತ್ರಲೋಕಕ್ಕೂ  ರಾಜಕೀಯಕ್ಕೂ ಎತ್ತಣಿಂದೆಣ ಸಂಬಂಧ. ಹೀಗಾಗಿ ನಾವ್ ಹೇಳ್ತಿರೋದು ಸಿನಿಮಾ ಪುಣ್ಯಾತ್ಮನ ಬಗ್ಗೆ.

    ಕನ್ನಡದ ಸ್ಟಾರ್ ನಿರ್ದೇಶಕ ಶಶಾಂಕ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗುತ್ತಿದ್ದು, ಆ ಚಿತ್ರಕ್ಕೆ ಶಶಾಂಕ್ ಪುಣ್ಯಾತ್ಮ ಅನ್ನೋ ಟೈಟಲ್ ಕೊಟ್ಟಿದ್ದಾರೆ.

    you_tube_chitraloka1.gif

    ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿರುವ ಶಶಾಂಕ್, ಈಗ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಶಶಾಂಕ್ ತರಾತುರಿಯಲ್ಲಿ ಸಿನಿಮಾ ಮಾಡುವ ಜಾಯಮಾನದವರಲ್ಲ. ಪಕ್ಕಾ ಪ್ಲಾನ್ ಮಾಡುವ ಡೈರೆಕ್ಟರ್. ಹೀಗಾಗಿ ಎಲ್ಲವನ್ನೂ ಸಿದ್ಧ ಮಾಡಿಕೊಂಡು ನವೆಂಬರ್ ಹೊತ್ತಿಗೆ ಶೂಟಿಂಗ್ ಶುರು ಮಾಡಲಿದ್ದಾರೆ.

  • ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360

    ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360

    ಲವ್ 360. ಇದೇ ಶುಕ್ರವಾರ ರಿಲೀಸ್ ಆಗಿದ್ದ ಸಿನಿಮಾ. ಶಶಾಂಕ್ ನಿರ್ದೇಶನವಿದ್ದ ಕಾರಣಕ್ಕೆ ನಿರೀಕ್ಷೆಯೂ ಜೋರಾಗಿತ್ತು. ಹೊಸಬರಾದ ಪ್ರವೀಣ್ ಮತ್ತು ರಚನಾ ಇಂದರ್ ನಾಯಕ ನಾಯಕಿಯರಾಗಿದ್ದ ಚಿತ್ರ ಲವ್ 360 ಬಗ್ಗೆ ಟ್ರೆಂಡಿಂಗ್ ಕೂಡಾ ಇತ್ತು. ಅದರಲ್ಲೂ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯಗೀತೆಯಾಗಿತ್ತು. ಆದರೆ ಮೊದಲ 2 ದಿನ ನಿರೀಕ್ಷೆಗೆ ತಕ್ಕಂತೆ ಜನರೇ ಬಂದಿರಲಿಲ್ಲ. ಆಗ ನಿರ್ದೇಶಕ ಶಶಾಂಕ್ ಪ್ರೇಕ್ಷಕರಿಗೆ ಮನವಿ ಮಾಡಿದ್ದರು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನೋಡಿ. ನೀವು ಬರದೇ ಹೊದರೆ ಥಿಯೇಟರಿಂದ ತೆಗೆಯುತ್ತಾರೆ. ನೀವು ಖಂಡಿತಾ ಇಷ್ಟಪಡುತ್ತೀರಿ. ಜಗವೇ ನೀನು ಗೆಳತಿಯೇ ಹಾಡು ಇರುವ ಸಿನಿಮಾ ಇದು ಎಂದು ಕೇಳಿಕೊಂಡಿದ್ದರು. ಶಶಾಂಕ್ ಮನವಿ ಕೆಲಸ ಮಾಡಿದೆ. ಈಗ ಚಿತ್ರ ಗೆಲುವಿನ ಹಾದಿಗೆ ಬಂದಿದೆ.

    ನಾನು ಪ್ರೇಕ್ಷಕರನ್ನು ದೂರುವುದಿಲ್ಲ. ಚಿತ್ರ ನೋಡಿದವರೆಲ್ಲ ಮೆಚ್ಚಿಕೊಂಡಿರುವಾಗ ಜನರು ಬಾರದೇ ಇದ್ದದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದ್ದಂತೂ ನಿಜ. ಆದರೆ ಈಗ ಪಿಕಪ್ ಆಗಿದೆ. ಬೆಂಗಳೂರು, ದಾವಣಗೆರೆ, ವಿಜಯಪುರ ಸೇರಿದಂತೆ ಎಲ್ಲ ಕಡೆ ಉತ್ತಮ ರೆಸ್ಪಾನ್ಸ್ ಇದೆ ಎಂದಿದ್ದಾರೆ ಶಶಾಂಕ್.

    ಸೆಕೆಂಡ್ ಹಾಫ್‍ನಲ್ಲಿ 1.10 ನಿಮಿಷ ಇದೆ. ಆದರೆ ಅಷ್ಟೂ ಅವಧಿಯಲ್ಲಿರೋದು ಕೇವಲ 30 ನಿಮಿಷ ಡೈಲಾಗ್. ಉಳಿದದ್ದೆಲ್ಲವನ್ನೂ ದೃಶ್ಯಗಳೇ ಹೇಳುತ್ತವೆ. ಇದು ಥಿಯೇಟರ್ ಪ್ರೇಕ್ಷಕರಿಗಾಗಿಯೇ ಮಾಡಿರುವ ಸಿನಿಮಾ. ಜನ ನೋಡಲಿಲ್ಲ, ಇಷ್ಟ ಪಡಲಿಲ್ಲ ಎಂದಾಗ ನಾನು ಜನರನ್ನು ದೂರುವುದಿಲ್ಲ. ಆದರೆ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂದು ದೂರುವವರು ಖಂಡಿತಾ ಈ ಚಿತ್ರ ನೋಡಿ ಎಂದಿದ್ದಾರೆ ಶಶಾಂಕ್.

    ಲವ್ 360 ಕೇವಲ ಲವ್ ಸ್ಟೋರಿಯಲ್ಲ. ಅಲ್ಲೊಂದು ಕ್ರೈಂ ಮತ್ತು ಥ್ರಿಲ್ಲರ್ ಸ್ಟೋರಿಯೂ ಇದೆ. ಪ್ರೇಕ್ಷಕರು ನಿಧಾನವಾಗಿಯೇ ಥಿಯೇಟರಿಗೆ ಬರುತ್ತಿದ್ದು, ಚಿತ್ರ ಗೆಲುವಿನ ಹಾದಿಗೆ ಬಂದಿರುವುದು ತಂಡದ ಖುಷಿ ಹೆಚ್ಚಿಸಿದೆ.

    ಇತ್ತೀಚೆಗೆ ಬಾಲಿವುಡ್‍ನಲ್ಲಿ ನಮ್ಮ ಚಿತ್ರ ಇಷ್ಟವಾಗದಿದ್ದರೆ ನೊಡಬೇಡಿ ಎಂಬ ಅಹಂಕಾರ ಮಾತುಗಳನ್ನಾಡಿ ಚಿತ್ರದ ಕಲೆಕ್ಷನ್ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರೀತಿಯ ಮನವಿಗೆ ಖಂಡಿತಾ ಪ್ರೇಕ್ಷಕರು ಸ್ಪಂದಿಸುತ್ತಾರೆ. ಮತ್ತದು ಒಳ್ಳೆಯ ಸಿನಿಮಾ ಆಗಿದ್ದರೆ ಚಿತ್ರವನ್ನೂ ಗೆಲ್ಲಿಸುತ್ತಾರೆ ಎಂಬುದಕ್ಕೆ ಲವ್ 360 ಸಾಕ್ಷಿ.

  • ಪ್ರೇಮಿಗಳ ಕಥೆಯೋ.. ಸೇಡಿನ ಕಥೆಯೋ.. ಲವ್ 360 ಎಂಥ ಕಥೆ?

    ಪ್ರೇಮಿಗಳ ಕಥೆಯೋ.. ಸೇಡಿನ ಕಥೆಯೋ.. ಲವ್ 360 ಎಂಥ ಕಥೆ?

    ಟ್ರೇಲರ್ ನೋಡಿದವರಿಗೆ ಅಷ್ಟೂ ಕುತೂಹಲ ಹುಟ್ಟಿಸದಿದ್ದರೆ ಹೇಗೆ..? ನಿರ್ದೇಶಕ ಶಶಾಂಕ್ ಟ್ರೇಲರಿನಲ್ಲೇ ಒಂದು ಗಟ್ಟಿ ಕಥೆಯ ಸುಳಿವು ಕೊಟ್ಟಿದ್ದಾರೆ. ಅಲ್ಲಿ ಇಬ್ಬರು ಪ್ರೇಮಿಗಳು. ಅವಳು ಚೆನ್ನಾಗಿದ್ದಾಳೆಯೋ.. ಮಾನಸಿಕ ಅಸ್ವಸ್ಥೆಯೋ.. ಆಥವಾ ಬುದ್ದಿ ಬೆಳವಣಿಗೆಯಾಗದ ಯುವತಿಯೋ.. ಕುತೂಹಲ ಉಳಿಸುತ್ತಾರೆ ಶಶಾಂಕ್. ಮಧ್ಯೆ ಮಧ್ಯೆ ಅವಳನ್ನು ಗುಣಮುಖಳನ್ನಾಗಿ ಮಾಡಿಸಲು ನಾಯಕ ಪಡುವ ಯಾತನೆ.. ಮಧ್ಯದಲ್ಲೊಂದು ಫೈಟ್.. ಅಲ್ಲೇನೋ ನಡೆಯಬಾರದ್ದು ನಡೆದು ಹೀರೋ ಸೇಡು ತೀರಿಸಿಕೊಳ್ಳುತ್ತಿರಬಹುದಾ..? ಮತ್ತೊಂದು ಕುತೂಹಲ..

    ಲವ್ 360 ಚಿತ್ರದ ಟ್ರೇಲರ್.. ಹೀರೋ ಪ್ರವೀಣ್ ಹೊಸಬ. ನಾಯಕಿ ರಚನಾ ಇಂದರ್. ಲವ್ ಮಾಕ್ಟೇಲ್`ನ ಹೆಂಗೆ ನಾವು ಚೆಲುವೆ. ಅಭಿನಯ ಮಾತ್ರ.. ಹೃದಯ ಮುಟ್ಟುವಂತಿದೆ. ಏಕೆಂದರೆ ಅದು ಶಶಾಂಕ್ ಗರಡಿ. ತಮ್ಮದೇ ಬ್ಯಾನರ್‍ನಲ್ಲಿ ಹೊಸ ಹೀರೋನನ್ನು ಪರಿಚಯಿಸುತ್ತಿರೋ ಶಶಾಂಕ್ ಜೊತೆ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಡಾ.ಮಂಜುಳಾ ಮೂರ್ತಿ. ಈಗಾಗಲೇ ಅರ್ಜುನ್ ಜನ್ಯಾ ಅವರ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯ ಮುಟ್ಟಿದೆ. ಸಿನಿಮಾ ಆಗಸ್ಟ್ 19ಕ್ಕೆ ಬರುತ್ತಿದೆ. ಕೆಆರ್‍ಜಿ ಸ್ಟುಡಿಯೋಸ್ ಲವ್ 360ಯನ್ನು ದೇಶದಾದ್ಯಂತ ವಿತರಿಸುತ್ತಿದೆ.

  • ಪ್ರೇಮಿಗಳ ಹಬ್ಬ ಲವ್ 360ಗೆ 25 ದಿನ

    ಪ್ರೇಮಿಗಳ ಹಬ್ಬ ಲವ್ 360ಗೆ 25 ದಿನ

    ಶಶಾಂಕ್ ನಿರ್ದೇಶನದ ಪ್ರವೀಣ್-ರಚನಾ ಇಂದರ್ ನಟನೆಯ ಕ್ಯೂಟ್ ಲವ್ ಸ್ಟೋರಿ ಲವ್ 360. ಪ್ರೇಮಿಗಳ ಹಬ್ಬವಾದ ಈ ಲವ್ ಸ್ಟೋರಿ ಯಶಸ್ವಿಯಾಗಿದೆ. ಇಬ್ಬರು ಮುಗ್ಧ ಪ್ರೇಮಿಗಳ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗಿದೆಯಷ್ಟೇ ಅಲ್ಲ, ಯಶಸ್ವಿ 25 ದಿನ ಪೂರೈಸಿದೆ. ಪಿಕ್ ಅಪ್ ಆಗಲು ಸಮಯ ತೆಗೆದುಕೊಂಡರೂ ಸ್ಲೋಮೋಷನ್ ಹಿಟ್ ಹಾದಿಗೆ ಬಂದ ಚಿತ್ರ ಲವ್ 360.

    ಒಲವೇ ನೀನು ಗೆಳತಿಯೇ.. ಹಾಡು, ರಚನಾ ಇಂದರ್ ಮುಗ್ಧತೆ, ಪ್ರವೀಣ್ ಪ್ರೀತಿಯ ತೀವ್ರತೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರಕ್ಕೆ ಬೇರೆ ಭಾಷೆಗಳಲ್ಲೂ ಬೇಡಿಕೆ ಸೃಷ್ಟಿಯಾಗಿದ್ದು ರೀಮೇಕ್ ಬೇಡಿಕೆ ಬಂದಿದೆ. ಲವ್ 360ಯನ್ನು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ.

    ಚಿತ್ರವನ್ನು ಗೆಲುವಿನ ಹಾದಿಗೆ ತಂದವರು ಪ್ರೇಕ್ಷಕರೇ. ಸಿನಿಮಾ ನೋಡಿದವರು ಮೆಚ್ಚಿದವರು ಮಾಡಿದ ಬಾಯಿಮಾತಿನ ಪ್ರಚಾರವೇ ಲವ್ 360 ಚಿತ್ರದ ಬಗ್ಗೆ  ಇಡೀ ಚಿತ್ರರಂಗ ಮಾತನಾಡುವಂತೆ ಮಾಡಿದೆ. ಈಗ ಯಶಸ್ವಿ 25 ದಿನವನ್ನೂ ಪೂರೈಸಿ ಮುನ್ನುಗ್ಗುತ್ತಿದೆ.

  • ಭಟ್-ಶಶಾಂಕ್ ಸಿನಿಮಾಗೆ ರಚಿತಾ ರಾಮ್

    rachita in bhat shashank's movie

    ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟಿçಗೆ ಬಂದು ಕೆಲವು ವರ್ಷಗಳೇ ಆಗಿವೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿರುವ ರಚಿತಾ ರಾಮ್, ಕನ್ನಡದ ಈ ಇಬ್ಬರೂ ಸ್ಟಾರ್ ಡೈರೆಕ್ಟರ್ ಚಿತ್ರಗಳಲ್ಲಿ ನಟಿಸಿರಲಿಲ್ಲ. ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರ ಚಿತ್ರಗಳಲ್ಲೂ ರಚಿತಾ ರಾಮ್ ಇರಲಿಲ್ಲ. ಈಗ ಸಮಯ ಕೂಡಿ ಬಂದಿದೆ. ಭಟ್ಟರು ಮತ್ತು ಶಶಾಂಕ್ ಇಬ್ಬರೂ ಒಟ್ಟಿಗೇ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.

    ರಿಷಿ ನಾಯಕರಾಗಿರುವ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಚಿತ ಇಲ್ಲಿ ಇಂಗ್ಲೆAಡಿನಿAದ ವಾಪಸ್ ಆದ ಎನ್‌ಆರ್‌ಐ ಪಾತ್ರದಲ್ಲಿದ್ದರೆ, ರಿಷಿ ಪಕ್ಕಾ ಲೋಕಲ್ ಹುಡುಗ. ರಿಷಿ ಜೊತೆಯಲ್ಲೂ ರಚಿತಾಗಿದು ಫಸ್ಟ್ ಸಿನಿಮಾ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಇದ್ದಾರೆ.

    ಚಿತ್ರಕ್ಕೆ ಭಟ್ಟರ ಕ್ಯಾಂಪಿನ ಹುಡುಗ ಮೋಹನ್ ಸಿಂಗ್ ನಿರ್ದೇಶಕರಾಗಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.

  • ಮತ್ತೆ ಒಂದಾದ ಅಜೇಯ್ ಶಶಾಂಕ್ ಜೋಡಿ

    ಮತ್ತೆ ಒಂದಾದ ಅಜೇಯ್ ಶಶಾಂಕ್ ಜೋಡಿ

    ಅಜೇಯ್ ರಾವ್ ಮತ್ತು ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ಕೃಷ್ಣ ಸಿರೀಸ್‍ನಲ್ಲಿ ಅಜೇಯ್ ಮತ್ತು ಶಶಾಂಕ್ ಜೋಡಿ ಸೋತಿದ್ದೇ ಇಲ್ಲ. ಈಗ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ಹಾಗಂತ, ಆ ಚಿತ್ರಕ್ಕೆ ಶಶಾಂಕ್ ಡೈರೆಕ್ಟರ್ ಅಲ್ಲ. ಕಥೆಗಾರ. ಅಜೇಯ್ ರಾವ್ ಹೀರೋ. ನಿರ್ದೇಶಕರಾಗಿರೋದು ಶಂಕರ್ ಅನ್ನೋ ಹುಡುಗ. ಆತ ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಶಿಷ್ಯ.

    ತಮ್ಮಲ್ಲಿ ಸಹಾಯಕರಾಗಿದ್ದ ಹುಡುಗರನ್ನು ಲಾಂಚ್ ಮಾಡುವ ಕ್ಯಾಂಪೇನ್‍ನ್ನೇ ಮಾಡುತ್ತಿರುವಂತಿದೆ ಗುರು ದೇಶಪಾಂಡೆ. ಈ ಬಾರಿ ಶಂಕರ್ ಅವರಿಗೆ ಡೈರೆಕ್ಟರ್ ಸೀಟ್ ಕೊಟ್ಟಿದ್ದಾರೆ. ಜನವರಿ 24ರಂದು ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸ್ಟಾರ್ ಹೀರೋಯಿನ್ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಇದ್ದು, ಮಾತುಕತೆ ನಡೆಯುತ್ತಿದೆಯಂತೆ.

  • ಮೊಗ್ಗಿನ ಮನಸ್ಸು ಶಶಾಂಕ್`ಗೆ ಥ್ಯಾಂಕ್ಯೂ ಹೇಳಿದ ರಚ್ಚು

    ಮೊಗ್ಗಿನ ಮನಸ್ಸು ಶಶಾಂಕ್`ಗೆ ಥ್ಯಾಂಕ್ಯೂ ಹೇಳಿದ ರಚ್ಚು

    ಲವ್ ಯೂ ರಚ್ಚು ಚಿತ್ರ ಇನ್ನೇನು ರಿಲೀಸ್ ಆಗೋಕೆ ರೆಡಿ. ಡಿ.31ಕ್ಕೆ ರಿಲೀಸ್ ಆಗಲಿರೋ ಚಿತ್ರ ಒಂದಿಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದೆ. ಚಿತ್ರೀಕರಣ ವೇಳೆ ನಡೆದ ಅಪಘಾತದ ಕಥೆ ಒಂದೆಡೆಯಾದರೆ, ಚಿತ್ರ ರಿಲೀಸ್ ಡೇಟ್ ಅನೌನ್ಸ್ ಆದ ಮೇಲೆ ಗುರು ದೇಶಪಾಂಡೆ, ಅಜಯ್ ರಾವ್ ಮಧ್ಯೆ ಶುರುವಾದ ಮನಸ್ತಾಪ ಇನ್ನೊಂದು ಕಡೆ. ಚಿತ್ರವನ್ನು ಡೈರೆಕ್ಟ್ ಮಾಡಿದ್ದೇ ನಾನು ಅನ್ನೋ ಅರ್ಥದಲ್ಲಿ ಅಜಯ್ ರಾವ್ ಮಾತನಾಡಿದ್ದಾರೆ. ಹಾಗಾದರೆ ಶಂಕರ್ ಎಸ್.ರಾಜ್ ಪಾತ್ರವೇನು?

    ಜೊತೆಗೆ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಸ್ವತಃ ನಿರ್ದೇಶಕ. ಯಶಸ್ವೀ ಚಿತ್ರಗಳನ್ನು ಕೊಟ್ಟ ದಾಖಲೆ ಇರುವವರು. ಅವರೇ ನಿರ್ಮಾಪಕರಾಗಿ ತಮ್ಮ ಚಿತ್ರಕ್ಕೆ ತಮ್ಮ ಅಸಿಸ್ಟೆಂಟ್ ಆಗಿದ್ದ ಶಂಕರ್ ಎಸ್.ರಾಜ್ ಅವರಿಗೆ ನಿರ್ದೇಶನ ಕೊಟ್ಟಿದ್ದಾರೆ. ಜೊತೆಗೆ ಚಿತ್ರದ ಕ್ರಿಯೇಟಿವ್ ಹೆಡ್ ಕೂಡಾ ಅವರೇ. ಇದೆಲ್ಲದರ ಮಧ್ಯೆ ರಚಿತಾ ರಾಮ್ ಥ್ಯಾಂಕ್ಸ್ ಹೇಳಿರೋದು ನಿರ್ದೇಶಕ ಶಶಾಂಕ್ ಅವರಿಗೆ. ಮೊಗ್ಗಿನ ಮನಸ್ಸು ಶಶಾಂಕ್ ಅವರಿಗೆ.

    ನನಗೆ ಶಶಾಂಕ್ ಸರ್ ಚಿತ್ರದಲ್ಲಿ ನಟಿಸೋ ಆಸೆ ಇತ್ತು. ಅವರ ಮೊಗ್ಗಿನ ಮನಸ್ಸು, ಬಚ್ಚನ್, ಕೃಷ್ಣಲೀಲಾ.. ಹೀಗೆ ಹಲವು ಚಿತ್ರಗಳು ನನಗೆ ಇಷ್ಟ. ಈ ಚಿತ್ರಕ್ಕೆ ಕಥೆ ಬರೆದಿರುವುದು ಅವರು. ಅವರ ನಿರ್ದೇಶನದಲ್ಲಿ ನಟಿಸಿದ್ದಷ್ಟೇ ಖುಷಿ ಅವರ ಸ್ಕ್ರಿಪ್ಟ್ ಇರೋ ಚಿತ್ರದಲ್ಲಿ ಸಿಕ್ಕಿದೆ. ಇದು ಅವರು ಅಜಯ್ ರಾವ್ ಅವರಿಗಾಗಿಯೇ ಬರೆದ ಕಥೆ. ಅವರ ಚಿತ್ರದಲ್ಲಿ ನಾಯಕಿಗೂ ಪ್ರಾಮುಖ್ಯತೆ ಇರುತ್ತೆ. ನನಗೆ ಆ ಅವಕಾಶ ಸಿಕ್ಕಿದೆ. ಥ್ಯಾಂಕ್ಯೂ ಶಶಾಂಕ್ ಸರ್ ಎಂದಿದ್ದಾರೆ ರಚಿತಾ ರಾಮ್.

  • ಲವ್ 360 ಲಾಸ್ ಆಗಲಿಲ್ಲ... ಆದರೆ..

    ಲವ್ 360 ಲಾಸ್ ಆಗಲಿಲ್ಲ... ಆದರೆ..

    ಲವ್ 360. ಪ್ರೇಕ್ಷಕರಿಗೆ ಪ್ರೀತಿಯ ಬೇರೆಯದೇ ಅನುಭವ ನೀಡಿದ ಚಿತ್ರ. ಒಲವೇ ನೀನು ಗೆಳತಿಯೇ.. ಹಾಡಂತೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋಗಿತ್ತು. ರಚನಾ ಇಂದರ್ ಮತ್ತು ಪ್ರವೀಣ್ ಅಭಿನಯದ ಸಿನಿಮಾ ಪ್ರೀತಿಯ ಬೇರೊಂದು ಎತ್ತರವನ್ನು ತೋರಿಸಿತ್ತು. ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಚಿತ್ರ, ಶಶಾಂಕ್ ಮನವಿಯ ನಂತರ ಮೇಲೆದ್ದಿತ್ತು. ಸಿನಿಮಾ ಲಾಭದ ಹಳಿಗೆ ಬಂದಿತ್ತು.

    ಲವ್ 360 ಸಿನಿಮಾ ಕೈ ಕಚ್ಚಲಿಲ್ಲ. ನಷ್ಟವಂತೂ ಆಗಲಿಲ್ಲ. ಸಿನಿಮಾ ಬಿಡುಗಡೆಗೆ ಮುನ್ನವೇ ಹಾಕಿದ ಬಂಡವಾಳದ ಶೇ.75ರಷ್ಟು ಹಣ ಬಂದಿತ್ತು. ಉಳಿದ ಶೇ.25ರಷ್ಟು ಬಂಡವಾಳ ಥಿಯೇಟರಿಂದ ಬರಬೇಕಿತ್ತು. 2ನೇ ವಾರ ಚಿತ್ರ ಪಿಕಪ್ ಆಯಿತು. ಆದರೆ.. ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಅನ್ನೋದಷ್ಟೇ ಬೇಸರ ಎನ್ನುತ್ತಾರೆ ಶಶಾಂಕ್.

    ಲವ್ 360 ಮುಗಿದ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಜೊತೆ ಮೊದಲೇ ಘೋಷಿಸಿದ್ದಂತೆ ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ಇನ್ನೊಂದೆರಡು ಮೂರು ದಿನಗಳಲ್ಲಿ ನಾಯಕಿಯ ಫೈನಲೈಸ್ ಮಾಡುತ್ತೇವೆ. ಇದು ನನ್ನ ಬ್ಯಾನರ್‍ನಲ್ಲೇ ತಯಾರಾಗುವ ಸಿನಿಮಾ. ಕ್ಯಾನ್‍ವಾಸ್ ದೊಡ್ಡದು. ಅದ್ಧೂರಿ ಬಜೆಟ್ ಅಂತೂ ಇರುತ್ತೆ ಎಂದಿದ್ದಾರೆ ಶಶಾಂಕ್.

  • ಲವ್ 360ಗೆ ಎಬಿಡಿ ಸ್ಫೂರ್ತಿಯಾಗಿದ್ದು ಹೇಗೆ?

    ಲವ್ 360ಗೆ ಎಬಿಡಿ ಸ್ಫೂರ್ತಿಯಾಗಿದ್ದು ಹೇಗೆ?

    ಲವ್ 360. ಈಗ ಥಿಯೇಟರಿನಲ್ಲಿರೋ ಸಿನಿಮಾ. ಈ ಸಿನಿಮಾಗು ಕ್ರಿಕೆಟ್ ಲೋಕದ ದಂತಕಥೆ ಎಬಿ ಡಿವಿಲಿಯರ್ಸ್‍ಗೂ ಏನು ಸಂಬಂಧ ಎಂದು ತಲೆಗೆ ಹುಳ ಬಿಟ್ಕೋಬೇಡಿ. ಅದನ್ನ ಖುದ್ದು ಶಶಾಂಕ್ ಅವರೇ ಹೇಳಿಕೊಂಡಿದ್ದಾರೆ.

    ಹೇಳಿಕೇಳಿ ಶಶಾಂಕ್ 14 ವರ್ಷಗಳ ನಂತರ ಹೊಸಬರಿಗಾಗಿ ನಿರ್ದೇಶಿಸಿರೋ ಸಿನಿಮಾ ಲವ್ 360. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಯಶ್-ರಾಧಿಕಾ ಪಂಡಿತ್‍ರನ್ನು ತೆರೆಗೆ ತಂದು ಗೆಲ್ಲಿಸಿದ್ದು ಇವರೇ. ಈಗ 14 ವರ್ಷಗಳ ನಂತರ ಮತ್ತೊಮ್ಮೆ ಹೊಸಬರ ಚಿತ್ರ ಸಿದ್ಧ ಮಾಡಿದ್ದಾರೆ. ಲವ್ 360.

    ಈ ಚಿತ್ರದಲ್ಲೂ ಅಷ್ಟೆ, ಹೀರೋ ಪ್ರವೀಣ್ ಅವರನ್ನು ಖುದ್ದು ಶಶಾಂಕ್ ಅವರೇ ಪರಿಚಯಿಸುತ್ತಿದ್ದಾರೆ. ನಾಯಕಿ ರಚನಾ ಇಂದರ್ ಹೆಂಗೆ ನಾವು ಖ್ಯಾತಿಯ ಚೆಲುವೆ. ಎರಡು ಚಿತ್ರಗಳಲ್ಲಿ ನಟಿಸಿದ್ದರೂ ಚಿತ್ರರಂಗದ ಮಟ್ಟಿಗೆ ಹೊಸ ಮುಖವೇ.

    ಚಿತ್ರದಲ್ಲಿ ಲವ್ ಸ್ಟೋರಿ ಜೊತೆ ಕ್ರೈಂ, ಥ್ರಿಲ್ಲರ್ ಕೂಡಾ ಇದೆ. ಹೀಗಾಗಿ ಚಿತ್ರಕ್ಕೆ ಯಾವ ಟೈಟಲ್ ಇಡಬೇಕು ಎಂದು ಯೋಚಿಸುತ್ತಿದ್ದಾಗ ಕಣ್ಣ ಮುಂದೆ ಬಂದಿದ್ದು ಎಬಿಡಿ. ಕ್ರಿಕೆಟ್‍ನಲ್ಲಿ ಅವರನ್ನ ಮಿಸ್ಟರ್ 360 ಎಂದು ಕರೆಯುತ್ತಾರೆ. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಲವ್ 360 ಅನ್ನೋ ಟೈಟಲ್ ಇಟ್ಟೆ ಎಂದಿದ್ದಾರೆ ಶಶಾಂಕ್.

    ಎಬಿಡಿ ಹೇಗೆ ಮೈದಾನದ ಎಲ್ಲ ಮೂಲೆಗಳಿಗೂ.. ಎಂತಹುದೇ ಬಾಲಿಗೂ ಹೊಡೆಯುತ್ತಾರೋ..  ಅದೇ ರೀತಿ ಚಿತ್ರದ ಲವ್ ಸ್ಟೋರಿ. ನಾಯಕ ನಾಯಕಿಯನ್ನು ಹೇಗೇ ಇದ್ದರೂ ಪ್ರೀತಿಸುತ್ತಾನೆ ಎನ್ನುತ್ತಾರೆ ಶಶಾಂಕ್. ಚಿತ್ರವನ್ನು ಅರ್ಜುನ್ ಜನ್ಯ ಮ್ಯೂಸಿಕ್ ಮತ್ತು ಅಭಿಲಾಷ್ ಕಳತಿಯವರ ಸಿನಿಮಾಟೋಗ್ರಫಿ ಚಿತ್ರವನ್ನು ಇನ್ನೊಂದು ಲೆವೆಲ್ಲಿಗೆ ಏರಿಸಿದೆ ಎಂದು ಖುಷಿಯಾಗಿದ್ದಾರೆ ನಿರ್ಮಾಪಕರೂ ಆಗಿರುವ ಶಶಾಂಕ್.

  • ಶಶಾಂಕ್ ಹುಡುಕಿದ ಹೀರೋ ಡಾಕ್ಟರ್

    ಶಶಾಂಕ್ ಹುಡುಕಿದ ಹೀರೋ ಡಾಕ್ಟರ್

    ಶಶಾಂಕ್, ಕನ್ನಡದ ಸ್ಟಾರ್ ನಿರ್ದೇಶಕರಷ್ಟೇ ಅಲ್ಲ, ಸ್ಟಾರ್ ಕಲಾವಿದರನ್ನು ಹುಟ್ಟುಹಾಕುವ ಕಲಾವಿದರು. ಹೊಸ ಪ್ರತಿಭೆಗಳನ್ನು ಹುಡುಕುವುದರಲ್ಲಿ ನಿಷ್ಣಾತರಾಗಿರುವ ಶಶಾಂಕ್, ಈ ಬಾರಿಯೂ ಹೊಸದೊಂದು ಪ್ರತಿಭೆಯನ್ನು ಹುಡುಕಿ ಹೀರೋ ಮಾಡುತ್ತಿದ್ದಾರೆ.

    ಜೂನ್‍ನಿಂದ ಶುರುವಾಗಲಿರುವ ಎಮೋಷನಲ್ ಲವ್ ಸ್ಟೋರಿಗೆ ಶಶಾಂಕ್ ಹುಡುಕಿರುವ ಹೀರೋ ಪ್ರವೀಣ್. ಈತ ವೃತ್ತಿಯಲ್ಲಿ ಡಾಕ್ಟರ್ ಎನ್ನುವುದು ವಿಶೇಷ. ಶಶಾಂಕ್ ಅವರ ಹೊಸ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲವಾದರೂ, ಕಥೆ ಫೈನಲ್ ಆಗಿದೆ. ಅರ್ಜುನ್ ಜನ್ಯಾ ಮ್ಯೂಸಿಕ್ ಎನ್ನುವುದೂ ಫೈನಲ್ ಆಗಿದೆ. ಶಶಾಂಕ್, ಮೊಗ್ಗಿನ ಮನಸ್ಸು ನಂತರ ಫ್ರೆಶ್ ಫೇಸ್ ಇಟ್ಟುಕೊಂಡೇ ಮಾಡುತ್ತಿರುವ ಸಿನಿಮಾ ಇದು.