` p vasu - chitraloka.com | Kannada Movie News, Reviews | Image

p vasu

  • Dwarkish's 52nd Film To Be Directed By P Vasu

    dwarkish's 52nd film will be directed by p vasu

    Dwarkish's 51st film 'Amma I Love You' is running successful all over. Meanwhile, Dwarkish is all set to launch his 52nd film and the film will be directed by P Vasu.

    Recently, actor Shivarajakumar had said that he will be acting in Dwarkish's production and will be allocating dates in 2019. So, Dwarkish has roped in P Vasu to direct the film starring Shivarajakumar. As of now, only P Vasu has been finalised and more details about the film is yet awaited.

    Earlier, P Vasu had directed 'Apthamitra' for Dwarkish. The film starring Dr Vishnuvardhan, Ramesh Aravind, Soundarya and others was a blockbuster and had ran for one year. After that, Dwarkish and P Vasu are joining hands for the venture starring Shivarajakumar.

  • Shivarajakumar and P Vasu to Work Again

    robinhood image

    After the success of 'Shivalinga', actor Shivarajakumar and director P Vasu has decided to work once more. The new film is likely to be titled as 'Robinhood'. Shivarajakumar was talking to few media persons on Monday afternoon and he himself confirmed that he will be doing another film with P Vasu.

    'We have decided to do another film together and when we were discussing about the title, I suggested the name 'Robin Hood'. Vasu also liked the title very much' said Shivarajakumar.

    As of now, it is not yet confirmed about when the film would start, as both are busy with their prior commitments.

  • ಆಪ್ತಮಿತ್ರ ವಾಸುಗೂ ತಟ್ಟಿತು ಸಾವಿನ ಬಿಸಿ..!

    p vasu's death hoax

    ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಎಲ್ಲ ರಂಗಗಳಲ್ಲೂ ಸಾವಿನ ವದಂತಿಗಳ ಕಾರುಬಾರು ಜೋರಾಗಿಬಿಟ್ಟಿದೆ. ಕನ್ನಡದ ಹಲವು ಹಿರಿಯ ನಟರು, ಗಾಯಕ, ಗಾಯಕಿಯರ ಸಾವಿನ ಸುದ್ದಿಯನ್ನು ಅದ್ಯಾರು ಹಬ್ಬಿಸ್ತಾರೋ ಗೊತ್ತಿಲ್ಲ, ಕನ್‍ಫರ್ಮೇಷನ್‍ಗಾಗಿ ಹುಡುಕಾಡಿದವರು ಬೇಸ್ತು ಬೀಳೋದು ಮಾತ್ರ ಖಚಿತ. ಇಂತಹ ಸಾವಿನ ಸುದ್ದಿಯ ವದಂತಿಗೆ ಸಿಕ್ಕಿದ್ದವರು ನಿರ್ದೇಶಕ ಪಿ.ವಾಸು.

    ಆಪ್ತಮಿತ್ರ, ಆಪ್ತರಕ್ಷಕ, ಆರಕ್ಷಕ, ದೃಶ್ಯ, ಶಿವಲಿಂಗ.. ಮೊದಲಾದ ಹಿಟ್ ಚಿತ್ರಗಳನ್ನು ಕೊಟ್ಟಿರುವ ಪಿ.ವಾಸು ಅವರು ಮೊನ್ನೆ ಮೊನ್ನೆಯಷ್ಟೇ ಈ ಸಾವಿನ ವದಂತಿಗೆ ಸಿಕ್ಕು ನರಳಿದ್ದಾರೆ. ಆಗ ತಾನೇ ಜಿಮ್‍ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿ ಉಸ್ಸಪ್ಪಾ ಎಂದು ಬಂದು ಕುಳಿತವರಿಗೆ ಮೊಬೈಲ್ ತುಂಬಾ ಮೆಸೇಜುಗಳು. ಏನಿದು ಅಂಥಾ ನೋಡಿದರೆ, ಅವರ ಸಾವಿನ ಸುದ್ದಿ.

    ಸುದ್ದಿ ನೋಡಿ ನಗುವುದು ಬಿಟ್ಟು ಬೇರೇನೂ ಮಾಡೋಕೆ ಆಗಲಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಈ ವರ್ಷ 3 ಸಿನಿಮಾ ನಿರ್ದೆಶನ ಮಾಡಲಿದ್ದೇನೆ. ಕಾಳಜಿ ತೋರಿದವರಿಗೆಲ್ಲ ಧನ್ಯವಾದಗಳು ಎಂದಿದ್ದಾರೆ ಪಿ.ವಾಸು.

  • ಪಿ.ವಾಸು ಬೇಸರಕ್ಕೆ ಕಾರಣವಾಯ್ತು ರಚಿತಾ ರಾಮ್ ಆಡಿದ ಆ ಮಾತು

    p vasu upset over rachita ram's words

    ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚೆಗ್ಯಾಕೋ ಪದೇ ಪದೇ  ವಿವಾದಗಳಿಗೆ ಸಿಲುಕುತ್ತಿದ್ದಾರೆ. ಈ ಬಾರಿ ರಚಿತಾ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಹಿರಿಯ ನಿರ್ದೇಶಕ ಪಿ.ವಾಸು. ಆಯುಷ್ಮಾನ್ ಚಿತ್ರದ ಸುದ್ದಿಗೋಷ್ಟಿ ವೇಳೆ ರಚಿತಾ ರಾಮ್ ಆಡಿದ್ದ ಅ ಒಂದು ಮಾತಿಗೆ ಪಿ.ವಾಸು ಅಸಮಾಧಾನ ಹೊರಹಾಕಿದ್ದಾರೆ.

    ಕೆಟ್ಟದ್ದಕ್ಕೂ.. ಒಳ್ಳೆಯದ್ದಕ್ಕೂ ನಾನೇ ಕಾರಣವಂತೆ. ಇದೆಲ್ಲ ಹೇಗೆ ಹೇಳೋಕೆ ಸಾಧ್ಯ..? ರಚಿತಾ ರಾಮ್ ಅವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ ವಾಸು. ಇಷ್ಟೆಲ್ಲ ಆಗಿಯೂ ಚಿತ್ರದಲ್ಲಿ ರಚಿತಾ ಒಳ್ಳೆಯ ಅಭಿನಯ ನೀಡಿದ್ದಾರೆ ಅನ್ನೋದನ್ನು ಮರೆಯೋದಿಲ್ಲ. ಪ್ರೇಕ್ಷಕರು ರಚಿತಾ ಅವರನ್ನು ಖಂಡಿತಾ ಮೆಚ್ಚಿಕೊಳ್ತಾರೆ ಎಂದಿದ್ದಾರೆ ವಾಸು.

    ಪಿ.ವಾಸು ಅವರ ಜೊತೆ ರಚಿತಾ ರಾಮ್ ಅವರಿಗೆ ಇದು ಮೊದಲ ಚಿತ್ರ. ಶಿವಣ್ಣ ಹೀರೋ ಆಗಿರುವ ಚಿತ್ರವಿದು. ದ್ವಾರಕೀಶ್ ಬ್ಯಾನರ್‍ಗೆ 50 ವರ್ಷ ತುಂಬಿರುವ ಈ ಹೊತ್ತಿನಲ್ಲಿ ಅವರ ಬ್ಯಾನರ್‍ನ 52ನೇ ಸಿನಿಮಾ ತೆರೆಗೆ ಬರುತ್ತಿದೆ. ನವೆಂಬರ್ 1ರಂದು ರಿಲೀಸ್ ಆಗುತ್ತಿದೆ ಆಯುಷ್ಮಾನ್ ಭವ.

  • ಮತ್ತೆ ಆನಂದ್ ಆಗ್ತಾರಾ ಶಿವಣ್ಣ..?

    shivanna, p vasu's movie titled ?

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಮೊದಲ ಚಿತ್ರ ಆನಂದ್. ಅದು ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಸಿನಿಮಾ. ಈಗ ಮತ್ತೊಮ್ಮೆ ಅದೇ ಟೈಟಲ್‍ನಲ್ಲಿ ಶಿವರಾಜ್‍ಕುಮಾರ್ ಸಿನಿಮಾ ಮಾಡಲಿದ್ದಾರಾ ಅನ್ನೋ ಕುತೂಹಲ ಹುಟ್ಟಿದೆ. ಅದಕ್ಕೆ ಕಾರಣವಾಗಿರೋದು ಪಿ.ವಾಸು.

    ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಶಿವರಾಜ್‍ಕುಮಾರ್, ಶಿವಲಿಂಗ ನಂತರ ಮತ್ತೊಮ್ಮೆ ಪಿ.ವಾಸು ಜೊತೆ ಸೇರಿದ್ದಾರೆ. ಪಿ.ವಾಸು ಆಪ್ತಮಿತ್ರದ ನಂತರ ದ್ವಾರಕೀಶ್ ಬ್ಯಾನರ್‍ಗೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಆನಂದ್ ಅನ್ನೋ ಟೈಟಲ್ ಇಟ್ಟರೆ ಹೇಗೆ ಅನ್ನೋ ಚಿಂತನೆ ಶುರುವಾಗಿದೆ.

    ಸದ್ಯಕ್ಕೆ ಅದು ಅಂತಿಮವಾಗಿಲ್ಲವಂತೆ. ಆನಂದ್ ಮತ್ತು ಅಮರೇಂದ್ರ ಎಂಬ 2 ಶೀರ್ಷಿಕೆಗಳನ್ನಿಟ್ಟುಕೊಂಡು ಚಿತ್ರತಂಡ ಪ್ಲಾನ್ ಮಾಡುತ್ತಿದೆ. ಎರಡರಲ್ಲಿ ಯಾವುದು ಫೈನಲ್..? ಶೀಘ್ರದಲ್ಲೇ ನಿರೀಕ್ಷಿಸಿ.

  • ಶಿವಣ್ಣ ಆನಂದ್ ಆಗೋದು ಗ್ಯಾರಂಟಿ..!

    shivanna will be anand once again

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮತ್ತೊಮ್ಮೆ ಆನಂದ್ ಆಗುತ್ತಿದ್ದಾರೆ. ಆಗ್ತಾರೆ ಬಿಡಿ.. ಈ ಏಜ್‍ನಲ್ಲೂ ಅದೇ ಜೋಷ್ ಇಟ್ಕೊಂಡಿಲ್ವಾ ಎಂದು ಅಭಿಮಾನಿಗಳು ಹೇಳ್ತಾರೆ ಬಿಡಿ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಚಿತ್ರಕ್ಕೆ ಆನಂದ್ ಅನ್ನೋ ಟೈಟಲ್ ಇಡೋಕೆ ನಿರ್ಧಾರ ಮಾಡಲಾಗಿದೆ.

    ಆಪ್ತಮಿತ್ರ, ಆಪ್ತರಕ್ಷಕ, ಶಿವಲಿಂಗ, ದೃಶ್ಯ ಖ್ಯಾತಿಯ ಪಿ.ವಾಸು ನಿರ್ದೇಶನದ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ರೆಡಿಯಾಗಿದೆಯಂತೆ. ನವೆಂಬರ್ 9ಕ್ಕೆ ಚಿತ್ರದ ಮುಹೂರ್ತವೂ ಫಿಕ್ಸ್ ಆಗಿದೆ. ಆದರೆ, ಅನಂದ್ ಅನ್ನೋ ಟೈಟಲ್‍ನ್ನು ಬೇರೊಬ್ಬರು ರಿಜಿಸ್ಟರ್ ಮಾಡಿಸಿದ್ದಾರೆ. ಇದು ಗಮನಕ್ಕೆ ಬಂದ ಮೇಲೆ ಶಿವಣ್ಣ, ಆನಂದ್ ಟೈಟಲ್‍ನ್ನು ನಾನೇ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರಂತೆ. ತಮ್ಮ ಅಭಿನಯದ ಮೊದಲ ಸಿನಿಮಾದ ಟೈಟಲ್ ಮೇಲೆ ಒಂದಿಷ್ಟು ಪ್ರೀತಿ ಜಾಸ್ತಿ ಇರೋದು ಸಹಜವೇ ಬಿಡಿ.

    ಶಿವರಾಜ್‍ಕುಮಾರ್ ಅವರೇ ಟೈಟಲ್ ಕೊಡಿಸೋ ಭರವಸೆ ಕೊಟ್ಟಿದ್ದಾರೆ. ನವೆಂಬರ್ 9ಕ್ಕೆ ಮುಹೂರ್ತ ಫಿಕ್ಸ್ ಎಂದಿದ್ದಾರೆ ನಿರ್ಮಾಪಕ ಯೋಗಿ ದ್ವಾರಕೀಶ್. ಇದೊಂದು ಲವ್ ಸ್ಟೋರಿಯಾಗಿದ್ದು, ರಚಿತಾ ರಾಮ್ ಇದೇ ಮೊದಲ ಬಾರಿಗೆ ಶಿವಣ್ಣಂಗೆ ಜೋಡಿಯಾಗುತ್ತಿದ್ದಾರೆ.