` kannada rajyotsava - chitraloka.com | Kannada Movie News, Reviews | Image

kannada rajyotsava

  • 'Babru' To Be Premiered In America on November 1st

    babru to be premiered in america on nov 1st

    Suman Nagarkar's debut film as a producer 'Babru', is all set to be premiered in America on the Rajyotsava day. The film has the distinction of being shot completely in America for the very first time.

    The film being directed by IT professional Sujay Ramaiah is about a journey from Mexico to Canada. Sujay says he got the idea when he was driving with Rakshith Shetty and it was Rakishith who encouraged him to direct a feature film. Earlier, Rakshith and Sujay had done a few short films and Now Sujay is making his debut as a full length feature film.

    The film stars Suman Nagarkar, Gana Bhatt and others in prominent roles. Poornachandra Tejaswi is the music director, while Suhas is the cinematographer. The film has been shot completely in America for 30 days.

    Recently, the poster of the film was released by Rocking Star Yash at SRV Theater in Bangalore.

     

  • Ouija is a Dubbed Film Claims Prashanth Sambargi - Exclusive

    ouija movie image

    A former Reliance Entertainment liasion has claimed that the film Ouija releasing tomorrow is dubbed from Telugu. For the last one year when the film was in the making the makers had said the film was being made in both Kannada and Telugu.

    One day before the film's release the Ex Reliance Prashant Sambargi has written a letter to the new president of the Karnataka Film Chamber of Commerce. The letter says that Sambargi had announced sometime back in a television debate on dubbing that he would release the first dubbed film in the first week of November and he was thus keeping his words. Since the CCI has asked KFCC not to prevent release of any dubbed film, Sa Ra Govindu is requested to followe the CCI direction, the letter says.

    The release of the film in the first week of November is to coincide with the Kannada Rajyotsava. 

  • Puneeth's 29th Film Title Launch On Nov 1

    puneeth's 29th film title on nov 1st

    The title launch of Puneeth Rajkumar's 29th film is scheduled for November 1. The film marks the coming together of the hit combination of Puneeth, director Santhosh Anandram and producer Vijay Kiragandur.

    The three were part of the all time industry hit Raajakumaara. While the producer has gone on to make KGF and Puneeth other films after that, director Santhosh Anandram has been working on the reunion film ever since.

    This will be Anandram's third film as director, Hombale Films Vijay Kiragandur's fifth and Puneeth Rajkumar's 29th. It has been announced that a fan will release the title. Who the fan it is has not been revealed.

  • Shailasri, Bhargavi Narayan and Jayakumar To Get Rajyotsava Awards

    shailashri, bhargavi narayan and jayakumar to get rajyotsava award

    Karnataka is all set to celebrate the 64th Rajyotsava in a grand style on November 1st. Meanwhile, the State Government has announced the list of Rajyotsava Awardees for the year 2019 and this year veteran actress Shailasri, Bhargavi Narayan and Jayakumar have been selected for the awards.

    The State Government has been giving Rajyotsava Awards to those who have done significant work in various fields. Likewise, many artistes and technicians have been awarded with Rajyotsava Awards in the past years. This time, three personalities from the field of cinema has got the awards.

    Actually, only actress Shailasri has been selected from the field of cinema, while Bhargavi Narayan and Jayakumar have been selected from the field of theatre. But both Bhargavi Narayan and Jayakumar have been in the field of cinema along with the theatre for the past four decades.

  • ಇವರಿಗೆ ಇಷ್ಟು ಸಿಕ್ಕಿರಲಿಲ್ಲ ಎಂಬುದೇ ಅಚ್ಚರಿ..!

    rajyotsava awards surprise

    ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಈ ಬಾರಿ 62 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ರಾಜಶೇಖರ್ ಎಂಬುವರಿಗೆ 2ನೇ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂಬುದನ್ನು ಬಿಟ್ಟರೆ, ಅಪಸ್ವರಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು.

    ಚಿತ್ರರಂಗಕ್ಕೆ ಈ ಬಾರಿಯ ರಾಜ್ಯೋತ್ಸವ ಅಚ್ಚರಿಯನ್ನಂತೂ ತಂದಿದೆ. ಏಕೆಂದರೆ, ಪಟ್ಟಿಯಲ್ಲಿರುವುದು ಯೇಸುದಾಸ್, ಮುಖ್ಯಮಂತ್ರಿ ಚಂದ್ರು, ಕಾಂಚನಾ ಹಾಗೂ ಹಾಸನ ರಘು ಅವರ ಹೆಸರು. ಹೆಸರು ನೋಡಿದವರಿಗೆ ಅಚ್ಚರಿ ಕಾದಿತ್ತು. ಇವರಿಗೆ ಇಷ್ಟು ದಿನ ರಾಜ್ಯೋತ್ಸವ ಪುರಸ್ಕಾರ ಸಿಕ್ಕಿರಲಿಲ್ಲವಾ..? ಎಂದು ಅಭಿಮಾನಿಗಳು ಹುಬ್ಬೇರಿಸಿದ್ದರು.

    ಒಂದಂತೂ ಸತ್ಯ. ಈ ಸಾಧಕರು ಈ ಬಾರಿ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದ್ದಾರೆ. ಕೆಲವು ಅಪಸ್ವರಗಳನ್ನು ಹೊರತುಪಡಿಸಿದರೆ, ಬಹುತೇಕರ ಆಯ್ಕೆ ಸಮಾಧಾನಕರವಾಗಿದೆ.

  • ಎಲ್ಲಿಂದಲೋ ಬಂದವರು.. ಕನ್ನಡಿಗರಾದರು..

    non kannadigas turn kannadigas

    ಎಲ್ಲಾದರು ಇರು.. ಎಂತಾದರು ಇರು.. ಎಂದೆಂದಿಗು ನೀ ಕನ್ನಡವಾಗಿರು.. ಕುವೆಂಪು ಅದ್ಯಾವ ತಂಪು ಹೊತ್ತಿನಲ್ಲಿ ಆ ಮಾತು ಹೇಳಿದರೋ.. ಏನೋ.. ಕನ್ನಡಿಗರಿಗೆ ಆ ಮಾತು ಕಿವಿಗೇ ಬೀಳಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ಅನ್ನ ಕೊಡುವ ಭಾಷೆಯಲ್ಲ. ಇಂಗ್ಲಿಷು ಕಲಿಯದಿದ್ದರೆ ಉಳಿಗಾಲವಿಲ್ಲ ಎನ್ನುವುದು ಒಂದು ನೆಪವಾದರೆ (ಅದು ನೆಪವೇ ಹೊರತು, ಕಾರಣ ಅಲ್ಲ) ಇಂಗ್ಲಿಷ್‍ನಲ್ಲಿ ಮಾತನಾಡುವುದನ್ನೇ ಪ್ರತಿಷ್ಟೆ, ಹೆಮ್ಮೆ ಎಂದು ಭಾವಿಸಿದವರು ಮತ್ತೊಂದು ಕಡೆ. 

    ಸಮಸ್ಯೆ ಇರುವುದೇ ಇಲ್ಲಿ. ಹಾಗೆ ಆಡುವವರಿಗೆ ಕನ್ನಡವೂ ಗೊತ್ತಿರಲ್ಲ. ಇಂಗ್ಲೀಷು ಮೊದಲೇ ಬರಲ್ಲ. ಇಲ್ಲಿ ಕನ್ನಡ ಭಕ್ತರದ್ದೂ ತಪ್ಪುಗಳಿವೆ. ಕನ್ನಡದಲ್ಲಿ ಇರುವ ಪ್ರತಿ ಪದಗಳೂ ಕನ್ನಡದಿಂದಲೇ ಉದ್ಭವವಾದವುಗಳಲ್ಲ. ಸಂಸ್ಕøತ, ಪರ್ಷಿಯನ್, ಪಾರ್ಸಿ, ಉರ್ದು.. ಹೀಗೆ ಹಲವು ಭಾಷೆಗಳಿಂದ ಕನ್ನಡದಲ್ಲಿ ಪದಗಳು ಹುಟ್ಟಿವೆ. ಆದೆರ, ಅವೆಲ್ಲವುಗಳನ್ನೂ ಕನ್ನಡದ್ದೇ ಪದಗಳು ಎಂಬಂತೆ ಒಪ್ಪಿಕೊಂಡಿರುವ ನಾವು, ಇಂಗ್ಲಿಷ್‍ನ ಬಗ್ಗೆ ಇಲ್ಲಸಲ್ಲದ ಮಡಿವಂತಿಕೆ ತೋರಿಸಲು ಹೊರಡುತ್ತೇವೆ. ಇಂಗ್ಲಿಷ್‍ನ ಒಂದೇ ಒಂದು ಪದವೂ ಕನ್ನಡದಲ್ಲಿರದಂತೆ ಜಾಗ್ರತೆ ವಹಿಸಲು ಹೋಗುತ್ತೇವೆ. ಅದು ವಾಸ್ತವಕ್ಕೆ ದೂರವಾದ ಕಲ್ಪನೆಯೇ ಹೊರತು ಬೇರೇನಲ್ಲ. 

    ಅವೆಲ್ಲವನ್ನೂ ಪಕ್ಕಕ್ಕಿಟ್ಟು ಕನ್ನಡ ಚಿತ್ರರಂಗದತ್ತ ಒಮ್ಮೆ ಕಣ್ಣು ಹಾಯಿಸಿದರೆ, ಎಲ್ಲಿಂದಲೋ ಬಂದವರು ಇಲ್ಲಿನವರಾಗಿ ಕನ್ನಡವನ್ನೇ ಅನ್ನ, ನೀರಾಗಿ ಮಾಡಿಕೊಂಡವರಿದ್ದಾರೆ. ತುಂಬಾ ಹಿಂದಕ್ಕೆ ಹೋದರೆ, ಇಂಥವರ ಸಂಖ್ಯೆ ಇನ್ನಷ್ಟು ಸಿಗಬಹುದೇನೋ.. ಆದರೆ, ಈಗ ಪ್ರಸ್ತುತ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರ ಕನ್ನಡ ಪ್ರೇಮವನ್ನೊಮ್ಮೆ ಗಮನಿಸಿ.

    ಅಭಿನವ ವಜ್ರಮುನಿ ಎಂದೇ ಕರೆಸಿಕೊಳ್ಳುತ್ತಿರುವ ರವಿಶಂಕರ್, ತಾವು ತೆಲುಗರು ಎಂಬುದನ್ನೇ ಮರೆತುಬಿಟ್ಟಿದ್ದಾರೆ. ಅದು ಎಷ್ಟರಮಟ್ಟಿಗೆಂದರೆ, ಕನ್ನಡ ನನ್ನ ಹೃದಯದಲ್ಲಿದೆ, ಕನ್ನಡಿಗರ ಅಭಿಮಾನಕ್ಕೆ ನಾನು ಚಿರಋಣಿ ಎಂದು ಬೇರೆ ಭಾಷಿಕರ ವೇದಿಕೆಯಲ್ಲೂ ಹೇಳುವಷ್ಟರ ಮಟ್ಟಿಗೆ. 

    ಪ್ರಿಯಾಂಕಾ ಉಪೇಂದ್ರ ಮೂಲತಃ ಬೆಂಗಾಳಿ. ಉಪೇಂದ್ರ ಅವರನ್ನು ಮದುವೆಯಾದ ಮೇಲೆ ಕನ್ನಡ ಕಲಿಯಲು ಶುರು ಮಾಡಿದ್ದು. ಈಗ.. ಬೇಕಾದರೆ, ಕನ್ನಡ ಗೊತ್ತಿಲ್ಲದವರಿಗೆ ಕನ್ನಡದ ಪಾಠ ಹೇಳಿಕೊಡುವಷ್ಟು ಕಲಿತಿದ್ದಾರೆ.

    ನಟಿ ರಾಗಿಣಿ ದ್ವಿವೇದಿಯೂ ಅಷ್ಟೆ. ಮೊದ ಮೊದಲು ಕನ್ನಡ ಮತ್ತು ಇಂಗ್ಲಿಷ್‍ನ್ನು ಮಿಕ್ಸ್ ಮಾಡಿ ಮಾತನಾಡುತ್ತಿದ್ದ ರಾಗಿಣಿ, ಈಗ ಕನ್ನಡವನ್ನು ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾರೆ. ನಾನು ಕನ್ನಡ ಕಲಿಯತ್ತೇನೆ ಎಂದರೆ, ಕನ್ನಡಿಗರು ಸಹಾಯ ಮಾಡುತ್ತಾರೆ. ಪ್ರೋತ್ಸಾಹಿಸುತ್ತಾರೆ ಎನ್ನುವುದು ಅವರ ಅನುಭವದ ಮಾತು.

    ಐಂದ್ರಿತಾ ರೇ ಕೂಡಾ ಅಷ್ಟೆ.. ಬೆಂಗಾಳಿ. ದಿಗ್‍ದಿಗಂತವನ್ನು ಗೆದ್ದರೆ, ಕರ್ನಾಟಕದ ಸೊಸೆಯಾಗಬಹುದು. ಅವರಿಗೆ ಕನ್ನಡವಷ್ಟೇ ಅಲ್ಲ, ಕರ್ನಾಟಕದ ಇತಿಹಾಸದ ಬಗ್ಗೆ ಒಮದು ಗಂಟೆ ಕಾಲ ನಿರರ್ಗಳವಾಗಿ ಮಾತನಾಡಬಲ್ಲರು ಕೂಡಾ. ಸಂಜನಾ ಗರ್ಲಾನಿಯ ವಿಚಾರ ಬಿಡಿ, ಆಕೆ ತಾನು ದೆಹಲಿಯವರು ಎಂದು ಹೇಳಿದರೂ ಯಾರೂ ನಂಬಲು ಸಾಧ್ಯವಿಲ್ಲ. 

    ಪೂಜಾ ಗಾಂಧಿ ಕನ್ನಡವನ್ನು ಮೊದ ಮೊದಲು ಆಡಿಕೊಳ್ಳುತ್ತಿದ್ದವರಿಗೆ ಈಗ ಅವರ ಕನ್ನಡ ಪ್ರೀತಿ ಇಷ್ಟವಾಗುತ್ತಿದೆ. ಅಷ್ಟೆಲ್ಲ ಯಾಕೆ.. ಕನ್ನಡ ಚಿತ್ರರಂಗವನ್ನು ದಶಕಗಳ ಕಾಲ ಆಳಿದ.. ಮಹಾರಾಣಿ ಮಾಲಾಶ್ರೀ ಕೂಡಾ ಕನ್ನಡತಿಯಲ್ಲ. ಆದರೀಗ ಅವರ ಮನೆಯಲ್ಲಿ ಕನ್ನಡವೇ ಎಲ್ಲ. ಶಾನ್ವಿ ಶ್ರೀವಾಸ್ತವ ಈಗ ಕನ್ನಡ ಕಲಿಯುವ ಹಂತದಲ್ಲಿದ್ದಾರೆ. ಕೆಲವೇ ದಿನದಲ್ಲಿ ನಿಮಗೇ ಕನ್ನಡ ಕಲಿಸ್ತೀವಿ ಎನ್ನುವಷ್ಟು ಆತ್ಮವಿಶ್ವಾಸ ಅವರ ಮಾತಿನಲ್ಲಿದೆ. 

    ಸ್ವಲ್ಪ ಹಿಂದಕ್ಕೆ ಹೋದರೆ, ಸುಹಾಸಿನಿ, ಸರಿತಾ, ಮಾಧವಿ, ಗೀತಾ, ಲಕ್ಷ್ಮಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಎಸ್.ಜಾನಕಿ ಇವರು ಯಾರೂ ಕನ್ನಡದವರಲ್ಲ. ಆದರೆ, ಅವರ ಕನ್ನಡ.. ಕನ್ನಡದ ಮೇಲಿನ ಹಿಡಿತ ಇಷ್ಟವಾಗುತ್ತೆ. 

    ಇದೆಲ್ಲವನ್ನೂ ಹೇಳೋಕೆ ಕಾರಣ ಇಷ್ಟೆ. ಐ ಡೋಂಟ್ ನೋ ಕನ್ನಡ ಯಾರ್.. ಐ ಕುಡಂಟ್ ಅಂಡರ್‍ಸ್ಟಾಂಡ್‍ನಾ.. ಪ್ಲೀಸ್ ಮಾ.. ಟೆಲ್ ಮಿ ಇನ್ ಇಂಗ್ಲಿಷ್.. ಎನ್ನುತ್ತಾ ಕನ್ನಡವನ್ನೇ ಮರೆಯುತ್ತಿರುವವರಿಗೆ ಇವರು ಪಾಠ. ಎಲ್ಲ ಓಕೆ.. ಕನ್ನಡವನ್ನು ಕಲಿಸೋದು ಹೇಗೆ..? 

    ಒಂದು ಸಿಂಪಲ್ ಸೂತ್ರ ಇಲ್ಲಿದೆ ನೋಡಿ. ಪಾನಿಪೂರಿ ಮಾರುವವನ ಬಳಿ ದೋ ಪ್ಲೇಟ್ ದೇದೋ ಭಯ್ಯಾ ಅನೋದನ್ನು ಬಿಡಿ, ವ್ಯವಹಾರ ಮಾಡಲೆಂದು ಬಂದವನು ಅವನು. ನಮ್ಮ ಭಾಷೆಯನ್ನು ಅವನು ಕಲಿಯಬೇಕೇ ಹೊರತು, ನಾವಲ್ಲ. ಮಾಲ್‍ಗಳಿಗೆ ಹೋದಾಗ, ಕನ್ನಡದಲ್ಲಿ ಮಾತನಾಡಿದರೆ ಅವಮಾನವೇನೋ ಎಂಬಂತಾಡುವುದನ್ನು ಬಿಡಿ, ಅವರು ವ್ಯವಹಾರಸ್ಥರು. ವ್ಯಾಪಾರ ಆಗಲ್ಲ ಎಂದರೆ, ಕನ್ನಡ ಕಲಿತೇ ಕಲೀತಾರೆ. ಸ್ಟಾರ್ ಹೋಟೆಲ್‍ಗಳಿಗೆ ಹೋದಾಗ.. ಕನ್ನಡ ಗೊತ್ತಿಲ್ಲ ಎನ್ನುವವರತ್ತ ಒಂದು ಆಕ್ರೋಶದ ನೋಟವೊಂದನ್ನು ಬಿಸಾಕಿ, ಕನ್ನಡ ಬರಲ್ವಾ.. ವಾಟ್ ಎ ಶೇಮ್ ಎನ್ನಿ. ಅವರು ಕನ್ನಡ ಕಲೀತಾರೆ. 

    ಅಂದಹಾಗೆ ನಮ್ಮ ಊರಿನ ಹೆಸರಲ್ಲಿಯೇ ಕರುಣೆ ಇದೆ. ಹಾಗೆಂದು ಕರುನಾಡು ಎಂದರೆ ಕರುಣೆಯ ನಾಡಾಬೇಕೇ ಹೊರತು, ಕರುಣಾಜನಕವಾಗಬಾರದು ಅಲ್ಲವೇ..?

  • ಕನ್ನಡಾಭಿಮಾನ ಮೆರೆದ ಪವನ್ ಕಲ್ಯಾಣ್

    pawan kalyan expresses his love for kannada

    ಪವನ್ ಕಲ್ಯಾಣ್, ತೆಲುಗು ಚಿತ್ರರಂಗದ ಪವರ್‍ಸ್ಟಾರ್. ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿಯೇ ಶುಭ ಕೋರುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. 63ನೇ ಕನ್ನಡ ರಾಜ್ಯೋತ್ಸವದ ಈ ಸಂಭ್ರಮದಲ್ಲಿ ಕನ್ನಡ ಜನತೆಗೆ, ಕರ್ನಾಟಕದ ಮುಖ್ಯಮಂತ್ರಿಗಳಿಗೆ ಹಾರ್ದಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಟ್ವೀಟ್ ಮಾಡಿದ್ದಾರೆ ಪವನ್ ಕಲ್ಯಾಣ್.

    ಪವನ್ ಕಲ್ಯಾಣ್‍ಗೆ, ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗೆ ಆಂಧ್ರ, ತೆಲಂಗಾಣದಲ್ಲಿ ಸಿಗುವಂಥದ್ದೇ ಓಪನಿಂಗ್ ಕರ್ನಾಟಕದಲ್ಲೂ ಸಿಗುತ್ತೆ. ಇದೆಲ್ಲದರ ಜೊತೆಗೆ ಎಲೆಕ್ಷನ್ ಹತ್ತಿರದಲ್ಲೇ ಇದೆ. ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಕನ್ನಡಿಗರನ್ನು ಸೆಳೆಯುವ ಪ್ರಯತ್ನವೂ ಇದರ ಹಿಂದಿದೆ ಎಂಬ ಲೆಕ್ಕಾಚಾರವೂ ಇದೆ. ಏನೇ ಇರಲಿ, ಪರಭಾಷೆಯ ಕಲಾವಿದರೊಬ್ಬರು ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರುವುದನ್ನು ಸ್ವಾಗತಿಸಲೇಬೇಕು. ಅಂದಹಾಗೆ, ನವೆಂಬರ್ 1, ಕರ್ನಾಟಕಕ್ಕೆ ಮಾತ್ರ ಅಲ್ಲ, ಆಂಧ್ರಪ್ರದೇಶಕ್ಕೂ ರಾಜ್ಯೋತ್ಸವದ ದಿನ. ಆಂಧ್ರಪ್ರದೇಶ ಜನರಿಗೂ, ತೆಲುಗು ರಾಜ್ಯೋತ್ಸವದ ಶುಭಾಶಯಗಳು.

  • ನಾಡಧ್ವಜಕ್ಕೆ ಪೈಲ್ವಾನ್ ನಮಸ್ಕಾರ - ಅಭಿಮಾನಿಗಳ ಜೈಕಾರ

    sudeep's gesture wins many hearts

    ರಾಜ್ಯಾದ್ಯಂತ ನವೆಂಬರ್ 1ರಂದು ರಾಜ್ಯೋತ್ಸವ ಸಂಭ್ರಮ. ಪೈಲ್ವಾನ್ ಚಿತ್ರದ ಶೂಟಿಂಗ್‍ಗಾಗಿ ಹೈದರಾಬಾದ್‍ನಲ್ಲಿರುವ ಕಿಚ್ಚ ಸುದೀಪ್ ಮತ್ತು ಪೈಲ್ವಾನ್ ಚಿತ್ರತಂಡ, ಅಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ. ಚಿತ್ರೀಕರಣದ ಜಾಗದಲ್ಲೇ ಪೈಲ್ವಾನ್ ಚಿತ್ರತಂಡದ ಸದಸ್ಯರೆಲ್ಲ ಸೇರಿ, ಧ್ವಜಾರೋಹಣ ಮಾಡಿದ್ದಾರೆ. ತಾಯಿ ಭುವನೇಶ್ವರಿ ಭಾವಚಿತ್ರವನ್ನು ಪೂಜಿಸಿದ್ದಾರೆ.

    ಈ ಸಂದರ್ಭದಲ್ಲಿ ಸುದೀಪ್, ನಾಡಧ್ವಜದ ಎದುರು ಬರಿಗಾಲಿನಲ್ಲಿ ವಿನೀತರಾಗಿ ನಿಂತು ಕೈ ಮುಗಿಯುತ್ತಿರುವ ಫೋಟೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 

  • ರಾಜು ಕನ್ಡಡ ಮೀಡಿಯಂ ರಾಜ್ಯೋತ್ಸವ

    raju kannada medium kannada rajyotsava

    ರಾಜು ಕನ್ನಡ ಮೀಡಿಯಂ. ಇದು ರಾಜ್ಯೋತ್ಸವದ ಸಂದರ್ಭಕ್ಕೆ, ಸಂಭ್ರಮಕ್ಕೆ, ಸಂಕಟಕ್ಕೆ ಹೇಳಿ ಮಾಡಿಸಿದಂತಾ ಚಿತ್ರ ಎಂದರೆ ತಪ್ಪಾಗಲ್ಲ. ಚಿತ್ರದ ಕಥೆ ಇರುವುದೇ ಕನ್ನಡ ಮೀಡಿಯಂ ಹುಡುಗ, ಇಂಗ್ಲಿಷ್ ಬರದೇ ಅನುಭವಿಸುವ ಸಂಕಟಗಳಲ್ಲಿ. ಪ್ರತಿಭೆಯೆಂದರೆ, ಇಂಗ್ಲಿಷ್ ಗೊತ್ತಿರುವುದಷ್ಟೇ ಅಲ್ಲ ಎಂದು ಸಾರುವ ಸಿನಿಮಾ ರಾಜು ಕನ್ನಡ ಮೀಡಿಯಂ.

    ಈ ಮಾತನ್ನು ಹೇಳುವುದು ನಾಯಕ ಒಬ್ಬನೇ ಅಲ್ಲ. ನಾಯಕನ ಜೊತೆ ಕಿಚ್ಚ ಸುದೀಪ್ ಇದ್ದಾರೆ. ಸ್ಟಾರ್ ನಟನ  ಜೊತೆ ಕಿರಿಕ್ ಕೀರ್ತಿ, ಓಂಪ್ರಕಾಶ್ ರಾವ್, ಬಿಗ್‍ಬಾಸ್ ಪ್ರಥಮ್, ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ, ಇಂದ್ರಜಿತ್ ಲಂಕೇಶ್.. ಹೀಗೆ ತಾರೆಯರ ದಂಡೇ ಇದೆ. ಇವರೆಲ್ಲರೂ ಚಿತ್ರದಲ್ಲಿ ಕನ್ನಡದ ಬಗ್ಗೆಯೇ ಮಾತನಾಡುತ್ತಾರೆ. ಇಂಗ್ಲಿಷ್ ಗೊತ್ತಿಲ್ಲ ಎನ್ನುವುದು ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ ಎನ್ನುತ್ತಾರಂತೆ. ಹೇಗೆ ಎಂದರೆ, ನಿರ್ದೇಶಕ ನರೇಶ್ ಗುಟ್ಟು ಬಿಟ್ಟುಕೊಡಲ್ಲ. ಚಿತ್ರಮಂದಿರದಲ್ಲೇ ನೋಡಿ ಎನ್ನುತ್ತಾರೆ. 

    ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನೇ ಕೊಟ್ಟ ನಿರ್ಮಾಪಕ ಸುರೇಶ್, ರಾಜು ಕನ್ನಡ ಮೀಡಿಯಂ ಮೂಲಕ ಒಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.

  • ರಾಜ್ಯೋತ್ಸವಕ್ಕೆ ಶ್ರದ್ಧಾ-ಶಾನ್ವಿ ಕೊಡುಗೆ ಏನು..?

    shraddha shanvi's gift for rajyotsava

    ಕನ್ನಡ ರಾಜ್ಯೋತ್ಸವಕ್ಕೆ ಎಲ್ಲರೂ ಒಂದಲ್ಲ ರೀತಿಯಲ್ಲಿ ತಯಾರಾಗುತ್ತಾರೆ. ಚಿತ್ರರಂಗದವರಂತೂ ವಿಶೇಷವಾಗಿಯೇ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೆ. ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾಸ್ತವ್ ಕನ್ನಡ ರಾಜ್ಯೋತ್ಸವಕ್ಕೆ ನಮಿಸುತ್ತಿರುವ ರೀತಿಯೇ ವಿಶೇಷ.

    ಇಬ್ಬರೂ ಸೇರಿಕೊಂಡು ಒಂದು ವಿಡಿಯೋ ಮಾಡಿದ್ದಾರೆ. ಡಾ.ರಾಜ್, ವಿಷ್ಣು, ಶಂಕರ್‍ನಾಗ್, ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಟ್ಟು 14 ಕನ್ನಡ ಕಲಾವಿದರ ಹಾಡುಗಳ ತುಣುಕುಗಳಿಗೆ ಸ್ಟೆಪ್ ಹಾಕಿದ್ದಾರೆ. 

    ಒಬ್ಬೊಬ್ಬ ನಟನ ಸ್ಟೆಪ್ 10 ಸೆಕೆಂಡ್‍ಗಳಲ್ಲಿ ಬಂದು ಹೋಗುತ್ತೆ. ಹಾಡಿಗೆ ತಕ್ಕಂತ ಕಾಸ್ಟ್ಯೂಮ್ ಕೂಡಾ ಮಾಡಿಕೊಂಡಿದ್ದಾರೆ ಶ್ರದ್ಧಾ ಮತ್ತು ಶಾನ್ವಿ. ಇವರ ಜೊತೆ ಕಾಮಿಡಿ ಕಲಾವಿದ ಪ್ರದೀಪ್ ಕೂಡಾ ಇದ್ದಾರೆ. ಇದೇ ದಿನ ವಿಡಿಯೋ ಬಿಡುಗಡೆಯಾಗುತ್ತಿದೆ.