` upendra, - chitraloka.com | Kannada Movie News, Reviews | Image

upendra,

  • ಸ್ವಾತಂತ್ರ್ಯ ಹೋರಾಟಗಾರನ ಮಗ ಭೂಗತ ನಾಯಕನಾಗುವ ಕಥೆ : ಕಬ್ಬ

    ಸ್ವಾತಂತ್ರ್ಯ ಹೋರಾಟಗಾರನ ಮಗ ಭೂಗತ ನಾಯಕನಾಗುವ ಕಥೆ : ಕಬ್ಬ

    ಅಪ್ಪ ಸ್ವಾತಂತ್ರ್ಯ ಹೋರಾಟಗಾರ. ಅಮರೇಶ್ವರ. ಆತನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುವ ಕಥೆ ಕಬ್ಬ ಚಿತ್ರದ್ದು. ಡಾನ್ ಆಗುವುದಷ್ಟೇ ಅಲ್ಲ, ತನ್ನದೇ ಛಾಪನ್ನೂ ಮೂಡಿಸುವ ವ್ಯಕ್ತಿಯ ಕಥೆ ಕಬ್ಜ ಚಿತ್ರದಲ್ಲಿದೆ.

    ‘ಕಬ್ಜ’ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.

    ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕು ಗಳನ್ನು ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಮೊದಲ ಹಂತವಾಗಿ ಹಿಂದಿ ಟೀಸರ್ ಬಿಡುಗಡೆಯಾಗಿದೆ.  ಶ್ರೀ ಸಿದ್ಧೇಶ್ವರ ಎಂಟರ್‍ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.

    ಭೂಗತಲೋಕದ ಹೊಸ ಅಧ್ಯಾಯವಾದ ಕಬ್ಜ ಚಿತ್ರೆದ ಹಿಂದಿ ಅವತರಣಿಕೆಯನ್ನು ಬಾಲಿವುಡ್ನ ಹೆಸರಾಂತ ನಿರ್ಮಾಪಕರಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಅವರ ಸಹಕಾರ ಹೀಗೆಯೇ ಮುಂದುವರೆಯಲಿ ಎಂದಿದ್ದಾರೆ ನಟ ಉಪೇಂದ್ರ. ಕಿಚ್ಚ ಸುದೀಪ್ ಸಹ ದಕ್ಷಿಣ ಭಾರತೀಯ ಸಿನಿಮಾಗಳು ಭಾರತೀಯ ಸಿನಿಮಾ ಎಂದು ಗುರುತಿಸಿಕೊಳ್ಳುತ್ತಿರುವ ಈ ಅದ್ಭುತ ಸಂದರ್ಭದಲ್ಲಿ ಖ್ಯಾತ ವಿತರಕ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ನಮ್ಮ ‘ಕಬ್ಜ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದು ಚಿತ್ರತಂಡದ ಕಠಿಣ ಪರಿಶ್ರಮಕ್ಕೆ ಸಿಕ್ಕ  ಪ್ರತಿಫಲ’ ಎಂದಿದ್ದಾರೆ.

    ‘ಕಬ್ಜ’ ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿರುವ ಆನಂದ್ ಪಂಡಿತ್ ಮಾತನಾಡಿ, ಪ್ರೇಕ್ಷಕರ ಮನರಂಜಿಸುವುದೇ ನಮ್ಮ ಪ್ರಮುಖ ಉದ್ದೇಶ ಮತ್ತು ಕಬ್ಜ ಅಂತಹ ಒಂದು ಮನರಂಜನೆಯಾಗಲಿದೆ ಎಂದು ನಮಗೆ ಸಂಪೂರ್ಣ ನಂಬಿಕೆಯಿದೆ ಎಂದು ಹೇಳಿಕೊಂಡಿದ್ದಾರೆ.

  • ಸ್ವಿಟ್ಜರ್'ಲ್ಯಾಂಡ್‍ಗೆ ಲಗಾಮ್

    ಸ್ವಿಟ್ಜರ್'ಲ್ಯಾಂಡ್‍ಗೆ ಲಗಾಮ್

    ಉಪೇಂದ್ರ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿ ಜೊತೆಗೂಡಿರುವ ಸಿನಿಮಾ ಲಗಾಮ್. ಈಗಾಗಲೇ 2 ಹಂತದ ಶೂಟಿಂಗ್‍ನ್ನೂ ಮುಗಿಸಿರುವ ಸಿನಿಮಾ, ಈಗ 3ನೇ ಹಂತಕ್ಕೆ ಸ್ವಿಟ್ಜರ್‍ಲ್ಯಾಂಡ್ ಹೋಗೋಕೆ ಪ್ಲಾನ್ ಮಾಡುತ್ತಿದೆ.

    ಚಿತ್ರದ ಕಥೆಯ ಪ್ರಕಾರ ವಿದೇಶದ ಅಗತ್ಯ ಇದೆ. ಹೀಗಾಗಿ ನ್ಯೂಜಿಲ್ಯಾಂಡ್‍ಗೆ ಹೋಗೋಕೆ ಅನುಮತಿ ಕೇಳುತ್ತಿದ್ದೇವೆ. ಇನ್ನೂ 50 ದಿನ ಶೂಟಿಂಗ್ ಬಾಕಿ ಇದೆ ಎಂದಿದ್ದಾರೆ ನಿರ್ದೇಶಕ ಮಾದೇಶ್.

    ಸಾಯಿಕುಮಾರ್, ಸಾಧುಕೋಕಿಲ, ರಂಗಾಯಣ ರಘು ಕೂಡಾ ನಟಿಸುತ್ತಿರುವ ಲಗಾಮ್ ಚಿತ್ರ 2021ರ ಮೊದಲ ಭಾಗದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  • ಸ್ಸಾರಿ ಪಪ್ಪಾ.. ಇನ್ಮುಂದೆ ತಪ್ಪು ಮಾಡಲ್ಲ - ಕಣ್ಣೀರಿಟ್ಟ ರಚಿತಾ ರಾಮ್

    rachita ram cries over her role in i love you

    ಡಿಂಪಲ್ ಕ್ವೀನ್ ರಚಿತಾ ರಾಮ್ ಕಣ್ಣೀರಿಟ್ಟಿದ್ದಾರೆ. ಅದೂ ಮಾಧ್ಯಮವೊಂದರ ಸಂದರ್ಶನದಲ್ಲಿ. ಸದಾ ನಗುವಿಗೆ ಹೆಸರಾದ ಡಿಂಪಲ್ ಕ್ವೀನ್ ಅಪ್ಪನ ಕ್ಷಮೆ ಕೇಳಿ ಕಣ್ಣೀರಿಟ್ಟಿದ್ದಾರೆ. ಅವರ ಕಣ್ಣೀರಿಗೆ ಕಾರಣ ಐ ಲವ್ ಯೂ ಸಿನಿಮಾ ಹಾಗೂ ಆ ಬೋಲ್ಡ್ ದೃಶ್ಯಗಳು.

    ರಚಿತಾ ಅವರ ತಾಯಿ, ಅಕ್ಕ ಸಿನಿಮಾ ನೋಡಿ ಮೆಚ್ಚಿಕೊಂಡರೂ ರಚಿತಾ ಅವರ ತಂದೆ ಸಿನಿಮಾ ನೋಡಿಲ್ಲವಂತೆ. ಅದಕ್ಕೆ ಕಾರಣ ಇಷ್ಟೆ, ರಚಿತಾ ರಾಮ್‍ನನ್ನು ಹೀರೋಯಿನ್ ಆಗಿ ಹಾಗೆ ನೋಡಬಹುದೇನೋ.. ಆದರೆ, ಒಬ್ಬ ತಂದೆಯಾಗಿ ಹಾಗೆ ನೋಡಲು ಸಾಧ್ಯವಿಲ್ಲ ಎಂದಿದ್ದಾರಂತೆ ರಚಿತಾ ಅವರ ತಂದೆ. ಇನ್ನು ಮುಂದೆ ಹಾಗೆ ಮಾಡಲ್ಲ ಎಂದಿರುವ ರಚಿತಾ ರಾಮ್‍ಗೆ, ಅಪ್ಪ ಒಂದು ಮಾತು ಹೇಳಿದ್ರಂತೆ.

    ನೀನು ಸಿನಿಮಾ ಇಂಡಸ್ಟ್ರಿಗೆ ರಚಿತಾ ರಾಮ್ ಇರಬಹುದು. ನನಗೆ ಪುಟ್ಟ ಮಗು ಎಂದರಂತೆ. ಅದನ್ನು ನೆನಪಿಸಿಕೊಂಡು ಕಣ್ಣೀರಿಟ್ಟು ಕ್ಷಮೆ ಕೇಳಿದ್ದಾರೆ ರಚಿತಾ ರಾಮ್.

    ಇದೆಲ್ಲದರ ನಡುವೆಯೂ ಐ ಲವ್ ಯೂ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಸೂಪರ್ ಹಿಟ್ ಸಾಲಿಗೆ ಸೇರಿದೆ.

  • ಹಳೇ ಉಪ್ಪಿ.. ಕಮಿಂಗ್ ಬ್ಯಾಕ್..!

    old philosopher uppi is back

    ಈ ಪ್ರೀತಿ ಪ್ರೇಮ ಎಲ್ಲ ಪುಸ್ತಕದ್ ಬದ್ನೇಕಾಯಿ. ಈ ಜಗತ್ತು ಅನ್ನೋ ದೊಡ್ಡ ಪ್ರಪಂಚದಲ್ಲಿ ಪ್ರೀತಿ ಅನ್ನೋದು ಪುಟ್ಟ ಸರ್ಕಲ್ಲು. ಪ್ರೀತಿ ಅನ್ನೋದು ಕೊಟ್ಟು ತಗೊಳ್ಳೋ ವ್ಯವಹಾರ ಅಷ್ಟೆ.. ಹೀಗೆ  ಎ, ಉಪೇಂದ್ರ  ಚಿತ್ರದಲ್ಲಿ ಉಪೇಂದ್ರನ ಡೈಲಾಗುಗಳು ಬೆಂಕಿಯಂತಿದ್ದವರು. ಅರಗಿಸಿಕೊಳ್ಳಲು ಕಷ್ಟವಾಗಿದ್ದ ಡೈಲಾಗುಗಳೇ ಉಪ್ಪಿಯನ್ನು ಸ್ಟಾರ್ ಮಾಡಿದ್ದವು. ಈಗ ಆ ಹಳೇ ಉಪ್ಪಿ ಮತ್ತೆ ಬಂದಿದ್ದಾರೆ. ಐ ಲವ್ ಯೂ ಮೂಲಕ.

    ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳ ಜೊತೆಯಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಇದು ಉಪ್ಪಿ ಅಭಿನಯದ ಐ ಲವ್ ಯೂ ಟೀಸರ್‍ನ ಹೈಲೈಟ್ಸ್. ಐ ಲವ್ ಯೂ ಅಂದ್ರೆ ಏನು..? ಐ ಲವ್ ಯೂ ಅನ್ನೋ ಡೈಲಾಗ್‍ನ್ನೇ ಏಕೆ ಹೇಳ್ತಾರೆ..? ಅದರ ಬಗ್ಗೆ ಉಪ್ಪಿ ಬೇರೆಯದ್ದೇ ಸ್ಟೈಲ್‍ನಲ್ಲಿ ಹೇಳಿದ್ದಾರೆ. ಇದು ಪಸ್ಟ್ ಲುಕ್ ಮಾತ್ರ. ಟೀಸರ್ ಬರೋದು ಬಾಕಿ ಇದೆ.

    ಆರ್.ಚಂದ್ರು ನಿರ್ದೇಶನದ ಸಿನಿಮಾ ಈ ಕಾರಣಕ್ಕೇ ಸದ್ದು ಮಾಡ್ತಿದೆ. ಉಪ್ಪಿ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ಸೋನು ಗೌಡ ಇದ್ದಾರೆ. ಹಾಸಿಗೆಯಲ್ಲಿ ಬರಿಮೈಯ್ಯಲ್ಲಿ ಕುಳಿತುಕೊಂಡು ಬಾಯಲ್ಲಿ ರೋಸ್ ಕಚ್ಚಿಕೊಂಡಿರುವ ಉಪೇಂದ್ರ ಅವರ ಲುಕ್ಕು, ಮತ್ತೆ ಎ, ಉಪೇಂದ್ರ ಚಿತ್ರಗಳನ್ನೇ ನೆನಪಿಸುವ ಹಾಗಿದೆ. 

  • ಹಾಲಿವುಡ್ ಸ್ಟೈಲ್`ನಲ್ಲಿ ಕಬ್ಜಾ ಪೋಸ್ಟರ್

    ಹಾಲಿವುಡ್ ಸ್ಟೈಲ್`ನಲ್ಲಿ ಕಬ್ಜಾ ಪೋಸ್ಟರ್

    ಕಬ್ಜ ಚಿತ್ರದ ಪೋಸ್ಟರ್ ವೈರಲ್ ಆಗುತ್ತಿದೆ. ಪೋಸ್ಟರ್ ನೋಡುತ್ತಿದ್ದರೆ, ಪಕ್ಕಾ ಹಾಲಿವುಡ್ ಸ್ಟೈಲ್ ನೆನಪಿಸುತ್ತಿದೆ. ಅಭಿಮಾನಿಗಳಂತೂ ಫುಲ್ ಫಿದಾ. ಉಪೇಂದ್ರ ಮತ್ತು ಸುದೀಪ್ ಅವರ ಸ್ಟೈಲಿಷ್ ಲುಕ್ ಹಾಗಿದೆ.

    ಸಚಿವ ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕರಾಗಿರುವುದು ಸ್ವತಃ ನಿರ್ದೇಶಕ ಆರ್.ಚಂದ್ರು. ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಮಾರ್ಕೆಟ್‍ಗಾಗಿಯೇ ನಿರ್ಮಾಣವಾಗುತ್ತಿರುವ ಚಿತ್ರ ಕಬ್ಜ. ಚಿತ್ರದಲ್ಲಿ ಖ್ಯಾತನಾಮರ ಸೈನ್ಯವೇ ಸೇರಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಮ್ಯೂಸಿಕ್, ತಮಿಳಿನ ಐ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ಅನೂಪ್ ರೇವಣ್ಣ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರೇ ಉಪ್ಪಿ ಕಿಚ್ಚ ಚಿತ್ರದಲ್ಲಿ ಸಾಥ್ ಕೊಡುತ್ತಿದ್ದಾರೆ.

    ಸದ್ಯಕ್ಕೆ ಸೆನ್ಸೇಷನ್‍ನಲ್ಲಿರುವ ಕೆಜಿಎಫ್ 2, ವಿಕ್ರಾಂತ್ ರೋಣ, ತೆಲುಗಿನ ಪುಷ್ಪ, ಆರ್‍ಆರ್‍ಆರ್ ಚಿತ್ರಗಳ ಜೊತೆ ಕಬ್ಜ ಕೂಡಾ ಇದೆ ಎನ್ನುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಆರ್.ಚಂದ್ರು. ಚಿತ್ರಕ್ಕೆ ಇನ್ನೂ ನಾಯಕಿ ಫಿಕ್ಸ್ ಆಗಿಲ್ಲ. ಈಗಾಗಲೇ ದೊಡ್ಡ ದೊಡ್ಡ ಸಂಸ್ಥೆಗಳನ್ನು ಚಿತ್ರವನ್ನು ಕೊಳ್ಳುವುದಕ್ಕೆ ಮುಂದೆ ಬಂದಿವೆ.

  • ಹೀರೋ ಅಪ್ಪನ ಪಾತ್ರಕ್ಕೆ ರೆಡಿಯಾದ ಉಪೇಂದ್ರ

    ಹೀರೋ ಅಪ್ಪನ ಪಾತ್ರಕ್ಕೆ ರೆಡಿಯಾದ ಉಪೇಂದ್ರ

    ರಿಯಲ್ ಸ್ಟಾರ್ ಉಪೇಂದ್ರ ಅವರದ್ದು ದೊಡ್ಡ ಮಾರುಕಟ್ಟೆ. ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳಿನಲ್ಲೂ ಉಪ್ಪಿಗೆ ಮಾರ್ಕೆಟ್ ಇದೆ. ಅಭಿಮಾನಿ ಬಳಗವೂ ದೊಡ್ಡದು. ಅವರದ್ದೇ ಕಬ್ಜ ಸಿನಿಮಾ ಹೊಸ ದಾಖಲೆ ಬರೆಯಲು ಹೊರಟಿದೆ. ಇದರ ನಡುವೆಯೇ ಉಪ್ಪಿ ಹೀರೋಗೆ ಅಪ್ಪನಾಗಲು ಹೊರಟಿದ್ದಾರೆ.

    ತೆಲುಗಿನ ಗನಿ ಚಿತ್ರದಲ್ಲಿ ಉಪ್ಪಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀರೋ ವರುಣ್ ತೇಜ್. ಈ ವರುಣ್ ತೇಜ್‍ರ ಅಪ್ಪನ ಪಾತ್ರದಲ್ಲಿ ನಟಿಸುತ್ತಿರುವುದು ಉಪೇಂದ್ರ. ವಿಲನ್ ಆಗಿರೋದು ಜಗಪತಿ ಬಾಬು. ಉಪ್ಪಿ ಮತ್ತು ಜಗಪತಿ ಬಾಬು ಜುಗಲ್‍ಬಂದಿಯೇ ಚಿತ್ರದ ಹೈಲೈಟ್ ಅಂತೆ. ಆದರೂ.. ಇಷ್ಟು ಬೇಗ ಉಪ್ಪಿ ಹೀರೋನ ಅಪ್ಪನ ಪಾತ್ರ ಮಾಡಬೇಕಿತ್ತಾ ಅನ್ನೋದು ಅಭಿಮಾನಿಗಳ ಪ್ರಶ್ನೆ.

  • ಹೆಲ್ತ್ ಇನ್ಷೂರೆನ್ಸ್.. ಉಪ್ಪಿ ಐಡಿಯಾ ನಿಜಕ್ಕೂ ಸೂಪರ್..!

    upendra's new health idea

    ನಿಮ್ಮ ಬಳಿ ಹೆಲ್ತ್ ಇನ್ಷೂರೆನ್ಸ್ ಇರುತ್ತೆ. ಆದರೆ, ಆಸ್ಪತ್ರೆಯಲ್ಲಿ ಅದು ಈ ಕಾಯಿಲೆಗೆ ಅಪ್ಲೈ ಆಗಲ್ಲ. ಫುಲ್ ದುಡ್ಡು ಕಟ್ಟಿ ಅಂತಾರೆ. ವೆಹಿಕಲ್ ಇನ್ಷೂರೆನ್ಸ್ ಕೂಡಾ ಅಷ್ಟೆ. ನೀವು ಹಣ ಕಟ್ಟಿರುತ್ತೀರಿ. ಆದರೆ, ಅದು ನಿಮ್ಮ ಗಾಡಿಯಲ್ಲಿ ಯಾವ ಸಮಸ್ಯೆ ಇರುತ್ತೋ.. ಆ ಸಮಸ್ಯೆಗೆ ಮಾತ್ರ ಅಪ್ಲೈ ಆಗಲ್ಲ. ಫುಲ್ ದುಡ್ಡು ಕಟ್ಟಿ ರಿಪೇರಿ ಮಾಡಿಸಬೇಕು. ಲೈಫ್ ಇನ್ಷೂರೆನ್ಸ್ ಇರುತ್ತೆ. ಅಕಾಲ ಸಾವಿಗೀಡಾದಾಗಲೂ ನಮಗೆ ಗೊತ್ತೇ ಇಲ್ಲದ ರೂಲ್ಸ್ ಹೇಳಿ ಯಾಮಾರಿಸುವವರಿಗೇನೂ ಕಡಿಮೆಯಿಲ್ಲ. ಇಂಥಾ ಸಮಸ್ಯೆಗಳಿಗೆಲ್ಲ ಉಪೇಂದ್ರ ಒಂದು ಪರಿಹಾರವನ್ನು ಮುಂದಿಟ್ಟಿದ್ದಾರೆ.

    ಒಂದು ದೇಹ, ಒಂದೇ ಜೀವ. ಜೀವನಕ್ಕೆ ಒಂದೇ ಇನ್ಷೂರೆನ್ಸ್. ಇದು ಉಪೇಂದ್ರ ಅವರ ತಲೆಯಲ್ಲಿ ಮೊಳೆತಿರುವ ಐಡಿಯಾ. ಅವರ ಐಡಿಯಾಗಳನ್ನ ಒಂದ್ಸಲ ನೋಡಿ.

    ಒಂದೇ ದೇಶ..ಒಂದೇ ಟ್ಯಾಕ್ಸ್ - ಜಿಎಸ್‍ಟಿ

    ಒಂದು ದೇಹ, ಒಂದೇ ಇನ್ಷೂರೆನ್ಸ್

    ಗಾಡಿಗಳು ಆಕ್ಸಿಡೆಂಟ್ ಆಗಬಹುದು, ಆಗದೇ ಇರಬಹುದು. 

    ಗಾಡಿಗಳು ಕಳವಾಗಬಹುದು, ಆಗದೇ ಇರಬಹುದು

    ಆದರೂ ಪ್ರತಿ ಗಾಡಿಗೂ ಇನ್ಷೂರೆನ್ಸ್ ಕಡ್ಡಾಯ. 

    ಆದರೆ, 

    ಪ್ರತಿ ದೇಹಕ್ಕೂ ರೋಗ ತಪ್ಪಿದ್ದಲ್ಲ. ಹಾಗಾದರೆ, ಅಂದ ಮೇಲೆ ಹೆಲ್ತ್ ಇನ್ಷೂರೆನ್ಸ್ ಕಡ್ಡಾಯ ಯಾಕಿಲ್ಲ..? ಈಗಿರುವ ಸುಮಾರು ಇನ್ಷೂರೆನ್ಸ್‍ಗಳು ಕೆಲವು ಕಾಯಿಲೆಗಳನ್ನು ಮಾತ್ರ ಕವರ್ ಮಾಡುತ್ವೆ. ಇನ್ಷೂರೆನ್ಸ್ ಕವರ್ ಆಗುವ ಕಾಯಿಲೆಗಳಷ್ಟೇ ನಮಗೆ ಬರಲ್ಲ. ಹೆಲ್ತ್‍ಗೂ ಒಂದು, ಲೈಫ್‍ಗೂ ಒಂದು, ಆಕ್ಸಿಡೆಂಟ್‍ಗೂ ಒಂದು ಅನ್ನೋ ಬದಲು ಒಂದೇ ಇನ್ಷೂರೆನ್ಸ್. ಒಂದು ದೇಹಕ್ಕೆ ಒಂದೇ ಇನ್ಷೂರೆನ್ಸ್. 

    ಐಡಿಯಾ ಏನೋ ಸೂಪರ್ ಆಗಿದೆ. ನೀವು ಹೆಲ್ತ್ ಇನ್ಷೂರೆನ್ಸ್ ಮಾಡಿಸಿದ್ದರೆ, ಯಾವುದೇ ಕಾಯಿಲೆ ಇರಲಿ, ಅದನ್ನು ಇನ್ಷೂರೆನ್ಸ್ ಕವರ್ ಮಾಡುತ್ತೆ ಅನ್ನೋದಾದರೆ, ಪ್ರತಿಯೊಬ್ಬರೂ ಇನ್ಷೂರೆನ್ಸ್ ಮಾಡಿಸ್ತಾರೆ. ಆದರೆ, ಇನ್ಷೂರೆನ್ಸ್ ಕೊಡುವಾಗಲೇ ನೂರಾರು ಕಂಡೀಷನ್ಸ್ ಹಾಕಿದರೆ ಹೇಗೆ..? ಇನ್ಷೂರೆನ್ಸ್‍ನಲ್ಲಿ ಹೇಳಿದ ಕಾಯಿಲೆಗಳಷ್ಟೇ ನಮಗೆ ಬರ್ತವಾ..? ಹಾಗೇನೂ ಇರಲ್ಲವಲ್ಲಾ..? ಉಪೇಂದ್ರ ಅವರ ಈ ಐಡಿಯಾ ಜಾರಿಯಾದರೆ ಹೇಗಿರುತ್ತೆ. ಐಡಿಯಾ ಉಪೇಂದ್ರ ಅವರದ್ದು. ಅಭಿಪ್ರಾಯ ಮೂಡಿಸುವವರು ನೀವೇ. ಪ್ರಜೆಗಳು.

  • ಹೋಮ್ ಮಿನಿಸ್ಟರ್`ನಲ್ಲಿ ಉಪೇಂದ್ರ ಗೃಹ ಲಕ್ಷ್ಮಿನಾ..?

    ಹೋಮ್ ಮಿನಿಸ್ಟರ್`ನಲ್ಲಿ ಉಪೇಂದ್ರ ಗೃಹ ಲಕ್ಷ್ಮಿನಾ..?

    ಹೌಸ್ ವೈಫ್ ಪಾತ್ರವನ್ನು ಗಂಡಸು ಮಾಡಿದರೆ ಏನು ಹೇಳಬಹುದು. ಹೌಸ್ ಹಸ್ಬೆಂಡ್ ಎನ್ನಬಹುದು. ಕನ್ನಡದಲ್ಲಿಯೇ ಹೇಳಬೇಕೆಂದರೆ ಗೃಹಲಕ್ಷ್ಮೀ ಎನ್ನಬಹುದು. ಉಪ್ಪಿ ಹಾಗೆಯೇ ಆಗಿದ್ದಾರೆ. ಉಪೇಂದ್ರ ಗೃಹಲಕ್ಷ್ಮೀ ಪಾತ್ರದಲ್ಲಾ..? ಡೌಟೇ ಇಲ್ಲ. ಹೋಮ್ ಮಿನಿಸ್ಟರ್ ಚಿತ್ರದಲ್ಲಿ ಉಪ್ಪಿ ನಟಿಸುತ್ತಿರೋದು ಇದೇ ರೀತಿಯ ಪಾತ್ರದಲ್ಲಿ. ಹೋಮ್ ಮಿನಿಸ್ಟರ್ ಟ್ರೇಲರ್ ನೋಡಿದವರಿಗೆ ಕಿಕ್ ಸಿಕ್ಕೋದೇ ಇಲ್ಲಿ.

    ಉಪೇಂದ್ರ, ವೇದಿಕಾ ನಟಿಸಿರೋ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ಸುಜಯ್ ಶ್ರೀಹರಿ. ಟ್ರೇಲರ್ ನೋಡುತ್ತಿದ್ದಂತೆಯೇ ಇದು ವೆರೈಟಿ ಫ್ಲೇವರ್ ಸಿನಿಮಾ ಎನಿಸಿಬಿಡುತ್ತೆ. ಟ್ರೇಲರ್‍ನ ಕೊನೆಯಲ್ಲೇ ಒಂದು ಪುಟ್ಟ ಶಾಕ್ ಕೊಟ್ಟು ಸಿನಿಮಾದಲ್ಲಿ ಇನ್ನೂ ಏನೇನೋ ಇದೆ, ಮಿಸ್ ಮಾಡಬೇಡಿ ಎಂಬ ಸಸ್ಪೆನ್ಸ್‍ನ್ನೂ ಇಡ್ತಾರೆ ಡೈರೆಕ್ಟರ್ ಸುಜಯ್ ಶ್ರೀಹರಿ. ಚಿತ್ರದಲ್ಲಿ ಉಪ್ಪಿ, ವೇದಿಕಾ ಜೊತೆಗೆ ಆದ್ಯ, ಸಾಧುಕೋಕಿಲ, ಅವಿನಾಶ್ ಕೂಡಾ ನಟಿಸಿದ್ದಾರೆ. ಪೂರ್ಣ ನಾಯ್ಡು ನಿರ್ಮಾಣದ ಹೋಮ್ ಮಿನಿಸ್ಟರ್ ಯುಗಾದಿಗೆ ಬರುತ್ತಿದೆ.

  • ಹೋಮ್ ಮಿನಿಸ್ಟರ್' ಉಪ್ಪಿಗೆ `ಶಿವಲಿಂಗ'ನ ವೇದಿಕಾ ಜೋಡಿ

    uoendra in himeminister

    ಉಪೇಂದ್ರ ಅವರ ಹೊಸ ಚಿತ್ರ ಹೋಮ್ ಮಿನಿಸ್ಟರ್‍ಗೆ ನಾಯಕಿಯಾಗಿ ವೇದಿಕಾ ಆಯ್ಕೆಯಾಗಿದ್ದಾರೆ. ಸಂಗಮ, ಶಿವಲಿಂಗ ನಂತರ ವೇದಿಕಾ ನಟಿಸುತ್ತಿರುವ ಇನ್ನೊಂದು ಚಿತ್ರ ಹೋಮ್ ಮಿನಿಸ್ಟರ್. 

    ಚಿತ್ರದ ನಿರ್ದೇಶಕ ಯಾರು ಎಂಬುದು ಕೂಡಾ ಸಸ್ಪೆನ್ಸ್ ಆಗಿಯೇ ಇತ್ತು. ಚಿತ್ರದ ಡೈರೆಕ್ಟರ್ ಶ್ರೀಹರಿ. ಶ್ರೀಹರಿ, ಕನ್ನಡಕ್ಕೆ ಹೊಸಬರಾದರೂ, ತೆಲುಗಿನಲ್ಲಿ ಸ್ಟಾರ್ ಕಥೆಗಾರ. ಮಹೇಶ್ ಬಾಬು ನಟಿಸುತ್ತಿರುವ `ಭರತ್ ಆನೆ ನೇನು' ಚಿತ್ರದ ಕಥೆ ಇವರದ್ದೇ. ಮಹೇಶ್ ಬಾಬು ಅವರ ಮುಂದಿನ ಚಿತ್ರದ ಡೈರೆಕ್ಟರ್ ಆಗಿ ಫಿಕ್ಸ್ ಆಗಿರುವ ಶ್ರೀಹರಿ, ಕನ್ನಡದಲ್ಲಿ ನಿರ್ದೇಶಕರಾಗಿ ಪ್ರಥಮ ಪ್ರಯೋಗಕ್ಕಿಳಿದಿದ್ಧಾರೆ.

    ಚಿತ್ರದ ಸಂಗೀತ ನಿರ್ದೇಶಕ ಮಹಮದ್ ಗಿಬ್ರಾನ್. ಕಮಲ್ ಹಾಸನ್ ಅವರ ವಿಶ್ವರೂಪಂ-2 ಚಿತ್ರಕ್ಕೆ ಸಂಗಿತ ನೀಡಿರುವ ನಿರ್ದೇಶಕ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.

    Related Articles :-

    ರಿಯಲ್ ಸ್ಟಾರ್ ಉಪ್ಪಿ ಈಗ ಹೋಮ್ ಮಿನಿಸ್ಟರ್ 

  • ಹೌರಾ..ಹೌರಾ.. ಪ್ರಿಯಾಂಕಾ ಉಪೇಂದ್ರ ಮಗಳು ಚಿತ್ರರಂಗಕ್ಕೆ.!

    upendra's daughter

    ಇತ್ತೀಚೆಗಷ್ಟೇ ಉಪೇಂದ್ರ ಅವರ ಅಣ್ಣನ ಮಗ, ಪ್ರಿಯಾಂಕಾ ಉಪೇಂದ್ರ ಅವರ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವುದು ಸುದ್ದಿಯಾಗಿತ್ತು. ಈಗ ಉಪೇಂದ್ರ ದಂಪತಿಯ ಪುಟ್ಟ ಮಗಳ ಸರದಿ. ಉಪೇಂದ್ರ ಅವರ ಮಗಳು ಐಶ್ವರ್ಯಾ ಸಿನಿಮಾದಲ್ಲಿ ಬಣ್ಣ ಹಚ್ಚಲು ಸಿದ್ಧವಾಗಿದ್ದಾಳೆ. ಅದೂ, ತಾಯಿ ಪ್ರಿಯಾಂಕಾ ಅವರ ಜೊತೆಯಲ್ಲೇ.

    ಪ್ರಿಯಾಂಕಾ ಉಪೇಂದ್ರ, ಹೌರಾ ಬ್ರಿಡ್ಜ್ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ನಿರ್ದೇಶಕ ಲೋಹಿತ್. ಮಮ್ಮಿ ಚಿತ್ರದ ಭರ್ಜರಿ ಸುದ್ದಿ ಮಾಡಿದ್ದ ಲೋಹಿತ್, ಈಗ ಹೌರಾ ಬ್ರಿಡ್ಜ್ ಹೆಸರಿನಲ್ಲಿ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.

    ಹಾಗೆ ನೋಡಿದ್ರೆ, ಐಶ್ವರ್ಯಾ, ಮಮ್ಮಿ ಚಿತ್ರದಲ್ಲೇ ಬಣ್ಣ ಹಚ್ಚಬೇಕಿತ್ತು. ಆದರೆ, ಇನ್ನೂ ಚಿಕ್ಕ ಹುಡುಗಿ ಎಂಬ ಕಾರಣಕ್ಕೆ ಪ್ರಿಯಾಂಕಾ ಅವರೇ ಬೇಡ ಎಂದಿದ್ದರಂತೆ. ಈಗ ಮತ್ತೊಮ್ಮೆ ಹೌರಾ ಬ್ರಿಡ್ಜ್ ಚಿತ್ರ ಶುರು ಮಾಡಿದಾಗ, ಇನ್ನೊಮ್ಮೆ ನಿರ್ದೇಶಕರು ಐಶ್ವರ್ಯಾಗೆ ಒಂದು ರೋಲ್ ನೀಡುವ ಪ್ರಸ್ತಾಪ ಮುಂದಿಟ್ಟರಂತೆ. ಈ ಬಾರಿ ಇಲ್ಲ ಎನ್ನಲು ಸಾಧ್ಯವಾಗಿಲ್ಲ. 

    ಅಲ್ಲದೆ, ಚಿತ್ರದ ಬಹುಪಾಲು ಚಿತ್ರೀಕರಣ ನಡೆಯುವುದು ಕೊಲ್ಕೊತ್ತಾದಲ್ಲಿ. ಅದು ಪ್ರಿಯಾಂಕಾ ಅವರ ತವರು ಮನೆಯೂ ಹೌದು. ಅಲ್ಲಿ ಮಗಳನ್ನು ನೋಡಿಕೊಳ್ಳಲು ತಾಯಿಯ ನೆರವೂ ಸಿಗುತ್ತೆ. ಹೀಗಾಗಿ ಒಪ್ಪಿಕೊಂಡೆ ಎಂದಿದ್ದಾರೆ ಪ್ರಿಯಾಂಕಾ.