` upendra, - chitraloka.com | Kannada Movie News, Reviews | Image

upendra,

  • ಉಪೇಂದ್ರ ಮಗಳು `ದೇವಕಿ'ಯಾಗಿ ಬಂದಳು

    aishwarya upendra is now devaki

    ಉಪೇಂದ್ರ ಅವರ ಮಗಳು ಐಶ್ವರ್ಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೌರಾ ಬ್ರಿಡ್ಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ನೆನಪಿದೆಯಷ್ಟೆ. ಈಗ ಹೌರಾ ಬ್ರಿಡ್ಜ್ ಚಿತ್ರದ ಹೆಸರು ಬದಲಾಗಿದೆ. ಆ ಚಿತ್ರದ ಹೆಸರೀಗ ದೇವಕಿ. ದೇವಕಿಯಾಗಿ ಕಾಣಿಸಿಕೊಂಡಿರೋದು ಉಪೇಂದ್ರ-ಪ್ರಿಯಾಂಕಾ ದಂಪತಿಯ ಮಗಳು ಐಶ್ವರ್ಯಾ.

    ಚಿತ್ರದ ಟೈಟಲ್ ಲಾಂಚ್ ಮಾಡಿದ್ದು ಬಟರ್‍ಫ್ಲೈ ಪಾರೂಲ್ ಯಾದವ್. ಅವರಿಗೆ ಪ್ರಿಯಾಂಕಾ ಇನ್ನೂ ಆ ಬ್ಯೂಟಿಯನ್ನು ಹೇಗೆ ಮೇಂಟೇನ್ ಮಾಡ್ತಿದ್ದಾರೆ ಅನ್ನೋದೇ ಅಚ್ಚರಿ. ಅದಕ್ಕೊಂದು ಮೆಚ್ಚುಗೆ ನೀಡಿದ ಪಾರೂಲ್, ಉಪ್ಪಿ-ಪ್ರಿಯಾಂಕಾ ಮಗಳಿಗೆ ಶುಭ ಹಾರೈಸಿದರು.

    ಚಿತ್ರದ ಕಥೆಗೆ ದೇವಕಿ ಅನ್ನೋ ಟೈಟಲ್ ಸೂಕ್ತವಾಗಿ ಹೊಂದುತ್ತೆ ಎಂಬ ಕಾರಣಕ್ಕೆ ದೇವಕಿ ಅನ್ನೋ ಟೈಟಲ್ ಇಟ್ಟೆವು ಎಂದವರು ನಿರ್ದೇಶಕ ಲೋಹಿತ್. ಮೂವರು ಸಾಫ್ಟ್‍ವೇರ್ ಇಂಜಿನಿಯರುಗಳು ನಿರ್ಮಿಸಿರುವ ದೇವಕಿ, ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ.

  • ಉಪೇಂದ್ರ ಮತ್ತು ಚೇತನ್ ಮಧ್ಯೆ ಶುರುವಾಗಿದೆಯಾ ಟಾಕ್ ವಾರ್?

    ಉಪೇಂದ್ರ ಮತ್ತು ಚೇತನ್ ಮಧ್ಯೆ ಶುರುವಾಗಿದೆಯಾ ಟಾಕ್ ವಾರ್?

    ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆ ದಿನಗಳು ಖ್ಯಾತಿಯ ಚೇತನ್ ಮಧ್ಯೆ ಟಾಕ್ ವಾರ್ ಶುರುವಾಗಿದೆಯಾ? ಈ ಬಾರಿ ಚೇತನ್ ಪರೋಕ್ಷವಾಗಿ ಟೀಕಿಸಿ, ನೇರವಾಗಿಯೇ ಉಪೇಂದ್ರರನ್ನು ತಿವಿದಿದ್ದಾರೆ. ಇತ್ತೀಚೆಗೆ ನಟ ಉಪೇಂದ್ರ ಜಾತಿಯ ಬಗ್ಗೆ ಮಾತನಾಡುತ್ತಾ ನಾವು ಜಾತಿಯನ್ನು ಕೇಳವುದನ್ನು ಮತ್ತು ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಬಿಡಬೇಕು. ಜಾತಿ ಬಗ್ಗೆ ಮಾತನಾಡುತ್ತಾ ಹೊದರೆ ಅದನ್ನು ಬೆಳೆಸಿದಂತಾಗುತ್ತದೆ ಎಂದಿದ್ದರು.

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೇತನ್ ಒಬ್ಬ ಸೆಲಬ್ರಿಟಿ ತನ್ನ ವೈಚಾರಿಕತೆ ಕೊರತೆಯಿಂದ ಆಡಿರುವ ಮಾತು ಕೇಳಿ ಬೇಸರವಾಯಿತು. ಒಬ್ಬ ಸೆಲಬ್ರಿಟಿ ಜಾತಿ ಬಗ್ಗೆ ಮಾತನಾಡಿದ್ದಾರೆ. ಜಾತಿ ಬಗ್ಗೆ ಮಾತನಾಡಿದರೆ ಅದು ಜೀವಂತವಾಗಿ ಉಳಿಯುತ್ತೆ. ಮಾತನಾಡದೇ ಹೋದರೆ ಅದು ಹೊರಟು ಹೋಗುತ್ತೆ ಎಂದಿದ್ದಾರೆ. ಇದು ಹಾಸ್ಯಾಸ್ಪದ ಎಂದಿದ್ದಾರೆ ಚೇತನ್.

    ಆ ವ್ಯಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದು ಗೊತ್ತಿದೆ. ಸ್ವಲ್ಪ ಸಂವಿಧಾನ ಓದಿ. ನೀವು ಅರ್ಹತೆ ಇಲ್ಲದೆಯೂ ಸಾವಿರಾರು ವರ್ಷ ಸವಲತ್ತು ಪಡೆದುಕೊಂಡಿದ್ದೀರಿ. ಸ್ವಲ್ಪ ಬುದ್ದಿವಂತರಾಗಿ ಎಂದಿರುವ ಚೇತನ್ ನೇರವಾಗಿ ಎಲ್ಲಿಯೂ ಪೇಂದ್ರ ಹೆಸರು ಹೇಳಿಲ್ಲ. ಉಪೇಂದ್ರ ಅವರ ಅಣ್ಣನ ಪೋಸ್ಟ್‍ನಲ್ಲಿ ನಿರ್ಧಿಷ್ಟ ಜಾತಿಯವರಿಗೆ ಪರಿಹಾರ ನೀಡಿದ್ದರ ಬಗ್ಗೆ ಮಾತನಾಡಿದ್ದಾರೆ. ಪರೋಕ್ಷವಾಗಿ ಉಪೇಂದ್ರ ಅವರ ಜಾತಿಯನ್ನೂ ಪ್ರಶ್ನಿಸಿದ್ದಾರೆ.

  • ಉಪೇಂದ್ರ ಮತ್ತೆ ಬರ್ತಾನೆ - Exclusive

    upendra movie to re release

    ಉಪೇಂದ್ರ, 1999ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಪ್ರೇಮಾ, ರವಿನಾ ಟಂಡನ್, ದಾಮಿನಿ ಉಪೇಂದ್ರ ಚಿತ್ರಕ್ಕೆ ನಾಯಕಿಯರಾಗಿದ್ದರು. ಉಪೇಂದ್ರ ಹೀರೋ ಆಗಿ ನಟಿಸಿದ್ದ 2ನೇ ಸಿನಿಮಾ ಉಪೇಂದ್ರ. ಚಿತ್ರದ ಹೀರೋ ಹೆಸರೇ ನಾನು. ವಿಭಿನ್ನ ಪೋಸ್ಟರ್, ವಿಚಿತ್ರ ಕಥೆ, ಚಿತ್ರ ವಿಚಿತ್ರ ನಿರೂಪಣೆ, ಅರ್ಥಗರ್ಭಿತ ಅರ್ಥವಾಗದ ಸಂದೇಶ.. ಹೀಗೆ ಎಲ್ಲವೂ ಉಪ್ಪಿ ಸ್ಟೈಲ್‍ನಲ್ಲಿಯೇ ಇದ್ದ ಸಿನಿಮಾ ಡಬಲ್ ಶತದಿನೋತ್ಸವ ಆಚರಿಸಿತ್ತು. ತೆಲುಗಿನಲ್ಲೂ ಭರ್ಜರಿ ಸಕ್ಸಸ್ ಕಂಡಿದ್ದ ಸಿ ನಿಮಾ, ಆಂಧ್ರದಲ್ಲಿ ಶತದಿನೋತ್ಸವ ಕಂಡಿತ್ತು. 

    ಈ ಸಿನಿಮಾ 20 ವರ್ಷಗಳ ನಂತರ ಮತ್ತೆ ರಿಲೀಸ್ ಆಗುತ್ತಿದೆ. ಹಾಗೆಂದು ಅದೇ ವರ್ಷನ್‍ನಲ್ಲಿ ಅಲ್ಲ, ಸಿನಿಮಾದ ಟೆಕ್ನಾಲಜಿಯನ್ನು ಅಪ್‍ಡೇಟ್ ಮಾಡಿಸಿ ರಿಲೀಸ್ ಮಾಡೋಕೆ ರೆಡಿಯಾಗಿದ್ದಾರೆ ನಿರ್ಮಾಪಕ ಶಿಲ್ಪ ಶ್ರೀನಿವಾಸ್. ಶೀಘ್ರದಲ್ಲೇ ರಿಲೀಸ್ ದಿನಾಂಕ ಘೋಷಿಸಲಿದ್ದಾರೆ ಶಿಲ್ಪ ಶ್ರೀನಿವಾಸ್.

  • ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್

    ಉಪೇಂದ್ರ ಯು&ಐ ನಲ್ಲಿ ಸನ್ನಿ ಲಿಯೋನ್

    ಸನ್ನಿ ಲಿಯೋನ್ ಹೆಸರಿಗೆ ಒಂದು ವಿಶೇಷ ವಿಶಿಷ್ಟ ಕ್ರೇಜ್ ಇದೆ. ಸನ್ನಿಯ ಹೆಸರಿನ ಮಾಯೆ ಇವತ್ತಿಗೂ ಚಾಲ್ತಿಯಲ್ಲಿದೆ. ಈ ಸನ್ನಿ ಲಿಯೋನ್ ಕನ್ನಡಕ್ಕೆ ಹೊಸಬರೇನೂ ಅಲ್ಲ. ಈ ಹಿಂದೆ ಸೇಸಮ್ಮ.. ಸೇಸಮ್ಮ ಹಾಡಿಗೆ ಸೊಂಟ ಬಳುಕಿಸಿದ್ದ ಸನ್ನಿ, ಕಾಮಾಕ್ಷಿ ಕಾಮಾಕ್ಷಿ ಹಾಡಿನಲ್ಲೂ ಹುಬ್ಬೇರುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಬೆಂಗಳೂರಿಗೆ ಬಂದು ಉಪ್ಪಿಯ ಯು&ಐನಲ್ಲಿ ಹಾಡಿ ಕುಣಿದು ನಟಿಸಿ ಹೋಗಿದ್ದಾರಂತೆ.

    ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸುತ್ತಿರುವ ಯು&ಐನಲ್ಲಿ ಸನ್ನಿ ಲಿಯೋನ್ ಡ್ಯಾನ್ಸ್ ಅಷ್ಟೇ ಅಲ್ಲ, ನಟಿಸಿಯೂ ಇದ್ದಾರಂತೆ. ಸನ್ನಿಗೊಂದು ಮೇನ್ ರೋಲ್ ಕೊಟ್ಟಿದ್ದಾರಂತೆ ಉಪ್ಪಿ. ಸನ್ನಿ ಲಿಯೋನ್ ಬಂದು ಹೋಗುವವರೆಗೆ ಸಣ್ಣ ಸುಳಿವೂ ಬಿಟ್ಟುಕೊಡದೆ ಚಿತ್ರೀಕರಣ ಮುಗಿದ ಮೇಲೆ ಮಾಹಿತಿ ಹೊರಹಾಕಿದೆ ಯು&ಐ ಟೀಂ.

    ಸದ್ಯಕ್ಕೆ ಉಪೇಂದ್ರ ಯು&ಐ ಚಿತ್ರದ ಸ್ಟಂಟ್ಸ್ ಚಿತ್ರೀಕರಣ ಮಾಡುತ್ತಿದ್ದು, ಮೋಹನ್ ಬಿ.ಕೆರೆಯಲ್ಲಿ ಹಾಕಿರುವ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.

    ಹಲವು ವರ್ಷಗಳ ನಂತರ ಉಪೇಂದ್ರ ಮತ್ತೆ ನಿರ್ದೇಶನ ಮಾಡುತ್ತಿದ್ದು, ಅಪರೂಪದ ಕಥೆಯೊಂದನ್ನು ಈ ಚಿತ್ರಕ್ಕಾಗಿ ಹೆಣೆದಿದ್ದಾರಂತೆ. ನೂರಕ್ಕೂ ಹೆಚ್ಚು ಕಲಾವಿದರು ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ. ಉಪೇಂದ್ರ ಪಾತ್ರ ಕೂಡ ಹೊಸ ರೀತಿಯಲ್ಲಿ ಇದ್ದು, ಹೆಸರಾಂತ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್, ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಕೂಡ ಮೂಡಿದೆ

  • ಉಪೇಂದ್ರ ರಾಜಕೀಯ ಪ್ರವೇಶ - ಯಾರು ಏನೇನು ಹೇಳಿದ್ರು..?

    celebrities react

    ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿ ಸಂಚಲನವನ್ನೇ ಸೃಷ್ಟಿಸಿದೆ. ಉಪೇಂದ್ರ ಈಗಾಗಲೇ ಇರುವ ಪಕ್ಷಗಳಲ್ಲೇ ಯಾವುದಾದರೂ ಒಂದು ಪಕ್ಷವನ್ನು ಆಯ್ಕೆ ಮಾಡಿಕೊಳ್ತಾರೋ..? ಹೊಸ ಪಕ್ಷ ಕಟ್ತಾರೋ..? ರಾಜಕೀಯ ಪಕ್ಷಗಳನ್ನೆಲ್ಲ ಬಿಟ್ಟು, ಸಮಾಜಮುಖಿ ಜನಜಾಗೃತಿಯಲ್ಲಿ ತೊಡಗಿಕೊಳ್ತಾರೋ..? ಯಾವುದೂ ಸ್ಪಷ್ಟವಿಲ್ಲ. ಆದರೆ, ಉಪೇಂದ್ರ ರಾಜಕೀಯ ಪ್ರವೇಶದ ಸುದ್ದಿಗೆ ರಾಜಕೀಯ ಮತ್ತು ಚಿತ್ರರಂಗದ ಕೆಲವು ಸೆಲಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ.

    ಸುರೇಶ್ ಕುಮಾರ್, ಬಿಜೆಪಿ ಮುಖಂಡ

    ಉಪೇಂದ್ರ ಅವರ ಬಳಿ ಒಳ್ಳೊಳ್ಳೆಯ ಆಲೋಚನೆಗಳಿವೆ. ಚಿಂತನೆಗಳಿವೆ. ಅಂತಹ ಹೊಸ ಆಲೋಚನೆಗಳಿರುವವರು ರಾಜಕೀಯಕ್ಕೆ ಬರಲಿ. ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.

    ಟಿ.ಎನ್. ಸೀತಾರಾಮ್, ನಿರ್ದೇಶಕ, ಮಾಜಿ ರಾಜಕಾರಣಿ 

    ನಟ ಉಪೇಂದ್ರಗೆ ಆಲ್​ ದಿ ಬೆಸ್ಟ್​. ಹೊಸಪಕ್ಷ ಕಟ್ಟಿ ರಾಜಕೀಯಕ್ಕೆ ಬರುವುದಾದರೆ ಒಳ್ಳೆಯದೇ. ಆದರೆ ಇದು ಸವಾಲಿನ ಕೆಲಸ, ಅಗ್ನಿಪರೀಕ್ಷೆ. ಈ ಎಲ್ಲಾ ಅಗ್ನಿ ಪರೀಕ್ಷೆಯನ್ನು ಮೆಟ್ಟಿ ನಿಲ್ಲಬೇಕು. ಉಪೇಂದ್ರ ರಾಜಕೀಯಕ್ಕೆ ಬರಲು ಇದು ಸೂಕ್ತ ಕಾಲ. ರಾಜಕೀಯಕ್ಕೆ ಬಂದು ಪ್ರಾಮಾಣಿಕ ಸೇವೆ ಸಲ್ಲಿಸಲಿ. ರಾಜಕೀಯಕ್ಕೆ ಬರುವುದಾರೆ ಉಪೇಂದ್ರಗೆ ಶುಭ ಕೋರುವೆ.

    ಚಕ್ರವರ್ತಿ ಸೂಲಿಬೆಲೆ, ಚಿಂತಕ

    ಅವರ ಚಿತ್ರಗಳಲ್ಲಿ ದೇಶದ ಕುರಿತು ಹಲವು ಚಿಂತನೆಗಳನ್ನು ಹೊರಹಾಕಿದ್ಧಾರೆ. ಅವುಗಳನ್ನು ನಾನು ನೋಡಿದ್ದೇನೆ.. ಆದರ್ಶದ ಚಿಂತನೆಗಳಿವೆ. ಪ್ರಸ್ತುತ ರಾಜಕೀಯದಲ್ಲಿ ಸಮರ್ಥ ನಾಯಕತ್ವ ಇಲ್ಲ. ಅಂಥಾದ್ದೊಂದು ಸಾಮರ್ಥ್ಯ ಬೆಳೆಸಿಕೊಂಡು ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ನನ್ನ ಸ್ವಾಗತವಿದೆ. ಅವ ನಿರ್ಧಾರವನ್ನು ಎದುರು ನೋಡುತ್ತಿದ್ದೇನೆ.

    ಮಾಳವಿಕಾ ಅವಿನಾಶ್ - ನಟಿ, ಬಿಜೆಪಿ ಸದಸ್ಯೆ

    ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ಸ್ವಾಗತಿಸುತ್ತೇನೆ. ಅವರಿಗೆ ಜನಪರ ಕಾಳಜಿಯಿದೆ. ಸಿನಿಮಾಗಳಲ್ಲಿ ಅದು ವ್ಯಕ್ತವೂ ಆಗಿದೆ. ಆದರೆ, ರಾಜಕೀಯ ಪಕ್ಷಕ್ಕೆ ಬರುವುದಾದರೆ ಪಕ್ಷದ ಕೆಲವು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬರಬೇಕು. ಇಲ್ಲದೇ ಇದ್ದರೆ ಕಷ್ಟ.

    ಬಿ.ಸಿ. ಪಾಟೀಲ್, ನಟ, ಕಾಂಗ್ರೆಸ್ ಮುಖಂಡ

    ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ಸ್ವಾಗತ. ಅವರಿಗೆ ಒಳ್ಳೆಯ ಚಿಂತನೆಗಳಿವೆ. ಅಂತಹವರು ರಾಜಕೀಯಕ್ಕೆ ಬರಬೇಕು.

    ಇದೆಲ್ಲದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಬೆಂಗಳೂರಿಗೆ ಬರುತ್ತಿದ್ದು, ಆ ಸಭೆಯಲ್ಲಿ ಭಾಗವಹಿಸಲು ಉಪೇಂದ್ರ ಅವರಿಗೆ ಆಹ್ವಾನ ನೀಡುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ನಡೆಯುತ್ತಿದೆಯಂತೆ.

    Related Articles :-

    ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

    ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

  • ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಯಶ್ ಶುಭ ಹಾರೈಕೆ

    upendra, yash

    ಉಪೇಂದ್ರ ರಾಜಕೀಯ ಪ್ರವೇಶಕ್ಕೆ ರಾಕಿಂಗ್ ಸ್ಟಾರ್ ಯಶ್ ಶುಭ ಕೋರಿದ್ದಾರೆ. ನನ್ನ ಪ್ರಕಾರ ಉಪೇಂದ್ರ ತುಂಬಾ ಲೇಟ್ ಮಾಡಿದ್ರು. ಇನ್ನೂ ಬೇಗ ಬರಬೇಕಿತ್ತು.

    ಅವರ ಕನಸುಗಳ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು. ಅವರಿಂದ ಸ್ಫೂರ್ತಿ ಪಡೆದು ಚಿತ್ರರಂಗಕ್ಕೆ ಬಂದವನು ನಾನು. ಜೊತೆಯಲ್ಲಿರುವವರನ್ನು `ಗೋ' ಎನ್ನುವವರು ಲೀಡರ್ ಆಗಲ್ಲ. `ಲೆಟ್ ಅಸ್ ಗೋ' ಎಂದು ಜೊತೆಯಲ್ಲಿ ಕರೆದುಕೊಂಡು ಹೋಗುವವರು ಲೀಡರ್ ಆಗ್ತಾರೆ.

    ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇದೆ. ಅವರ ಕನಸುಗಳು ನನಸಾಗಲಿ. ಅವರ ಜೊತೆ ಕೈಜೋಡಿಸೋಣ. ಅವರು ಹೋಗುತ್ತಿರುವ ಸರಿಯಾಗಿಯೇ ಇದೆ. ಪ್ರಜಾಕೀಯ ಎಂಬ ಹೊಸ ಹೆಸರನ್ನು ಕೊಟ್ಟಿದ್ದಾರೆ. ಅವರು ಒಳ್ಳೆಯದನ್ನೇ ಮಾಡುತ್ತಾರೆ. ಆ ನಂಬಿಕೆ ನನಗಿದೆ. ಅವರಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ ಯಶ್.

  • ಉಪೇಂದ್ರ ವಿರುದ್ಧ ಬಿತ್ತು 2ನೇ ಕೇಸು

    2nd complaint aganist upendra

    ರಿಯಲ್ ಸ್ಟಾರ್ ಉಪೇಂದ್ರ ಕೆಪಿಜೆಪಿ ಘೋಷಣೆ ಮಾಡಿದ್ದೇ ಮಾಡಿದ್ದು, ಒಂದರ ಹಿಂದೊಂದರಂತೆ ಎರಡು ಕೇಸುಗಳು ಬಿದ್ದಿವೆ. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಮೊದಲ ಬೆಂಗಳೂರು ನಗರ ಜೆಡಿಯು ನಗರ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಎಂಬುವವರು ದೂರು ನೀಡಿದ್ದ ಬೆನ್ನಲ್ಲೇ, ಹೈಕೋರ್ಟ್ ವಕೀಲ ಎನ್.ಎಚ್.ಅಮೃತೇಶ್ ಉಪೇಂದ್ರ ವಿರುದ್ಧ ಇನ್ನೊಂದು ದೂರು ದಾಖಲಿಸಿದ್ದಾರೆ.

    ಉಪೇಂದ್ರ ಗಾಂಧಿ ಭವನದಲ್ಲಿ ತಮ್ಮ ರಾಜಕೀಯ ಪಕ್ಷ ಘೋಷಿಸುವ ಸುದ್ದಿಗೋಷ್ಟಿ ನಡೆಸಿದ್ದೇ ತಪ್ಪು ಎನ್ನುವುದು ಅಮೃತೇಶ್ ಅವರ ದೂರು. ಏಕೆಂದರೆ, ಗಾಂಧಿ ಭವನದಲ್ಲಿ ಗಾಂಧಿ ವಿಚಾರಧಾರೆ, ಚರ್ಚೆ, ಮತ್ತಿತರ ಚಟುವಟಿಕೆಗಳಷ್ಟೇ ನಡೆಯಬೇಕು. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಅದು ವೇದಿಕೆ ನೀಡುವುದಿಲ್ಲ. ಇದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಟ್ರಸ್ಟ್ ತನಗೆ ತಾನೇ ವಿಧಿಸಿಕೊಂಡಿರುವ ನಿರ್ಬಂಧ. ಹೀಗಿರುವಾಗ ಹೊಸ ರಾಜಕೀಯ ಪಕ್ಷದ ಘೋಷಣೆಗೆ ಗಾಂಧಿ ಭವನದಲ್ಲಿ ಅವಕಾಶ ನೀಡಿದ್ದು ತಪ್ಪು ಎನ್ನವುದು ಅಮೃತೇಶ್ ವಾದ.

    ಇನ್ನು ಎನ್. ನಾಗೇಶ್ ಅವರು ಸಲ್ಲಿಸಿದ್ದ ದೂರಿನಲ್ಲಿದ್ದ ಮತದಾರರಿಗೆ ಹಣ ತೆಗೆದುಕೊಳ್ಳಿ, ವೋಟು ನನಗೆ ಹಾಕಿ ಎಂಬ ಹೇಳಿಕೆಯ ವಿರುದ್ಧವೂ ಅಮೃತೇಶ್ ದೂರು ನೀಡಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಪ್ರವೇಶ ಘೋಷಣೆಯಾದ ನಂತರ, ಕೆಲವೇ ದಿನಗಳಲ್ಲಿ ಉಪೇಂದ್ರ ಮೇಲೆ ಕೇಸ್ ಮೇಲೆ ಕೇಸ್ ಬೀಳುತ್ತಿವೆ.

    Related Articles :-

    ಉಪೇಂದ್ರ ವಿರುದ್ಧ ಬಿತ್ತು ಮೊದಲ ಕೇಸು

    ಶೋಭಾ ಸಿಟ್ಟಾದರು..ಉಪ್ಪಿ ಅಂಥಾದ್ದೇನು ಹೇಳಿದರು..?

  • ಉಪೇಂದ್ರ ವಿರುದ್ಧ ಬಿತ್ತು ಮೊದಲ ಕೇಸು

    upendra to face first case in politics

    ರಿಯಲ್ ಸ್ಟಾರ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಮೊದಲ ದೂರು ದಾಖಲಾಗಿದೆ. ದೂರು ನೀಡಿರುವುದು ಉಪೇಂದ್ರ ವಿರುದ್ಧ ದೂರು ನೀಡುತ್ತೇನೆ ಎಂದಿದ್ದ ಶೋಭಾ ಕರಂದ್ಲಾಜೆ ಅಲ್ಲ. ಬೆಂಗಳೂರು ನಗರ ಜೆಡಿಯು ನಗರ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಎಂಬುವವರು.

    ಉಪೇಂದ್ರ ಕೆಪಿಜೆಪಿ ಕುರಿತ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಬೇರೆಯವರು ನಿಮಗೆ ಹಣ ಕೊಟ್ಟರೆ ತೆಗೆದುಕೊಳ್ಳಿ, ಆದರೆ, ವೋಟನ್ನು ನಮಗೇ ಹಾಕಿ ಎಂದಿದ್ದರು. ಇದು ಮತದಾರರನ್ನು ಲಂಚ ತೆಗೆದುಕೊಳ್ಳಲು ಪ್ರೋತ್ಸಾಹ ನೀಡಿದಂತೆ ಎನ್ನುವುದು ನಾಗೇಶ್ ಅವರ ದೂರು. ಉಪೇಂದ್ರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾಗೇಶ್, ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಈ ಹಿಂದೆ ಅರವಿಂದ ಕೇಜ್ರಿವಾಲ್ ಇಂಥದ್ದೇ ಹೇಳಿಕೆ ನೀಡಿ, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಉಪೇಂದ್ರ ಅವರಿಗೆ ಇಂತಹವುಗಳ ಬಗ್ಗೆ ಮಾಹಿತಿಯೂ ಇರಬೇಕು.

  • ಉಪೇಂದ್ರ ಸೃಷ್ಟಿಸಿದ್ದ ಕ್ರೇಜ್ ಅಬ್ಬಬ್ಬಬ್ಬಾ..

    upendra movie image

    ಆ ಚಿತ್ರದಲ್ಲಿ ಏನಿರುತ್ತೆ..? ಕಥೆ ಏನಿರಬಹುದು..? ಇದನ್ನು ಇಡೀ ಭಾರತೀಯ ಚಿತ್ರರಂಗ ತಲೆಕೆಡಿಸಿಕೊಂಡು ಕಾಯುತ್ತಿತ್ತು. ಒಂದೊಂದು ಪೋಸ್ಟರ್ ಕೂಡಾ ಒಂದೊಂದು ಕಥೆ ಹೇಳುತ್ತಿತ್ತು. ಎಕ್ಸ್ಪೆರಿಮೆಂಟ್.. ಎಕ್ಸ್ಪೆರಿಮೆಂಟ್.. ಎಕ್ಸ್ಪೆರಿಮೆಂಟ್.. ಉಪೇಂದ್ರ ಕಂಪ್ಲೀಟ್ ಎಕ್ಸ್ಪೆರಿಮೆಂಟ್.. ಮಾಡಿ ಗೆದ್ದುಬಿಟ್ಟಿದ್ದರು.

     

    #UpendraMovie #Prema #Damini #RaveenaTandon #ChitralokaYouTube

     

  • ಉಪೇಂದ್ರರ ಆ ಎಲ್ಲ ಚಿತ್ರಗಳು ನಿಂತು ಹೋಗಿದ್ದೇಕೆ

    upendra image

    ಕನ್ನಡದಲ್ಲಷ್ಟೇ ಅಲ್ಲ.. ತೆಲುಗು, ತಮಿಳಿನಲ್ಲೂ ಉಪ್ಪಿಗೆ ಫ್ಯಾನ್ಸ್ ಇದ್ದಾರೆ. ಇಷ್ಟೆಲ್ಲ ಇದ್ದರೂ ಅವರ ಕನಸಿನ ಅದೆಷ್ಟೋ ಚಿತ್ರಗಳು ಸ್ಟಾರ್ಟಿಂಗ್ ಟ್ರಬಲ್ಲಿನ ಕಾರಣಕ್ಕೋ.. ಇನ್ಯಾವುದೋ ಕಾರಣಕ್ಕೋ ಅಲ್ಲಲ್ಲಿಗೇ ನಿಂತು ಹೋಗಿವೆ. 

    #Upendra #Superstar #UpendraStoppedMovies #Uppi #Prajakeya

     

  • ಉಪೇಂದ್ರರ ಪ್ರಜಾಕೀಯ ಗಿಮಿಕ್ ಅಷ್ಟೆ - ಡೈರೆಕ್ಟರ್ ಗುರುಪ್ರಸಾದ್

    upendra is only gimmick

    ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಎರಡನೇ ಸಲ.. ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ ಗುರುಪ್ರಸಾದ್, ಹರಿತ ಮಾತುಗಳಿಗೆ ಹೆಸರುವಾಸಿ. ಇಂತಹ ಗುರುಪ್ರಸಾದ್, ಉಪೇಂದ್ರ ಅವರ ಪ್ರಜಾಕೀಯದ ಬಗ್ಗೆ ಹಲವಾರು ಅನುಮಾನಗಳನ್ನೆತ್ತಿದ್ದಾರೆ. ಉಪೇಂದ್ರ ಅವರ ಎದುರು ನಾನಾ ಪ್ರಶ್ನೆಗಳನ್ನಿಟ್ಟಿದ್ದಾರೆ. ಉಪೇಂದ್ರ ಅವರ ಪ್ರಜಾಕೀಯ ಘೋಷಣೆಯೇ ಒಂದು ಗಿಮಿಕ್ ಎಂದಿದ್ದಾರೆ. ಅವರು ಎತ್ತಿರುವ ಪ್ರಶ್ನೆಗಳೇನು..? ಅವರ ಮಾತಲ್ಲೇ ಕೇಳಿ.

    ಉಪೇಂದ್ರ ಮೊದಲಿನಿಂದಲೂ ಗಿಮಿಕ್ ಮಾಡಿಕೊಂಡೇ ಬಂದವರು. ಇದೂ ಏಕೆ ಗಿಮಿಕ್ ಆಗಿರಬಾರದು. ಅವರೀಗ 50ನೇ ಚಿತ್ರದ ಹತ್ತಿರ ಇದ್ದಾರೆ. ಆ ಚಿತ್ರಕ್ಕೆ ಪ್ರಮೋಷನ್ ತೆಗೆದುಕೊಳ್ಳಲು ಯಾಕೆ ಈ ರೀತಿಯ ಗಿಮಿಕ್ ಸೃಷ್ಟಿಸಿರಬಾರದು. 

    ನಾಳೆ ಇದೇ ಪ್ರಜಾಕೀಯದ ಹೆಸರಲ್ಲಿ ಪ್ರಚಾರ ಗಳಿಸಿ, ನಾಳೆ ಯಾವುದಾದರೂ ಪಕ್ಷಕ್ಕೆ ಸೇರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ..? ಹಣವೇ ಇಲ್ಲದೆ ಪಕ್ಷ ಕಟ್ಟುವ ನಿಮ್ಮ ಕನಸಿನ ಹಿಂದೆ, ಹಣ ಮಾಡುವ ಹುನ್ನಾರ ಇದೆ ಎಂಬುದು ನನ್ನ ಅನುಮಾನ. ಆಗ ನಲವತ್ತೋ.. ಐವತ್ತೋ ಕೋಟಿ ತೆಗೆದುಕೊಂಡು ಬೇರೆ ಪಕ್ಷಕ್ಕೆ ಸೇರೋದಿಲ್ಲ ಎಂದು ಪ್ರಮಾಣ ಮಾಡುತ್ತೀರಾ..? ಆಗ ನಿಮ್ಮನ್ನು ನಂಬುತ್ತೇನೆ.

    ನೀವು ಇದುವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೀರಿ, ನಿರ್ದೇಶಿಸಿದ್ದೀರಿ. ಈ ಯಾವ ಚಿತ್ರಗಳಲ್ಲೂ ಪರೋಕ್ಷವಾಗಿಯಾಗಲೀ, ಪ್ರತ್ಯಕ್ಷವಾಗಿಯಾಗಲೀ.. ಬ್ಲಾಕ್ ಮನಿ ಬಳಸಿಯೇ ಇಲ್ಲವಾ..? ನಾನು ಬಳಸಿಲ್ಲ ಎಂದು ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಹೇಳಿಬಿಡಿ. ನಾನು ನಿಮ್ಮನ್ನು ಮೋದಿಗಿಂತ ಹೆಚ್ಚಾಗಿ ಗೌರವಿಸುತ್ತೇನೆ.

    ಉಪೇಂದ್ರ ಮೊದಲಿನಿಂದ ನೆಗೆಟಿವ್ ಪಾತ್ರಗಳ ಮೂಲಕವೇ ಖ್ಯಾತಿ ಗಳಿಸಿದವರು. ಈಗ ಅವರಿಗೆ ಆ ಇಮೇಜ್‍ನಿಂದ ಹೊರಬರಬೇಕಾಗಿದೆ. ಹೀಗಾಗಿ ಅವರು ತಮ್ಮ ಇಮೇಜ್‍ನ್ನು ಬದಲಾಯಿಸಿಕೊಳ್ಳಲು ಈ ರೀತಿಯ ಗಿಮಿಕ್ ಮಾಡಿದ್ದಾರೆ.

    ಹೀಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ ಗುರುಪ್ರಸಾದ್. ಉಪೇಂದ್ರ ಅವರ ಐಡಿಯಾ ಕೇಳಿದವರು, ಇಷ್ಟೊಂದು ಪ್ರಾಮಾಣಿಕತೆ ಇದ್ದರೆ ಇದು ವರ್ಕೌಟ್ ಆಗಲ್ಲ ಎಂದಿದ್ದರು. ಈಗ ಆ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ್ದಾರೆ ಗುರುಪ್ರಸಾದ್.

    ಇಷ್ಟೆಲ್ಲ ಹೇಳಿದ ನಂತರ ಗುರುಪ್ರಸಾದ್ ಇನ್ನೊಂದು ಮಾತನ್ನೂ ಸೇರಿಸುತ್ತಾರೆ. ನಾನೂ ಉಪೇಂದ್ರ ಅವರ ಅಭಿಮಾನಿ. ಅವರ ಚಿತ್ರಗಳನ್ನು ನೋಡಿ ಬೆಳೆದವನು. ಈಗ ನಾನು ಎತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಹೀಗೆ ಏಕಾಏಕಿ ನಾನು ರಾಜಕೀಯಕ್ಕೆ ಬರುತ್ತೇನೆ ಎಂದಾಗ ನನಗೂ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಪ್ರಶ್ನೆ ಕೇಳುವುದು ನನ್ನ ಹಕ್ಕು ಕೇಳಿದ್ದೇನೆ. ಅನ್ಯಥಾ ಭಾವಿಸಬೇಡಿ ಎಂದಿದ್ದಾರೆ ಗುರು. 

  • ಉಪೇಂದ್ರರ ಪ್ರಜಾಕೀಯಕ್ಕೆ ಆಯೋಗದ ಮಾನ್ಯತೆ

    upendra gets prajakeeya

    ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರಜಾಕೀಯ ಪಕ್ಷಕ್ಕೆ ಕೊನೆಗೂ ಕೇಂದ್ರ ಚುನಾವಣಾ ಆಯೋಗದ ಮಾನ್ಯತೆ ಸಿಕ್ಕಿದೆ. `ಉತ್ತಮ ಪ್ರಜಾಕೀಯ ಪಕ್ಷ' ಹೆಸರಿನ ರಾಜಕೀಯ ಪಕ್ಷಕ್ಕೆ ಆಯೋಗ ಮಾನ್ಯತೆ ನೀಡಿದೆ. ಮತದಾನಕ್ಕೆ ಎರಡು ದಿನ ಮುಂಚಿತವಾಗಿ ಉಪೇಂದ್ರ ಅವರಿಗೆ ಈ ಪಕ್ಷದ ಮಾನ್ಯತೆ ಸಿಕ್ಕಿದೆ.

    ಇದಕ್ಕೂ ಮುನ್ನ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿದ್ದ ಉಪೇಂದ್ರ, ಆ ಪಕ್ಷದ ಹೆಸರನ್ನು ಮತ್ತೊಬ್ಬರಿಂದ ಎರವಲು ಪಡೆದುಕೊಂಡಿದ್ದರು. ಎಲ್ಲವೂ ಉಪ್ಪಿ ಲೆಕ್ಕಾಚಾರದಂತೆಯೇ ಆಗಿದ್ದರೆ, ಈ ಬಾರಿಯ ಎಲೆಕ್ಷನ್‍ನಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಸ್ಪರ್ಧೆಯಲ್ಲಿರುತ್ತಿತ್ತು. ಆದರೆ, ಟಿಕೆಟ್ ಹಂಚಿಕೆ ವೇಳೆಯಲ್ಲಿ ಉದ್ಭವವಾದ ಗೊಂದಲದಿಂದಾಗಿ, ಕೆಪಿಜೆಪಿಗೂ ತಮಗೂ ಸಂಬಂಧವಿಲ್ಲ ಎಂದು ಘೋಷಿಸಿದ ಉಪೇಂದ್ರ, ಈಗ ಸ್ವತಂತ್ರವಾಗಿ ಪ್ರಜಾಕೀಯ ಎಂಬ ಪಕ್ಷವನ್ನೇ ಸ್ಥಾಪಿಸಿದ್ದಾರೆ. ಈಗಿಂದಗಲೇ ರಾಜಕೀಯ ಕಿತ್ತೊಗೆದು ಪ್ರಜಾಕೀಯ ಸ್ಥಾಪಿಸಲು ಮುಂದಾಗೋಣ ಎಂದು ಉಪೇಂದ್ರ ಸಂತಸ ಹಂಚಿಕೊಂಡಿದ್ದಾರೆ.

  • ಉಪ್ಪಿ 50ನೇ ಸಿನಿಮಾ ಫಿಕ್ಸ್..?

    upendra all set for his 50th film

    ರಿಯಲ್ ಸ್ಟಾರ್ ಉಪೇಂದ್ರ ನೋಡ ನೋಡುತ್ತಲೇ 50ನೇ ಸಿನಿಮಾದ ಹೆಬ್ಬಾಗಿಲಲ್ಲಿ ನಿಂತುಬಿಟ್ಟಿದ್ದಾರೆ. ಸದ್ಯಕ್ಕೆ ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಸಿನಿಮಾದಲ್ಲಿ ಬ್ಯುಸಿ ಇರುವ ಉಪೇಂದ್ರ, 50ನೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಯುವ ನಿರ್ದೇಶಕ ಅಧಿರಾ ಸಂತು ಎನ್ನುವವರ ಕಥೆ ಇಷ್ಟವಾಗಿ ಓಕೆ ಎಂದಿದ್ದಾರಂತೆ ರಿಯಲ್ ಸ್ಟಾರ್.

    ಸಾಯಿ ಪ್ರಕಾಶ್ ಬಳಿ ಸಹನಿರ್ದೇಶಕರಾಗಿದ್ದ ಅಧಿರಾ, ಪೀರಿಯಡ್ ಡ್ರಾಮಾ ಕಥೆಯೊಂದನ್ನು ಸಿದ್ಧಪಡಿಸಿದ್ದಾರಂತೆ. ಕನಕಪುರ ಶ್ರೀನಿವಾಸ್ ನಿರ್ಮಾಣಕ್ಕೆ ರೆಡಿಯಿದ್ದಾರಂತೆ. ಆಗಸ್ಟ್‍ನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆಯಂತೆ. ಸದ್ಯಕ್ಕೆ ಎಲ್ಲವೂ ಅಂತೆಕಂತೆ. ಕನ್‍ಫರ್ಮ್ ಸುದ್ದಿ ಬರೋದು ಮಾತ್ರ ಬಾಕಿ.

  • ಉಪ್ಪಿ ಅಣ್ಣನ ಮಗನ ಚಿತ್ರಕ್ಕೆ ಯಶ್ ವಾಯ್ಸ್

    yash image

    ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಪುತ್ರ ನಿರಂಜನ್, ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಉಪೇಂದ್ರ ಅವರೇ ನಟಿಸಿದ್ದ ಸೂಪರ್ ಸ್ಟಾರ್ ಅನ್ನೋ ಚಿತ್ರ ನೆನಪಿದೆಯಲ್ವೇ..? ಅದೇ ಟೈಟಲ್‍ನ ಚಿತ್ರದಲ್ಲಿ ನಿರಂಜನ್ ನಟಿಸುತ್ತಿದ್ದಾರೆ. ಆಗಸ್ಟ್ 20ಕ್ಕೆ ಸೂಪರ್ ಸ್ಟಾರ್ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.

     

    ವಿಶೇಷವೆಂದರೆ ಆ ಟೀಸರ್‍ಗೆ ಧ್ವನಿ ನೀಡಿರುವುದು ರಾಕಿಂಗ್ ಸ್ಟಾರ್ ಯಶ್. ಸೂಪರ್ ಸ್ಟಾರ್ ಡೈರೆಕ್ಟರ್ ರಮೇಶ್ ವೆಂಕಟೇಶ್ ಬಾಬು ಈಗಾಗಲೇ ಯಶ್ ವಾಯ್ಸ್ ರೆಕಾರ್ಡಿಂಗ್ ಮಾಡಿಟ್ಟುಕೊಂಡಿದ್ದಾರೆ. 

     

  • ಉಪ್ಪಿ ಐ ಲವ್ ಯೂ ಕಥೆಯಲ್ಲೇನಿದೆ..?

    upendra hints about i love you story

    ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಷನ್‍ನ ಐ ಲವ್ ಯು ಸಿನಿಮಾ, ಕಾಂಬಿನೇಷನ್ ಕಾರಣಕ್ಕೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಿಸಿ ವಿರಾಮ ತೆಗೆದುಕೊಂಡಿದ್ದ ಉಪೇಂದ್ರ, ಕಮ್ ಬ್ಯಾಕ್ ಮಾಡುತ್ತಿರುವ ಸಿನಿಮಾ ಐ ಲವ್ ಯೂ. ಪ್ರಜಾಕೀಯದಲ್ಲಿಯೇ ಮುಳುಗಿ ಹೋಗಿದ್ದ ಉಪೇಂದ್ರ, ಐ ಲವ್  ಯಊ ಚಿತ್ರ ಒಪ್ಪಿಕೊಳ್ಳೋಕೆ ಕಾರಣವೇನು..? ಚಿತ್ರದಲ್ಲಿ ಅಂತಹುದ್ದೇನಿದೆ ಅನ್ನೋ ಗುಟ್ಟನ್ನು ಸ್ವತಃ ಉಪೇಂದ್ರ ಬಿಚ್ಚಿಟ್ಟಿದ್ದಾರೆ.

    ಸಿನಿಮಾದಲ್ಲಿ ಉಪ್ಪಿ ಸ್ಟೈಲ್ ಇದೆ. ಈಗಿನ ಜನರೇಷನ್‍ಗೆ ಒಗ್ಗುವಂತೆ ಕಥೆಯಿದೆ. ಚಿತ್ರದಲ್ಲಿ ಉಪೇಂದ್ರ ಅವರ ಸಿನಿಮಾಗಳನ್ನೇ ಬಳಸಿಕೊಂಡು ಕಥೆ, ಚಿತ್ರಕಥೆ ರೂಪಿಸಲಾಗಿದೆಯಂತೆ. ಇನ್ನು ಐ ಲವ್ ಯೂ ಶೀರ್ಷಿಕೆಯಲ್ಲಿ ತೋರಿಸಿರುವ ಕೈ ಸಿಂಬಲ್, ಡೆಫ್ & ಡಂಬರ್‍ನವರು ಬಳಸುವ ಲವ್ ಕೋಡ್ ಅಂತೆ.

    ಹಾಗಾದರೆ, ಸಿನಿಮಾದ ಕಥೆಯೇನು..? ಮೂಗ, ಕಿವುಡರ ಲವ್‍ಸ್ಟೋರಿನಾ..? ಪ್ರೀತಿ ಪ್ರೇಮ ಅನ್ನೋದೆಲ್ಲ ಪುಸ್ತಕದ ಬದನೆಕಾಯ್ ಅನ್ನೋ ಡೈಲಾಗ್ ಇಲ್ಲೂ ಇರುತ್ತಾ..? ಸಿನಿಮಾ ರಿಲೀಸ್ ಆಗುವವರೆಗೆ ಕಾಯಬೇಕಷ್ಟೆ. ಶೂಟಿಂಗ್ ಈಗತಾನೇ ಶುರುವಾಗಿದೆ. ಶಿವರಾಜ್‍ಕುಮಾರ್ ಕ್ಲಾಪ್ ಮಾಡೋದ್ರೊಂದಿಗೆ ಶುರುವಾದ ಸಿನಿಮಾಗೆ ಜಿ.ಟಿ.ದೇವೇಗೌಡ, ಹೆಚ್.ಎಂ.ರೇವಣ್ಣರಂತ ಹಿರಿಯರು ಶುಭ ಕೋರಿದ್ದಾರೆ.

  • ಉಪ್ಪಿ ಐ ಲವ್ ಯೂ ಹಾಡು ಬಿಡುಗಡೆಗೆ ರಾಜಮೌಳಿ

    rajamouli to release i love you songs

    ಉಪೇಂದ್ರ-ಆರ್.ಚಂದ್ರು-ರಚಿತಾ ರಾಮ್ ಕಾಂಬಿನೇಷನ್‍ನ ಐ ಲವ್ ಯೂ ಸಿನಿಮಾದ ಆಡಿಯೋ ಲಾಂಚ್‍ಗೆ ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ರಾಜಮೌಳಿ ಬರುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಐ ಲವ್ ಯೂ ಚಿತ್ರದ ಆಡಿಯೋ ಲಾಂಚ್‍ನ್ನೇ ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ ಚಂದ್ರು. ಜನವರಿ 12ರಂದು, ದಾವಣಗೆರೆಯಲ್ಲಿ ಆಡಿಯೋ ಲಾಂಚ್ ಆಗಲಿದೆ. 

    `ರಾಜಮೌಳಿ ಅವರನ್ನು ನಾನೇ ಕೇಳಿಕೊಂಡೆ. ಅವರು ಬಳ್ಳಾರಿಯಲ್ಲಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು. ನಾನು ದಾವಣಗೆರೆಯಲ್ಲಿ ಮಾಡುತ್ತಿದ್ದೇವೆ ಎಂದಾಗ ಓಕೆ ಎಂದು ಒಪ್ಪಿಕೊಂಡರು' ಎಂದು ವಿವರ ನೀಡಿದ್ದಾರೆ ಆರ್.ಚಂದ್ರು.

    ಆಡಿಯೋ ಲಾಂಚ್‍ಗೆ ರಜನಿಕಾಂತ್ ಅವರನ್ನೂ ಆಹ್ವಾನಿಸಲು ಚಿಂತನೆ ನಡೆದಿದೆ. ಉಪೇಂದ್ರ ಅವರು ರಜನಿ ಸಂಪರ್ಕದಲ್ಲಿದ್ದಾರೆ. ಅದೇ ದಿನ ರಜನಿಕಾಂತ್‍ರ ಪೆಟ್ಟಾ ರಿಲೀಸ್ ಇದೆ. ಬರುತ್ತಾರೋ.. ಇಲ್ಲವೋ.. ಕನ್‍ಫರ್ಮ್ ಇಲ್ಲ ಎಂದಿದ್ದಾರೆ ಚಂದ್ರು. ಚಿತ್ರವನ್ನು ಪ್ರೇಮಿಗಳ ದಿನದಂದು ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಿದ್ಧಗೊಂಡಿದೆ.

  • ಉಪ್ಪಿ ಐ ಲವ್ ಯೂ.. ಇಲ್ಲಿ ಎಲ್ಲವೂ ಇರುತ್ತದೆ..!

    i love you censored u/a

    ಉಪೇಂದ್ರ, ಎ, ಉಪೇಂದ್ರ, ಪ್ರೀತ್ಸೆ ಚಿತ್ರದ ಸ್ಟೈಲ್‍ನಲ್ಲಿ ಬರ್ತಾರೆ. ರಚಿತಾ ರಾಮ್, ಸಿಕ್ಕಾಪಟ್ಟೆ ಹಾಟ್ ಹಾಟ್ ಆಗಿ ನಟಿಸಿದ್ದಾರೆ. ಆರ್.ಚಂದ್ರು, ಇದು ಕಂಪ್ಲೀಟ್ ನನ್ನ ಸಿನಿಮಾ ಅಲ್ಲ.. ಇದು ಪಕ್ಕಾ ಉಪ್ಪಿ + ಚಂದ್ರು ಸಿನಿಮಾ ಎಂದು ಘೋಷಿಸಿಬಿಟ್ಟಿದ್ದಾರೆ.

    ಇಲ್ಲಿ ಎಲ್ಲವೂ ಇರುತ್ತದೆ.. ಕಡ್ಡಾಯವಾಗಿ ಕುಟುಂಬ ಸಮೇತ ಬನ್ನಿ ಎಂದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸಿದ್ದಾರೆ ಆರ್.ಚಂದ್ರು.

    ಹೀಗೆ ಹಲವು ವಿಶೇಷಣ ಹೊತ್ತುಕೊಂಡಿರೋ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಇಲ್ಲಿ ಎಲ್ಲವೂ ಇರುತ್ತದೆ ಎನ್ನುತ್ತಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರವನ್ನು ತೆರೆ ಮೇಲೆ ತರುತ್ತಿದೆ. ಕನ್ನಡ ಮತ್ತು ತೆಲುಗು, ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ ಐ ಲವ್ ಯೂ.

  • ಉಪ್ಪಿ ಕಬ್ಜಕ್ಕೆ ಆರ್‌ಎಫ್‌ಸಿಯಲ್ಲಿ ಸೆಟ್ ರೆಡಿ

    elaborate set for kabza

    ಉಪೇಂದ್ರ ನಟಿಸುತ್ತಿರುವ ಕಬ್ಜ ಸಿನಿಮಾಗೆ ನಿರ್ದೇಶಕ ಆರ್.ಚಂದ್ರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಭರ್ಜರಿ ಸೆಟ್ ಹಾಕಿಸುತ್ತಿದ್ದಾರೆ. ಭೂಗತ ಜಗತ್ತಿನ ಚಟುವಟಿಕೆಗಳು ನಡೆಯುವಂತಹ ತಾಣದ ಸೆಟ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಚಂದ್ರು. ಉಪೇಂದ್ರ ೭ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದೇ ತೆಲುಗಿನಲ್ಲಿ ಭಾರಿ ಸುದ್ದಿಯಾಗಿದೆಯಂತೆ.

    ಉಪೇAದ್ರ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದು, ಅವರು ವಾಪಸ್ ಬಂದ ಕೂಡಲೇ ಚಿತ್ರೀಕರಣ ಶುರುವಾಗಲಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಫೈನಲ್ ಹಂತದಲ್ಲಿದೆ ಎಂದಿರುವ ಚಂದ್ರು, ಖುದ್ದು ಹೈದರಾಬಾದ್‌ನಲ್ಲಿಯೇ ಇದ್ದುಕೊಂಡು ಸೆಟ್ ನಿರ್ಮಾಣದಲ್ಲಿ ಮುಳುಗಿದ್ದಾರೆ.

  • ಉಪ್ಪಿ ಕೈಯಲ್ಲಿ ಅಣ್ಣಾವ್ರ ಗನ್

    upendra gets dr rajkumar and amitab bachchan;s gun

    ರಿಯಲ್ ಸ್ಟಾರ್ ಉಪೇಂದ್ರ ಅಭಿನದಯ ಕಬ್ಜಾ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಆರ್.ಚಂದ್ರು ನಿರ್ದೇಶನದ ಕಬ್ಜಾದಲ್ಲಿ ಸ್ವತಃ ಉಪ್ಪಿಯೇ ಥ್ರಿಲ್ಲಾಗುವಂತಾ ಘಟನೆ ನಡೆದಿದೆ. ಏಕೆಂದರೆ ಅವರಿಗೆ ಅಲ್ಲಿ ಅಣ್ಣಾವ್ರು ಬಳಸಿದ್ದ ಗನ್ ಸಿಕ್ಕಿದೆ.

    1973ರಲ್ಲಿ ಡಾ.ರಾಜ್ ನಟಿಸಿದ್ದ ಗಂಧದ ಗುಡಿಯಲ್ಲಿ ಇದೇ ಪಿಸ್ತೂಲ್ ಬಳಸಲಾಗಿತ್ತಂತೆ. 1975ರ ಶೋಲೆಯಲ್ಲೂ ಇಂಥದ್ದೇ ಗನ್ ಬಳಸಿದ್ದರಂತೆ. ಈಗ ಅಂತಹ ಗನ್ ಉಪ್ಪಿ ಕೈಗೆ ಸಿಕ್ಕಿದೆ.

    ಅದೊಂದು ರೋಮಾಂಚನ ಎಂದು ಥ್ರಿಲ್ಲಾಗಿದ್ದಾರೆ ಉಪೇಂದ್ರ.

  • ಉಪ್ಪಿ ಚಿತ್ರಕ್ಕೆ ನಿಧಿ ಮತ್ತು ಪತ್ರಕರ್ತರು, ನಿರ್ದೇಶಕರು, ನಿರ್ಮಾಪಕರ ಪ್ರವೇಶ

    ಉಪ್ಪಿ ಚಿತ್ರಕ್ಕೆ ನಿಧಿ ಮತ್ತು ಪತ್ರಕರ್ತರು, ನಿರ್ದೇಶಕರು, ನಿರ್ಮಾಪಕರ ಪ್ರವೇಶ

    ಯುಐ. 7 ವರ್ಷಗಳ ನಂತರ ಉಪೇಂದ್ರ ಡೈರೆಕ್ಷನ್ ಮಾಡುತ್ತಿರೋ ಸಿನಿಮಾ. ಉಪ್ಪಿ ಕೇವಲ ನಟಿಸಿದ ಚಿತ್ರಗಳ ತೂಕ ಒಂದಾದರೆ.. ನಿರ್ದೇಶನ ಮಾಡುವ ಚಿತ್ರಗಳ ತೂಕವೇ ಬೇರೆ. ಹೀಗಾಗಿಯೇ ಈ ಚಿತ್ರಕ್ಕೆ ಯಾರು ಬರ್ತಾರೆ? ಕಲಾವಿದರು ಯಾರಿರ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇರುತ್ತೆ. ಈಗ ಚಿತ್ರಕ್ಕೆ ಹಲವು ಕಲಾವಿದರ ಪ್ರವೇಶವಾಗಿದೆ.

    ನಿಧಿ ಸುಬ್ಬಯ್ಯ ಆಯುಷ್ಮಾನ್ ಭವ ಚಿತ್ರದ ನಂತರ ನಟಿಸುತ್ತಿರೋ ಚಿತ್ರವಿದು. ಉಪ್ಪಿ ಕಾಲ್ ಮಾಡಿದಾಗ ಗೋವಾದಲ್ಲಿದ್ದರಂತೆ. ಪ್ರವಾಸವನ್ನು ಕಟ್ ಮಾಡಿ ಕಥೆ ಕೇಳೋಕೆ ಬಂದೆ. ಉಪ್ಪಿ ಸರ್ ಜೊತೆ ಈ ಹಿಂದೆ ಹಲವು ಪ್ರಾಜೆಕ್ಟ್ ಮಿಸ್ ಆಗಿದ್ದವು. ಈ ಬಾರಿ ಮಿಸ್ ಮಾಡಿಕೊಳ್ಳಲಿಲ್ಲ ಎಂದಿದ್ದಾರೆ ನಿಧಿ.

    ಪತ್ರಕರ್ತರಾದ ಗೌರೀಶ್ ಅಕ್ಕಿ ಮತ್ತು ಇಂದ್ರಜಿತ್ ಲಂಕೇಶ್ ಪತ್ರಕರ್ತರ ಪಾತ್ರದಲ್ಲೇ ನಟಿಸುತ್ತಿದ್ದಾರೆ. ಇವರಿಬ್ಬರೂ ಪತ್ರಕರ್ತರಷ್ಟೇ ಅಲ್ಲ, ನಿರ್ದೇಶಕರೂ ಹೌದು.

    ನಿರ್ದೇಶಕರಾಗಿರೋ ಓಂ ಪ್ರಕಾಶ್ ರಾವ್ ಕೂಡಾ ನಟಿಸುತ್ತಿದ್ದಾರೆ. ಮತ್ತೊಬ್ಬ ಡೈರೆಕ್ಟರ್ ಮಠ ಗುರು ಪ್ರಸಾದ್ ಕೂಡಾ ನಟಿಸಿದ್ದಾರೆ. ನಿರ್ಮಾಪಕರಾದ ಉಮೇಶ್ ಬಣಕಾರ್ ಕೂಡಾ ನಟಿಸಿದ್ದು, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಕೂಡಾ ಯುಐ ಟೀಂ ಸೇರಿದ್ದಾರೆ. ಬಹುಭಾಷಾ ಕಲಾವಿದರ ಮುರಳಿಕೃಷ್ಣ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

    ಚಿತ್ರ ಅದ್ಧೂರಿಯಾಗಿ ಸಿದ್ಧವಾಗುತ್ತಿದ್ದು ಸುಮಾರು ಒಂದು ಸಾವಿರ ಜನ ನಟಿಸುವ ದೊಡ್ಡ ಪ್ರಾಜೆಕ್ಟ್ ಇದಾಗಿದೆ. ಲಹರಿ ಮನೋಹರ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರ 2023ರಲ್ಲಿ ತೆರೆ ಕಾಣುವ ಸಾಧ್ಯತೆ ಇದೆ