` upendra, - chitraloka.com | Kannada Movie News, Reviews | Image

upendra,

  • ಉಪ್ಪಿ ಹೊಸ ಸಿನ್ಮಾ ನಾಮಾನಾ..?

    ಉಪ್ಪಿ ಹೊಸ ಸಿನ್ಮಾ ನಾಮಾನಾ..?

    ಉಪೇಂದ್ರ ಸಿನಿಮಾ ಅಂದ್ರೇನೇ ಹಾಗೆ. ಇದೂವರೆಗೆ ಅವರು ತಮ್ಮ ಸಿನಿಮಾಗೆ ಸಂಕೇತಗಳ ಮೂಲಕ ಟೈಟಲ್ ಇಟ್ಟಿದ್ದೇ ಹೆಚ್ಚು. ಆಪರೇಷನ್ ಹಂತ ಟೈಟಲ್ಲೇ ಅವರ ಸಿನಿಮಾಗಳ ದೊಡ್ಡ ಶೀರ್ಷಿಕೆ. ಓಂ, ಸ್ವಸ್ತಿಕ್, ಸೂಪರ್.. ಹೀಗೆ ಚಿಹ್ನೆಗಳ ಮೂಲಕವೇ ಟೈಟಲ್ ಇಟ್ಟಿದ್ದ ಉಪ್ಪಿ, ಈ ಬಾರಿ ಯುಐ ಅನ್ನೋ ಟೈಟಲ್ ಬಿಟ್ಟಿದ್ದಾರೆ.

    ಅದು ನೋಡೋಕೆ ತಿರುಪತಿ ನಾಮದಂತೆ ಕಂಡರೆ ಅದು ಉಪ್ಪಿ ಕ್ರಿಯೇಟಿವಿಟಿ ಎಂದುಕೊಳ್ಳಬಹುದು. ಆದರೆ ಉಪ್ಪಿಯ ಈ ಟೈಟಲ್ ಯುಐ ನೋಡಿದರೆ, ಇಲ್ಲಿ ಕೂಡಾ ಉಪ್ಪಿ ನಾನು ನೀನು ಫಿಲಾಸಫಿ ಕಂಟಿನ್ಯೂ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ಉಪೇಂದ್ರ ಚಿತ್ರದಲ್ಲಿ ನಾನು ಫಿಲಾಸಫಿ ಹೇಳಿದ್ದ ಉಪ್ಪಿ, ಉಪ್ಪಿ2 ನಲ್ಲಿ ನೀನು ಫಿಲಾಸಫಿ ಹೇಳಿದ್ದರು. ಈ ಬಾರಿ ಮತ್ತೊಮ್ಮೆ ಅದೇ ಫಿಲಾಸಫಿ ಹೇಳಲಿದ್ದಾರಾ..? ಉಪ್ಪಿ ಮತ್ತೊಮ್ಮೆ ಡೈರೆಕ್ಟರ್ ಆಗುತ್ತಿದ್ದಾರೆ ಎನ್ನುವುದಷ್ಟೇ ಸಿಹಿ ಸುದ್ದಿ. ಸೆ.18ರಂದು ಉಪ್ಪಿ ಹುಟ್ಟುಹಬ್ಬವಿದೆ. ಆ ದಿನ ಚಿತ್ರದ ಡೀಟೈಲ್ಸ್ ಹೊರಬೀಳಲಿದೆಯಾ? ವೇಯ್ಟ್ & ವಾಚ್.

  • ಉಪ್ಪಿ-ಚಂದ್ರು ಕಾಂಬಿನೇಷನ್ ಕಬ್ಜಾ 7 ಭಾಷೆಯಲ್ಲಿ ರಿಲೀಸ್

    upendra r chandru's movie in 7 languages

    ಐ ಲವ್ ಯು ಚಿತ್ರದ ಭರ್ಜರಿ ಸಕ್ಸಸ್ ನಂತರ ಆರ್.ಚಂದ್ರು ಮತ್ತು ಉಪೇಂದ್ರ ಮತ್ತೊಮ್ಮೆ ಒಂದಾಗಿದ್ದಾರೆ. ಹೊಸ ಚಿತ್ರದ ಟೈಟಲ್ ಕಬ್ಜಾ. ಅನುಮಾನವೇ ಇಲ್ಲ, ಇದೊಂದು ರೌಡಿಸಂ ಸ್ಟೋರಿ. ಚಂದ್ರು ಅವರ ಬ್ಯಾನರಿನಲ್ಲೇ ಕಬ್ಜಾ ನಿರ್ಮಾಣವಾಗಲಿದೆ.

    `ಇದು ರೌಡಿಸಂ ಚಿತ್ರವಾದರೂ ಎಲ್ಲ ಭಾಷೆಯ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ಸ್ಟೋರಿ ಇದೆ. ಉಪೇಂದ್ರ ಬೇರೆಯದೇ ರೀತಿಯಲ್ಲಿ ಮಿಂಚಲಿದ್ದಾರೆ' ಎಂದು ಭರವಸೆ ಕೊಟ್ಟಿದ್ದಾರೆ ಚಂದ್ರು.

    ವಿಶೇಷವೆಂದರೆ ಐ ಲವ್ ಯು ಚಿತ್ರವನ್ನು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಮಾಡಿದ್ದ ಚಂದ್ರು, ಕಬ್ಜಾ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ. ಹಿಂದಿ, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ಅಂದರೆ ಒಟ್ಟು 7 ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದಾರೆ. 

  • ಉಪ್ಪಿ-ರವಿಚಂದ್ರನ್ ಕಾಂಬಿನೇಷನ್ ಬಲುಪು ರೀಮೇಕ್..?

    upendra raivhsndran in balapu movie

    ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಾಗಿ ನಟಿಸುತ್ತಿರುವ ಚಿತ್ರವನ್ನು ಓಂಪ್ರಕಾಶ್ ರಾವ್ ನಿರ್ದೇಶಿಸಲಿದ್ದಾರೆ ಎನ್ನುವ ಸುದ್ದಿಯ ಜೊತೆ ಜೊತೆಗೇ ಅದು ತೆಲುಗಿನ ಬಲುಪು ಚಿತ್ರದ ರೀಮೇಕ್ ಎಂಬ ಸುದ್ದಿ ಕೇಳಿ ಬರೋಕೆ ಶುರುವಾಗಿದೆ. ತೆಲುಗಿನಲ್ಲಿ ರವಿತೇಜ ಹಾಗೂ ಪ್ರಕಾಶ್ ರೈ ನಟಿಸಿದ್ದರು. ಪ್ರಕಾಶ್ ರೈ ಪಾತ್ರದಲ್ಲಿ ರವಿಚಂದ್ರನ್, ರವಿತೇಜ ರೋಲ್‍ನಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ ಎನ್ನಲಾಗಿದೆ. ಶಾನ್ವಿ ಶ್ರೀವಾಸ್ತವ್ ರವಿಚಂದ್ರನ್ ಮಗಳಾಗಿ ನಟಿಸಲಿದ್ದಾರೆ.

    ಶಾನ್ವಿ ಶ್ರೀವಾಸ್ತವ್ ಅವರನ್ನು ಕನ್ನಡಕ್ಕೆ ಕರೆತಂದವರೇ ಓಂ ಪ್ರಕಾಶ್ ರಾವ್. ಚಂದ್ರಲೇಖ ಚಿತ್ರದ ಮೂಲಕ. ಈಗ ಮತ್ತೊಮ್ಮೆ ಓಂಪ್ರಕಾಶ್ ಜೊತೆಯಾಗಿದ್ದಾರೆ. ಪಾತ್ರ ಚಿಕ್ಕದಾದರೂ, ಅಭಿಯನಕ್ಕೆ ಸ್ಕೋಪ್ ಇದೆ. ಉಪೇಂದ್ರ ಮತ್ತು ರವಿಚಂದ್ರನ್ ಜೊತೆ ನಟಿಸೋ ಅವಕಾಶ ಬೇರೆ. ಹಾಗಾಗಿ ಒಪ್ಪಿಕೊಂಡೆ ಎಂದು ಹೇಳಿದ್ದಾರೆ ಶಾನ್ವಿ.

  • ಉಪ್ಪಿ-ಶಶಾಂಕ್ ಸಿನಿಮಾ ಶುರು - ಇಬ್ಬರು ಹೀರೋಯಿನ್ಸ್

    upendra new movie with shashank

    ಉಪೇಂದ್ರ ಮತ್ತು ಶಶಾಂಕ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ಶುರುವಾಗಿದೆ. ಸ್ಕ್ರಿಪ್ಟ್ ಪೂಜೆ ಮಾಡಿ ಶಶಾಂಕ್, ಹೊಸ ಸಿನಿಮಾಗೆ ಓಂಕಾರ ಹಾಕಿದ್ದಾರೆ. ಚಿತ್ರದಲ್ಲಿ ಶಶಾಂಕ್, ಸದ್ಯದ ರಾಜಕೀಯ ಬೆಳವಣಿಗೆಗಳನ್ನೇ ಇಟ್ಟುಕೊಂಡು ಕಥೆ ಮಾಡಿದ್ದಾರಂತೆ. ಶಶಾಂಕ್ ಸದ್ಯಕ್ಕೆ ಬಿಟ್ಟುಕೊಟ್ಟಿರುವ ಗುಟ್ಟು ಇಷ್ಟೇ.

    ಉಪೇಂದ್ರಗೆ ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ಹಾಗೂ ಬೀರ್‍ಬಲ್ ಖ್ಯಾತಿಯ ರುಕ್ಮಿಣಿ ನಾಯಕಿಯರು. ಸೆಪ್ಟೆಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬವಿದ್ದು, ಆ ದಿನ ಚಿತ್ರದ ಟೈಟಲ್ ಹಾಗೂ ಫಸ್ಟ್‍ಲುಕ್ ಹೊರತರಲು ನಿರ್ಧರಿಸಿದ್ದಾರೆ ಶಶಾಂಕ್.

  • ಉಪ್ಪಿ, ಚಂದ್ರು ಸಿನಿಮಾಗೆ ಬ್ರಹ್ಮಾನಂದಂ

    r chandru's i love you

    ಫ್ಯಾಷನೇಟ್ ಡೈರೆಕ್ಟರ್ ಆರ್.ಚಂದ್ರು ನಿರ್ದೇಶನದ ಹೊಸ ಸಿನಿಮಾ ಐ ಲವ್ ಯೂ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರಕ್ಕೆ ಕನ್ನಡದಲ್ಲಿಯೇ ಬೇರೆ ಕಲಾವಿದರು ಹಾಗೂ ತೆಲುಗಿನಲ್ಲಿ ಬೇರೆಯೇ ಕಲಾವಿದರ ಆಯ್ಕೆ ನಡೆಯುತ್ತಿದೆ. ಕೆಲವು ಪಾತ್ರಗಳಿಗೆ ಎರಡೂ ಭಾಷೆಗಳಿಗೆ ಸಲ್ಲುವವರನ್ನು ಫೈನಲ್ ಮಾಡಲಾಗಿದೆ.

    ಕನ್ನಡದಲ್ಲಿ ಕಾಮಿಡಿ ಕಾಂಬಿನೇಷನ್ ಜವಾಬ್ದಾರಿ ಹೊತ್ತುಕೊಂಡಿರುವುದು ರಂಗಾಯಣ ರಘು ಮತ್ತು ಸಾಧುಕೋಕಿಲ. ತೆಲುಗಿನಲ್ಲಿ ಇದೇ ಕಾಂಬಿನೇಷನ್‍ನಲ್ಲಿ ಕಾಣಿಸಿಕೊಳ್ಳೋದು ಬ್ರಹ್ಮಾನಂದಂ ಮತ್ತು ಪೊಸಾನಿ ಕೃಷ್ಣಸ್ವಾಮಿ. 

    ಇನ್ನು ವಿಲನ್‍ಗಳಾಗಿ ಪ್ರದೀಪ್ ರಾವತ್, ಸಯ್ಯಾಜಿ ಶಿಂಧೆ ಮತ್ತು ರಾಹುಲ್ ದೇವ್ ನಟಿಸುತ್ತಿದ್ದಾರೆ. 

    ಚಿತ್ರದ ಶೂಟಿಂಗ್ ಶುರುವಾಗಿದ್ದು, ಇನ್ನೂ ಹೀರೋಯಿನ್ ಆಯ್ಕೆ ಆಗಿಲ್ಲ. 

     

  • ಉಪ್ಪಿಗೆ ಪಂಚತಂತ್ರದ ಚೆಲುವೆ ನಾಯಕಿ

    panchatantra heroine sonal roped for uppi's next

    ಭಟ್ಟರ ಪಂಚತಂತ್ರದಲ್ಲಿ ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಹುಡುಗಿ ಸೋನಾಲ್. ಈಗ ಭಟ್ಟರ ಗಾಳಿಪಟ ಹಾರಿಸೋಕೂ ಅವರೇ ನಾಯಕಿ. ಅವರೀಗ ಉಪ್ಪಿಯ ಹೊಸ ಚಿತ್ರಕ್ಕೂ ನಾಯಕಿ.

    ಟಿ.ಆರ್.ಚಂದ್ರಶೇಖರ್ ನಿರ್ಮಾಣದ, ಮೌರ್ಯ ಎನ್ನುವವರು ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಸೋನಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಉಪ್ಪಿ-ಗುರುಕಿರಣ್ ಕಾಂಬಿನೇಷನ್ ಮತ್ತೊಮ್ಮೆ ಜೊತೆಯಾಗಿರುವ ಆ ಚಿತ್ರದ ಶೂಟಿಂಗ್, ಮೇ ವಾರಾಂತ್ಯದಲ್ಲಿ ಶುರುವಾಗಲಿದೆಯಂತೆ.

  • ಉಪ್ಪಿಗೆ ಮೇಘನಾ ಹೀರೋಯಿನ್..ಆದಿತ್ಯ ವಿಲನ್..!

    upendra's next movie star casting in final stages

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಇನ್ನೂ ಹೆಸರಿಡದ ಹೊಸ ಚಿತ್ರಕ್ಕೆ ಪಂಚತಂತ್ರ ಖ್ಯಾತಿಯ ಸೋನಾಲ್ ನಾಯಕಿ ಎಂಬ ಸುದ್ದಿಯನ್ನು ಓದಿದ್ದೀರಿ. ಈಗ ಅದೇ ಚಿತ್ರಕ್ಕೆ ಇನ್ನೊಬ್ಬ ನಾಯಕಿಯ ಆಯ್ಕೆಯೂ ಆಗಿದೆ. ಅದು ಮೇಘನಾ ರಾಜ್. ಮದುವೆಯ ನಂತರ ನಿರ್ಮಾಪಕಿಯಾಗುತ್ತಿರುವ ಮೇಘನಾ, ನಟನೆಯನ್ನೂ ಕಂಟಿನ್ಯೂ ಮಾಡಿದ್ದಾರೆ. ಮದುವೆಯ ನಂತರ ಉಪೇಂದ್ರ ಜೊತೆ ಮೊದಲ ಬಾರಿಗೆ ನಟಿಸುತ್ತಿದ್ದಾರೆ.

    ಅಯೋಗ್ಯ, ಚಮಕ್ ಖ್ಯಾತಿಯ ಚಂದ್ರಶೇಖರ್ ನಿರ್ಮಾಣದ ಚಿತ್ರ, ಇನ್ನೂ ಒಂದು ಸ್ಪೆಷಾಲಿಟಿ ಹೊಂದಿದೆ. ಚಿತ್ರಕ್ಕೆ ವಿಲನ್ ಆಗುತ್ತಿರುವುದು ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ. ಹೀರೋ ಆಗಿದ್ದ ನಟ ವಿಲನ್ ಆಗುತ್ತಿರುವುದು ಹೊಸ ಬೆಳವಣಿಗೆ. ಅಲ್ಲಿಗೆ ಆದಿತ್ಯ ಕೂಡಾ ಧನಂಜಯ್ ಹಾದಿಯಲ್ಲೇ ಸಾಗುತ್ತಿದ್ದಾರೆ.

    ಮಯೂರ್ ನಿರ್ದೇಶನದ ಹೊಸ ಸಿನಿಮಾದ ಚಿತ್ರೀಕರಣ ಮೇ 24ರಿಂದ ಶುರುವಾಗಲಿದೆ.

  • ಉಪ್ಪಿಗೆ ಶಾಕ್ ಕೊಟ್ಟಿದ್ದು ಶೋಭಾ ಅಲ್ಲ..ಕಾಂಗ್ರೆಸ್..!

    upendra's bari olu controversy

    ಶೋಭಾ ಕರಂದ್ಲಾಜೆ ಉಪೇಂದ್ರ ಅವರ ಮೇಲೆ ಸಿಟ್ಟಾಗಿದ್ದು ಏಕೆ..? ಕಾರಣ ಈಗ ಬಯಲಾಗಿದೆ. ಅವುಗಳೆಲ್ಲವನ್ನೂ ವಿವರಿಸಿರುವ ವರದಿಯನ್ನು ಟ್ವೀಟ್ ಮಾಡಿರುವ ಉಪೇಂದ್ರ, ಶೋಭಾ ಅವರೇ ಇದನ್ನೊಮ್ಮೆ ಗಮನಿಸಿ ಎಂದಿದ್ದಾರೆ.

    ಆಗಿದ್ದು ಇಷ್ಟೆ. ಆ ದಿನ ಉಪೇಂದ್ರ 2018ಕ್ಕೆ ಕರ್ನಾಟಕದ ಮತದಾರರು ಇನ್ನಷ್ಟು ಜಾಗೃತಿ ವಹಿಸಬೇಕು. ಬದಲಾವಣೆಗೆ ಸಿದ್ಧರಾಗಬೇಕು ಎಂದಿದ್ದರು. ಕರ್ನಾಟಕ ದೇಶದಲ್ಲಿನ ಇತರೆ ಮುಂದುವರಿದ ರಾಜ್ಯಗಳನ್ನು ಹಿಂದಿಕ್ಕಬೇಕು ಎನ್ನುವುದು ನನ್ನ ಅಭಿಲಾಷೆ ಎಂದಿದ್ದರು.

    ಕಾಂಗ್ರೆಸ್ ಬೆಂಬಲಿತ ಭಕ್ತರಿಗೆ ಇಷ್ಟು ಸಾಕಾಗಿತ್ತು. ಉಪೇಂದ್ರ ಅವರ ಅವರದ್ದೇ ಸಿನಿಮಾದ ಬರಿ ವೋಳು ಹಾಡನ್ನು ಮೋದಿಗೆ ರೀಮಿಕ್ಸ್ ಮಾಡಿ ಜಾಲತಾಣಗಳಲ್ಲಿ ಬಿಟ್ಟರು. ಇಡೀ ದಿನ ಟ್ವಿಟರ್‍ನಲ್ಲಿ ಟ್ರೆಂಡ್ ಇದ್ದದ್ದು ಕೆಪಿಜೆಪಿ. ಅವರು ಬಳಸಿದ್ದು ಕೂಡಾ ಅದೇ ಹ್ಯಾಷ್‍ಟ್ಯಾಗ್‍ನ್ನು. 

    ಹೀಗಾಗಿ ಬರಿವೋಳು ರೀಮಿಕ್ಸ್ ಹಾಡನ್ನು ಸ್ವತಃ ಉಪೇಂದ್ರ ಅವರೇ ಬಿಟ್ಟಿದ್ದಾರೆ ಎಂಬ ಭಾವನೆ ಸೃಷ್ಟಿಯಾಯ್ತು. ವಿವಾದಕ್ಕೆ ಮೊದಲಾಯ್ತು. ಈಗ.. ಶೋಭಾ ಕರಂದ್ಲಾಜೆ ಏನ್ ಹೇಳ್ತಾರೋ..?

  • ಉಪ್ಪಿಯ ಕಬ್ಜಕ್ಕೊಂದು ವೆಬ್‍ಸೈಟ್

    uppi's kabza gets a website

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಕಬ್ಜ ಚಿತ್ರಕ್ಕೆ ಪ್ರತ್ಯೇಕ ವೆಬ್‍ಸೈಟ್ ಲಾಂಚ್ ಮಾಡಲಾಗಿದೆ. ಈ ವೆಬ್‍ಸೈಟ್‍ನ್ನು ಉಪ್ಪಿ ಅವರ ಆಪ್ತಮಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಉದ್ಘಾಟಿಸಿದ್ದು ವಿಶೇಷ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ. ನಂತರ ತಮಿಳು, ಮಲಯಾಳಂ, ಮರಾಠಿ, ಹಿಂದಿ ಮತ್ತು ಒರಿಯಾ ಭಾಷೆಗಳಲ್ಲಿ ಡಬ್ ಆಗಲಿದೆ. ಒಟ್ಟು 7 ಭಾಷೆಗಳಲ್ಲಿ ಬರುತ್ತಿರೋ ಚಿತ್ರವಿದು.

    ಶಾಸಕ ಎಂಟಿಬಿ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಕಾಶ್ ರೈ, ಜಗಪತಿ ಬಾಬು, ಕೋಟಾ ಶ್ರೀನಿವಾಸ ರಾವ್, ಬೊಮನ್ ಇರಾನಿ, ಕಬೀರ್ ಸಿಂಗ್ ದುಹಾನ್ ಮೊದಲಾದವರು ನಟಿಸಿರುವ ಚಿತ್ರವಿದು.

  • ಉಪ್ಪಿಯ ಕಬ್ಜಾದಲ್ಲಿ ಕಿಚ್ಚ : ನಿಜಾನಾ ಚಂದ್ರು..?

    ಉಪ್ಪಿಯ ಕಬ್ಜಾದಲ್ಲಿ ಕಿಚ್ಚ : ನಿಜಾನಾ ಚಂದ್ರು..?

    ಉಪೇಂದ್ರ ಮತ್ತು ಸುದೀಪ್ ಒಟ್ಟಿಗೇ ನಟಿಸಿರುವ ಸಿನಿಮಾ ಮುಕುಂದ ಮುರಾರಿ. ಕಿಚ್ಚ, ಶ್ರೀಕೃಷ್ಣನಾಗಿ, ಉಪೇಂದ್ರ ಭಕ್ತನಾಗಿ ನಟಿಸಿದ್ದ ಆ ಚಿತ್ರ ಸೂಪರ್ ಸಕ್ಸಸ್ ಕಂಡಿತ್ತು. ಈಗ ಈ ಜೋಡಿಯನ್ನು ಮತ್ತೊಮ್ಮೆ ಒಂದು ಮಾಡುವ ಸುಳಿವು ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು.

    ಚಂದ್ರು ಮತ್ತು ಉಪ್ಪಿ ಜೊತೆಯಾಗಿ ಕಬ್ಜ ಎನ್ನುವ ಬಹುಭಾಷಾ ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತಿದೆಯಷ್ಟೆ. ಈಗ ಆ ಚಿತ್ರಕ್ಕೆ ಸುದೀಪ್ ಜೊತೆಯಾಗುತ್ತಾರೆ ಅನ್ನೋದು ಸುದ್ದಿ.

    ಯು ಜೊತೆ ಪ್ಲಸ್ ಮತ್ತು ? ಚಿಹ್ನೆಯನ್ನು ಹಾಕಿ ಯಾರಿರಬಹುದು ಗೆಸ್ ಮಾಡಿ ಎಂದು ಹುಳ ಬಿಟ್ಟಿದ್ದಾರೆ ನಿರ್ಮಾಪಕ ಮತ್ತು ನಿರ್ದೇಶಕ ಆರ್.ಚಂದ್ರು. ಯಾರಿರಬಹುದು ಅವರು..? ಸುದೀಪ್ ಅವರೇ ಇರಬಹುದು ಎನ್ನುತ್ತಿವೆ ಒಂದಷ್ಟು ಮೂಲಗಳು.

    ಅಂದಹಾಗೆ ಆ ಜೋಡಿ ಯಾರು ಅನ್ನೋ ಸಸ್ಪೆನ್ಸ್ ಬಾಕ್ಸ್ ಓಪನ್ ಮಾಡೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಪವರ್ ಸ್ಟಾರ್ ಓಪನ್ ಮಾಡೋ ಆ ರಿಯಲ್ ಸ್ಟಾರ್ ಕಬ್ಜ ಬಾಕ್ಸ್‍ನಲ್ಲಿ ಕಿಚ್ಚ ಇರುತ್ತಾರಾ..? ವೇಯ್ಟ್ & ಸೀ. 

  • ಉಪ್ಪಿಯ ಬಲಗೈ ಬಂಟ ಯಾರು ಗೊತ್ತಾ?

    ಉಪ್ಪಿಯ ಬಲಗೈ ಬಂಟ ಯಾರು ಗೊತ್ತಾ?

    ಕಬ್ಜ ಇನ್ನೇನು ರಿಲೀಸ್ ಆಗುತ್ತಿದೆ. ಅದು ತ್ರಿಮೂರ್ತಿಗಳ ಸಿನಿಮಾ. ಉಪೇಂದ್ರ, ಸುದೀಪ್ ಮತ್ತು ಶಿವಣ್ಣ ಮೂವರೂ ನಟಿಸಿರೋ ಚಿತ್ರದಲ್ಲಿ ಇನ್ನೂ ಒಬ್ಬ ನಾಯಕ ಇದ್ದಾರೆ. ಅನೂಪ್ ರೇವಣ್ಣ. 2016ರಲ್ಲಿ ಲಕ್ಷ್ಮಣ ಅನ್ನೋ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರೇವಣ್ಣ, ಮೊದಲ ಚಿತ್ರದಲ್ಲಿಯೇ ಭರವಸೆ ಹುಟ್ಟಿಸಿದ್ದರು. ಅದಾದ ಮೇಲೆ ನಾ ಪಂಟ ಕಣೋ.. ಅನ್ನೋ ಇನ್ನೊಂದು ಚಿತ್ರದಲ್ಲೂ ನಟಿಸಿದ್ದ ಅನೂಪ್ ರೇವಣ್ಣ ಇದೀಗ ಕಬ್ಜದಲ್ಲೂ ನಟಿಸಿದ್ದಾರೆ. ಅಂದಹಾಗೆ ಅನೂಪ್ ರೇವಣ್ಣ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಸ್ವತಃ ಆರ್.ಚಂದ್ರು ಅನ್ನೋದು ಇನ್ನೊಂದು ವಿಶೇಷ.

    ಈ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರ. ಮಾತು ಕಡಿಮೆ. ಆಕ್ಷನ್ ಜಾಸ್ತಿ. ಕೈ ಮುಂದು ಮಾಡುವುದೇ ನನ್ನ ಕೆಲಸ. ನನ್ನ ಪಾತ್ರದ ಹೆಸರು ಟಾರ್ಗೆಟ್. ಉಪ್ಪಿ ಪಾತ್ರಕ್ಕೆ ಬಲಗೈ ಬಂಟನಂತಿರುವ ಪಾತ್ರ ನನ್ನದು.. ಎಂದು ಹೇಳ್ತಾರೆ ಅನೂಪ್ ರೇವಣ್ಣ. ಉಳಿದಂತೆ ಚಿತ್ರ ಮತ್ತು ಪಾತ್ರದ ಬಗ್ಗೆ ಏನು ಹೇಳಬೇಕೆಂದರೂ ನೀವು ಚಂದ್ರು ಸರ್ ಅವರನ್ನೇ ಕೇಳಬೇಕು ಅನ್ನೋ ಅನೂಪ್ ರೇವಣ್ಣ ಕಬ್ಜ ಚಿತ್ರದ ಖುಷಿಯಾಗಿದ್ದಾರೆ. ಕಬ್ಜ, ಚಂದ್ರು ಅವರ ದೊಡ್ಡ ಕನಸು. ಅದ್ಭುತವಾಗಿ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರದಲ್ಲಿಯೇ ಅದನ್ನು ನೋಡುತ್ತೀರಿ. ನಾನೂ ಪ್ರೇಕ್ಷಕರ ಜೊತೆ ಸಿನಿಮಾ ನೋಡೋಕೆ ಕಾಯುತ್ತಿದ್ದೇನೆ ಎನ್ನುವುದು ಅನೂಪ್ ರೇವಣ್ಣ ಅವರ ಮಾತು.

  • ಉಪ್ಪಿಯ ಹೊಸ ಪಕ್ಷ UPP ಬಂದೇ ಬಿಡ್ತು

    upendra's political party launchd

    ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷ ಅಖಾಡಕ್ಕಿಳಿದಿದೆ. ಯುಪಿಪಿಐ (uppi) ಅನ್ನೋ ಹೆಸರಲ್ಲಿ ಐ ಅಕ್ಷರನ್ನು ಡಿಲೀಟ್ ಮಾಡುವ ಮೂಲಕ ಉಪ್ಪಿ, ತಮ್ಮ ಹೊಸ ಪಕ್ಷವನ್ನು ಆರಂಭಿಸಿದದಾರೆ. ಉತ್ತಮ ಪ್ರಜಾಕೀಯ ಪಕ್ಷ. ಉಪೇಂದ್ರ ಅವರ ಹೆಸರಿನ ಇಂಗ್ಲಿಷ್ ಸ್ಪೆಲ್ಲಿಂಗ್‍ನ ಆರಂಭದ ಮೂರು ಅಕ್ಷರಗಳೇ ಪಕ್ಷದ ಶಾರ್ಟ್ ಫಾರ್ಮ್.

    ಪಕ್ಷದಲ್ಲಿನ I ಅನ್ನು ತೆಗೆದು ಸುಟ್ಟ ಉಪ್ಪಿ, ತಮ್ಮ ಎಂದಿನ ಸ್ಟೈಲ್‍ನಲ್ಲೇ (I)ಐ ಅಂದ್ರೆ ನಾನು. ಇನ್ನು ಮುಂದೆ ನಾನು ಎಂಬ ಪದ ಇರಬಾರದು. ಮುಂದಿನ ವರ್ಷದಿಂದ ಪ್ರಜಾಕೀಯ ಪಕ್ಷದ ಹುಟ್ಟುಹಬ್ಬವನ್ನಷ್ಟೇ ಆಚರಿಸಬೇಕು. ನನ್ನ ಹುಟ್ಟುಹಬ್ಬ ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ್ರು.

    ಉಪ್ಪಿ ಪಕ್ಷದ ವೆಬ್‍ಸೈಟ್‍ನ್ನು ಕೂಡಾ ಇದೇ ವೇಳೆ ಆರಂಭಿಸಲಾಯ್ತು. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇದುವರೆಗೆ ಯಾವುದೆ ನಿರ್ಣಯ ಕೈಗೊಂಡಿಲ್ಲ. ಎಲ್ಲ ಸಿದ್ಧತೆಗಳೂ ಪೂರ್ಣಗೊಂಡರೆ, ಸ್ಪರ್ಧೆಯ ಕುರಿತು ಯೋಚಿಸುತ್ತೇವೆ ಎಂದಿದ್ದಾರೆ ಉಪೇಂದ್ರ.

  • ಉಪ್ರೇಂದ್ರ A ಚಿತ್ರ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿತ್ತು

    A movie image

    A ಶುರುವಾಗಿದ್ದೇ ಒಂದು ಚಾಲೆಂಜ್. ಸಿನಿಮಾ ಪೂರ್ತಿಯಾಗಿದ್ದು ಒಂದು ಯುದ್ಧ. ರಿಲೀಸ್ ಮಾಡಿದ್ದು ಮಹಾಯುದ್ಧ. ಪ್ರೇಕ್ಷಕರು ಮೆಚ್ಚಿದರೂ ಅದನ್ನು ಥಿಯೇಟರಿನಲ್ಲಿ ಉಳಿಸಿಕೊಳ್ಳಲು ನಡೆದಿದ್ದು ಮತ್ತೆ ಹೋರಾಟ. 

    #AMovie #Upendra #chandini #AMovieStory #Gurukiran 

     

  • ಏಪ್ರಿಲ್ 1ಕ್ಕೆ ಹೋಮ್ ಮಿನಿಸ್ಟರ್

    ಏಪ್ರಿಲ್ 1ಕ್ಕೆ ಹೋಮ್ ಮಿನಿಸ್ಟರ್

    ಹೋಮ್ ಮಿನಿಸ್ಟರ್. ಉಪೇಂದ್ರ, ವೇದಿಕಾ ಮತ್ತು ತಾನ್ಯಾ ಹೋಪ್ ನಟಿಸಿರೋ ಚಿತ್ರವಿದು. ಏಪ್ರಿಲ್ 1ಕ್ಕೆ ರಿಲೀಸ್ ಡೇಟ್ ಘೋಷಣೆ ಮಾಡಿದೆ. ಸುಜಯ್ ಶ್ರೀಹರ್ಷ ನಿರ್ದೇಶನದ ಚಿತ್ರಕ್ಕೆ ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ವೀರಮಾಚಿನೇನಿ ನಿರ್ಮಾಪಕರು.

    ಅಂದಹಾಗೆ ಹೋಮ್ ಮಿನಿಸ್ಟರ್ ಅಂದ್ರೆ ಯಾರು ಅನ್ನೋದೇ ಸಸ್ಪೆನ್ಸ್ ಅಂತೆ. ಉಪ್ಪಿಯನ್ನು ಆಟವಾಡಿಸೋದು ವೇದಿಕಾ. ಯಾಕೆ ಅನ್ನೋದು ಚಿತ್ರ ರಿಲೀಸ್ ಆದ್ಮೇಲೆ ಗೊತ್ತಾಗುತ್ತೆ. ಕೊರೊನಾ ಕಾರಣದಿಂದ 2 ವರ್ಷ ಲೇಟ್ ಆಗಿ ಬರುತ್ತಿರೋ ಚಿತ್ರವಿದು.

  • ಐ ಲವ್ ಯು, ನನ್ನೇ ಪ್ರೀತ್ಸೆ - ಉಪೇಂದ್ರ

    upendra teams up with r chandru

    ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯದಿಂದ ಹಿಂದೆ ಸರಿದು, ಸದ್ಯಕ್ಕೆ ಸಿನಿಮಾಗೇ ಸೀಮಿತವಾಗಿದ್ದಾರೆ. ಚುನಾವಣೆಯಿಂದ ಹಿಂದೆ ಸರಿದಿರುವ ಉಪೇಂದ್ರ ಸಿನಿಮಾಗೇ ಸಮಯ ಮೀಸಲಿಡುತ್ತಿದ್ದಾರೆ. ಉಪೇಂದ್ರ ಈಗ ಐ ಲವ್ ಯೂ ಸಿನಿಮಾಗೆ ಓಕೆ ಅಂದಿದ್ದಾರೆ.

    ಇದು ಆರ್.ಚಂದ್ರು ನಿರ್ದೇಶನದ ಸಿನಿಮಾ. ಈ ಹಿಂದೆ ಉಪೇಂದ್ರ ಅವರಿಗಾಗಿ ಬ್ರಹ್ಮ ಚಿತ್ರ ನಿರ್ದೇಶಿಸಿದ್ದ ಚಂದ್ರು, ಮತ್ತೊಮ್ಮೆ ಉಪ್ಪಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಶೇಷ. 

    ಚಿತ್ರದ ಟೈಟಲ್‍ನಲ್ಲಿ ಉಪ್ಪಿಯ ನೆರಳೂ ಇದೆ. ಐ ಲವ್ ಯೂ ಚಿತ್ರಕ್ಕೆ ನನ್ನೇ ಪ್ರೀತ್ಸೆ ಅನ್ನೋದು ಟ್ಯಾಗ್‍ಲೈನ್. ಪ್ರೀತ್ಸೆ, ಉಪ್ಪಿ ಅಭಿನಯದ ಬ್ಲಾಕ್‍ಬಸ್ಟರ್ ಸಿನಿಮಾ ಅನ್ನೋದು ನೆನಪಿಸುವ ಅಗತ್ಯವೇ ಇಲ್ಲ. 

    ಚಿತ್ರ ಮೇ 18ರಂದು ಸೆಟ್ಟೇರುತ್ತಿದೆ. ಆ ದಿನ ಚಿತ್ರದ ಎಲ್ಲ ತಂತ್ರಜ್ಞರು, ಕಲಾವಿದರ ವಿವರ ನೀಡೋದಾಗಿ ಚಿತ್ರತಂಡ ತಿಳಿಸಿದೆ. ಈಗಾಗಲೇ ಉಪ್ಪಿ ರುಪ್ಪಿ, ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಉಪೇಂದ್ರ ಈಗ 3ನೇ ಸಿನಿಮಾ ಒಪ್ಪಿಕೊಂಡಿರುವುದೇ ವಿಶೇಷ.

  • ಐ ಲವ್ ಯು'ಗೆ ಬ್ರಹ್ಮಾನಂದಂ

    bramhanandam i upendra's i love you

    ಐ ಲವ್ ಯು. ಆರ್.ಚಂದ್ರು ನಿರ್ದೇಶನದ ಉಪೇಂದ್ರ, ರಚಿತಾರಾಂ ಅಭಿನಯದ ಸಿನಿಮಾ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ, ಪ್ರೀತಿಯ ಬಗ್ಗೆ ಹೊಸ ಭಾಷ್ಯೆಯನ್ನೇ ಬರೆಯಲಿದೆ ಅಂತಿದ್ದಾರೆ ಚಂದ್ರು. ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಕಾರಣ, ಎರಡೂ ಭಾಷೆಯ ಕಲಾವಿದರನ್ನು ಸೇರಿಸಲಾಗುತ್ತಿದೆ. ಹೀಗಾಗಿ ಚಿತ್ರಕ್ಕೆ ತೆಲುಗು ಕಾಮಿಡಿ ಕಿಂಗ್ ಬ್ರಹ್ಮಾನಂದಂ ಎಂಟ್ರಿ ಕೊಟ್ಟಿದ್ದಾರೆ.

    ಬ್ರಹ್ಮಾನಂದಂಗೆ ಕನ್ನಡದಲ್ಲಿ ಇದು 2ನೇ ಸಿನಿಮಾ. ಈ ಮೊದಲು ನಿನ್ನಿಂದಲೇ ಚಿತ್ರದಲ್ಲಿ ನಟಿಸಿದ್ದ ಬ್ರಹ್ಮಾನಂದಂ, 2ನೇ ಬಾರಿ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬ್ರಹ್ಮಾನಂದಂ ಅಷ್ಟೇ ಅಲ್ಲ, ಪೋಸಾನಿ ಕೃಷ್ಣಮುರಳಿ, ಸತ್ಯಬಾಬು ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

  • ಐ ಲವ್ ಯೂ 22 ಕೋಟಿ ಲೂಟಿ..!

    i love you loots box office

    ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ ಐ ಲವ್ ಯೂ. ಸಿನಿಮಾ ಡಿಫರೆಂಟ್ ಆಗಿ ಪ್ರೇಕ್ಷಕರಿಗೆ ಇಷ್ಟವಾಗಿದ್ದು ಒಂದು ಕಾರಣವಾದರೆ, ರಚಿತಾ ರಾಮ್ ಉಪೇಂದ್ರ ಅಭಿನಯದ ಬೋಲ್ಡ್ ದೃಶ್ಯಗಳ ವಿವಾದ ಇನ್ನೊಂದು ಕಾರಣ. ಇದೆಲ್ಲದರ ಮಧ್ಯೆ ಗೆಲುವಿನ ನಗು ಬೀರಿರುವುದು ನಿರ್ದೇಶಕ ಕಂ ನಿರ್ಮಾಪಕ ಆರ್. ಚಂದ್ರು.

    ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ 3 ರಾಜ್ಯಗಳಲ್ಲಿ ರಿಲೀಸ್ ಆದ ಐ ಲವ್ ಯೂ ಗಳಿಕೆ 22 ಕೋಟಿಯ ಗಡಿ ದಾಟಿದೆ. ಅದ್ಧೂರಿ ಸಿನಿಮಾ ಮಾಡಿದ ಚಂದ್ರು, ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಇದರ ಜೊತೆಗೆ ಥಿಯೇಟರ್‍ಗಳ ಸಂಖ್ಯೆ ಹೆಚ್ಚುತ್ತಿದೆ. ಈ ವಾರದ ಅಂತ್ಯಕ್ಕೆ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

  • ಐ ಲವ್ ಯೂ ಅಡ್ವಾನ್ಸ್ ಬುಕ್ಕಿಂಗ್ ಓಪನ್

    i love you advanced booking starts

    ಉಪೇಂದ್ರ, ರಚಿತಾ ರಾಮ್, ಸೋನುಗೌಡ ನಟನೆಯ, ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರ, ಜೂನ್ 14ಕ್ಕೆ ರಿಲೀಸ್ ಆಗುತ್ತಿದೆ. 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗೆ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಭರ್ಜರಿ ಬೇಡಿಕೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿರುವ ಸಿನಿಮಾಗೆ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

    ಐ ಲವ್ ಯೂ ಚಿತ್ರದಲ್ಲಿ ರಚಿತಾ ರಾಮ್, ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಟ್ರೇಲರ್ ಹಾಗೂ ಚಿತ್ರದ ಹಾಡುಗಳು ಕ್ರೇಜ್ ಹುಟ್ಟಿಸಿವೆ. 

  • ಐ ಲವ್ ಯೂ ಉಪ್ಪಿ ಅಂದಿದ್ದು ರಚಿತಾ ರಾಮ್

    rachitha in i love you

    ಐ ಲವ್ ಯೂ. ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ನಿನ ಸಿನಿಮಾ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

    ಈ ಮೊದಲು ಚಂದ್ರು ನಿರ್ದೇಶನದ ಕನಕ ಚಿತ್ರದಲ್ಲಿ ರಚಿತಾ ನಟಿಸಬೇಕಿತ್ತು. ಆಗಿರಲಿಲ್ಲ. ಉಪೇಂದ್ರ ಜೊತೆ ಉಪ್ಪಿರುಪ್ಪಿ ಚಿತ್ರದಲ್ಲಿ ರಚಿತಾ ನಾಯಕಿ. ಚಿತ್ರ ಶೂಟಿಂಗ್ ಹಂತದಲ್ಲಿದೆ. ಈಗ ಉಪೇಂದ್ರ ಮತ್ತು ಆರ್.ಚಂದ್ರು ಜೊತೆಯಾಗಿದ್ದಾರೆ ರಚಿತಾ ರಾಮ್.

    ಜೂನ್ 10ರಿಂದ ಚಿತ್ರೀಕರಣ ಶುರುವಾಗಲಿದೆ. ಪ್ರೀತಿ, ಪ್ರೇಮ ಎಲ್ಲ ಪುಸ್ತಕದ ಬದ್ನೇಕಾಯ್ ಎಂದಿದ್ದ ಉಪೇಂದ್ರ, ಇಲ್ಲಿ ಬೇರೆಯದ್ದೇ ಸಂದೇಶ ಕೊಡಲಿದ್ದಾರೆ. ಎ, ಉಪೇಂದ್ರ ಮತ್ತು ಪ್ರೀತ್ಸೆ.. ಉಪ್ಪಿ ಅಭಿನಯದ ಮೂರು ಚಿತ್ರಗಳೂ ನೆನಪು ಮಾಡುವಂತಾ ಕಥೆ ಚಿತ್ರದಲ್ಲಿದೆಯಂತೆ.

  • ಐ ಲವ್ ಯೂ ಚಿತ್ರದಲ್ಲಿ ಉಪ್ಪಿಯ ಹೆಸರೇನು..?

    speciality of upendra's name in i love you

    ಎ ಚಿತ್ರದಲ್ಲಿ ಉಪ್ಪಿಯ ಹೆಸರು ಉಪೇಂದ್ರ. ಉಪೇಂದ್ರ ಚಿತ್ರದಲ್ಲಿ ನಾನು. ಉಪ್ಪಿ-2 ಚಿತ್ರದಲ್ಲಿ ಅನ್‍ನೋನು. ಪ್ರೀತ್ಸೆ ಚಿತ್ರದಲ್ಲಿ ಚಂದ್ರು. ಅಂದಹಾಗೆ ಐ ಲವ್ ಯೂ ಚಿತ್ರದ ನಿರ್ದೇಶಕ ಕೂಡಾ ಚಂದ್ರು. ಎ, ಉಪೇಂದ್ರ ಮತ್ತು ಪ್ರೀತ್ಸೆ ಚಿತ್ರಗಳ ಸ್ಫೂರ್ತಿಯಲ್ಲೇ ಬರುತ್ತಿರುವ ವಿಭಿನ್ನ ಲವ್ ಸ್ಟೋರಿ ಐ ಲವ್ ಯೂ. ಹೀಗಾಗಿಯೇ ಉಪ್ಪಿ ಪಾತ್ರದ ಹೆಸರೇನು ಅನ್ನೋ ಕುತೂಹಲವೂ ಇದೆ.

    ಉಪೇಂದ್ರ ಪಾತ್ರಕ್ಕೆ ಚಂದ್ರು ಚಿತ್ರದಲ್ಲಿ ಸಂತೋಷ ಅನ್ನೋ ಹೆಸರು ಕೊಟ್ಟಿದ್ದಾರೆ. ಇದು ನಾನು ಮತ್ತು ಅನ್‍ನೋನು ಪಾತ್ರಗಳ ಒಟ್ಟು ಹೆಸರು ಅನ್ನೋದು ಚಂದ್ರು ವಿವರಣೆ. ನಾನು ಮತ್ತು ಅನ್‍ನೋನು ಕ್ಯಾರೆಕ್ಟರ್‍ಗಳು ಒಟ್ಟಾಗಿದ್ದಾಗ ಸಂತೋಷ ತಂತಾನೇ ಬರುತ್ತೆ. ಅದೇ ಕಾನ್ಸೆಪ್ಟ್‍ನಲ್ಲಿ ಉಪ್ಪಿ ಪಾತ್ರಕ್ಕೆ ಸಂತೋಷ ಅನ್ನೋ ಹೆಸರಿಡಲಾಗಿದೆ ಅಂತಾರೆ ಚಂದ್ರು. ಐ ಲವ್ ಯೂ ಚಿತ್ರದ ವಿಭಿನ್ನ ವಿಶೇಷಗಳ ಸರಣಿಯಲ್ಲಿ ಇನ್ನೂ ಹಲವಾರು ಅಚ್ಚರಿಗಳಿವೆ.