` kfcc, - chitraloka.com | Kannada Movie News, Reviews | Image

kfcc,

  • ಫಿಲಂ ಚೇಂಬರ್‍ಗೆ ಹೊಸ ಸಾರಥಿಗಳು

    kfcc gets new office bearers

    ಕರ್ನಾಟಕ ಫಿಲಂ ಚೇಂಬರ್‍ಗೆ ಹೊಸ ಸಾರಥಿಗಳ ಆಗಮನವಾಗಿದೆ. ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಇಂದು ನೂತನ ಸದಸ್ಯರು ಆದಿಕಾರ ಸ್ವೀಕರಿಸಲಿದ್ದಾರೆ. ಇಂದು 11 ಗಂಟೆಗೆ ವಿಜಯಶಾಲಿಯಾಗಿರುವ ಸದಸ್ಯರು ಪದಗ್ರಹಣ ಮಾಡಲಿದ್ದಾರೆ.

    ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಎ.ಚಿನ್ನೇಗೌಡ, 551 ಮತಗಳನ್ನು ಪಡೆದು ಜಯಶಾಲಿಯಾದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಮಾರ್ಸ್ ಸುರೇಶ್, 317 ಮತಗಳನ್ನು ಪಡೆದರು. 

    ಇದು ನನ್ನ ಗೆಲುವಲ್ಲ, ಚಿತ್ರೋದ್ಯಮದ ಗೆಲುವು. ಒಳ್ಳೆಯ ಕೆಲಸ ಮಾಡುವುದಕ್ಕೆ ಸಿಕ್ಕ ಒಳ್ಳೆಯ ಅವಕಾಶ ಇದು. ವಾಣಿಜ್ಯ ಮಂಡಳಿಯ ಘನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದು ಹೇಳಿದ್ದಾರೆ ಚಿನ್ನೇಗೌಡ.

    ನಿರ್ಮಾಪಕರ ವಲಯದ ಉಪಾಧ್ಯಕ್ಷ ಸ್ಥಾನದಲ್ಲಿ ಗೆದ್ದವರು ಕರಿಸುಬ್ಬು (338 ಮತ), ತೀವ್ರ ಪೈಪೋಟಿ ಒಡ್ಡಿದ್ದ ಪ್ರಮೀಳಾ ಜೋಷಾಯ್ (277) ಹಾಗೂ ದಿನೇಶ್ ಗಾಂಧಿ (253) ಮತಗಳನ್ನು ಪಡೆದು ಪರಾಭವಗೊಂಡರು.

    ವಿತರಕರ ವಲಯದ ಉಪಾಧ್ಯಕ್ಷ ಸ್ಥಾನ ಒಲಿದಿದ್ದು ಕೆ.ಮಂಜು (274) ಅವರಿಗೆ. ಕೆ. ಮಂಜು ಅವರ ಸಮೀಪದ ಪ್ರತಿಸ್ಪರ್ಧಿಯಾಗಿದ್ದು ನಾಗಣ್ಣ (238). ಕುಟ್ಟಿ(153), ಕುಪ್ಪಸ್ವಾಮಿ(47), ಬಿ.ಆರ್.ಕೇಶವ(156) ಮತ ಪಡೆದರಷ್ಟೇ. ಅಂತಿಮವಾಗಿ ಗೆಲುವು ಒಲಿದಿದ್ದು ಕೆ. ಮಂಜುಗೆ.

    ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನ ಗೆದ್ದವರು ಭಾಮಾ ಹರೀಶ್(573 ಮತ). ಪ್ರತಿಸ್ಪರ್ಧಿಯಾಗಿದ್ದ ಎ.ಗಣೇಶ್ (345 ಮತ) ಪಡೆದರು.

    ವಿತರಕರ ವಲಯದ ಗೌರವ ಕಾರ್ಯದರ್ಶಿ ಸ್ಥಾನ ಒಲಿದಿದ್ದು ಶಿಲ್ಪ ಶ್ರೀನಿವಾಸ್(295 ಮತ) ಅವರಿಗೆ. ಪ್ರತಿಸ್ಪರ್ಧಿಗಳಾಗಿದ್ದ ಜಿ.ವೆಂಕಟೇಶ್ (255), ಕೆ.ರಾಜಶೇಖರ್ (80) ಹಾಗೂ ಪಾರ್ಥಸಾರಥಿ (238) ಮತಗಳನ್ನಷ್ಟೇ ಪಡೆದರು.

    ಗೌರವ ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಎಂ.ವೀರೇಶ್ 452 ಮತಗಳನ್ನು ಪಡೆದು ವಿಜಯಶಾಲಿಯಾದರು. ಸಮೀಪದ ಪ್ರತಿಸ್ಪರ್ಧಿ ಜಯಸಿಂಹ ಮುಸುರಿ 416 ಮತ ಪಡೆದು ಪರಭಾವಗೊಂಡರು.

    ಪ್ರದರ್ಶಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದ ಕಾರಣ, ಚುನಾವಣೆ ನಡೆಯಲಿಲ್ಲ. ಪ್ರದರ್ಶಕರ ವಲಯದಿಂದ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದು, ಆ ಸ್ಥಾನಕ್ಕೂ ಚುನಾವಣೆ ನಡೆಯಲಿಲ್ಲ.

    ಇಂದು ಬೆಳಗ್ಗೆ 11 ಗಂಟೆಗೆ ನೂತನ ಅಧ್ಯಕ್ಷ ಚಿನ್ನೇಗೌಡರು ಹಾಗೂ ನೂತನ ಸದಸ್ಯರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

  • ಫಿಲಂಚೇಂಬರ್ ಚುನಾವಣೆ.. ಕಣದಲ್ಲಿರುವುದು ಇವರೇ

    film chamber elections

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಜೂನ್ 26ಕ್ಕೆ ಚುನಾವಣೆ. ಚೇಂಬರ್ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ, ಗೌರವ ಕಾರ್ಯದರ್ಶಿ, ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

    ba_ma_harish_rajasimha_musu.jpgಅಧ್ಯಕ್ಷ ಸ್ಥಾನಕ್ಕೆ ಸವೇಶ್ವರಿ ಕಂಬೈನ್ಸ್‍ನ ಚಿನ್ನೇಗೌಡ ಹಾಗೂ ಮಾರ್ಸ್ ಸುರೇಶ್ ಸ್ಪರ್ಧಿಸಿದ್ದಾರೆ.

    ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವುದು ದಿನೇಶ್ ಗಾಂಧಿ, ಪ್ರಮೀಳಾ ಜೋಷಾಯ್ ಹಾಗೂ ಕರಿಸುಬ್ಬು. ವಿತರಕರ ವಲಯದಿಂದ ಕುಟ್ಟಿ ಜಿ.ಕೆ., ಕುಪ್ಪುಸ್ವಾಮಿ, ಬಿ.ಆರ್.ಕೇಶವ, ನಾಗಣ್ಣ, ಕೆ.ಮಂಜು ಸ್ಪರ್ಧಿಸಿದ್ದಾರೆ. ಪ್ರದರ್ಶಕರ ವಲಯದಿಂದ ಅಶೋಕ ಥಿಯೇಟರ್ ಮಾಲೀಕ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಗೌರವ ಕಾರ್ಯದರ್ಶಿ ಹುದ್ದೆಗೆ ನಿರ್ಮಾಪಕರ ವಲಯದಿಂದ ಸ್ಪರ್ಧಿಸಿರುವುದು ಎ. ಗಣೇಶ್ ಹಾಗೂ ಭಾ.ಮಾ.ಹರೀಶ್. ವಿತರಕರ ವಲಯದಿಂದ ಪಾರ್ಥಸಾರಥಿ, ರಾಜಶೇಖರ್, ವೆಂಕಟೇಶ್ ಹಾಗೂ ಶಿಲ್ಪ ಶ್ರೀನಿವಾಸ್ ಸ್ಪರ್ಧಿಸಿದ್ದಾರೆ.

    ಪ್ರದರ್ಶಕರ ವಲಯದಿಂದ ಸುಂದರ್ ರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಗೌರವ ಖಜಾಂಚಿ ಸ್ಥಾನಕ್ಕೆ ಚಿತ್ರಲೋಕ ಮೂವೀಸ್‍ನ ಕೆ.ಎಂ. ವೀರೇಶ್ ಮತ್ತು ಜಯಸಿಂಹ ಮುಸುರಿ ಮಧ್ಯೆ ಸ್ಪರ್ಧೆಯಿದೆ.

    ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಕ್ಕೆ ಕೂಡಾ ಚುನಾವಣೆ ನಡೆಯಲಿದೆ. 

  • ಫಿಲಂಚೇಂಬರ್ ನೂತನ ಸದಸ್ಯರಿಂದ ಸಿಎಂಗೆ ಸನ್ಮಾನ

    kfcc new committee members honors cm hdk

    ಫಿಲಂಚೇಂಬರ್ ಚುನಾವಣೆಯ ಭರಾಟೆ ಮುಗಿಯುತ್ತಿದ್ದಂತೆ, ಚೇಂಬರ್‍ನ ನೂತನ ಸದಸ್ಯರು ಕೆಲಸವನ್ನೂ ಆರಂಭಿಸಿದ್ದಾರೆ. ಫಿಲಂಚೇಂಬರ್‍ನ ನೂತನ ಪದಾಧಿಕಾರಿಗಳೆಲ್ಲ ಅಧ್ಯಕ್ಷ ಚಿನ್ನೇಗೌಡರ ನೇತೃತ್ವದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದರು. ಫಿಲಂಚೇಂಬರ್‍ನ ಕಾರ್ಯದರ್ಶಿ ಬಾ.ಮಾ.ಹರೀಶ್, ಶಿಲ್ಪಾ ಶ್ರೀನಿವಾಸ್, ಕರಿಸುಬ್ಬು, ಉಪಾಧ್ಯಕ್ಷರಾದ ಕೆ.ಮಂಜು, ಕೆ.ಸಿ ಅಶೋಕ್ ಮತ್ತು ಖಜಾಂಚಿಯಾಗಿರುವ ಕೆ.ಎಂ.ವೀರೇಶ್.. ಸಿಎಂ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದ್ರು.

    ಫಿಲಂಚೇಂಬರ್‍ನ ನೂತನ ಪದಾಧಿಕಾರಿಗಳು, ಅಧಿಕಾರ ಸ್ವೀಕಾರದ ನಂತರ, ಸಂಪ್ರದಾಯದಂತೆ ರಾಜ್ ಸಮಾಧಿ, ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ಭೇಟಿ ಕೊಟ್ಟು ನಮನ ಸಲ್ಲಿಸಿದರು. ರಾಘವೇಂದ್ರ ರಾಜ್‍ಕುಮಾರ್ ಹಾಗೂ ಅಂಬರೀಷ್ ಅವರ ಮನೆಗೆ ತೆರಳಿ ಹೂಗುಚ್ಛ ನೀಡಿ ಸಹಕಾರ ಕೋರಿದರು.

  • ಫಿಲಂಚೇಂಬರ್‍ನಲ್ಲಿ ಸಾ.ರಾ.ಗೋವಿಂದು ಸಾಧನೆಗಳು

    kfcc ex president sa ra govindu

    ನೂತನ ಫಿಲಂಚೇಂಬರ್ ಪದಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಮತ್ತವರ ತಂಡ, ಕಳೆದ ಎರಡೂವರೆ ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳ ವಿವರವನ್ನು ರಾಜ್ಯದ ಜನರ ಮುಂದಿಟ್ಟಿದೆ. ಎರಡೂವರೆ ವರ್ಷಗಳಲ್ಲಿ ಚಿತ್ರೋದ್ಯಮಕ್ಕಾಗಿ ಉತ್ತಮ ಕೆಲಸ ಮಾಡಿದ್ದೇವೆ. ನೂತನ ಅಧ್ಯಕ್ಷರು ಮತ್ತವರ ತಂಡ ಇನ್ನಷ್ಟು ಒಳ್ಳೆಯ ಕೆಲಸ ಮಾಡಲಿ ಎಂದು ಶುಭ ಹಾರೈಸಿದ್ದಾರೆ. 

    ಸಾ.ರಾ.ಗೋವಿಂದು, ತಮ್ಮ ಸೇವಾವಧಿಯಲ್ಲಿ ಮಾಡಿರುವ ಕೆಲಸಗಳ ದೊಡ್ಡಪಟ್ಟಿಯನ್ನೇ ಮುಂದಿಟ್ಟಿದ್ದಾರೆ. ಕನ್ನಡ ಚಿತ್ರಗಳಿಗೆ ಸಹಾಯಧನವನ್ನ 100 ಚಿತ್ರಗಳಿಂದ 125 ಚಿತ್ರಗಳಿಗೆ ಹೆಚ್ಚಿಸುವುದು, ಪ್ರತಿ ವರ್ಷ ಏಪ್ರಿಲ್ 24ರಂದೇ (ಡಾ.ರಾಜ್ ಜನ್ಮದಿನ) ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಡ್ಡಾಯ ಮಾಡುವುದು, ಜನತಾ ಚಿತ್ರಮಂದಿರಗಳಿಗೆ ತಲಾ 50 ಲಕ್ಷ ರೂ. ಪ್ರೋತ್ಸಾಹ ಧನ, ಹಳೆಯ ಚಿತ್ರಮಂದಿರಗಳ ನವೀಕರಣಕ್ಕೆ ತಲಾ 25 ಲಕ್ಷ ರೂ. ಪ್ರೋತ್ಸಾಹಧನ, ಮೈಸೂರಿನ ಹೊರವಲಯದಲ್ಲಿ ಚಿತ್ರನಗರಿ ಸ್ಥಾಪನೆಗೆ 100 ಎಕರೆ ಜಮೀನು ಕಾಯ್ದಿರಿಸುವುದು, ಕಾರ್ಮಿಕರ ವೇತನ ಪರಿಷ್ಕರಣೆ, ಯುಎಫ್‍ಓ, ಕ್ಯೂಬ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಕಡಿವಾಣ, ಟಾಕೀಸ್ ಸುತ್ತಮುತ್ತ ಸಿನಿಮಾ ಪೋಸ್ಟರ್‍ಗಳಿಗೆ ತೆರಿಗೆ ವಿನಾಯಿತಿ, ರಾಜ್ಯದ ಚಿತ್ರಮಂದಿರಗಳಿಗೆ ತೆರಿಗೆ ವಿನಾಯಿತಿ, ಚಿತ್ರಮಂದಿರಗಳ ಲೈಸೆನ್ಸ್‍ಗೆ ಶುಲ್ಕ ಕಡಿತ, ಚಿತ್ರಮಂದಿರಗಳಿಗೆ ಆಸ್ತಿ ತೆರಿಗೆ ವಿನಾಯಿತಿ, ಮಲ್ಟಿಪ್ಲೆಕ್ಸ್‍ಗಳಲ್ಲಿ ಸಿನಿಮಾ ಪ್ರವೇಶದರ ನಿಗದಿ ಹಾಗೂ ಪ್ರೈಂಟೈಂನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಆದ್ಯತೆ, ಡಾ.ರಾಜ್ ಸ್ಮಾರಕ ಸ್ಥಳದಲ್ಲಿ ಯೋಗ ಕೇಂದ್ರ,  ಬೈಲಾ ತಿದ್ದುಪಡಿ, ಗಣಕೀಕರಣ, ಹೊಸ ಗುರುತಿನ ಚೀಟಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕನ್ನಡ ಚಲನಚಿತ್ರ ನೀತಿ, ಕಲ್ಯಾಣ ನಿಧಿ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚೇಂಬರ್ ಕಟ್ಟಡದ ಮೇಲೆ ಸ್ಟೀಲ್ ಶೆಡ್ ನಿರ್ಮಾಣ, ಬೆಂಗಳೂರಿನಲ್ಲಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆ ಹಾಗೂ ಹೆಚ್ಚುವರಿ ಸೆನ್ಸಾರ್ ಅಧಿಕಾರಿಯ ನೇಮಕಾತಿ ಸೇರಿದಂತೆ ಹಲವು ಕೆಲಸಗಳು ಗೋವಿಂದು ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದಿದ್ದವು. ಇನ್ನೂ ಹಲವು ಕೆಲಸಗಳು ಆರಂಭದ ಹಂತದಲ್ಲಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ನೂತನ ಸದಸ್ಯರ ಮೇಲಿದೆ.

  • ಫಿಲ್ಮ್ ಚೇಂಬರ್ ಎಲೆಕ್ಷನ್ : ಆರೋಪಗಳಿಗೆಲ್ಲ ಉತ್ತರ ಕೊಟ್ಟ ಸಾ.ರಾ.ಗೋವಿಂದು

    ಫಿಲ್ಮ್ ಚೇಂಬರ್ ಎಲೆಕ್ಷನ್ : ಆರೋಪಗಳಿಗೆಲ್ಲ ಉತ್ತರ ಕೊಟ್ಟ ಸಾ.ರಾ.ಗೋವಿಂದು

    ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಈ ಬಾರಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಗೋವಿಂದು ಮತ್ತು ಅವರ ತಂಡಕ್ಕೆ ಚಿತ್ರರಂಗದಿಂದ ಉತ್ತಮ ಬೆಂಬಲವೂ ಸಿಕ್ಕಿದೆ. ವಿರೋಧಗಳೂ ಎದುರಾಗಿವೆ. ಈ ನಿಟ್ಟಿನಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಜಯಮಾಲಾ, ಸುಂದರ್ ರಾಜ್.. ಮೊದಲಾದವರು ಗಂಭೀರ ಆರೋಪ ಮಾಡಿದ್ದಾರೆ. ಇವುಗಳಿಗೆಲ್ಲ ಖುದ್ದು ಸಾ.ರಾ.ಗೋವಿಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆರೋಪ ಮತ್ತು ಉತ್ತರಗಳ ವಿವರ ಇಲ್ಲಿದೆ.

    ಆರೋಪ : ಫಿಲ್ಮ್ ಚೇಂಬರ್ ಶೌಚಾಲಯ ನಿರ್ಮಾಣಕ್ಕೆ 35 ಲಕ್ಷ ರೂ. ಖರ್ಚು ಮಾಡಿ ತಪ್ಪು ಲೆಕ್ಕ ಕೊಟ್ಟಿದ್ದಾರೆ.

    ಉತ್ತರ : ಖರ್ಚಾಗಿರುವುದೇ 15 ಲಕ್ಷ. ಖರ್ಚಾಗಿರುವ 15 ಲಕ್ಷಕ್ಕೆ ಪಕ್ಕಾ ಲೆಕ್ಕಪತ್ರಗಳಿವೆ. ಸುಳ್ಳು ಆರೋಪ ಮಾಡಬೇಡಿ. ಒಬ್ಬರು 30 ಅಂತಾರೆ.. ಇನ್ನೊಬ್ಬರು 40 ಅಂತಾರೆ.. ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಾ ಸಂಸ್ಥೆಯನ್ನ. ಇದು ಸಾಂಸ್ಕøತಿ ಸಂಸ್ಥೆ ಎನ್ನುವುದನ್ನು ಮರೆಯಬೇಡಿ ಎಂದು ಝಾಡಿಸಿದರು.

    ಮೊದಲ ಹಂತದ ಆರೋಪದಲ್ಲೇ ಸಿಟ್ಟಿಗೆದ್ದ ಸಾ.ರಾ.ಗೋವಿಂದು, ಚೇಂಬರ್‍ನಲ್ಲಿ  ಹಣ ದುರುಪಯೋಗವಾಗಿದೆ ಅನ್ನೋವ್ರಿಗೆ ಉತ್ತರ ಕೊಟ್ಟರು. ಖರ್ಚಾಗಿರುವ ಪ್ರತಿ ಹಣಕ್ಕೂ ಲೆಕ್ಕವಿದೆ. ದಾಖಲೆಗಳಿವೆ. ಆ ಹಣದಲ್ಲೇ ಚಿತ್ರರಂಗದಲ್ಲಿ ಕಷ್ಟದಲ್ಲಿರುವ ಕಾರ್ಮಿಕರು, ಸಂತ್ರಸ್ತರಿಗೆ ನೆರವಾಗಿದ್ದೇವೆ. ಎಲ್ಲವೂ ದಾಖಲೆಗಳಲ್ಲಿಯೇ ಇದೆ ಎಂದರು ಸಾ.ರಾ.ಗೋವಿಂದು.

    ಇದೇ ವೇಳೆ ತಮ್ಮ ವಿರುದ್ಧ ನಿಂತಿರುವ ಜಯಮಾಲಾ ಅವರ ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಇದೇ ಜಯಮಾಲಾ ಅವರು ಅಧ್ಯಕ್ಷರಾಗಲು ಬಯಸಿದಾಗ ನಾನು ಅವರಿಗೆ ಬೆಂಬಲವಾಗಿ ನಿಂತಿದ್ದೆ. ಈಗ ಅದ್ಯಾಕೆ ಈ ರೀತಿ ಕೆಟ್ಟ ಮನಸ್ಥಿತಿಯಲ್ಲಿ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಎಂದರು ಸಾ.ರಾ.ಗೋವಿಂದು.

    ಎಲೆಕ್ಷನ್‍ನಲ್ಲಿ ಸೋಲುತ್ತಿದ್ದೇವೆ ಎಂದು ಗೊತ್ತಾದ ತಕ್ಷಣ ಈ ರೀತಿಯಾಗಿ ತಲೆಬುಡವಿಲ್ಲದ ಆರೋಪ ಮಾಡಬಾರದು. ಚುನಾವಣೆ ಬರುತ್ತೆ. ಹೋಗುತ್ತೆ. ಸಂಸ್ಥೆಯ ಧ್ಯೇಯಗಳಷ್ಟೇ ಮುಖ್ ಎಂದರು ಸಾ.ರಾ.ಗೋವಿಂದು.

  • ಫಿಲ್ಮ್ ಚೇಂಬರ್ ಹೊಸ ಕಮಿಟಿಗೆ ಹೈಕೋರ್ಟ್ ಬ್ರೇಕ್

    ಫಿಲ್ಮ್ ಚೇಂಬರ್ ಹೊಸ ಕಮಿಟಿಗೆ ಹೈಕೋರ್ಟ್ ಬ್ರೇಕ್

    ಮೇ ತಿಂಗಳಲ್ಲಿ ನಡೆದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಅಕ್ರಮಗಳ ಆರೋಪ ಕೇಳಿ ಬಂದಿತ್ತು. ಅಧ್ಯಕ್ಷರಾಗಿ ಬಾಮಾ ಹರೀಶ್ ಗೆದ್ದಿದ್ದರು. ಆದರೆ ಚುನಾವಣೆಯಲ್ಲಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೇ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಾ.ರಾ.ಗೋವಿಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ಫಿಲ್ಮ್ ಚೇಂಬರ್ ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳಬಾರದು ಎಂದು ಸೂಚನೆ ನೀಡಿದೆ. ಚೇಂಬರ್ ಯಾವುದೇ ಪಾಲಿಸಿ ಹಾಗೂ ಹಣಕಾಸಿನ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳದಂತೆ ಆದೇಶ ಕೊಟ್ಟಿದೆ. ಅಕ್ರಮದ ಆರೋಪಗಳಿಗೆ ಸರಿಯಾದ ಉತ್ತರ ನೀಡುವಲ್ಲಿ ಆಯೋಗ ಮತ್ತು ಚೇಂಬರ್ ವಿಫಲವಾದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಆಗಸ್ಟ್ 2ರಂದು ವಿಚಾರಣೆ ನಡೆಯಲಿದ್ದು, ಅಂದು ಚುನಾವಣೆ ನಡೆದ ದಿನದ ಎಲ್ಲ ದಾಖಲಾತಿಗಳನ್ನೂ ನೀಡುವಂತೆ ಸೂಚನೆ ನೀಡಿದೆ.

    ನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿ ಜೈಜಗದೀಶ್, ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪಾ ಶ್ರೀನಿವಾಸ್, ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿಯಾಗಿ ಸುಂದರ್ ರಾಜ್, ಖಜಾಂಚಿಯಾಗಿ ಟಿ.ಪಿ.ಸಿದ್ದರಾಜು ಗೆದ್ದಿದ್ದರು. ವಿತರಕರ ವಲಯದಿಂದ ಎನ್.ಎಂ.ಕುಮಾರ್, ಪ್ರದರ್ಶಕರ ವಲಯದಿಂದ ಕುಶಾಲ್ ಗೌರವ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರು.

    ಆದರೆ ಈ ಚುನಾವಣೆಯಲ್ಲಿ ಗೆದ್ದವರನ್ನು ವಿಜೇತರು ಎಂದು ಘೋಷಿಸಲಾಗಿದೆಯಾದರೂ ಸೋತವರಿಗೆ ಇದುವರೆಗೆ ಸರಿಯಾದ ಮಾಹಿತಿ ನೀಡಿಲ್ಲ. ಮತಗಟ್ಟೆಗಳಲ್ಲಿ ಚುನಾವಣೆಗೆ ಸಂಬಂಧ ಇಲ್ಲದೇ ಇದ್ದವರು ನಿಯಮ ಮೀರಿ ಓಡಾಡಿದ್ದಾರೆ. ಮತದಾರರು ಅಲ್ಲದೇ ಇರುವವರೂ ಕೂಡಾ ಮತಗಟ್ಟೆಯೊಳಗೆ ಕಾಣಿಸಿಕೊಂಡಿದ್ದಾರೆ. ಕೆಲವು ಸದಸ್ಯರಿಗೆ ದಾಖಲೆಗಳಿದ್ದರೂ, ಪಟ್ಟಿಯಲ್ಲಿ ಹೆಸರಿದ್ದರೂ ಮತದಾನಕ್ಕೆ ಅವಕಾಶವನ್ನೇ ನೀಡಿಲ್ಲ. ಸಿಸಿಟಿವಿ ದೃಶ್ಯಗಳು, ದಾಖಲೆ ಪತ್ರಗಳು ಸೇರಿದಂತೆ ಹಲವು ಗೋಲ್‍ಮಾಲ್ ನಡೆದಿವೆ ಎಂಬ ಆರೋಪ ಕೇಳಿ ಬಂದಿದೆ. ಇದೆಲ್ಲದರಿಂದ ಚುನಾವಣೆ ನಡೆಸಿದ್ದ ಅಧಿಕಾರಿಗಳ ಮೇಲೆಯೇ ಅನುಮಾನ ಸಂದೇಹ ಮೂಡಿದೆ. ಇದು ಆಯೋಗದ ವಿಶ್ವಾಸಾರ್ಹತೆಗೇ ಧಕ್ಕೆಯಾಗಬಹುದು.. ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಸಾ.ರಾ.ಗೋವಿಂದು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡು ಮಧ್ಯಂತರ ಸೂಚನೆ ಕೊಟ್ಟಿದೆ.

  • ಫಿಲ್ಮ್ ಚೇಂಬರ್`ನಲ್ಲಿ ಸೆಂಟ್ರಲ್ ಮಿನಿಸ್ಟರ್ : ಚಿತ್ರರಂಗದ ಪ್ರಾಣಿ ಸಮಸ್ಯೆಗೆ ಸಿಗುತ್ತಾ ಮುಕ್ತಿ..?

    ಫಿಲ್ಮ್ ಚೇಂಬರ್`ನಲ್ಲಿ ಸೆಂಟ್ರಲ್ ಮಿನಿಸ್ಟರ್ : ಚಿತ್ರರಂಗದ ಪ್ರಾಣಿ ಸಮಸ್ಯೆಗೆ ಸಿಗುತ್ತಾ ಮುಕ್ತಿ..?

    ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಗೆ ಭೇಟಿ ನೀಡಿದ್ದರು. ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಲ್.ಮುರುಗನ್ ಫಿಲ್ಮ್ ಚೇಂಬರ್‍ಗೆ ಭೇಟಿ ನೀಡಿ, ಚಿತ್ರರಂಗದ ಗಣ್ಯರೊಂದಿಗೆ ಮಾತುಕತೆ ನಡೆಸಿದರು. ಹಿರಿಯ ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚೇಂಬರ್ ಅಧ್ಯಕ್ಷರು, ಪದಾಧಿಕಾರಿಗಳೆಲ್ಲರೂ ಸಭೆಯಲ್ಲಿ ಭಾಗವಹಿಸಿದ್ದರು.

    ಸಭೆಯಲ್ಲಿ ವಿಶೇಷವಾಗಿ ಪ್ರಸ್ತಾಪವಾಗಿದ್ದು ಅನಿಮಲ್ ಬೋರ್ಡ್, ಜಿಎಸ್‍ಟಿ ಗೊಂದಲ ಹಾಗೂ ಸೆನ್ಸಾರ್ ಬೋರ್ಡ್ ಸಮಸ್ಯೆ. ಅನಿಮಲ್ ಬೋರ್ಡ್ ನಿಯಮಗಳಿಂದಾಗಿ ಚಿತ್ರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಳಿಕೊಳ್ಳಲಾಯಿತು. ಜೊತೆಗೆ ಕನ್ನಡದಿಂದಲೂ ಪ್ಯಾನ್ ಇಂಡಿಯಾ ಚಿತ್ರಗಳು ಬರುತ್ತಿದ್ದು, ಬೇರೆ ಬೇರೆ ಭಾಷೆಗಳಿಗೆ ಡಬ್ ಆಗುವ ಚಿತ್ರಗಳನ್ನು ಸೆನ್ಸಾರ್ ಮಾಡಲು ಬೆಂಗಳೂರಿನಲ್ಲಿಯೇ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಯಿತು.

    ಸಭೆಯ ನಂತರ ಮಾತನಾಡಿದ ಶಿವರಾಜ್ ಕುಮಾರ್ ಅನಿಮಲ್ ಬೋರ್ಡ್ ಸಮಸ್ಯೆ ಹಲವು ಚಿತ್ರಗಳನ್ನು ಕಾಡುತ್ತಿದೆ. ನನ್ನ ಚಿತ್ರಗಳಿಗೂ ಸಮಸ್ಯೆಯಾಗಿದೆ. ಸರಿಯಾದ ಸಂದರ್ಭದಲ್ಲಿ ಸೂಕ್ತ ಬೇಡಿಕೆಗಳನ್ನಿಟ್ಟಿದ್ದೇವೆ. ದಕ್ಷಿಣ ಭಾರತದವರಾದ ಕಾರಣ ಸಮಸ್ಯೆಗಳಿಗೆ ಪರಿಹಾರವೂ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.

  • ಮಾಜಿ ಸಿಎಂಗೆ ಫಿಲಂಚೇಂಬರ್ ಅಭಿನಂದನೆ

    kfcc leaders honor siddaramaiah

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಅಧಿಕಾರಾವಧಿಯಲ್ಲಿ ಚಿತ್ರರಂಗಕ್ಕೆ ಹಲವು ಕೊಡುಗೆ ನೀಡಿದವರು. ಚಿತ್ರರಂಗದ ಹಲವು ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಅವರಿಗೆ ಫಿಲಂಚೇಂಬರ್‍ನ ನೂತನ ಅಧ್ಯಕ್ಷ ಚಿನ್ನೇಗೌಡ, ಕಾರ್ಯದರ್ಶಿ ಬಾ.ಮಾ.ಹರೀಶ್, ಶಿಲ್ಪ ಶ್ರೀನಿವಾಸ್, ಉಪಾಧ್ಯಕ್ಷರಾದ ಕರಿಸುಬ್ಬು, ಕೆಸಿ ಅಶೋಕ್, ಖಜಾಂಚಿ ಕೆ.ಎಂ.ವೀರೇಶ್ ಅಭಿನಂದನೆ ಸಲ್ಲಿಸಿದರು. ಚಿತ್ರರಂಗದ ಹಲವು ಬೇಡಿಕೆಗಳ ಕುರಿತು ಈಗಿನ ಸಮ್ಮಿಶ್ರ ಸರ್ಕಾರದಲ್ಲೂ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.

  • ಮಾರ್ಚ್ 2ರಿಂದ 5 ರಾಜ್ಯಗಳಲ್ಲಿ ಸಿನಿಮಾ ಇರಲ್ಲ..!

    no new kannada, telugu, tamil, malayalam movies on march 1st

    ಮಾರ್ಚ್ 2ನೇ ತಾರೀಕಿನಿಂದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಸಿನಿಮಾ ಪ್ರದರ್ಶನ ಇರುವುದಿಲ್ಲ. ಯುಎಫ್‍ಒ ಮತ್ತು ಕ್ಯೂಬ್ ಕಂಪೆನಿಗಳ ವಿರುದ್ಧ ಸಮರವನ್ನೇ ಸಾರಿರುವ ದಕ್ಷಿಣ ಭಾರತ ಫಿಲ್ಮ್ ಚೇಂಬರ್, ಈ ಕಂಪೆನಿಗಳಿಗೆ ಸಿನಿಮಾ ನೀಡದೇ ಇರಲು ನಿರ್ಧರಿಸಿದೆ.

    ಅಂದಹಾಗೆ ಈ ಕ್ಯೂಬ್ ಮತ್ತು ಯುಎಫ್‍ಒ ಕಂಪೆನಿಗಳು ಸಿನಿಮಾಗಳ ಪ್ರತಿಗಳನ್ನು ಡಿಜಿಟಲ್ ರೂಪದಲ್ಲಿ ಪಡೆದು, ಥಿಯೇಟರುಗಳಲ್ಲಿ ಸ್ಯಾಟಲೈಟುಗಳ ಮುಖಾಂತರ ಪ್ರಸಾರ ಮಾಡುವ ವ್ಯವಸ್ಥೆ ಹೊಂದಿವೆ. ಆದರೆ, ಈ ಸಂಸ್ಥೆಗಳು ಚಿತ್ರ ನಿರ್ಮಾಪಕರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದು, ಶುಲ್ಕವನ್ನು ಕಡಿಮೆ ಮಾಡಿಕೊಳ್ಳಿ ಎನ್ನುವುದು ಚಿತ್ರ ನಿರ್ಮಾಪಕರ ಬೇಡಿಕೆ. ಆದರೆ 4 ಸುತ್ತಿನ ಸಭೆಗಳ ಬಳಿಕವೂ ಕ್ಯೂಬ್ ಮತ್ತು ಯುಎಫ್‍ಒ ಕಂಪೆನಿಗಳು ಶುಲ್ಕ ಕಡಿತಕ್ಕೆ ಒಪ್ಪಿಲ್ಲ. 

    ಹೀಗಾಗಿ, ಮಾರ್ಚ್ 2ರಿಂದ ಈ ಕಂಪೆನಿಗಳಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಂನ ಯಾವುದೇ ಸಿನಿಮಾಗಳನ್ನು ನೀಡದೇ ಇರಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಫಿಲಂ ಚೇಂಬರ್ ಅಧ್ಯಕ್ಷ ಎಲ್.ಸುರೇಶ್, ಫಿಲ್ಮಿ ಫೆಡರೇಷನ್ ಆಪ್ ಇಂಡಿಯಾದ ಉಪಾಧ್ಯಕ್ಷ ರವಿ ಕೊಟ್ಟಾರ್‍ಕರ, ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ನಾಲ್ಕೂ ರಾಜ್ಯಗಳ ಫಿಲಂ ಚೇಂಬರ್ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಈ ನಿರ್ಧಾರ ಕೈಗೊಂಡಿದ್ದಾರೆ.

    Related Articles :-

    No new Films From March 2

    ಮಾರ್ಚ್ 1, ಥಿಯೇಟರ್‍ಗಳಲ್ಲಿ ಸಿನಿಮಾ ಇರಲ್ಲ..!

  • ಮೀಟೂ ಎಫೆಕ್ಟ್ - ನಿರ್ಮಾಪಕರ ರಕ್ಷಣೆಗೆ ಹೊಸ ಸಮಿತಿ

    producers all set to start icc and gender sensitization

    ಮೀಟೂ ಬಿರುಗಾಳಿಗೆ ಸ್ಟಾರ್ ನಟರಷ್ಟೇ ಅಲ್ಲ, ಚಿತ್ರ ನಿರ್ಮಾಪಕ, ನಿರ್ದೇಶಕರೂ ಕಂಗಾಲಾಗಿದ್ದಾರೆ. ಸಿನಿಮಾದಲ್ಲಿ ಎಲ್ಲರ ಪಾತ್ರ ಮುಗಿದ ಮೇಲೆ ಈ ರೀತಿ ಆರೋಪ ಕೇಳಿ ಬಂದರೆ ಏನು ಮಾಡೋದು ಅನ್ನೋದು ನಿರ್ಮಾಪಕರು, ನಿರ್ದೇಶಕರ ಆತಂಕ. ಅರ್ಜುನ್ ಸರ್ಜಾ, ಶೃತಿ ಹರಿಹರನ್ ವಿಚಾರದಲ್ಲಿ ಸಂಧಾನ ಸಭೆಯೂ ಮುರಿದುಬಿದ್ದ ಹಿನ್ನೆಲೆಯಲ್ಲಿ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಂಡಿದೆ. 

    ನಿರ್ಮಾಪಕರ ಹಿತರಕ್ಷಣೆಗಾಗಿ ಪ್ರೊಡ್ಯೂಸರ್ಸ್ ಪ್ರೊಟೆಕ್ಷನ್ ಕಮಿಟಿ (ಪಿಪಿಸಿ) ರಚನೆಗೆ ಮುಂದಾಗಿದೆ. ಈ ಸಮಿತಿಯಲ್ಲಿ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಇರುತ್ತಾರೆ. ವಾಣಿಜ್ಯ ಮಂಡಳಿಯ ಅಕ್ಟೋಬರ್ 30ರ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆಯಾಗಲಿದೆಯಂತೆ. ಎಲ್ಲವೂ ಚುರುಕಾಗಿ ನಡೆದರೆ, ಇನ್ನೊಂದೆರಡು ವಾರಗಳಲ್ಲಿ ಪಿಪಿಸಿ ಅಸ್ಥಿತ್ವಕ್ಕೆ ಬರಲಿದೆ.

  • ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಲಂಚೇಂಬರ್ ಸನ್ಮಾನ

    kfcc honors cm hdk

    ಮಾಜಿ ಪ್ರಧಾನಿ ದೇವೇಗೌಡರ ಮಗನಾಗಿದ್ದರೂ, ಕುಮಾರಸ್ವಾಮಿ ಹೊರಜಗತ್ತಿಗೆ ಮೊದಲು ಪರಿಚಯವಾಗಿದ್ದು ಕನ್ನಡ ಚಿತ್ರರಂಗದ ಮೂಲಕ. ಪ್ರದರ್ಶಕರಾಗಿ ವೃತ್ತಿ ಜೀವನ ಆರಂಭಿಸಿದ ಕುಮಾರಸ್ವಾಮಿ, ವಿತರಕರಾಗಿ, ನಿರ್ಮಾಪಕರಾಗಿ ಹಿಟ್ ಚಿತ್ರಗಳನ್ನು ಕೊಟ್ಟವರು. ಚಿತ್ರರಂಗದ ಆಳ ಅಗಲಗಳನ್ನು ಬಲ್ಲ ಕುಮಾರಸ್ವಾಮಿ, ಚಿತ್ರರಂಗದ ಬಗ್ಗೆ ಹಲವು ಕನಸು ಹೊತ್ತಿದ್ದಾರೆ. ಚಿತ್ರರಂಗದ ಮೂಲಕ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೇರಿರುವ ಕುಮಾರಸ್ವಾಮಿ ಹಾಗೂ ಸಚಿವೆ ಜಯಮಾಲಾ ಅವರನ್ನು ಫಿಲಂಚೇಂಬರ್ ವತಿಯಿಂದ ಅಭಿನಂದಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರಸ್ವಾಮಿ, ಡಾ. ರಾಜ್‍ಕುಮಾರ್ ಹಾಗೂ ವಿಷ್ಣುವರ್ಧನ್ ಅವರನ್ನು, ಅವರ ಚಿತ್ರಗಳ ಸಂದೇಶವನ್ನು ನೆನಪಿಸಿಕೊಂಡರು. ನನಗೆ ಅಂಬರೀಷ್ ಅವರ ಮೇಲೆ ಸ್ವಲ್ಪ ಹೆಚ್ಚು ಪ್ರೀತಿಯಿದೆ ಎಂದು ಹೇಳಿಕೊಂಡ ಕುಮಾರಸ್ವಾಮಿ, ಅಂಬರೀಷ್‍ರ ಒಂಟಿಸಲಗ, ಇಂದ್ರಜಿತ್ ಹಾಗೂ ನಮ್ಮೂರ ಹಮ್ಮೀರ ಚಿತ್ರಗಳನ್ನು ರಿಲೀಸ್ ಮಾಡಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದೆ ಎಂದು ನೆನಪಿಸಿಕೊಂಡರು.

    ಕನ್ನಡ ಚಿತ್ರರಂಗದ ಸುದೀರ್ಘ ನಿರೀಕ್ಷೆಯಾಗಿರುವ ಚಿತ್ರನಗರಿ ಪ್ರಸ್ತಾಪವನ್ನೂ ಇಟ್ಟರು. ಅಂಬರೀಷ್ ಇದರ ನೇತೃತ್ವ ವಹಿಸಿಕೊಳ್ಳಬೇಕು, ಚಿತ್ರನಗರಿ ಹೇಗಿರಬೇಕು ಎಂಬ ಬಗ್ಗೆ ನನಗೂ ಕನಸುಗಳಿವೆ ಎಂದು ಹೇಳಿಕೊಂಡರು. ಮೈಸೂರಿನಲ್ಲಿ ಆಗದೇ ಹೋದರೆ, ರಾಮನಗರದಲ್ಲಿ ಚಿತ್ರನಗರಿ ನಿರ್ಮಾಣ ಮಾಡೋಣ ಎಂದ ಕುಮಾರಸ್ವಾಮಿ, ತೆರಿಗೆ ವಿಚಾರವನ್ನು ಚರ್ಚೆ ಮಾಡೋಣ, ವಿಧಾನಸೌಧಕ್ಕೆ ಬನ್ನಿ ಎಂದು ಮನವಿ ಮಾಡಿದರು.

    ಇದೇ ವೇಳೆ ಕುಮಾರಸ್ವಾಮಿ ಕುರಿತು ಎಸ್.ನಾರಾಯಣ್ ನಿರ್ದೇಶಿಸಿದ್ದ ಡಾಕ್ಯುಮೆಂಟರಿಯನ್ನೂ ಪ್ರಸಾರ ಮಾಡಲಾಯಿತು.  ಜೂನ್ 27ರಂದು ನಡೆಯಲಿರುವ ಕೆಂಪೇಗೌಡ ಜಯಂತಿಗೆ ಚಿತ್ರರಂಗದ ಎಲ್ಲರೂ ಹಾಜರಾಗಿ ಯಶಸ್ವಿಗೊಳಿಸುವಂತೆ ವೇದಿಕೆಯಲ್ಲೇ ಆಹ್ವಾನ ನೀಡಿದರು ಕುಮಾರಸ್ವಾಮಿ. 

  • ರಶ್ಮಿಕಾ ನಿಷೇಧಕ್ಕೆ ಕನ್ನಡ ಸಂಘಟನೆಗಳ ಮನವಿ

    kannada groups demand film chamber to ban rashmika

    ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ಭಾರೀ ಕಷ್ಟ ಎಂದಿದ್ದ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಬಲವಾಗತೊಡಗಿದೆ. ಚೆನ್ನೈನಲ್ಲಿ ಡಿಯರ್ ಕಾಮ್ರೇಡ್ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣ ತಮಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ಕಷ್ಟ ಎಂದಿದ್ದರು. ಒಬ್ಬ ಕನ್ನಡತಿಯಾಗಿ ಹೀಗೆ ಹೇಳಿದ್ದು ಸರೀನಾ ಎಂದು ಸಿಟ್ಟಿಗೆದ್ದಿರುವ ಕೆಲವು ಕನ್ನಡ ಸಂಘಟನೆಗಳು ರಶ್ಮಿಕಾ ಮಂದಣ್ಣರನ್ನು ಕನ್ನಡ ಚಿತ್ರರಂಗದಿಂದಲೇ ನಿಷೇಧಿಸಬೇಕು ಎಂದು ಒತ್ತಾಯಿಸಿವೆ.

    ಕರ್ನಾಟಕ ಸಂಘಟನೆಗಳ ಒಕ್ಕೂಟ ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದೆ. ಈ ಕುರಿತು ರಶ್ಮಿಕಾ ಮಂದಣ್ಣ ಅವರನ್ನು ಕರೆದು ಮಾತುಕತೆ ನಡೆಸೋದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

  • ಲಾಕ್ ಡೌನ್ ಸಿನೆಮಾ 6.0 - ಜೂನ್ 15ರವರೆಗೆ ಸಿನಿಮಾ ಇಲ್ಲ..

    no fils till june 5th

    ಚಿತ್ರರಂಗದ ಸಿದ್ಧತೆ, ನಿರೀಕ್ಷೆ ಎರಡೂ ಹುಸಿ ಯಾಗುತ್ತಿದೆ. ಜೂನ್ 1ರಿಂದ ಚಿತ್ರ ಪ್ರದರ್ಶನ ಮತ್ತು ಸಿನೆಮಾ ಚಿತ್ರೀಕರಣ ಮಾಡಲು ಅನುಮತಿ ಸಿಗುವ ಸಾಧ್ಯತೆ ಇಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ‌ ಪದಾಧಿಕಾರಿಗಳ ಜತೆ ಸಿಎಂ ಸಭೆಯಲ್ಲಿ ಈ ಮಾತು ವ್ಯಕ್ತವಾಗಿದೆ ಎಂದು ಚಿತ್ರಲೋಕದ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. 

    ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೊಡಿ ಮತ್ತು

    ಚಿತ್ರಮಂದಿರಗಳನ್ನ ತೆರೆಯಲು ಅವಕಾಶ ಕೊಡಿ ಹಾಗೂ ಚಿತ್ರರಂಗಕ್ಕೆ ಸಹಾಯಧನ ಘೋಷಣೆ ಮಾಡಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ನಿಯೋಗ ಮನವಿ ಸಲ್ಲಿಸಿತು. ಈ ವೇಳೆ ಯಡಿಯೂರಪ್ಪ ಥಿಯೇಟರ್ ಮತ್ತು ಚಿತ್ರಮಂದಿರಗಳಲ್ಲಿ ಪ್ರದರ್ಶನ ಸಾಧ್ಯತೆ ನಿರಾಕರಿಸಿದ್ದಾರೆ.

    ಆದರೆ ಚಿತ್ರೀಕರಣಕ್ಕೆ ಅನುಮತಿ ನೀಡುವ ಕುರಿತು ಪ್ರಧಾನಿ ಮೋದಿ ಆದೇಶ ಎದುರು ನೋಡುತ್ತಿದ್ದಾರೆ. ಅಲ್ಲಿಗೆ ಇದು ಚಿತ್ರರಂಗದ ಪಾಲಿಗೆ ಲಾಕ್ ಡೌನ್ 6.0. ಏಕೆಂದರೆ ಮೊದಲ ಲಾಕ್ ಡೌನ್ ಮುನ್ನವೇ ಚಿತ್ರಪ್ರದರ್ಶನ ರದ್ದಾಗಿತ್ತು

  • ವಿಜಯ್ ಬಹಿಷ್ಕಾರ ಅಸಾಧ್ಯ - ಫಿಲಂ ಚೇಂಬರ್

    kfcc will not ban duniya vijay

    ಪಾನಿಪೂರಿ ಕಿಟ್ಟಿ ಅಣ್ಣನ ಮಗನ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ದುನಿಯಾ ವಿಜಯ್‍ರನ್ನು ಚಿತ್ರರಂಗದಿಂದ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿದೆ. ಈ ಕುರಿತು ಪಾನಿಪುರಿ ಕಿಟ್ಟಿ ಕೂಡಾ ಮನವಿ ಮಾಡಿದ್ದಾರೆ. ಆದರೆ, ಅದು ಅಸಾಧ್ಯ ಎಂದು ಹೇಳಿದ್ದಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ.

    ಇದೊಂದು ವೈಯಕ್ತಿಕ ವಿಚಾರದ ಗಲಾಟೆ. ಮೇಲಾಗಿ ಇದು ಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ. ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಚಿನ್ನೇಗೌಡ.

    ಜೈಲಿನಿಂದ ಬಂದ ಮೇಲೆ ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿಯನ್ನು ಕೂರಿಸಿಕೊಂಡು ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.

  • ಸಂಜನಾ ನಗ್ನ ವಿಡಿಯೋ ಪ್ರಕರಣ - ಫಿಲಂ ಚೇಂಬರ್ ಕಟಕಟೆಗೆ ಬರಬೇಕು 2 ಟೀಂ 

    kfcc calls meeting

    2 ಚಿತ್ರದಲ್ಲಿ ನಟಿ ಸಂಜನಾ ನಟಿಸಿದ್ದ ನಗ್ನ ದೃಶ್ಯದ ವಿಡಿಯೋ ಲೀಕ್ ಆಗಿ, ವೈರಲ್ ಆಗಿದ್ದು ಗೊತ್ತೇ ಇದೆ. ಮಹಿಳಾ ಆಯೋಗ ದೂರನ್ನೂ ದಾಖಲಿಸಿದೆ. ಆದರೆ, ವಿಡಿಯೋ ಲೀಕ್ ಆಗಿದ್ದು ಎಲ್ಲಿ, ಹೇಗೆ ಎನ್ನುವ ವಿಷಯವೇ ಗೊತ್ತಿಲ್ಲ.

    ವಿವಾದದ ಬಗ್ಗೆ ಫಿಲಂ ಚೇಂಬರ್ 2 ಚಿತ್ರತಂಡದ ಕುರಿತು ಚರ್ಚಿಸಲು ಜುಲೈ 25ರಂದು ಸಭೆ ಕರೆದಿದೆ. ಅಂದು ಸಾ.ರಾ. ಗೋವಿಂದು ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ನಟಿ ಸಂಜನಾ, ನಿರ್ಮಾಪಕ ವೆಂಕಟ್ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಬರಬೇಕು. ಫಿಲಂ ಚೇಂಬರ್​ಗೆ ವಿವರಣೆ ನೀಡಬೇಕು. 

    ವಿಶೇಷವೇನು ಗೊತ್ತಾ? ನಿರ್ದೇಶಕ ಶ್ರೀನಿವಾಸ ರಾಜು, ರಾಜ್ಯ ನಿರ್ದೇಶಕರ ಸಂಘದ ಸದಸ್ಯರೇ ಅಲ್ಲವಂತೆ. ಈ ವಿಷಯ ನಿರ್ದೇಶಕರ ಸಂಘದ ಸಭೆಯಲ್ಲಿ ಬಹಿರಂಗವಾಗಿದೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಈ ಎಲ್ಲ ವಿವರಗಳನ್ನೂ ಪಡೆದುಕೊಂಡಿದ್ದಾರೆ. 

    ಇನ್ನೂ ವಿಚಿತ್ರವೆಂದರೆ, ತಮಗೆ ಅನ್ಯಾಯವಾಯಿತು ಎನ್ನುತ್ತಿರುವ 2 ಚಿತ್ರತಂಡದ ಯಾರೊಬ್ಬರೂ ಇದುವರೆಗೆ ಸೈಬರ್ ಕ್ರೈಂಗಾಗಲೀ, ಪೊಲೀಸ್ ಠಾಣೆಗಾಗಲಿ ದೂರು ಕೊಟ್ಟಿಲ್ಲ. ಈ ಎಲ್ಲವೂ ಜುಲೈ 25ರ ಸಭೆಯಲ್ಲಿ ಚರ್ಚೆಯಾಗಲಿದೆ.

    Related Articles :-

    ಸಂಜನಾರ ಆ ವಿಡಿಯೋ ಗೊತ್ತಿಲ್ಲದೆ ಆದ ತಪ್ಪಂತೂ ಖಂಡಿತಾ ಅಲ್ಲ.! - ಹೇಗೆ ಗೊತ್ತಾ?

    ಮಗಳ ಆ ದೃಶ್ಯ ನೋಡಿದ ಸಂಜನಾ ತಾಯಿ ಹೇಳಿದ್ದೇನು?

    ಲೀಕ್ ವಿಡಿಯೋಗೆ ಫೋಟೋ ಸಾಕ್ಷಿ - ಸಂಜನಾ ನೀಲಿ ಬಟ್ಟೆ ಧರಿಸಿದ್ದರ ಹಿಂದಿನ ಟೆಕ್ನಾಲಜಿ

    ಸಂಜನಾ ವಿಡಿಯೋ ಲೀಕ್‍ನಲ್ಲಿ ನಮ್ಮ ಪಾತ್ರವಿಲ್ಲ - ನಿರ್ದೇಶಕ ಶ್ರೀನಿವಾಸ ರಾಜು ಮೊದಲ ಪ್ರತಿಕ್ರಿಯೆ

    ಬೆತ್ತಲಾಗಿಲ್ಲ..ಬೆತ್ತಲಾಗಿಲ್ಲ.. - ಸಾಕ್ಷಿ ಸಮೇತ ಬಂದರು ಸಂಜನಾ

    ವಿಡಿಯೋ ಲೀಕ್ ಆದ ಮೇಲೆ ಸಂಜನಾ ಕೇಳುತ್ತಿರುವ ಪ್ರಶ್ನೆ ಇದೊಂದೇ..

    ನಟಿಸಿದ್ದು ನಿಜ. ದೃಶ್ಯದಲ್ಲಿರುವುದೂ ನಾನೇ - ಲೀಕ್ ವಿಡಿಯೋಗೆ ಸಂಜನಾ ಇನ್ನೊಂದು ಸ್ಪಷ್ಟನೆ

    ಬೆತ್ತಲಾಗಿದ್ದು ಬೆನ್ನು ಮಾತ್ರ..ಉಳಿದಂತೆ... ಬೆತ್ತಲೆ ವಿಡಿಯೋ ಸುದ್ದಿಗೆ ಸಂಜನಾ ಕೊಟ್ಟ ಉತ್ತರ

  • ಸಂಜನಾ ವಿಡಿಯೋ ಲೀಕ್ ಮಾಡಿದ್ದು ನಾನಲ್ಲ - ಭಗವದ್ಗೀತೆ ಮೇಲೆ ಪ್ರಮಾಣ ಮಾಡಿದ ನಿರ್ದೇಶಕ

    srinivas raju

    ನಟಿ ಸಂಜನಾ ಅವರು ನಟಿಸಿರುವ 2 ಚಿತ್ರದ ನಗ್ನ ವಿಡಿಯೋ ಲೀಕ್ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ವಿಡಿಯೋ ಕುರಿತಂತೆ ಫಿಲ್ಮ್ ಚೇಂಬರ್​ನಲ್ಲಿ ಇಂದು ಸಭೆ ನಡೆಸಲಾಯಿತು. ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ವಿವರಣೆ ನೀಡಿದರು. 

    ಶ್ರೀನಿವಾಸ ರಾಜು ಅವರ ವಿವರಣೆ ಕೇಳಿದ ಸಾ.ರಾ. ಗೋವಿಂದು, ಈ ಕುರಿತು ಸೈಬರ್ ಕ್ರೈಂನವರಿಗೆ ದೂರು ನೀಡಲು ಸೂಚನೆ ನೀಡಿದರು. ನಿರ್ದೇಶಕರಿಂದಲೇ ವಿಡಿಯೋ ಲೀಕ್ ಆಗಿದ್ದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.

    ನಂತರ ಮಾತನಾಡಿದ ಶ್ರೀನಿವಾಸ ರಾಜು, ಸೆನ್ಸಾರ್​ನವರು ಸೂಚಿಸಿದ್ದಂತೆ ದೃಶ್ಯವನ್ನು ಎಡಿಟ್ ಮಾಡಲಾಗಿತ್ತು. ಚಿತ್ರಕ್ಕೆ ಅಗತ್ಯವಿದ್ದುದರಿಂದ ಶೂಟ್ ಮಾಡಿದ್ದೆವು. ಆದರೆ, ಆ ವಿಡಿಯೋ ಹೇಗೆ ಲೀಕ್ ಆಯಿತು ಎಂದು ನನಗೂ ಗೊತ್ತಿಲ್ಲ. ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ವಿಡಿಯೋ ಲೀಕ್​ಗೂ ನನಗೂ ಸಂಬಂಧವಿಲ್ಲ. ಸೈಬರ್ ಕ್ರೈಂಗೂ ದೂರು ಕೊಡುತ್ತೇನೆ. ನನ್ನ ತಪ್ಪು ಎಂದೇನಾದರೂ ಸಾಬೀತಾದರೆ, ಚೇಂಬರ್ ತೆಗೆದುಕೊಳ್ಳುವ ಯಾವುದೇ ಕ್ರಮವನ್ನಾದರೂ ಪಾಲಿಸುತ್ತೇನೆ ಎಂದರು. 

    ಚೇಂಬರ್ ಸಭೆಯ ನಂತರವೂ ವಿಡಿಯೋ ಲೀಕ್ ಮಾಡಿದ್ದು ಯಾರು ಎನ್ನುವುದು ಬಹಿರಂಗವಾಗಲೇ ಇಲ್ಲ.

  • ಸಾ.ರಾ.ಗೋವಿಂದುಗೆ ದೊಡ್ಮನೆ ಬೆಂಬಲ

    ಸಾ.ರಾ.ಗೋವಿಂದುಗೆ ದೊಡ್ಮನೆ ಬೆಂಬಲ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚುನಾವಣೆ ರಂಗೇರುತ್ತಿದೆ. ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಅವರಿಗೆ ಚಿತ್ರರಂಗದ ಹಲವರು ಬೆಂಬಲ ಸೂಚಿಸಿದ್ದಾರೆ. ಹಲವರ ಜೊತೆ ದೊಡ್ಮನೆಯ ಬೆಂಬಲವೂ ಸಿಕ್ಕಿದೆ. ರಾಘವೇಂದ್ರ ರಾಜಕುಮಾರ್ ಬೆಂಬಲ ಘೋಷಿಸಿದ್ದಾರೆ.

    ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಇನ್ನೂ ಬೆಳೆಯಬೇಕಿದೆ. ನಮ್ಮ ಗೋವಿಂದು ಅವರಿಗೆ ಚಿತ್ರರಂಗದ ಎಲ್ಲ ಕ್ಷೇತ್ರಗಳಲ್ಲಿ ಅನುಭವ ಇದೆ. ಇಂತಹವರು ಬಂದರೆ ಚಿತ್ರರಂಗ ಇನ್ನಷ್ಟು ಉತ್ತಮವಾಗಿ ರೂಪುಗೊಳ್ಳಲಿದೆ. ದಯವಿಟ್ಟು ಗೋವಿಂದು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ ರಾಘವೇಂದ್ರ ರಾಜಕುಮಾರ್.

    ಸಾ.ರಾ.ಗೋವಿಂದು ಅವರ ತಂಡದಲ್ಲಿ ನಿರ್ಮಾಪಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಕರಿಸುಬ್ಬು ಹಾಗೂ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಚಿತ್ರಲೋಕ ವೀರೇಶ್ ಸ್ಪರ್ಧಿಸಿದ್ದಾರೆ.

    ವಿತರಕ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಜ್ಞಾನೇಶ್ವರ ಐತಾಳ್ ಹಾಗೂ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಂ.ಎನ್.ಕುಮಾರ್ ಸ್ಪರ್ಧಿಸಿದ್ದಾರೆ.

    ಪ್ರದರ್ಶಕರ ವಲಯದ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಕುಮಾರ್ ಮತ್ತು ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಎಲ್.ಸಿ.ಕುಶಾಲ್ ಸ್ಪರ್ಧಿಸಿದ್ದಾರೆ. ಜಯಸಿಂಹ ಮುಸರಿ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.

  • ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಫಿಲ್ಮ್ ಚೇಂಬರ್ ಕಟ್ಟುನಿಟ್ಟಿನ ರೂಲ್ಸ್

    ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಫಿಲ್ಮ್ ಚೇಂಬರ್ ಕಟ್ಟುನಿಟ್ಟಿನ ರೂಲ್ಸ್

    ಇತ್ತೀಚೆಗೆ ಲವ್ ಯೂ ರಚ್ಚು ಚಿತ್ರದ ಚಿತ್ರೀಕರಣ ವೇಳೆ ಸಂಭವಿಸಿದ ಅನಾಹುತದಲ್ಲಿ ಫೈಟರ್ ವಿವೇಕ್ ಮೃತಪಟ್ಟಿದ್ದರು. ಇಂತಹ ದುರಂತಗಳು ಪದೇ ಪದೇ ಆಗುತ್ತಿರುವ ಹಿನ್ನೆಲೆಯಲ್ಲಿ ಫಿಲ್ಮ್ ಚೇಂಬರ್ ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿದೆ.

    ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ಇನ್ಷೂರೆನ್ಸ್ ಮಾಡಿಸಿರಬೇಕು. ಇನ್ಷೂರೆನ್ಸ್ ಇರುವ ಕಾರ್ಮಿಕರು, ತಂತ್ರಜ್ಞರನ್ನಷ್ಟೇ ಚಿತ್ರೀಕರಣದಲ್ಲಿ ಬಳಸಿಕೊಳ್ಳಬೇಕು. ತಂಡದವರಿಗೆ ಗ್ರೂಪ್ ಇನ್ಷೂರೆನ್ಸ್ ಮಾಡಿಸುವ ಹೊಣೆಗಾರಿಕೆ ನಿರ್ಮಾಪಕರದ್ದು. ಸಾಹಸ ದೃಶ್ಯಗಳ ಶೂಟಿಂಗ್ ಸಮಯದಲ್ಲಿ ಆಂಬುಲೆನ್ಸ್, ಡಾಕ್ಟರ್ಸ್, ನರ್ಸ್, ಫಸ್ಟ್ ಏಡ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಸಜ್ಜಾಗಿಟ್ಟಿರಬೇಕು. ಇದು ಫಿಲ್ಮ್ ಚೇಂಬರ್ ರೂಪಿಸಿರುವ ನಿಯಮ.

    ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ಕಾರ್ಮಿಕರ ಸಂಘ, ನಿರ್ಮಾಪಕರ ಸಂಘ ಹಾಗೂ ಫೈಟರ್ಸ್ ಅಸೋಸಿಯೇಷನ್‍ನವರು ಒಟ್ಟಿಗೇ ಸಭೆ ನಡೆಸಿ, ಸುದ್ದಿಗೋಷ್ಟಿ ಮಾಡಿ ಇಷ್ಟೆಲ್ಲ ವಿವರವನ್ನೂ ನೀಡಿದ್ದಾರೆ. ಹಾಗಂತ.. ಇವುಗೆಳೆಲ್ಲ ಹೊಸ ನಿಯಮಗಳೇನೂ ಅಲ್ಲ.  ಈ ಸಭೆಗೂ ಮುನ್ನ ಇದ್ದಂತಹ ನಿಯಮಗಳೇ. ಯಾರೂ ಫಾಲೋ ಮಾಡುತ್ತಿರಲಿಲ್ಲ ಅಷ್ಟೆ.. ಇನ್ನು ಮುಂದೆ ಫಾಲೋ ಮಾಡ್ತಾರಾ.. ವೇಯ್ಟ್ ಮಾಡಿ ನೋಡಬೇಕು.

  • ಸಿದ್ಧಗಂಗೆ ದಾಸೋಹಕ್ಕೆ ಫಿಲಂ ಚೇಂಬರ್ 5 ಲಕ್ಷ ರೂ. ದೇಣಿಗೆ

    kfcc donates 5 lakhs to siddaganga mutt

    ಸಿದ್ಧಗಂಗೆಯ ಅನ್ನ ದಾಸೋಹದಲ್ಲಿ ಕೈ ಜೋಡಿಸಿದವರು ಲಕ್ಷ ಲಕ್ಷ ಭಕ್ತರು. ಚಿತ್ರರಂಗದಲ್ಲಿಯೂ ಅಂತಹ ನೂರಾರು ಜನರಿದ್ದಾರೆ. ಅಂತಹ ಭಕ್ತರಲ್ಲಿ ಫಿಲಂ ಚೇಂಬರ್ ಕೂಡಾ ಇದೆ. ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಚೇಂಬರ್ ಸದಸ್ಯರು ಸಿದ್ಧಗಂಗೆಯ ಸ್ವಾಮಿಗಳ ಗದ್ದುಗೆಗೆ ಭೇಟಿ ಕೊಟ್ಟರು. ಶ್ರೀಗಳ ಗದ್ದುಗೆಗೆ ಪುಷ್ಪನಮನ ಸಲ್ಲಿಸಿ ಪ್ರಾರ್ಥಿಸಿದರು.

    ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡರೊಂದಿಗೆ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಚೇಂಬರ್‍ನ ಪದಾಧಿಕಾರಿಗಳಾದ ಕೆ.ಎಂ.ವೀರೇಶ್, ಭಾಮಾ ಹರೀಶ್, ಕರಿಸುಬ್ಬು, ಕೆ.ವಿ.ಚಂದ್ರಶೇಖರ್, ಜಯರಾಜ್, ಎನ್.ಎಂ.ಸುರೇಶ್, ಗದ್ದುಗೆಯಲ್ಲಿ ಪೂಜೆ ಸಲ್ಲಿಸಿದರು.

    ಸಿದ್ಧಗಂಗೆಯ ಶ್ರೀಗಳಾದ ಸಿದ್ಧಲಿಂಗ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಠದ ಅನ್ನದಾಸೋಹಕ್ಕೆ ಚೇಂಬರ್ ವತಿಯಿಂದ 5 ಲಕ್ಷ ರೂ. ದೇಣಿಗೆ ನೀಡಿದರು.

  • ಸಿನಿಮಾ ಬಂದ್ - ನಿರ್ಮಾಪಕರ ಸಂಕಟವಾದರೂ ಏನು..?

    sifcc, kfc

    ಎಲ್ಲವೂ ಅಂದುಕೊಂಡ ತೀರ್ಮಾನದಂತೆಯೇ ಆಗಿದ್ದರೆ, ಇಂದಿನಿಂದಲೇ ಯಾವುದೇ ಹೊಸ ಸಿನಿಮಾ ಪ್ರದರ್ಶನ ಇರುತ್ತಿರಲಿಲ್ಲ. ಬಹುತೇಕ ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾ ವಾಣಿಜ್ಯ ಮಂಡಳಿಗಳೂ ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳ ವಿರುದ್ಧ ಸಮರ ಸಾರಿವೆ. ಈ ಸಂಸ್ಥೆಗಳ ಹಠಮಾರಿತನ ಧೋರಣೆಗೆ ಬೇಸತ್ತು ಹೊಸ ವ್ಯವಸ್ಥೆಯನ್ನೇ ಹುಟ್ಟಿ ಹಾಕುವ ಚಿಂತನೆ ಯಾವಾಗ ಹೊರಬಿತ್ತೋ, ಅಪಾಯವನ್ನು ಅರಿತ ಎರಡೂ ಸಂಸ್ಥೆಗಳು ಮತ್ತೆ ಮಾತುಕತೆಗೆ ಆಸಕ್ತಿ ತೋರಿಸಿವೆ. ಹೀಗಾಗಿ ಈ ವಾರ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ಈ ಎರಡೂ ಸಂಸ್ಥೆಗಳು ತಮ್ಮ ಪಟ್ಟು ಸಡಿಲಿಸದೇ ಹೋದರೆ, ಮಾರ್ಚ್ 9ರಿಂದ ಕನ್ನಡ ಸಿನಿಮಾಗಳೂ ಇರುವುದಿಲ್ಲ. ಈಗಾಗಲೇ ತಮಿಳು, ತೆಲುಗು ಹಾಗೂ ಮಲಯಾಳಂ ಹೊಸ ಚಿತ್ರಗಳು ಇಂದಿನಿಂದ ಇಲ್ಲ.

    ಇಷ್ಟಕ್ಕೂ ಇಷ್ಟು ದೊಡ್ಡ ಮಟ್ಟದಲ್ಲಿ 5 ರಾಜ್ಯಗಳ 4 ಭಾಷೆಗಳ ಚಿತ್ರ ನಿರ್ಮಾಪಕರು ಸಿಡಿದೇಳಲು ಕಾರಣವೇನು ಎಂದು ಹುಡುಕುತ್ತಾ ಹೊರಟರೆ ಸಿಗುವುದು ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳ ಏಕಸ್ವಾಮ್ಯ ಮಾರುಕಟ್ಟೆ ಮತ್ತು ದುಬಾರಿ ದರದ ಕಥೆ.

    ಸದ್ಯ ಇರುವ ವ್ಯವಸ್ಥೆಗಳಲ್ಲಿ ಡಿಜಿಟಲ್ ಪ್ರಸಾರವೇ ಎಲ್ಲ ಕಡೆ ಇರುವುದು. ಇದರ ಜವಾಬ್ದಾರಿ ಹೊತ್ತಿರುವ ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳು ಹೆಚ್ಚೂ ಕಡಿಮೆ ಐದೂ ರಾಜ್ಯಗಳಲ್ಲಿ ಏಕಸ್ವಾಮ್ಯ ಸಾಧಿಸಿಬಿಟ್ಟಿವೆ. ಹೀಗಾಗಿ ಇವರು ವಿಧಿಸಿದ್ದೇ ದರ.

    ಆರಂಭದಲ್ಲಿ ಕೆಲವೇ ಸಾವಿರ ರೂಪಾಯಿಗಳಿಗೆ ಸಿಗುತ್ತಿದ್ದ ಸೇವೆಗೆ, ಈಗ ನಿರ್ಮಾಪಕರು ಒಂದು ವಾರಕ್ಕೆ 27 ಸಾವಿರ ರೂ. ಪಾವತಿಸಬೇಕು. ಒಂದು ಥಿಯೇಟರ್‍ನಲ್ಲಿ ಅದು ಒಂದೇ ಒಂದು ಶೋ ಪ್ರದರ್ಶನವಾಗಲಿ, 27 ಸಾವಿರ ರೂ. ಕೊಡಲೇಬೇಕು. ಅದೇ ಥಿಯೇಟರ್‍ನಲ್ಲಿ ಬೇರೆ ಬೇರೆ ಶೋಗಳಲ್ಲಿ ಬೇರೆ ಬೇರೆ ಚಿತ್ರಗಳು ಪ್ರದರ್ಶನವಾದರೂ ಅಷ್ಟೆ, ಪ್ರತಿ ಚಿತ್ರಕ್ಕೂ 27 ಸಾವಿರ ರೂ. ಸೇವಾಶುಲ್ಕ ಕಟ್ಟಬೇಕು ನಿರ್ಮಾಪಕ.

    ಇನ್ನು ಚಿತ್ರವನ್ನು ಈ ಕಂಪೆನಿಗಳಿಗೆ ಅಪ್‍ಲೋಡ್ ಮಾಡುವುದಕ್ಕೆ ಕಟ್ಟಬೇಕಾದ ಶುಲ್ಕವೂ ಪ್ರತ್ಯೇಕ. ಅದನ್ನು ಕಟ್ಟಬೇಕಾದವರೂ ಸ್ವತಃ ನಿರ್ಮಾಪಕರೇ. ಹೀಗೆ ಯಾವುದೇ ಹಂತದಲ್ಲಿ ರಿಯಾಯಿತಿ ಸಿಗುವುದಿಲ್ಲ. ಇನ್ನು ಇದರ ಹೊರತಾಗಿ ನಿರ್ಮಾಪಕರು ಥಿಯೇಟರ್‍ನವರಿಗೂ ಬಾಡಿಗೆ ಕೊಡುತ್ತಾರೆ. 

    ಆದರೆ, ನಿರ್ಮಾಪಕನಿಂದಲೇ ದುಬಾರಿ ಶುಲ್ಕ ಪಡೆದು ಪ್ರದರ್ಶಿಸುವ ಸಿನಿಮಾದಲ್ಲಿ ಯುಎಫ್‍ಓದವರು ಜಾಹೀರಾತು ತುಂಬುತ್ತಾರೆ. ಈ ಜಾಹೀರಾತುಗಳಿಗೆ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಾರೆ. ಅವುಗಳನ್ನು ಅವರು ಪ್ರಸಾರ ಮಾಡುವುದು ನಿರ್ಮಾಪಕರಿಂದ ಶುಲ್ಕ ಪಡೆದು ಪ್ರಸಾರ ಮಾಡುವ ಅವರದ್ದೇ ಸಿನಿಮಾಗಳ ಮಧ್ಯೆ. ನಿರ್ಮಾಪಕರೇ ಬಾಡಿಗೆ ಕಟ್ಟಿರುವ ಥಿಯೇಟರುಗಳಲ್ಲಿ. ಆದರೆ, ಈ ಜಾಹೀರಾತುಗಳಲ್ಲಿ ನಿರ್ಮಾಪಕರಿಗೆ ನಯಾಪೈಸೆ ಕೊಡುವುದಿಲ್ಲ.

    ನಿರ್ಮಾಪಕರ ಬೇಡಿಕೆ ಇಷ್ಟೆ. ಕಂಪೆನಿಗಳು ಪಡೆಯುತ್ತಿರುವ ಜಾಹೀರಾತುಗಳಲ್ಲಿ ನಿರ್ಮಾಪಕರಿಗೂ ಲಾಭಾಂಶ ಕೊಡಬೇಕು ಹಾಗೂ ದುಬಾರಿ ಸೇವಾಶುಲ್ಕವನ್ನು ಕಡಿಮೆ ಮಾಡಬೇಕು. ಈ ಬೇಡಿಕೆಗೆ ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳು ಒಪ್ಪದೇ ಇರುವದೇ ಈ ಪ್ರತಿಭಟನೆಗೆ ಕಾರಣ.

    ಅಂದಹಾಗೆ, ಯುಎಫ್‍ಓ ಹಾಗೂ ಕ್ಯೂಬ್ ಸಂಸ್ಥೆಗಳು ಪಟ್ಟು ಸಡಿಲಿಸದೇ ಹೋದಲ್ಲಿ ಪ್ರತ್ಯೇಕ ಡಿಜಿಟಲ್ ವ್ಯವಸ್ಥೆಯೇ ಸಿದ್ಧವಾಗಬಹುದು. ಚಿತ್ರ ನಿರ್ಮಾಪಕರಲ್ಲಿ ಈ ಕುರಿತು ಕೂಡಾ ಚರ್ಚೆ ನಡೆಯುತ್ತಿವೆ.