` shanvi srivatsav, - chitraloka.com | Kannada Movie News, Reviews | Image

shanvi srivatsav,

  • ಹಾಡು ಕೇಳಿ ಯರ್ರಾಬಿರ್ರಿ ಲವ್ವಾಗೋಯ್ತು..!

    tarak movie image

    ತಾರಕ್ ಚಿತ್ರದ ಇನ್ನೊಂದು ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ಸಂಜೆ ಹೊತ್ತು ನಿನ್ನ ಶ್ಯಾನೆ ನೋಡ್ತಾ ಇದ್ರೆ ಯರ್ರಾಬಿರ್ರಿ ಲವ್ವಾಯ್ತದೆ ಅನ್ನೋ ಹಾಡು ನೋಡಿ ಅಭಿಮಾನಿಗಳಿಗೂ ಯರ್ರಾಬಿರ್ರಿ ಲವ್ವಾಗೋಗಿದೆ. 

    ಹಾಡಿನಲ್ಲಿ ಮಧ್ಯೆ ಮಧ್ಯೆ ಶ್ಲೋಕಗಳೂ ಇವೆ. ಯುಗಳ ಗೀತೆಯಲ್ಲಿ ಇದೊಂದು ಹೊಸ ಪ್ರಯೋಗ. ಆ ಪ್ರಯೋಗ ಕಿವಿಗಿಂಪಾಗಿದೆ. ಶೃತಿ ಹರಿಹರನ್ ಕಣ್ಣಿಗೆ ತಂಪಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡಿಗೆ ಸಾಹಿತ್ಯ ಕೊಟ್ಟಿರುವುದು ಹರಿ ಸಂತೋಷ್. ಹಾಡಿರುವುದು ವಿಜಯ್ ಪ್ರಕಾಶ್ ಮತ್ತು ಇಂದು ನಾಗರಾಜ್.

    ದರ್ಶನ್ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರ್ತಾ ಇದೆ. ಹಾಡು ಕೇಳಿ ಯರ್ರಾಬಿರ್ರಿ ಲವ್ವಿಗೆ ಬಿದ್ದಿದ್ದ ಅಭಿಮಾನಿಗಳು, ಈಗ ಹಾಡು ನೋಡಿ ಯರ್ರಾಬಿರ್ರಿ ಲವ್ವಲ್ಲಿದ್ದಾರೆ. ಶುಕ್ರವಾರಕ್ಕೆ ವೇಯ್ಟಿಂಗ್.

  • ಹೇಳದೆ ಕೇಳದೆ ಜೀವವೂ ಜಾರಿದೆ.. - ಗಣೇಶ್-ಪಾರ್ವತಿ ಪ್ರೇಮ`ಗೀತ'

    geetha romantic song releasd

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಯುಗಳ ಗೀತೆಯಿದು. ಹೇಳದೆ ಕೇಳದೆ ಜೀವವೂ ಜಾರಿದೆ.. ಹಾಡಿನ ಲಿರಿಕಲ್ ವಿಡಿಯೋ ಹೊರಬಂದಿದೆ. ಗೌಸ್‍ಪೀರ್ ಸಾಹಿತ್ಯಕ್ಕೆ ರಾಜೇಶ್ ಕೃಷ್ಣನ್, ಅನನ್ಯಾ ಭಟ್ ಧ್ವನಿ ಕೊಟ್ಟಿದ್ದಾರೆ. ಅನೂಪ್ ರುಬೆನ್ಸ್ ಸಂಗೀತದಲ್ಲಿ ಮೂಡಿ ಬಂದಿರೋ ಇಂಪಾದ ಹಾಡು ಎಲ್ಲರ ಮನಗೆದ್ದಿದೆ.

    ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಣದ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕ. 1980ರ ಕಾಲದ ಕಥೆ ಇದಾಗಿದ್ದು, ಗಣೇಶ್ ಶಂಕರ್‍ನಾಗ್ ಅಭಿಮಾನಿಯಾಗಿ, ಕನ್ನಡ ಹೋರಾಟಗಾರರಾಗಿ ನಟಿಸಿದ್ದಾರೆ.

  • ಹೋಪ್ ಹುಟ್ಟಿಸಿದ ಹೋಪ್

    ಹೋಪ್ ಹುಟ್ಟಿಸಿದ ಹೋಪ್

    ಇದು ಸರ್ಕಾರಿ ಅಧಿಕಾರಿಗಳ ಕಥೆಯಾ?

    ಭ್ರಷ್ಟಾಚಾರದ ಕಥೆಯಾ?

    ಭ್ರಷ್ಟಾಚಾರದ ವಿರುದ್ಧ ಹೋರಾಟದ ಕಥೆಯಾ?

    ಗೆಲ್ಲೋದು ಯಾರು? ಭ್ರಷ್ಟರೋ? ಅಧಿಕಾರಿಯೋ? ನ್ಯಾಯವೋ..?

    ಇಂಥಾದ್ದೊಂದು ಪ್ರಶ್ನೆ ಮತ್ತು ಕುತೂಹಲ ಎರಡನ್ನೂ ನೋಡುಗರ ಮುಂದಿಟ್ಟಿದೆ ಹೋಪ್ ಚಿತ್ರದ ಟ್ರೇಲರ್.

    ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರೋ ಸಿನಿಮಾದಲ್ಲಿ ಸುಮಲತಾ ಅಂಬರೀಷ್ ಕೂಡಾ ಇದ್ದಾರೆ. ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ.. ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಚಿತ್ರದಲ್ಲಿದೆ. ಅವಧಿಗೆ ಮುನ್ನವೇ ವರ್ಗವಾಗುವ.. ಭ್ರಷ್ಟಾಚಾರದ ವಿರುದ್ಧ ನಿಂತಿದ್ದಕ್ಕೆ.. ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕುವ ಮಹಿಳಾ ಆಫೀಸರ್ ಒಬ್ಬರು ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಡುವ ಕಥೆ ಹೋಪ್. ಎಲ್ಲ ಕಡೆ ಅನ್ಯಾಯ ಆದಾಗಲೇ ಅಲ್ವಾ ಸರ್, ನ್ಯಾಯಾಲಯಕ್ಕೆ ಬರೋದು ಅನ್ನೋ ಲೈನ್ ಮೂಲಕ ಎಂಡ್ ಆಗುವ ಟ್ರೇಲರ್ ಬೇರೆಯದೇ ಫೀಲ್ ಕೊಡುತ್ತೆ. ಚಿತ್ರದ ನಿರ್ದೇಶಕ ಎಂ.ಅಂಬರೀಷ್. ಹಿಂದೆ ಜ್ವಲಂತ ಸಿನಿಮಾ ನಿರ್ದೇಶಿಸಿದ್ದವರು. ಚಿತ್ರಕ್ಕೆ ಕಥೆ ಬರೆದಿರೋದು ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್. ನಿರ್ಮಾಣವೂ ಅವರದ್ದೇ. ಜುಲೈ 8ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  • ಹ್ಯಾಂಡ್ಸಪ್ ಚಾಲೆಂಜ್ ಕ್ರೇಜ್

    hands up challenge craze

    ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಚಾಲೆಂಜ್ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡ್ತಿದೆ. ರಕ್ಷಿತ್ ಶೆಟ್ಟಿ ಹಾಕಿರುವ ಹ್ಯಾಂಡ್ಸಪ್ ಚಾಲೆಂಜ್‌ಗೆ ಅಭಿಮಾನಿಗಳಷ್ಟೇ ಅಲ್ಲ, ಸ್ಯಾಂಡಲ್‌ವುಡ್ ತಾರೆಯರೂ ಫಿದಾ ಆಗಿದ್ದಾರೆ.

    ಪುಟ್ಟ ಪುಟ್ಟ ಮಕ್ಕಳು ರಕ್ಷಿತ್ ಶೆಟ್ಟಿಯ ಹ್ಯಾಂಡ್ಸಪ್ ಹಾಡನ್ನು ತಮ್ಮದೇ ಸ್ಟೆöÊಲಲ್ಲಿ ವಿಡಿಯೋ ಮಾಡಿ ಕಳಿಸುತ್ತಿದ್ದರೆ, ಸ್ಯಾಂಡಲ್‌ವುಡ್ ತಾರೆಯರಾದ ಸಂಯುಕ್ತಾ ಹೆಗ್ಡೆ, ಹರ್ಷಿಕಾ ಪೂಣಚ್ಚ, ನಿಶ್ವಿಕಾ ನಾಯ್ಡು ಸೇರಿದಂತೆ ಹಲವು ತಾರೆಯರು ಹ್ಯಾಂಡ್ಸಪ್ ಚಾಲೆಂಜ್ ಸ್ವೀಕರಿಸಿದ್ದಾರೆ. ಅಂದಹಾಗೆ ಇದನ್ನು ಆರಂಭಿಸಿದ್ದು ಅಮರಾವತಿಯ ಲಕ್ಷಿö್ಮÃ ಶಾನ್ವಿ ಶ್ರೀವಾತ್ಸವ್. ಒಟ್ಟಿನಲ್ಲಿ ಪರಂವಾ ಸ್ಟುಡಿಯೋಸ್‌ನ ಅವನೇ ಶ್ರೀಮನ್ನಾರಾಯಣದ ಕ್ರೇಜ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಲ್ಲಿ ಸಂತಸ ಹುಟ್ಟಿಸುತ್ತಿದೆ.

  • ಹ್ಯಾಂಡ್ಸಪ್.. ಇದು ಚರಿತ್ರೆ ಸೃಷ್ಟಿಸೋ ಅವತಾರ..

    hands up song creates sensation

    ಕೇಳಿ ಕಾದಿರುವ ಬಾಂಧವರೇ.. ಭುವಿಯಲ್ಲಿ ಅವನ ಅರಿತವರೇ.. ಎಂದು ಶುರುವಾಗುತ್ತೆ ಹಾಡು.. ಕಿಕ್ಕನ್ನು ಸೈಲೆಂಟಾಗಿ ಹೆಚ್ಚಿಸ್ತಾ ಹೋಗ್ತಾರೆ ಅಜನೀಶ್ ಲೋಕನಾಥ್.  ಹ್ಯಾಂಡ್ಸಪ್.. ಅದು ಅನವರತ.. ಎಂಬ ಕೋರಸ್ ಶುರುವಾಗುವ ಹೊತ್ತಿಗೆ ವಿಜಯ್ ಪ್ರಕಾಶ್ ಧ್ವನಿ ಹೃದಯವನ್ನು ಆವರಿಸಿಕೊಂಡುಬಿಡುತ್ತೆ. ಇದು ಚರಿತ್ರೆ ಸೃಷ್ಟಿಸೋ ಅವತಾರ.. ಎಂದು ನಾಯಕ ಸ್ಟೆಪ್ ಹಾಕುವ ಹೊತ್ತಿಗೆ.. ಹಾಡಿನಲ್ಲಿ ತಲ್ಲೀನರಾಗಿರುತ್ತಾರೆ.. ನೋಡುಗರು.. ಕೇಳುಗರು..

    ಇದು ಹ್ಯಾಂಡ್ಸಪ್ ಹಾಡಿನ ಝಲಕ್ಕು. ರಕ್ಷಿತ್‌ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮೊದಲ ವಿಡಿಯೊ ಸಾಂಗ್ ‘ಹ್ಯಾಂಡ್ಸ್‌ ಅಪ್‌’ ಹಾಡು ಕೊಡುವ ಥ್ರಿಲ್ ಇದು. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಎಲ್ಲಾ ಹಾಡುಗಳನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ. ‘ಹ್ಯಾಂಡ್ಸ್‌ ಅಪ್‌’ ಹಾಡಿನಲ್ಲಿ ಪೊಲೀಸ್‌ ಪಾತ್ರದಾರಿ ನಾರಾಯಣ ಕ್ಲಬ್‌ನಲ್ಲಿ ರೌಡಿಗಳ ಜೊತೆ ಕುಣಿಯುತ್ತಾನೆ.

    ಸಚಿನ್‌ ರವಿ ನಿರ್ದೇಶನದ ಶ್ರಮ ಹಾಡಿನುದ್ದಕ್ಕೂ ಎದ್ದು ಕಾಣುತ್ತದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ವರ್ಷದ ಕೊನೆಗೆ ರಿಲೀಸ್ ಆಗುತ್ತಿದೆ.