` upendra, - chitraloka.com | Kannada Movie News, Reviews | Image

upendra,

  • ಉಪ್ಪಿ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಯಾರು ಗೊತ್ತಾ..?

    new music director in i love you

    ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಷನ್‍ನ ಹೊಸ ಸಿನಿಮಾ `ಐ ಲವ್ ಯು'. ಈ ಚಿತ್ರಕ್ಕೆ ಇನ್ನೂ ನಾಯಕಿಯ ಹುಡುಕಾಟ ನಡೆಯುತ್ತಿದೆ. ತೆಲುಗು ಮತ್ತು ಕನ್ನಡ.. ಎರಡೂ ಭಾಷೆಗೆ ಓಕೆಯಾಗುವ ನಾಯಕಿಯರಿಗಾಗಿ ಚಂದ್ರು ಹುಡುಕುತ್ತಿದ್ದಾರೆ. ಈಗಾಗಲೇ ತೆಲುಗಿನ ಸ್ಟಾರ್ ನಟಿಯೊಬ್ಬರ ಜೊತೆ ಮಾತುಕತೆಯೂ ನಡೆದಿದೆಯಂತೆ. ಇದರ ಮಧ್ಯೆ ಒಬ್ಬ ಹೊಸ ಸಂಗೀತ ನಿರ್ದೇಶಕರಿಗೆ ಆರ್.ಚಂದ್ರು ಅವಕಾಶ ಕೊಟ್ಟಿದ್ದಾರೆ.

    ಐ ಲವ್ ಯು ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಡಾ. ಕಿರಣ್ ತೋಟಂಬೈಲು. ಯಾರಿವರು ಅಂತಾ ತಲೆ ಕೆಡಿಸಿಕೊಳ್ಳಬೇಡಿ. ನಟಿ ಪೂಜಾಗಾಂಧಿ ಜೊತೆ ವಿವಾದ ಮಾಡಿಕೊಂಡಿದ್ದ ಕಿರಣ್. ಅವರೇ ಇವರು. ಇವರೇ ಅವರು.

    ಕಿರಣ್ ಅವರು ಮಾಡಿಕೊಂಡು ಬಂದಿದ್ದ ಟ್ಯೂನ್‍ಗಳು ಇಷ್ಟವಾಗಿ ಸಂಗೀತ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ ಚಂದ್ರು. ಅಂದಹಾಗೆ ಚಂದ್ರು ಸಿನಿಮಾದಲ್ಲಿ ಹಾಡುಗಳು ಚೆನ್ನಾಗಿರುತ್ತವೆ. ತಮಗೆ ಅನ್ನಿಸಿದಂತೆ ಟ್ಯೂನ್ ಬರುವವರೆಗೂ ಚಂದ್ರು ಬಿಡೋದಿಲ್ಲ. ಹೀಗಾಗಿ ಐ ಲವ್ ಯೂ ಸಿನಿಮಾದಲ್ಲೂ ಒಳ್ಳೆಯ ಹಾಡುಗಳಿರುತ್ತವೆ ಅನ್ನೋ ನಿರೀಕ್ಷೆ ಇಟ್ಟುಕೊಳ್ಳಬಹುದು.

  • ಉಪ್ಪಿ ಜೊತೆ ನಟಿಸೋ ಆಸೆ ಇದೆಯಾ..?

    ಉಪ್ಪಿ ಜೊತೆ ನಟಿಸೋ ಆಸೆ ಇದೆಯಾ..?

    ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಟರ್ ಆಗುತ್ತಿದ್ದಾರೆ. ಉಪ್ಪಿ ನಾನೊಂದು ಕಥೆಗೆ ಕೂತಿದ್ದೇನೆ ಅನ್ನೋದು ಹೊಸದಲ್ಲ. ಅವರು ಆಗಾಗ್ಗೆ ಹೇಳ್ತಾನೇ ಇರ್ತಾರೆ. ಆದರೆ ಡೈರೆಕ್ಷನ್ ಮಾಡೋಕೆ ಮನಸ್ಸು ಮಾಡೋದು ಮಾತ್ರ, ಆ ಕಥೆಗೊಂದು ಸ್ವರೂಪ ಸಿಕ್ಕಾಗ.

    ಈಗ ಯಾವುದೋ ಕಥೆ ವರ್ಕೌಟ್ ಆದ ಹಾಗಿದೆ. ಹೊಸ ಸಿನಿಮಾ ಡೈರೆಕ್ಷನ್ಗೆ ಕೈ ಹಾಕಿದ್ದಾರೆ. ಆ ಚಿತ್ರಕ್ಕಾಗಿ ಅವರೀಗ ಹೊಸಬರನ್ನು ಹುಡುಕುತ್ತಿದ್ದಾರೆ.

    14ರಿಂದ 60 ವರ್ಷದವರೆಗಿನ ಕಲಾವಿದರು ತಾವು ನಟಿಸಿರುವ 2 ನಿಮಿಷದ ವಿಡಿಯೋ ಮಾಡಿ ಉಪೇಂದ್ರ ಅವರಿಗೆ ಮೇಯ್ಲ್ ಮಾಡಬೇಕು. This email address is being protected from spambots. You need JavaScript enabled to view it. ಗೆ ಕಳುಹಿಸಿಕೊಡಬೇಕು. ನಟ ನಟಿ ಇಬ್ಬರೂ ಬೇಕಿದ್ದಾರೆ. ಶ್ ನಂತರ ಹೊಸಬರನ್ನೇ ಹಾಕಿಕೊಂಡು ಮಾಡ್ತಿರೋ ಹೊಸ ಸಿನಿಮಾ ಇದು. ತರ್ಲೆ ನನ್ಮ ಚಿತ್ರದ ಮೂಲಕ ಜಗ್ಗೇಶ್, ಶ್ ಮೂಲಕ ಕುಮಾರ್ ಗೋವಿಂದ್ರನ್ನು ಗೆಲ್ಲಿಸಿದ್ದ ಉಪ್ಪಿ, ತಮಗೆ ತಾವೇ ಡೈರೆಕ್ಟ್ ಮಾಡಿಯೂ ಗೆದ್ದಿದ್ದರು. ಈಗ ಮತ್ತೊಮ್ಮೆ ಹೊಸಬರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರು ಇತ್ತೀಚೆಗೆ ಬಿಟ್ಟಿದ್ದ ನಾಮದ ಟೈಟಲ್ನಲ್ಲೇ ಹೊಸ ಸಿನಿಮಾನಾ..? ಗೊತ್ತಿಲ್ಲ. ಏಕೆಂದ್ರೆ ಇದು ಉಪ್ಪಿ ಸಿನಿಮಾ.

  • ಉಪ್ಪಿ ಜೊತೆ ಹರಿಪ್ರಿಯಾ

    upendra and haripriya to pair up for the firt time

    ಉಪೇಂದ್ರ ಅಭಿನಯದ ಚಿತ್ರಗಳ ಸಂಖ್ಯೆ 50ರ ಸಮೀಪ ಇದೆ. ಹರಿಪ್ರಿಯಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೇ 10 ವರ್ಷ ತುಂಬಿದೆ. ಇಷ್ಟು ವರ್ಷಗಳ ಕಾಲ ಈ ಜೋಡಿ ಏಕೆ ಜೊತೆಯಾಗಲಿಲ್ಲ ಎಂಬ ಅಭಿಮಾನಿಗಳ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಉಪೇಂದ್ರ ಮತ್ತು ಹರಿಪ್ರಿಯಾ ಜೊತೆಯಾಗಿ ನಟಿಸುತ್ತಿದ್ದಾರೆ.

    ಗಜ ಖ್ಯಾತಿಯ ಕೆ.ಮಾದೇಶ್ ನಿರ್ದೇಶನದ ಹೊಸ ಚಿತ್ರದಲ್ಲಿ ಉಪೇಂದ್ರ ಮತ್ತು ಹರಿಪ್ರಿಯಾ ಜೋಡಿ. ಚಿತ್ರದಲ್ಲಿ ನನ್ನದು ಮಾಡ್ ಹುಡುಗಿಯ ಪಾತ್ರ ಎನ್ನುವ ಹರಿಪ್ರಿಯಾ ಚಿತ್ರದ ಗುಟ್ಟು ಬಿಟ್ಟುಕೊಡಲ್ಲ. ಇದಕ್ಕೂ ಮೊದಲು ಜಾಹೀರಾತೊಂದರಲ್ಲಿ ಇಬ್ಬರೂ ಒಟ್ಟಿಗೇ ಕಾಣಿಸಿಕೊಂಡಿದ್ದರಷ್ಟೆ. ಸಿನಿಮಾದಲ್ಲಿ ಇದೇ ಮೊದಲು.

    ಸದ್ಯಕ್ಕೆ ಉಪೇಂದ್ರ, ಬುದ್ದಿವಂತ 2, ಕಬ್ಜ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಹರಿಪ್ರಿಯಾ ಕೂಡಾ ಬ್ಯುಸಿ. ಇವೆಲ್ಲ ಕಂಪ್ಲೀಟ್ ಆದ ನಂತರವೇ ಈ ಚಿತ್ರ ಸೆಟ್ಟೇರಲಿದೆ. ಜೂನ್‍ನಲ್ಲಿ ಶೂಟಿಂಗ್ ಶುರುವಾಗಲಿದೆ ಎಂಬ ಸುಳಿವು ಕೊಟ್ಟಿದ್ದಾರೆ ಹರಿಪ್ರಿಯಾ.

  • ಉಪ್ಪಿ ಡೈರೆಕ್ಷನ್ ಸಿನಿಮಾ ಶುರುವಾಗೋದ್ ಯಾವಾಗ?

    ಉಪ್ಪಿ ಡೈರೆಕ್ಷನ್ ಸಿನಿಮಾ ಶುರುವಾಗೋದ್ ಯಾವಾಗ?

    ಉಪೇಂದ್ರ ತಮ್ಮ ಎಂದಿನ ಶೈಲಿಯಲ್ಲಿ ಒಂದು ಪೋಸ್ಟರ್ ಬಿಟ್ಟು, ತಲೆಗೆ ಕುತೂಹಲದ ಹುಳ ಬಿಟ್ಟು, ಏನನ್ನೂ ಹೇಳದೆ.. ನೋಡುವವರ ಕಲ್ಪನೆಗೇ ಎಲ್ಲವನ್ನೂ ಬಿಟ್ಟು.. ಮೂರು ನಾಮ ಅಥವಾ ತಿರುಪತಿ ನಾಮ ಅಥವಾ ಯು&ಐ ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದೇನೆ ಎಂಬ ಸುಳಿವನ್ನು ಕೊಟ್ಟು.. ಸುಮ್ಮನಾಗಿಬಿಟ್ಟಿದ್ದಾರೆ.

    ಆ ಸಿನಿಮಾ ಕಥೆ ಏನು? ಸಸ್ಪೆನ್ಸ್.

    ಅದು ನಾನು ಮತ್ತು ನೀನು ಫಿಲಾಸಫಿ ಸ್ಟೋರಿನಾ? ಗೊತ್ತಿಲ್ಲ.

    ಉಪೇಂದ್ರ ಮತ್ತು ಉಪ್ಪಿ2. ಎರಡೂ ಚಿತ್ರಗಳ ಮುಂದುವರಿದ ಭಾಗನಾ? ಗೊತ್ತಿಲ್ಲ.

    ಉಪ್ಪಿ ಸ್ಟೈಲಿನ ಪೊಲಿಟಿಕಲ್ ಡ್ರಾಮಾನಾ? ಗೊತ್ತಿಲ್ಲ.

    ಯಾವಾಗ ಶುರುವಾಗುತ್ತೆ? ಗೊತ್ತಿಲ್ಲ. ಆದರೆ.. ಉಪ್ಪಿ ಕೈಲಿರೋ ಸಿನಿಮಾಗಳು ಮುಗಿದ ಮೇಲೆ ಅನ್ನೋದು ಮಾತ್ರ ಪಕ್ಕಾ.

    ಕಾರಣ ಇಷ್ಟೆ, ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಿಗೇ ನಟಿಸಿರುವ ತ್ರಿಶೂಲಂ (ತೆಲುಗಿನ ಬಲುಪು ರೀಮೇಕ್) ರಿಲೀಸ್ ಆಗೋಕೆ ರೆಡಿಯಾಗಿದೆ. ಓಂಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂಗೆ ಕನಕಪುರ ಶ್ರೀನಿವಾಸ್ ನಿರ್ಮಾಪಕ.

    ಉಪೇಂದ್ರ, ವೇದಿಕಾ, ತಾನ್ಯಾ ಹೋಪ್ ನಟಿಸಿರುವ ಹೋಮ್ ಮಿನಿಸ್ಟರ್ ಕೂಡಾ ರೆಡಿಯಾಗಿದೆಯಂತೆ.

    ಇನ್ನು ಉಪ್ಪಿ ಮತ್ತು ಹರಿಪ್ರಿಯಾ ಇದೇ ಮೊದಲ ಬಾರಿಗೆ ಜೋಡಿಯಾಗಿರುವ ಲಗಾಮ್ ಶೂಟಿಂಗ್ ನಡೆಯುತ್ತಿದೆ. ಕೆ.ಮಾದೇಶ್ ನಿರ್ದೇಶನದ ಲಗಾಮ್ ಬೇಗನೇ ಮಗಿಯುವ ಸೂಚನೆಗಳಿವೆ.

    ಬುದ್ದಿವಂತ 2 ಚಿತ್ರದ ಶೂಟಿಂಗ್ ಇನ್ನೂ ಶುರುವಾಗಬೇಕಿದೆ. ರಾಮ್ ಗೋಪಾಲ್ ವರ್ಮಾ ಚಿತ್ರದ ಸ್ಟೇಟಸ್ ಯಾವಾಗ ಅಪ್‍ಡೇಟ್ ಆಗುತ್ತೋ ಗೊತ್ತಿಲ್ಲ.

    ಇದೆಲ್ಲದರ ಮಧ್ಯೆ ಉಪೇಂದ್ರ ಅವರ ಬಹುನಿರೀಕ್ಷಿತ ಕಬ್ಜ, ಕುತೂಹಲ ಹುಟ್ಟಿಸುತ್ತಿದೆ. ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ಕಬ್ಜ ಚಿತ್ರದ ಮೇಕಿಂಗ್ ಅದ್ಧೂರಿಯಾಗಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕಬ್ಜ, 2022ರ ಆರಂಭದಲ್ಲಿ ರಿಲೀಸ್ ಆಗಬಹುದು.

    ಸ್ಸೋ.. ಉಪ್ಪಿ ಡೈರೆಕ್ಷನ್ ಯಾವಾಗ ಶುರು ಎಂಬ ಪ್ರಶ್ನೆಗೆ ಈ ಎಲ್ಲ ಉತ್ತರಗಳಲ್ಲಿಯೇ ಉತ್ತರವೂ ಇದೆ.

  • ಉಪ್ಪಿ ತಪ್ಪು ಮಾಡಿಲ್ಲ - ಹೈಕೋರ್ಟ್ 

    upendra relaed by high court

    ನಟ, ನಿರ್ದೇಶಕ ಉಪೇಂದ್ರ ವಿರುದ್ಧ ಒಂದು ಅಕ್ರಮದ  ಆರೋಪ ಕೇಳಿ ಬಂದಿತ್ತು. ತಾವರೆಕೆರೆಯ ಬ್ಯಾಲಾಳುವಿನಲ್ಲಿ ಉಪೇಂದ್ರ ಖರೀದಿಸಿದ್ದ 17 ಎಕರೆ 10 ಗುಂಟೆ ಜಮೀನು ಕಾನೂನು ಬಾಹಿರ ಎಂದು ಆರೋಪಿಸಲಾಗಿತ್ತು.  ಭೂ ಕಂದಾಯ ಕಾಯ್ದೆ 79A, B ಉಲ್ಲಂಘಿಸಿದ ಆರೋಪದ ಮೇಲೆ ಉಪೇಂದ್ರ ವಿರುದ್ಧ ದೂರು ದಾಖಲಾಗಿತ್ತು. ಕೃಷಿ ಭೂಮಿಯನ್ನು ಖರೀದಿಸಿದ್ದ ಕಾರಣಕ್ಕೇ ಈ ಆರೋಪ ಎದುರಿಸಿದ್ದ ಉಪೇಂದ್ರಗೆ ಈಗ ಹೈಕೋರ್ಟ್ ರಿಲೀಫ್ ನೀಡಿದೆ.

    ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯ ಬ್ಯಾಲಾಳು ಗ್ರಾಮದಲ್ಲಿ ಉಪೇಂದ್ರ ಭೂಮಿ ಖರೀದಿಸಿದ್ದರು. 2015ರಲ್ಲಿ ನಡೆದಿದ್ದ ಭೂಮಿ ಖರೀದಿಯಲ್ಲಿ ಯಾವುದೇ ಅಕ್ರಮ ಅಥವಾ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಈ ಹಿಂದೆ ಏಕಸದಸ್ಯ ನ್ಯಾಯಪೀಠದಲ್ಲೂ ಉಪೇಂದ್ರ ತಪ್ಪು ಮಾಡಿಲ್ಲ ಎಂದು ತೀರ್ಪು ಬಂದಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. 

    ತೀರ್ಪು ಉಪೇಂದ್ರ ಅವರಿಗಷ್ಟೇ ಅಲ್ಲ, ನಮ್ಮ ಅಭಿಮಾನದ ನಟ, ತಪ್ಪು ಮಾಡಿರಬಹುದಾ ಎಂದು ಗೊಂದಲಕ್ಕೊಳಗಾಗಿದ್ದ ಅಭಿಮಾನಿಗಳಿಗೂ ಇದು ಸಂತಸ ತಂದಿದೆ.

  • ಉಪ್ಪಿ ಪಕ್ಷದ ಪಾರದರ್ಶಕ ಪ್ರಣಾಳಿಕೆ ಬಂತು..!

    uppi is kpjp manifesto

    ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿ, ರಾಜಕೀಯಕ್ಕೆ ಬಂದಿರೋದು ಹಳೆಯ ವಿಷಯ. ಈUವರು ತಮ್ಮದೇ ಪಕ್ಷದ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಇದು ಉಪೇಂದ್ರ ಅವರ ಪಕ್ಷದ ಪ್ರಣಾಳಿಕೆಯ ಮೊದಲ ಕಂತು.

    ಸಂಪೂರ್ಣ ಪಾರದರ್ಶಕ ಆಡಳಿತದ ಭರವಸೆ ಕೊಟ್ಟಿರುವ ಉಪೇಂದ್ರ, ಸರ್ಕಾರದ ಪ್ರತಿಯೊಂದು ನಡೆಯನ್ನೂ ಜನರ ಮುಂದಿಡುವ ಭರವಸೆ ಕೊಟ್ಟಿದ್ದಾರೆ. ಪಾರದರ್ಶಕ ಆಡಳಿತ, ಜನಪ್ರತಿನಿಧಿಗಳ ಕಡ್ಡಾಯ ಹಾಜರಾತಿ, ಟೆಂಡರ್, ಅಧಿಕಾರಿಗಳ ಸಭೆಯ ಬಗ್ಗೆ ಸರ್ಕಾರದ ಸುದ್ದಿವಾಹಿನಿಯಿಂದ ನೇರ ಪ್ರಸಾರ, ಸರ್ಕಾರದ ಪ್ರತಿ ಯೋಜನೆಯ ವಿವರವನ್ನೂ ನೀಡುವ ಆ್ಯಪ್, ಸರ್ಕಾರಿ ನೌಕರರಿಗೆ ಸಮವಸ್ತ್ರ, ಬ್ಯಾಡ್ಜ್.. ಹೀಗೆ ಹಲವು ಭರವಸೆ ಕೊಟ್ಟಿದ್ದಾರೆ.

    ಪ್ರಣಾಳಿಕೆಯಲ್ಲಿ ಅತ್ಯಂತ ವಿಶೇಷ ಎನಿಸಿರುವುದು ಸರ್ಕಾರದ ಪ್ರತಿ ಸಭೆ, ಟೆಂಡರ್ ಪ್ರಕ್ರಿಯೆಗಳನ್ನೂ ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡುವ ಯೋಜನೆ. ಸರ್ಕಾರದ ಪ್ರತಿಯೊಂದು ನಡೆಯೂ ಸಾರ್ವಜನಿಕರಿಗೆ ತಲುಪಬೇಕು, ಮುಚ್ಚಿಡುವಂಥದ್ದಿರಬಾರದು ಎಂಬ ಹಿನ್ನೆಲೆಯಲ್ಲಿ ಈ ಪ್ರಣಾಳಿಕೆ ರೂಪಿಸಿದ್ದಾರೆ.

    ಇಂತಹ ಇನ್ನೂ ಕೆಲವು ಪ್ರಣಾಳಿಕೆಗಳು ಬರಲಿವೆ. ಉಪೇಂದ್ರ ಅವರ ಪಕ್ಷದ ಪ್ರಣಾಳಿಕೆಗೆ ನೀವು ಕೂಡಾ ಸಲಹೆ ನೀಡಬಹುದು.

  • ಉಪ್ಪಿ ಪ್ರಜಾಕೀಯಕ್ಕೆ ಮಹಾರಾಜರ ಬಹುಪರಾಕ್

    yaduveer welcomes upendra's prajakeeya

    ಉಪೇಂದ್ರ ಅವರ ಪ್ರಜಾಕೀಯ, ಕೆಪಿಜೆಪಿ ಪಕ್ಷ ಸ್ಥಾಪನೆ ತನ್ನ ವಿಭಿನ್ನತೆಯಿಂದಾಗಿಯೇ ಗಮನ ಸೆಳೆಯುತ್ತಿರುವ ಪಕ್ಷ. ಉಪೇಂದ್ರ ಅವರನ್ನು ಟೀಕಿಸುವವರು ಒನ್ಸ್ ಎಗೇಯ್ನ್ ಇಲ್ಲಿಯೂ ಇದ್ದಾರೆ. ಹೊಗಳುವವರು ಕೂಡಾ ಜೊತೆಯಲ್ಲಿದ್ದಾರೆ. ಈಗ ಉಪ್ಪಿ ಅವರನ್ನು ಹೊಗಳಿರುವುದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.

    ಇಂಥಾದ್ದೊಂದು ಪಕ್ಷ ರಾಜಕೀಯಕ್ಕೆ ಹಾಗೂ ರಾಜ್ಯಕ್ಕೆ ಬೇಕಿತ್ತು. ಹೊಸ ಆಲೋಚನೆ, ಹೊಸ ಪಕ್ಷ ಹೊಸ ಸಾಧನೆ ಮೂಡಿಬರಲಿ ಎಂದು ಹಾರೈಸಿದ್ದಾರೆ ಯದುವೀರ್. ಹಾಗಂತ ಯದುವೀರ್ ರಾಜಕೀಯಕ್ಕೆ ಬರಬಹುದು, ಉಪ್ಪಿ ಜೊತೆ ಕೈಜೋಡಿಸಬಹುದು ಎಂದೆಲ್ಲ ನಿರೀಕ್ಷೆಗಳನ್ನಿಟ್ಟುಕೊಳ್ಳಬೇಡಿ. ರಾಜಕೀಯದಲ್ಲಿ ನನಗೆ ಆಸಕ್ತಿಯೇ ಇಲ್ಲ ಎಂದಿದ್ದಾರೆ  ಯದುವೀರ್.

     

  • ಉಪ್ಪಿ ಪ್ರಜಾಕೀಯಕ್ಕೆ ಮೊದಲ ಸಕ್ಸಸ್

    upendra image

    ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯದ ಮೂಲಕ ಹಣ ಇಲ್ಲದೆ ರಾಜಕೀಯ ಮಾಡುತ್ತೇನೆ ಎಂದಾಗ, ಇದು ಸಾಧ್ಯಾನಾ..? ಉಪೇಂದ್ರ ಅವರೆಲ್ಲೋ ಭ್ರಮೆಯಲ್ಲಿದ್ದಾರೆ ಎಂದವರಿಗೆ ಮೊದಲ ಯಶಸ್ಸಿನ ಮೂಲಕ ಉತ್ತರ ಕೊಟ್ಟಿದ್ದಾರೆ ಉಪೇಂದ್ರ. 

    ಇತ್ತೀಚೆಗಷ್ಟೇ ಉಪೇಂದ್ರ, ಬೆಂಗಳೂರು ಡ್ರೈನೇಜ್ ಸಮಸ್ಯೆಯ ಕುರಿತು ಸೌರವ್ ಎಂಬುವರ ಜೊತೆ ಫೇಸ್​ಬುಕ್ ಲೈವ್​ನಲ್ಲಿ ಮಾತನಾಡಿದ್ದರು. ಬೆಂಗಳೂರಿನ ಡ್ರೈನೇಜ್ ಸಮಸ್ಯೆಗೆ ಒಂದು ಪರಿಹಅರ ಸೂಚಿಸಿದ್ದರು. ಇಡೀ ಬೆಂಗಳೂರನ್ನು ಸ್ವಚ್ಚ ಬೆಂಗಳೂರು ಮಾಡುವ ಕನಸು ಕಂಡಿದ್ದರು. 

    ಉಪೇಂದ್ರ ಅವರ ಐಡಿಯಾ ಸಿಂಪಲ್ಲಾಗಿತ್ತು. ಪ್ರತಿ ವರ್ಷ ಚರಂಡಿ ದುರಸ್ತಿ ಮಾಡುವ ಟೆಂಡರ್ ಕರೆಯುವುದನ್ನು ಬಿಟ್ಟು, ರಸ್ತೆಯ ಎರಡೂ ಬದಿಗಳಲ್ಲಿ ಪೈಪ್​ಲೈನ್ ಅಳವಡಿಸಿ, ರಸ್ತೆ ಮೇಲೆ ಬಿದ್ದ ನೀರನ್ನು ಒಂದು ಕಡೆ ಶೇಖರಿಸುವ ಪ್ಲಾನ್ ಅದು. ಅದಕ್ಕೀಗ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸಿದ್ದಾರಂತೆ. ಪೈಲಟ್ ಯೋಜನೆಯೊಂದನ್ನು ಮಾಡುವ ಭರವಸೆ ಕೊಟ್ಟಿದ್ದಾರಂತೆ. ಪೈಲಟ್ ಯೋಜನೆ ಯಶಸ್ವಿಯಾದರೆ, ಅದನ್ನು ಸಂಪೂರ್ಣ ಬೆಂಗಳೂರಿಗೆ ಅಳವಡಿಸುವ ಆಶ್ವಾಸನೆ ಸಿಕ್ಕಿದೆಯಂತೆ. ಹೊಸ ಕನಸಿನ ಬೆನ್ನತ್ತಿ ಹೊರಟಿರುವ ಉಪ್ಪಿಗೆ ಶುಭವಾಗಲಿ.

    Related Articles :-

    ಬೆಂಗಳೂರು ಪ್ರವಾಹ ನಿರ್ಮೂಲನೆಗೆ ಉಪ್ಪಿ ಐಡಿಯಾ

  • ಉಪ್ಪಿ ಪ್ರಜಾಕೀಯಕ್ಕೆ ಹುಟ್ಟುಹಬ್ಬವೇ ಶುಭ ಮುಹೂರ್ತ

    upendra to lanch his party today

    ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುವ ಸುದ್ದಿ ಹಳೇದಾಯ್ತು. ಅವರು ಕೆಪಿಜೆಪಿ ಪಕ್ಷ ಸ್ಥಾಪಿಸಿ, ವಿಧಾನಸಭೆ ಟಿಕೆಟ್ ಹಂಚಿಕೆ ವೇಳೆ ಅಸಮಾಧಾನ ಸ್ಫೋಟಿಸಿ, ಪಕ್ಷದ ಸಂಸ್ಥಾಪಕ ಮಹೇಶ್ ಗೌಡರನ್ನು ಪಕ್ಷದಿಂದ ಉಚ್ಚಾಟಿಸಿ ಸುದ್ದಿಯಾಗಿದ್ದರು ಉಪೇಂದ್ರ. ಅದಾದ ಮೇಲೆ ಸ್ವತಃ ತಾವೇ ಮುತುವರ್ಜಿ ವಹಿಸಿ, ಉತ್ತಮ ಪ್ರಜಾಕೀಯ ಪಕ್ಷ (UPP) ಸ್ಥಾಪಿಸಿದ್ದರು. ಆ ಪಕ್ಷಕ್ಕೆ ಹುಟ್ಟುಹಬ್ಬದ ದಿನವೇ ಚಾಲನೆ ನೀಡುತ್ತಿದ್ದಾರೆ ಉಪೇಂದ್ರ.

    ನಮ್ಮದು ಹಣಬಲದ ಪಕ್ಷವಲ್ಲ. ಹೀಗಾಗಿ ಅದ್ಧೂರಿ ಸಭೆ ಮಾಡುತ್ತಿಲ್ಲ. ಸರಳವಾಗಿ ಪಕ್ಷವನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ. ಬನ್ನಿ, ಆಶೀರ್ವದಿಸಿ ಎಂದಿದ್ದಾರೆ ಉಪ್ಪಿ. ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧಿಸುವ ಸಾಧ್ಯತೆಗಳಿವೆ.

  • ಉಪ್ಪಿ ಮತ್ತೆ ಡೈರೆಕ್ಷನ್

    upendra back to direction

    ರಿಯಲ್ ಸ್ಟಾರ್ ಉಪೇಂದ್ರ ಚಿತ್ರಗಳ ಹವಾನೇ ಬೇರೆ.. ಉಪೇಂದ್ರ ಅವರೇ ನಿರ್ದೇಶಿಸಿ ನಟಿಸಿದ ಚಿತ್ರಗಳ ಹವಾನೇ ಬೇರೆ. ಉಪ್ಪಿ ಚಿತ್ರಗಳೆಂದರೆ ಅಲ್ಲೊಂದು ವಿಚಿತ್ರ ಸಂದೇಶ, ವಿಭಿನ್ನ ಕಥಾ ಹಂದರ, ವಿಶೇಷವಾದ ಕಲ್ಪನೆ ಇದ್ದೇ ಇರುತ್ತೆ. ಉಪ್ಪಿ ಮತ್ತೆ ಈಗ ನಿರ್ದೇಶನಕ್ಕೆ ಸಿದ್ಧರಾಗುತ್ತಿದ್ದಾರೆ.

    ಒಂದೆಡೆ ಆರ್.ಚಂದ್ರು ನಿರ್ದೇಶನದ ಕಬ್ಜಾ ಶೂಟಿಂಗ್, ಮತ್ತೊಂದೆಡೆ ಪ್ರಜಾಕೀಯದ ಕೆಲಸ.. ಇವೆಲ್ಲದರ ಮಧ್ಯೆಯೇ ಕಥೆಯೊಂದು ಹುಟ್ಟಿದೆ ಎಂದಿದ್ದಾರೆ ಉಪೇಂದ್ರ.

    ಹಿAದಿನ ಚಿತ್ರಗಳಿಗಿಂಗ ಹೊಸದಾಗಿ ಏನನ್ನಾದರೂ ಕೊಡಬೇಕು ಎನ್ನುವ ತುಡಿತ ಸದಾ ಇರುತ್ತದೆ. ಹೀಗಾಗಿ ಈ ಸಿನಿಮಾ ಖಂಡಿತಾ ವಿಭಿನ್ನವಾಗಿರುತ್ತೆ ಎಂದಿದ್ದಾರೆ. ಯಾವಾಗ ಶುರುವಾಗುತ್ತೆ ಅನ್ನೋದು ಸಸ್ಪೆನ್ಸ್.

  • ಉಪ್ಪಿ ಮತ್ತೆ ಡೈರೆಕ್ಷನ್‍ಗೆ.. 50.. 50.. 

    uppi all set to wear director's cap

    ಉಪ್ಪಿ2 ನಂತರ ಉಪೇಂದ್ರ ನಿರ್ದೇಶನದಿಂದ ದೂರವೇ ಉಳಿದಿದ್ದರು. ಉಪೇಂದ್ರ ಸಿನಿಮಾಗಳು ಕ್ರೇಜ್ ಸೃಷ್ಟಿಸುತ್ತವೆ. ಅದೇ ಉಪೇಂದ್ರ ಡೈರೆಕ್ಷನ್ ಮಾಡಿ ನಟಿಸಿದ್ದರೆ, ಅವು ಡಬಲ್ ಕ್ರೇಜ್ ಹುಟ್ಟಿಸ್ತವೆ. ಈಗ ಉಪ್ಪಿ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.

    ಕನಕಪುರ ಶ್ರೀನಿವಾಸ್ ನಿರ್ಮಾಣದ ಅಧೀರ ಚಿತ್ರಕ್ಕೆ ಉಪೇಂದ್ರ ನಿರ್ದೇಶಕರಾಗುತ್ತಿದ್ದಾರೆ. ಹರಿ ಸಂತೋಷ್ ನಿರ್ದೇಶಿಸಬೇಕಿದ್ದ ಅಧೀರ ಚಿತ್ರವನ್ನು ಉಪ್ಪಿಯೇ ಹೊತ್ತುಕೊಂಡಿದ್ದು, ಸ್ಕ್ರಿಪ್ಟ್ ಬದಲಾವಣೆಯಲ್ಲಿ ನಿರತರಾಗಿದ್ದಾರಂತೆ.

    ಅಂದಹಾಗೆ ಇದು ಉಪೇಂದ್ರ ಅವರ 50ನೇ ಚಿತ್ರವಾಗಲಿದ್ದು, ಚಿತ್ರದ ಬಜೆಟ್ ಕೂಡಾ 50 ಕೋಟಿಯಂತೆ. 

  • ಉಪ್ಪಿ ಸಿಎಂ, ಪಿಎಂ ಆಗೋದೇನೂ ಬೇಡ - ಪ್ರಿಯಾಂಕಾ ಉಪೇಂದ್ರ

    upendra, priyanka in uppi rupi

    ಪತಿಯ ರಾಜಕೀಯ ಪ್ರವೇಶದ ಸುದ್ದಿ ನನಗೂ ಸರ್​ಪ್ರೈಸ್ ಎಂದಿದ್ದ ಪ್ರಿಯಾಂಕಾ ಉಪೇಂದ್ರ, ತಾವು ಮಾತ್ರ ರಾಜಕೀಯಕ್ಕೆ ಬರಲ್ಲ ಎಂದಿದ್ದಾರೆ. ಪತಿಯ ಎಲ್ಲ ಕೆಲಸಗಳಿಗೂ ಸಪೋರ್ಟ್ ಇದೆ ಎಂದೂ ಸ್ಪಷ್ಟಪಡಿಸಿದ್ದಾರೆ.

    ಉಪೇಂದ್ರ ಸಿಎಂ ಆಗೋದೂ ಬೇಡ. ಪಿಎಂ ಆಗೋದೂ ಬೇಡ. ಅವರ ಕೆಲಸದಿಂದ ರಾಜ್ಯದ ಜನರಿಗೆ ಒಳ್ಳೆಯದಾದರೆ ಅಷ್ಟೇ ಸಾಕು. ಅವರಿಗೆ ತಮ್ಮ ನಿಲುವುಗಳಲ್ಲಿ ಸ್ಪಷ್ಟತೆಯಿದೆ. ಪ್ರಾಮಾಣಿಕತೆಯಿದೆ. ಅದನ್ನು ಜನ ಗುರುತಿಸಿದರೆ, ಅದರಿಂದ ರಾಜ್ಯಕ್ಕೂ ಲಾಭವಿದೆ ಎಂದು ಹೇಳಿ ಪತಿಗೆ ಶುಭ ಹಾರೈಸಿದ್ದಾರೆ ಪ್ರಿಯಾಂಕಾ.

  • ಉಪ್ಪಿ ಸಿನಿಮಾ ಶೂಟಿಂಗ್ ಶುರು : ಹೀರೋಯಿನ್ ಯಾರು?

    ಉಪ್ಪಿ ಸಿನಿಮಾ ಶೂಟಿಂಗ್ ಶುರು : ಹೀರೋಯಿನ್ ಯಾರು?

    ಉಪೇಂದ್ರ ಮತ್ತೊಮ್ಮೆ ನಿರ್ದೇಶಕರಾಗಿರೋ ಸಿನಿಮಾ ಯುಐ ಚಿತ್ರದ ಶೂಟಿಂಗ್ ಶುರುವಾಗಿದೆ. ಇತ್ತೀಚೆಗಷ್ಟೇ ಬಂಡಿಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತ್ತು. ಬಹುತೇಕ ಚಿತ್ರರಂಗವೇ ಹಾಜರಿದ್ದು ಡೈರೆಕ್ಟರ್ ಉಪ್ಪಿಗೆ ಶುಭ ಕೋರಿತ್ತು.

    ಮಂಗಳವಾರದಿಂದ ಚಿತ್ರದ ಚಿತ್ರೀಕರಣ ಶುರುವಾಗಿದೆ. ಕೆ.ಪಿ.ಶ್ರೀಕಾಂತ್, ಲಹರಿ ಮನೋಹರ್ ಜಂಟಿ ನಿರ್ಮಾಣದ ಚಿತ್ರವಿದು.

    ಉಪೇಂದ್ರ ಚಿತ್ರಕ್ಕೆ ಈ ಬಾರಿಯೂ ದಕ್ಷಿಣ ಭಾರತದ ದೊಡ್ಡ ನಟಿಯೊಬ್ಬರು ಬರಲಿದ್ದಾರೆ ಎಂಬ ಸುದ್ದಿ ಇದೆ. ಮೂಲಗಳ ಪ್ರಕಾರ ಉಪೇಂದ್ರ ಟೀಂ ತಮನ್ನಾ ಭಾಟಿಯಾ ಅವರನ್ನು ಸಂಪರ್ಕಿಸಿದೆ ಎನ್ನಲಾಗಿದೆ.

  • ಉಪ್ಪಿ ಸ್ಟೈಲ್‍ನಲ್ಲಿ ನಟಸಾರ್ವಭೌಮ ಅಪ್ಪು

    natasarvabhouma imitates upendra's styles

    ಉಪೇಂದ್ರ ಅವರ ಸ್ಟೈಲ್ ಎಂದರೆ ಕೆಲವೊಂದು ಟಿಪಿಕಲ್ ಸ್ಟೈಲ್ ನೆನಪಿಗೆ ಬರುತ್ತವೆ. ಉಪ್ಪಿ ಅವರ ಬರಿವೋಳು ಡ್ಯಾನ್ಸ್ ಸ್ಟೆಪ್, ನಡಿಗೆಯ ಶೈಲಿ, ಡೈಲಾಗ್ ಡೆಲಿವರಿ ಸ್ಟೈಲ್, ಉದ್ದನೆಯ ಕೂದಲು, ಕುರುಚಲು ಗಡ್ಡ.. ಹೀಗೆ.. ಈ ಎಲ್ಲದರ ಜೊತೆಗೆ ಗಮನ ಸೆಳೆಯುವುದು ಅವರ ಕಣ್ಣುಗಳು.

    ಉಪೇಂದ್ರ ಚಿತ್ರದಲ್ಲಿ ಎರಡೂ ಕಣ್ಣು ಗುಡ್ಡೆಗಳನ್ನು ಅತ್ತಿಂದಿತ್ತ.. ಇತ್ತಿಂದತ್ತ.. ಚಕಚಕನೆ ಚಲಿಸಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದರು ಉಪೇಂದ್ರ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ತಮ್ಮ ಕಣ್ಣಿನ ಚಿಕಿತ್ಸೆಯ ಕಥೆಯನ್ನು ಬಿಚ್ಚಿಟ್ಟಿದ್ದರು. ತಮಗಿರುವ ನ್ಯೂನತೆಯನ್ನೇ ಪ್ಲಸ್ ಮಾಡಿಕೊಂಡಿದ್ದರು ಉಪ್ಪಿ. ಆದರೆ, ವಿಷಯ ಅದಲ್ಲ.

    ಉಪೇಂದ್ರ ಅವರ ಅಭಿಮಾನಿಯೂ ಆಗಿರುವ ಪುನೀತ್ ರಾಜ್‍ಕುಮಾರ್, ಆ ಸ್ಟೈಲ್‍ನ್ನು ಅಷ್ಟೇ ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದಾರೆ. ನಟಸಾರ್ವಭೌಮ ಟ್ರೇಲರ್‍ನಲ್ಲಿ ಎಲ್ಲಲರನ್ನೂ ಬೆರಗುಗೊಳಿಸಿದ್ದಾರೆ. ಪುನೀತ್ ರಾಜ್‍ಕುಮಾರ್ ಕಣ್ಣು ಕೂಡಾ ಚಕಚಕನೆ ಕದಲುವುದನ್ನು ನೋಡಿದವರು ಬೆರಗುಗೊಂಡಿದ್ದಾರೆ. 

    ನೋಡುವುದಕ್ಕೆ ಸಿಂಪಲ್ ಆಗಿ ಕಂಡರೂ, ಅದು ಅಷ್ಟು ಸುಲಭವಲ್ಲ. ಹಾಗೆ ಚಕಚಕನೆ ಕಣ್ಣಿನ ಗುಡ್ಡೆಗಳನ್ನು ಮೂವ್ ಮಾಡುವುದರಿಂದ ತಲೆನೋವು, ಕಣ್ಣುಗಳಲ್ಲಿ ಅಪಾರ ನೋವು ಸೃಷ್ಟಿಯಾಗುತ್ತೆ. ಆದರೂ, ಸಿನಿಮಾಗಾಗಿ ಆ ರಿಸ್ಕ್ ತೆಗೆದುಕೊಂಡು ಗೆದ್ದಿದ್ದಾರೆ ಅಪ್ಪು.

  • ಉಪ್ಪಿ ಸ್ಥಾಪಿಸಿದ ಪಕ್ಷ.. ಅವರದ್ದಲ್ಲ..!

    uppis kpjp party

    ನಟ ಉಪೇಂದ್ರ ಅವರ ಪ್ರಜಾಕೀಯದ ಕಲ್ಪನೆಯೇನೋ ಅವರದ್ದೇ. ಆದರೆ, ಅವರು ಸ್ಥಾಪಿಸಿರುವ ಪಕ್ಷ ಅವರದ್ದಲ್ಲ. ಅದು ಮೂಲತಃ ಮಹೇಶ್ ಗೌಡ ಎಂಬುವವರು ಸ್ಥಾಪಿಸಿರುವ ಪಕ್ಷ. ಈಗ ಆ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವುದು ಉಪೇಂದ್ರ.

    ಸುಮಾರು 2 ವರ್ಷಗಳ ಹಿಂದೆ ಮಹೇಶ್ ಗೌಡ ಎಂಬುವವರು `ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ವನ್ನು ನೋಂದಾಯಿಸಿದ್ದರು.  ತಮ್ಮ ಪತ್ನಿಯನ್ನು ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಸಿದ್ದರು. ನಂತರ ಕೆಲವರ ಸಲಹೆ ಮೇರೆಗೆ ಈ ಪಕ್ಷವನ್ನು ಸ್ಥಾಪಿಸಿದ್ದರು.

    ಉಪೇಂದ್ರ ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದಾರೆ ಎಂದು ಗೊತ್ತಾದ ನಂತರ, ಉಪೇಂದ್ರ ಅವರನ್ನು ಭೇಟಿಯಾಗಿ ತಮ್ಮ ಪಕ್ಷದ ಬಗ್ಗೆ ವಿವರಿಸಿದರು. ಮಹೇಶ್ ಗೌಡ ಅವರ ಆಲೋಚನೆಗೆ ತಕ್ಕಂತೆಯೇ ಉಪೇಂದ್ರ ಅವರ ಪಕ್ಷವೂ ಇದ್ದ ಕಾರಣ, ಆ ಪಕ್ಷದ ಜವಾಬ್ದಾರಿಯನ್ನು ಉಪೇಂದ್ರ ಅವರಿಗೇ ಬಿಟ್ಟುಕೊಟ್ಟರು. 

    ಈಗ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ಮುನ್ನಡೆಸಲಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲೂ ಉಪೇಂದ್ರ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದಾರಂತೆ. ಎಷ್ಟು ಕ್ಷೇತ್ರ ಗೆಲ್ಲಬಹುದು ಗೊತ್ತಿಲ್ಲ. ಆದರೆ, ಎಲ್ಲರ ಪರವಾಗಿ ಉಪೇಂದ್ರ ಪ್ರಚಾರವನ್ನಂತೂ ಮಾಡಲಿದ್ದಾರೆ. ಅವರೇ ಕೆಪಿಜೆಪಿಯ ಬ್ರಾಂಡ್ ಅಂಬಾಸಿಡರ್.

     

  • ಉಪ್ಪಿ ಸ್ಫೂರ್ತಿಯಾದ ಚಿತ್ರವೇ, ಉಪ್ಪಿ ಚಿತ್ರಕ್ಕೆ ಪ್ರೇರಣೆ..!

    uppi is an inspiration to his own movies

    ಅರ್ಜುನ್ ರೆಡ್ಡಿ, ಎರಡು ವರ್ಷಗಳ ಹಿಂದೆ ರಿಲೀಸ್ ಆಗಿ, ಇಡೀ ಇಂಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ಸಿನಿಮಾ. ಹಸಿಬಿಸಿ ಕಾಮ, ಪ್ರೇಮದ ಕಥೆ ಹೊಂದಿದ್ದ ಅರ್ಜುನ್ ರೆಡ್ಡಿ ಸಿನಿಮಾ, ವಿಜಯ್ ದೇವರಕೊಂಡ ಎಂಬ ಸ್ಟಾರ್‍ನನ್ನು ಹುಟ್ಟುಹಾಕಿತು. ವಿಶೇಷವೇನು ಗೊತ್ತೇ..? ಅರ್ಜುನ್ ರೆಡ್ಡಿ ಚಿತ್ರದ ನಿರ್ದೇಶಕರಿಗೆ ಸ್ಫೂರ್ತಿ ನೀಡಿದ್ದುದು ಉಪೇಂದ್ರ ಚಿತ್ರಗಳು.

    ಉಪೇಂದ್ರ ಅಭಿನಯದ ಎ, ಉಪೇಂದ್ರ, ಪ್ರೀತ್ಸೆ ಚಿತ್ರಗಳನ್ನು ನೋಡಿದ್ದ ನಿರ್ದೇಶಕರು, ಅದೇ ಥಾಟ್‍ನ್ನು ಮುಂದುವರಿಸಿ ಅರ್ಜುನ್ ರೆಡ್ಡಿ ಕಥೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಅದನ್ನು ನೋಡಿದಾಗಲೇ ಆರ್.ಚಂದ್ರುಗೆ ಅನಿಸಿದ್ದು ಇಷ್ಟು.

    ಅರೆ, ನಮ್ಮ ನಿರ್ದೇಶಕರ ಕಥೆ, ಬೇರೆ ಭಾಷೆಯ ಚಿತ್ರ, ನಿರ್ದೇಶಕರಿಗೆ ಸ್ಫೂರ್ತಿ ಆಗುವುದಾದರೆ, ಅದನ್ನು ನಾವೇ ಏಕೆ ಮಾಡಬಾರದು. ನೋಡೋಣ ಎಂದು ಕುಳಿತುಕೊಂಡೆ. ಉಪೇಂದ್ರ ಅವರನ್ನೇ ಮನಸ್ಸಿನಲ್ಲಿಟ್ಟುಕಂಡು ಬರೆಯಲು ಕುಳಿತೆ. ಕಥೆ ಸಿದ್ಧವಾಯ್ತು. ಅದೇ ಐ ಲವ್ ಯೂ ಸಿನಿಮಾ ಎನ್ನುತ್ತಾರೆ ಆರ್.ಚಂದ್ರು.

    ಐ ಲವ್ ಯೂ ಸಿನಿಮಾ ಈಗಾಗಲೇ ಟ್ರೇಲರ್‍ನಿಂದ ಗಮನ ಸೆಳೆದಿರುವ ಚಿತ್ರ. ರಚಿತಾ ರಾಮ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿರುವ, ಸೋನುಗೌಡ ಗ್ಲಾಮರ್ ತುಂಬಿರುವ, ಉಪೇಂದ್ರ ಫಿಲಾಸಫಿಗಳನ್ನು ಹೊದ್ದುಕೊಂಡಿರುವ ಐ ಲವ್ ಯೂ ತೆರೆಗೆ ಬರುತ್ತಿದೆ. ಗೆಟ್ ರೆಡಿ.

  • ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಹಬ್ಬ

    ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಹಬ್ಬ

    ಉಪೇಂದ್ರ ನಟಿಸುತ್ತಿರುವ ಬಹುಭಾಷಾ ಸಿನಿಮಾ ಕಬ್ಜ. ಉಪೇಂದ್ರ ಜೊತೆ ಸುದೀಪ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ. ಶ್ರಿಯಾ ಸರಣ್ ನಾಯಕಿಯಾಗಿರೋ ಚಿತ್ರದಲ್ಲಿ ಡ್ಯಾನಿಷ್ ಅಖ್ತರ್ ಸೈಫಿ, ನವಾಬ್ ಷಾ, ಕಬೀರ್ ಸಿಂಗ್ ದುಲ್ಹಾನ್, ಪೊಸಾನಿ ಮುರಳಿ ಕೃಷ್ಣ, ಮುರಳೀಕೃಷ್ಣ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಈ ಚಿತ್ರದ ಟೀಸರ್ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಸೆಪ್ಟೆಂಬರ್ 18ರಂದು ಉಪ್ಪಿ ಹುಟ್ಟುಹಬ್ಬ. ಅದಕ್ಕೆ ಮುನ್ನ ಸೆ.17ರಂದು ಕಬ್ಜ ಟೀಸರ್ ಬಿಡುಗಡೆಯಾಗಲಿದೆ.

    ಕೆಜಿಎಫ್ ಯಶಸ್ಸು ಸಿನಿಮಾ ಮೇಕರ್‍ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಸಿನಿಮಾದ ಬಜೆಟ್ ಮತ್ತು ಕ್ಯಾನ್ವಾಸ್ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಆರ್.ಚಂದ್ರು. ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಚಿತ್ರಕ್ಕೆ ಆರ್.ಚಂದ್ರು ಅವರೇ ನಿರ್ಮಾಪಕ.

  • ಉಪ್ಪಿ ಹುಟ್ಟುಹಬ್ಬಕ್ಕೆ ಬರ್ತಾನಾ 2ನೇ ಬುದ್ದಿವಂತ?

    ಉಪ್ಪಿ ಹುಟ್ಟುಹಬ್ಬಕ್ಕೆ ಬರ್ತಾನಾ 2ನೇ ಬುದ್ದಿವಂತ?

    ಬುದ್ದಿವಂತ ಸಿನಿಮಾ ರಿಲೀಸ್ ಆಗುವ ಸಮಯ ಹತ್ತಿರವಾಯ್ತಾ? ಜಯರಾಂ ನಿರ್ದೇಶನದ ಸಿನಿಮಾ ಬುದ್ದಿವಂತ 2, ಬುದ್ದಿವಂತ ಚಿತ್ರದ ಸೀಕ್ವೆಲ್ ಎನ್ನಲಾಗಿದೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಒಂದು ಹಾಡಿನ ಶೂಟಿಂಗ್ ಬಾಕಿ ಇದೆಯಂತೆ. ಆ ಹಾಡಿನ ಚಿತ್ರೀಕರಣಕ್ಕೆ ಬುದ್ದಿವಂತ ಟೀಂ ದುಬೈಗೆ ಹಾರೋಕೆ ಸಿದ್ಧವಾಗಿದೆ ಅನ್ನೋ ಸುದ್ದಿ ಇದೆ.

    ಚಿತ್ರದ ಕೆಲಸಗಳು ವೇಗ ಪಡೆದುಕೊಂಡಿದ್ದು, ಉಪ್ಪಿ ಹುಟ್ಟುಹಬ್ಬಕ್ಕೆ ಅರ್ಥಾತ್ ಸೆಪ್ಟೆಂಬರ್ 18ಕ್ಕೆ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ನಿರ್ಮಾಪಕರದ್ದು. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಉಪೇಂದ್ರಗೆ ಮೇಘನಾ ರಾಜ್ ಜೋಡಿಯಾಗಿದ್ದಾರೆ.ನ

  • ಉಪ್ಪಿ ಹುಟ್ಟುಹಬ್ಬದ ದಿನ ಕಣ್ಣು ಮುಚ್ಕೋಬೇಡಿ

    i love you uppi birthday poster

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್. ಚಂದ್ರು ಕಾಂಬಿನೇಷನ್‍ನ ಐ ಲವ್ ಯೂ ಸಿನಿಮಾ, ಶೂಟಿಂಗ್ ಹಂತದಿಂದಲೂ ಕುತೂಹಲ ಹುಟ್ಟಿಸುತ್ತಲೇ ಸಾಗುತ್ತಿದೆ. ಅದು ಎ, ಉಪೇಂದ್ರ ಮತ್ತು ಪ್ರೀತ್ಸೆ ಚಿತ್ರಗಳ ಸ್ಟೈಲ್ ಲವ್ ಸ್ಟೋರಿ ಎಂದು ಹೇಳಿದ ಮೇಲಂತೂ, ಚಿತ್ರದ ಮೇಲೆ ಭಾರಿ ನಿರೀಕ್ಷೆ. ಈಗ.. ಆರ್.ಚಂದ್ರು.. ಉಪ್ಪಿ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ ಕೊಡುತ್ತಿದ್ದಾರೆ. 3 ಡಿ ಪೋಸ್ಟರ್‍ಗಳ ಮೂಲಕ.

    3ಡಿ ಮೋಷನ್ ಪೋಸ್ಟರ್‍ನ್ನು ಬಿಡುಗಡೆ ಮಾಡಲಿರುವುದು ಉಪ್ಪಿ ಅಲ್ಲ, ಉಪ್ಪಿ ಅಭಿಮಾನಿಗಳು. ಅದು ಆರ್.ಚಂದ್ರು ಸ್ಟೈಲ್. ಚಿತ್ರದಲ್ಲಿ ರಚಿತಾ ರಾಮ್ ಹೀರೋಯಿನ್. ಈ ಹಿಂದೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರದೇ ಇರುವಷ್ಟು ಗ್ಲಾಮರಸ್ ಆಗಿ ನಟಿಸಿದ್ದಾರೆ ರಚಿತಾ ರಾಮ್. ಹೀಗೆ ಸ್ಪೆಷಲ್ಲುಗಳ ಮೇಲೆ ಸ್ಪೆಷಲ್ ಕೊಡುತ್ತಿರುವ ಆರ್.ಚಂದ್ರು, ಉಪ್ಪಿ ಹುಟ್ಟುಹಬ್ಬಕ್ಕೆ ಕಣ್ಮನ ತುಂಬಿಕೊಳ್ಳುವ ಇನ್ನೊಂದು ಸ್ಪೆಷಲ್ ಗಿಫ್ಟ್ ಕೊಡುವುದು ಪಕ್ಕಾ.

    ಸ್ಸೋ.. ದೇವರು ಸೌಂದರ್ಯ ಸವಿಯೋಕೆಂದೇ ಕಣ್ಣು ಕೊಟ್ಟಿದ್ದಾನೆ. ಆದರೆ, ದೇವರ ಮುಂದೆ ನಿಂತುಕೊಂಡಾಗಲೇ ಕಣ್ಣು ಮುಚ್ಚಿಕೊಳ್ತೇವೆ. ಮಂಚದ ಮೇಲೂ ಕಣ್ಣು ಮುಚ್ಚಿಕೊಳ್ತೇವೆ. ಹಾಗಂತ ಉಪ್ಪಿ ಪೋಸ್ಟರ್‍ನ ಕಣ್ಣು ಮುಚ್ಚಿಕೊಂಡು ನೋಡಬೇಡಿ... ಇದು ಐ ಲವ್ ಯೂ ಉಪ್ಪಿ ಸ್ಟೈಲ್.

  • ಉಪ್ಪಿ ಹೊಸ ಸಿನ್ಮಾ ನಾಮಾನಾ..?

    ಉಪ್ಪಿ ಹೊಸ ಸಿನ್ಮಾ ನಾಮಾನಾ..?

    ಉಪೇಂದ್ರ ಸಿನಿಮಾ ಅಂದ್ರೇನೇ ಹಾಗೆ. ಇದೂವರೆಗೆ ಅವರು ತಮ್ಮ ಸಿನಿಮಾಗೆ ಸಂಕೇತಗಳ ಮೂಲಕ ಟೈಟಲ್ ಇಟ್ಟಿದ್ದೇ ಹೆಚ್ಚು. ಆಪರೇಷನ್ ಹಂತ ಟೈಟಲ್ಲೇ ಅವರ ಸಿನಿಮಾಗಳ ದೊಡ್ಡ ಶೀರ್ಷಿಕೆ. ಓಂ, ಸ್ವಸ್ತಿಕ್, ಸೂಪರ್.. ಹೀಗೆ ಚಿಹ್ನೆಗಳ ಮೂಲಕವೇ ಟೈಟಲ್ ಇಟ್ಟಿದ್ದ ಉಪ್ಪಿ, ಈ ಬಾರಿ ಯುಐ ಅನ್ನೋ ಟೈಟಲ್ ಬಿಟ್ಟಿದ್ದಾರೆ.

    ಅದು ನೋಡೋಕೆ ತಿರುಪತಿ ನಾಮದಂತೆ ಕಂಡರೆ ಅದು ಉಪ್ಪಿ ಕ್ರಿಯೇಟಿವಿಟಿ ಎಂದುಕೊಳ್ಳಬಹುದು. ಆದರೆ ಉಪ್ಪಿಯ ಈ ಟೈಟಲ್ ಯುಐ ನೋಡಿದರೆ, ಇಲ್ಲಿ ಕೂಡಾ ಉಪ್ಪಿ ನಾನು ನೀನು ಫಿಲಾಸಫಿ ಕಂಟಿನ್ಯೂ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ಉಪೇಂದ್ರ ಚಿತ್ರದಲ್ಲಿ ನಾನು ಫಿಲಾಸಫಿ ಹೇಳಿದ್ದ ಉಪ್ಪಿ, ಉಪ್ಪಿ2 ನಲ್ಲಿ ನೀನು ಫಿಲಾಸಫಿ ಹೇಳಿದ್ದರು. ಈ ಬಾರಿ ಮತ್ತೊಮ್ಮೆ ಅದೇ ಫಿಲಾಸಫಿ ಹೇಳಲಿದ್ದಾರಾ..? ಉಪ್ಪಿ ಮತ್ತೊಮ್ಮೆ ಡೈರೆಕ್ಟರ್ ಆಗುತ್ತಿದ್ದಾರೆ ಎನ್ನುವುದಷ್ಟೇ ಸಿಹಿ ಸುದ್ದಿ. ಸೆ.18ರಂದು ಉಪ್ಪಿ ಹುಟ್ಟುಹಬ್ಬವಿದೆ. ಆ ದಿನ ಚಿತ್ರದ ಡೀಟೈಲ್ಸ್ ಹೊರಬೀಳಲಿದೆಯಾ? ವೇಯ್ಟ್ & ವಾಚ್.