` shivarajkumar, - chitraloka.com | Kannada Movie News, Reviews | Image

shivarajkumar,

  • ಸೆನ್ಸಾರ್‍ಗೆ ಹೊರಟ ವಿಲನ್

    the villain reached censor office

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ದಿ ವಿಲನ್. ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾದ ಹಾಡುಗಳು ಈಗಾಗಲೇ ರಿಲೀಸ್ ಆಗಿ ಜನಪ್ರಿಯಗೊಂಡಿವೆ. ಒಂದೊಂದು ಹಾಡೂ ಒಂದೊಂದು ರೀತಿ ಸ್ಪೆಷಲ್. ಹೀಗಿರುವಾಗಲೇ ಶೀಘ್ರದಲ್ಲೇ ರಿಲೀಸ್ ಡೇಟ್ ಪ್ರಕಟಿಸೋದಾಗಿ ಘೋಷಿಸಿದ್ದಾರೆ ನಿರ್ದೇಶಕ ಪ್ರೇಮ್.

    ಕಾಯುವಿಕೆ ಮುಗಿಯಿತು. ಅಭಿಮಾನಿಗಳೇ.. ಉಸಿರು ಬಿಗಿ ಹಿಡಿದುಕೊಳ್ಳಿ. ಚಿತ್ರ ಸೆನ್ಸಾರ್‍ಗೆ ಹೊರಟಿದೆ. ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ ಜೋಗಿ ಪ್ರೇಮ್.

    ಸಿ.ಆರ್. ಮನೋಹರ್ ನಿರ್ಮಾಣದ ದಿ ವಿಲನ್ ಚಿತ್ರಕ್ಕೆ ಆ್ಯಮಿ ಜಾಕ್ಸನ್ ನಾಯಕಿ. ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿರುವ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಎಂಬುದು ನಿರ್ವಿವಾದ.

  • ಸೆಪ್ಟೆಂಬರ್ 20ಕ್ಕೆ ದಿ ವಿಲನ್ ಹಬ್ಬ..?

    the villain to release on sep 20th

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಸಿನಿಮಾ, ರಿಲೀಸ್‍ಗೂ ಮೊದಲೇ ಹವಾ ಸೃಷ್ಟಿಸಿದೆ. ರಾಜ್ಯದ ಹಲವಾರು ಥಿಯೇಟರುಗಳಲ್ಲಿ ಈಗಾಗಲೇ ದಿ ವಿಲನ್ ನಮ್ಮ ಥಿಯೇಟರ್‍ಗೇ ಬರಲಿದೆ ಎಂಬ ಪೋಸ್ಟರ್‍ಗಳು ರಾರಾಜಿಸುತ್ತಿವೆ. ನಿರ್ಮಾಪಕ ಸಿ.ಆರ್.ಮನೋಹರ್ ಆಗಲೀ, ನಿರ್ದೇಶಕ ಪ್ರೇಮ್ ಆಗಲೀ, ಇದುವರೆಗೆ ಯಾವುದೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಚಿತ್ರಲೋಕಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ದಿ ವಿಲನ್ ಸಿನಿಮಾ, ಸೆಪ್ಟೆಂಬರ್ 20ಕ್ಕೆ ರಿಲೀಸ್ ಆಗಲಿದೆ.

    ಅಲ್ಲಿಗೆ ಗೌರಿ ಗಣೇಶ ಹಬ್ಬವನ್ನು ಮುಗಿಸಿಕೊಂಡೇ ದಿ ವಿಲನ್ ಬರಲಿದ್ದಾನೆ. ಹಾಗೆಂದು ಸೆಪ್ಟೆಂಬರ್ 20ಕ್ಕೆ ರಿಲೀಸ್ ಆದರೂ, ದಿ ವಿಲನ್‍ಗೆ ಲಾಭಗಳೂ ಇವೆ. ಗೌರಿ ಗಣೇಶ ಹಬ್ಬದಂತೆಯೇ, 20ರ ನಂತರವೂ ಸಾಲು ಸಾಲು ರಜೆ ಸಿಗಲಿವೆ. ಸೆಪ್ಟೆಂಬರ್ 21ಕ್ಕೆ ಮೊಹರಂ ಹಬ್ಬ. ಸೆಪ್ಟೆಂಬರ್ 22, 4ನೇ ಶನಿವಾರ, ಬ್ಯಾಂಕ್ ರಜಾ. ಸೆಪ್ಟೆಂಬರ್ 21 ಭಾನುವಾರ. ಅಲ್ಲಿಗೆ ದಿ ವಿಲನ್‍ಗೆ ರಜೆಗಳ ಸೌಭಾಗ್ಯವೂ ಸಿಗಲಿದೆ. ಅಬ್ಬರಕ್ಕೆ ಅಷ್ಟು ಸಾಕಲ್ಲವೇ.

    ಆ್ಯಮಿ ಜಾಕ್ಸನ್ ನಾಯಕಿಯಾಗಿರುವ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಅಕ್ಷರಶಃ ಮೋಡಿ ಮಾಡಿಬಿಟ್ಟಿವೆ. ಸಿನಿಮಾ ರಿಲೀಸ್‍ಗೆ ಅಭಿಮಾನಿಗಳೇ ಏನು, ಚಿತ್ರರಂಗವೇ ಚಾತಕ ಪಕ್ಷಿಯಂತೆ ಕಾಯುತ್ತಿದೆ.

  • ಸೆಪ್ಟೆಂಬರ್‍ನಲ್ಲಿ ವಿಲನ್, ಕೆಜಿಎಫ್ ಮುಖಾಮುಖಿ..?

    will the villain and kgf release together?

    ಶಿವರಾಜ್‍ಕುಮಾರ್, ಸುದೀಪ್, ಜೋಗಿ ಪ್ರೇಮ್ ಹಾಗೂ ನಿರ್ಮಾಪಕ ಸಿ.ಆರ್.ಮನೋಹರ್ ಕಾಂಬಿನೇಷನ್ ಸಿನಿಮಾ ದಿ ವಿಲನ್. ಶೂಟಿಂಗ್ ಮುಗಿಸಿ ಸೆನ್ಸಾರ್ ಮೆಟ್ಟಿಲೇರಿದೆ.

    ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಕಾಂಬಿನೇಷನ್‍ನ ಕೆಜಿಎಫ್ ಚಿತ್ರ ಕೂಡಾ ಶೂಟಿಂಗ್ ಮುಗಿಸಿ, ಎಡಿಟಿಂಗ್ ಫೈನಲ್ ಸ್ಟೇಜ್‍ನಲ್ಲಿದೆ.

    ಎರಡೂ ಕನ್ನಡದ ಬಹುನಿರೀಕ್ಷಿತ ಚಿತ್ರಗಳು. ಈ ಎರಡೂ ಚಿತ್ರಗಳು ಸೆಪ್ಟೆಂಬರ್‍ನಲ್ಲಿಯೇ ಮುಖಾಮುಖಿಯಾಗುವ ಸಾಧ್ಯತೆ ಇದೆ. ವಿಲನ್ ಚಿತ್ರದ ಆಡಿಯೋ ರಿಲೀಸ್‍ಗೆ ಭರ್ಜರಿ ವೇದಿಕೆ ಸಿದ್ಧವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲೇ ತೆರೆಗೆ ಬಂದರೆ ಅಚ್ಚರಿಯಿಲ್ಲ. ಕೆಜಿಎಫ್ ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಒಟ್ಟಿನಲ್ಲಿ ಸೆಪ್ಟೆಂಬರ್ ನಂತರ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳದ್ದೇ ಹಬ್ಬ.

  • ಸೋತಾಗ ನಾನಿದ್ದೇನೆ ಎಂದು ಬಂದ ಶಿವಣ್ಣ

    yogi dwarkish talks about ayushman bhava

    ಒಂದು ಸಿನಿಮಾ ಗೆದ್ದಾಗ ಹತ್ತಿರ ಬರುವವರೇ ಬೇರೆ.. ಆದರೆ, ಸೋತ ಬೇಸರದಲ್ಲಿರುವವರಿಗೆ ನಾನಿದ್ದೇನೆ ಎಂದು ಧೈರ್ಯ ತುಂಬುವುದೇ ಬೇರೆ. ದ್ವಾರಕೀಶ್ ಬ್ಯಾನರಿನಲ್ಲಿ ಬಂದ ಅಮ್ಮ ಐ ಲವ್ ಯು ಸಿನಿಮಾ, ಆ ಸಿನಿಮಾದ ಕಥೆ, ಸಂದೇಶ ಎಲ್ಲದರ ಬಗ್ಗೆಯೂ ಒಳ್ಳೆಯ ರಿವ್ಯೂ ಬಂತಾದರೂ ಬಾಕ್ಸಾಫೀಸ್‍ನಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಅದೇ ಬೇಸರದಲ್ಲಿದ್ದವರಿಗೆ ತಕ್ಷಣ ನೆನಪಾಗಿದ್ದು ಶಿವರಾಜ್ ಕುಮಾರ್.

    ಅಮ್ಮ ಐ ಲವ್ ಯು ಚಿತ್ರದ ಆಡಿಯೋ ರಿಲೀಸ್ ಮಾಡಿದ್ದ ಶಿವಣ್ಣ, ದ್ವಾರಕೀಶ್ ಬ್ಯಾನರ್‍ನಲ್ಲಿ ಸಿನಿಮಾ ಮಾಡುವ ಇಚ್ಚೆ ವ್ಯಕ್ತಪಡಿಸಿದ್ದರು. ಅದನ್ನು ನೆನಪಿಸಿಕೊಂಡು ಶಿವಣ್ಣರನ್ನು ಕಾಂಟ್ಯಾಕ್ಟ್ ಮಾಡಿದಾಗ ಯೆಸ್ ಎಂದ ಶಿವಣ್ಣ, ಪಿ.ವಾಸು ಅವರ ಕಥೆ ಕೇಳಿದ್ದ ಶಿವಣ್ಣ, ಅದನ್ನೇ ಸಿನಿಮಾ ಮಾಡಿ ಎಂದು ಯೋಗೀಶ್ ದ್ವಾರಕೀಶ್ ಅವರಿಗೆ ಹೇಳಿದರಂತೆ.

    ಗೆದ್ದಾಗ ಚಾನ್ಸ್ ಕೊಡುವುದು ಬೇರೆ. ಸೋತವರಿಗೆ ಅವಕಾಶ ಕೊಡುವುದು ಬೇರೆ ಎನ್ನುವ ಯೋಗೀಶ್ ದ್ವಾರಕೀಶ್, ಶಿವರಾಜ್ ಕುಮಾರ್ ಗುಣವನ್ನು ಕೊಂಡಾಡಿದ್ದಾರೆ. ಕೇವಲ 20 ನಿಮಿಷದಲ್ಲಿ ಇಡೀ ಮಾತುಕತೆ ಮುಗಿಸಿದ್ದರಂತೆ ಶಿವಣ್ಣ. ಅದೇ ಆಯುಷ್ಮಾನ್ ಭವ ಆಗಿ ರಿಲೀಸ್ ಆಗೋಕೆ ರೆಡಿಯಾಗಿದೆ.

  • ಸ್ಯಾಂಡಲ್ವುಡ್ ಸೆನ್ಸೇಷನ್ : ಶಿವಣ್ಣ-ದರ್ಶನ್ ಒಟ್ಟಿಗೇ ಸಿನಿಮಾ

    will shivanna and darshan act in a movie together

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೇ ಸಿನಿಮಾ ಮಾಡಿದ್ರೆ ಹೇಗಿರುತ್ತೆ..? ನಾವ್ ರೆಡಿ ಅಂದಿದ್ದಾರೆ ಶಿವಣ್ಣ  ಮತ್ತು ದರ್ಶನ್.

    ಒಂದೊಳ್ಳೆ ಕಥೆ, ಒಳ್ಳೆಯ ಡೈರೆಕ್ಟರ್ ಸಿಕ್ಕರೆ ಸಿನಿಮಾ ಮಾಡೋಕೆ ನಾನು ರೆಡಿ. ಕಾಲ ಕೂಡಿ ಬರಬೇಕು ಎಂದಿದ್ದಾರೆ ಶಿವಣ್ಣ. ನಮ್ಮನ್ನ ಹ್ಯಾಂಡಲ್ ಮಾಡೋ ಡೈರೆಕ್ಟರ್ ಇಲ್ಲ. ಸಿಕ್ಕರೆ ನಾನೂ ರೆಡಿ ಅಂದಿದ್ದಾರೆ ದರ್ಶನ್.

    ಇದೆಲ್ಲವೂ ನಡೆದಿದ್ದು ಪಾರ್ವತಮ್ಮನವರ ಸಹೋದರನ ಮಗ ಧ್ರುವನ್ ಚಿತ್ರದ ಮುಹೂರ್ತದಲ್ಲಿ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮತ್ತು ದರ್ಶನ್ ಒಟ್ಟಿಗೇ ಬಂದರು. ಯುವ ತಾರೆಗಳಿಗೆ ಶುಭ ಹಾರೈಸಿದ್ರು. ಶಿವಣ್ಣ ಕ್ಲಾಪ್ ಮಾಡಿದ್ರೆ, ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದು ದರ್ಶನ್.

    ಕಾರ್ಯಕ್ರಮದ ನಡುವೆ ಪರಸ್ಪರ ಅಪ್ಪಿಕೊಂಡ ದರ್ಶನ್ ಮತ್ತು ಶಿವಣ್ಣ, ಕಾರ್ಯಕ್ರಮದುದ್ದಕ್ಕೂ ತರಲೆ, ತಮಾಷೆ ಮಾಡಿಕೊಂಡೇ ಇದ್ದರು. ಅಭಿಮಾನಿಗಳ ಪಾಲಿಗೆ ಇನ್ನೇನು ಬೇಕು..?

  • ಹರಕು ಬಾಯಿ ನಿರ್ದೇಶಕನಿಗೆ ಶಿವಣ್ಣ ಛಡಿಯೇಟು

    ಹರಕು ಬಾಯಿ ನಿರ್ದೇಶಕನಿಗೆ ಶಿವಣ್ಣ ಛಡಿಯೇಟು

    ಸಾಮಾನ್ಯವಾಗಿ ಶಿವಣ್ಣ ಸಿಟ್ಟಾಗೋದಿಲ್ಲ. ಎಂತೆಂತಹ ಸಂದರ್ಭದಲ್ಲೋ ಅವರು ಮನಸ್ಸಿನೊಳಗಿನ ಸಿಟ್ಟನ್ನು ಅದುಮಿಟ್ಟುಕೊಂಡು ಇರೋದನ್ನ ನೋಡಿದ್ದೇವೆ. ಅಂತಾದ್ದರಲ್ಲಿ ಶಿವಣ್ಣ ಇತ್ತೀಚೆಗೆ ಸಿಟ್ಟಾಗಿದ್ದರು. ಅವರ ಸಿಟ್ಟಿಗೆ ಕಾರಣವಾಗಿದ್ದವನು ಒಬ್ಬ ನಿರ್ದೇಶಕ. ಅದೂ ಕರ್ನಾಟಕದವನಲ್ಲ. ತೆಲುಗಿನವನು. ಹೆಸರು ಗೀತಾಕೃಷ್ಣ. ದಶಕಗಳಿಂದ ಇಂಡಸ್ಟ್ರಿಯಲ್ಲಿರೋ ಆತ ಡೈರೆಕ್ಟ್ ಮಾಡಿರೋದು ಮೂರು ಮತ್ತೊಂದು ಚಿತ್ರಗಳನ್ನ. ಯಾವುದೂ ಹಿಟ್ ಆಗಿಲ್ಲ.  ಅದರ ಮಧ್ಯೆ ಒಂದು ಚಿತ್ರಕ್ಕೆ ಅಲ್ಲಿ ಸ್ಟೇಟ್ ಅವಾರ್ಡ್ ತೆಗೆದುಕೊಂಡಿದ್ದಾನೆ. ಈತ ಇತ್ತೀಚೆಗೆ ಕನ್ನಡಿಗರನ್ನು ಕೆಣಕಿದ್ದ.

    ಅವನಿಗೆ ಯಾರೋ ಕನ್ನಡದ ನಟಿ ಹಾಸಿಗೆಗೆ ಕರೆದಿದ್ದಳಂತೆ. ಇವನು ಅಸಹ್ಯ ಎನ್ನಿಸಿ ಬೇಡ ಎಂದು ದೂರ ಓಡಿಬಂದನಂತೆ. ನಂತರ ಅವಳಿಗೇ ತನಗೆ ಅಸಿಸ್ಟೆಂಟ್ ಆಗಿರು ಎಂದು ಆಫರ್ ಕೊಟ್ಟನಂತೆ. ಅವಳು ಬರಲಿಲ್ಲವಂತೆ. ಥೂ.. ಕನ್ನಡದವರು ಅಸಹ್ಯ ಜನ ಎಂದಿದ್ದ ಆ ಗೀತಾಕೃಷ್ಣ. ಇಂತಹುದೇ ಮಾತುಗಳನ್ನು ಆತ ತಮಿಳು ಚಿತ್ರರಂಗಕ್ಕೂ ಹೇಳಿದ್ದ. ಆತ ಯಾವ ಚಿತ್ರಕ್ಕೆ ಕನ್ನಡಕ್ಕೆ ಬಂದಿದ್ದನೋ.. ಗೊತ್ತಿಲ್ಲ. ಆತನಿಗೆ ಯಾವ ನಟಿ ಹಾಸಿಗೆ ಆಫರ್ ಕೊಟ್ಟಳೋ.. ಗೊತ್ತಿಲ್ಲ. ಆತ ಹೇಳಲ್ಲ. ಆದರೆ ಕನ್ನಡದವರು ಅಸಹ್ಯ ಅನ್ನೋದನ್ನ ಮಾತ್ರ ಪದೇ ಪದೇ ಹೇಳಿ ಕೆಣಕಿದ್ದಾನೆ.

    ಇದಕ್ಕೆ ಸಿಟ್ಟಾದ ಶಿವಣ್ಣ ಇಂತಹವರ ಮಾತಿಗೆ ಬೆಲೆ ಕೊಡೋದು ಬೇಡ. ಕನ್ನಡ ಇಂಡಸ್ಟ್ರಿ ಏನು ಅನ್ನೋದು ಪ್ರೂವ್ ಆಗಿದೆ. ಕೆಜಿಎಫ್ 2 ನಂತರ ಇಡೀ ಜಗತ್ತು ಕನ್ನಡ ಇಂಡಸ್ಟ್ರಿಯತ್ತ ತಿರುಗಿ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಇಂತಹವರ ಬಗ್ಗೆ ಪ್ರತಿಕ್ರಿಯೆ ಕೊಡುತ್ತಾ ಕೂರೋದು ಬೇಡ. ನೆಗ್ಲೆಟ್ ಮಾಡೋಣ ಎಂದಿದ್ದಾರೆ ಶಿವಣ್ಣ. ಚಿತ್ರರಂಗ ಹೆಮ್ಮೆಯಿಂದ ಸಂಭ್ರಮಿಸುವ ಹೊತ್ತಿನಲ್ಲಿ ಬರುವ ಇಂತಹ ಹೇಳಿಕೆಗಳು ಇಂಡಸ್ಟ್ರಿಯನ್ನು ಹಾಳು ಮಾಡ್ತವೆ ಅನ್ನೋ ಕಳಕಳಿ ಶಿವಣ್ಣ ಮಾತಿನಲ್ಲಿತ್ತು.

    ಈ ಮಧ್ಯೆ ಹರಕುಬಾಯಿ ಡೈರೆಕ್ಟರ್ ಗೀತಾಕೃಷ್ಣ ಕ್ಷಮೆ ಕೇಳಿದ್ದಾರೆ. ಥೇಟು ವಿಜಯ್ ರಂಗರಾಜುವಿನ ಹಾಗೆ. ಆ ವಿಜಯ್ ರಂಗರಾಜು ಯಾರು ಗೊತ್ತಲ್ಲ.. ವಿಷ್ಣುವರ್ಧನ್ ಅವರ ಬಗ್ಗೆ ಕೀಳಾಗಿ ಮಾತನಾಡಿ, ನಂತರ ಕ್ಷಮೆ ಕೇಳಿದ್ದ ನಟ.

  • ಹರಿಹರನಾಗುತ್ತಿದ್ದಾರೆ ಶಿವರಾಜ್ ಕುಮಾರ್

    shivarajkumar next movie is hariharan

    ಶಿವರಾಜ್ ಕುಮಾರ್ ಹೊಸ ಚಿತ್ರದ ಹೆಸರು ಹರಿಹರ. ಕನ್ನಡ ಚಿತ್ರರಂಗದಲ್ಲಿ ಸತತವಾಗಿ ಬ್ಯುಸಿಯಿರುವ ಹ್ಯಾಟ್ರಿಕ್ ಹೀರೋ ಶಿವಣ್ಣ, ಈಗ ಹರಿಹರ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯಕ್ಕೆ ಟಗರು, ವಿಲನ್‍ಗಳಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್, ಇದಾದ ನಂತರ ಹರಿಹರ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಹರಿಹರ ಚಿತ್ರದ ನಿರ್ದೇಶಕ ಪ್ರಮೋದ್ ಚಕ್ರವರ್ತಿ.

    ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಪ್ರಮೋದ್, ಶಿವರಾಜ್ ಕುಮಾರ್ ಅವರನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಲಿದ್ದೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಇಂಡಿಯನ್ ಚಿತ್ರಕ್ಕೆ ಮೇಕಪ್ ಮಾಡಿದ್ದವರನ್ನು ಕರೆಸುವ ಆಲೋಚನೆಯಲ್ಲಿದ್ದಾರೆ. 

    ಚಿತ್ರದಲ್ಲಿ ಶಿವರಾಜ್ ಕುಮಾರ್‍ಗೆ ಮೂವರು ನಾಯಕಿಯರಿರುತ್ತಾರಂತೆ. ಯಾರು ಅನ್ನೋದು ಇನ್ನೂ ಫೈನಲ್ ಆಗಿಲ್ಲ. 

  • ಹಸಿರು ಹಂಚಿದರು ಜೋಗಿ ಪ್ರೇಮ್

    the villain team

    ಶಿವರಾಜ್ ಕುಮಾರ್ ಮತ್ತು ಸುದೀಪ್ ಎಂಬ ಎರಡು ಧೃವತಾರೆಗಳನ್ನು ಒಂದುಗೂಡಿಸಿ, ದಿ ವಿಲನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಪ್ರೇಮ್, ಈ ಬಾರಿಯ ದೀಪಾವಳಿಯನ್ನು ಹಸಿರು ಹಂಚುವ ಮೂಲಕ ಆಚರಿಸಿದ್ದಾರೆ. ದಿ ವಿಲನ್ ಚಿತ್ರತಂಡದ ಸದಸ್ಯರಿಗೆ ಸಸಿ ಹಂಚಿದ್ದಾರೆ.

    ಇದಕ್ಕೆಲ್ಲ ಯಾರು ಕಾರಣ ಎಂದರೆ, ಅವರ ಮಗನಂತೆ, ದೀಪಾವಳಿಗೆ ಯಾವ ಪಟಾಕಿ ಬೇಕು ಎಂದು ಕೇಳಿದಾಗ, ಅವರ ಮಗ ಬೇಡ ಪಪ್ಪಾ, ಪೊಲ್ಯೂಷನ್ ಆಗುತ್ತೆ. ಬೊಂಬೆ ತಂದುಕೊಡು ಎಂದನಂತೆ. ಮಗ ಸೂರ್ಯ ಹೇಳಿದ ಮಾತು ಪ್ರೇರನೆಯಾಯಿತು. ಹೀಗಾಗಿ ಚಿತ್ರತಂಡದವರಿಗೂ ಪಟಾಕಿ ಬದಲು, ಸಸಿ ಹಂಚಿದೆ ಎಂದಿದ್ದಾರೆ ಪ್ರೇಮ್.

  • ಹಳಬರಿಗೇ ಬಹುಪರಾಕ್ ಎಂದಿದ್ದೇಕೆ ಶಿವಣ್ಣ..?

    shivanna praises old technicians while watching ayushmanbhava

    ಆಯುಷ್ಮಾನ್ ಭವ ರಿಲೀಸ್ ಆಗಿದೆ. ಚಿತ್ರದಲ್ಲಿ ಗಮನ ಸೆಳೆದಿರುವ ಬಹುತೇಕ ಅಂಶಗಳಲ್ಲಿ ಗ್ರಾಫಿಕ್ಸ್ ಕೂಡಾ ಒಂದು. ಈ ಬಗ್ಗೆ ಕೇಳಿದರೆ ಶಿವಣ್ಣ ಕೂಡಾ ಥ್ರಿಲ್ಲಾಗುತ್ತಾರೆ. `ಹೌದು, ಗ್ರಾಫಿಕ್ಸ್ ಚೆನ್ನಾಗಿ ಬಂದಿದೆ. ಈಗ ಟೆಕ್ನಾಲಜಿಯೂ ಮುಂದುವರಿದಿರೋದ್ರಿAದ ಅದು ಸ್ಕಿçÃನ್ ಮೇಲೆ ಚೆನ್ನಾಗಿ ಕಾಣ್ತಿದೆ' ಎಂದಿದ್ದಾರೆ ಶಿವಣ್ಣ. ಆದರೆ, ಈ ವೇಳೆ ಶಿವಣ್ಣ ಹಳಬರನ್ನು ಅದರಲ್ಲೂ ಆಗಿನ ಕಾಲದ ಛಾಯಾಗ್ರಹಕರು ಬೆಸ್ಟ್ ಎನ್ನುವುದನ್ನು ಪದೇ ಪದೇ ನೆನಪಿಸಿಕೊಂಡರು.

    ಆಗ ಯಾವ ಟೆಕ್ನಾಲಜಿಯೂ ಇರಲಿಲ್ಲ. ಈಗ ಬಿಡಿ, ಗ್ರೀನ್ ಮ್ಯಾಟ್ ಮುಂದೆ ಏನೆಲ್ಲವನ್ನೂ ಸೃಷ್ಟಿಸಿಬಿಡ್ತಾರೆ. ಆದರೆ, ಶಂಕರ್ ಗುರು ಸಿನಿಮಾದಲ್ಲಿ ರಾಜ್ ಮೇಲೆ ರಾಜ್ ಕುಳಿತಂತೆ ಶಾಟ್ ತೆಗೆದಿದ್ದರು. ನೋ ಗ್ರಾಫಿಕ್ಸ್. ಮುತ್ತಣ್ಣ ಚಿತ್ರದಲ್ಲಿ ಡಬಲ್ ಆಕ್ಟ್ ಮಾಡುವಾಗಲೂ ಅಷ್ಟೆ, ಯಾವ ಟೆಕ್ನಾಲಜಿಯೂ ಇರಲಿಲ್ಲ. ಅಂಥಹ ತಂತ್ರಜ್ಞರ ಜೊತೆ ಕೆಲಸ ಮಾಡಿದ್ದೇನೆ ಎನ್ನುವುದೇ ನನ್ನ ಪುಣ್ಯ ಎಂದಿದ್ದಾರೆ ಶಿವರಾಜ್ ಕುಮಾರ್.

    ಶಿವಣ್ಣ ಜೊತೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದು, ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಇತರೆ ಪ್ರಧಾನ ಪಾತ್ರಗಳಲ್ಲಿದ್ದಾರೆ. ಯೋಗಿ ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ಪಿ.ವಾಸು ನಿರ್ದೇಶಕ. ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು ಆಯುಷ್ಮಾನ್ ಭವ.

  • ಹಳೆ ಸಂಪ್ರದಾಯಕ್ಕೆ ಮತ್ತೆ ಓಂಕಾರ ಬರೆದರಾ ಡಿಕೆ..?

    dk shivakumar's surprise visit to shivanna's house

    ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮನೆಗೆ ಕೆಪಿಸಿಸಿ ನೂತನ ಸಾರಥಿ ಡಿ.ಕೆ.ಶಿವಕುಮಾರ್ ದಿಢೀರನೆ ಭೇಟಿ ಕೊಟ್ಟಿದ್ದಾರೆ. ಪತ್ನಿ ಗೀತಾ ಚುನಾವಣೆಗೆ ನಿಂತಾಗ ಪ್ರಚಾರ ಮಾಡಿದ್ದು ಬಿಟ್ಟರೆ, ರಾಜಕೀಯದಿಂದ ಶಿವಣ್ಣ ದೂರ ದೂರ. ಪತ್ನಿಯ ಪರವಾಗಿ ಮಾಡಿದ ಪ್ರಚಾರವೂ ತಪ್ಪಾಯ್ತೇನೋ ಎಂಬ ಭಾವನೆ ಕಾಡ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿರೋ ಶಿವರಾಜ್ ಕುಮಾರ್ ಅವರಿಗೆ ಎಲ್ಲ ಪಕ್ಷಗಳಲ್ಲೂ ಆತ್ಮೀಯ ಮಿತ್ರರಿದ್ದಾರೆ. ಹೀಗಾಗಿಯೇ ಮೈದುನ ಮಧು ಬಂಗಾರಪ್ಪ ಪರವಾಗಲೀ, ಸುಮಲತಾ ಅಂಬರೀಷ್ ಪರವಾಗಲೀ ಪ್ರಚಾರಕ್ಕೆ ಹೋಗಲಿಲ್ಲ.

    ಹೀಗಿರುವಾಗ ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್ ಶಿವಣ್ಣನ ಮನೆಗೆ ಭೇಟಿ ಕೊಟ್ಟಿರುವುದು ಕುತೂಹಲ ಕೆರಳಿಸಿರುವುದು ನಿಜ. ಮೊದಲೆಲ್ಲ ರಾಜ್ಯದಲ್ಲಿ ಯಾರೇ ಸಿಎಂ ಆಗಲೀ, ಮಂತ್ರಿಯಾಗಲೀ, ಪಕ್ಷದ ನೇತೃತ್ವ ವಹಿಸಲಿ.. ಅಧಿಕಾರ ವಹಿಸಿದವರೆಲ್ಲ ಭೇಟಿ ಕೊಡುವ ಜಾಗಗಳಲ್ಲಿ ರಾಜ್ ಮನೆಯೂ ಇತ್ತು. ರಾಜ್ ಮರೆಯಾಗುವುದರೊಂದಿಗೆ ಆ ಸಂಪ್ರದಾಯಕ್ಕೆ ಬ್ರೇಕ್ ಬಿತ್ತು. ಆ ಹಳೆಯ ಸಂಪ್ರದಾಯಕ್ಕೆ ಡಿಕೆ ಮತ್ತೆ ನಾಂದಿ ಹಾಡುತ್ತಿದ್ದಾರಾ..? ಕುತೂಹಲದ ವಿಷಯ.

  • ಹೀರೋಯಿಸಂ ಸಾಕು.. ಕಥೆ, ಪಾತ್ರ ಗಟ್ಟಿ ಇರಬೇಕು : ಭಜರಂಗಿ ಶಿವಣ್ಣ

    ಹೀರೋಯಿಸಂ ಸಾಕು.. ಕಥೆ, ಪಾತ್ರ ಗಟ್ಟಿ ಇರಬೇಕು : ಭಜರಂಗಿ ಶಿವಣ್ಣ

    ಎಷ್ಟೂಂತ ಹೀರೋಯಿಸಂ ಸಿನಿಮಾ ಮಾಡೋದು... ಸಾಕು.. ಈ ಮಾತನ್ನು ಶಿವಣ್ಣ ಹೇಳ್ತಿರೋದು ಇದೇ ಮೊದಲಲ್ಲ. ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ನಿರ್ದೇಶಕರು ಅಭಿಮಾನಿಗಳನ್ನು ಮುಂದಿಟ್ಟು ಹೀರೋಯಿಸಂ ಮಾಡಿಸುತ್ತಾರೆ. ಹೀಗಾಗಿಯೇ ಇತ್ತೀಚೆಗೆ ಶಿವಣ್ಣ ಮನೆ, ರಸ್ತೆಗಳನ್ನು ಶುಚಿ ಮಾಡುವ ತೋಟಿಯ ಪಾತ್ರ ಮಾಡುವ ಆಸೆಯಿದೆ ಎಂದು ಹೇಳಿಕೊಂಡಿದ್ದರು. ಸಲಗ ಚಿತ್ರದ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ್ದರು ಶಿವಣ್ಣ. ಈಗ ಭಜರಂಗಿ 2 ಟ್ರೇಲರ್ ಬಂದಿದೆ.

    ಹೀರೋಯಿಸಂ ಸಾಕು ಎನ್ನುವ ಶಿವಣ್ಣ ಮಾತಿಗೆ ತಕ್ಕಂತೆಯೇ ಟ್ರೇಲರ್ ಹೊರಬಿದ್ದಿದೆ.

    `ಇದೊಂದು ಡಿವೋಷನಲ್ ಮಾಸ್ ಸಿನಿಮಾ. ದೇವರು ಮತ್ತು ರಾಕ್ಷಸರು, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಯುದ್ಧ. ಒಂದಿಷ್ಟು ಮಾಸ್ ಡೈಲಾಗ್, ಬಿಲ್ಡಪ್ ಇಟ್ಟು ಟ್ರೇಲರ್ ಮಾಡೋದು ಸಾಮಾನ್ಯ. ಆದರೆ, ಅದು ಕಥೆಗೆ ಸೂಕ್ತವಾಗಿದೆಯಾ ಅನ್ನೋದನ್ನೂ ನೋಡಬೇಕು. ಹೀಗಾಗಿ ಭಜರಂಗಿ ಟ್ರೇಲರ್‍ನ್ನು ಮ್ಯೂಸಿಕ್ ಇಟ್ಟುಕೊಂಡೇ ಮಾಡಿದ್ದೇವೆ. ಪ್ರತಿ ಪಾತ್ರವೂ ಹೈಲೈಟ್ ಆಗಿದೆ. ಖಡಕ್ ಆಗಿದೆ. ಹೊಸ ಪ್ರಯತ್ನದಲ್ಲಿ ನಾವು ಗೆದ್ದಿದ್ದೇವೆ' ಎಂದಿದ್ದಾರೆ ಶಿವಣ್ಣ.

    ಎ.ಹರ್ಷ ನಿರ್ದೇಶನದ ಭಜರಂಗಿ 2, ಭಜರಂಗಿಯ ಕಂಟಿನ್ಯೂ ಅಲ್ಲ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹೀರೋ, ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಒಬ್ಬರೇ ಆದರೂ.. ಇದು ಬೇರೆಯದೇ ಕಥೆ. ಜಾಕಿ ಭಾವನಾ, ಶೃತಿ, ಭಜರಂಗಿ ಲೋಕಿ ವಿಭಿನ್ನವಾಗಿ ಕಾಣಿಸುತ್ತಿರೋದು, ಟ್ರೇಲರ್‍ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸದ್ದು ಮಾಡ್ತಿರೋದು ನಿರ್ಮಾಪಕ ಜಯಣ್ಣ ಮತ್ತು ಭೋಗೇಂದ್ರ ಅವರಿಗೆ ಖುಷಿ ಕೊಟ್ಟಿರುವುದಂತೂ ಹೌದು.

  • ಹುಲಿರಾಯ ಬೈರಾಗಿ ಶಿವಣ್ಣ

    ಹುಲಿರಾಯ ಬೈರಾಗಿ ಶಿವಣ್ಣ

    ವಿಜಯ್ ಮೆಲ್ಟನ್ ನಿರ್ದೇಶನದ ಬೈರಾಗಿ ಚಿತ್ರದ ಕೆಲಸಗಳು ಸೂಪರ್ ಫಾಸ್ಟ್ ಆಗಿ ನಡೆಯುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಶುರುವಾದಂತೆ ತೋರುತ್ತಿದ್ದ ಬೈರಾಗಿ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಮುಗಿದೇ ಹೋಗಿದೆ. ಇದೇ ವೇಳೆ ಎಲ್ಲ ಕಡೆ ಥ್ರಿಲ್ ಹುಟ್ಟಿಸಿರುವುದು ಚಿತ್ರದ ಒಂದು ಪೋಸ್ಟರ್. ಅದರಲ್ಲಿ ಶಿವಣ್ಣ ಹುಲಿ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

    ಶಿವ ರಾಜ್‍ಕುಮಾರ್ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬಾರ್, ಶಶಿ ಕುಮಾರ್ ಕೂಡಾ ನಟಿಸುತ್ತಿದ್ದಾರೆ. ಹೀರೋಯಿನ್ ಅಂಜಲಿ. ಬೈರಾಗಿ ಶಿವಣ್ಣ ಅಭಿನಯದ 123ನೇ ಸಿನಿಮಾ. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಚಿತ್ರ ವರ್ಷಾಂತ್ಯಕ್ಕೆ ಕಂಪ್ಲೀಟ್ ರೆಡಿಯಾಗುವ ಸಾಧ್ಯತೆ ಇದೆ.

  • ಹೆಂಗೈತೆ ಟಗರು..? ಶಿವಣ್ಣ ಕೂಡಾ ವೇಯ್ಟಿಂಗ್..!

    shivarajkumar eager to watch tagaru

    ಟಗರು ಚಿತ್ರದ ಬಗ್ಗೆ ಪ್ರೇಕ್ಷಕರು, ಅಭಿಮಾನಿಗಳ ಜೊತೆ ಅಷ್ಟೇ ಕುತೂಹಲದಿಂದ ಕಾಯುತ್ತಿರುವ ಮತ್ತೊಬ್ಬ ವ್ಯಕ್ತಿ ಶಿವರಾಜ್‍ಕುಮಾರ್. ಕಡ್ಡಿಪುಡಿ ನನ್ನ ಚಿತ್ರಜೀವನದಲ್ಲಿಯೇ ಒಂದು ಫೈನೆಸ್ಟ್ ಸಿನಿಮಾ ಎಂದಿರುವ ಶಿವ ರಾಜ್‍ಕುಮಾರ್, ಸೂರಿ ಜೊತೆ ಆಗಲೇ ಮತ್ತೊಮ್ಮೆ ಕೆಲಸ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಅದು ಮತ್ತೊಮ್ಮೆ ಟಗರು ಚಿತ್ರದಲ್ಲಿ ನನಸಾಗಿದೆ.

    ಇದು ಕ್ರೈಂ ಚೇಸಿಂಗ್ ಸ್ಟೋರಿ ಎನ್ನುವ ಶಿವಣ್ಣ, ಚಿತ್ರದ ಕಥೆ, ಮೇಕಿಂಗ್ ಪ್ರತಿಯೊಂದು ಕೂಡಾ ವಿಭಿನ್ನ ಫೀಲ್ ಕೊಡುತ್ತೆ. ಚಿತ್ರದ ಸೌಂಡಿಂಗ್ ಕೂಡಾ ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಚರಣ್‍ರಾಜ್‍ರನ್ನು ಹೊಗಳಿದ್ದಾರೆ. ಸೂರಿ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ವಿಭಿನ್ನವಾದ ಸಿನಿಮಾ ಹುಟ್ಟೋದು ವಿಭಿನ್ನ ಜನ ಒಟ್ಟಿಗೇ ಸೇರಿದಾಗ ಮಾತ್ರ. ಅದು ಟಗರುನಲ್ಲಿ ಸಾಧ್ಯವಾಗಿದೆ. ಚಿತ್ರ ನೋಡೋಕೆ ನಾನೂ ಕುತೂಹಲದಿಂದ ಕಾಯತ್ತಿದ್ದೇನೆ ಎಂದು ನಿರೀಕ್ಷೆ ಬಿಚ್ಚಿಟ್ಟಿದ್ದಾರೆ ಶಿವಣ್ಣ.

  • ಹೊಸ ಇನ್ಸ್‍ಪೆಕ್ಟರ್ ವಿಕ್ರಂಗೆ ಹಳೆ ಇನ್ಸ್‍ಪೆಕ್ಟರ್ ವಿಕ್ರಂ ಸಾಥ್

    old inspector to release new inspecto's movie audio

    ಇನ್ಸ್‍ಪೆಕ್ಟರ್ ವಿಕ್ರಂ, ಪ್ರಜ್ವಲ್ ದೇವರಾಜ್, ಭಾವನಾ ಕಾಂಬಿನೇಷನ್ನಿನ ಹೊಸ ಸಿನಿಮಾ. ಕನ್ನಡ ಚಿತ್ರರಸಿಕರಿಗೆ ದಶಕಗಳ ಹಿಂದೆ ತೆರೆ ಕಂಡಿದ್ದ ಇನ್ಸ್‍ಪೆಕ್ಟರ್ ವಿಕ್ರಂ ಕೂಡಾ ನೆನಪಿನಲ್ಲಿದೆ. ಹಳೆ ಇನ್ಸ್‍ಪೆಕ್ಟರ್ ವಿಕ್ರಂ ಶಿವರಾಜ್ ಕುಮಾರ್.  ಈಗ ಹಳೆ ಮತ್ತು ಹೊಸ ಇನ್ಸ್‍ಪೆಕ್ಟರ್ ವಿಕ್ರಂ ಇಬ್ಬರೂ ಜೊತೆಯಾಗಿ ಬರಲಿದ್ದಾರೆ. ಮಾರ್ಚ್ 8ಕ್ಕೆ.

    ಮಾರ್ಚ್ 8ರಂದು ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದ್ದು, ಅದನ್ನು ರಿಲೀಸ್ ಮಾಡುವುದು ಶಿವಣ್ಣ. ವಿಖ್ಯಾತ್ ನಿರ್ಮಾಣದ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದು ಚಿತ್ರದ ವೋಲ್ಟೇಜ್ ಹೆಚ್ಚಿಸಿದ್ದಾರೆ. ನರಸಿಂಹ ಎಂಬುವರು ನಿರ್ದೇಶಿಸಿರುವ ಚಿತ್ರ ಪಕ್ಕಾ ಮಾಸ್ ಕಥೆ ಹೊಂದಿದೆಯಂತೆ.

  • ಹೊಸಬರ ಚಿತ್ರಗಳಲ್ಲಿ ನಾನಿದ್ದೇನೆ ಎನ್ನುವುದೇ ಹೆಮ್ಮೆ : ಶಿವಣ್ಣ

    ಹೊಸಬರ ಚಿತ್ರಗಳಲ್ಲಿ ನಾನಿದ್ದೇನೆ ಎನ್ನುವುದೇ ಹೆಮ್ಮೆ : ಶಿವಣ್ಣ

    ಶಿವರಾಜ್ ಕುಮಾರ್ ಚಿತ್ರರಂಗ ಪ್ರವೇಶಿಸಿ 35 ವರ್ಷ. ಹ್ಯಾಟ್ರಿಕ್ ಹೀರೋ ಆಗಿ ಬಂದು ಸೆಂಚುರಿ ಹೊಡೆದು ಕರುನಾಡು ಚಕ್ರವರ್ತಿಯಾಗಿರೋ ಶಿವರಾಜ್ ಕುಮಾರ್, ಈಗ ಎಲ್ಲರ ಪಾಲಿಗೆ ಶಿವಣ್ಣ. 1986ರಿಂದ 2021ರವರೆಗಿನ ನನ್ನದೇ ಜರ್ನಿ ನೋಡಿದರೆ, 35 ವರ್ಷ ಹೇಗೆ ಕಳೆಯಿತು ಅಂತಾನೇ ಗೊತ್ತಿಲ್ಲ. ಅಭಿಮಾನಿಗಳು ಕೈಬಿಟ್ಟಿಲ್ಲ. ಅವರ ಪ್ರೀತಿ ದುಪ್ಪಟ್ಟಾಗಿದೆ. ನಟರು, ನಿರ್ದೇಶಕರು, ನಿರ್ಮಾಪಕರು ಈ ಶಿವಣ್ಣನ ಕೈಬಿಟ್ಟಿಲ್ಲ. ಇನ್ನೂ 50 ವರ್ಷ ಮಾಡೋಣ ಬಿಡಿ ಎಂದಿದ್ದಾರೆ ಶಿವಣ್ಣ.

    ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ 35ನೇ ವರ್ಷದ ಸಂಭ್ರಮ ಆಚರಿಸಿದ ಶಿವರಾಜ್ ಕುಮಾರ್, ತಮಗೆ ಅಂಟಿಕೊಂಡಿರೋ ರೌಡಿಸಂ ಚಿತ್ರಗಳ ಬಗ್ಗೆ ಹೇಳುತ್ತಾ ``ಇಂತಹ ಪಾತ್ರ ಮಾಡಿಲ್ಲ ಅನ್ನೋ ಕೊರಗು ನನಗಂತೂ ಇಲ್ಲ. ಆದರೆ, ಜನ ನನ್ನ ರೌಡಿಸಂ ಚಿತ್ರಗಳನ್ನೇ ಹೆಚ್ಚು ಇಷ್ಟಪಡ್ತಾರೆ. ಹಾಗಂತ ಅದೇ ಮಾಡ್ತಾ ಹೋದರೆ ಇವನಿಗೆ ಮಾಡೋಕೆ ಬೇರೇನೂ ಕೆಲ್ಸ ಇಲ್ವಾ ಅಂತಾರೆ. ನನ್ನ ಕೌಟುಂಬಿಕ ಚಿತ್ರಗಳೂ ಹಿಟ್ ಆಗಿವೆ. ಲವ್ ಸಬ್ಜೆಕ್ಟ್, ಹಳ್ಳಿಗಾಡಿನ ಕಥೆಗಳೂ ಗೆದ್ದಿವೆ. ಇದನ್ನು ಬಿಟ್ಟು ಇನ್ನೂ ವಿಭಿನ್ನವಾದ ಪಾತ್ರಗಳನ್ನು ಕಾಯುತ್ತಿದ್ದೇನೆ’’ ಎಂದಿದ್ದಾರೆ.

    ಹೊಸಬರ ಚಿತ್ರಗಳೂ ಬರುತ್ತಿವೆ. ಕನ್ನಡ ಚಿತ್ರರಂಗವೂ ಬೆಳೆಯುತ್ತಿದೆ. ಹೊಸ ಹೊಸ ಪ್ರತಿಭಾಶಾಲಿಗಳು ಗಮನ ಸೆಳೆಯುತ್ತಿದ್ದಾರೆ. ಆ ಹೊಸಬರ ಆಯ್ಕೆಯಲ್ಲಿ ನಾನಿದ್ದೇನೆ. ಅವರ ಜೊತೆ ಕೆಲಸ ಮಾಡಿದ್ದೇನೆ ಎನ್ನುವುದೇ ನನಗೆ ಹೆಮ್ಮೆ ಎಂದಿದ್ದಾರೆ ಶಿವರಾಜ್ ಕುಮಾರ್.

  • ಹ್ಯಾಟ್ರಿಕ್ ಹೀರೋ ಜೊತೆ ಬಾಲಿವುಡ್ ಸೂಪರ್ ಸ್ಟಾರ್?

    shivarajkumar amitabh next movie together ?

    ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಎನರ್ಜಿ ಯುವ ನಟರಿಗೆ ಅಚ್ಚರಿ ಹುಟ್ಟಿಸೋದು ನಿಜ. ಅಂತಹ ಶಿವರಾಜ್ ಕುಮಾರ್ ಈಗ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರವೊಂದನ್ನ ಒಪ್ಪಿಕೊಂಡಿದ್ದಾರೆ. ಕಥೆ ಇಷ್ಟವಾಗಿದೆ. ಡೇಟ್ಸ್ ಕೂಡಾ ಕೊಟ್ಟಾಗಿದೆ. ಸಿನಿಮಾ ಸೆಟ್ಟೇರಬೇಕಷ್ಟೆ.

    ಈ ಚಿತ್ರದಲ್ಲಿ ಇನ್ನೂ ಒಂದು ಕುತೂಹಲವಿದೆ. ಎಲ್ಲವೂ ಅಂದುಕೊಂಡಂತೆ ಆಗಿಬಿಟ್ಟರೆ, ಶಿವಣ್ಣ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಆಗಿದೆಯಂತೆ. ಫೈನಲ್ ಆಗಿಲ್ಲ ಅಷ್ಟೆ.

    ಈ ಹಿಂದೆ ಅಮಿತಾಬ್ ಬಚ್ಚನ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಆಗಿಯೇ ಕಾಣಿಸಿಕೊಂಡಿದ್ದರು. ಶಿವರಾಜ್ ಕುಮಾರ್​ಗೂ ಅಮಿತಾಬ್ ಜೊತೆ ಅಭಿನಯದ ಹೊಸದಲ್ಲ. ಜ್ಯುವೆಲ್ಲರಿಯೊಂದರ ಜಾಹೀರಾತಿನಲ್ಲಿ ಅಮಿತಾಬ್ ಜೊತೆ ನಟಿಸಿದ್ದಾರೆ. ಈಗ, ಚಿತ್ರವೊಂದರಲ್ಲಿ ಇಬ್ಬರೂ ನಟಿಸುತ್ತಾರೆ ಎನ್ನುವ ಸುದ್ದಿಯೇ ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸುತ್ತಿದೆ.

     

  • ಹ್ಯಾಟ್ರಿಕ್ ಹೀರೋಗೆ ಬುಲ್‍ಬುಲ್ ಜೋಡಿ

    rachita ram in shivanna's next

    ಆರಂಭದಿಂದಲೂ ಸ್ಟಾರ್ ಚಿತ್ರಗಳಿಗೇ ಹೀರೋಯಿನ್ ಆಗುತ್ತಾ ಬಂದಿರೋ ರಚಿತಾ ರಾಮ್, ಈಗ ಕನ್ನಡದ ಸೆಂಚುರಿ ಸ್ಟಾರ್‍ಗೂ ಹೀರೋಯಿನ್ ಆಗುತ್ತಿದ್ದಾರೆ. ದ್ವಾರಕೀಶ್ ಬ್ಯಾನರ್‍ನಲ್ಲಿ ಇದೇ ಮೊದಲ ಬಾರಿಗೆ ನಟಿಸುತ್ತಿರುವ ಶಿವರಾಜ್‍ಕುಮಾರ್‍ಗೆ ರಚಿತಾ ರಾಮ್ ನಾಯಕಿ. ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯಂ, ಶಿವಲಿಂಗ ಖ್ಯಾತಿಯ ಪಿ.ವಾಸು ನಿರ್ದೇಶನದ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

    ಶಿವರಾಜ್‍ಕುಮಾರ್ ಜೊತೆ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾಗ ಅವರ ವ್ಯಕ್ತಿತ್ವ ಅರ್ಥವಾಯಿತು. ಇವರ ಜೊತೆಗೆ ನಟಿಸಲೇಬೇಕು ಎಂದು ನಿರ್ಧರಿಸಿದೆ. ಅದಾದ ಕೆಲವೇ ದಿನಗಳಲ್ಲಿ ರುಸ್ತುಂ ಚಿತ್ರದಲ್ಲಿ ಅವಕಾಶ ಬಂತು. ಈಗ.. ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಅವರಿಗೇ ಜೋಡಿಯಾಗಿ ನಟಿಸುತ್ತಿದ್ದೇನೆ. ಹೀಗಾಗಿ ಇದೊಂದು ಸ್ಪೆಷಲ್ ಸಿನಿಮಾ ಎಂದಿದ್ದಾರೆ ರಚಿತಾ ರಾಮ್.

    ವಾಸು ಅವರು ರಚಿತಾ ಅವರಿಗೆ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದಾಗ ರಚಿತಾ ಪಾತ್ರದೊಳಗೇ ಜಾರಿಬಿಟ್ಟರಂತೆ. ಮನೆಗೆ ಬಂದು ಎರಡು ಗಂಟೆಯಾದರೂ ಆ ಕಥೆ ಮತ್ತು ಪಾತ್ರದ ಗುಂಗಿನಿಂದ ಹೊರಬರೋಕೆ ಸಾಧ್ಯವಾಗಿರಲಿಲ್ಲ ಅನ್ನೋ ಮೂಲಕ ಚಿತ್ರದ ಕುರಿತು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ ರಚಿತಾ ರಾಮ್.