` namma metro - chitraloka.com | Kannada Movie News, Reviews | Image

namma metro

  • Mother inspires Pavan's New Film Script - Exclusive

    rana vikrama image

    Pavan Wadeyar is starting to work on a new script. Even as he is giving finishing touches to Puneeth Rajkumar's Ranavikrama, a single line idea for a new script has emerged in the young writer-director's mind. The idea came to him from his mother. Pavan says his mother was reading an old Kannada novel which did not even have a cover. Her comments after reading the book has inspired Pavan to write a new script. 

    The one line that will be the base for the new story is, "If a boy is not worth for girl's trust, then that girl is not worth for boy's pure love. this is my next story line," he says. Meanwhile Pavan treated his mother to a trip on the Namma Metro in Bengaluru. Ranavikrama is the first Kannada film to be officially shot in the Metro train and station. Having told her about the Metro the mother-son duo had a jolly ride.

    Ranavikrama's climax shoot was completed in Jindal factory in Ballary recently and the film team is gearing up for a foreign trip to shoot two songs. Pavan was in Mumbai earlier this week to get a visa for the same. 

  • ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾ.ರಾ. ಗೋವಿಂದು ಹೋರಾಟದ ಎಚ್ಚರಿಕೆ

    Sa Ra Govindu Warns Hindi Imposition in metro

    ನಮ್ಮ ಮೆಟ್ರೋದಲ್ಲಿ ಅಗತ್ಯ ಇದೆಯೋ ಇಲ್ಲವೊ ಎಂಬುದನ್ನೂ ನೋಡದೆ ಹಿಂದಿಯನ್ನು ಹೇರುತ್ತಿರುವುದು, ಇದರ ವಿರುದ್ಧ ನಾಗರಿಕರೇ ಸಾಮಾಜಿಕ ಜಾಲತಾಣಗಳ ವಿರುದ್ಧ ಮೆಟ್ರೋನಲ್ಲಿ ಹಿಂದಿ ಬೇಡ ಎಂದು ಅಭಿಯಾನ ನಡೆಸಿದ್ದು ಗೊತ್ತಿರುವ ವಿಚಾರವೇ. ಈಗ ನಾಗರಿಕರ ಹೋರಾಟಕ್ಕೆ ಇನ್ನಷ್ಟು ಬಲ ಬಂದಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ನಯವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.

    ಮೆಟ್ರೋದಲ್ಲಿ ಹಿಂದಿ ಹೇರಿಕೆ ತೆಗೆಯಿರಿ. ನಮಗೆ ಹಿಂದಿ ಬೇಡ. ಕನ್ನಡಿಗರ ಮನವಿಗೆ ಸ್ಪಂದಿಸಿ ಎನ್ನುತ್ತಲೇ, ತೆಗೆಯದೇ ಹೋದರೆ ಪ್ರತಿಭಟನೆ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯೂ ಇದೆ. 

    ಹಿಂದಿ ವಿರೋಧಿ ಹೋರಾಟಕ್ಕೆ ಫಿಲ್ಮ್ ಚೇಂಬರ್ ಪ್ರವೇಶವಾದರೆ, ಹೆಚ್ಚೂಕಡಿಮೆ ಚಿತ್ರರಂಗವೇ ಪ್ರವೇಶವಾದಂತೆ. ಪ್ರತಿಭಟನೆಯ ಎಚ್ಚರಿಕೆಗೆ ಮೆಟ್ರೋ ಮಣಿಯುತ್ತಾ..?

  • ಮೆಟ್ರೋನಲ್ಲಿ ಹಿಂದಿ ಬೇಡ  ಅಭಿಯಾನಕ್ಕೆ ಚಿತ್ರರಂಗದ ಹಲವರ ಬೆಂಬಲ

    no hindi in metro

    ಬೆಂಗಳೂರು ಮೆಟ್ರೋದ ನಾಮ ಫಲಕಗಳಲ್ಲಿ ಹಿಂದಿ ಭಾಷೆ ಬಳಕೆ ವಿರೋಧಿಸಿ ನಡೆಯುತ್ತಿರುವ ಅಭಿಯಾನಕ್ಕೆ ಬಲ ಕೂಡಿಕೊಳ್ಳುತ್ತಲೇ ಇದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹೋರಾಟದ ಎಚ್ಚರಿಕೆ ನೀಡಿರುವ ಜೊತೆಯಲ್ಲೇ ಚಿತ್ರರಂಗದ ಸ್ಟಾರ್ ನಟರೂ, ಕಲಾವಿದರು, ತಂತ್ರಜ್ಞರು ಹೋರಾಟದ ಮಾತು ಹೇಳಿದ್ದಾರೆ. 

    ನಟ ಜಗ್ಗೇಶ್, ನಿರ್ದೇಶಕ ಬಿ.ಸುರೇಶ್, ಸಾಹಿತಿ ಕವಿರಾಜ್ ಸೇರಿದಂತೆ ಅನೇಕರು 'ಹಿಂದಿ ರಾಷ್ಟ್ರಭಾಷೆ ಅಲ್ಲ, ಅದು ಒಂದು ಅಧಿಕೃತ ಭಾಷೆ' ಅಷ್ಟೆ ಅಂತ ಹಿಂದಿ ಹೇರಿಕೆಯ ವಿರುದ್ಧ ಗುಡುಗಿದ್ದಾರೆ.

    ಈಗಲೂ ಬದಲಿಸಬಹುದು - ಜಗ್ಗೇಶ್, ನಟ

    ''ಉತ್ತರ ಭಾರತದಲ್ಲೇ ಬಹುತೇಕ ರಾಜ್ಯದ ಜನರಿಗೆ ಹಿಂದಿ ಬರುವುದಿಲ್ಲ. ಕಾಶ್ಮೀರ, ರಾಜಸ್ಥಾನ, ಪಂಜಾಬ್, ದಕ್ಷಿಣದಲ್ಲಿ ತಮಿಳು ನಾಡು, ಕೇರಳ, ಕರ್ನಾಟಕ.. ಹೀಗಿರಬೇಕಾದರೆ ಹಿಂದಿ ಹೇಗೆ ರಾಷ್ಟ್ರ ಭಾಷೆ.? ಮನಸ್ಸಿದ್ದರೆ ಈಗಲೂ ಬದಲಿಸಬಹುದು. ಯತ್ನಿಸಿ'' 

    ನಾನು ಹಿಂದಿ ಹೇರಿಕೆಯ ವಿರೋಧಿ - ಬಿ. ಸುರೇಶ್, ನಿರ್ದೇಶಕ

    ''ಮೆಟ್ರೋ ಸ್ಥಳೀಯ, ರಾಜ್ಯ ಸ್ವಾಮ್ಯದ ಅಂಗ. ಇದು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಿಂದ ದೆಹಲಿ ಅಥವಾ ಲಕ್ನೋಗೆ ಪ್ರಯಾಣಿಸುವ ರೈಲುಗಳಲ್ಲಿ ಹಿಂದಿಯಲ್ಲಿ ಸೈನ್ ಬೋರ್ಡ್ ಇದ್ದರೆ ತೊಂದರೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರ್ವಹಿಸುವ ಮೆಟ್ರೋ ಹಿಂದಿ ಫಲಕಗಳನ್ನು ಹೊಂದುವುದು ಸರಿಯಲ್ಲ.'' 

    ಕನ್ನಡ ಕಿತ್ತು ಹಾಕುವ ಹುನ್ನಾರ - ಕವಿರಾಜ್, ಸಾಹಿತಿ

    ''ಕನ್ನಡದ ಜೊತೆ ಹಿಂದಿ ಇದ್ರೆ ಏನು ಸಮಸ್ಯೆ ? ಅಂತ ಕೆಲವರು ಕೇಳಬಹುದು. ಕನ್ನಡದ ಜೊತೆ ಹಿಂದಿ ಇರೋದೇ ಸಮಸ್ಯೆ..ಇಂತಹ ಕ್ರಮಗಳಿಂದ ಇಲ್ಲಿ ವಾಸಿಸುವ ಹಿಂದಿ ಭಾಷಿಕರಿಗೆ ಕನ್ನಡ ಕಲಿಯಬೇಕಾದ ಅವಶ್ಯಕತೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಹಿಂದಿ, ಇಂಗ್ಲೀಷ್ ಇದೆಯಲ್ಲಾ ಕನ್ನಡ ಯಾಕೆ? ಅಂತ ಕಿತ್ತು ಹಾಕೋ ಹುನ್ನಾರದ ಮೊದಲ ಹೆಜ್ಜೆ ಇದು. 

    Related Articles :-

    ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾ.ರಾ. ಗೋವಿಂದು ಹೋರಾಟದ ಎಚ್ಚರಿಕೆ