` ragini dwivedi, - chitraloka.com | Kannada Movie News, Reviews | Image

ragini dwivedi,

  • ರಾಗಿಣಿಗೀಗ ಹಿಂದಿಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು..!

    the terrorist image

    ಕೆಲವೊಮ್ಮೆ ಹೀಗೂ ಆಗುತ್ತದೆ. ಜಗತ್ತೆಲ್ಲ ಶಾಪವಾಗಿ ಕಾಡುತ್ತಿರುವಾಗ ಇನ್ನೆಲ್ಲೋ ಬೆಳ್ಳಿ ಬೆಳಕೊಂದು ಮೂಡುವ ಹಾಗೆ.. ರಾಗಿಣಿ ಪಾಲಲ್ಲೂ ಅದು ಸತ್ಯವೇ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರೋ ರಾಗಿಣಿ, ಡ್ರಗ್ಸ್ ಕೇಸ್‍ನಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್‍ನಲ್ಲಿ ರಾಗಿಣಿ ನಟಿಸಿದ್ದ ಚಿತ್ರವೊಂದಕ್ಕೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

    2018ರಲ್ಲಿ ಪಿ.ಸಿ.ಶೇಖರ್ ನಿರ್ದೇಶನದ ದಿ ಟೆರರಿಸ್ಟ್ ಸಿನಿಮಾದಲ್ಲಿ ನಟಿಸಿದ್ದರು ರಾಗಿಣಿ. ವಿಭಿನ್ನ ಕಥೆ, ನಿರೂಪಣೆಯಿಂದ ಗಮನ ಸೆಳೆದಿದ್ದ ಚಿತ್ರ, ಬಾಕ್ಸಾಫೀಸ್‍ನಲ್ಲಿ ದೊಡ್ಡ ಯಶಸ್ಸನ್ನೇನೂ ಕಂಡಿರಲಿಲ್ಲ. ಆ ಸಿನಿಮಾಗೀಗ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

    ಎಕೆಲಾನ್ ಪ್ರೊಡಕ್ಷನ್ಸ್‍ನ ನಿರ್ಮಾಪಕ ವಿಶಾಲ್ ರಾಣಾ ಎಂಬುವವರು ಈ ಚಿತ್ರದ ರೀಮೇಕ್ ರೈಟ್ಸ್ ಖರೀದಿಸಿದ್ದಾರೆ. ವಿದ್ಯಾ ಬಾಲನ್ ಅಥವಾ ಸೋನಮ್ ಕಪೂರ್ ಹಿಂದಿಯಲ್ಲಿ ಈ ಚಿತ್ರದಲ್ಲಿ ನಟಿಸುವ ಸಾಧ್ಯತೆಗಳಿವೆ.

  • ರಾಗಿಣಿಯ ಗೌನ್.. ರಾಗಿಣಿಯಷ್ಟೇ ಸ್ಪೆಷಲ್..!

    what is the secret of ragini's gown

    ರಾಗಿಣಿ ದ್ವಿವೇದಿ ಅಂದ್ರೆ ತುಪ್ಪದ ಹುಡುಗಿ ಅಂತಾರೆ ಜನ. ಆದರೆ, ರಾಗಿಣಿ ಬ್ಯೂಟಿ ಸಿಕ್ಕಾಪಟ್ಟೆ ಸ್ಪೆಷಲ್. ಅಷ್ಟೇ ಸ್ಪೆಷಲ್ಲಾಗಿದೆ ಅವರು ತೊಟ್ಟಿರೋ ಈ ಗೌನ್. ಈ ಗೌನ್‍ನ್ನ ಡಿಸೈನ್ ಮಾಡಿರೋದು ರಾಗಿಣಿ ಅವರ ತಮ್ಮ ರುದ್ರಾಕ್ಷ.

    ಒಂದು ಕ್ಯಾಲೆಂಡರ್‍ಗಾಗಿ ಡಿಸೈನ್ ಮಾಡಿರೋ ಈ ಗೌನ್‍ನ್ನ 9 ಜನರ ತಂಡ ಸಿದ್ಧಪಡಿಸಿದೆ. ಹೂಗಳ ಗುಚ್ಛದಂತೆಯೇ ಕಾಣುವ ಈ ಗೌನ್ ತಯಾರಿಗೆ 1 ತಿಂಗಳು ಟೈಂ ತೆಗೆದುಕೊಂಡಿದ್ದಾರಂತೆ. ಹಾಗಂತ ಇದರ ಬೆಲೆ ಸೆಲಬ್ರಿಟಿಗಳ ಗೌನ್ ಬೆಲೆಗೆ ಹೋಲಿಸಿದ್ರೆ, ತುಂಬಾ ಜಾಸ್ತಿಯಿಲ್ಲ. 1 ಲಕ್ಷದ ಒಳಗೇ ಇದೆ. 7 ಕೆಜಿ ತೂಕದ ಈ ಗೌನ್‍ನ್ನ ಹಾಕ್ಕೊಂಡು ಫೋಟೋಶೂಟ್ ಮಾಡಲಾಗಿದೆ. ಅದೂ ಬರೋಬ್ಬರಿ 3 ತಿಂಗಳು.

    ತುಪ್ಪದ ಹುಡುಗಿ ರಾಗಿಣಿಯನ್ನ ಇನ್ಮುಂದೆ ಹೂ ಹುಡುಗಿ ಅನ್ನಬಹುದು.

  • ರಾಣನಿಗೆ ಜೊತೆಯಾದ ರಾಗಿಣಿ

    ragini image

    ರಾಣ. ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಾಯಕರಾಗಿರೋ ಸಿನಿಮಾ. ನಂದಕಿಶೋರ್ ನಿರ್ದೇಶನದ ಚಿತ್ರಕ್ಕೀಗ ರಾಗಿಣಿ ದ್ವಿವೇದಿ ಎಂಟ್ರಿ ಕೊಟ್ಟಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಚಿತ್ರದ ನಾಯಕಿಯರು. ಇಬ್ಬರು ಹೀರೋಯಿನ್ ಇರೋವಾಗ ರಾಗಿಣಿಗೇನು ಕೆಲಸ ಅಂತೀರಾ..?

    ರಾಗಿಣಿ ಚಿತ್ರದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಕಾ ನಿನ್ ಮಗ್ಳು ನಂಗೆ ಚಿಕ್ಕೋಳಾಗಲ್ವಾ.. ಹಾಡಿನ ಮೂಲಕ ಹಿಂದೊಮ್ಮೆ ಕಿಚ್ಚು ಹಚ್ಚಿದ್ದರು ರಾಗಿಣಿ. ಅದೇ ನಂದಕಿಶೋರ್ ಚಿತ್ರದಲ್ಲಿ.. ಆ ಹಾಡು ಬರೆದಿದ್ದ ಶಿವು ಭೇರ್ಗಿಯವರೇ ಹೊಸ ಹಾಡು ಬರೆದಿದ್ದು, ರಾಗಿಣಿ ಆ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಚಿತ್ರಕ್ಕೆ ಸಂಗೀತ ನೀಡುತ್ತಿರೋದು ಚಂದನ್ ಶೆಟ್ಟಿ.

  • ರಾಮನವಮಿ ವಿಶೇಷ - ಬಾಲಕಿಯರ ಪಾದಪೂಜೆ ಮಾಡಿದ ರಾಗಿಣಿ

    ragini dwivedi does kanya pooje on ramnavami

    ನಾವು ಶ್ರೀರಾಮನವಮಿಯಂದು ಬೆಲ್ಲದ ಹಣ್ಣಿನ ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿ, ರಾಮ ಪೂಜೆ ಮಾಡುತ್ತೇವೆ. ಕೆಲವೆಡೆ ರಾವಣ ದಹನ ನಡೆಯುತ್ತೆ. ಹನುಮನ ಪೂಜೆ ನಡೆಯುತ್ತೆ. ಪಂಜಾಬಿಗಳಲ್ಲಿ ಇನ್ನೂ ಒಂದು ಸಂಪ್ರದಾಯವಿದೆ. ಆ ದಿನ ಕನ್ಯಾಪೂಜೆ ನಡೆಯುತ್ತೆ. ಪುಟ್ಟ ಪುಟ್ಟ ಬಾಲಕಿಯೇ ಆ ದಿನ ಪಂಜಾಬಿಗಳ ಪಾಲಿಗೆ ದೇವತೆಯರು. ಪುಟ್ಟ ಮಕ್ಕಳನ್ನು ಅಲಂಕರಿಸಿ ಅವರ ಪಾದ ಪೂಜೆ ಮಾಡುವ ವಿಶೇಷ ಸಂಪ್ರದಾಯವಿದೆ.

    ಮೂಲತಃ ಪಂಜಾಬಿಯವರೇ ಅದ ರಾಗಿಣಿ ದ್ವಿವೇದಿ, ಶ್ರೀರಾಮನವಮಿಯಂದು ಈ ರೀತಿ ಬಾಲಕಿಯರ ಪಾದ ಪೂಜೆ ಮಾಡಿದ್ದಾರೆ. ಪುಟ್ಟ ಮಕ್ಕಳಿಗೆ ಮುದ್ದಾದ ಉಡುಗೊರೆ ಕಟ್ಟು ಕಳುಹಿಸಿದ್ದಾರೆ.

  • ವಿಲನ್‍ಗೆ ಟೆರರಿಸ್ಟ್ ಚಾಲೆಂಜ್

    the terrorist release opposite the villain

    ದಿ ವಿಲನ್. ಶಿವರಾಜ್ ಕುಮಾರ್ ಮತ್ತು ಸುದೀಪ್ ಕಾಂಬಿನೇಷನ್‍ನ ಸಿನಿಮಾ. ಸಿ.ಆರ್.ಮನೋಹರ್ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಹಲವಾರು ಸಿನಿಮಾಗಳು ದಾರಿ ಮಾಡಿಕೊಟ್ಟಿವೆ. ಆ ದಿನವೇ ರಾಗಿಣಿ ದ್ವಿವೇದಿ ಅಭಿನಯದ ದಿ ಟೆರರಿಸ್ಟ್ ಸಿನಿಮಾ ರಿಲೀಸ್ ಆಗುತ್ತಿದೆ.

    ನಾವು ಪ್ಲಾನ್ ಪ್ರಕಾರವೇ ಬರುತ್ತಿದ್ದೇವೆ. ಯಾವತ್ತೇ ರಿಲೀಸ್ ಮಾಡಿದ್ರೂ ಒಂದಲ್ಲ ಒಂದು ಸಿನಿಮಾ ಜೊತೆ ಸ್ಪರ್ಧೆ ಮಾಡಲೇಬೇಕು. ಅಕ್ಟೋಬರ್ 18 ಬಿಟ್ಟರೆ, ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಅಕ್ಟೋಬರ್ 18ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

    ದಿ ಟೆರರಿಸ್ಟ್ ಸಿನಿಮಾ ಬೆಂಗಳೂರಿನಲ್ಲಿ ನಡೆಯುವ ಸ್ಫೋಟ, ಮುಸ್ಲಿಂ ಮಹಿಳೆಯೊಬ್ಬಳ ಕಥೆಯಾಗಿದ್ದು, ಯು ಸರ್ಟಿಫಿಕೇಟ್ ಪಡೆದಿರುವ ಚಿತ್ರ. 

  • ವಿಶ್ವಾಸ ಕಳೆದುಕೊಂಡಿಲ್ಲ. ಪಾಸಿಟಿವ್ ಆಗಿದ್ದೇನೆ - ರಾಗಿಣಿ ದ್ವಿವೇದಿ

    ವಿಶ್ವಾಸ ಕಳೆದುಕೊಂಡಿಲ್ಲ. ಪಾಸಿಟಿವ್ ಆಗಿದ್ದೇನೆ - ರಾಗಿಣಿ ದ್ವಿವೇದಿ

    ಅನಿರೀಕ್ಷಿತವಾಗಿ ಡ್ರಗ್ಸ್ ಕೇಸ್‍ನಲ್ಲಿ ಜೈಲು ಸೇರಿದ್ದ ನಟಿ ರಾಗಿಣಿ ದ್ವಿವೇದಿ, ಜಾಮೀನಿನ ಮೇಲೆ ಹೊರಬಂದಿದ್ದಾರೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿರೋ ರಾಗಿಣಿ, ಹಂತ ಹಂತವಾಗಿ ಓಪನಪ್ ಆಗುತ್ತಿದ್ದಾರೆ. ಹೆತ್ತವರೊಂದಿಗೆ ಒಂದು ತಿಂಗಳು ತಡವಾಗಿ ನ್ಯೂ ಇಯರ್ ಸೆಲಬ್ರೇಟ್ ಮಾಡಿದ್ದ ರಾಗಿಣಿ, ನಂತರ ದೇವಸ್ಥಾನಗಳಿಗೆ ತೆರಳಿದ್ದರು. ಮಳಿಗೆಯೊಂದರ ಉದ್ಘಾಟನೆಗೂ ಹೋಗಿದ್ದ ರಾಗಿಣಿ, ಅಕ್ಕಿಪೇಟೆಯಲ್ಲಿರೋ ದರ್ಗಾಗೆ ಭೇಟಿ ಕೊಟ್ಟಿದ್ದಾರೆ.

    ನಾನು ಜೀವನದಲ್ಲಿ ಪಾಸಿಟಿವ್ ಆಗಿದ್ದೇನೆ. ವಿಶ್ವಾಸದಿಂದ ಬಂದಿದ್ದನ್ನು ಎದುರಿಸುತ್ತಿದ್ದೇನೆ. ಶೀಘ್ರದಲ್ಲೇ ಸಿನಿಮಾಗಳಲ್ಲಿಯೂ ನಟಿಸುತ್ತೇನೆ. ಹಿಂದೆ ಕಮಿಟ್ ಆಗಿದ್ದ ಸಿನಿಮಾಗಳನ್ನು ಕಂಪ್ಲೀಟ್ ಮಾಡುತ್ತೇನೆ. ನಂಬಿಕೆಯೇ ಜೀವನ ಎಂದಿದ್ದಾರೆ ರಾಗಿಣಿ.

  • ಶರಣ್ ಇದ್ರೆ ರಾಗಿಣಿ ಅದೊಂದನ್ನು ತೆಗೆದಿಟ್ಟು ಬರ್ತಾರೆ..!

    ragini always takes care of her slipper while she is with ragini

    ರಾಗಿಣಿ ದ್ವಿವೇದಿ, ತುಪ್ಪದ ಹುಡುಗಿ. ಕೆಲವು ವರ್ಷಗಳ ಹಿಂದೆ ಅಧ್ಯಕ್ಷ ಶರಣ್‍ಗೆ ಅಕ್ಕನ ಮಗಳಾಗಿದ್ದ ರಾಗಿಣಿ,  ಈಗ ಅಧ್ಯಕ್ಷ ಅಮೆರಿಕಕ್ಕೆ ಹೋಗಿದ್ದೇ ತಡ.. ಜೊತೆಗಾತಿಯಾಗಿದ್ದಾರೆ. ರಾಗಿಣಿಗೆ ಹೋಲಿಸಿದ್ರೆ.. ಶರಣ್ ಕುಳ್ಳ. ಹೀಗಾಗಿ ರಾಗಿಣಿ, ಶರಣ್ ಇದ್ರೆ ಹೈ ಹೀಲ್ಡ್ ತೆಗೆದಿಟ್ಟು ಬರ್ತಾರಂತೆ.

    ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಸುದ್ದಿಗೋಷ್ಟಿಯಲ್ಲೂ ಅಷ್ಟೆ, ಹೈ ಹೀಲ್ಡ್‍ನ್ನೇ ಹಾಕಿಕೊಂಡು ಬಂದಿದ್ದವರಿಗೆ ತಕ್ಷಣ ಶರಣ್ ಇರುವುದು ನೆನಪಾಗಿ ಹೈಹೀಲ್ಡ್ ಬಿಚ್ಚಿಟ್ಟರಂತೆ.

    ಶರಣ್ ಅವರದ್ದು ಟ್ಯಾಲೆಂಟ್ ಪವರ್ ಹೌಸ್ ಎನ್ನುವ ರಾಗಿಣಿ, ನನ್ನ ಅವರ ಸ್ನೇಹ 10 ವರ್ಷಕ್ಕೂ ಹೆಚ್ಚು ಹಳೆಯದು. ನನ್ನ ಕೆರಿಯರ್‍ನಲ್ಲೇ ಫಸ್ಟ್ ಟೈಂ ಕಾಮಿಡಿ ಮಾಡಿದ್ದೇನೆ. ಚೆನ್ನಾಗಿ ಬಂದಿದೆ ಎನ್ನುವುದು ನನ್ನ ನಂಬಿಕೆ. ಉಳಿದದ್ದು ಪ್ರೇಕ್ಷಕರು ಹೇಳಬೇಕು ಎನ್ನುತ್ತಾರೆ.

    ಅಧ್ಯಕ್ಷ ಇನ್ ಅಮೆರಿಕ ಅಕ್ಟೋಬರ್ ಮೊದಲ ವಾರ ರಿಲೀಸ್ ಆಗುತ್ತಿದೆ. ಯೋಗಾನಂದ್ ಮುದ್ದಾನ್ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ವಿಶ್ವಪ್ರಸಾದ್ ನಿರ್ಮಾಪಕ.

  • ಶರಣ್ ಹೀರೋ.. ರಾಗಿಣಿ ಹೀರೋಯಿನ್.. ಏನಂದ್ರು ಫ್ಯಾನ್ಸು..?

    adhykasha in america movie image

    ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಚಿತ್ರದ ಟೀಸರ್, ಹಾಡುಗಳು ಹೊರಬರುತ್ತಿದ್ದಂತೆಯೇ ಟ್ರೆಂಡ್ ಸೃಷ್ಟಿಸುತ್ತಿವೆ. ರಾಗಿಣಿಯಂತೂ ಮುದ್ದು ಮುದ್ದಾಗಿ ಕಾಣುತ್ತಿದ್ದು, ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

    ಆದರೆ, ಎಲ್ಲ ಕಡೆಯಲ್ಲೂ ಅಭಿಮಾನಿಗಳು ಕಿಚಾಯಿಸುತ್ತಿರುವುದು ಶರಣ್ ಅವರನ್ನೇ. ಏಕೆಂದರೆ ರಾಗಿಣಿ ನಾಯಕಿಯಾಗಿದ್ದ ಕೆಂಪೇಗೌಡ, ಆರಕ್ಷಕ ಮೊದಲಾದ ಚಿತ್ರಗಳಲ್ಲಿ ಶರಣ್ ಕಾಮಿಡಿಯನ್ ಆಗಿದ್ದರು. ಈಗ ಅದೇ ರಾಗಿಣಿ, ಶರಣ್‍ಗೆ ಹೀರೋಯಿನ್.

    ಹಾಗೆಂದು ರಾಗಿಣಿ, ಶರಣ್ ಜೊತೆ ನಟಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆ ವಿಕ್ಟರಿ ಚಿತ್ರದಲ್ಲಿ ರಾಗಿಣಿ ಸ್ಪೆಷಲ್ ಸಾಂಗಿಗೆ ಹೆಜ್ಜೆ ಹಾಕಿದ್ದರು. ಈಗ ನಾಯಕಿಯೇ ಆಗಿ ಬಂದಿದ್ದಾರೆ.

    ಆದರೂ.. ಏನ್ ಅದೃಷ್ಟಾರೀ ಶರಣ್ ನಿಮ್ದು ಎಂದು ಕಿಚಾಯಿಸುತ್ತಲೇ ಇದ್ದಾರೆ ಫ್ಯಾನ್ಸ್. ಯೋಗಾನಂದ್ ನಿರ್ದೇಶನದ ಅಧ್ಯಕ್ಷ ಇನ್ ಅಮೆರಿಕ ಅಕ್ಟೋಬರ್ 4ರಂದು ರಿಲೀಸ್ ಆಗುತ್ತಿದೆ.

  • ಶೂಟಿಂಗ್ ವೇಳೆ ಅಪಘಾತ, ರಾಗಿಣಿಗೆ ಗಾಯ

    ragini injured during mch movie

    ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಶೂಟಿಂಗ್ ಅಪಘಾತ ಸಂಭವಿಸಿದೆ. ಎಮ್ ಸಿ ಎಚ್ ಎಂಬ ಸಿನಿಮಾ ಶೂಟಿಂಗ್ ವೇಳೆ ರಾಗಿಣಿ ದ್ವಿವೇದಿ ಅವರ ಕಿವಿಗೆ ಏಟು ಬಿದ್ದಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನದ ಫೈಟಿಂಗ್ ದೃಶ್ಯ ಚಿತ್ರೀಕರಣದ ವೇಳೆ ಈ ಅಪಘಾತ ನಡೆದಿದೆ. ಮುಸ್ಸಂಜೆ ಮಹೇಶ್ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ನಾಯಕಿ. 

    ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸುತ್ತಿರುವ ರಾಗಿಣಿ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಪೋಲೋ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ರಾಗಿಣಿಗೆ ವೈದ್ಯರು ಎರಡು ದಿನಗಳ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಚಿತ್ರಲೋಕಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಗಿಣಿ ಅಭಿಮಾನಿಗಳು ಆತಂಕಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.

  • ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ರಾಗಿಣಿ ದಿಟ್ಟ ಹೆಜ್ಜೆ

    ragini takes initiative to help government school condition

    ಸರ್ಕಾರಿ ಶಾಲೆಗಳೆಂದರೆ ಬೋರ್ಡಿಲ್ಲ, ಬೆಂಚ್ ಇಲ್ಲ, ರೂಮ್ ಇಲ್ಲ, ಟಾಯ್ಲೆಟ್ ಇಲ್ಲ, ಮೇಷ್ಟ್ರೇ ಇಲ್ಲ.. ಹೀಗೆ ತರಹೇವಾರಿ ಪ್ರಾಬ್ಲಮ್ಮುಗಳಿರುತ್ವೆ. ಹೀಗಾಗಿಯೇ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಕಡಿಮೆಯಾಗುತ್ತಲೇ ಹೋಗುತ್ತಿದೆ. ಹೀಗಿರುವಾಗಲೇ ರಾಗಿಣಿ, ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ. 

    ಸ್ನೇಹಿತರ ಜೊತೆ ಸೇರಿಕೊಂಡು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ಕಟ್ಟಡ ನಿರ್ಮಾಣ, ಪೀಠೋಪಕರಣ ಒದಗಿಸುವುದಕ್ಕೆ ಸ್ನೇಹಿತರ ಜೊತೆ ಸೇರಿಕೊಂಡು ಆಂದೋಲನ ಶುರು ಮಾಡುತ್ತಿದ್ದಾರೆ. ಸ್ನೇಹಿತ ಅನಿಲ್ ಶೆಟ್ಟಿ, ರಾಗಿಣಿ ಜೊತೆಗೆ ಕೈ ಜೋಡಿಸಿದ್ದಾರೆ.

    ಮೊದಲು ತಮ್ಮ ಶಕ್ತ್ಯಾನುಸಾರ ಕೆಲಸ ಮಾಡುವುದು ಜೊತೆ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ನಟರು, ಸೆಲಬ್ರಿಟಿಗಳನ್ನು ಆಯಾ ಶಾಲೆಗೇ ಕರೆದುಕೊಂಡು ಹೋಗಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪ್ರೇರೇಪಿಸುವುದು ಮತ್ತು ಕಲಾವಿದರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವಂತೆ ಮಾಡುವುದು ರಾಗಿಣಿಯವರ ಉದ್ದೇಶ.

    ಹೀಗೆ ಕೆಲಸ ಮಾಡುತ್ತಲೇ ಸರ್ಕಾರಕ್ಕೆ ಶಿಕ್ಷಣ ನೀತಿ ರೂಪಿಸುವ, ಬದಲಾವಣೆ ತರುವ ಕುರಿತಂತೆ ಸಲಹೆ ನೀಡುವುದು ರಾಗಿಣಿಯವರ ಯೋಜನೆ. ರಾಗಿಣಿ ಕನಸು, ಗುರಿ ಯಶಸ್ವಿಯಾಗಲಿ.

  • ಸಲೀಮ್ ಅನಾರ್ಕಲಿ ಓಡಿ ಹೋಗ್ಬಿಟ್ರು.. ಅಧ್ಯಕ್ಷನ ಹಿಂದೆ..

    shara as salim, ragini as anarkali in adhyaksha in america

    ಸಲೀಂ ಅನಾರ್ಕಲಿ ಅಮರ ಪ್ರೇಮಿಗಳು. ಈಗ ಆ ಅಮರ ಪ್ರೇಮಿಗಳ ವೇಷದಲ್ಲಿ.. ರೂಪದಲ್ಲಿ.. ಪ್ರೇಮದ ಟಾನಿಕ್ ಕೊಡಲು ಬಂದಿದ್ದಾರೆ ಶರಣ್ ಮತ್ತು ರಾಗಿಣಿ ದ್ವಿವೇದಿ. ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

    ಸಲೀಮ್ ಅನಾರ್ಕಲಿ ಗೋಡೆ ಕಟ್ಟೋ ಟೈಮಿನಲ್ಲಿ ಕಾಂಪೌಂಡ್ ಹಾರಿ ಓಡೋಗಿರ್ಬೋದು.. ಎನ್ನುವ ಹಾಡಿನ ಮೊದಲ ಸಾಲೇ ಕಾಮಿಡಿಯ ಪರಾಕಾಷ್ಠೆ ತೋರಿಸುತ್ತಿದೆ.

    ಇಂತಹ ತರಲೆಯನ್ನು ಇನ್ಯಾರು ಅಕ್ಷರ ರೂಪಕ್ಕೆ ತಂದಿರಬಹುದು ಎಂಬ ಬಗ್ಗೆ ಅನುಮಾನವೇ ಬೇಡ. ಅದು ಯೋಗರಾಜ ಭಟ್ಟರ ಸಾಹಿತ್ಯ. ವಿ. ಹರಿಕೃಷ್ಣ ಸಂಗೀತದಲ್ಲಿ ಹಾಡಿಗೆ ಧ್ವನಿ ನೀಡಿರುವುದು ಸಂಚಿತ್ ಹೆಗ್ಡೆ. ಯೋಗಾನಂದ್ ಮದ್ದಾನ್ ನಿರ್ದೇಶನದ ಮೊದಲ ಚಿತ್ರವಿದು.

     

  • ಸಾರಿ : ರಾಗಿಣಿ ದ್ವಿವೇದಿ ರಿಟನ್ರ್ಸ್

    ಸಾರಿ : ರಾಗಿಣಿ ದ್ವಿವೇದಿ ರಿಟನ್ರ್ಸ್

    ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದ ರಾಗಿಣಿ ದ್ವಿವೇದಿ, ಅದಾದ ಮೇಲೆ ಕೆಲವು ಚಿತ್ರಗಳಿಗೆ ಸಹಿ ಮಾಡಿದ್ದರು. ಚಿತ್ರರಂಗಕ್ಕೆ ವಾಪಸ್ ಬರುವ ಸುಳಿವು ಕೊಟ್ಟಿದ್ದರು. ಈಗ ಬಂದೇಬಿಟ್ಟಿದ್ದಾರೆ. ಸಾರಿ - ಕರ್ಮ ರಿಟನ್ರ್ಸ್ ಅನ್ನೋ ಚಿತ್ರದಲ್ಲಿ ಅವರೀಗ ಹೀರೋಯಿನ್.

    ಕಿಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರೋ ಚಿತ್ರಕ್ಕೆ ಬ್ರಹ್ಮ ನಿರ್ದೇಶಕ. ಕೆನಡಾದ ನವೀನ್ ಕುಮಾರ್ ನಿರ್ಮಾಪಕ. ಅಫ್ಜಲ್ ಎಂಬುವವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಸಿದ್ಧವಾಗಲಿದೆ.

    ಶೀರ್ಷಿಕೆಯಲ್ಲಿಯೇ ಕಥೆ ಇದೆ. ನನಗಿಲ್ಲಿ ಎರಡು ಶೇಡ್‍ಗಳಿವೆ. ಡಿಫರೆಂಟ್ ಆ್ಯಕ್ಷನ್ ಸೀಕ್ವೆನ್ಸ್ ಕೂಡಾ ಇದೆ ಎಂದಿದ್ದಾರೆ ರಾಗಿಣಿ.

    ಸದ್ಯಕ್ಕೆ ರಾಗಿಣಿಗೆ ಕೈತುಂಬಾ ಚಿತ್ರಗಳಿವೆ. ಕರ್ವ 3, ಜಾನಿ ವಾಕರ್, ರಾಣಾ ಚಿತ್ರಗಳ ಚಿತ್ರೀಕರಣವೂ ನಡೆಯುತ್ತಿದೆ. ಈಗ ಸಾರಿ - ಕರ್ಮ ರಿಟನ್ರ್ಸ್.

  • ಸುರಿಯೋ ಕಣ್ಣೀರಿನ ಹಿಂದಿನ ಸ್ಕೆಚ್ಚುಗಳ ಕಥೆ..

    story behind uriyo kanneru

    ಸುರಿಯೋ ಕಣ್ಣೀರಿನ... ಎಂದು ಶುರುವಾಗುವ ಹಾಡಿದು. ಟೆರರಿಸ್ಟ್ ಚಿತ್ರದ ಈ ಹಾಡು, ಅದನ್ನು ಚಿತ್ರಿಸಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ. ರಾಗಿಣಿಯ ಮನೋಜ್ಞ ನಟನೆಯೂ ಗಮನ ಸೆಳೆಯುತ್ತಿದೆ. ಹಾಡು ಇಷ್ಟು ಚೆಂದವಾಗಿ ಬರಲು ಏನು ಕಾರಣ ಎಂಬುದರ ಹಿಂದಿನ ಸ್ಕೆಚ್ಚುಗಳ ಕಥೆ ಹೇಳಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

    ಹಾಡು ಶೂಟ್ ಮಾಡುವ ಮೊದಲೇ ಹಾಡಿನ ಪ್ರತಿ ಫ್ರೇಮ್‍ನ್ನು ಸ್ಕೆಚ್ಚುಗಳ ಮೂಲಕ ಸಿದ್ಧ ಮಾಡಿಟ್ಟುಕೊಂಡೆವು. ಹಾಗೆಯೇ ಚಿತ್ರೀಕರಿಸಿದೆವು. ಸ್ಕೆಚ್ಚುಗಳನ್ನು ಸಿದ್ಧ ಮಾಡುವಾಗಲೇ ಇಡೀ ಹಾಡು ಹೇಗೆ ಬರಬೇಕು ಅನ್ನೋದ್ರ ಸ್ಪಷ್ಟ ಕಲ್ಪನೆ ಇತ್ತು ಎಂದಿದ್ದಾರೆ ಪಿ.ಸಿ.ಶೇಖರ್.

    ಒಂದು ಹಾಡಿಗೆ ಸ್ಟೋರಿ ಬೋರ್ಡ್ ಮಾಡುವ, ಸ್ಕೆಚ್ಚುಗಳನ್ನು ಸಿದ್ಧ ಮಾಡಿಟ್ಟುಕೊಳ್ಳುವ ಪರಂಪರೆ ಮತ್ತೊಮ್ಮೆ ಶುರುವಾದಂತಿದೆ. ಅಂದಹಾಗೆ ಈ ಚಿತ್ರದಲ್ಲಿ ಹಾಡಿನಲ್ಲೂ ಕಥೆ ಮುಂದುವರೆಯುತ್ತೆ. ಅಲಂಕಾರ್ ಸಂತಾನ ನಿರ್ಮಾಣದ ಸಿನಿಮಾ, ಅಕ್ಟೋಬರ್ 18ರಂದು ರಿಲೀಸ್ ಆಗುತ್ತಿದೆ.