` yash, - chitraloka.com | Kannada Movie News, Reviews | Image

yash,

  • ಌಂಕರ್ ಆದರು ರಾಕಿಂಗ್ ಸ್ಟಾರ್ ಯಶ್

    yash becomes anchor

    ರಾಕಿಂಗ್ ಸ್ಟಾರ್ ಯಶ್, ಕೆರೆ, ನೀರು ಎನ್ನುತ್ತಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಹೊಸದೇನೂ ಅಲ್ಲ. ಕೊಪ್ಪಳದ ಬಳಿ ಕೆರೆಯೊಂದರ ಜೀರ್ಣೋದ್ಧಾರ ಮಾಡಿಸಿರುವುದು ಯಶ್ ಸಾಧನೆ. 

    ಆದರೆ, ಈ ಬಾರಿ ಅವರು ನೀರಿಗಾಗಿ, ನದಿಗಳ ಉಳಿವಿಗಾಗಿ ಌಂಕರ್ ಆಗಿದ್ದಾರೆ. ಜಗ್ಗಿ ವಾಸುದೇವ್ ಅವರು ದೇಶಾದ್ಯಂತ ನದಿಗಳ ಉಳಿವಿಗಾಗಿ  ''Rally For Rivers‏'' ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಈ ಅಭಿಯಾನಕ್ಕೆ ಕನ್ನಡದಲ್ಲಿ ಈಗಾಗಲೇ ಪುನೀತ್ ರಾಜ್​ಕುಮಾರ್, ಗಣೇಶ್ ಸೇರಿದಂತೆ ಹಲವು ನಟರು ಬೆಂಬಲ ವ್ಯಕ್ತಪಡಿಸಿದ್ದಾರೆ. 

    ಈ ಅಭಿಯಾನದ ಮೂಲಪುರುಷ ಜಗ್ಗಿ ವಾಸುದೇವ್ ಅವರನ್ನು ಯಶ್ ನಿರೂಪಕರಾಗಿ ಸಂದರ್ಶನ ಮಾಡಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ರಾಧಿಕಾ ಪಂಡಿತ್, ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಸ್ವತಃ ಕೆರೆಗಳ ಉಳಿವಿಗಾಗಿ ಟೊಂಕ ಕಟ್ಟಿ ಹೊರಟಿರುವ ಯಶ್, ಸದ್ಗುರು ಅವರನ್ನು ಸಂದರ್ಶಿಸಲು ಉತ್ತಮ ಆಯ್ಕೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯವಾಗಿತ್ತು.  ಯಶ್ ಮತ್ತು ಸದ್ಗುರು ಸಂವಾದ' ಕಾರ್ಯಕ್ರಮ, ಇದೇ ಭಾನುವಾರ  ಜೀ-ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗಲಿದೆ.

  • ಎಡಿಟಿಂಗ್ ಟೇಬಲ್ ಮೇಲೆ ಕೆಜಿಎಫ್

    kgf post production work starts

    ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ರಾಕಿಂಗ್ ಸ್ಟಾರ್ ಯಶ್, ತಮ್ಮ ಪಾತ್ರಕ್ಕೆ ಡಬ್ಬಿಂಗ್ ಶುರು ಮಾಡಿದ್ದಾರೆ. ಹಾಗೆಂದು ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿಲ್ಲ. ಇನ್ನೂ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಹಾಡಿಗೆ ಎಲ್ಲ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಕೈ ಹಾಕಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ. ಅನಂತ್ ನಾಗ್, ಮಾಳವಿಕ ಸೇರಿದಂತೆ ಘಟಾನುಘಟಿಗಳ ತಂಡವೇ ಚಿತ್ರತಂಡದಲ್ಲಿದೆ. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಬರುತ್ತಿರುವ ಸಿನಿಮಾಗೆ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ನಿರ್ಮಾಪಕರು. 

  • ಏನ್ ಬೇಕು..? ಚಾಯ್ಸ್ ಮಾಡಿ.. ವೋಟ್ ಮಾಡಿ.. ಕೆಜಿಎಫ್ ನೋಡಿ..

    ಏನ್ ಬೇಕು..? ಚಾಯ್ಸ್ ಮಾಡಿ.. ವೋಟ್ ಮಾಡಿ.. ಕೆಜಿಎಫ್ ನೋಡಿ..

    ನಿಮಗೆ ಹಾಡು ಬೇಕಾ..?  ಒಂದನ್ನು ಒತ್ತಿ..

    ನಿಮಗೆ ಟ್ರೇಲರ್ ಬೇಕಾ..? ಎರಡನ್ನು ಒತ್ತಿ..

    ಸರ್‍ಪ್ರೈಸ್ ಬೇಕಾ..? ಮೂರನ್ನು ಒತ್ತಿ..

    ಇಂತಾದ್ದೊಂದು ಅಚ್ಚರಿಯ ವೋಟಿಂಗ್ ಸ್ಪರ್ಧೆ ಇಟ್ಟಿದೆ ಕೆಜಿಎಫ್ ಚಾಪ್ಟರ್ 2. ಪ್ರೇಕ್ಷಕರೇ ಚಾಯ್ಸ್ ನೀಡಬೇಕು. ಇದರ ಅರ್ಥ ಇಷ್ಟೆ.. ಕೆಜಿಎಫ್ ಟೀಂ, ಈ ಮೂರಕ್ಕೂ ಸಿದ್ಧವಾಗಿದೆ. ಯಾವುದು ಮೊದಲು ಅನ್ನೋದನ್ನ ಪ್ರೇಕ್ಷಕರೇ ನಿರ್ಧರಿಸಬೇಕು. ಪ್ರಚಾರದ ಹೊಸ ವೈಖರಿಯನ್ನು ಪರಿಚಯಿಸುತ್ತಿದೆ ಕೆಜಿಎಫ್ ಟೀಂ.

    ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗುತ್ತಿದೆ. ಈಗಿನ್ನೂ ಫೆಬ್ರವರಿ ಅಂತ್ಯದಲ್ಲಿದ್ದೇವೆ. ಇನ್ನು ಒಂದೂವರೆ ತಿಂಗಳು ಕಂಪ್ಲೀಟ್ ಕೆಜಿಎಫ್ ಪ್ರಚಾರ ಬಿರುಗಾಳಿಯಾಗಬೇಕು. ಬಿರುಗಾಳಿಯ ಮೊದಲ ಹಂತವೇ ವೋಟಿಂಗ್ ಪ್ರಚಾರ..

  • ಏಪ್ರಿಲ್ 2020ಕ್ಕೆ ಕೆಜಿಎಫ್-ಚಾಪ್ಟರ್ 2 ರಿಲೀಸ್..?

    will kgf chapter 2 release in august 2020

    2018ರಲ್ಲಿ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಚಿತ್ರದ ಚಾಪ್ಟರ್ 2 ಚಿತ್ರೀಕರಣ ಹಂತದಲ್ಲಿದೆ. ಯಶ್ ಜೊತೆಗೀಗ ಸಂಜಯ್ ದತ್ ಜೊತೆಗೂಡಿದ್ದಾರೆ. ಈಗ ಶುರುವಾಗಿರೋದು ಚಿತ್ರದ ರಿಲೀಸ್ ಡೇಟ್ ಕುರಿತ ಸುದ್ದಿ. 2020ರ ಏಪ್ರಿಲ್‍ನಲ್ಲಿ ಕೆಜಿಎಫ್-2 ರಿಲೀಸ್ ಆಗಲಿದೆಯಂತೆ.

    ಮೊದಲಿನ ಪ್ಲಾನ್ ಪ್ರಕಾರ 2020ರ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಎನ್ನಲಾಗಿತ್ತು. ಆದರೆ, ಈಗ ಏಪ್ರಿಲ್‍ಗೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ಕೆಜಿಎಫ್ ಮೊದಲ ಭಾಗವನ್ನು ಮುಗಿಸಲು ಚಿತ್ರತಂಡ 2 ವರ್ಷಗಳಷ್ಟು ದೀರ್ಘ ಸಮಯ ತೆಗೆದುಕೊಂಡಿತ್ತು. ಚಾಪ್ಟರ್ 2 ಬೇಗ ರೆಡಿಯಾಗುತ್ತಿರುವುದಕ್ಕೆ ಕಾರಣ, ಚಾಪ್ಟರ್ 2ನ ಬಹುತೇಕ ಶೂಟಿಂಗ್ ಮೊದಲೇ ಮುಗಿದಿತ್ತು ಎನ್ನಲಾಗುತ್ತಿದೆ.

    ಪ್ರಶಾಂತ್ ನೀಲ್ ನಿರ್ದೇಶನದ ಟೀಂನಲ್ಲಿ ಈಗಾಗಲೇ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕ, ವಸಿಷ್ಠ ಸಿಂಹ ಮೊದಲಾದವರೆಲ್ಲ ಇದ್ದಾರೆ. ಈಗ ಹೊಸದಾಗಿ ಸಂಜಯ್ ದತ್ ಜೊತೆಯಾಗಿದ್ದಾರೆ. ರವೀನಾ ಟಂಡನ್ ಚಿತ್ರತಂಡವನ್ನು ಸೇರಿಕೊಳ್ಳಬೇಕಿದೆ. 

    ಏಪ್ರಿಲ್ ಅಂದ್ರೆ ಉಳಿದಿರೋದು ಇನ್ನು ಏಳೇ ತಿಂಗಳು. ಏಪ್ರಿಲ್ ರಿಲೀಸ್ ಅನ್ನೋ ನಿರೀಕ್ಷೆ ಏನಾಗುತ್ತೋ ಏನೋ..

  • ಒಂದೇ ದಿನ ಯಶ್‍ರಿಂದ 3 ಬೆಂಜ್ ಕಾರ್ ಖರೀದಿ

    yash buys 3 benz cars

    ಅಪ್ಪನಿಗೆ ಒಂದು, ಅಮ್ಮನಿಗೆ ಒಂದು, ತಮಗೆ ಹಾಗೂ ರಾಧಿಕಾಗೆ ಒಂದು.. ಹೀಗೆ ಒಂದೇ ದಿನ 3 ಬೆಂಜ್ ಕಾರು ಖರೀದಿಸಿದ್ದಾರೆ ಯಶ್. ಒಂದು ಬೆಂಜ್ ಜಿಎಲ್‍ಎಸ್, ಬೆಂಜ್ ಇ ಕ್ಲಾಸ್ ಹಾಗೂ ಮತ್ತೊಂದು ಬೆಂಜ್ ಜಿಎಸ್‍ಸಿ ಎಎಂಜಿ ಕಪಲ್ ಕಾರು ಖರೀದಿಸಿದ್ದಾರೆ.

    yash_benz1.jpgಇದು ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಯಶ್ ರಾಧಿಕಾಗೆ ಹಾಗೂ ತಮ್ಮ ಅಪ್ಪ, ಅಮ್ಮನಿಗೆ ಕೊಡುತ್ತಿರುವ ಉಡುಗೊರೆ ಎಂದುಕೊಳ್ಳಿ. ಇದೇ ಡಿಸೆಂಬರ್ 9ಕ್ಕೆ ಯಶ್, ರಾಧಿಕಾ ಮದುವೆಯಾಗಿ ಒಂದು ವರ್ಷವಾಗುತ್ತಿದೆ. 

    ಯಶ್-ರಾಧಿಕಾ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು.

  • ಒಂದೇ ಸಿನಿಮಾದಲ್ಲಿ ಪುನೀತ್-ಯಶ್

    yash puneeth to act together in a movie

    ನಟಸಾರ್ವಭೌಮ ಯಶಸ್ಸಿನ ಖುಷಿಯಲ್ಲಿರೋ ಪುನೀತ್ ಮತ್ತು ಕೆಜಿಎಫ್ ಸಕ್ಸಸ್ ಜೋಷ್‍ನಲ್ಲಿರೋ ಯಶ್, ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ..? ಹೌದು ಅನ್ನೋ ಉತ್ತರ ಕೊಟ್ಟಿದ್ದಾರೆ ಇಬ್ಬರೂ ಸ್ಟಾರ್‍ಗಳು. ಜುಗಾರಿ ಕ್ರಾಸ್ ಚಿತ್ರದ ಮುಹೂರ್ತದಲ್ಲಿ ಒಟ್ಟಿಗೇ ಸಿಕ್ಕಿದ್ದ ಪುನೀತ್ ಮತ್ತು ಯಶ್, ಒಟ್ಟಿಗೇ ನಟಿಸೋಕೆ ರೆಡಿ ಎಂದಿದ್ದಾರೆ.

    `ಅಪ್ಪು ಓಕೆ ಎಂದರೆ, ನಟಿಸೋಕೆ ನಾನು ರೆಡಿ. ಒಳ್ಳೆಯ ಕಥೆ ಸಿಗಬೇಕಷ್ಟೆ' ಎಂದಿರುವುದು ಯಶ್. `ನಾನು ಯಾವಾಗಲೂ ರೆಡಿ. ಒಟ್ಟಿಗೇ ಸಿನಿಮಾ ಮಾಡೋಣ' ಎಂದಿರೋದು ಪುನೀತ್.

    ಪುನೀತ್ ಈ ಮೊದಲು ಲೂಸ್ ಮಾದ ಯೋಗಿ, ಶ್ರೀನಗರ ಕಿಟ್ಟಿ ಜೊತೆ ನಟಿಸಿದ್ದಾರೆ. ಪುನೀತ್ ಚಿತ್ರಗಳಲ್ಲಿ ದರ್ಶನ್, ಆದಿತ್ಯ ಅತಿಥಿ ನಟರಾಗಿ ನಟಿಸಿದ್ದಾರೆ. ಇನ್ನು ಯಶ್ ಕೂಡಾ ವಿಜಯ್ ರಾಘವೇಂದ್ರ ಜೊತೆ ನಟಿಸಿರುವವರು. 

  • ಕಟಕ ಚಿತ್ರಕ್ಕೆ ಯಶ್‍ದೇ ದೃಷ್ಟಿ ಆಯ್ತಂತೆ..!

    yash likes kataka movie

    ಕಟಕ.. ಟ್ರೇಲರ್‍ನಿಂದಲೇ ಕುತೂಹಲ ಮೂಡಿಸಿರುವ ಸಿನಿಮಾ. ಟ್ರೇಲರ್‍ನ್ನೇ 13 ಭಾಷೆಯಲ್ಲಿ ರಿಲೀಸ್ ಮಾಡಿದ್ದ ಕಟಕ ಚಿತ್ರತಂಡ, ಈಗ ಸಿನಿಮಾವನ್ನು ಬಿಡುಗಡೆ ಮಾಡಿದೆ. ಬಿಡುಗಡೆ ವೇಳೆಯಲ್ಲಿಯೇ ಕಟಕ ಚಿತ್ರರಂಗಕ್ಕೆ ಬೋನಸ್ ಎಂಬಂತೆ ಸಿಕ್ಕಿರುವುದು ಯಶ್ ಹೊಗಳಿಕೆ. 

    ಚಿತ್ರದ ಟ್ರೇಲರ್ ನೋಡಿ, ಚಿತ್ರವನ್ನು ನೋಡಲೇಬೇಕು ಎಂದು ಆಸೆ ಪಟ್ಟಿದ್ದ ಯಶ್, ಚಿತ್ರವನ್ನು ಮನಸಾರೆ ಹೊಗಳಿದ್ದಾರೆ. ಸಾಮಾನ್ಯವಾಗಿ ನಾನು ಸಸ್ಪೆನ್ಸ್, ಹಾರರ್ ಸಿನಿಮಾಗಳನ್ನ ನೋಡಲ್ಲ. ಆದರೆ, ಈ ಚಿತ್ರ ನೋಡಿದೆ. ತುಂಬಾ ಇಷ್ಟವಾಯ್ತು. ಚಿತ್ರಕ್ಕೆ ತಗುಲಿದರೆ, ನನ್ನ ದೃಷ್ಟಿಯೇ ತಗುಲುತ್ತೆ ಎಂದು ಹೊಗಳಿದ್ದಾರೆ ರಾಕಿಂಗ್ ಸ್ಟಾರ್.

    ಅದರಲ್ಲೂ ಯಶ್‍ಗೆ ಇಷ್ಟವಾಗಿರೋದು ಪುಟ್ಟ ಬಾಲಕಿಯ ನಟನೆ. 5 ವರ್ಷದ ಬಾಲಕಿಯ ಮೇಲೆ ವಾಮಾಚಾರ ಮಾಡುವ ಕಥಾ ಹಂದರವನ್ನಿಟ್ಟುಕೊಂಡು ಚಿತ್ರವನ್ನು ಕಟ್ಟಿಕೊಡಲಾಗಿದೆ. ರವಿ ಬಸ್ರೂರು ನಿರ್ದೇಶನದ 3ನೇ ಚಿತ್ರವನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದು ಹಾರೈಸಿದ್ದಾರೆ ಯಶ್.

    Related Articles :-

    Kataka Trailer Released In 13 Languages

    ಹೊಸ ದಾಖಲೆ ಬರೆಯಲಿದೆ ಕಟಕ ಟ್ರೇಲರ್

    Puneeth and Yash To Release The Trailer of Kataka

  • ಕಡಿಯೋಕೆ ನಾನ್ ಕುರಿ ಅಲ್ಲ, ಕೋಳಿನೂ ಅಲ್ಲ - ಯಶ್

    i am not lamb or hen to get slaughtered

    ನಟ ಯಶ್ ಅವರ ಕೊಲೆಗೆ ಸುಪಾರಿ ಕೊಡಲಾಗಿದೆಯಂತೆ. ಬೆಂಗಳೂರಿನಲ್ಲಿ ಯಶ್ ಅವರ ಚಲನವಲನಗಳನ್ನು ರೌಡಿಗಳು ಫಾಲೋ ಮಾಡ್ತಿದ್ದಾರಂತೆ. ಮೊನ್ನೆ ಮೊನ್ನೆ ಅವರನ್ನು ಕೊಲ್ಲಲು ಪಕ್ಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಪೊಲೀಸರು ಕಡೆ ಕ್ಷಣದಲ್ಲಿ ಹಿಡಿದರಂತೆ. ಜೈಲಲ್ಲೇ ಸ್ಕೆಚ್ ಹಾಕಿದ್ದರಂತೆ. ಚಿತ್ರರಂಗದ ನಟರೊಬ್ಬರು, ಉದ್ಯಮಿಯೊಬ್ಬರ ಜೊತೆ ಸೇರಿ ಸ್ಕೆಚ್ ಹಾಕಿದ್ದಾರಂತೆ.. ಹೀಗೆ.. ಅಂತೆ ಕಂತೆಗಳನ್ನೇ ಸುದ್ದಿ ಮಾಡಲಾಗಿದೆ. ಇಂತಹ ಅಂತೆ ಕಂತೆಗಳಿಗೆಲ್ಲ ಮತ್ತೊಮ್ಮೆ ಯಶ್ ಉತ್ತರ ಕೊಟ್ಟಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ಅಂತಹ ಕಲ್ಪನೆಯೂ ಯಾರಲ್ಲೂ ಇಲ್ಲ. ಕೊಲ್ಲೋಕೆ ನಾನು ಕುರಿನೂ ಅಲ್ಲ. ಕೋಳಿನೂ ಅಲ್ಲ. ಕೊಲ್ಲೋದು ಅಷ್ಟು ಸುಲಭವೂ ಅಲ್ಲ. ನನಗೆ ಯಾವ ಕೊಲೆ ಬೆದರಿಕೆಯೂ ಬಂದಿಲ್ಲ. ಅಲೋಕ್ ಕುಮಾರ್ ಅವರ ಬಳಿಯೂ ಮಾತನಾಡಿದ್ದೇನೆ. ಅವರು ಕೂಡಾ ನನಗೆ ಹೇಳಿದ್ದಾರೆ. ನನ್ನ ಕೊಲೆಗೆ ಯಾವ ಸಂಚೂ ನಡೆದಿಲ್ಲ. ಇದು ಯಶ್ ಕೊಟ್ಟಿರುವ ಸ್ಪಷ್ಟನೆ.

  • ಕನ್ನಡ ಕಲಾಭೂಷಣ ಯಶ್

    yash gets new title from fans

    ರಾಕಿಂಗ್ ಸ್ಟಾರ್, ರಾಕಿಭಾಯ್, ರಾಜಾಹುಲಿ, ಮಾಸ್ಟರ್ ಪೀಸ್, ಕಿರಾತಕ ಎಂದೆಲ್ಲ ಕರೆಸಿಕೊಳ್ಳುವ ಯಶ್, ಈಗ ಕನ್ನಡ ಕಲಾಭೂಷಣರಾಗಿದ್ದಾರೆ.

    ಯಶ್ ಅವರಿಗೆ ಈ ಬಿರುದು ನೀಡಿರುವುದು ಬೆಂಗಳೂರಿನ ಗೆಲುವು ಕನ್ನಡ ಗೆಳೆಯರ ಸಮಿತಿ ಮತ್ತು ಬಿಕೆಜಿಎಸ್ ಚಾರಿಟಬಲ್ ಟ್ರಸ್ಟ್. ಕರುನಾಡ ಸಂಭ್ರಮ ಕಾರ್ಯಕ್ರಮದಲ್ಲಿ ಯಶ್‌ಗೆ `ಕನ್ನಡ ಕಲಾಭೂಷಣ' ಎಂದು ಬಿರುದು ನೀಡಿ ಸನ್ಮಾನಿಸಿದ್ದಾರೆ ಸಂಘಟನೆ ಕಾರ್ಯಕರ್ತರು.

  • ಕನ್ನಡ ಬಿಟ್ಟು ಎಲ್ಲೂ ಹೋಗಲ್ಲ - ಯಶ್ 

    yash says he will not go to any other language

    ಕೆಜಿಎಫ್ ಸೃಷ್ಟಿಸಿರುವ ಹವಾ, ಅಬ್ಬರ ನೋಡಿದರೆ, ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ನೋಡಿದರೆ, ಯಶ್.. ಇನ್ನು ಮುಂದೆ ಕನ್ನಡಿಗರ ಕೈಗೆ ಸಿಕ್ಕೋದಿಲ್ವಾ..? ಕನ್ನಡ ಚಿತ್ರರಂಗದ ಹೊರಗೆ ದೊಡ್ಡ ಹೆಜ್ಜೆ ಇಟ್ಟಿರುವ ಯಶ್, ಕನ್ನಡಿಗರ ಪಾಲಿಗೆ ನಿಲುಕದ ನಕ್ಷತ್ರವಾಗಿಬಿಡ್ತಾರಾ..? ಹಿಂದಿ, ತೆಲುಗು, ತಮಿಳಿನಲ್ಲಿ ಸೃಷ್ಟಿಯಾಗಿರುವ ಬೇಡಿಕೆ ನೋಡಿದ್ರೆ, ಅಂಥದ್ದೊಂದು ಆತಂಕ ಇದ್ದೇ ಇತ್ತು. ಅದೆಲ್ಲವನ್ನೂ ಯಶ್ ತಳ್ಳಿ ಹಾಕಿಬಿಟ್ಟಿದ್ದಾರೆ.

    ಬೇರೆ ಭಾಷೆಗೆ ಹೋಗಬೇಕು ಎಂದಿದ್ದರೆ, ಯಾವತ್ತೋ ಹೋಗಬಹುದಿತ್ತು. ಅದು ಅಗತ್ಯವಿಲ್ಲ. ನಾನು ಕನ್ನಡದಲ್ಲಿಯೇ ಇರುತ್ತೇನೆ. ಕನ್ನಡದಲ್ಲಿದ್ದುಕೊಂಡೇ ಎಲ್ಲರೂ ಮೆಚ್ಚುವ ಸಿನಿಮಾ ಮಾಡುತ್ತೇನೆ. ನಾವು ಕನ್ನಡ ಸಿನಿಮಾವನ್ನೇ ಆಲ್ ಇಂಡಿಯಾ ಸಿನಿಮಾ ಆಗಿಸುವ ಹಂತದಲ್ಲಿದ್ದೇವೆ ಎಂದಿದ್ದಾರೆ ಯಶ್.

    ನಾವು ಮಾಡಿದ್ದು 10 ರೂಪಾಯಿಯಷ್ಟು ಕೆಲಸ, ಕನ್ನಡಿಗರು ನೀಡಿದ್ದು 100 ರೂಪಾಯಿಯ ಆಶೀರ್ವಾದ. ನಾನು ಧನ್ಯ ಎಂದಿದ್ದಾರೆ ಯಶ್.

  • ಕನ್ನಡಕ್ಕೆ ತಮನ್ನಾ ಜೋಕೆ.. ಹಿಂದೀಮೇ ಗಲಿ ಗಲೀ

    hindi kgf will not have tamannah's jokai

    ಜೋಕೆ... ನಾನು ಬಳ್ಳಿಯ ಮಿಂಚು.. ಈ ಹಾಡನ್ನು ಕೆಜಿಎಫ್‍ನಲ್ಲಿ ಬಳಸಿಕೊಳ್ಳಲಾಗಿದೆ. ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ಯಶ್ ಆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದು ಹಳೆಯ ವಿಷಯ. ಆದರೆ, ಅದೇ ಕೆಜಿಎಫ್‍ನ ಹಿಂದಿ ವರ್ಷನ್‍ನಲ್ಲಿ ತಮನ್ನಾ ಇಲ್ಲವಂತೆ.

    ಹಿಂದಿಯಲ್ಲಿ ತಮನ್ನಾನೂ ಇಲ್ಲ. ಜೋಕೆ ಹಾಡೂ ಇಲ್ಲ. ಅಲ್ಲಿ ತಮನ್ನಾ ಜಾಗದಲ್ಲಿ ಹೆಜ್ಜೆ ಹಾಕಿರೋದು ಮೌನಿರಾಯ್. ಬಳಸಿಕೊಂಡಿರೋ ಹಾಡು ಗಲೀ ಗಲೀ ಮೇ ಫಿರ್ತಾ ಹೈ. ಅದು ಜಾಕಿಶ್ರಾಫ್, ಸಂಗೀತಾ ಬಿಜಲಾನಿ ಅಭಿನಯದ ತ್ರಿದೇವ್ ಚಿತ್ರದ ಸಾಂಗ್.

    ಹಿಂದಿಗಾಗಿ ಆ ಹಾಡಿನ ಶೂಟಿಂಗ್ ಈಗಷ್ಟೇ ಶುರುವಾಗಿದೆಯಂತೆ.

  • ಕನ್ನಡಕ್ಕೆ ಬರ್ತಾರಾ ಮಗಧೀರನ ಚೆಲುವೆ..?

    will kajal agarwal act in kgf

    ಕೆಜಿಎಫ್ ಚಿತ್ರಕ್ಕೆ ಕಾಜಲ್ ಅಗರ್‍ವಾಲ್ ಬರ್ತಾರಾ..? ಸ್ಪೆಷಲ್ ಸಾಂಗ್‍ನಲ್ಲಿ ಕುಣಿದು ಕುಪ್ಪಳಿಸ್ತಾರಾ..? ಅಂಥಾದ್ದೊಂದು ಚರ್ಚೆ ಗಾಂಧಿನಗರದಲ್ಲಿ ಜೋರಾಗಿ ನಡೆಯುತ್ತಿದೆ. ಕೆಜಿಎಫ್ ಟೀಂ ಹೂಂ ಅಂತಿಲ್ಲ, ಊಹೂಂ ಅಂತಿಲ್ಲ. ಆಗಸ್ಟ್ 7ವರೆಗೆ ವೇಯ್ಟ್ ಮಾಡಿ ಅಂತಿದೆ. ಆ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಆ ಹಾಡು ಮುಗಿದರೆ, ಚಿತ್ರೀಕರಣ ಮುಕ್ತಾಯವಾದಂತೆ.

    ತಮನ್ನಾ ಭಾಟಿಯಾ, ಲಕ್ಷ್ಮೀ ರೈ ಹಾಗೂ ನೋರಾ ಫತೇಹಿ ಅವರನ್ನೂ ಕೂಡಾ ಸಂಪರ್ಕಿಸಿದೆಯಂತೆ. ಆದರೆ, ಯಶ್ ಜೊತೆ ಹೆಜ್ಜೆ ಹಾಕೋ ಆ ಚೆಲುವೆ ಯಾರು ಅನ್ನೋ ಸಸ್ಪೆನ್ಸ್‍ನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ.

    ಹೊಂಬಾಳೆ ಫಿಲಂಸ್‍ನ ಅದ್ದೂರಿ ಸಿನಿಮಾ, ಕನ್ನಡ ಚಿತ್ರರಂಗದಲ್ಲೇ ದುಬಾರಿ ವೆಚ್ಚದ ಚಿತ್ರವಾಗುತ್ತಿದೆ. ಸುಮಾರು 50 ಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ, 5 ಭಾಷೆಗಳಲ್ಲೂ ಬಿಡುಗಡೆಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ.

  • ಕನ್ನಡಕ್ಕೆ ಹೊಸ ಮಾರ್ಕೆಟ್ ಸೃಷ್ಟಿಸಿದ ಕೆಜಿಎಫ್

    kgf opens new market to kannada films

    ಕೆಜಿಎಫ್, ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಿದೆಯಷ್ಟೇ ಅಲ್ಲ, ಕನ್ನಡಕ್ಕೆ ಹೊಸ ಮಾರುಕಟ್ಟೆಯನ್ನೂ ಸೃಷ್ಟಿಸಿಕೊಟ್ಟಿದೆ. ಈ ಹಿಂದೆ ಕನ್ನಡ ಚಿತ್ರಗಳು ಎಂಟ್ರಿಯನ್ನೇ ಕೊಡದಿದ್ದ ಪ್ರದೇಶದಲ್ಲೂ ಕೆಜಿಎಫ್‍ನಿಂದಾಗಿ ಡಿಮ್ಯಾಂಡ್ ಸೃಷ್ಟಿಯಾಗಿದೆ.

    ಯೂರೋಪ್ ಹಾಗೂ ಅಮೆರಿಕದ ಕೆಲವೆಡೆ ಕನ್ನಡ ಚಿತ್ರಗಳು ಪ್ರದರ್ಶನವಾಗುವುದು ಹೊಸದೇನಲ್ಲ. ಆದರೆ ಕೆಜಿಎಫ್‍ನಿಂದಾಗಿ ದಕ್ಷಿಣ ಯೂರೋಪ್‍ನ ಲಾಟ್ವಿಯಾ, ಲಿಥೇನಿಯಾ, ಉಕ್ರೇನ್‍ಗಳಲ್ಲಿಯೂ ಕೆಜಿಎಫ್ ಧ್ವಜ ಹಾರಿಸಲು ಸಿದ್ಧವಾಗಿದೆ. ರಷ್ಯಾದ ಕೆಲವು ನಗರಗಳಿಂದಲೂ ಕೆಜಿಎಫ್‍ಗಾಗಿ ಬೇಡಿಕೆ ಬಂದಿದೆಯಂತೆ.

    ಸ್ವೀಡನ್, ನಾರ್ವೆ, ಲುಕ್ಸೆಂಬರ್ಗ್, ಫಿನ್‍ಲ್ಯಾಂಡ್, ಡೆನ್ಮಾರ್ಕ್, ಮಾಲ್ಟಾ, ಸೈಪ್ರಸ್, ಆಫ್ರಿಕನ್ ದೇಶಗಳು, ಇಸ್ರೇಲ್, ಹಾಂಗ್‍ಕಾಂಗ್.. ಹೀಗೆ ಕನ್ನಡ ಚಿತ್ರಗಳು ಇದುವರೆಗೆ ಪ್ರದರ್ಶನವನ್ನೇ ಕಂಡಿರದ ದೇಶಗಳಲ್ಲಿ, ನಗರಗಳಲ್ಲಿ ಕೆಜಿಎಫ್ ರಿಲೀಸ್ ಆಗಲಿದೆ.

  • ಕನ್ನಡದ ಕೋಟ್ಯಧಿಪತಿ ಯಶ್

    will yash host kannada kotiyadhipathi

    ಕೌನ್ ಬನೇಗಾ ಕರೋಡ್‍ಪತಿ ಹೆಸರು ನೆನಪಾದ ಕೂಡಲೇ ಕಣ್ಣ ಎದುರು ಬರೋದು ಅಮಿತಾಬ್ ಬಚ್ಚನ್. ಕನ್ನಡದ ಕೋಟ್ಯಧಿಪತಿ ಎಂದರೆ ಕಣ್ಣೆದುರು ಬರೋದು ಪುನೀತ್ ರಾಜ್‍ಕುಮಾರ್. ಎರಡು ಸೀಸನ್ ನಂತರ ಕೋಟ್ಯಧಿಪತಿ ಶೋ ಸ್ಥಗಿತಗೊಂಡಿತ್ತು. ಈಗ ಆ ರಿಯಾಲಿಟಿ ಶೋವನ್ನು ಮತ್ತೆ ಆರಂಭಿಸಲು ಸ್ಟಾರ್ ಸುವರ್ಣ ಮುಂದಾಗಿದೆ. ಈ ಬಾರಿ ಕೋಟ್ಯಧಿಪತಿ ಸೀಟ್‍ನಲ್ಲಿ ಕೂರುತ್ತಿರುವುದು ಪುನೀತ್ ಅಲ್ಲ, ಯಶ್.

    ಪುನೀತ್ ರಾಜ್‍ಕುಮಾರ್, ಕಲರ್ಸ್ ಕನ್ನಡ ವಾಹಿನಿಯ ಜೊತೆ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಯಶ್ ಅವರ ಆಗಮನವಾಗಿದೆ. ಮೂಲಗಳ ಪ್ರಕಾರ, ಈ ಕುರಿತ ಎಲ್ಲ ಒಪ್ಪಂದಗಳಿಗೂ ಸಹಿ ಹಾಕಿದ್ದಾರೆ ಯಶ್.

    ಆದರೆ, ಯಶ್.. ಹೌದು. ಮಾಡುತ್ತಿದ್ದೇನೆ ಎಂದು ಹೇಳುತ್ತಿಲ್ಲ. ಪ್ರಸ್ತಾಪ ಬಂದಿರುವುದು ನಿಜ. ಇನ್ನೂ ಫೈನಲ್ ಆಗಿಲ್ಲ. ಕೆಜಿಎಫ್ ಶೂಟಿಂಗ್ ಬಾಕಿ ಇರುವ ಕಾರಣ, ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.

  • ಕರ್ನಾಟಕದ ಗಡಿ ದಾಟಲಿದೆ ಕೆಜಿಎಫ್ ಹವಾ

    kgf records to cross karnataka

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಹವಾ ಕರ್ನಾಟಕದ ಗಡಿಯನ್ನೂ ದಾಟಿ ಹೋಗಲಿದೆ. ಕನ್ನಡದಲ್ಲಿ ತಯಾರಾಗುತ್ತಿರುವ ಚಿತ್ರದ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಅವತರಣಿಕೆಯೂ ಬಿಡುಗಡೆಯಾಗಲಿದೆ. ಒಟ್ಟು 5 ಭಾಷೆಗಳಲ್ಲಿ ಕೆಜಿಎಫ್ ತೆರೆ ಕಾಣಲಿದೆ.

    ಚಿತ್ರದ ಶೇ.50ರಷ್ಟು ಶೂಟಿಂಗ್ ಮುಗಿದಿದೆ. ಇನ್ನೂ ಚಿತ್ರದ ಮುಂದಿನ ಶೂಟಿಂಗ್ ಪ್ಲಾನ್, ಲಡಾಖ್, ಕೋಲ್ಕೊತ್ತಾ, ಮುಂಬೈಗಳಲ್ಲೆಲ್ಲ ಸಂಚರಿಸಬೇಕಿದೆ.

    ಚಿತ್ರದ ತಾರಾಬಳಗಕ್ಕೆ ರಾಜಾಹುಲಿಯ ವಿಲನ್ ವಸಿಷ್ಠ ಸಿಂಹ ಸೇರ್ಪಡೆಗೊಂಡಿದ್ದಾರೆ. ರಾಜಾಹುಲಿ ನಂತರ, ಯಶ್ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸುತ್ತಿರುವುದು ಇದೇ ಮೊದಲು. 4 ವರ್ಷಗಳ ನಂತರ ಹಿಟ್ ಹೀರೋ-ವಿಲನ್ ಜೋಡಿ ಕೆಜಿಎಫ್‍ನಲ್ಲಿ ಮತ್ತೆ ಘರ್ಜಿಸಲಿದೆ. ಅಲ್ಲದೆ 5 ಭಾಷೆಗಳಲ್ಲಿಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ರಮ್ಯಕೃಷ್ಣ, ನಾಸಿರ್ ಕೂಡಾ ಸೇರುವ ನಿರೀಕ್ಷೆಯಿದೆ.

    Related Articles :-

    ಕೆಜಿಎಫ್ 2ನೇ ಔಟ್‍ಲುಕ್ ಸೆನ್ಸೇಷನ್

  • ಕರ್ನಾಟಕದ ಸ್ಟಾರ್‍ಗಳು, ಲೀಡರ್‍ಗಳು.. ಯಶ್ ಕಂಡಂತೆ..

    yash talks on stars and politicians

    ಒಬ್ಬ ನಟರ ಬಗ್ಗೆ, ನಾಯಕರ ಬಗ್ಗೆ ಒಬ್ಬೊಬ್ಬರ ಅಭಿಪ್ರಾಯವೂ ಒಂದೊಂದು ರೀತಿ ಇರುತ್ತೆ. ಅಂಥಾದ್ದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕಣ್ಣಲ್ಲಿ ಕರ್ನಾಟಕದ, ದೇಶದ ನಾಯಕರ ಬಗ್ಗೆ, ಚಿತ್ರರಂಗದ ಇತರೆ ಸ್ಟಾರ್‍ಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಮುಂದಿಟ್ಟಿದ್ದಾರೆ.

    ಯಶ್ ಕಂಡಂತೆ ಮೋದಿ - ಚಾಯ್‍ವಾಲಾ ಒಬ್ಬರು ದೇಶದ ಪ್ರದಾನಿಯಾಗುವುದು ಸುಲಭದ ಮಾತಲ್ಲ. ದೇಶಕ್ಕಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟು, ಅಭಿವೃದ್ಧಿಯ ಕನಸು ನನಸು ಮಾಡಲು ಶ್ರಮಿಸುತ್ತಿದ್ದಾರೆ.

    ಯಶ್ ಕಂಡಂತೆ ಸಿದ್ದರಾಮಯ್ಯ - ತುಂಬಾ ಗಟ್ಟಿ ನಾಯಕ. ಯಾವುದೇ ಸಮಸ್ಯೆ ಇರಲಿ, ಅದಕ್ಕೆ ಕೂಲ್ ಆಗಿ ಕೌಂಟರ್ ಕೊಟ್ಟು ಹೋಗುವ ಕಲೆ ಅವರಿಗೆ ಸಿದ್ಧಿಸಿದೆ. 

    ಯಶ್ ಕಂಡಂತೆ ದೇವೇಗೌಡ - ಇಡೀ ದೇಶವನ್ನು ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ನಾಯಕ. ದೊಡ್ಡತನ ಮೆರೆದುಬಿಡುತ್ತಾರೆ. ಅವರ ನಡವಳಿಕೆ ನಮಗೆ ಕೆಲವು ಸಲ ಮುಜುಗರ ಉಂಟು ಮಾಡುತ್ತೆ. ನಾವು ಅವರ ಮನೆಗೆ ಮದುವೆ ಆಹ್ವಾನ ಪತ್ರಿಕೆ ಕೊಡಲು ಹೋದಾಗ, ಅವರಿಗೆ ಹಾಕಲು ತೆಗೆದುಕೊಂಡು ಹೋಗಿದ್ದ ಹಾರವನ್ನು ನಮಗೆ ಹಾಕಿ ಶುಭ ಹಾರೈಸಿದರು. ಅವರ ದೊಡ್ಡತನದ ಎದುರು ಮೂಕನಾಗಿ ಹೋಗಿದ್ದೆ.

    ಯಶ್ ಕಂಡಂತೆ ಯಡಿಯೂರಪ್ಪ - ಹುಟ್ಟು ಹೋರಾಟಗಾರರು. ಶ್ರಮಜೀವಿ. ನಿದ್ದೆ ಬಿಟ್ಟು ಜನರಿಗಾಗಿ ಕೆಲಸ ಮಾಡುವ ವ್ಯಕ್ತಿ

    ಯಶ್ ಕಂಡಂತೆ ಕುಮಾರಸ್ವಾಮಿ - ತುಂಬಾ ಸರಳ ವ್ಯಕ್ತಿ. ಹಿರಿಯರು, ಕಿರಿಯರೆನ್ನದೆ ಎಲ್ಲರಿಗೂ ಗೌರವ ಕೊಡುತ್ತಾರೆ. ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ.

    ಯಶ್ ಕಂಡಂತೆ ಪುನೀತ್ - ಅವರ ಸರಳತೆಯೇ ನನಗೆ ತುಂಬಾ ಇಷ್ಟ. ಎಲ್ಲವೂ ಇದ್ದು, ತಾನು ಮಾತ್ರ ಏನೇನೂ ಅಲ್ಲವೇನೋ ಎಂಬಂತೆ ಬದುಕುವ ಅವರ ವ್ಯಕ್ತಿತ್ವವೇ ಸೂಪರ್.

    ಯಶ್ ಕಂಡಂತೆ ಸುದೀಪ್ - ಅದೊಂಥರಾ ಆಳೆತ್ತರದ ಕಲಾಕೃತಿ. ನನಗೆ ಅವರ ವಾಯ್ಸ್ ಇಷ್ಟ. ಅವರ ವಾಯ್ಸ್‍ನಲ್ಲಿ ಎಂಥದ್ದೋ ಶಕ್ತಿ ಇದೆ.

    ಯಶ್ ಕಂಡಂತೆ ದರ್ಶನ್ - ಕನ್ನಡ ಚಿತ್ರರಂಗದ ಮಾಸ್ ಹೀರೋ ಅವರು. ಅವರ ಎದುರು ನಿಂತರೆ ಬೇರೆಯವರು ಕಾಣೋದಿಲ್ಲ. ಕುರುಕ್ಷೇತ್ರದ ಫೋಟೋ ನೋಡಿದಾಗ, ಇವರು ನಮ್ಮವರು ಎಂಬುದೇ ಹೆಮ್ಮೆ ಮೂಡಿಸಿತು.

    ಯಶ್ ಕಂಡಂತೆ ಜಗ್ಗೇಶ್ - ಅವರೊಬ್ಬರು ಜಒತೆಯಲ್ಲಿದ್ದರೆ, ಎಂಥ ಒತ್ತಡದಲ್ಲೂ ನಗು ನಗುತ್ತಾ ಬದುಕಿಬಿಡಬಹುದು. ಒತ್ತಡವೇ ಇರೋದಿಲ್ಲ. ಯಾರಿಗೆ ಏನೇ ಕಷ್ಟ ಬಂದರೂ ಮೊದಲು ನುಗ್ಗುವ ವ್ಯಕ್ತಿ ಜಗ್ಗೇಶ್. ಕನ್ನಡ ನಾಡು, ನುಡಿ ವಿಚಾರದಲ್ಲಿ ಅವರಿಗೆ ತುಂಬಾ ಅಭಿಮಾನ.

  • ಕಾರ್ಮಿಕರ ಜೊತೆ ರಾಕಿಭಾಯ್ ಸಾಮ್ರಾಜ್ಯ

    kfg chapter 2 first look creates huge craze

    ನರಾಚಿ ಗಣಿ.. ಅಲ್ಲಿರುವ 20 ಸಾವಿರ ಕಾರ್ಮಿಕರಿಗೆ ಶಕ್ತಿ ತುಂಬುವ ರಾಕಿಭಾಯ್, ಗರುಡನನ್ನು ಕೊಂದು ಹಾಕಿದ್ದಾನೆ. ದುಷ್ಟ ಸಂಹಾರವಾಗಿದೆ. ಮುಂದೆ.. ಅವನು ಅಲ್ಲಿ ಹೊಸದೊಂದು ಸಾಮ್ರಾಜ್ಯ ಕಟ್ಟಬೇಕು. ಕಟ್ಟುತ್ತಾನಾ..? ರಾಕಿಭಾಯ್ ಹೊಸ ಸಾಮ್ರಾಜ್ಯ ಕಟ್ಟುವುದು ಹಾಗೂ ಆ ಹಾದಿಯಲ್ಲಿರೋ ಎಲ್ಲ ಅಡೆತಡೆಗಳನ್ನೂ ನಿವಾರಿಸಿಕೊಳ್ಳುವುದು ಕೆಜಿಎಫ್ ಚಾಪ್ಟರ್ 2ನ ಕಥೆಯಾ..?

    ಕೆಜಿಎಫ್ ರಿಲೀಸ್ ಆದ ಒಂದು ವರ್ಷಕ್ಕೆ ಸರಿಯಾಗಿ ಕೆಜಿಎಫ್ ಚಾಪ್ಟರ್ 2ನ ಪೋಸ್ಟರ್ ರಿಲೀಸ್ ಮಾಡಿರುವ ಪ್ರಶಾಂತ್ ನೀಲ್, ಪೋಸ್ಟರ್‌ನಲ್ಲಿ ಕೊಟ್ಟಿರುವುದು ಅದೇ ಸುಳಿವು. ಸಾಮ್ರಾಜ್ಯ ಪುನರ್ ನಿರ್ಮಾಣದಲ್ಲಿ..

    ಫಸ್ಟ್ ಲುಕ್‌ನಲ್ಲಿ ಕೂಡಾ ಸಂಜಯ್ ದತ್, ರವೀನಾ ಟಂಡನ್ ಪಾತ್ರದ ಸಣ್ಣ ಸುಳಿವನ್ನೂ ಕೊಟ್ಟಿಲ್ಲ. ಹೊಂಬಾಳೆ ಬ್ಯಾನರ್‌ನ ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿಭಾಯ್‌ಗೆ ಶ್ರೀನಿಧಿ ಶೆಟ್ಟಿ ಒಲಿಯುತ್ತಾಳಾ..? ಅಧೀರನ ಕಥೆ ಏನು..? ಹೀಗೆ ಹತ್ತು ಹಲವು ಪ್ರಶ್ನೆಗಳು ಚಿತ್ರದೊಂದಿಗೆ ಮೂಡಿವೆ. ಜಸ್ಟ್ ವೇಯ್ಟ್. 2020ರ ಮಧ್ಯಭಾಗದಲ್ಲಿ ಸಿನಿಮಾ ಬರಬಹುದು.

  • ಕಿಚ್ಚನ ಚಾಲೆಂಜ್ ಸ್ವೀಕರಿಸಿದ ಯಶ್, ಪ್ರಿಯಾ ಸುದೀಪ್

    sudeep's fitness challenge

    ಕಿಚ್ಚ ಸುದೀಪ್ ಹಾಕಿದ್ದ ಫಿಟ್‍ನೆಸ್ ಚಾಲೆಂಜ್‍ನ್ನು ಯಶ್ ಮತ್ತು ಪ್ರಿಯಾ ಸ್ವೀಕರಿಸಿದ್ಧಾರೆ. ಯಶ್‍ರದ್ದು ಒಂಥರಾ ಡಿಫರೆಂಟ್. ಅವರು ತಾವು ವ್ಯಾಯಾಮ ಮಾಡುವ ವಿಡಿಯೋ ಹಾಕೋದ್ರ ಬದಲು, ತಮ್ಮ ಗೆಳೆಯ ಚಕ್ಲಿ ಅಲಿಯಾಸ್ ಚೇತನ್‍ರನ್ನು ವ್ಯಾಯಾಮಕ್ಕೆ ಎಳೆದು ತಂದಿದ್ದಾರೆ. ಲೈಫಲ್ಲೇ ವ್ಯಾಯಾಮ ಮಾಡೋಕೆ ಆಗಲ್ಲ ಎನ್ನುತ್ತಿದ್ದ ಗೆಳೆಯನನ್ನು ಜಿಮ್‍ಗೆ ತಳ್ಳಿದ್ದಾರೆ.

    ಹಾಯ್ ಸುದೀಪ್, ನೀವು ನನಗೆ ಚಾಲೆಂಜ್ ಕೊಟ್ಟಿದ್ದೀರ. ಥ್ಯಾಂಕ್ಯೂ. ನಾವು ಆ್ಯಕ್ಟರ್‍ಗಳು ಯಾವಾಗಲೂ ಫಿಟ್ನೆಸ್ ಚಾಲೆಂಜ್ ಮಾಡ್ತನೇ ಇರ್ತೇವೆ. ಹಾಗಾಗಿ ಒಂದು ಟ್ವಿಸ್ಟ್ ಕೊಟ್ಟಿದ್ದೇನೆ. ಲೈಫಲ್ಲಿ ಫಿಟ್ ಆಗೋಕೆ ಸಾಧ್ಯವಿಲ್ಲ ಎನ್ನುವ ನನ್ನ ಬಾಲ್ಯದ ಗೆಳೆಯ ಚೇತನ್ ಅಲಿಯಾಸ್ ಚಕ್ಲಿಯ ಮೂಲಕ ನಿಮ್ಮ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿರುವ ಯಶ್, ತಮ್ಮ ಗೆಳೆಯನ ಫಿಟ್ನೆಸ್ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ.

    ಸುದೀಪ್ ತಮ್ಮ ಪತ್ನಿ ಪ್ರಿಯಾ ಅವರಿಗೂ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಪತಿಯ ಚಾಲೆಂಜ್ ಸ್ವೀಕರಿಸಿದ ಪ್ರಿಯಾ, ವೇಯ್ಟ್ ಲಿಫ್ಟ್ ಮಾಡುವ ವಿಡಿಯೋ ಹಾಕಿದ್ದಾರೆ. 

    ಇನ್ನು ಸುದೀಪ್ ಹಾಕಿರುವ ಚಾಲೆಂಜ್‍ನಲ್ಲಿ ಬಾಕಿ ಉಳಿದಿರೋದು ಶಿವರಾಜ್ ಕುಮಾರ್ ಮಾತ್ರ.

  • ಕಿರಾತಕ 2 - ಏನಿದು  ವಿವಾದ..?

    kirataka 2 controvery

    ಕೆಜಿಎಫ್ ನಂತರ ಯಶ್ ಜಯಣ್ಣ ಕಂಬೈನ್ಸ್‍ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದು ಅನಿಲ್ ಕುಮಾರ್ ನಿರ್ದೇಶನದ ಕಿರಾತಕ 2 ಚಿತ್ರದಲ್ಲಿ ಎಂಬ ವಿಷಯ ಹೊರಬಿದ್ದಿದ್ದೇ ತಡ, ವಿವಾದ ಸೃಷ್ಟಿಯಾಗಿದೆ. ಕಿರಾತಕ 2 ಟೈಟಲ್ ನಮ್ಮದು ಎಂದು ನಿರ್ದೇಶಕ ಪ್ರದೀಪ್ ರಾಜ್, ಚೇಂಬರ್ ಮೆಟ್ಟಿಲೇರಿದ್ದಾರೆ.

    ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್. ಕಿರಾತಕ 2 ಟೈಟಲ್ ನಮ್ಮ ಬಳಿಯೇ ಇದೆ. ಆ ಟೈಟಲ್ ನನ್ನ ಮತ್ತು ಯಶ್ ಕಾಂಬಿನೇಷನ್‍ನಲ್ಲಿ ಬಂದರೆ ಮಾತ್ರ ಓಕೆ. ಬೇರೆ ನಿರ್ದೇಶಕರಿಗೆ ಕೊಡುವುದಿಲ್ಲ ಎಂದು ಯಶ್ ಅವರಿಗೇ ಹೇಳಿದ್ದಾರಂತೆ ಪ್ರದೀಪ್ ರಾಜ್.

    ಕಿರಾತಕ 2 ಟೈಟಲ್ ನಮ್ಮ ಬಳಿ ಇದೆ ಎಂದಿರುವುದು ನಿರ್ಮಾಪಕ ಜಯಣ್ಣ. ಟೈಟಲ್ ರಿಜಿಸ್ಟರ್ ಮಾಡಿದ್ದೇವೆ. ಆಗಸ್ಟ್ 27ರಿಂದ ಚಿತ್ರೀಕರಣ ಶುರುವಾಗಲಿದೆ. ಲೊಕೇಷನ್ ಹುಡುಕಾಟದಲ್ಲಿದ್ದೇವೆ ಎಂದಿದ್ದಾರೆ ಜಯಣ್ಣ.

    ಚಿತ್ರಕ್ಕೆ ನಾಯಕಿಯಾಗಿರೋದು ಶ್ವೇತ ಅಲಿಯಾಸ್ ನಂದಿತಾ. ನಂದ ಲವ್ಸ್ ನಂದಿತಾದಲ್ಲಿ ಜಿಂಕೆಮರಿ ಹಾಡಿಗೆ ಬಿಂದಾಸ್ ಹೆಜ್ಜೆ ಹಾಕಿದ್ದ ನಂದಿತಾ.. ಕಿರಾತಕ-2 ಚಿತ್ರಕ್ಕೆ ಹೀರೋಯಿನ್. ಕಿರಾತಕನ ಅಪ್ಪ-ಅಮ್ಮನಾಗಿ ಈ ಚಿತ್ರದಲ್ಲೂ ನಾಗಾಭರಣ-ತಾರಾ ಕಾಣಿಸಿಕೊಳ್ಳಲಿದ್ದಾರೆ.

  • ಕಿರಾತಕ 2ನಲ್ಲಿ ಯಶ್

    yash in kirathaka

    ಯಶ್, ಸತತ 2 ವರ್ಷಗಳಿಂದ ಕೆಜಿಎಫ್‍ನಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬ ನಟ ಅಷ್ಟು ಸುದೀರ್ಘ ಅವಧಿಯನ್ನು ಒಂದೇ ಚಿತ್ರಕ್ಕೆ ಕೊಡುವುದು ಅಪರೂಪ. ಕೆಜಿಎಫ್ ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು, ಆ ಹಾಡಿನ ಚಿತ್ರೀಕರಣ ಆಗಸ್ಟ್ 7ರಿಂದ ಶುರುವಾಗಲಿದೆ. ಅದು ಮುಗಿದ ಮೇಲೆ ಯಶ್ ಹೊಸ ಚಿತ್ರಗಳತ್ತ ಗಮನಹರಿಸಲಿದ್ದಾರೆ. ಹಾಗೆ ಯಶ್ ಒಪ್ಪಿಕೊಂಡಿರುವ ಹೊಸ ಚಿತ್ರ ಕಿರಾತಕ 2.

    ಕಿರಾತಕ, ಯಶ್ ಅವರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಸಿನಿಮಾ. ಮಂಡ್ಯದ ಪುಂಡ ಹುಡುಗನಾಗಿ ಯಶ್ ಇಷ್ಟವಾಗಿದ್ದರು. ಈಗ ಕಿರಾತಕ 2 ಸಿನಿಮಾವನ್ನು ಅನಿಲ್ ಕುಮಾರ್ ಮಾಡುತ್ತಿದ್ದಾರೆ. ರ್ಯಾಂಬೋ2 ಸಕ್ಸಸ್ ಖುಷಿಯಲ್ಲಿರುವ ಅನಿಲ್, ಯಶ್ ಅವರಿಗಾಗಿ ಸಖತ್ ತರಲೆ, ತಮಾಷೆಯ ಕಥೆಯೊಂದನ್ನು ಸಿದ್ಧಪಡಿಸಿದ್ದಾರೆ. ಕೆಜೆಎಫ್ ಚಿತ್ರೀಕರಣ ಮುಗಿದ ನಂತರ, ಇದೇ ತಿಂಗಳು ಕಿರಾತಕ2 ಶುರುವಾಗಲಿದೆ. 

    ಇದು ಕಿರಾತಕ ಚಿತ್ರದ ಮುಂದುವರಿದ ಭಾಗವಾ..? ಹಾಗೊಂದು ಕುತೂಹಲ ಹುಟ್ಟೋಕೆ ಕಾರಣವಿದೆ. ಕಿರಾತಕ ಚಿತ್ರದಲ್ಲಿ ಹೀರೋ ದುಬೈನಲ್ಲಿ ಪತ್ನಿಯೊಂದಿಗೆ ಸೆಟ್ಲ್ ಆಗುತ್ತಾನೆ. ಈಗ.. ಕಿರಾತಕ 2 ಚಿತ್ರದ ಕೆಲವು ದೃಶ್ಯಗಳು ದುಬೈನಲ್ಲಿ ಚಿತ್ರೀಕರಣಗೊಳ್ಳಲಿವೆಯಂತೆ. ಉಳಿದಂತೆ ಇನ್ನೂ ಲೊಕೇಷನ್ ಹುಡುಕಬೇಕಿದೆ. ಚಿತ್ರದ ಕಥೆಯಲ್ಲಿ ಸೆಂಟಿಮೆಂಟ್, ಕಾಮಿಡಿ, ಮಾಸ್ ಅಪೀಲ್ ಎಲ್ಲವೂ ಇದೆ ಎಂದಿದ್ದಾರೆ ಅನಿಲ್.

    ಒಟ್ಟಿನಲ್ಲಿ ಆಗಸ್ಟ್‍ನಲ್ಲಿ ಯಶ್ ಗಡ್ಡಕ್ಕೆ ಮುಕ್ತಿ ಸಿಗಲಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಕಿರಾತಕ 2 ಸೆಟ್ಟೇರುವ ಸಾಧ್ಯತೆ ಇದೆ.