` ananth nag - chitraloka.com | Kannada Movie News, Reviews | Image

ananth nag

  • ಗುಡ್ ಲುಕ್ ಪವರ್ ಸ್ಟಾರ್ - ಸ್ಯಾಂಡಲ್‍ವುಡ್ ಶುಭಾಶಯ

    sandalwood wishes good luck to kavaludaari

    ಪಿಆರ್‍ಕೆ ಬ್ಯಾನರ್ ಮೂಲಕ ನಿರ್ಮಾಪಕರೂ ಆದ ಪುನೀತ್ ರಾಜ್‍ಕುಮಾರ್, ಸಿನಿಮಾ ನಿರ್ಮಾಣ ಖುಷಿ, ಕಿಕ್ ಎರಡನ್ನೂ ಕೊಟ್ಟಿದೆ ಎಂದಿದ್ದಾರೆ. ಕವಲುದಾರಿ, ಕನ್ನಡದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ ಸಿನಿಮಾ ಇದು.

    ತಮ್ಮನಿಗೆ ಮೊದಲು ಶುಭಾಶಯ ತಿಳಿಸಿರುವುದು ಅಣ್ಣ ಶಿವಣ್ಣ. ಸ್ವತಃ ನಟನಾಗಿ, ಇನ್ನೊಬ್ಬ ನಟನಿಗೆ ಸಿನಿಮಾ ಮಾಡಿದ್ದಾರೆ ಅಂದ್ರೆ, ಕಥೆ ನಿಜಕ್ಕೂ ಪವರ್‍ಫುಲ್ಲಾಗೇ ಇರುತ್ತೆ. ಅಪ್ಪು ಸರ್, ಸಿನಿಮಾ ನೋಡೋಕೆ ನಾನೂ ಕಾಯ್ತಿದ್ದೇನೆ ಎಂದಿರುವುದು ರಾಕಿಂಗ್ ಸ್ಟಾರ್ ಯಶ್.

    ಪುನೀತ್ ಅವರ ಸಂಬಂಧಿಯೂ ಆಗಿರುವ ನಟ ಶ್ರೀಮುರಳಿ ಕೂಡಾ ಪುನೀತ್‍ರ ಮೊದಲ ಪ್ರಯತ್ನಕ್ಕೆ ಶುಭವಾಗಲಿ ಎಂದಿದ್ದಾರೆ.

  • ಗೋಧಿ ಬಣ್ಣ ಡೈರೆಕ್ಟರ್ ಜೊತೆ ಮತ್ತೆ ಅನಂತ್‍ನಾಗ್

    godhi banna

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಭಿನಯ, ಅನಂತ್ ನಾಗ್ ಅವರೊಳಗಿದ್ದ ಅದ್ಭುತ ಕಲಾವಿದನನ್ನು ಮತ್ತೊಮ್ಮೆ ಪರಿಚಯಿಸಿದ್ದ ಚಿತ್ರ. ಆ ಚಿತ್ರದ ನಿರ್ದೇಶಕ ಹೇಮಂತ್ ರಾವ್, ಈಗ ಕವಲು ದಾರಿ ಚಿತ್ರ ನಿರ್ದೇಶಿಸುತ್ತಿದ್ದಾರಷ್ಟೆ.. ಆ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಹೇಮಂತ್ ರಾವ್ ಜೋಡಿ ಮತ್ತೊಮ್ಮೆ ಒಂದಾಗಿದೆ.

    ಚಿತ್ರದಲ್ಲಿ ಅನಂತ್‍ನಾಗ್, ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿರ್ದೇಶಕ ಹೇಮಂತ್ ಅವರಂತೂ ಚಿತ್ರದ ಬಗ್ಗೆ ಎಕ್ಸೈಟ್ ಆಗಿಬಿಟ್ಟಿದ್ದಾರೆ. ಚಿತ್ರದ ಹೀರೋ ರಿಷಿ. ಅದೇ ಆಪರೇಷನ್ ಆಲಮೇಲಮ್ಮ ಖ್ಯಾತಿಯ ರಿಷಿ. 

     

  • ಡೈರೆಕ್ಟರ್ ಹೇಮಂತ್‍ಗೆ ಅನಂತ್‍ನಾಗ್ ಪ್ರಶಸ್ತಿ

    director hemanth rao gets appreciation from ananth nag

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ನಿರ್ದೇಶಕ ಹೇಮಂತ್ ರಾವ್ ಅವರಿಗೆ ಅನಂತ್‍ನಾಗ್ ಪ್ರಶಸ್ತಿ ಸಿಕ್ಕಿದೆ. ಯಾರು..? ಯಾವಾಗ..? ಎಂದು ಕೇಳಬೇಡಿ. ಕೊಟ್ಟಿರುವುದು ಸ್ವತಃ ಅನಂತ್‍ನಾಗ್. ನಿರ್ದೇಶಕ ಹೇಮಂತ್ ಅವರನ್ನು ಮನಸಾರೆ ಮೆಚ್ಚಿಕೊಂಡಿರುವ ಅನಂತ್, ಹೇಮಂತ್‍ಗೆ ಮೆಚ್ಚುಗೆಯ ಅಭಿಮಾನದ ಪ್ರಶಸ್ತಿ ನೀಡಿದ್ದಾರೆ.

    ಒಬ್ಬ ಹುಡುಗ ಬಂದಿದ್ದ. ನೋಡೋಕೆ ಚೆನ್ನಾಗಿದ್ದ. ಎಂಜಿನಿಯರ್ ಅಂತೆ, ಮುಖದಲ್ಲಿ ಸಿನ್ಸಿಯಾರಿಟಿ ಇದೆ. ಅಲ್ಲೊಂದು ಸ್ಕ್ರಿಪ್ಟ್ ಕೊಟ್ಟು ಹೋಗಿದ್ದಾರೆ.. ನೋಡಿ.. ಎಂದು ಅನಂತ್‍ಗೆ ಮೊದಲು ಹೇಳಿದ್ದವರು ಗಾಯತ್ರಿ. ಅದು ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಸ್ಕ್ರಿಪ್ಟ್. ಪತ್ನಿಯ ಮಾತು ಕೇಳಿದ ಒಂದೆರಡು ದಿನಗಳ ನಂತರ ಸ್ಕ್ರಿಪ್ಟ್ ಕೈಗೆತ್ತಿಕೊಂಡ ಅನಂತ್‍ನಾಗ್‍ಗೆ ಸ್ಕ್ರಿಪ್ಟ್ ಪ್ರತಿ ಹಂತದಲ್ಲೂ ಇಷ್ಟವಾಗುತ್ತಾ ಹೋಯ್ತು. ತಕ್ಷಣ ಹೇಮಂತ್‍ಗೆ ಕರೆ ಮಾಡಿ ತಮ್ಮನ್ನು ಭೇಟಿ ಮಾಡಲು ಹೇಳಿದರು. ಆಗ ಹೇಮಂತ್ ಬ್ರಿಟಿಷ್ ಮತ್ತು ಅಮೆರಿಕನ್ ಶೈಲಿಯ ಸಿನಿಮಾಗಳ ಬಗ್ಗೆ ಮಾತನಾಡಿದಾಗ ನನ್ನ ನಂಬಿಕೆ ಗಟ್ಟಿಯಾಯ್ತು. ಹೀಗೆ ಹೇಳುತ್ತಾ ಹೋಗುವ ಅನಂತ್, ಗೋಬಸಾಮೈ ಚಿತ್ರವನ್ನು ರಿಲೀಸ್‍ಗೂ ಮೊದಲೇ ನೋಡಿದ್ದರಂತೆ. ತಮ್ಮ ಚಿತ್ರಗಳನ್ನಷ್ಟೇ ಅಲ್ಲ,  ಸಾಧಾರಣವಾಗಿ ಸಿನಿಮಾಗಳನ್ನೇ ಕಡಿಮೆ ನೋಡುವ ಅನಂತ್‍ನಾಗ್‍ಗೆ ಚಿತ್ರವೂ ಇಷ್ಟವಾಯ್ತು. ಹೀಗಾಗಿಯೇ ಕವಲುದಾರಿ ಚಿತ್ರವನ್ನು ಒಪ್ಪಿಕೊಂಡೆ. ಹೇಮಂತ್ ಒಬ್ಬ ಭರವಸೆಯ ನಿರ್ದೇಶಕ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅನಂತ್.

    ಕವಲುದಾರಿ ಚಿತ್ರದ ಸ್ಕ್ರಿಪ್ಟ್‍ನ್ನು ನೀಡದೆ, ನೆರೇಷನ್ ನೀಡಿದ್ದರಂತೆ ಹೇಮಂತ್. ಆ ನರೇಷನ್ ಬಹಳ ಇಷ್ಟವಾಯ್ತು. ಹೀಗಾಗಿ ಒಪ್ಪಿಕೊಂಡೆ, ಚಿತ್ರದಲ್ಲಿ ಮತ್ತೊಮ್ಮೆ ಹೇಮಂತ್ ಆ ಭರವಸೆ ಉಳಿಸಿಕೊಂಡಿದ್ದಾರೆ ಎಂದಿದ್ದಾರೆ ಅನಂತ್‍ನಾಗ್.

    ಕವಲುದಾರಿ ಚಿತ್ರದಲ್ಲಿ ಅನಂತ್‍ನಾಗ್, ರಿಷಿ, ಸುಮನ್ ರಂಗನಾಥ್, ರೋಷನಿ ಪ್ರಕಾಶ್, ಅಚ್ಯುತ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. 

  • ದಿಗಂತ್`ಗೆ ತಾತನಾಗುತ್ತಿದ್ದಾರೆ ಅನಂತ ನಾಗ್

    ದಿಗಂತ್`ಗೆ ತಾತನಾಗುತ್ತಿದ್ದಾರೆ ಅನಂತ ನಾಗ್

    ಅನಂತ್ ನಾಗ್ ಅವರಿಗೆ ತಾತನ ಪಾತ್ರಗಳು ಹೊಸದಲ್ಲ. ಆದರೆ ದಿಗಂತ್‍ಗೆ ತಾತನಾಗುತ್ತಿರುವುದು ಹೊಸದು. ತಿಮ್ಮಯ್ಯ & ತಿಮ್ಮಯ್ಯ ಅನ್ನೋ ಚಿತ್ರವೊಂದು ಸೆಟ್ಟೇರುತ್ತಿದ್ದು, ದಿಗಂತ್ ಮತ್ತು ಅನಂತ ನಾಗ್ ಮೊಮ್ಮಗ, ತಾತನಾಗಿ ನಟಿಸಲಿದ್ದಾರೆ. ವಜ್ರಕಾಯ ಖ್ಯಾತಿಯ ಶುಭ್ರಾ ಅಯ್ಯಪ್ಪ ಹೀರೋಯಿನ್.

    ಸಂಜಯ್ ಶರ್ಮಾ ಎಂಬುವವರು ಚಿತ್ರವನ್ನು ನಿರ್ದೇಶಿಸಲಿದ್ದು, ಅವರ ಅಣ್ಣ ರಾಜೇಶ್ ಶರ್ಮಾ ನಿರ್ಮಾಪಕರಾಗಿದ್ದಾರೆ. ದಿಗಂತ್ ಮತ್ತು ಅನಂತ್ ಇಬ್ಬರೂ ಒಟ್ಟಿಗೇ ಕೆಲವು ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಪಂಚರಂಗಿ, ಗಾಳಿಪಟ ಸೇರಿದಂತೆ ಕಾಂಬಿನೇಷನ್ ಚಿತ್ರಗಳು ಹಿಟ್ ಕೂಡಾ ಆಗಿವೆ.

  • ದೃಶ್ಯ 2ಗೆ ಅನಂತ್ ನಾಗ್ ಎಂಟ್ರಿ..!

    ದೃಶ್ಯ 2ಗೆ ಅನಂತ್ ನಾಗ್ ಎಂಟ್ರಿ..!

    ದೃಶ್ಯ. ಮಲಯಾಳಂನ ಈ ಸಿನಿಮಾ ದೇಶದಲ್ಲೇ  ಹಲವು ಭಾಷೆಗಳಿಗೆ ರೀಮೇಕ್ ಆದ ಸಿನಿಮಾ. ಕನ್ನಡದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸೂಪರ್ ಹಿಟ್ ಆಗಿತ್ತು. ದೃಶ್ಯಂ 2 ಸಿನಿಮಾ ಬಂದಾಗ ಒಟಿಟಿಯಲ್ಲಿ ಭಾರಿ ಸದ್ದು ಮಾಡಿತ್ತು. ಈಗಾಗಲೇ ತಮಿಳು, ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ. ಕನ್ನಡದಲ್ಲೂ ಅದೇ ಟೀಂ ರಿಪೀಟ್ ಆಗಿದೆ.

    ರವಿಚಂದ್ರನ್, ನವ್ಯಾ ನಾಯರ್, ಆರೋಹಿ ನಾರಾಯಣ್, ಶಿವಾಜಿ ಪ್ರಭು, ಆಶಾ ಶರತ್ ಎಲ್ಲರೂ ಇರುತ್ತಾರೆ. ಪ್ರಮೋದ್ ಶೆಟ್ಟಿ ಹೊಸ ಸೇರ್ಪಡೆ. ಈಗ ಇದೇ ಚಿತ್ರದಲ್ಲಿ ಅನಂತ್ ನಾಗ್ ನಟಿಸುತ್ತಿದ್ದಾರಂತೆ. ಅನಂತ್ ಓಕೆ ಎಂದಿದ್ದಾರೆ. ಆದರೆ.. ಪಾತ್ರ ಯಾವುದು? ಕಾದಂಬರಿಕಾರನ ಪಾತ್ರ ಇರಬಹುದು ಎನ್ನುವುದು ಒಂದು ಊಹೆ. ಪಿ.ವಾಸು ಅನಂತ್ ಅವರಿಗೆ ಯಾವ ಪಾತ್ರ ಕೊಟ್ಟಿದ್ದಾರೋ ಗೊತ್ತಿಲ್ಲ.  

  • ನಿವೃತ್ತ ಪೊಲೀಸ್ ಆಫೀಸರ್ ಅನಂತ್‍ನಾಗ್

    ananth nag plays a role of retired cop

    ಕವಲುದಾರಿ ಚಿತ್ರದಲ್ಲಿ ಅನಂತ್ ನಾಗ್ ಅವರ ಪಾತ್ರ ಯಾವುದು ಎನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಕವಲುದಾರಿ ಚಿತ್ರದ 12 ದಿನದ ಶೂಟಿಂಗ್ ಮುಗಿಸಿರುವ ಹೇಮಂತ್ ರಾವ್, ಕತೆ ಬರೆದು ಪಾತ್ರಗಳ ಹುಡುಕಾಟಕ್ಕೆ ನಿಂತಾಗ, ಈ ಪಾತ್ರಕ್ಕೆ ಅನಂತ್‍ನಾಗ್ ಅವರನ್ನು ಹೊರತುಪಡಿಸಿ ಬೇರೆ ಕಲಾವಿದರೇ ಕಲ್ಪನೆಯಲ್ಲಿ ಬರಲಿಲ್ಲ. ಹೀಗಾಗಿ ಮತ್ತೆ ಒಂದಾಗುವ ಅದೃಷ್ಟ ಒಲಿದುಬಂತು ಎಂದಿದ್ದಾರೆ.

    ಕವಲು ದಾರಿ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಚಿತ್ರ. ಹೇಮಂತ್ ರಾವ್ ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಿಸುತ್ತಿರುವ 2ನೇ ಚಿತ್ರ. 2ನೇ ಚಿತ್ರದಲ್ಲೂ ಹೇಮಂತ್ ರಾವ್, ಅನಂತ್ ನಾಗ್ ಜೋಡಿ ಮುಂದುವರೆದಿದೆ. ಕೆಂಪು ಬಣ್ಣದ ಶಾಲು ಹೊದ್ದಿರುವ ಅನಂತ್ ನಾಗ್ ಬಿಳಿಬಣ್ಣದ ಜುಬ್ಬಾ ಪೈಜಾಮದಲ್ಲಿರುವ ಫೋಟೋ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

     

  • ಬಾಲಿವುಡ್‍ಗೆ ಗೋಧಿ ಬಣ್ಣ..

    godi banna to be remake in hindi

    ಗೋಧಿ ಬಣ್ಣ ಸಾಧಾರಣ ಮೈಕಟ್ಟು.. ತನ್ನ ವಿಭಿನ್ನ ಟೈಟಲ್‍ನಿಂದಾಗಿಯೇ ಗಮನ ಸೆಳೆದಿದ್ದ ಚಿತ್ರ, ವಿಶಿಷ್ಟ ಕಥೆ, ಅನಂತ್‍ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಅವರ ಅಭಿನಯ, ಹೇಮಂತ್ ರಾವ್ ಅವರ ಅಚ್ಚುಕಟ್ಟಾದ ನಿರ್ದೇಶನದಿಂದ ಕನ್ನಡಿಗರ ಮನ ಗೆದ್ದಿತ್ತು. ಹೀಗೆ ಕನ್ನಡಿಗರ ಮನಗೆದ್ದಿದ್ದ ಚಿತ್ರ, ಈಗ ಬಾಲಿವುಡ್‍ಗೆ ಹೊರಟಿದೆ.

    ಸುಮಾರು ದಿನಗಳಿಂದ ಮಾತುಕತೆ ನಡೆಯುತ್ತಿತ್ತು. ಈಗ ಫೈನಲ್ ಆಗಿದೆ. ಕನ್ನಡದ ಚಿತ್ರವೊಂದು ಹಿಂದಿಗೆ ರೀಮೇಕ್ ಆಗಲಿದೆ. ನನ್ನ ಚಿತ್ರವೇ ರೀಮೇಕ್ ಆಗಲಿದೆ ಎನ್ನುವುದು ಹೆಮ್ಮೆಯ ವಿಚಾರ ಎಂದು ಖುಷಿ ಹಂಚಿಕೊಂಡಿದ್ದಾರೆ ಹೇಮಂತ್ ರಾವ್.

    ಗೋಧಿಬಣ್ಣದ ನಿರ್ಮಾಪಕರಾದ ಪುಷ್ಕರ್, ರಕ್ಷಿತ್ ಶೆಟ್ಟಿ ಎಲ್ಲರೂ ಗೋಧಿ ಬಣ್ಣಕ್ಕೆ ಸಿಕ್ಕ ಮನ್ನಣೆ ನೋಡಿ ಖುಷಿಗೊಂಡಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ಗೋಧಿ ಬಣ್ಣದ ತಾರಾಬಳಗ, ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

  • ರಕ್ಷಿತ್ ಶೆಟ್ಟಿ ಜೊತೆ ಅನಂತ್ ನಾಗ್ ಆಬ್ರಕಡಾಬ್ರ

    ರಕ್ಷಿತ್ ಶೆಟ್ಟಿ ಜೊತೆ ಅನಂತ್ ನಾಗ್ ಆಬ್ರಕಡಾಬ್ರ

    ಅನಂತ್ ನಾಗ್ ಮತ್ತೊಮ್ಮೆ ಡಿಫರೆಂಟ್ ಕಾನ್ಸೆಪ್ಟಿನ ಸಿನಿಮಾಕ್ಕೆ ಯೆಸ್ ಎಂದಿದ್ದಾರೆ. ಚಿತ್ರದ ಹೆಸರು ಆಬ್ರಕಡಾಬ್ರ. ಇದೊಂದು ಮ್ಯಾಜಿಕ್ ಹಿನ್ನೆಲೆಯಲ್ಲಿ ನಡೆಯೋ ಸ್ಟೋರಿಯಂತೆ. ಚಿತ್ರಕ್ಕೆ ಸಾಥ್ ನೀಡಿರುವುದು ರಕ್ಷಿತ್ ಶೆಟ್ಟಿ. ಹಾಗಂತ ಅವರಿಲ್ಲಿ ನಟಿಸುತ್ತಿಲ್ಲ. ರಕ್ಷಿತ್ ಶೆಟ್ಟಿ ಜೊತೆಯಲ್ಲೇ ಇದ್ದ, ಶಾರ್ಟ್ ಫಿಲ್ಮ್‍ಗಳಲ್ಲಿ ಆಕ್ಟಿವ್ ಇದ್ದ ಶಿಶಿರ್ ರಾಜ್‍ಮೋಹನ್ ಅವರಿಗೆ ಡೈರೆಕ್ಟರ್ ಸೀಟ್ ಕೊಟ್ಟಿದ್ದಾರೆ ರಕ್ಷಿತ್.

    ಒಬ್ಬ ಹಿರಿಯ ನಾಗರಿಕ ತಮ್ಮ ಜೀವನದಲ್ಲಿ ತಾನು ಎಂದೆಂದೂ ಎದುರಿಸದ ಸವಾಲುಗಳನ್ನು ಎದುರಿಸುವ, ಪ್ರಶ್ನಿಸುವ ಕಥೆ ಇದು. ಚಿತ್ರದ ಕಥೆ ಮತ್ತು ಚಿತ್ರಕಥೆಯಲ್ಲಿ ಅನಂತ್ ನಾಗ್ ಒಳ್ಳೆಯ ಇನ್‍ಪುಟ್ಸ್ ಕೂಡಾ ಕೊಟ್ಟಿದ್ದಾರೆ. ಅನಂತ್ ನಾಗ್ ಅವರ ಜೊತೆ ಬಿ.ವಿ.ಶೃಂಗ, ಸಿರಿ ರವಿಕುಮಾರ್ ಮತ್ತು ಅವಿನಾಶ್ ರೈ ಕೂಡಾ ಇರುತ್ತಾರೆ. ಅವರೆಲ್ಲರ ಬೆನ್ನ ಹಿಂದೆ ರಕ್ಷಿತ್ ಶೆಟ್ಟಿ ಇರುತ್ತಾರೆ.

  • ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಅನಂತನಾಗ್ 50 ಪೂರೈಸಿದ ಸಂಭ್ರಮ

    ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಅನಂತನಾಗ್ 50 ಪೂರೈಸಿದ ಸಂಭ್ರಮ

    ಅನಂತ್ ನಾಗ್ ಅವರು ಚಿತ್ರರಂಗಕ್ಕೆ 50 ವರ್ಷ ಪೂರೈಸಿದೆ. ವಯಸ್ಸುಉ 75 ದಾಟಿದೆ. ಈ 50 ದಶಕದ ಅವಧಿಯಲ್ಲಿ ಅನಂತ್ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಯಲ್ಲಿ ಛಾಪು ಮೂಡಿಸಿದ್ದಾರೆ. ಹಲವು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿರುವ ಅನಂತ್, ಪೋಷಕ ನಟನೆಗೂ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟ ನಟ.

    ತಮ್ಮ ಶಂಕರ್ ಜೊತೆ ಸಂಕೇತ್ ಸ್ಟುಡಿಯೋ ಕಟ್ಟಿದ್ದ ಅನಂತ್, ತಾವೂ ಬೆಳೆದರು. ತಮ್ಮ ಜೊತೆಯಲ್ಲಿದ್ದವರನ್ನೂ ಬೆಳೆಸಿದರು. ಹೀರೋ ಆಗಿ ಸ್ಟಾರ್ ನಟರಾಗಲಿಲ್ಲ. ಆದರೆ, ಅದ್ಭುತ ಕಲಾವಿದರಾಗಿಯೇ ಹೆಸರು ಮಾಡಿರುವ ಅನಂತ್, ಇಂದಿಗೂ ಬೇಡಿಕೆಯಲ್ಲಿರುವ ಕಲಾವಿದ. ಅನಂತ್ ಅವರು ಚಿತ್ರರಂಗಕ್ಕೆ ಬಂದು 5 ದಶಕ ಪೂರೈಸಿದ ಸಂಭ್ರಮವನ್ನು ರಾಘವೇಂದ್ರ ಚಿತ್ರವಾಣಿಯವರು ಆಚರಿಸಿದರು. ಈ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಅವರು, ಅನಂತ್ ನಾಗ್ ಅವರನ್ನು ಸಂದರ್ಶನ ಮಾಡಿದ್ದು ವಿಶೇಷವಾಗಿತ್ತು.

    ರಾಘವೇಂದ್ರ ಚಿತ್ರವಾಣಿ ಸಂಸ್ಥೆಯಿಂದ ಸಿನಿಮಾಗಳಿಗೆ ಪಿಆರ್`ಓ ಆಗಿರುವ ಸುಧೀಂದ್ರ ವೆಂಕಟೇಶ್ ಮತ್ತು ಅವರ ಕುಟುಂಬ, ಅನಂತ್ ದಂಪತಿಯನ್ನು ಸನ್ಮಾನಿಸಿತು.

     

  • ರಿಷಬ್ ರುದ್ರಪ್ರಯಾಗಕ್ಕೆ ಅನಂತ್ ನಾಗ್ ಹೀರೋ

    ananth nag roped in as hero for rudraprayag

    ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ರುದ್ರಪ್ರಯಾಗ. ಜಯಣ್ಣ ಕಂಬೈನ್ಸ್‍ನಲ್ಲಿ ನಿರ್ಮಾಣವಾಗ್ತಿರೋ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಚುರುಕಾಗಿನಡೆಯುತ್ತಿವೆ. ರಿಷಬ್ ನಿರ್ದೇಶನ ಇರುವ ಕಾರಣ ಕಥೆ ಫೈನಲ್ ಆದ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿತೀಡಿ ರೂಪಿಸಲಾಗಿದೆ. ಅದೆಲ್ಲವನ್ನೂ ಫೈನಲ್ ಮಾಡಿಕೊಂಡೇ ನಿರ್ದೇಶನಕ್ಕಿಳಿಯುವ ರಿಷಬ್, ತಮ್ಮ ಚಿತ್ರಕ್ಕೆ ಹೀರೋ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಅನಂತ್‍ನಾಗ್.

    ಸ.ಹಿ.ಪ್ರಾ.ಪಾ. ದಲ್ಲಿ ಕೂಡಾ ಅನಂತ್ ನಟಿಸಿದ್ದರು. ಒಂದು ಲೆಕ್ಕದಲ್ಲಿ ಆ ಚಿತ್ರಕ್ಕೂ ಅನಂತ್ ಅವರೇ ಹೀರೋ. ಈ ಚಿತ್ರಕ್ಕೂ ಅನಂತ್ ಅವರೇ ಹೀರೋ.

    ಇದು ಮುಖ್ಯಪಾತ್ರವಲ್ಲ. ಅವರೇ ಹೀರೋ ಎಂದು ಅಧಿಕೃತವಾಗಿಯೇ ಘೋಷಿಸಿದ್ದಾರೆ ರಿಷಬ್ ಶೆಟ್ಟಿ. ಈಗ ಅನಂತ್ ಅವರಿಗೆ ನಾಯಕಿಯನ್ನು ಹುಡುಕುತ್ತಿದ್ದಾರೆ ರಿಷಬ್.

    ಕಥೆ ಕೇಳಿ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅನಂತ್ ನಾಗ್. ಡಿಸೆಂಬರ್‍ನಲ್ಲಿ ರುದ್ರಪ್ರಯಾಗ ಶೂಟಿಂಗ್ ಶುರುವಾಗಲಿದೆ. 55 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಬೆಳಗಾವಿ, ಖಾನಾಪುರ, ಉತ್ತರಾಖಂಡಗಳಲ್ಲಿ ಶೂಟಿಂಗ್ ನಡೆಯಲಿದೆ.