` nikhil gowda - chitraloka.com | Kannada Movie News, Reviews | Image

nikhil gowda

  • ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸ್ತಾರಾ ನಿಖಿಲ್ ಕುಮಾರಸ್ವಾಮಿ..?

    will it be abishek ambareesh vs nikhil gowda this elections

    ಜೆಡಿಎಸ್‍ನ ವರಿಷ್ಠರು ಟಿಕೆಟ್ ಕೊಟ್ಟರೆ, ಮಂಡ್ಯದಿಂದ ಸ್ಪರ್ಧಿಸೋಕೆ ನಾನ್ ರೆಡಿ. ಸೀತಾರಾಮ ಕಲ್ಯಾಣ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರೋ ನಿಖಿಲ್, ರಾಜಕೀಯದ ಇಂಗಿತವನ್ನೂ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಅಕಸ್ಮಾತ್ ಮಂಡ್ಯದಲ್ಲಿ ಅಭಿಷೇಕ್ ಅಂಬರೀಷ್ ಎದುರು ಸ್ಪರ್ಧಿಸಬೇಕು ಎಂದರೆ ಅದಕ್ಕೂ ಸಿದ್ಧ ಎಂದಿದ್ದಾರೆ ನಿಖಿಲ್.

    ನನ್ನ ಮತ್ತು ಅಭಿ ನಡುವೆ ಇಂದಿಗೂ ಅತ್ಯುತ್ತಮ ಸ್ನೇಹವಿದೆ. ನಾವಿಬ್ಬರೂ ಗುಡ್ ಫ್ರೆಂಡ್ಸ್. ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ನಾನು ರಾಜಕೀಯ ಫ್ಯಾಮಿಲಿಯಿಂದ ಬಂದವನು. ರಾಜಕೀಯಕ್ಕೆ ಹೋಗುವುದು ಸುಲಭವಿದ್ದರೂ, ಅಲೆಗಳ ವಿರುದ್ಧ ಈಜಲೆಂದು ಸಿನಿಮಾಗೆ ಬಂದಿದ್ದೇನೆ. ಸಿನಿಮಾದಲ್ಲಿ ಗೆಲ್ಲುತ್ತೇನೆ. ಸೀತಾರಾಮ ಕಲ್ಯಾಣ ಚಿತ್ರದ ಮೇಲೆ ವಿಶ್ವಾಸವಿದೆ ಎಂದಿದ್ದಾರೆ ನಿಖಿಲ್.

  • ಆಂಜನೇಯನನ್ನು ಕಡೆಗೂ ಬಿಟ್ಟರು ಹರ್ಷ

    harsha's next is seetharama kalyana

    ನಿರ್ದೇಶಕ ಹರ್ಷ ಅವರಿಗೂ, ಆಂಜನೇಯನಿಗೂ ಶ್ರೀರಾಮ-ಆಂಜನೇಯರಂತದ್ದೇ ಸಂಬಂಧ. ಅವರ ಸಿನಿಮಾಗಳ ಟೈಟಲ್‍ಗಳೆಲ್ಲ ಆಂಜನೇಯನ ಹೆಸರಿನವೇ. ಭಜರಂಗಿ, ವಜ್ರಕಾಯ, ಮಾರುತಿ 800 ಹಾಗೂ ಈಗ ರಿಲೀಸ್ ಆಗಬೇಕಿರುವ ಅಂಜನೀಪುತ್ರ ಎಲ್ಲವೂ ಆಂಜನೇಯನ ಇನ್ನೊಂದು ಹೆಸರೇ ಆಗಿರುವುದು ವಿಶೇಷ. ಶಿವರಾಜ್ ಕುಮಾರ್ ಜೊತೆಗಿನ ಸೆಟ್ಟೇರಬೇಕಿರುವ ಚಿತ್ರ ಮೈ ನೇಮ್ ಈಸ್ ಅಂಜಿಯಲ್ಲೂ ಆಂಜನೇಯನಿದ್ದಾನೆ.

    ಅಂಜನೀಪುತ್ರದ ನಂತರ ನಿಖಿಲ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನುವುದನ್ನು ಇದೇ ಚಿತ್ರಲೋಕದಲ್ಲಿ ಓದಿದ್ದಿರಿ. ಈಗ ನಿಖಿಲ್ ನಿರ್ದೇಶನದ ಹೊಸ ಚಿತ್ರದ ಹೆಸರು ಗೊತ್ತಾಗಿದೆ. ಸೀತಾರಾಮ ಕಲ್ಯಾಣ.

    ಅಲ್ಲಿಗೆ ಸತತ 4 ಚಿತ್ರಗಳ ನಂತರ ಹರ್ಷ, ಆಂಜನೇಯನನ್ನು ಬಿಟ್ಟು ಕೊಟ್ಟಿದ್ದಾರೆ. ಆದರೆ, ಈ ಬಾರಿ ಅವರು ಅಂಜನೇಯನ ದೇವರುಗಳಾದ ಶ್ರೀರಾಮ-ಸೀತೆಯನ್ನೇ ಚಿತ್ರದ ಟೈಟಲ್‍ನಲ್ಲಿ ತಂದಿರುವುದು ವಿಶೇಷ. 

    ಚೆನ್ನಾಂಬಿಕ ಫಿಲಂಸ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಹಳ್ಳಿಯ ಸೊಗಡಿನ ಕಥೆ ಇದೆಯಂತೆ. ನಿಖಿಲ್‍ಗೆ ತಂದೆಯಾಗಿ ಶರತ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದು, ಉಳಿದ ತಾರಾಬಳಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಚಿತ್ರಕ್ಕೆ ಇದೇ ಶುಕ್ರವಾಗ ನ.29ರಂದು ಮುಹೂರ್ತ ನಡೆಯಲಿದೆ. ಅದು ನಿಖಿಲ್‍ಗೆ 3ನೇ ಚಿತ್ರವಾಗಲಿದೆ ಎನ್ನುವುದು ಇನ್ನೊಂದು ವಿಶೇಷ.

    Related Articles :-

    ಅಂಜನೀಪುತ್ರದ ನಂತರ ನಿಖಿಲ್‍ಗೆ ಹರ್ಷ ಡೈರೆಕ್ಷನ್

  • ಇಂದು ನಿಖಿಲ್ ಕುಮಾರಸ್ವಾಮಿ-ರೇವತಿ ನಿಶ್ಚಿತಾರ್ಥ

    nikhil gowda revathi engagement today

    ಸ್ಯಾಂಡಲ್‍ವುಡ್‍ನ ಎಲಿಜಬೆಲ್ ಬ್ಯಾಚುಲರ್ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥಕ್ಕೆ ತಾಜ್ ವೆಸ್ಟ್ ಎಂಡ್‍ನಲ್ಲಿ ವೇದಿಕೆ ಸಿದ್ಧವಾಗಿದೆ. ರೇವತಿ ಜೊತೆ ವಿವಾಹ ಬಂಧನಕ್ಕೆ ಕಾಲಿಡಲು ಸಿದ್ಧವಾಗಿದ್ದಾರೆ ನಿಖಿಲ್.

    ಲೇಔಟ್ ಮಂಜುನಾಥ್ ಅವರ ಮೊಮ್ಮಗಳು ರೇವತಿ, ಎಂಸಿಎ ಪದವೀಧರೆ. ಸದ್ಯಕ್ಕೆ ನಿಖಿಲ್ ಚಿತ್ರರಂಗದಲ್ಲಿ ಬ್ಯುಸಿ. ರಾಜಕಾರದಲ್ಲೂ ಇರೋ ನಿಖಿಲ್, ಎರಡೂ ದೋಣಿಗಳ ಮೇಲೆ ಪಯಣ ಮಾಡುತ್ತಿದ್ದಾರೆ.

    ಅಂದಹಾಗೆ ಇಬ್ಬರ ಮದುವೆ ಏಪ್ರಿಲ್ 17ರಂದು ನಡೆಯಲಿದೆ. ರಾಮನಗರದಲ್ಲಿ 54 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. 

  • ಕಲ್ಯಾಣಕ್ಕಿಂತ ಮೊದಲೇ ಕುರುಕ್ಷೇತ್ರ

    nikhil kumaraswamy clears air

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಏನು ಕಾರಣ..? ಈ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗಲೆಲ್ಲ ಗಾಂಧಿನಗರದ ಗಲ್ಲಿಗಳಲ್ಲಿ ನಿಖಿಲ್‍ರತ್ತ ತೋರಿಸಲಾಗಿತ್ತು. ನಿಖಿಲ್ ಕುಮಾರಸ್ವಾಮಿಗೆ ಕುರುಕ್ಷೇತ್ರಕ್ಕಿಂತ ಮೊದಲು ತಮ್ಮ ನಾಯಕತ್ವದ ಸೀತಾರಾಮ ಕಲ್ಯಾಣ ಚಿತ್ರ ರಿಲೀಸ್ ಆಗಲಿ ಎಂಬ ಬಯಕೆಯಿದೆ. ಹೀಗಾಗಿ ಕುರುಕ್ಷೇತ್ರ ಡಬ್ಬಿಂಗ್ ಮಾಡದೆ ಸತಾಯಿಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಈ ಗಾಸಿಪ್ಪುಗಳಿಗೆ ಈಗ ಸ್ವತಃ ನಿಖಿಲ್ ಉತ್ತರ ಕೊಟ್ಟಿದ್ದಾರೆ.

    ಕುರುಕ್ಷೇತ್ರ ವಿಳಂಬಕ್ಕೆ ನಾನು ಕಾರಣ ಅಲ್ಲ. ನಿರ್ದೇಶಕರು ಯಾವಾಗ ಕರೆದರೂ ಹೋಗಿ ಡಬ್ಬಿಂಗ್ ಮಾಡಿ ಬರೋಕೆ ರೆಡಿ ಎಂದಿದ್ದಾರೆ. ಅಷ್ಟೇ ಅಲ್ಲ, ಮಹಾಭಾರತದಲ್ಲಿ ಅಭಿಮನ್ಯು ಪಾತ್ರಕ್ಕೆ ಯಾವ ಮತ್ತು ಎಷ್ಟು ಮಹತ್ವವಿದೆಯೋ.. ಚಿತ್ರದಲ್ಲಿಯೂ ಅಷ್ಟೇ ಮಹತ್ವ ಇದೆ. ಅಭಿಮನ್ಯು ಪಾತ್ರವನ್ನು ಲೆಂಗ್ತ್ ಮಾಡೋಕೆ ಅದು ಕಾಲ್ಪನಿಕ ಕಥೆಯಲ್ಲ. ಮಹಾಭಾರತದ ಕಥೆ ಎಂದಿದ್ದಾರೆ.

  • ಕುರುಕ್ಷೇತ್ರದ ಅಭಿಮನ್ಯುಗೆ ಸಿಕ್ಕಳು ಉತ್ತರೆ

    uttare found for abhimanyu

    ಕನ್ನಡದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಶುರುವಾಗಿಬಿಟ್ಟಿದೆ. ಚಿತ್ರಕ್ಕೆ ಹೊಸ ಹೊಸ ತಾರೆಯರ ಸೇರ್ಪಡೆ ನಡೆಯುತ್ತಲೇ ಇದೆ. ಈಗ ಕುರುಕ್ಷೇತ್ರದ ಅಭಿಮನ್ಯುಗೆ ಜೊತೆಗಾತಿ ಸಿಕ್ಕಿದ್ದಾರೆ. ದೆಹಲಿ ಮೂಲದ ಮಾಡೆಲ್, ಮಿಸ್ ಇಂಡಿಯಾ ವಲ್ರ್ಡ್ ಕಿರೀಟಧಾರಿಣಿಯಾಗಿದದ ಆದಿತಿ, ಅಭಿಮನ್ಯು ಪಾತ್ರಧಾರಿ ನಿಖಿಲ್‍ಗೆ ಜೋಡಿ. ಸಿನಿಮಾದಲ್ಲಿ ಆದಿತಿ ಆರ್ಯ ಉತ್ತರೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಆದಿತಿ ಸಿನಿಮಾಗೆ ಹೊಸಬರೇನೂ ಅಲ್ಲ. ತೆಲುಗಿನಲ್ಲಿ ಪುರಿ ಜಗನ್ನಾಥ್, ನಂದಮೂರಿ ಕಲ್ಯಾಣರಾಮ್ ಚಿತ್ರಗಳಲ್ಲಿ ನಟಿಸಿರುವ ಅನುಭವವಿದೆ. ಆದರೆ, ಪೌರಾಣಿಕ ಚಿತ್ರದ ಪಾತ್ರ ಸೌಂದರ್ಯದ ಜೊತೆಗೆ ವಿಶೇಷ ಅಭಿನಯ ಬೇಡುತ್ತೆ. ಹೇಗೆ ಕಾಣಬಹುದು ಉತ್ತರೆ. ಸಿನಿಮಾ ಬಿಡುಗಡೆಯಾಗುವವರೆ ಕಲ್ಪನೆಯಲ್ಲಿ ಮಾತ್ರ ನೋಡಬಹುದು.

    Related Articles :-

    ಕುರುಕ್ಷೇತ್ರಕ್ಕೆ ಯಾರೂ ಕೇಳಲಿಲ್ಲ - ರಾಣಾ ಹೇಳಿದ ಸತ್ಯ

    Sudeep Wishes Kurukshetra

    ಸಂಕ್ರಾಂತಿಗೇ ರಿಲೀಸ್ ಆಗುತ್ತೆ ದರ್ಶನ್ ಕುರುಕ್ಷೇತ್ರ..!

    ಮುನಿರತ್ನ ಕುರುಕ್ಷೇತ್ರದಲ್ಲಿ ಅವಕಾಶ - ಶಕುನಿ ರವಿಶಂಕರ್, ಧೃತರಾಷ್ಷ್ಟ್ರ ಶ್ರೀನಾಥ್​ಗೆ ಉತ್ಸಾಹವೋ ಉತ್ಸಾಹ

    ಕುರುಕ್ಷೇತ್ರದ ಮುಹೂರ್ತಕ್ಕೆ ಆಹ್ವಾನ. ಹೇಗಿದ್ದಾರೆ ಗೊತ್ತಾ ದರ್ಶನ್..?

    ಕುರುಕ್ಷೇತ್ರದಲ್ಲಿ ದರ್ಶನ್ ಜೊತೆ ನಟಿಸುತ್ತಿಲ್ಲ - ಕಾರಣ ಹೇಳಿದ ಶಿವರಾಜ್​ ಕುಮಾರ್ 

    ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

    ಕುರುಕ್ಷೇತ್ರ ಚಿತ್ರದ ಮುಹೂರ್ತ ಮುಂದೆ ಹೋಯ್ತು..!

    ದುರ್ಯೋಧನ ದರ್ಶನ್​ಗೆ ಸಿಕ್ಕನಾ ಭೀಮ..? - ಬಾಲಿವುಡ್ ಆಂಜನೇಯ ಕುರುಕ್ಷೇತ್ರದ ಭೀಮ?

  • ಕ್ರಿಸ್‍ಮಸ್`ಗೆ ಡಬಲ್ ಧಮಾಕಾ : ಬಡವ ರಾಸ್ಕಲ್ & ರೈಡರ್

    ಕ್ರಿಸ್‍ಮಸ್`ಗೆ ಡಬಲ್ ಧಮಾಕಾ : ಬಡವ ರಾಸ್ಕಲ್ & ರೈಡರ್

    ಡಿಸೆಂಬರ್ 24ರಂದ ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾಗಳ ದೊಡ್ಡ ಹಬ್ಬವೇ ಇದೆ. ಆ ದಿನ ಕನ್ನಡದಲ್ಲಿ ಇಬ್ಬರು ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗುತ್ತಿವೆ.

    ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ರಿಲೀಸ್ ಆಗುತ್ತಿದ್ದು, ಆಲ್‍ಮೋಸ್ಟ್ 2 ವರ್ಷಗಳ ನಂತರ ತೆರೆಯ ಮೇಲೆ ನಿಖಿಲ್ ಕಾಣಿಸುತ್ತಿದ್ದಾರೆ. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರ, ಲವ್ ಸ್ಟೋರಿ, ಅಪ್ಪನ ಪ್ರೀತಿ.. ಎಲ್ಲವೂ ಇದೆ. ಕಾಶ್ಮೀರ ಪರದೇಸಿ ನಾಯಕಿ.

    ಇನ್ನೊಂದೆಡೆ ವಿಭಿನ್ನವಾಗಿ ಟ್ರೆಂಡ್ ಸೃಷ್ಟಿಸಿರೋ ಬಡವ ರಾಸ್ಕಲ್. ಡಾಲಿ ಧನಂಜಯ್ ಬ್ಯಾನರಿನ ಮೊದಲ ಸಿನಿಮಾ. ಧನಂಜಯ್ ಎದುರು ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದರೆ, ರಂಗಾಯಣ ರಘು, ತಾರಾ ಮೊದಲಾದ ಸೀನಿಯರ್ ಕಲಾವಿದರು ನಟನೆಯಲ್ಲಿ ಫೈಟ್ ಕೊಟ್ಟಿದ್ದಾರೆ. ಮಿಡ್ಲ್ ಕ್ಲಾಸ್ ಲೈಫಿನ ರಾ ಸ್ಟೋರಿಯಂತೆ ಕಾಣಿಸೋ ಚಿತ್ರ ಮಿಡ್ಲ್ ಕ್ಲಾಸ್ ಹುಡುಗ, ಹುಡುಗಿಯರನ್ನು ಆಗಲೇ ಸೆಳೆಯುತ್ತಿದೆ. ಶಂಕರ್ ಗುರು ನಿರ್ದೇಶನದ ಬಡವ ರಾಸ್ಕಲ್ ಕೂಡಾ ಕ್ರಿಸ್‍ಮಸ್‍ಗೇ ಬರುತ್ತಿದೆ. ಜಸ್ಟ್ ಎಂಜಾಯ್..

  • ಚೈನೀಸ್ ವೈರಸ್ ಎಫೆಕ್ಟ್ : ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ ಮದುವೆ ಶಿಫ್ಟ್

    nikhil kumaraswamy's wedding venue moved to bangalore from ramnagar

    ನಭೂತೋ ನಭವಿಷ್ಯತಿ ಎಂಬಂತೆ ನಡೆಸಲು ಯೋಜಿಸಲಾಗಿದ್ದ ನಿಖಿಲ್ ಕುಮಾರಸ್ವಾಮಿ ಮದುವೆಗೆ ಚೈನೀಸ್ ವೈರಸ್ ಬ್ರೇಕ್ ಹಾಕಿದೆ. ಏಪ್ರಿಲ್ 17ರಂದು ರಾಮನಗರದಲ್ಲಿ 100 ಎಕರೆ ಜಾಗದಲ್ಲಿ ನಡೆಯಬೇಕಿದ್ದ ಮದುವೆ ಶಿಫ್ಟ್ ಆಗಿದೆ. ಈಗಾಗಲೇ ಮಂಟಪ ಕಟ್ಟಲು ನಡೆಯುತ್ತಿದ್ದ ಕೆಲಸವನ್ನು ನಿಲ್ಲಿಸಲಾಗಿದೆ.

    ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮದುವೆಯನ್ನು ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಸುವ ಯೋಜನೆ ಇದೆ. ಆದರೆ ಎಲ್ಲಿ ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ ಎಂದಿದ್ದಾರೆ ನಿಖಿಲ್.

    ಏ.17ರಂದು ನಿಖಿಲ್-ರೇವತಿ ಮದುವೆ ನಿಶ್ಚಯವಾಗಿತ್ತು. ಕೆಲವರಿಗೆ ಲಗ್ನಪತ್ರಿಕೆಯನ್ನೂ ಹಂಚಲಾಗಿತ್ತು. ಆದರೆ, ಈಗ ಎಲ್ಲದಕ್ಕೂ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಕೊರೋನಾ ಬ್ರೇಕ್.

  • ಡಾ.ರಾಜ್‍ಕುಮಾರ್ ಸಿನಿಮಾ ನೆನಪಿಸಿದ ಮಗನ ಚಿತ್ರ - ಸಿಎಂ ಕುಮಾರಸ್ವಾಮಿ

    cm hd kumaraswamy remembers dr raj's movie after seetharama kalyana

    ನನ್ನ ಮಗನ ಸಿನಿಮಾ ಪ್ರದರ್ಶನವಿದೆ. ದಯವಿಟ್ಟು ಎಲ್ಲರೂ ಬರಬೇಕು. ಹೀಗೆಂದು ಸಿಎಂ ಕುಮಾರಸ್ವಾಮಿ ಮಾಡಿದ ಆಹ್ವಾನಕ್ಕೆ ಬಹುತೇಕ ಎಲ್ಲ ಗಣ್ಯರೂ ಆಗಮಿಸಿ, ಥಿಯೇಟರಿಗೆ ಬಂದು ಚಿತ್ರವನ್ನು ನೋಡಿ ಮೆಚ್ಚಿ ಕೊಂಡಾಡಿದ್ದಾರೆ.

    ಸಿದ್ದರಾಮಯ್ಯ, ಜಮೀರ್ ಅಹ್ಮದ್, ಶಿವರಾಮೇ ಗೌಡ, ಈಶ್ವರಪ್ಪ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಚಿತ್ರಕ್ಕೆ ಬರಲು ಸಾಧ್ಯವಾಗದಿದ್ದರೂ, ಮಗನ ಸಿನಿಮಾ ನೋಡಿ ಖುಷಿ ಪಡಿ. ರಾಜಕೀಯ ಜಂಜಾಟ ಮರೆತುಬಿಡಿ ಎಂದು ಶುಭ ಹಾರೈಸಿದ್ದಾರೆ.

    ಎಲ್ಲರ ನಡುವೆ ಸಿನಿಮಾ ನೋಡಿದ ಕುಮಾರಸ್ವಾಮಿ `ಮಗನ ಸಿನಿಮಾ ತುಂಬಾ ಚೆನ್ನಾಗಿದೆ. ಹಾಡು, ಡ್ಯಾನ್ಸು, ಫೈಟು, ಅಭಿನಯ ಎಲ್ಲದರಲ್ಲೂ ಮಗ ನಿಖಿಲ್ ತುಂಬಾ ಚೆನ್ನಾಗಿ ಮಾಡಿದ್ದಾನೆ. ನನಗಂತೂ ಸಿನಿಮಾ ಡಾ.ರಾಜ್ ಸಿನಿಮಾಗಳನ್ನು ನೆನಪಿಸಿತು. ಮಗನಿಗೆ ನಾನು 100ಕ್ಕೆ 100 ಅಂಕ ಕೊಡುತ್ತೇನೆ' ಎಂದಿದ್ದಾರೆ.

  • ಡಿ.16. ಸಂಜೆ 6 ಗಂಟೆ 54 ನಿಮಿಷ : ರೈಡರ್ ಮುಹೂರ್ತ

    ಡಿ.16. ಸಂಜೆ 6 ಗಂಟೆ 54 ನಿಮಿಷ : ರೈಡರ್ ಮುಹೂರ್ತ

    ನಿಖಿಲ್ ಕುಮಾರಸ್ವಾಮಿ ಅಭಿನಯದ ಸಿನಿಮಾ ರೈಡರ್ ರಿಲೀಸ್ ಡೇಟ್ ಕ್ರಿಸ್‍ಮಸ್‍ಗೆ ಫಿಕ್ಸ್ ಆಗಿದೆ. ಡಿ.24ಕ್ಕೆ ರಿಲೀಸ್ ಆಗಲಿರೋ ಚಿತ್ರದ ಟ್ರೇಲರ್ ಸಿನಿಮಾ ರಿಲೀಸ್ ಆಗುವುದಕ್ಕೆ ಒಂದು ವಾರ ಮೊದಲು ಅಂದರೆ ಡಿಸೆಂಬರ್ 16ರಂದು ರಿಲೀಸ್ ಆಗಲಿದೆ. ಆ ದಿನ ಸಂಜೆ 6 ಗಂಟೆ 54 ನಿಮಿಷಕ್ಕೆ ಟ್ರೇಲರ್ ಬಿಡುಗಡೆ ಆಗುತ್ತಿದೆ.

    ವಿಜಯ್ ಕುಮಾರ್ ಕೊಂಡ ನಿರ್ದೇಶನದ ರೈಡರ್ ಚಿತ್ರದಲ್ಲಿ ಬ್ಯಾಸ್ಕೆಟ್ ಬಾಲ್ ಆಟಗಾರನ ಲವ್ ಸ್ಟೋರಿ ಮತ್ತು ಆ್ಯಕ್ಷನ್ ಥ್ರಿಲ್ಲರ್ ಇದೆ. ಕಾಶ್ಮೀರ ಪರದೇಸಿ ನಾಯಕಿಯಾಗಿ ನಟಿಸಿದ್ದು, ಲಹರಿ ಫಿಲ್ಮ್ಸ್ ಮತ್ತು ಶಿವನಂದಿ ಎಂಟರ್‍ಟೈನ್‍ಮೆಂಟ್ಸ್ ಜಂಟಿಯಾಗಿ ನಿರ್ಮಿಸಿರೋ ಚಿತ್ರ ರೈಡರ್. ಚಂದ್ರು ಮನೋಹರ್ ಮತ್ತು ಸುನಿಲ್ ಗೌಡ ನಿರ್ಮಾಪಕರು. ಅರ್ಜುನ್ ಜನ್ಯ ನಿರ್ದೇಶನದಲ್ಲಿ ರಿಲೀಸ್ ಆಗಿರುವ ಹಾಡುಗಳು ಈಗಾಗಲೇ ಹಿಟ್ ಸಾಲಿಗೆ ಸೇರಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.

  • ತೋಟದ ಮನೆಯಲ್ಲಿ ನಿಖಿಲ್ ಮದುವೆ ; ಯಾರೂ ಹೋಗಬೇಡಿ ಪ್ಲೀಸ್

    nikhil revathi wedding venue shifed

    ಕೊರೋನಾ ಕಾಟವೊಂದು ಇಲ್ಲದೇ ಹೋಗಿದ್ದರೆ, ಇಷ್ಟು ಹೊತ್ತಿಗೆ ಕರ್ನಾಟಕದ ತುಂಬೆಲ್ಲ ನಿಖಿಲ್ ಕುಮಾರಸ್ವಾಮಿ ಮದುವೆಯದ್ದೇ ಸುದ್ದಿ ಇರುತ್ತಿತ್ತು. ರಾಮನಗರದಲ್ಲಿ 100 ಎಕರೆ ಜಾಗದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಮದುವೆ ಸಂಭ್ರಮ, ಶಾಸ್ತ್ರ ಇಷ್ಟು ಹೊತ್ತಿಗೆ ಶುರುವಾಗಿಬಿಡುತ್ತಿತ್ತು. ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಆದರೆ, ಮದುವೆ ನಿಂತಿಲ್ಲ.

    ಏ.17ರಂದು ನಿಖಿಲ್ ಮದುವೆ ರೇವತಿ ಅವರ ಜೊತೆ ನೆರವೇರಲಿದೆ. ರಾಮನಗರದಲ್ಲಿರುವ ಅವರ ಫಾರ್ಮ್ ಹೌಸ್ ಅರ್ಥಾತ್ ತೋಟದ ಮನೆಯಲ್ಲಿ ಮದುವೆ ನಡೆಯಲಿದೆ. ಎರಡೂ ಕುಟುಂಬದ ಕಡೆಯ ಆಪ್ತ ಬಂಧುಗಳಷ್ಟೇ ಮದುವೆಯಲ್ಲಿರುತ್ತಾರೆ.

    ಲಾಕ್ ಡೌನ್ ನಡುವೆ ಈ ಮದುವೆ ಬೇಕಿತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ. 20ಕ್ಕೂ ಹೆಚ್ಚು ಜನ ಒಂದೆಡೆ ಸೇರುವುದು ಈ ಸಂದರ್ಭದಲ್ಲಿ ನಿಷಿದ್ಧ. ದೊಡ್ಡಗೌಡರ ಕೌಟುಂಬಿಕ ಬಳಗವೇ ದೊಡ್ಡದು. ಒಟ್ಟಿನಲ್ಲಿ ಕುಮಾರಸ್ವಾಮಿಯವರ ಆಸೆಯಂತೆ ಅದ್ಧೂರಿಯಾಗಿ ಮದುವೆ ನಡೆಯುತ್ತಿಲ್ಲ ಎನ್ನುವುದಂತೂ ಸತ್ಯ.

     

    --

  • ದೇವೇಗೌಡ ಮುತ್ತಜ್ಜ.. ಕುಮಾರಸ್ವಾಮಿ ತಾತ : ನಿಖಿಲ್ ದಂಪತಿಗೆ ಗಂಡು ಮಗು

    ದೇವೇಗೌಡ ಮುತ್ತಜ್ಜ.. ಕುಮಾರಸ್ವಾಮಿ ತಾತ : ನಿಖಿಲ್ ದಂಪತಿಗೆ ಗಂಡು ಮಗು

    ರಾಜ್ಯ ರಾಜಕೀಯದಲ್ಲಿ ದೊಡ್ಮನೆ ಎಂದೇ ಹೆಸರಾಗಿರುವ ದೇವೇಗೌಡರ ಕುಟುಂಬಕ್ಕೆ ಹೊಸ ಸದಸ್ಯ ಬಂದಿದ್ದಾರೆ. ನಿಖಿಲ್ ಕುಮಾರಸ್ವಾಮಿ, ರೇವತಿ ದಂಪತಿಗೆ ಗಂಡು ಮಗುವಾಗಿದೆ. ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ.

    ಈ ಮಗುವಿನಿಂದ ದೇವೇಗೌಡರು ಇನ್ನಷ್ಟು ಹಿರಿಯರಾಗಿದ್ದಾರೆ. ಮೊಮ್ಮಗನ ಮಗು ಮರಿಮೊಮ್ಮಗನಿಂದ ದೇವೇಗೌಡ ಮುತ್ತಜ್ಜನಾದರೆ, ಕುಮಾರಸ್ವಾಮಿ-ಅನಿತಾ ದಂಪತಿ ಈಗ ಅಜ್ಜ ಅಜ್ಜಿ. ದೇವೇಗೌಡರ ಮನೆಯಲ್ಲೀಗ ಸಂಭ್ರಮವೋ.. ಸಂಭ್ರಮ.

  • ನಿಖಿಲ್ 4ನೇ ಚಿತ್ರಕ್ಕೆ ನಿರ್ಮಾಪಕರು ಯಾರು ಗೊತ್ತಾ..?

    who is nikhil's next movie director

    ನಿಖಿಲ್ ಕುಮಾರಸ್ವಾಮಿ, ಎಲೆಕ್ಷನ್ ಮುಗಿದ ಮೇಲೆ ರಾಜಕೀಯದಲ್ಲಿದ್ದರೂ, ಸಿನಿಮಾದತ್ತ ಮುಖ ಮಾಡಿದ್ದಾರೆ. ಅವರೀಗ ಸದ್ಯಕ್ಕೆ 3 ಚಿತ್ರ ಮುಗಿಸಿದ್ದಾರೆ. ಜಾಗ್ವಾರ್, ಸೀತಾರಾಮ ಕಲ್ಯಾಣ ರಿಲೀಸ್ ಆಗಿವೆ. ಕುರುಕ್ಷೇತ್ರ ರಿಲೀಸ್ ಆಗಬೇಕಿದೆ. ಹೀಗಿರುವಾಗಲೇ ಅವರು 3ನೇ ಚಿತ್ರಕ್ಕೆ ಬುಕ್ ಆಗಿದ್ದಾರೆ. ಅದೂ ಅಂತಿಂತಾ ಸಂಸ್ಥೆಯಲ್ಲ. ಇಂಟರ್‍ನ್ಯಾಷನಲ್ ಖ್ಯಾತಿವೆತ್ತ ಸಂಸ್ಥೆ.

    ಲೈಕಾ ಪ್ರೊಡಕ್ಷನ್ಸ್ ದೇಶದ ಪ್ರಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲೊಂದು. ಕತ್ತಿ, 2.0, ಇಂಡಿಯನ್ 2, ದರ್ಬಾರ್, ಖೈದಿ ನಂ.150.. ಹೀಗೆ ಈ ಸಂಸ್ಥೆಯ ನಿರ್ಮಾಣದ ಹೆಸರುಗಳ ದೊಡ್ಡ ಪಟ್ಟಿಯೇ ಇದೆ. ರಜನಿಕಾಂತ್, ಕಮಲ್‍ಹಾಸನ್, ಅಕ್ಷಯ್ ಕುಮಾರ್, ಚಿರಂಜೀವಿ, ಧನುಷ್, ನಯನತಾರಾ.. ಹೀಗೆ ದೊಡ್ಡ ದೊಡ್ಡ ಸ್ಟಾರ್‍ಗಳ ಚಿತ್ರಗಳನ್ನೇ ನಿರ್ಮಿಸಿರುವ ಸಂಸ್ಥೆ, ನಿಖಿಲ್‍ಗಾಗಿ ಸಿನಿಮಾ ಮಾಡಲು ಮುಂದಾಗಿದೆ.

    ನಿಖಿಲ್ ಇನ್ನೂ ಕಥೆ ಕೇಳುತ್ತಿದ್ದು, ಫೈನಲ್ ಆಗಿಲ್ಲ ಎನ್ನುತ್ತಿವೆ ಮೂಲಗಳು. ಹಾಗೇನಾದರೂ ನಿಖಿಲ್ ಒಪ್ಪಿಕೊಂಡರೆ, ಲೈಕಾ ಸಂಸ್ಥೆ ಆ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಂತಾಗುತ್ತದೆ.

  • ನಿಖಿಲ್ ಎದುರು ಕೆಜಿಎಫ್ ಗರುಡ

    ನಿಖಿಲ್ ಎದುರು ಕೆಜಿಎಫ್ ಗರುಡ

    ನಿಖಿಲ್ ಕುಮಾರಸ್ವಾಮಿ ಅಭಿನಯದ ಆಕ್ಷನ್ ಪ್ಯಾಕ್ ಮೂವಿ ರೈಡರ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದರೆ, ಚಿತ್ರತಂಡ ಇನ್ನೊಂದು ಹೊಸ ಸುದ್ದಿ ಕೊಟ್ಟಿದೆ. ಕೆಜಿಎಫ್ನಲ್ಲಿ ಗರುಡನ ಪಾತ್ರದಲ್ಲಿ ಅಬ್ಬರಿಸಿದ್ದ ಗರುಡರಾಮ್ ಅಲಿಯಾಸ್ ರಾಮಚಂದ್ರ ರಾಜು ರೈಡರ್ ಟೀಂ ಸೇರಿಕೊಂಡಿದ್ದಾರೆ.

    ಲಹರಿ ಮ್ಯೂಸಿಕ್ ಬಹುಕಾಲದ ಗ್ಯಾಪ್ ನಂತರ ನಿರ್ಮಿಸುತ್ತಿರೋ ಸಿನಿಮಾ ರೈಡರ್. ತೆಲುಗಿನ ವಿಜಯ್ ಕುಮಾರ್ ಕೋಂಡ ನಿರ್ದೇಶನದ ಚಿತ್ರವಿದು. ಕಶ್ಮೀರಾ ಪರದೇಶಿ ನಾಯಕಿಯಾಗಿರೋ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ದತ್ತಣ್ಣ, ಶೋಭರಾಜ್, ಅಚ್ಯುತ್, ಚಿಕ್ಕಣ್ಣ, ಅನುಷಾ ರೈ, ನಿಹಾರಿಕಾ.. ಹೀಗೆ ದೊಡ್ಡ ದೊಡ್ಡ ಕಲಾವಿದರೇ ತುಂಬಿರೋ ಚಿತ್ರಕ್ಕೀಗ ಗರುಡರಾಮ್ ಎಂಟ್ರಿಯಾಗಿದೆ.

  • ನಿಖಿಲ್ ಕುಮಾರಸ್ವಾಮಿ ಚಾಮುಂಡಿ ಹಬ್ಬ ಸ್ಪೆಷಲ್ 

    seetharama kalyana teaser launched

    ನಿಖಿಲ್ ಕುಮಾರಸ್ವಾಮಿ ಅಭಿಯನದ `ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್‍ನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮುಂಡೇಶ್ವರಿ ಅಮ್ಮನವರ ಕರಗದ ವಿಶೇವಾಗಿ ಹೊರಬಂದಿದೆ ಚಿತ್ರದ ಟೀಸರ್. ಎತ್ತುಗಳ ಜೊತೆ ಓಟ, ಕಾರುಗಳ ಸ್ಫೋಟ, ತ್ರಿಶೂಲ ಹಿಡಿದು ನಿಲ್ಲುವ ನಾಯಕ.. ಹೀಗೆ ಹೀರೋ ನಿಖಿಲ್‍ರನ್ನು ದುಷ್ಟರನ್ನು ಸದೆಬಡಿಯುವವರನ್ನಾಗಿ ತೋರಿಸಲಾಗಿದೆ. 

    ಟೀಸರ್‍ನಲ್ಲಿ ಬರೀ ಫೈಟಿಂಗ್ ತೋರಿಸಿದ್ದಾರೆ ಅಂತಾ ಇದು ಫೈಟಿಂಗ್ ಸಿನಿಮಾ ಅಂದ್ಕೋಬೇಡಿ. ಇದೊಂದು ಕೌಟುಂಬಿಕ ಚಿತ್ರ. ತಂದೆ-ಮಗ, ತಂದೆ-ಮಗಳ ಬಾಂಧವ್ಯದ ಕುರಿತು ಇರುವ ಚಿತ್ರ. ಚಿತ್ರವನ್ನು ನೋಡಿ ಹಾರೈಸಿ ಎಂದು ಕೇಳಿಕೊಂಡರು ಕುಮಾರಸ್ವಾಮಿ.

    ಈಗಾಗಲೇ 92 ದಿನದ ಶೂಟಿಂಗ್ ಮುಗಿದಿದೆ. ಇನ್ನೂ 30 ದಿನಗಳ ಶೂಟಿಂಗ್ ಬಾಕಿ ಇದೆ. ಶೀಘ್ರದಲ್ಲೇ ಆಡಿಯೋ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು ನಿಖಿಲ್ ಕುಮಾರಸ್ವಾಮಿ.

    ನಿರ್ದೇಶಕ ಹರ್ಷ, ರಚಿತಾ ರಾಮ್, ಚಿಕ್ಕಣ್ಣ ಸೇರಿದಂತೆ ಚಿತ್ರತಂಡದ ಕಲಾವಿದರು, ತಂತ್ರಜ್ಞರು ವೇದಿಕೆಯಲ್ಲಿ ಕಂಗೊಳಿಸಿದರು.

  • ನಿಖಿಲ್ ಕುಮಾರಸ್ವಾಮಿ ಪುತ್ರನ ಹೆಸರು ಅವ್ಯನ್ ದೇವ್ : ಏನಿದರ ಅರ್ಥ?

    ನಿಖಿಲ್ ಕುಮಾರಸ್ವಾಮಿ ಪುತ್ರನ ಹೆಸರು ಅವ್ಯನ್ ದೇವ್ : ಏನಿದರ ಅರ್ಥ?

    ನಿಖಿಲ್ ಕುಮಾರಸ್ವಾಮಿ-ರೇವತಿ ದಂಪತಿಯ ಮೊದಲ ಮಗನಿಗೆ ಅವ್ಯನ್ ದೇವ್ ಎಂದು ನಾಮಕರಣ ಮಾಡಿದ್ದಾರೆ. ವಿಶೇಷವಾದ ಹೆಸರಿದು. ಜೆಪಿ ನಗರದ ವೆಂಕಟೇಶ್ವರ ದೇಗುಲದಲ್ಲಿ ಶಾಸ್ತ್ರೋಕ್ತವಾಗಿ ನಡೆದ ನಾಮಕರಣ ಮಹೋತ್ಸವದಲ್ಲಿ ಅವರವರ ಕುಟುಂಬಸ್ಥರಷ್ಟೇ ಭಾಗವಹಿಸಿದ್ದರು. ಪ್ರಪೌತ್ರ ಜನನ ಶಾಂತಿ ಹಾಗೂ ದೇವೇಗೌಡ ದಂಪತಿಗೆ ಕನಕಾಭಿಷೇಕ ಮಾಡಲಾಯಿತು.

    ಅನಿತಾ ಕುಮಾರಸ್ವಾಮಿ ಮೊಮ್ಮಗನಿಗೆ ಚಿನ್ನದ ಸರ, ಬಳೆಗಳನ್ನು ಉಡುಗೊರೆಯಾಗಿ ಕೊಟ್ಟರು. ದೇವೇಗೌಡ, ಚೆನ್ನಮ್ಮ ದಂಪತಿಗೆ ತಟ್ಟೆ ತುಂಬಾ ಚಿನ್ನವನ್ನಿಟ್ಟು ಕನಕಾಭಿಷೇಕ ಮಾಡಲಾಯಿತು.

    ಅಂದಹಾಗೆ ಅವ್ಯನ್ ದೇವ್ ಎಂದರೆ ಅರ್ಥವೇನು ಗೊತ್ತೇ? ಇದು ಗಣೇಶ ಮತ್ತು ವಿಷ್ಣುವಿನ ಇನ್ನೊಂದು ಹೆಸರು. ಇದಕ್ಕೆ ಇನ್ನೊಂದು ಅರ್ಥವೂ ಇದೆ. ಅದೃಷ್ಟವಂತ ಮಗು ಎನ್ನುವುದು ಅವ್ಯನ್ ದೇವ್ ಪದದ ಇನ್ನೊಂದು ಅರ್ಥ. ಮಗುವಿಗೆ  ಹೆಸರು ಫೈನಲ್ ಮಾಡಿದ್ದು ರೇವತಿ ಅವರಂತೆ. ನ್ಯೂಮರಾಲಜಿ ಪ್ರಕಾರವೂ ಈ ಹೆಸರು ಸೂಕ್ತವಾಗಿದೆ ಎಂದಿದ್ದಾರೆ ನಿಖಿಲ್-ರೇವತಿ ದಂಪತಿ.

  • ನಿಖಿಲ್ ಕುಮಾರಸ್ವಾಮಿ ಬರೆದ ಪತ್ರ ವೈರಲ್

    nikhil gowda's letter goes viral

    ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರ ಚೇತರಿಕೆಗೆ ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿರುವಾಗ, ಅವರ ಪುತ್ರ ನಿಖಿಲ್ ಗೌಡ ಕುಮಾರಸ್ವಾಮಿ ಬರೆದ ಒಂದು ಫೇಸ್‍ಬುಕ್ ಆಪ್ತ ಬರಹ ವೈರಲ್ ಆಗಿದೆ.

    ನನ್ನ ತಂದೆ ನಿಮ್ಮೆಲ್ಲರ ಹಾರೈಕೆಯಿಂದ ಗುಣಮುಖರಾಗುತ್ತಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಚಿರಋಣಿಗಳು. 

    ಪ್ರತಿಯೊಬ್ಬರಿಗೂ ತಂದೆ ತಾಯಿ ದೇವರಿದ್ದ ಹಾಗೆ. ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಮ್ಮನ್ನು ದೊಡ್ಡವರನ್ನಾಗಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ನಮ್ಮ ಕೆಲಸಗಳ ಒತ್ತಡದಿಂದ ತಂದೆ ತಾಯಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ, ಒಂದು ಸಲ ಯೋಚನೆ ಮಾಡಿ. ಎಷ್ಟೋ ಜನರಿಗೆ ತಂದೆ ತಾಯಿ ಇರೋದಿಲ್ಲ. ನಮಗೆ ಸಮಯ ಇರೋದಿಲ್ಲ. 

    ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನಮ್ಮನ್ನು ಬೆಳೆಸಿದ ತಂದೆ, ತಾಯಿಯರಿಗೆ ಹಾಗಾಗಬಾರದು. ದಯವಿಟ್ಟು ಎಲ್ಲರೂ ಕಣ್ಣೆದುರೇ ಇರುವ ತಂದೆ ತಾಯಿಯರಿಗೆ ಹೆಚ್ಚಿನ ಸಮಯ ವಿನಿಯೋಗಿಸಿ. ಅವರ ಸೇವೆ ನಮ್ಮ ಕರ್ತವ್ಯ ಎಂದಿದ್ದಾರೆ ನಿಖಿಲ್ ಗೌಡ. ಅದು ಎಷ್ಟು ವೈರಲ್ ಆಗಿದೆಯೆಂದರೆ, ಒಂದು ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.

  • ನಿಖಿಲ್ ಕುಮಾರಸ್ವಾಮಿಗೆ ಅರ್ಜುನ್ ಸಿನಿಮಾ

    nikhil kumaeswamy's next with ap arjun

    ಲವ್ ಸ್ಟೋರಿಗಳನ್ನು ಚೆಂದವಾಗಿ ಹೇಳಿ ಗೆಲ್ಲೋ ಎ.ಪಿ.ಅರ್ಜುನ್, ಈಗಾಗಲೇ ಕಿಸ್ ಚಿತ್ರದ ಗುಂಗಿನಿಂದ ಹೊರಬಂದು ಅದ್ದೂರಿ ಲವರ್ ಬೆನ್ನು ಹತ್ತಿದ್ದಾರೆ. ಅದ್ಧೂರಿ ಲವರ್ ಶೂಟಿಂಗ್ ನಡೆಯುತ್ತಿರುವಾಗಲೇ ಮತ್ತೊಂದು ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಆ ಚಿತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಹೀರೋ.

    ಅತ್ತ ತೆಲುಗಿನ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇತ್ತ ಅರ್ಜುನ್ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಸ್ಕ್ರಿಪ್ಟ್ ಪೂಜೆ ನಡೆಯಲಿದೆಯಂತೆ.

    ಸ್ವತಃ ನಿಖಿಲ್ ಕುಮಾರಸ್ವಾಮಿಯೇ ಹೀರೊ ಆಗಲಿದ್ದು, ನಿರ್ಮಾಪಕರೂ ಅವರೇ. ಹೀಗಾಗಿ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿನಿಮಾ ಹೊರತರುವ ಯೋಜನೆಯಲ್ಲಿದ್ದಾರೆ.

  • ನಿಖಿಲ್ ಚಿತ್ರಕ್ಕೆ ಪೈಲ್ವಾನ್ ಕೃಷ್ಣ ಆ್ಯಕ್ಷನ್ ಕಟ್

    pailwan director's next with nikhil ?

    ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರಕ್ಕೆ ನಿರ್ದೇಶಕರಾಗಿ ಪೈಲ್ವಾನ್ ಕೃಷ್ಣ ಆಯ್ಕೆಯಾಗಿದ್ದಾರೆ. ಸುದ್ದಿ ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ಗಾಂಧಿನಗರದಲ್ಲೀಗ ಅದೇ ಸುದ್ದಿ. ಲೈಕಾ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ನಿಖಿಲ್ ಹೀರೋ. ಕೃಷ್ಣ ಡೈರೆಕ್ಟರ್ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಗಜಕೇಸರಿ, ಹೆಬ್ಬುಲಿ, ಪೈಲ್ವಾನ್.. ಹೀಗೆ ಸತತ ಗೆಲುವು ಕಂಡಿರುವ ಕೃಷ್ಣ, 4ನೇ ಚಿತ್ರವಾಗಿ ನಿಖಿಲ್ ಚಿತ್ರ ನಿರ್ದೇಶಿಸಲಿದ್ದಾರಂತೆ. ಈಗಾಗಲೇ ಈ ಕುರಿತು ಒಂದಿಷ್ಟು ಮಾತುಕತೆಗಳೂ ನಡೆದಿವೆ ಎನ್ನಲಾಗಿದ್ದು, ಶೀಘ್ರದಲ್ಲೇ ಅಧಿಕೃತ ವರ್ತಮಾನ ಹೊರಬೀಳುವ ಸಾಧ್ಯತೆ ಇದೆ.

  • ನಿಖಿಲ್ ಜೊತೆ ಸಂಪದಾ

    nikhil kumaraswamy's next movie heroine is sampada

    ಹೊಸ ಬಾಳಿನ ಹೊಸಿಲಲಿ ನಿಂತಿರುವ ನಟ ನಿಖಿಲ್ ಕುಮಾರಸ್ವಾಮಿ, ಹೊಸ ಚಿತ್ರವೂ ಶುರುವಾಗಿದೆ. ಲಹರಿ ಮ್ಯೂಸಿಕ್ ಲಹರಿ ವೇಲು ಸುದೀರ್ಘ ಗ್ಯಾಪ್ ನಂತರ ನಿರ್ಮಿಸುತ್ತಿರುವ ಚಿತ್ರಕ್ಕೆ ನಿಖಿಲ್ ಹೀರೋ. ಗುರುವಾರವಷ್ಟೇ ಮುಹೂರ್ತ ಆಚರಿಸಿಕೊಂಡ ಚಿತ್ರಕ್ಕೆ ಈಗ ಹೀರೋಯಿನ್ ಆಯ್ಕೆಯಾಗಿದೆ.

    ಸಂಪದಾ ಎಂಬ ಕಿರುತೆರೆ ನಟಿ ಈ ಚಿತ್ರಕ್ಕೆ ನಾಯಕಿ. ಮಿಥುನ ರಾಶಿ ಎಂಬ ಸೀರಿಯಲ್ಲಿನ ಮೂಲಕ ಗುರುತಿಸಿಕೊಂಡಿದ್ದ ಸಂಪದಾ, ನಿಖಿಲ್‍ಗೆ ಜೋಡಿಯಾಗಿದ್ದಾರೆ. ಇದೇ ತಿಂಗಳು ಶೂಟಿಂಗ್ ಶುರುವಾಗುತ್ತಿದ್ದು, ತೆಲುಗು ನಿರ್ದೇಶಕ ವಿಜಯ್ ಕುಮಾರ್, ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

  • ನಿಖಿಲ್ ಮದುವೆ ಫಿಕ್ಸ್ : ಯಾರೀಕೆ ರೇವತಿ..?

    nikhil kumaraswamy's wedding fixed with revathi

    ರಚಿತಾ ರಾಮ್ ಜೊತೆ ಮದುವೆಯಂತೆ. ಆಂಧ್ರಪ್ರದೇಶದ ಕೋಟ್ಯಧಿಯೊಬ್ಬರ ಮಗಳ ಜೊತೆ ಎಂಗೇಜ್‍ಮೆಂಟ್ ಅಂತೆ. ಡಿಕೆ ಶಿವಕುಮಾರ್ ಕುಮಾರಸ್ವಾಮಿಯ ಬೀಗರಾಗ್ತಾರಂತೆ. ಇಂತಹ ಅಂತೆಕಂತೆಗಳಿಗೆಲ್ಲ ತೆರೆ ಬೀಳುವ ಸುದ್ದಿ ಹತ್ತಿರ ಬಂದಿದೆ. ನಿಖಿಲ್ ಮದುವೆಯಾಗುತ್ತಿರುವ ಹುಡುಗಿ ರೇವತಿ.

    ಈ ರೇವತಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರಿಗೆ ಮೊಮ್ಮಗಳಾಗಬೇಕು. ರೇವತಿ ಎಂಸಿಎ ಪದವೀಧರೆಯಾಗಿದ್ದು, ಮಲ್ಲತ್‍ಹಳ್ಳಿಯಲ್ಲಿ ವಧುವಿನ ಮನೆ ಇದೆ.

    ವಧುವಿನ ಮನೆಗೆ ದೊಡ್ಡಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ನಿಖಿಲ್, ದೇವೇಗೌಡರ ಮನೆಯ ಹೆಣ್ಣು ಮಕ್ಕಳು ಹೋಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಮೇ ತಿಂಗಳಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ. ಮೇ 17, 18ಕ್ಕೆ ಮದುವೆ ಫಿಕ್ಸ್ ಆಗುವ ಸಾಧ್ಯತೆಗಳಿವೆ.