` om prakash rao - chitraloka.com | Kannada Movie News, Reviews | Image

om prakash rao

  • Dhananjay All Set to Turn Hero

    hero image

    One actor who has plenty of films in hand, but none for release is none than Dhananjay of 'Directors Special' fame. The actor is currently acting in 'Allama', 'Badmash', 'Boxer', 'Vijayaditya' and other films.

    Now the actor has signed a new film called 'Hero' with Omprakash Rao as the director. Earlier, Omprakash was supposed to direct Dhananjay in 'Huchcha 2'. However, 'Madarangi' Krishna replaced Dhananjay and the film is complete now. Even before its release, Omprakash has announced 'Hero' with Dhananjay.

    The film which is being produced by Umesh Reddy is all set to be launched on the Varamahalakshmi festival day. Sharath Chandru, Krishna, Shekhar Kotyan and others play prominent roles in the film.

  • Om Prakash Out of Bigg Boss

    om prakash rao image

    Director Om Prakash Rao is out of the Bigg Boss4. There was a news that the actress Sanjana has been out from this show. But Actor Mohan, Patham, Niranjan and Sanjana was saved from the house and by the voters.

    Last week Karunya Ram was out of Bigg boss 4.

     

  • ಇದೇ ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು - ರೇಖಾದಾಸ್

    rekha, om prakash marriage image

    ಪರಭಾಷೆಯಿಂದ ಕರ್ನಾಟಕಕ್ಕೆ ಬಂದ ನಟಿ ರೇಖಾದಾಸ್. ನಂತ್ರ ಕನ್ನಡ ಕಲಿತು ಕನ್ನಡದ ಹುಡುಗ ಓಂ ಪ್ರಕಾಶ್ ಅವರನ್ನ ಮದುವೆಯಾದರು. ಆ ಮದುವೆಯ ನಂತ್ರ ರೇಖಾ ದಾಸ್ ಬದುಕು ಏನಾಯಿತು ನೋಡಿ.

    Actress Rekha Das came to Karnataka from other state and learnt to speak Kannada fluently. Later She got married to Kannadiga Om Prakash Rao. After the marriage what happened to her 

     

  • ಒಟ್ಟೊಟ್ಟಿಗೇ 5 ಚಿತ್ರಗಳ ಜೊತೆ ಓಂ ಪ್ರಕಾಶ್ ರಾವ್ - ಬದಲಾವಣೆಗೆ ಮಿತಿಯೇ ಇಲ್ಲ

    om prakash rao back with 5 films

    ಕಟ್ಟೆ ಚಿತ್ರದ ಸೋಲಿನ ನಂತರ ನಿರ್ದೇಶಕ ಓಂ ಪ್ರಕಾಶ್ ರಾವ್ ಹೆಚ್ಚೂ ಕಡಿಮೆ ನಾಪತ್ತೆಯಾಗಿಬಿಟ್ಟಿದ್ದರು. ಈಗ ಒಟ್ಟೊಟ್ಟಿಗೇ 5 ಚಿತ್ರಗಳ ಸಮೇತ ಬರುತ್ತಿದ್ದಾರೆ. ಹುಚ್ಚ-2, ಅಯ್ಯ-2, ಚಂದ್ರಲೇಖ ರಿಟರ್ನ್, ತ್ರಿವಕ್ರಮ ಹಾಗೂ ಹೀರೋ.

    ಅಯ್ಯ-2 ಚಿತ್ರಕ್ಕೆ ಹೀರೋ ಆಗಿದ್ದವರು ಚಿರಂಜೀವಿ ಸರ್ಜಾ. ಒಂದು ಹಂತದ ಶೂಟಿಂಗ್ ಕೂಡಾ ಆಗಿತ್ತು. ಈಗ ಚಿರಂಜೀವಿ ಸರ್ಜಾ ಮೇಲೆ ಮುನಿಸಿಕೊಂಡಿರೋ ಓಂ, ಆ ಚಿತ್ರಕ್ಕೆ ನಾಯಕರನ್ನಾಗಿ ವಿನೋದ್ ಪ್ರಭಾಕರ್ ಅವರನ್ನ ಹಾಕಿಕೊಂಡಿದ್ದಾರೆ.

    ಇನ್ನು ಹೀರೋ ಚಿತ್ರಕ್ಕೂ ಅಷ್ಟೆ. ಮೊದಲು ಆಯ್ಕೆಯಾಗಿದ್ದವರು ಧನಂಜಯ್. ಈಗ ಆ ಜಾಗಕ್ಕೆ ಬೇರೊಬ್ಬ ಹೀರೋನನ್ನು ತರುತ್ತಿದ್ದಾರಂತೆ. ಧನಂಜಯ್ ಬಗ್ಗೆ ಓಂಪ್ರಕಾಶ್ ಕೆಂಡಕಾರಿದ್ದಾರೆ.

    ಓಂ ನಿರ್ದೇಶನದ ಮತ್ತೊಂದು ಚಿತ್ರ ತ್ರಿವಿಕ್ರಮ. ಶಿವರಾಜ್ ಕುಮಾರ್ ಜೊತೆಯಲ್ಲಂತೆ. ಶಿವರಾಜ್ ಕುಮಾರ್‍ಗೆ ಎಕೆ 47, ಸಿಂಹದ ಮರಿ ಮೊದಲಾದ ಚಿತ್ರ ನಿರ್ದೇಶಿಸಿದ್ದ ಓಂಪ್ರಕಾಶ್, ಚಿತ್ರದ ಒನ್‍ಲೈನ್ ಕಥೆ ಹೇಳಿದ್ದಾರಂತೆ. ಶಿವಣ್ಣ ಒಪ್ಪಿದ್ದು, ಚಿತ್ರಕಥೆ ಕೆಲಸ ಶುರುವಾಗಬೇಕಿದೆ.

    ಇನ್ನು ಹುಚ್ಚ 2 ಮತ್ತು ಚಂದ್ರಲೇಖ ರಿಟರ್ನ್ ಚಿತ್ರದಲ್ಲಿ ಹೀರೋ ಆಗಿರುವುದು ಮದರಂಗಿ ಕೃಷ್ಣ.

    ಒಟ್ಟಿನಲ್ಲಿ ಓಂ ಪ್ರಕಾಶ್ ರಾವ್ ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿದ್ದಾರೆ.

  • ಚಿತ್ರಲೋಕ ವೀರೇಶ್ ಗೆ ಕ್ಷಮೆ ಕೇಳಿದ ಓಂ ಪ್ರಕಾಶ್ ರಾವ್

    ಚಿತ್ರಲೋಕ ವೀರೇಶ್ ಗೆ ಕ್ಷಮೆ ಕೇಳಿದ ಓಂ ಪ್ರಕಾಶ್ ರಾವ್

    ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಓಂಪ್ರಕಾಶ್ ರಾವ್ ಈಗ ಚಿತ್ರಲೋಕ ಡಾಟ್ ಕಾಮ ಸಂಪಾದಕ ಕೆ.ಎಂ.ವೀರೇಶ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಅವರು ಕ್ಷಮೆ ಕೇಳೋಕೆ ಕಾರಣ ಅವರೇ ಮಾಡಿಕೊಂಡ ತಪ್ಪು. ಹೇಳಿದ ಸುಳ್ಳು. ಮಾಡಿದ ತಲೆಬುಡವಿಲ್ಲದ ಆರೋಪ.

    ಇತ್ತೀಚೆಗೆ ಯೂಟ್ಯೂಬ್ ಚಾನೆಲ್ಲೊಂದರಲ್ಲಿ ಮಾತನಾಡುತ್ತಿದ್ದ ಓಂಪ್ರಕಾಶ್ ರಾವ್ ನನಗೆ ಚಿತ್ರಲೋಕ ವೀರೇಶ್ ಕಟ್ಟೆ ಚಿತ್ರಕ್ಕೆ ಎಲ್ಲ ಕಡೆ ಪ್ರಚಾರ ಕೊಡಿಸುತ್ತೇನೆ ಎಂದು 1.8 ಕೋಟಿ ಹಣ ತೆಗೆದುಕೊಂಡು ಮೋಸ ಮಾಡಿದರು ಎಂದಿದ್ದರು. ನಂತರ 16 ಲಕ್ಷ ಎಂದಿದ್ದರು. 

    ಆದರೆ ಯಾವಾಗ ಕೆ.ಎಂ.ವೀರೇಶ್ ಓಂ ಪ್ರಕಾಶ್ ರಾವ್ ಸುವರ್ಣ ನ್ಯೂಸ್ ಜಾಹೀರಾತಿಗಾಗಿ ನೀಡಿದ್ದ ಹಣದ ದಾಖಲೆ, ರಸೀದಿ, ದಿನಾಂಕ, ರಸೀದಿಯ ನಂಬರ್‍ಗಳ ಸಮೇತ ಮುಂದಿಟ್ಟು ಕಾನೂನು ಕ್ರಮದ ಎಚ್ಚರಿಕೆ ಕೊಟ್ಟರೋ.. ಆಗ ಓಂಪ್ರಕಾಶ್ ರಾವ್ ಅವರಿಗೆ ತಪ್ಪಿನ ಅರಿವಾಗಿದೆ.

    ಸಾ ರಾ ಗೋವಿಂದು ಕರೆದ ತಕ್ಷಿಣ ಓಂ ಪ್ರಕಾಶ್ ತಪ್ಪಾಯ್ತು ಕ್ಷಮಿಸಿ ಎಂದು ಬಂದಿದ್ದಾರೆ. ಕ್ಷಮೆ ಕೇಳಿದ್ದಾರೆ. ಗೊತ್ತಿಲ್ಲದೇ ಆದ ತಪ್ಪು. ಏನೋ ಮಾತನಾಡೋಕೆ ಹೋಗಿ ಇನ್ನೇನೋ ಮಾತನಾಡಿಬಿಟ್ಟೆ. ಕ್ಷಮಿಸಿ ಎಂದು ಕೈಮುಗಿದಿದ್ದಾರೆ. ಜೊತೆ ವೀರೇಶ್ ಅವರ ಪತ್ನಿ ಬಳಿ ಮಾತನಾಡಿ ಅವರಿಗೆ ಸಾರಿ ಕೇಳಿದ್ದಾರೆ.