` kfcc, - chitraloka.com | Kannada Movie News, Reviews | Image

kfcc,

  • ಸಿನಿಮಾ ರಿಲೀಸ್ ದಿಢೀರ್ ಮುಂದಕ್ಕೆ

    cinema releases stopped as a ban against ufo and qube

    ದಕ್ಷಿಣ ಭಾರತ ಫಿಲಂ ಚೇಂಬರ್, ಯುಎಫ್‍ಓ ಹಾಗೂ ಕ್ಯೂಬ್ ಸಂಸ್ಥೆಗಳ ವಿರುದ್ಧ ಸಮರ ಸಾರಿರುವುದು ಗೊತ್ತಿದೆಯಷ್ಟೇ. ಮನಸೋ ಇಚ್ಛೆ ಶುಲ್ಕ ವಿಧಿಸುತ್ತಿದ್ದ ಸಂಸ್ಥೆಗಳ ವಿರುದ್ಧ ಕನ್ನಡ, ತೆಲುಗು, ತಮಿಳು ಚಿತ್ರೋದ್ಯಮದ ನಿರ್ಮಾಪಕರು ಸಿಡಿದೆದ್ದುಬಿಟ್ಟಿದ್ದಾರೆ. ಯಾವುದೇ ಸಂಧಾನಕ್ಕೆ ಬಗ್ಗದ, ನಿಲುವಿನಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳದ ಎರಡೂ ಸಂಸ್ಥೆಗಳ ವಿರುದ್ಧ ಸಮರವನ್ನೇ ಸಾರಿದ್ದಾರೆ. ಹೀಗಾಗಿ ಮಾರ್ಚ್ 2ರಿಂದ ಈ ಸಂಸ್ಥೆಗಳಿಗೆ ಹೊಸ ಸಿನಿಮಾ ನೀಡುವುದನ್ನು ನಿಲ್ಲಿಸಲಾಗಿದೆ.

    ಆದರೆ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಈ ಎರಡು ಸಂಸ್ಥೆಗಳೇ ಏಕಸ್ವಾಮ್ಯ ಸಾಧಿಸಿವೆ. ಈ ಏಕಸ್ವಾಮ್ಯದಿಂದಲೇ ಈ ಎರಡೂ ಸಂಸ್ಥೆಗಳು ಹಠ ಹಿಡಿಯುತ್ತಿರುವುದು. ಹೀಗಾಗಿಯೇ ಈ ವಾರದಿಂದ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ.

    ಪೂರ್ವ ನಿಗಧಿಯಂತೆ ಮಾರ್ಚ್ ತಿಂಗಳಲ್ಲಿ 3 ಬರಬೇಕಿತ್ತು. ದಂಡುಪಾಳ್ಯ ಹಂತಕರ ಸರಣಿಯ 3ನೇ ಭಾಗ ಕನ್ನಡ ಮತ್ತು ತೆಲುಗು ಎರಡರಲ್ಲೂ ತೆರೆ ಕಾಣಬೇಕಿತ್ತು. ಚಿತ್ರ ಮುಂದಕ್ಕೆ ಹೋಗಿದೆ.

    ಬಿಡುಗಡೆಗೆ ಎಲ್ಲವನ್ನೂ ಸಿದ್ಧಮಾಡಿಕೊಂಡಿದ್ದ ನಂಜುಂಡಿ ಕಲ್ಯಾಣ ಕೂಡಾ ಮುಂದೆ ಹೋಗಿದೆ.  ಹೀಗೆ.. ಹಲವು ಸಿನಿಮಾಗಳು ಬಿಡುಗಡೆಯನ್ನು ಮುಂದೆ ಹಾಕಿವೆ. ಇದು ಕೇವಲ ಕನ್ನಡದಲ್ಲಷ್ಟೇ ಅಲ್ಲ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳೂ ರಿಲೀಸ್ ಆಗುತ್ತಿಲ್ಲ.

    Related Articles :-

    ಮಾರ್ಚ್ 2ರಿಂದ 5 ರಾಜ್ಯಗಳಲ್ಲಿ ಸಿನಿಮಾ ಇರಲ್ಲ..!

    No new Films From March 2

    ಮಾರ್ಚ್ 1, ಥಿಯೇಟರ್‍ಗಳಲ್ಲಿ ಸಿನಿಮಾ ಇರಲ್ಲ..!

  • ಸಿನಿಮಾ ಸಬ್ಸಿಡಿ ಹಣ 3 ವರ್ಷದಿಂದ ಬಂದಿಲ್ಲ..!

    ಸಿನಿಮಾ ಸಬ್ಸಿಡಿ ಹಣ 3 ವರ್ಷದಿಂದ ಬಂದಿಲ್ಲ..!

    ಚಿತ್ರರಂಗ ಕೋವಿಡ್ ಸಂಕಷ್ಟ ಕಾಲದಲ್ಲಿದೆ. ಸಿನಿಮಾಗಳು ಥಿಯೇಟರಿಗೆ ರಿಲೀಸ್ ಆಗೋಕೂ ಅವಕಾಶ ಇಲ್ಲ. ಅಕಸ್ಮಾತ್, ಅವಕಾಶ ಕೊಟ್ಟರೂ, ಅದು ಎಷ್ಟು ದಿನ, ಯಾವ ರೀತಿ ಇರುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಇದರ ಮಧ್ಯೆ ರಾಜ್ಯ ಸರ್ಕಾರ ಕನ್ನಡ ಚಿತ್ರಗಳಿಗೆ ನೀಡಬೇಕಿರುವ ಸಬ್ಸಿಡಿ ಹಣವನ್ನು 3 ವರ್ಷಗಳಿಂದ ನೀಡಿಲ್ಲ ಎನ್ನುವ ವಿಷಯ ಹೊರಬಿದ್ದಿದೆ.

    2017ರಲ್ಲಿ ಸೆನ್ಸಾರ್ ಆದ ಚಿತ್ರಗಳಿಗೆ ಮರುವರ್ಷ ಸಬ್ಸಿಡಿ ಹಣ ನೀಡಬೇಕಿತ್ತು. ಆದರೆ, 2018ರಿಂದ ಇದೂವರೆಗೆ ಯಾವುದೇ ಸಿನಿಮಾಗೆ ಸರ್ಕಾರದ ಸಬ್ಸಿಡಿ ಹಣ ಸಂದಾಯವಾಗಿಲ್ಲ.

    ರಾಜ್ಯ ಸರ್ಕಾರ ಪ್ರತಿ ವರ್ಷ 125 ಕನ್ನಡ ಚಿತ್ರಗಳಿಗೆ ಸಬ್ಸಿಡಿ ಹಣ ನೀಡುತ್ತದೆ. ಅವುಗಳಲ್ಲಿ ಕಾದಂಬರಿ ಆಧರಿತ, ಸಂಸ್ಕøತಿ ಬಿಂಬಿಸುವ ಕಥೆಯುಳ್ಳ ಚಿತ್ರಗಳಿಗೆ 25 ಲಕ್ಷ ರೂ. ಮಕ್ಕಳ ಸಿನಿಮಾ, ಬ್ಯಾರಿ, ಕೊಂಕಣಿ, ತುಳು ಭಾಷೆಯ 20 ಚಿತ್ರಗಳಿಗೆ ತಲಾ 15 ಲಕ್ಷ ರೂ. ನೀಡಲಾಗುತ್ತದೆ. ಇನ್ನು 100 ಚಿತ್ರಗಳಿಗೆ ತಲಾ 10 ಲಕ್ಷ ರೂ. ಸಬ್ಸಿಡಿ ಹಣ ಎಂದು ನೀಡಲಾಗುತ್ತದೆ. ಒಟ್ಟಾರೆ 125 ಚಿತ್ರಗಳಿಗೆ ಸಬ್ಸಿಡಿ. ಇವುಗಳಲ್ಲಿ ಡಬ್ ಆದ, ರೀಮೇಕ್ ಆದ, ಅಶ್ಲೀಲ ಚಿತ್ರಗಳಿಗೆ ಸಬ್ಸಿಡಿ ಹಣ ಇರುವುದಿಲ್ಲ.

    ಆದರೆ, ಸರ್ಕಾರ 2018ರಿಂದಲೂ ಸಬ್ಸಿಡಿ ಹಣ ನೀಡಿಲ್ಲ. ಅಷ್ಟೇ ಯಾಕೆ, 2019, 2020ರಲ್ಲಿ ಸಬ್ಸಿಡಿ ಚಿತ್ರಗಳಿಗಾಗಿ ಅರ್ಜಿಯನ್ನೂ ಕರೆದಿಲ್ಲ. ಸಂಕಷ್ಟದ ಸಮಯದಲ್ಲಿ ಸಬ್ಸಿಡಿ ಹಣವಾದರೂ ಬಂದರೆ ನಿರ್ಮಾಪಕರು ಉಸಿರಾಡಬಹುದು ಎನ್ನುತ್ತಿದ್ದಾರೆ ನಿರ್ಮಾಪಕರು.

  • ಸಿನಿಮಾಗಳಿಗೆ ಶೇ.10 ಟಿಡಿಎಸ್ ಬೇಡ : ಕೇಂದ್ರಕ್ಕೆ ಫಿಲಂ ಚೇಂಬರ್ ಮನವಿ

    kfcc requests central government to reduce qo percent tds

    ಪ್ರತಿ ಸಿನಿಮಾದ ಮೇಲೆ ಶೇ.10ರಷ್ಟು ಟಿಡಿಎಸ್ ವಿಧಿಸುವ ಪ್ರಸ್ತಾಪವಿಟ್ಟಿರುವ ಕೇಂದ್ರ ಸರ್ಕಾರದ ಯೋಜನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮನವಿ ಸಲ್ಲಿಸಿದೆ. ಈ ಕುರಿತು ಚರ್ಚಿಸಲು ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ ಪ್ರಹ್ಲಾದ್ ಜೋಷಿ. ಮಾರ್ಚ್ 12ರಂದು ದೆಹಲಿಗೆ ಫಿಲಂ ಚೇಂಬರ್ ನಿಯೋಗ ದೆಹಲಿಗೆ ತೆರಳುತ್ತಿದೆ.

    ಬೆಂಗಳೂರಿಗೆ ಬಂದಿದ್ದ ಪ್ರಹ್ಲಾದ್ ಜೋಷಿಯವರನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಕೆಸಿಎನ್ ಚಂದ್ರಶೇಖರ್, ಕಾರ್ಯದರ್ಶಿ ಎನ್.ಎಂ.ಸುರೇಶ್, ಉಪಾಧ್ಯಕ್ಷ ನಾಗಣ್ಣ, ನಿರ್ದೇಶಕಿ ರೂಪಾ ಅಯ್ಯರ್ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

  • ಸುದೀಪ್, ಪ್ರೇಮ್ ವಿರುದ್ಧ ಫಿಲಂ ಚೇಂಬರ್‍ಗೆ ಕನ್ನಡ ಸಂಘಟನೆ ದೂರು

    kfcc gets complaint against sudeep and prem

    ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್, ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡ ಸಂಘಟನೆಯೊಂದು ಫಿಲಂ ಚೇಂಬರ್ ಮೆಟ್ಟಿಲೇರಿದೆ. ಕರ್ನಾಟಕ ಸಂಘಟನೆ ಒಕ್ಕೂಟದ ಅಧ್ಯಕ್ಷ ನಾಗೇಶ್, ಸುದೀಪ್ ಮತ್ತು ಪ್ರೇಮ್ ಫಿಲಂ ಚೇಂಬರ್‍ಗೆ ದೂರು ಸಲ್ಲಿಸಿದ್ದಾರೆ.

    ದಿ ವಿಲನ್ ಚಿತ್ರದ ಒಂದು ದೃಶ್ಯದಲ್ಲಿ ಸುದೀಪ್ ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿಕೊಂಡಿದ್ದಾರೆ. ಇದು ನಾಡಧ್ವಜಕ್ಕೆ ಮಾಡಿದ ಅವಮಾನ. ಹೀಗಾಗಿ ಪ್ರೇಮ್ ಮತ್ತು ಸುದೀಪ್ ಕ್ಷಮೆ ಕೇಳಬೇಕು ಅನ್ನೋದು ನಾಗೇಶ್ ಆಗ್ರಹ. ಇಲ್ಲದೇ ಹೋದರೆ ದಿ ವಿಲನ್ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾಗೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.

    ಅಕ್ಟೋಬರ್ 18ರಂದು ರಿಲೀಸ್ ಆಗಿರುವ ದಿ ವಿಲನ್ ಚಿತ್ರ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಚಿತ್ರದ ಮೇಲೆ ಮತ್ತೊಂದು ವಿವಾದದ ಹೊಡೆತ ಬಿದ್ದಿದೆ. ಈಗಾಗಲೇ ಚಿತ್ರ ರಿಲೀಸ್ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ. ನೀವು ನಿರ್ದೇಶಕರನ್ನೇ ಸಂಪರ್ಕಿಸಿ ಎಂದು ಹೇಳಿ ಕಳಿಸಿದೆಯಂತೆ ಫಿಲಂ ಚೇಂಬರ್.

  • ಸೋಷಿಯಲ್ ಮೀಡಿಯಾಗೂ ಸೆನ್ಸಾರ್ ಬಂಧನ

    Censor officer Srinivasappa Image

    ನಾನು ನನ್ನ ಸಿನಿಮಾದ ಸೆನ್ಸಾರ್ ಆಗದ ಪ್ರೋಮೋ/ಹಾಡುಗಳನ್ನು ಟಿವಿ ಚಾನೆಲ್​ಗಳಲ್ಲಿ ಹಾಗೂ ಸೋಷಿಯಲ್ ಮೀಡಿಹಯಾಗಳಲ್ಲಿ ಪ್ರಸಾರ ಮಾಡುವುದಿಲ್ಲ. ಭವಿಷ್ಯದಲ್ಲಿಯೂ ಕೂಡಾ ನಾನು ನನ್ನ ಸಿನಿಮಾದ ಸೆನ್ಸಾರ್ ಆದ ದೃಶ್ಯ, ಪ್ರೋಮೋ, ಹಾಡುಗಳನ್ನು ಮಾತ್ರವೇ ಪ್ರಸಾರ ಮಾಡುತ್ತೇನೆ.

    ಕರ್ನಾಟಕದ ಸೆನ್ಸಾರ್ ಬೋರ್ಡ್ ಅಧಿಕಾರಿಗಳು, ಇಂಥಾದ್ದೊಂದು ಪ್ರಮಾಣಪತ್ರಕ್ಕೆ ಚಿತ್ರದ ನಿರ್ಮಾಪಕರಿಂದ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಇದು ಸೆಂಟ್ರಲ್ ಸೆನ್ಸಾರ್ ಬೋರ್ಡ್​ನ ಅಧಿಕೃತ ಪ್ರಕ್ರಿಯೆ. ಆದರೆ, ಇಲ್ಲಿ ಕರ್ನಾಟಕ ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಒಂದು ಪ್ರಮಾದ ಎಸಗಿದ್ದಾರೆ. 

    ಸೋಷಿಯಲ್ ಮೀಡಿಯಾ ನಿರ್ಬಂಧ ಕಾನೂನಿನಲ್ಲೇ ಇಲ್ಲ..!

    ಸಮಸ್ಯೆ ಇರುವುದು ಇಲ್ಲೇ ಏಕೆಂದರೆ, ಸಿನಿಮಾಟೋಗ್ರಫಿ ಕಾಯ್ದೆ ಪ್ರಕಾರ, ಸೆನ್ಸಾರ್ ಆಗದ ದೃಶ್ಯ, ಪ್ರೋಮೋ ಅಥವಾ ಹಾಡುಗಳನ್ನು ಪ್ರಸಾರ ಮಾಡುವ ಹಾಗಿಲ್ಲ. ಆದರೆ, ಆ ಕಾಯ್ದೆಯಲ್ಲಿ ಸೋಷಿಯಲ್ ಮೀಡಿಯಾ ಇಲ್ಲವೇ ಇಲ್ಲ. ಸೋಷಿಯಲ್ ಮೀಡಿಯಾ ಎನ್ನುವುದು ವೈಯಕ್ತಿಕ ಮಾಧ್ಯಮವಾಗಿರುವ ಕಾರಣ ಹಾಗೂ ಕಾಯ್ದೆ ಜಾರಿಗೆ ಬಂದಾಗ ಸೋಷಿಯಲ್ ಮೀಡಿಯಾ ಕಲ್ಪನೆಯೇ ಇಲ್ಲದ ಕಾರಣದಿಂದ ಕಾಯ್ದೆಯಲ್ಲಿ ಸೋಷಿಯಲ್ ಮೀಡಿಯಾವನ್ನು ಸೇರಿಸಿಯೇ ಇಲ್ಲ. ಹೀಗಿದ್ದರೂ, ಕರ್ನಾಟಕದ ಸೆನ್ಸಾರ್ ಬೋರ್ಡ್​ ಅಧಿಕಾರಿಗಳು ಕಾನೂನು ಪುಸ್ತಕದಲ್ಲಿಯೇ ಇಲ್ಲದ ಕಾನೂನನ್ನು ಚಿತ್ರ ನಿರ್ಮಾಪಕರ ಮೇಲೆ ಹೇರಲು ಹೊರಟಿದ್ದಾರೆ.

    ಅಂದಹಾಗೆ ಕೇಂದ್ರ ಸೆನ್ಸಾರ್​ ಬೋರ್ಡ್​ನ ಪ್ರಮಾಣ ಪತ್ರದಲ್ಲಿ ಕೂಡಾ ಸೋಷಿಯಲ್ ಮೀಡಿಯಾ ಎಂಬ ಪದ ಇಲ್ಲ. ಚಿತ್ರಲೋಕ ತಂಡ, ಸಿಬಿಎಫ್​ಸಿ ಇಂಡಿಯಾದ ಎಲ್ಲ ಮಾಹಿತಿಗಳನ್ನೂ ಜಾಲಾಡಿದಾಗ ಕೂಡಾ ಅಲ್ಲಿ ಸೋಷಿಯಲ್ ಮೀಡಿಯಾ ಎಂಬ ಪದವೂ ಇಲ್ಲ ಎನ್ನುವುದು ಗೊತ್ತಾಗಿದೆ. ಕಳೆದ 2 ತಿಂಗಳಿಂದ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಅಧಿಕಾರಿಯಾದ ಶ್ರೀನಿವಾಸಪ್ಪ, ಈ ರೀತಿಯ ಅಫಿಡವಿಟ್​ಗೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. 

    ಇಲ್ಲದ ಕಾನೂನನ್ನು ಪ್ರಾದೇಶಿಕ ಚಿತ್ರಗಳ ಮೇಲಷ್ಟೇ ಹೇರುತ್ತಿರುವುದು ಏಕೆ..? ಇದರಿಂದ ಪ್ರಾದೇಶಿಕ ಚಿತ್ರಗಳಿಗೆ, ಅದರಲ್ಲೂ ಕನ್ನಡ ಚಿತ್ರಗಳಿಗೆ ಸಮಸ್ಯೆಯಲ್ಲವೇ..? ಕಾನೂನು ಪುಸ್ತಕದಲ್ಲಿಯೇ ಇಲ್ಲದ ಕಾನೂನನ್ನು ಹೇರುವುದು ಕಾನೂನು ಬಾಹಿರವಲ್ಲವೇ..? ಹಿಂಬಾಗಿಲಿನಲ್ಲಿ ಬರುತ್ತಿರುವ ಇಂಥ ‘ಅದೃಶ್ಯ ಕಾನೂನು’ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಬಹುದು. ? ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಇದಕ್ಕೆ ಉತ್ತರಿಸುವರೇ..? 

    Also View