ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಾಗರಹಾವು ಚಿತ್ರ, ಥಿಯೇಟರುಗಳಲ್ಲಿ ಮೋಡಿ ಮಾಡುತ್ತಿದ್ದರೆ, ಅತ್ತ ಅಭಿಮಾನಿಗಳು ವಿಷ್ಣು ಹಬ್ಬದ ಆಚರಣೆಗೆ ಸಿದ್ಧರಾಗುತ್ತಿದ್ದಾರೆ. ವಿಷ್ಣುವರ್ಧನ್ ಅಭಿಮಾನಿ, ವಿಷ್ಣುಸೇನಾ ಸಮಿತಿ
ಸೆ. 16, 17, 18ರಂದು ವಿಷ್ಣು ರಾಷ್ಟ್ರೀಯ ಉತ್ಸವ ಆಯೋಜಿಸಿದೆ.
ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬವನ್ನು ರಾಷ್ಟ್ರೀಯ ಉತ್ಸವವನವನಾಗ ಆಚರಿಸುತ್ತಿದೆ ವಿಷ್ಣು ಸೇನಾ ಸಮಿತಿ. ರಾಷ್ಟ್ರೀಯ ಉತ್ಸವದ ಸಂಪೂರ್ಣ ಮಾಹಿತಿ ನೀಡಿದ್ದಾರೆ ವಿಷ್ಣುಸೇನಾ ಸಮತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.
ಸೆ.16ರಂದು ಕೆ.ಆರ್.ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಉತ್ಸವ ಉದ್ಘಾಟನೆ. ಬಿಬಿಎಂಪಿಯಿಂದ ಕಲಾಕ್ಷೇತ್ರದವರೆಗೆ ವಿವಿಧ ಜಾನಪದ ತಂಡಗಳ ಮೆರವಣಿಗೆ. ಮೆರವಣಿಗೆಯಲ್ಲಿ ನೂರಾರು ಕಲಾತಂಡಗಳು ಹಾಗೂ ಚಿತ್ರರಂಗದ ಕಲಾವಿದರ ಜೊತೆಗೆ 10 ಸಾವಿರಕ್ಕೂ ಹೆಚ್ಚು ಅಭಿಮಾನಗಳು ಭಾಗಿಯಾಗಲಿದ್ದಾರೆ. ವಿಷ್ಣುವರ್ಧನ್ ಅವರ ಕುರಿತ 3 ಕೃತಿಗಳೂ ಬಿಡುಗಡೆಯಾಗಲಿವೆ.
ಈ ಬಾರಿ ವೀರಪ್ಪನಾಯ್ಕ ಗೆಟಪ್ನ ಪುತ್ಥಳಿ ಅನಾವರಣಗೊಳ್ಳಲಿದೆ. ವಿಷ್ಣು ಬದುಕು, ಸಾಧನೆ ಕುರಿತು ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ವಿಷ್ಣು ಅವರೊಂದಿಗೆ ನಟಿಸಿದ್ದ ಕಲಾವಿದರು ಹಾಗೂ ಯುವನಟರು ವಿಚಾರ ಸಂಕಿರಣ ನಡೆಸಲಿದ್ದಾರೆ. ಮೂರೂ ದಿನ ಸಂಜೆ ವಿಷ್ಣುಗೀತೆಗಳ ರಸಸಂಜೆ ನಡೆಯಲಿದೆ. ಒಟ್ಟಿನಲ್ಲಿ ಸೆಪ್ಟೆಂಬರ್ನಲ್ಲಿ ವಿಷ್ಣು ಹಬ್ಬ.