` shanvi srivatsav, - chitraloka.com | Kannada Movie News, Reviews | Image

shanvi srivatsav,

  • ನಾರಾಯಣನನ್ನು ಪ್ರಚಾರ ಮಾಡಿದ್ದು ರಕ್ಷಿತ್ ಅಲ್ಲ.. ಪುಷ್ಕರ್ ಅಲ್ಲ.. ಮತ್ಯಾರು..?

    audience promotoed avane srimnarayana more than the movie team

    ಅವನೇ ಶ್ರೀಮನ್ನಾರಾಯಣ ಭರ್ಜರಿ ರಿಲೀಸ್ ಕಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಏಕಕಾಲಕ್ಕೆ ರಿಲೀಸ್ ಎಂದರೆ ಸುಮ್ಮನೆ ಮಾತಲ್ಲ. ದೊಡ್ಡ ಚಿತ್ರವೊಂದನ್ನು ಪ್ರಚಾರವಿಲ್ಲದೆ ಬಿಡುಗಡೆ ಮಾಡಬಾರದು ಎಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಪ್ರಮೋಷನ್ ಮಾಡಲಾಗಿದೆ.

    ಆದರೆ, ವಿಶೇಷವೇನು ಗೊತ್ತೇ.. ಇಷ್ಟೆಲ್ಲ ಪ್ರಮೋಷನ್ನುಗಳ ನಡುವೆ ಅತಿ ದೊಡ್ಡ ಪ್ರಚಾರ ಮಾಡಿದ್ದು ಹೀರೋ ರಕ್ಷಿತ್ ಶೆಟ್ಟಿ ಅಲ್ಲ, ಹೀರೋಯಿನ್ ಶಾನ್ವಿ ಶ್ರೀವಾತ್ಸವ್ ಅಲ್ಲ, ಡೈರೆಕ್ಟರ್ ಸಚಿನ್ ಅಲ್ಲ.. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೂ ಅಲ್ಲ. ಹಾಗಾದರೆ ಯಾರು..?

    ಕನ್ನಡಿಗರು. ಹೌದು, ಸಿನಿಮಾ ರಿಲೀಸ್ ಆಗುವ ಮುಂಚೆ ಬಂದ ಟ್ರೇಲರ್ ಹಿಟ್ ಮಾಡಿದ್ದ ಪ್ರೇಕ್ಷಕರು, ಹ್ಯಾಂಡ್ಸಪ್ ಚಾಲೆಂಜ್‍ನ್ನಂತೂ ಮನಸಾರೆ ಎಂಜಾಯ್ ಮಾಡಿದರು. ಚಿತ್ರರಂಗದ ನಟ ನಟಿಯರೇ ಚಾಲೆಂಜ್ ಸ್ವೀಕರಿಸಿ, ತಾವೇ ಹಾಡಿ ಕುಣಿದು ಪ್ರಚಾರ ಮಾಡಿದರು. ಈಗ.. ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರೇ.. ವ್ಹಾವ್.. ಈ ಸಿನಿಮಾ ಹಿಟ್ ಆಗಲೇಬೇಕು ಎಂದು ಸ್ವತಃ ಪ್ರಚಾರಕ್ಕೆ ನಿಂತುಬಿಟ್ಟಿದ್ದಾರೆ. ಅವನೇ ಶ್ರೀಮನ್ನಾರಾಯಣನ ಶಕ್ತಿಯೇ ಅವರು.. ಪ್ರೇಕ್ಷಕರು.

  • ನಾರಾಯಣನಿಗೆ `ವಿಜಯಲಕ್ಷ್ಮಿ' ಸಿಕ್ಕೇಬಿಟ್ಟಳು..!

    avane srimnanarayana impresses audience

    ಅವನೇ ಶ್ರೀಮನ್ನಾರಾಯಣ ಚಿತ್ರದ ಬಜೆಟ್ ನೋಡಿದರೆ, ಪುಷ್ಕರ್ ಮಲ್ಲಿಕಾರ್ಜುನಯ್ಯನವರ ಒಳಗಿದ್ದ ಧೈರ್ಯಲಕ್ಷ್ಮಿ ನೆನಪಾಗುತ್ತಾಳೆ. ಸುರಿದ ಹಣ ನೋಡಿದರೆ, ಆಹಾ.. ಧನಲಕ್ಷ್ಮಿಯೇ ಕಣ್ಣ ಮುಂದೆ ಬರುತ್ತಾಳೆ. ಒಟ್ಟಿನಲ್ಲಿ ನವಲಕ್ಷ್ಮಿಯರ ಒಕ್ಕೂಟವೇ ಆಗಿದ್ದ ಅವನೇ ಶ್ರೀಮನ್ನಾರಾಯಣನಿಗೆ ಪ್ರೇಕ್ಷಕರ ಮೆಚ್ಚುಗೆ ಲಕ್ಷ್ಮಿ ಸಿಕ್ಕಿದ್ದಾಳೆ.

    ನಾರಾಯಣನಿಗೆ ಸಿನಿಮಾದಲ್ಲಿ ಲಕ್ಷ್ಮಿ ಸಿಗುತ್ತಾಳಾ..? ನಾವ್ ಹೇಳಲ್ಲ. ಥಿಯೇಟರಿನಲ್ಲಿ ನೀವೇ ನೋಡಿ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿಯ, ಸಚಿನ್ ರವಿ ನಿರ್ದೇಶನದ ಚಿತ್ರಕ್ಕೀಗ ವಿಜಯಲಕ್ಷ್ಮಿ ಸಿಕ್ಕಿದ್ದಾಳೆ. ಹೀಗಾಗಿ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಧನಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಒಳಗಾಗಿದ್ದಾರೆ.

  • ನಾರಾಯಣನಿಗೆ ರವಿಚಂದ್ರನ್, ಶಿವಣ್ಣ ಬಹುಪರಾಕ್

    avavens rimnanarayana receives appreciation from cekebs

    ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರೀಮಿಯರ್ ಶೋ ಚಿತ್ರರಂಗದ ಸ್ಟಾರ್‍ಗಳ ಮನಸ್ಸು ಗೆದ್ದಿದೆ. ಇಡೀ ಚಿತ್ರರಂಗ ಒಟ್ಟಿಗೇ ಬಂದು ಊರ್ವಶಿಯಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಚಿತ್ರರಂಗದ ಗಣ್ಯರಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಿದ್ದರು ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಚಿತ್ರವನ್ನು ನೋಡಿದವರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರವನ್ನು ಹೊಗಳಿದ್ದಾರೆ. ಇದೊಂದು ಹೊಸ ಲೋಕ. ಹೊಸ ಕಲ್ಪನೆ. ಚಿತ್ರ ಅದ್ಭುತವಾಗಿ ಟೇಕಾಫ್ ಆಗಿದೆ ಎಂದಿದ್ದಾರೆ ರವಿಚಂದ್ರನ್. ರವಿಚಂದ್ರನ್ ಸುಖಾಸುಮ್ಮನೆ ಹೊಗಳಲ್ಲ ಎನ್ನುವುದು ಅಭಿಮಾನಿಗಳಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.

    ಇನ್ನು ಶಿವರಾಜ್ ಕುಮಾರ್ ಚಿತ್ರದ ಕಾನ್ಸೆಪ್ಟ್, ಮೇಕಿಂಗ್‍ಗೆ ಫಿದಾ ಆಗಿದ್ದಾರೆ. ಇಂತಾದ್ದೊಂದು ಚಿತ್ರವನ್ನು ಕನ್ನಡ ಪ್ರೇಕ್ಷಕರು ನೋಡಿ ಮೆಚ್ಚಿ ಹರಸಬೇಕು ಎಂದು ಕೋರಿದ್ದಾರೆ.

    ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಸಿನಿಮಾ ರಿಲೀಸ್ ಆಗಿದ್ದು ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  • ನಿರ್ಮಾಪಕ ಸಲಾಂಗೆ ಶಾನ್ವಿ ಶ್ರೀವಾತ್ಸವ್ ರಿಯಾಕ್ಷನ್

    shavi srivatsava image

    ನನ್ನ ದುಗುಡವನ್ನು ಅರ್ಥ ಮಾಡಿಕೊಂಡ ನಿರ್ಮಾಪಕ ಸೈಯದ್ ಸಲಾಂ ಅವರಿಗೆ ಧನ್ಯವಾದ. ಹೀಗೊಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ ನಟಿ ಶಾನ್ವಿ ಶ್ರೀವಾತ್ಸವ್. ನನ್ನ ಕಳಕಳಿಯ ಪ್ರಾರ್ಥನೆ ಗೀತಾ ಚಿತ್ರಕ್ಕಷ್ಟೇ ಸಂಬಂಧಿಸಿದ್ದಲ್ಲ ಎಂದಿರುವ ಶಾನ್ವಿ, ಚಿತ್ರ ಅಂತಿಮವಾಗಿ ಹೇಗೆ ಬರಬೇಕು ಎಂದು ನಿರ್ಧರಿಸುವುದು ಚಿತ್ರತಂಡ. ಬದಲಾವಣೆ ಮಾಡಿಕೊಂಡರೆ ಅದರ ಮಾಹಿತಿಯನ್ನು ನಮಗೆ ನೀಡಿ ಎನ್ನುವುದಷ್ಟೇ ನನ್ನ ಮನವಿ ಎಂದಿದ್ದಾರೆ ಶಾನ್ವಿ.

    ಇದು ವಿವಾದವಾಗುವ ಎಲ್ಲ ನಿರೀಕ್ಷೆ ಇತ್ತಾದರೂ, ನಿರ್ಮಾಪಕ ಸೈಯದ್ ಸಲಾಂ, ಗಣೇಶ್, ನಿರ್ದೇಶಕ ವಿಜಯ್ ನಾಗೇಂದ್ರ ಅವರ ಸಂಯಮದ ಪ್ರತಿಕ್ರಿಯೆಯಿಂದಾಗಿ ಅಷ್ಟೇ ವೇಗವಾಗಿ ಕೂಲ್ ಆಗಿದೆ. ಇದೆಲ್ಲದರ ಮಧ್ಯೆ ಗೀತಾ ಚಿತ್ರ ಥಿಯೇಟರುಗಳಲ್ಲಿ ಸೌಂಡು ಮಾಡುತ್ತಿದೆ. 

  • ನೋ ಲಾಸ್.. ನೋ ಪ್ರಾಫಿಟ್.. ಗೀತಾ ರಿಪೋರ್ಟ್

    geetha movie producer talks about geetha box office collecion

    ಗೀತಾ, ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ ಅರಳಿದ ಪ್ರೇಮಕಥೆಯ ಸಿನಿಮಾ. ಕಥೆ, ಚಿತ್ರಕಥೆ ವಿಭಿನ್ನವಾಗಿದ್ದ ಕಾರಣಕ್ಕೆ ಪ್ರೇಕ್ಷಕರು ಇಷ್ಟಪಟ್ಟ ಸಿನಿಮಾ. ಗಣೇಶ್,ಶಾನ್ವಿ ಜೋಡಿಯ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕರು. ಈಗ ಸಿನಿಮಾದ ಕಲೆಕ್ಷನ್ ರಿಪೋರ್ಟ್ ಕೊಟ್ಟಿದ್ದಾರೆ ನಿರ್ಮಾಪಕ ಸೈಯದ್ ಸಲಾಂ. ನೋ ಬಿಲ್ಡಪ್.. ನಥಿಂಗ್. ಇದ್ದದ್ದನ್ನು ಇದ್ದಂಗೆ ಹೇಳಿ ತಾವೇಕೆ ಡಿಫರೆಂಟ್ ಎಂದೂ ತೋರಿಸಿದ್ದಾರೆ.

    ಗೀತಾ ಚಿತ್ರದಿಂದ ನಂಗೆ ಲಾಸ್ ಆಗಿಲ್ಲ. ಲಾಭವೂ ಬಂದಿಲ್ಲ. ಹಾಕಿದ್ದ ಖರ್ಚಿನಷ್ಟು ಗಳಿಕೆಯಾಗಿದೆ. ಅಲ್ಲಿಗಲ್ಲಿಗೆ ಸರಿ ಹೋಗಿದೆ ಎಂದಿದ್ದಾರೆ ಸೈಯದ್.

    ನಟ ಗಣೇಶ್ ಮತ್ತು ನಿರ್ಮಾಪಕ ಸೈಯದ್ ಸಲಾಂ ಇಬ್ಬರದ್ದೂ ಒಂದೇ ಮಾತು, ಒಳ್ಳೆಯ ಚಿತ್ರ ಕೊಟ್ಟ ತೃಪ್ತಿ ಇದೆ. ಒಬ್ಬ ನಟನಾಗಿ ಇಂತಹ ಚಿತ್ರ ಕೊಟ್ಟಿದ್ದಕ್ಕೆ ನನಗಂತೂ ಹೆಮ್ಮೆಯಿದೆ. ಎಷ್ಟೋ ಬಾರಿ ಹಿಟ್ ಆದರೂ ಮನಸ್ಸಿಗೆ ತೃಪ್ತಿ ಇರಲ್ಲ. ಆದರೆ, ಗೀತಾ ಹಾಗಲ್ಲ, ಮನಸ್ಸಿಗೆ ಖುಷಿ ಕೊಟ್ಟ ಸಿನಿಮಾ ಎಂದಿದ್ದಾರೆ ಗಣೇಶ್.

    ಮೊದಲ ವಾರ 5 ಕೋಟಿ ಬ್ಯುಸಿನೆಸ್ ಮಾಡಿದ್ದ ಗೀತಾ, ಈಗಲೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಚೆನ್ನಾಗಿಯೇ ಹೋಗುತ್ತಿದೆ. ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ನಾನು ಹ್ಯಾಪಿ ಎಂದಿದ್ದಾರೆ ಸೈಯದ್ ಸಲಾಂ.

  • ಪಂಚಭಾಷಾ ಸಿನಿಮಾ ಅವನೇ ಶ್ರೀಮನ್ನಾರಾಯಣ

    after kgf avane srimananrayana to release in 5 languages

    ರಕ್ಷಿತ್ ಶೆಟ್ಟಿ ಸಿನಿಮಾ ಬಂದು ಎರಡೂವರೆ ವರ್ಷವಾಯ್ತು. ಇನ್ನೂ 3 ತಿಂಗಳು ಕಾಯಬೇಕು. ಆಗ ಬರ ನೀಗಲಿದೆ. ಅವನೇ ಶ್ರೀಮನ್ನಾರಾಯಣ ಆಗಸ್ಟ್‍ನಲ್ಲಿ ತೆರೆಗೆ ಬರ್ತಾನೆ. ಒಂದಲ್ಲ.. ಎರಡಲ್ಲ.. ಐದು ಭಾಷೆಗಳಲ್ಲಿ ಮಾತನಾಡ್ತಾನೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮಾತನಾಡಲಿದ್ದಾನೆ ಶ್ರೀಮನ್ನಾರಾಯಣ.

    ಪುಷ್ಕರ್ ಮಲ್ಲಿಕಾರ್ಜುನಯ್ಯ, ಪ್ರಕಾಶ್ ಗೌಡ ನಿರ್ಮಾಣದ ಚಿತ್ರಕ್ಕೆ ಯುವ ನಿರ್ದೇಶಕ ಸಚಿನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ವೇತಾ ಶ್ರೀವಾಸ್ತವ್ ಹೀರೋಯಿನ್. 9 ಸೆಟ್ಟುಗಳಲ್ಲಿ 200 ದಿನ ಶೂಟಿಂಗ್ ಮಾಡಿರುವ ಸಿನಿಮಾ ಅವನೇ ಶ್ರೀಮನ್ನಾರಾಯಣ.

    ಆಗಸ್ಟ್‍ನಲ್ಲಿ ಯಾವಾಗ ಅನ್ನೋದು ಫೈನಲ್ ಆಗಿಲ್ಲ. ಒಬ್ಬ ನಟನಾಗಿ ನನಗೂ ಕುತೂಹಲವಿದೆ ಎಂದಿರುವ ರಕ್ಷಿತ್ ಶೆಟ್ಟಿ, ಹಿಂದಿಯಲ್ಲಿಯೂ ಅವರೇ ಡಬ್ ಮಾಡಿದ್ದಾರಂತೆ. 

  • ಪರಭಾಷೆ ಚಿತ್ರಗಳಿಗೆ ಗಣೇಶ್ ಕೊಟ್ಟ ಎಚ್ಚರಿಕೆ

    ganesh talks about other language films

    ಗಣೇಶ್ ಅಭಿನಯದ ಗೀತಾ ತೆರೆಗೆ ಸಿದ್ಧವಾಗಿದೆ. ಇಡೀ ಚಿತ್ರದಲ್ಲಿ ಮೈ ರೋಮಾಂಚನಗೊಳಿಸುವ ಹಾಡು, ಪುನೀತ್ ಹಾಡಿರುವ ಕನ್ನಡಿಗ.. ಕನ್ನಡಿಗ.. ಎಂಬ ಹಾಡು. ಎಂತಹವರನ್ನೂ ಬಡಿದೆಬ್ಬಿಸುವಂತಿರುವ ಹಾಡಿನಲ್ಲಿ ಕನ್ನಡ ಹೋರಾಟದ ಧ್ವನಿಯಿದೆ. ಸ್ಫೂರ್ತಿ ಇದೆ. ಗೀತಾ ಚಿತ್ರದ ಕಥೆಯಲ್ಲಿ ಗೋಕಾಕ್ ಚಳವಳಿಯ ನೆರಳಿದೆ. ಅಂಥಾದ್ದೊಂದು ಚಿತ್ರವನ್ನು ತೆರೆಗೆ ತರುತ್ತಿರುವ ಗಣೇಶ್, ಪರಭಾಷೆ ಚಿತ್ರಗಳಿಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

    ಗೀತಾ ನಾಳೆ ರಿಲೀಸ್ ಆಗುತ್ತಿದ್ದರೆ, ಮುಂದಿನ ವಾರ ಚಿರಂಜೀವಿ ಅಭಿನಯದ ತೆಲುಗು ಚಿತ್ರ ಸೈರಾ ನರಸಿಂಹ ರೆಡ್ಡಿ ಬರಲಿದೆ. ಜೊತೆಗೆ ಹೃತಿಕ್ ರೋಷನ್, ಟೈಗರ್ ಶ್ರಾಫ್ ಅಭಿನಯದ ಹಿಂದಿ ಸಿನಿಮಾ ವಾರ್ ರಿಲೀಸ್ ಆಗುತ್ತಿದೆ. ಸಾಮಾನ್ಯವಾಗಿ ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ತೆರೆಗೆ ಬಂದಾಗ ಮೊದಲು ಹೊಡೆತ ತಿನ್ನುವುದೇ ಕನ್ನಡ ಚಿತ್ರಗಳು. ಚಿತ್ರವನ್ನು ಹೆಚ್ಚು ಹೆಚ್ಚು ಶೋಗಳಲ್ಲಿ ತೋರಿಸಿ, ಅರ್ಜೆಂಟ್ ಅರ್ಜೆಂಟಾಗಿ ಬಾಕ್ಸಾಫೀಸ್ ಭರ್ತಿ ಮಾಡಿಕೊಳ್ಳುವುದು ಬೇರೆ ಭಾಷೆ ನಿರ್ಮಾಪಕರ ವ್ಯವಹಾರ ತಂತ್ರ. ಈ ತಂತ್ರಕ್ಕೆ ಗಣೇಶ್ ಅಭಿನಯದ ಗೀತಾ ಕೂಡಾ ಬಲಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿಯೇ ಗಣೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

    ಗೀತಾ ಅಪ್ಪಟ ಕನ್ನಡ ಸಿನಿಮಾ. ಕನ್ನಡ ಪರವಾದ ಸಿನಿಮಾ. ಗೋಕಾಕ್ ಚಳವಳಿಯ ಕಥೆ ಇರುವ ಸಿನಿಮಾ. ಬೇರೆ ಭಾಷೆ ಚಿತ್ರಗಳಿಗೆ ಏನಾಗುತ್ತೋ.. ಏನೋ.. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಚಿತ್ರದ ತಂಟೆಗೆ ಬಂದರೆ ಸುಮ್ಮನಿರಲ್ಲ. ನನ್ನ ಚಿತ್ರಕ್ಕೆ ಬೇರೆ ಭಾಷೆ ಚಿತ್ರಗಳು ತೊಂದರೆ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ' ಎಂದಿದ್ದಾರೆ. ಆದರೆ, ಕನ್ನಡ ಚಿತ್ರ ತೆರೆಗೆ ಬಂದರೆ ಸಮಸ್ಯೆಯಿಲ್ಲ, ಪರಭಾಷೆ ಚಿತ್ರದಿಂದ ಮಾತ್ರ ನನ್ನ ಚಿತ್ರಕ್ಕೆ ಧಕ್ಕೆಯಾಗಬಾರದು ಎನ್ನುವುದು ಗಣೇಶ್ ಎಚ್ಚರಿಕೆ.

  • ಪೈಲ್ವಾನ್ ಪಾಠ : ಗೀತಾ ಮುನ್ನೆಚ್ಚರಿಕೆ

    geetha movie team takes precautionary measures

    ಪೈಲ್ವಾನ್ ಚಿತ್ರವನ್ನು ಪೈರಸಿ ಕ್ರಿಮಿನಲ್ಸ್ ಕಾಡಿದ್ದಾರೆ. ಪೈರಸಿಯಿಂದಾಗಿಯೇ ಪೈಲ್ವಾನ್ ಟೀಂ 5 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ. ಪೈರಸಿ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಲಿಂಕುಗಳನ್ನು ಡಿಲೀಟ್ ಮಾಡಲಾಗಿದೆ. ಹೋರಾಟ ಚಾಲ್ತಿಯಲ್ಲಿದೆ. ಇದೆಲ್ಲದರಿಂದ ಎಚ್ಚೆತ್ತುಕೊಂಡಿರುವುದು ಗೀತಾ ಟೀಂ.

    ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಖಾಸಗಿ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿರುವ ಗೀತಾ ನಿರ್ಮಾಪಕರು, ಪೈರಸಿ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಪೈರಸಿ ಲಿಂಕ್‍ಗಳು ಸೃಷ್ಟಿಯಾದ ತಕ್ಷಣ ಡಿಲೀಟ್ ಮಾಡುವ ವ್ಯವಸ್ಥೆ ಅದು. ಪೈರಸಿ ವಿಡಿಯೋಗಳ ವೆಬ್‍ಸೈಟ್ ಲಿಂಕುಗಳನ್ನು ಡಿಲೀಟ್ ಮಾಡುವುದು  ಆ ಕಂಪೆನಿ ಕೆಲಸ. ಜೊತೆಗೆ ಪ್ರತಿ ಚಿತ್ರಮಂದಿರದಲ್ಲೂ ಗೀತಾ ಟೀಂನವರಿರುತ್ತಾರೆ. ಸೈಬರ್ ಪೊಲೀಸರಿಗೂ ಈ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ.

    ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶಾನ್ವಿ ಶ್ರೀವಾಸ್ತವ್, ಸುಧಾರಾಣಿ ಅಭಿನಯದ ಗೀತಾ ಚಿತ್ರಕ್ಕೆ ಶಿಲ್ಪಾ ಗಣೇಶ್ ಮತ್ತು ಸೈಯದ್ ಸಲಾಂ ನಿರ್ಮಾಪಕರು. ವಿಜಯ್ ನಾಗೇಂದ್ರ ನಿರ್ದೇಶನದ ಮೊದಲ ಚಿತ್ರವಿದು. ಮೊದಲ ಚಿತ್ರದಲ್ಲೇ 1980ರ ದಶಕದ ಗೋಕಾಕ್ ಚಳವಳಿ, ಪ್ರೇಮಕಥೆ ಇರುವ ಗಟ್ಟಿ ಕಥೆ ಕೈಗೆತ್ತಿಕೊಂಡಿದ್ದಾರೆ ವಿಜಯ್ ನಾಗೇಂದ್ರ.

  • ಬಾಕ್ಸಾಫೀಸಿನಲ್ಲಿ ಅವನೇ ಶ್ರೀಮನ್ನಾರಾಯಣ ಕಲೆಕ್ಷನ್ ಎಷ್ಟು..?

    avane srimnananrayana first day collection report

    ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗುವವರೆಗೂ ಅದೇನೇ ಕಾನ್ಫಿಡೆನ್ಸ್ ಇದ್ದರೂ, ಸ್ವಲ್ಪ ಟೆನ್ಷನ್ನಿನಲ್ಲಿರುವಂತೆ ಕಾಣುತ್ತಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಫುಲ್ ಹ್ಯಾಪಿ. ನಾರಾಯಣನ ಬಗ್ಗೆ ವಿಮರ್ಶಕರು, ಪ್ರೇಕ್ಷಕರು ಹೊಗಳಿರುವುದಷ್ಟೇ ಅಲ್ಲ, ಸಿನಿಮಾದ ಬಾಕ್ಸಾಫೀಸ್ ಖಜಾನೆಯೂ ತುಂಬಿದೆ. ನಾರಾಯಣನಿಗೆ ಧನಲಕ್ಷ್ಮಿ ಒಲಿದಿದ್ದಾಳೆ.

    ಮೂಲಗಳ ಪ್ರಕಾರ ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಚಿತ್ರದ ಮೊದಲ ದಿನದ ಗಳಿಕೆ 12ರಿಂದ 15 ಕೋಟಿ. ಸಿಂಗಲ್ ಸ್ಕ್ರೀನ್‍ಗಳಿಗಿಂತ ಮಲ್ಟಿಪ್ಲೆಕ್ಸುಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ರಿಲೀಸ್ ಆದ ಎಲ್ಲ ಕಡೆಗಳಲ್ಲೂ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ.

    ನಿರ್ಮಾಪಕರಿಗೆ ಇನ್ನೂ ಖುಷಿಯ ವಿಷಯವೆಂದರೆ, ಇದು ಕ್ರಿಸ್‍ಮಸ್ ಟೈಂ. ರಜೆ ಮುಗಿದಿಲ್ಲ. ಹೀಗಾಗಿ ಒನ್ಸ್ ಎಗೇಯ್ನ್ ರಕ್ಷಿತ್-ಪುಷ್ಕರ್ ಜೋಡಿಗೆ ಡಿಸೆಂಬರ್ ಲಕ್ಕಿ ಎನಿಸಿಬಿಟ್ಟಿದೆ.

     

  • ಮಾಸ್ಟರ್ ಪೀಸ್ ಹುಟ್ಟುಹಬ್ಬಕ್ಕೆ 50 ದಿನ ಮೊದಲೇ ಅಭಿಯಾನ

    shanvi promotes yash's go green initiative

    ಯಶ್ ಅವರ ಹುಟ್ಟುಹಬ್ಬ ಇನ್ನೂ ದೂರವಿದೆ. ಆಗಲೇ ಸಿದ್ಧತೆಗಳು ಶುರುವಾಗಿಬಿಟ್ಟಿವೆ. ಜನವರಿ ೮ರಂದು ಇರೋ ಹುಟ್ಟುಹಬ್ಬಕ್ಕೆ 50 ದಿನ ಮೊದಲೇ ಅಭಿಯಾನ ಶುರು ಮಾಡಿದ್ದಾರೆ ಯಶ್ ಫ್ಯಾನ್ಸ್. ಈ ಅಭಿಯಾನದ ಉದ್ದೇಶ ಹಸಿರು.

    ಈ ಅಭಿಯಾನದಲ್ಲಿ ಹಸಿರು ಉಳಿಸಿ ಎಂಬ ಸಂದೇಶ ಸಾರುವುದರ ಜೊತೆಗೆ ಗಿಡಗಳನ್ನು ನೆಡುವ ಅಭಿಯಾನವನ್ನೂ ಶುರು ಮಾಡಿದ್ದಾರೆ. ಯಶ್ ಅಭಿಮಾನಿಗಳು ಆರಂಭಿಸಿರುವ ಈ ಅಭಿಯಾನಕ್ಕೆ ಕೈ ಜೋಡಿಸಿರುವುದು ಮಾಸ್ಟರ್ ಪೀಸ್‌ನ ನಾಗವಲ್ಲಿ.. ಅದೇ ಶಾನ್ವಿ ಶ್ರೀವಾತ್ಸವ್.

  • ಯುವರಾಣಿ ಶಾನ್ವಿ

    Shanvi in Princess Style

    ಶಾನ್ವಿ ಶ್ರೀವಾತ್ಸವ್ ಅಭಿನಯದ ಕಸ್ತೂರಿ ಮಹಲ್ ಚಿತ್ರದ ಫಸ್ಟ್ ಲುಕ್ ಹೊರಬಂದಿದೆ. ಚಿತ್ರಗಳನ್ನು ವೇಗವಾಗಿ ನಿರ್ದೇಶಿಸುವ ಖ್ಯಾತಿಯೂ ಇರುವ ನಿರ್ದೇಶಕ ದಿನೇಶ್ ಬಾಬು, ಈ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಅವರನ್ನು ಯುವರಾಣಿಯಾಗಿ ತೋರಿಸಿದ್ದಾರೆ. ಸುಪ್ರಭಾತ, ಅಮೃತವರ್ಷಿಣಿ, ಲಾಲಿಯಂತಹ ಸದಭಿರುಚಿ ಚಿತ್ರಗಳ ನಿರ್ದೇಶಕ ದಿನೇಶ್ ಬಾಬು ಅವರಿಗೆ ಇದು 50ನೇ ಸಿನಿಮಾ. ಮೊದಲು ರಚಿತಾ ರಾಮ್ ಒಪ್ಪಿಕೊಂಡು ನಟಿಸಬೇಕಿದ್ದ ಪಾತ್ರ, ಅವರು ಹಿಂದೆ ಸರಿದ ಕಾರಣ ಶಾನ್ವಿ ಪಾಲಾಯ್ತು.

    ಫಸ್ಟ್ ಲುಕ್`ನಲ್ಲಿ ಶಾನ್ವಿ ಯುವರಾಣಿ ಗೆಟಪ್‍ನಲ್ಲಿ ಸೌಂದರ್ಯ ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಇದು ಹಾರರ್ ಥ್ರಿಲ್ಲರ್ ಸೈಕಲಾಜಿಕಲ್ ಸಬ್ಜೆಕ್ಟ್ ಅಂತೆ. ಶಾನ್ವಿಗೆ ಕನ್ನಡದಲ್ಲಿ ಬ್ರೇಕ್ ಕೊಟ್ಟಿದ್ದು ಕೂಡಾ ಹಾರರ್ ಸಿನಿಮಾ ಚಂದ್ರಲೇಖ. ಈ ಚಿತ್ರದಲ್ಲಿ ಮತ್ತೊಮ್ಮೆ ಹಾರರ್ ಸಬ್ಜೆಕ್ಟ್ ಸಿಕ್ಕಿದೆ.

    ರವೀಶ್ ಆರ್.ಸಿ. ನಿರ್ಮಾಣದ ಚಿತ್ರಕ್ಕೆ ಅಕ್ಷಯ್ ನವೀನ್ ಸಹ ನಿರ್ಮಾಪಕರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ದಿನೇಶ್ ಬಾಬು ಅವರದ್ದು.

  • ರಾಜ್ಯೋತ್ಸವಕ್ಕೆ ಶ್ರದ್ಧಾ-ಶಾನ್ವಿ ಕೊಡುಗೆ ಏನು..?

    shraddha shanvi's gift for rajyotsava

    ಕನ್ನಡ ರಾಜ್ಯೋತ್ಸವಕ್ಕೆ ಎಲ್ಲರೂ ಒಂದಲ್ಲ ರೀತಿಯಲ್ಲಿ ತಯಾರಾಗುತ್ತಾರೆ. ಚಿತ್ರರಂಗದವರಂತೂ ವಿಶೇಷವಾಗಿಯೇ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೆ. ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾಸ್ತವ್ ಕನ್ನಡ ರಾಜ್ಯೋತ್ಸವಕ್ಕೆ ನಮಿಸುತ್ತಿರುವ ರೀತಿಯೇ ವಿಶೇಷ.

    ಇಬ್ಬರೂ ಸೇರಿಕೊಂಡು ಒಂದು ವಿಡಿಯೋ ಮಾಡಿದ್ದಾರೆ. ಡಾ.ರಾಜ್, ವಿಷ್ಣು, ಶಂಕರ್‍ನಾಗ್, ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಟ್ಟು 14 ಕನ್ನಡ ಕಲಾವಿದರ ಹಾಡುಗಳ ತುಣುಕುಗಳಿಗೆ ಸ್ಟೆಪ್ ಹಾಕಿದ್ದಾರೆ. 

    ಒಬ್ಬೊಬ್ಬ ನಟನ ಸ್ಟೆಪ್ 10 ಸೆಕೆಂಡ್‍ಗಳಲ್ಲಿ ಬಂದು ಹೋಗುತ್ತೆ. ಹಾಡಿಗೆ ತಕ್ಕಂತ ಕಾಸ್ಟ್ಯೂಮ್ ಕೂಡಾ ಮಾಡಿಕೊಂಡಿದ್ದಾರೆ ಶ್ರದ್ಧಾ ಮತ್ತು ಶಾನ್ವಿ. ಇವರ ಜೊತೆ ಕಾಮಿಡಿ ಕಲಾವಿದ ಪ್ರದೀಪ್ ಕೂಡಾ ಇದ್ದಾರೆ. ಇದೇ ದಿನ ವಿಡಿಯೋ ಬಿಡುಗಡೆಯಾಗುತ್ತಿದೆ.

  • ಶಾನ್ವಿ ಮತ್ತೊಮ್ಮೆ ದೆವ್ವದ ಚಿತ್ರದಲ್ಲಿ..

    ಶಾನ್ವಿ ಮತ್ತೊಮ್ಮೆ ದೆವ್ವದ ಚಿತ್ರದಲ್ಲಿ..

    ಶಾನ್ವಿ ಶ್ರೀವಾತ್ಸವ್. ನೋಡೋಕೆ ಅದೆಷ್ಟೇ ಮುದ್ದು ಮುದ್ದಾಗಿದ್ದರೂ.. ದೆವ್ವಕ್ಕೂ ಅವರಿಗೂ ವಿಚಿತ್ರ ನಂಟು. ಮೊದಲು ನಟಿಸಿದ ಚಂದ್ರಲೇಖ ಚಿತ್ರದಿಂದ ಹಿಡಿದು ಶಾನ್ವಿ ನಟಿಸಿದ ಬಹುತೇಕ ಚಿತ್ರಗಳಲ್ಲಿ ಅವರಿಗೆ ದೆವ್ವದ ವೇಷ ಹಾಕಿಸಲಾಗಿದೆ. ಈಗ ಬರುತ್ತಿರೋ ಚಿತ್ರದಲ್ಲೂ ಇರೋದು ದೆವ್ವದ ಕಥೆಯೇ. ಚಿತ್ರದ ಹೆಸರು ಕಸ್ತೂರಿ ಮಹಲ್.

    ಹಾರರ್ ಕಥೆಯನ್ನೂ ಹೀಗೂ ಮಾಡಬಹುದು ಎಂದು ಪ್ರೇಕ್ಷಕ ಥ್ರಿಲ್ಲಾಗುತ್ತಾನೆ. ಚಿತ್ರದಲ್ಲಿ ಬುದ್ದಿವಂತ ದೆವ್ವ ಏನೇನೆಲ್ಲ ಆಟವಾಡುತ್ತೆ ಅನ್ನೋ ಕಥೆ ಚಿತ್ರದಲ್ಲಿದೆ ಎಂದಿದೆ ಚಿತ್ರತಂಡ.

    ಅಂದಹಾಗೆ ಈ ಚಿತ್ರಕ್ಕೆ ದಿನೇಶ್ ಬಾಬು ನಿರ್ದೇಶಕರು. ಅವರಿಗೆ ಇದು 50ನೇ ಸಿನಿಮಾ. ರವೀಶ್ ಆರ್.ಸಿ. ನಿರ್ಮಾಣದ ಚಿತ್ರದಲ್ಲಿ ಶಾನ್ವಿ ಜೊತೆ ರಂಗಾಯಣ ರಘು, ಸ್ಕಂದ ಅಶೋಕ್, ವತ್ಸಲಾ ಮೋಹನ್, ಶ್ರುತಿ ಪ್ರಕಾಶ್, ನೀನಾಸಂ  ಅಶ್ವತ್ಥ್, ಕಾಶಿಮಾ ಮೊದಲಾದವರು ನಟಿಸಿದ್ದಾರೆ.

  • ಶಾನ್ವಿ ಹೀರೋ ರಕ್ಷಿತ್ ಶೆಟ್ಟಿ ಅಲ್ಲ.. ಲೂನಾ..!

    shanvi srivatsav talks about her movie avana srimananrayana

    ಅವನೇ ಶ್ರೀಮನ್ನಾರಾಯಣ ಚಿತ್ರದ ಹೀರೋಯಿನ್ ಶಾನ್ವಿ ಶ್ರೀವಾಸ್ತವ್. ಚಿತ್ರದ ಹೀರೋ ರಕ್ಷಿತ್ ಶೆಟ್ಟಿ. ಆದರೆ, ಸಿನಿಮಾದಲ್ಲಿ ಶಾನ್ವಿ ಅತೀ ಹೆಚ್ಚು ಜೊತೆಯಲ್ಲಿರೋದು ಲೂನಾದ ಜೊತೆಗಂತೆ. ಲಕ್ಷ್ಮೀ ಅನ್ನೋ ಹೆಸರಿನ ಬುದ್ದಿವಂತ, ಮೆಚ್ಯೂರ್ಡ್ ಹುಡುಗಿಯ ಪಾತ್ರ ಮಾಡುತ್ತಿರುವ ಶಾನ್ವಿ, ನನ್ನ ಜೊತೆ ಈ ಚಿತ್ರದಲ್ಲಿ ಲೂನಾ ಪ್ರಮುಖ ಆಕರ್ಷಣೆ ಎಂದಿದ್ದಾರೆ.

    ಸಿನಿಮಾ ತಡವಾಗಿದೆಯಾದರೂ, ಒಂದೊಳ್ಳೆ ಸಿನಿಮಾ. ಇದಕ್ಕಾಗಿ ಲೇಟ್ ಆಗಿದ್ದಕ್ಕೂ ಬೇಸರವೇನಿಲ್ಲ. ಚಿತ್ರದ ಕಥೆ ಪವರ್‍ಫುಲ್ ಆಗಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ರಕ್ಷಿತ್ ಶೆಟ್ಟಿ ಜೊತೆಗೆ ಇಷ್ಟು ಬೇಗ ನಟಿಸುವ ಚಾನ್ಸ್ ಸಿಗುತ್ತೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ ಶಾನ್ವಿ.

    ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ಮತ್ತು ಹೆಚ್.ಕೆ.ಪ್ರಕಾಶ್ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಸಚಿನ್ ರವಿ ನಿರ್ದೇಶಕ. ಚಿತ್ರದ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ.

  • ಶಾನ್ವಿಯ ಎಳನೀರು ಚಾಲೆಂಜ್ ಏನ್ ಗೊತ್ತಾ..?

    shanvi srivatsav's tender coconut water

    ಕ್ಯೂಟ್ ಹುಡುಗಿ ಶಾನ್ವಿ ಶ್ರೀವಾಸ್ತವ, ಹೊಸದೊಂದು ಚಾಲೆಂಜ್ ಹಾಕಿದ್ದಾರೆ. ಅದು ಎಳನೀರು ಚಾಲೆಂಜ್. ಚಾಲೆಂಜ್ ಇಷ್ಟೆ, ಎಳನೀರನ್ನು ಸ್ಟ್ರಾ ಬಳಸದೆ ಕುಡಿಯಬೇಕು.. ಅಷ್ಟೆ.

    ನನಗೂ ಗೊತ್ತಿರಲಿಲ್ಲ, ನನ್ನ ಫ್ರೆಂಡ್ ಒಬ್ಬರು ಚಾಲೆಂಜ್ ಮಾಡಿದ್ರು. ಮೊದಲ ನಾಲ್ಕಾರು ಸಲ ಎಳನೀರನ್ನು ಮೈಮೇಲೆಲ್ಲ ಚೆಲ್ಲಿಕೊಂಡೆ.. ಆನಂತರ ಪ್ರಾಕ್ಟೀಸ್ ಆಯ್ತು. ಮೊದಮೊದಲು ಅದು ತಮಾಷೆಯಾಗಿಯೇ ಇತ್ತು. ಆದರೆ, ಸೀರಿಯಸ್ಸಾಗಿ ಯೋಚನೆ ಮಾಡಿದಾಗ, ಸ್ಟ್ರಾ ಬಳಸೋದನ್ನು ನಿಲ್ಲಿಸಿದ್ರೆ ಎಷ್ಟೊಂದು ಪ್ಲಾಸ್ಟಿಕ್ ಬಳಕೆ ತಪ್ಪಿಸಬಹುದಲ್ವಾ ಅನ್ನಿಸ್ತು. ಹೀಗಾಗಿ ಈ ಎಳನೀರು ಚಾಲೆಂಜ್ ಎಂದಿದ್ದಾರೆ ಶಾನ್ವಿ.

    ತಮ್ಮ ಆನ್‍ಲೈನ್ ಪೇಜ್‍ನಲ್ಲಿ ಎಳನೀರನ್ನು ಸ್ಟ್ರಾ ಇಲ್ಲದೆ ಕುಡಿಯುತ್ತಿವ ವಿಡಿಯೋ ಹಾಕಿದ್ದಾರೆ. ಅವರು ಈ ಚಾಲೆಂಜ್ ಹಾಕಿರೋದು ತಮ್ಮ ಸೋದರಿ ವಿದಿಷಾಗೆ, ನಂತರ ಶೃತಿ ಹರಿಹರನ್, ರಕ್ಷಿತ್ ಶೆಟ್ಟಿ, ಸಂಯುಕ್ತಾ ಹೆಗ್ಡೆ, ಮನೋರಂಜನ್ ರವಿಚಂದ್ರನ್, ರಾಧಿಕಾ ಪಂಡಿತ್ ಹಾಗೂ ಆಕಾಂಕ್ಷಾ ಸಿಂಗ್‍ಗೆ.

    ನಾವು ದಿನಕ್ಕೆ ಎಷ್ಟು ಪ್ಲಾಸ್ಟಿಕ್‍ನ್ನ ರಸ್ತೆಗೆ ಎಸೆಯುತ್ತೇವೆ ಅಂತಾ ನೆನೆಸ್ಕೊಂಡ್ರೆ ಶಾಕ್ ಆಗುತ್ತೆ. ಹಸು, ನಾಯಿ, ಮೀನುಗಳನ್ನು ಕೊಲ್ಲುವ  ಈ ಪ್ಲಾಸ್ಟಿಕ್ ಹಂತ ಹಂತವಾಗಿ ಮನುಷ್ಯರನ್ನೇ ಕೊಲ್ಲುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಅನ್ನಿಸ್ತು ಅಷ್ಟೆ ಎಂದಿದ್ದಾರೆ ಶಾನ್ವಿ. 

    ಪ್ಲಾಸ್ಟಿಕ್ ವಿರುದ್ಧ ಅಭಿಯಾನಕ್ಕೆ ನೀವೂ ರೆಡಿ ಇದ್ದೀರಾದರೆ, ಎಳನೀರು ಚಾಲೆಂಜ್‍ನ್ನು ನೀವೂ ಟ್ರೈ ಮಾಡಬಹುದು.

  • ಶೂಟಿಂಗ್ ಎಡವಟ್ಟು : ಶಾನ್ವಿ ಶ್ರೀವಾತ್ಸವ್‍ಗೆ ರೆಸ್ಟ್

    ಶೂಟಿಂಗ್ ಎಡವಟ್ಟು : ಶಾನ್ವಿ ಶ್ರೀವಾತ್ಸವ್‍ಗೆ ರೆಸ್ಟ್

    ನಟಿ ಶಾನ್ವಿ ಶ್ರೀವಾತ್ಸವ್ ಬ್ಯಾಂಗ್ ಚಿತ್ರದ ಚಿತ್ರೀಕರಣದ ವೇಳೆ ಅನಾರೋಗ್ಯಕ್ಕೊಳಗಾಗಿದ್ದಾರೆ. ಚಿತ್ರೀಕರಣದ ವೇಳೆ ಸಡನ್ನಾಗಿ ಕುಸಿದು ಬಿದ್ದ ಶಾನ್ವಿ ಅವರನ್ನು ಚಿತ್ರತಂಡ  ಆಸ್ಪತ್ರೆಗೆ ಸೇರಿಸಿತು. ಯಾವುದೇ ಅಪಘಾತ ಆಗಿಲ್ಲ. ಆದರೆ, ಸುರಿಯುವ ಮಳೆಯಲ್ಲಿ ನೀರಿನಲ್ಲಿ ನೆನೆಯುತ್ತಲೇ ಸತತ 8 ಗಂಟೆ ಚಿತ್ರೀಕರಣದಲ್ಲಿದ್ದ ಕಾರಣ, ಆರೋಗ್ಯ ಕೈ ಕೊಟ್ಟಿದೆ. ಸದ್ಯಕ್ಕೆ ಶಾನ್ವಿ ಅವರಿಗೆ ಒಂದು ವಾರ ಬೆಡ್ ರೆಸ್ಟ್ ಹೇಳಿದ್ದಾರೆ ವೈದ್ಯರು.

    ಕನ್ನಡ ಚಿತ್ರರಸಿಕರ ಪಾಲಿನ ಬ್ಯೂಟಿಫುಲ್ ದೆವ್ವ ಶಾನ್ವಿ ಶ್ರೀವಾತ್ಸವ್, ಕನ್ನಡದಲ್ಲಿ ಬ್ಯುಸಿಯಾಗಿರೋ ಹೀರೊಯಿನ್. ಶ್ರೀಗಣೇಶ್ ನಿರ್ದೇಶನದ ಬ್ಯಾಂಗ್ ಚಿತ್ರದಲ್ಲಿ ಹೀರೋಯಿನ್. ಬ್ಯಾಂಗ್ ಮೂಲಕ ಇದೇ ಮೊದಲ ಬಾರಿಗೆ ರಘು ದೀಕ್ಷಿತ್ ಕೂಡಾ ನಟರಾಗಿ ಎಂಟ್ರಿ ಕೊಡ್ತಿದ್ದಾರೆ.

  • ಶ್ರೀಮನ್ನಾರಾಯಣನಾದ ರಕ್ಷಿತ್ ಶೆಟ್ಟಿ

    avane srimannarayana launched

    ಕಿರಿಕ್ ಪಾರ್ಟಿಯ ನಂತರ ಹೆಚ್ಚೂ ಕಡಿಮೆ ಒಂದು ವರ್ಷ ವಿಶ್ರಾಂತಿ ತೆಗೆದುಕೊಂಡಿದ್ದ ರಕ್ಷಿತ್ ಶೆಟ್ಟಿ ಕಡೆಗೂ ಹೊಸ ಸಿನಿಮಾ ಶುರು ಮಾಡಿದ್ದಾರೆ. ವಿಶ್ರಾಂತಿ ಎಂದರೆ, ವಿಶ್ರಾಂತಿಯೇನೂ ಅಲ್ಲ. ಸ್ಕ್ರಿಪ್ಟ್ ವರ್ಕ್‍ನಲ್ಲಿ ಬ್ಯುಸಿಯಾಗಿದ್ದರು. ಅಷ್ಟೆ. ಆದರೆ, ಹೊಸ ಚಿತ್ರ ಯಾವುದೂ ಸೆಟ್ಟೇರಿರಲಿಲ್ಲ. 

    ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಬೆಂಗಳೂರಿನ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಾಯಕಿ ಶಾನ್ವಿ ಶ್ರೀವಾಸ್ತವ, ನಿರ್ದೇಶಕ ಸಚಿನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುನಿ, ಮೇಘನಾ ಗಾಂವ್ಕರ್ ಸೇರಿದಂತೆ ತಂಡದ ಸ್ನೇಹಿತರೆಲ್ಲ ಹಾಜರಿದ್ದು ಹೊಸ ಚಿತ್ರಕ್ಕೆ ಶುಭ ಹಾರೈಸಿದ್ರು.

    ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್‍ಗೆ ಜೋಡಿಯಾಗಿ ಇದು ಮೊದಲ ಸಿನಿಮಾ. ಇನ್ನು ಸಂಕಲನಕಾರರಾಗಿದ್ದ ನಿರ್ದೇಶಕ ಸಚಿನ್‍ಗೂ ಇದು ಮೊದಲ ಸಿನಿಮಾ. 80ರ ದಶಕದ ಕಥೆ ಹೊಂದಿರುವ ಚಿತ್ರಕ್ಕೆ, ವಿಶೇಷವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಲಾಗಿದೆ. ಆ ಡಿಸೈನ್‍ನ ಒಂದು ಲುಕ್‍ನಲ್ಲಿ ಶಾನ್ವಿ ಕಂಗೊಳಿಸುತ್ತಿದ್ದರು.

  • ಸ್ವೀಟ್ ಘೋಸ್ಟ್ ಕನ್ನಡಕ್ಕೆ ಶುಭ ಕೋರಿದ ಕನ್ನಡಿಗರು

    shanvi's sweet letter

    ನಾನು ಶಾನ್ವಿ ಶ್ರೀವಾತ್ಸವ್. ಚಂದ್ರಲೇಖದಿAದ ನನ್ನ ಸಿನಿ ಜರ್ನಿ ಸ್ಟಾರ್ಟ್ ಆಯ್ತು. ಮೊದಲ ಒಂದು ವಾರ ಕನ್ನಡದಲ್ಲಿ ಯಾರು ಏನು ಮಾತಾಡ್ತಿದ್ದಾರೆ ಎಂದು ಗೊತ್ತಾಗುತ್ತಿರಲಿಲ್ಲ. ತುಂಬಾ ಭಯ ಆಗ್ತಾ ಇತ್ತು. ಹಾಗೇ ಸ್ವಲ್ಪ ಎಕ್ಸೆöÊಟ್‌ಮೆಂಟ್ ಕೂಡಾ ಇತ್ತು. ದೆವ್ವದ ಗೆಟಪ್ ನೋಡಿ ಎಲ್ಲರೂ ನನ್ನನ್ನು ಸ್ವೀಟ್ ಘೋಸ್ಟ್ ಅಂತಾ ಕರೆಯೋಕೆ ಶುರು ಮಾಡಿದ್ರು. ಇಷ್ಟ ಆಯ್ತು. ಆದರೆ ಆ ಮೇಲೇ ಬರೀ ದೆವ್ವದ ಪಾತ್ರಗಳೇ ಬಂದ್ವು. ನಿಧಾನವಾಗಿ ಎಲ್ಲ  ಚೇಂಜ್ ಆಯ್ತು. ಆಡಿಯನ್ಸ್ಗೆ ಸ್ವಲ್ಪ ಟೈಂ ಬೇಕಲ್ವಾ..? ಅಕ್ಸೆಪ್ಟ್ ಮಾಡೋಕೆ..

    ಹೀಗೆ ಶುರುವಾಗುತ್ತದೆ ಶಾನ್ವಿ ಶ್ರೀವಾಸ್ತವ್ ಪತ್ರ. ಅವರು ಇದೆಲ್ಲವನ್ನೂ ಬರೆದಿರೋದು ಇಂಗ್ಲಿಷಿನಲ್ಲಿ. ಆದರೆ, ಆ ಇಂಗ್ಲಿಷಿನಲ್ಲಿರೋದು ಕನ್ನಡ. ಕನ್ನಡವನ್ನು ಇಂಗ್ಲಿಷ್‌ನಲ್ಲಿಯೇ ಬರೆದುಕೊಂಡು ತಮ್ಮದೇ ಧ್ವನಿಯಲ್ಲಿ ಓದ ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರಿರುವ ಶಾನ್ವಿ ಶ್ರೀವಾತ್ಸವ್‌ಗೆ ಕನ್ನಡಿಗರೂ ಶುಭ ಕೋರಿದ್ದಾರೆ. ಏಕೆಂದರೆ ಶಾನ್ವಿಯ ಹುಟ್ಟೂರು ಕರ್ನಾಟಕ ಅಲ್ಲ. ಉತ್ತರ ಪ್ರದೇಶದ ಕಾಶಿಯವರು. ಅದೇ.. ನರೇಂದ್ರ ಮೋದಿಯ ಲೋಕಸಭಾ ಕ್ಷೇತ್ರ ವಾರಾಣಸಿ ಇದ್ಯಲ್ಲ. ಅಲ್ಲಿಯವರು. ಮಾತೃಭಾಷೆ ಹಿಂದಿ. ಆದರೆ, ಕನ್ನಡದಲ್ಲಿಯೇ ಹೆಚ್ಚು ಗುರುತಿಸಿಕೊಂಡ ಶಾನ್ವಿ, ಈಗ ಕನ್ನಡದಲ್ಲೇ ಡಬ್ ಮಾಡಬಲ್ಲಷ್ಟು ಕನ್ನಡ ಕಲಿತಿದ್ದಾರೆ.

    ಮುಂದಿನ ತಿಂಗಳು ರಿಲೀಸ್ ಆಗುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರದ ಲಕ್ಷಿö್ಮÃ ಪಾತ್ರಕ್ಕೂ ಶಾನ್ವಿಯವರೇ ಡಬ್ ಮಾಡಿದ್ದಾರೆ. ಶಾನ್ವಿಯ ಕನ್ನಡ ಪ್ರೀತಿಗೆ ಶುಭ ಕೋರಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ಅವನೇ ಶ್ರೀಮನ್ನಾರಾಯಣದ ಲಕ್ಷಿö್ಮÃ ಕೂಡಾ ಪ್ರೇಕ್ಷಕರಿಗೆ ಇಷ್ಟವಾಗುತ್ತಾಳೆ ಎಂದಿದ್ದಾರೆ.

     

  • ಹಬ್ಬಕ್ಕೆ ಶಾನ್ವಿ ಶ್ರೀವಾಸ್ತವ್ ಲಕ್ಷ್ಮೀ ಕಟಾಕ್ಷ

    varmahalakshmi habba gift from avane srimananrayana

    ಅವನೇ ಶ್ರೀಮನ್ನಾರಾಯಣ ವರಮಹಾಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿಯನ್ನೇ ಮನೆ ಮನೆಗೆ ಕಳಿಸಿಕೊಟ್ಟಿದೆ. ಅದು ಶಾನ್ವಿ ಶ್ರೀವಾಸ್ತವ್ ರೂಪದಲ್ಲಿ. ಹಬ್ಬಕ್ಕೆ ವಿಶೇಷ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡ, ಶಾನ್ವಿ ಶ್ರೀವಾಸ್ತವ್ ಅವರನ್ನು ಲಕ್ಷ್ಮೀ ಸ್ವರೂಪಿಯಾಗಿ ಚಿತ್ರಿಸಿ ಪೋಸ್ಟರ್ ರಿಲೀಸ್ ಮಾಡಿದೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೆಚ್.ಕೆ.ಪ್ರಕಾಶ್ ಗೌಡ ನಿರ್ಮಾಣದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೀರೋ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಅವನೇ ಶ್ರೀಮನ್ನಾರಾಯಣ ಮಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

  • ಹಳೆಯ ಕನ್ನಡ ಚಿತ್ರಗಳನ್ನು ನೋಡಿ ಗೀತಾಗೆ ರೆಡಿಯಾದರಂತೆ ಶಾನ್ವಿ..!

    shanvi talks about geetha movie

    ಶಾನ್ವಿ ಶ್ರೀವಾಸ್ತವ್ ತೆರೆ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ ವರ್ಷವಾಗಿದೆ. 2018ರಲ್ಲಿ ದಿ ವಿಲನ್ ಚಿತ್ರದ ಹಾಡಿನಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದೇ ಕೊನೆ. ಅದಕ್ಕೂ ಮುನ್ನ ಅವರು 2017ರಲ್ಲಿ ಮಫ್ತಿ ಮತ್ತು ತಾರಕ್‍ನಲ್ಲಿ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಶಾನ್ವಿ ತೆರೆ ಮೇಲೆ ಕಾಣಿಸಿಲ್ಲ.

    ಈಗ ಸುದೀರ್ಘ ಗ್ಯಾಪ್ ನಂತರ ಈ ವಾರ ತೆರೆಗೆ ಬರುತ್ತಿದ್ದಾರೆ ಶಾನ್ವಿ. ಗೀತಾ ಚಿತ್ರದಲ್ಲಿ ಪ್ರಿಯಾ ಪಾತ್ರಧಾರಿಯಾಗಿ ಬರುತ್ತಿರುವ ಶಾನ್ವಿಗೆ, ಗಣೇಶ್ ಜೊತೆ ಇದು 2ನೇ ಸಿನಿಮಾ.

    ಈ ಚಿತ್ರದಲ್ಲಿ ನನ್ನದು ರೆಟ್ರೋ ಶೈಲಿಯ ಪಾತ್ರ. ಪಾತ್ರದಲ್ಲಿ ಎಲ್ಲ ಎಮೋಷನ್ಸ್ ಇವೆ. ಅದರಲ್ಲೂ ಚಿತ್ರದಲ್ಲಿ ನನ್ನದು ಆಗಿನ ಕಾಲದ ಮಾಡರ್ನ್ ಯುವತಿಯ ಪಾತ್ರ. ಮೊದಲೇ ನಾನು ಕನ್ನಡದವಳಲ್ಲ. ಕನ್ನಡದಲ್ಲಿ ಅದರಲ್ಲೂ ಆ ಪ್ರದೇಶದಲ್ಲಿ ಆಗಿನ ಕಾಲದ ಯುವತಿಯರು ಹೇಗಿರುತ್ತಿದ್ದರೋ ಗೊತ್ತಿರಲಿಲ್ಲ. ಅದಕ್ಕಾಗಿ ಹಲವು ಕನ್ನಡ ಚಿತ್ರಗಳನ್ನು ನೋಡಿ, ಅದೇ ಶೈಲಿಯಲ್ಲಿ ಸಿದ್ಧಳಾದೆ ಎಂದಿದ್ದಾರೆ ಶಾನ್ವಿ ಶ್ರೀವಾಸ್ತವ್.

    ಚಿತ್ರದಲ್ಲಿ ದಪ್ಪನೆಯ ಹೇರ್ ಬ್ಯಾಂಡ್, ಕಣ್ಣಿಗೆ ಗಾಢವಾದ ಕಾಡಿಗೆ, ಐ ಲೈನರ್‍ಗಳಲ್ಲಿ ನಟಿಸಿದ್ದಾರೆ ಶಾನ್ವಿ.

    ವಿಜಯ್ ನಾಗೇಂದ್ರ ನಿರ್ದೇಶನದ ಗೀತಾ ಸಿನಿಮಾಗೆ ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಪಕರು.