` dr vishnuvardhan, - chitraloka.com | Kannada Movie News, Reviews | Image

dr vishnuvardhan,

  • ವಿಷ್ಣು ಅಭಿಮಾನದ ಉತ್ಸವದಲ್ಲಿ ಏನಿದು ವಿವಾದ..?

    what is vishnuvardhan's birthday controversy

    ಇದೇ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬವಿದೆ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನ ವಿಷ್ಣು ಅಭಿಮಾನಿಗಳ ಸಂಘ ವಿಷ್ಣು ಸೇನಾ ಸಮಿತಿ ಅದ್ಧೂರಿಯಾಗಿ ಆಚರಿಸುತ್ತಿದೆ. ಇದರ ನಡುವೆಯೇ ಭಾರತಿ ವಿಷ್ಣುವರ್ಧನ್ ನೀಡಿರುವ ಹೇಳಿಕೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

    ಯಜಮಾನರು ಆಡಂಬರದ ಕಾರ್ಯಕ್ರಮ ಇಷ್ಟಪಡುತ್ತಿರಲಿಲ್ಲ. ಕೆಲವರು ಅವರ ಹೆಸರಿನಲ್ಲಿ ಉತ್ಸವ, ಕಾರ್ಯಕ್ರಮ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು ಭಾರತಿ ವಿಷ್ಣುವರ್ಧನ್.

    ಈ ಕುರಿತು ಪ್ರತಿಕ್ರಿಯೆ ನೀಡಿರುವು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಆಚರಿಸಲು ಯಾರಿಂದಲೂ ಹಣ ಸ್ವೀಕರಿಸಿಲ್ಲ. ನಮ್ಮ ಸ್ವಂತ ಹಣದಿಂದ, ಕೇವಲ ಅಭಿಮಾನದಿಂದ ಖರ್ಚು ಮಾಡುತ್ತಿದ್ದೇವೆ. ಅಷ್ಟೇ ಅಲ್ಲ, ವಿಷ್ಣು ಅವರ ಹುಟ್ಟುಹಬ್ಬವನ್ನು ಅದ್ಧೂರಿತನಕ್ಕಿಂತ ಹೆಚ್ಚಾಗಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದ್ದೇವೆ ಎಂದಿದ್ದಾರೆ.

    ಇದರ ನಡುವೆ ಸ್ಮಾರಕ ವಿವಾದವೂ ಮತ್ತೊಮ್ಮೆ ಕೇಳಿಸಿದೆ. ವಿಷ್ಣು ಸ್ಮಾರಕ ಕುರಿತಂತೆ ಇದುವರೆಗೆ 6 ಸಿಎಂಗಳನ್ನು ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಣದ ಕೈಗಳು ಅಡ್ಡಿಪಡಿಸುತ್ತಿವೆ ಎಂದು ದೂರಿದ್ದಾರೆ ಭಾರತಿ.

    ಈ ಕುರಿತು ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಹೇಳುವುದು ಇಷ್ಟು. ಸ್ಮಾರಕ ಮೈಸೂರಿನಲ್ಲಿ ಆಗುವುದಕ್ಕೆ ನಮ್ಮ ವಿರೋಧವಿದೆ. ಅವರ ಸಂಸ್ಕಾರ ನಡೆದ ಸ್ಥಳದಲ್ಲೇ ಸ್ಮಾರಕವೂ ಆಗಲಿ ಎನ್ನುವುದು ನಮ್ಮ ಬಯಕೆ. ಅಷ್ಟೇ ಹೊರತು ಮತ್ತೇನಿಲ್ಲ. ಇನ್ನು ವಿಷ್ಣು ಅವರ ಹುಟ್ಟುಹಬ್ಬವನ್ನು ನಮ್ಮ ಉಸಿರು ಇರುವವರೆಗೂ ಆಚರಿಸುತ್ತೇವೆ. ನಮ್ಮ ಅಭಿಮಾನ ಎಂಥದ್ದು ಎಂದು ಯಾರಿಗೂ ಹೇಳಬೇಕಿಲ್ಲ. ಭಾರತಿ ಅವರ ಮಾತು ನೋವು ತಂದಿದೆ ಎಂದಿದ್ದಾರೆ.

  • ವಿಷ್ಣು ಒಬ್ಬ ಲಜ್ಜೆಗೆಟ್ಟ ನಟ : ತೆಲುಗು ನಟ ವಿವಾದಾತ್ಮಕ ಹೇಳಿಕೆ

    Fans Furious Over Telugu Actor's Comments On Dr Vishnuvardhan

    ವಿಜಯ್ ಗಂಗರಾಜು ಎಂಬ ತೆಲುಗು ನಟ, ಕನ್ನಡಿಗರ ಆರಾಧ್ಯ ದೈವ ವಿಷ್ಣುವರ್ಧನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಷ್ಣುವರ್ಧನ್ ಒಬ್ಬ ಲಜ್ಜೆಗೆಟ್ಟ ನಟ ಎಂದಿದ್ದಾರೆ.

    ವಿಜಯ್ ಗಂಗರಾಜು ತೆಲುಗು ನಟ. ನಟಿಸಿರುವುದು ಬೆರಳೆಣಿಕೆ ಚಿತ್ರಗಳಲ್ಲಿ. ತೆಲುಗು ಚಾನೆಲ್ಲೊಂದರಲ್ಲಿ ಸಂದರ್ಶನ ನೀಡುವಾಗ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.

    ವಿಜಯ್ ರಂಗರಾಜು, ನಟಿ ಜಯಮಾಲಿನಿಯನ್ನು ಮದುವೆಯಾಗಬೇಕಿತ್ತಂತೆ. ಮಾತುಕತೆ ನಡೆಯುತ್ತಿರುವಾಗ ಚಿತ್ರವೊಂದರ ಶೂಟಿಂಗ್ ವೇಳೆ ಸೆಟ್ಟಿನಲ್ಲಿ ಅವರು ಇರಬಾರದು ಎಂದು ಹೊರಗೆ ಕಳಿಸಿದ್ದರಂತೆ ವಿಷ್ಣು. ಅದಾದ ನಂತರ ಖೈದಿ ಸಿನಿಮಾ ಚಿತ್ರೀಕರಣ ವೇಳೆ ಗ್ಲಾಸಿನಿಂದ ವಿಷ್ಣುವರ್ಧನ್ ವಿಜಯ್ ರಂಗರಾಜು ಅವರಿಗೆ ಹೊಡೆಯಬೇಕಿತ್ತಂತೆ. ಆದರೆ, ಅವರು ನನ್ನ ತಲೆಗೆ ಹೊಡೆಯುತ್ತಾರೆ ಎಂದು ಗೊತ್ತಿತ್ತು. ಹೀಗಾಗಿ ನಾನು ನಟಿಸುವುದಿಲ್ಲ ಎಂದೆ. ಅದಾದ ಮೇಲೆ ವಿಷ್ಣುವರ್ಧನ್ ಕೊರಳಪಟ್ಟಿ ಹಿಡಿದು ಹೊಡೆದಿದ್ದೆ ಎಂದೆಲ್ಲ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ವಿಜಯ್ ರಂಗರಾಜು.

    ಅಕ್ಟೋಬರ್ 30ರಂದು ಅಪ್ಲೋಡ್ ಆಗಿರುವ ವಿಡಿಯೋ, ಈಗ ಅಭಿಮಾನಿಗಳ ಕಣ್ಣಿಗೂ ಬಿದ್ದಿದೆ. ವಿಜಯ್ ರಂಗರಾಜು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಷ್ಣುವರ್ಧನ್ ಅಭಿಮಾನಿಗಳು ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ.

  • ವಿಷ್ಣು ಓದಿದ ಶಾಲೆಗಾಗಿ ಅಭಿಮಾನಿಗಳ ಹೋರಾಟ

    vishnu doctorate

    ಸಾಹಸಸಿಂಹ ವಿಷ್ಣುವರ್ಧನ್ ಅವರು ಓದಿದ್ದ ಶಾಲೆ ಚಾಮರಾಜಪೇಟೆಯ ಮಾಡೆಲ್ ಸ್ಕೂಲ್ ಎಜುಕೇಷನ್ ಸೊಸೈಟಿ. ನಿಮಗೆ ಇನ್ನೂ ಒಂದು ವಿಷಯ ನೆನಪಿರಲಿ. ಅದು ಬೆಂಗಳೂರಿನ ಪ್ರಪ್ರಥಮ ಕನ್ನಡ ಶಾಲೆಯೂ ಹೌದು. ಇದೇ ಶಾಲೆಯಲ್ಲಿ ಖ್ಯಾತ ನಟ ರಮೇಶ್‍ಭಟ್ ಕೂಡಾ ಓದಿದ್ದರು ಎಂಬುದು ನಿಮ್ಮ ಗಮನಕ್ಕಿರಲಿ. ಈ ಎಲ್ಲ ಕಾರಣಗಳಿಂದಾಗಿ, ಈ ಶಾಲೆ ಕರ್ನಾಟಕದ ಹೆಮ್ಮೆಯಾಗಬೇಕಿತ್ತು. ಆದರೆ, ಆ ಶಾಲೆಯನ್ನೀಗ ಮುಚ್ಚಲು ಹೊರಟಿದೆ ಸರ್ಕಾ

    ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಫಲಿತಾಂಶವೂ ಸರಿಯಾಗಿ ಬರುತ್ತಿಲ್ಲ ಎನ್ನುವುದು ಸರ್ಕಾರ ಶಾಲೆಯನ್ನು ನೀಡುತ್ತಿರುವ ಕಾರಣ. ಆದರೆ, ಇದೇ ಸರ್ಕಾರ 15 ವರ್ಷಗಳಿಂದ ಶಾಲೆಗೆ ಗಣಿತ ಶಿಕ್ಷಕರನ್ನು ನೀಡಿಲ್ಲ ಎನ್ನವುದನ್ನು ಮರೆತುಬಿಟ್ಟಿದೆ. ಶಿಕ್ಷಕರನ್ನೇ ನೀಡದ ಸರ್ಕಾರ, ಈಗ ಕಳಪೆ ಫಲಿತಾಂಶಕ್ಕೆ ಶಾಲೆಯನ್ನೇ ಬಲಿ ಕೊಡಲು ಮುಂದಾಗಿದೆ. ಇನ್ನೂ ಒಂದು ವಿಷಯ ನೆನಪಿರಲಿ, ಈ ಶಾಲೆಯಲ್ಲಿ ನೂರಾರು ಅನಾಥ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ.

    ಸರ್ಕಾರದ ಈ ನಿರ್ಧಾರದ ವಿರುದ್ಧ ವಿಷ್ಣು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಶಿಕ್ಷಕರನ್ನೇ ನೀಡದೆ ಫಲಿತಾಂಶದ ನಿರೀಕ್ಷೆ ಮಾಡುತ್ತಿರುವ ಸರ್ಕಾರದ ಹೊಣೆಗೇಡಿತನದ ವಿರುದ್ಧ ಬೀದಿಗಿಳಿಯುತ್ತಿದ್ದಾರೆ. ಇಂದು ಡಾ.ವಿಷ್ಣು ಸೇನಾ ಸಮಿತಿ ಸದಸ್ಯರು ಚಾಮರಾಜಪೇಟೆಯ ಈ ಶಾಲೆಯ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಕನ್ನಡ ಚಿತ್ರಕಲಾವಿದರು, ಸಾಹಿತಿಗಳೂ ಕೂಡಾ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

    ವಿಷ್ಣುವರ್ಧನ್‍ರಂತಹ ಕನ್ನಡದ ಖ್ಯಾತ ಕಲಾವಿದ ಕಲಿತ ಶಾಲೆ, ಬೆಂಗಳೂರಿನ ಪ್ರಪ್ರಥಮ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು.

  • ವಿಷ್ಣು ಮೂಡಿನಾ? ಸ್ನೇಹಜೀವಿನಾ? - ಎಸ್ ನಾರಾಯಣ್ ಕಂಡಂತೆ ವಿಷ್ಣು

    s narayan vishnuvardhan image

    ವಿಷ್ಣು ಜೊತೆ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ವಿಷ್ಣು ಅವರ ಅಂತರಂಗದ ದರ್ಶನವಾಗಿದೆ. ವಿಷ್ಣುವರ್ಧನ್ ಅವರಿಗೆ ಸೂಪರ್ ಹಿಟ್ ಚಿತ್ರಗಳನ್ನೇ ನೀಡಿದ ಎಸ್.ನಾರಾಯಣ್ ಎಂಬ ಕಲಾ ಸಾಮ್ರಾಟ್ ಕಣ್ಣಲ್ಲಿ ವಿಷ್ಣು ಹೇಗಿದ್ದರು..?

     #Vishnuvardhan #SNarayan #Vishnu #Sahasasimha #VishnuSenaSamaithi #DrVishnu #BharathiVishnuvardhan #VeerappaNayaka #ShootingWithVishnu

  • ವಿಷ್ಣು ರಾಷ್ಟ್ರೀಯ ಉತ್ಸವ ಅದ್ಧೂರಿ..

    vishnu national film festival

    ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ವಿಷ್ಣುಸೇನಾ ಸಮಿತಿಯಿಂದ ನಡೆಯುತ್ತಿರುವ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಉತ್ಸವದಲ್ಲಿ ಕಿಚ್ಚ ಸುದೀಪ್, ವಿಷ್ಣುಗೀತೆಯನ್ನು ಹಾಡಿ ರಂಜಿಸಿದರು. ವೇದಿಕೆಯಲ್ಲಿ ವಿಷ್ಣು ಸ್ಮಾರಕ ವಿವಾದವೂ ಪ್ರಸ್ತಾಪವಾಯ್ತು.

    ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಲಿ, ಬೆಂಗಳೂರಿನಲ್ಲಿರುವ ಅಂತ್ಯಕ್ರಿಯೆ ನಡೆದ ಸ್ಥಳ ಪುಣ್ಯಭೂಮಿಯಾಗಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿಗಳು, ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿದರು. ನಾವು ವಿಷ್ಣು ಅಭಿಮಾನಿಗಳು. ನಾವು ಮಾಡುವ ಕೆಲಸವನ್ನು ಶಿಸ್ತಿನಿಂದ ಮಾಡಿದರೆ ಸೂಕ್ತ ಫಲ ಸಿಗಲಿದೆ ಎಂದರು ಕಿಚ್ಚ ಸುದೀಪ್.

    ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಕನ್ನಡಪ್ರಭದ ಪುರವಣಿ ಸಂಪಾದಕ ಜೋಗಿ ಅವರ `ಮಾತು ಮೌನ ಧ್ಯಾನ ವಿಷ್ಣುವರ್ಧನ' ಹಾಗೂ ಬಿಟಿವಿವಿ ಸಿನಿಮಾ ವಿಭಾಗದ ಮುಖ್ಯಸ್ಥ ಸದಾಶಿವ ಶೆಣೈ ಅವರ `ಮುಗಿಯದಿರಲಿ ಸಾಹಸಸಿಂಹ' ಮತ್ತು ಮನು ಅವರ `ಸಾಹಸಸಿಂಹ' ಕಾದಂಬರಿ ಕೃತಿಗಳು ಲೋಕಾರ್ಪಣೆಗೊಂಡವು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ವಿಷ್ಣು ಸ್ಮಾರಕ ನಿರ್ಮಾಣ ಕುರಿತು ವಿಷ್ಣು ಸೇನಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರು.

  • ವಿಷ್ಣು ಸಾರ್ ನನ್ನ ರೌಡಿ ಅಂದುಕೊಂಡಿದ್ದರು - ಕೆ. ಮಂಜು

    ವಿಷ್ಣು ಸಾರ್ ನನ್ನ ರೌಡಿ ಅಂದುಕೊಂಡಿದ್ದರು - ಕೆ. ಮಂಜು. Ace producer  K Manju was the biggest fan of Dr. Vishnuvardhan. But Vishnu had Thought K Manju is a Rowdy. Watch Interesting Video

    #Chitraloka #KManju #Vishnuvardhan #Rowdy #AutoManja #AceProducer

  • ವಿಷ್ಣು ಸ್ಮಾರಕಕ್ಕೆ ಜಾಗ ನೀಡಲು ಬಂದ ವಿಷ್ಣುದಾದಾ ಫ್ಯಾನ್ಸ್ ಎಷ್ಟು ಜನ ಗೊತ್ತಾ..? 

    vishnu fans comes forward to help vishnu memorial

    ವಿಷ್ಣು ಸ್ಮಾರಕ ಎಲ್ಲಿ ಆಗಬೇಕು ಎಂಬ ವಿವಾದ ಜಟಾಪಟಿಗೆ ಕಾರಣವಾಗಿರುವಾಗಲೇ, ಜಾಗ ನೀಡಲು ಹಾಗೂ ಖರ್ಚು ವೆಚ್ಚದ ಹೊಣೆ ಹೊತ್ತುಕೊಳ್ಳಲು ವಿಷ್ಣು ಅಭಿಮಾನಿಗಳು ನಾ ಮುಂದು ತಾ ಮುಂದು ಎಂದು ಮುಂದೆ ಬಂದಿದ್ದಾರೆ.

    ನಿರ್ಮಾಪಕ ಕೆ.ಮಂಜು, ವಿಷ್ಣು ಪುಣ್ಯಭೂಮಿ ಸ್ಥಳದಲ್ಲಿ 15000 ಚದರಡಿ ಜಾಗವನ್ನು ಸ್ವಂತ ಖರ್ಚಿನಲ್ಲಿ ಖರೀದಿಸಿ ವಿಷ್ಣು ಸ್ಮಾರಕಕ್ಕೆ ನೀಡುವುದಾಗಿ ಘೋಷಿಸಿದ್ದಾರೆ. ಕೆ.ಮಂಜು, ವಿಷ್ಣುವರ್ಧನ್ ಅವರ ಅತಿದೊಡ್ಡ ಅಭಿಮಾನಿಯಾಗಿದ್ದವರು.

    ಮತ್ತೊಬ್ಬ ವಿಷ್ಣು ಅಭಿಮಾನಿ ಲೋಕೇಶ್ ಎಂಬುವವರು 50 ಲಕ್ಷ ರೂ. ನೀಡಲು ಮುಂದೆ ಬಂದಿದ್ದಾರೆ.

    ಮಂಡ್ಯದ ಉಂಡುವಾಡಿ ಗ್ರಾಮದ ಅಭಿಮಾನಿ ರಾಜಣ್ಣ ಎಂಬುವವರು ಕೆಆರ್‍ಎಸ್ ಬಳಿ ತಮ್ಮ 8 ಸಾವಿರ ಚದರ ಅಡಿ ಜಾಗವನ್ನು ಉಚಿತವಾಗಿ ಕೊಡುತ್ತೆನೆ. ಇನ್ನೂ ಬೇಕು ಎಂದರೆ, ಅದರ ಪಕ್ಕದಲ್ಲಿಯೇ ಇರುವ 13 ಗುಂಟೆ ಜಾಗವನ್ನು ಖರೀದಿಸಿ ಕೊಡುತ್ತೇನೆ ಎಂದಿದ್ದಾರೆ.

    ದಾವಣಗೆರೆಯ ರೈತರೊಬ್ಬರು ವಿಷ್ಣು ಸ್ಮಾರಕಕ್ಕೆ 2 ಎಕರೆ ಜಾಗ ನೀಡೋದಾಗಿ ಹೇಳಿದರೆ, ಮೇಲುಕೋಟೆಯ ರಾಜು, ಮೈಸೂರಿನಲ್ಲಿ 15 ಸಾವಿರ ಚದರಡಿ ನಿವೇಶನ ಕೊಡೋದಾಗಿ ಹೇಳಿದ್ದಾರೆ.

    ಇದು ಕೇವಲ ಅಭಿಮಾನಕ್ಕಾಗಿ. ದಟ್ ಈಸ್ ವಿಷ್ಣುವರ್ಧನ್.

  • ವಿಷ್ಣು ಹಬ್ಬ : ಸಾಹಸಸಿಂಹನ 50 ಕಟೌಟ್`ಗಳು

    ವಿಷ್ಣು ಹಬ್ಬ : ಸಾಹಸಸಿಂಹನ 50 ಕಟೌಟ್`ಗಳು

    ಸೆಪ್ಟೆಂಬರ್ 18 ಬಂತೆಂದರೆ ವಿಷ್ಣು ಅಭಿಮಾನಿಗಳು ಹಬ್ಬದಂತೆಯೇ ಆಚರಿಸುತ್ತಾರೆ. ಈ ಸೆಪ್ಟೆಂಬರ್ 18ಕ್ಕೆ ವಿಷ್ಣು ಬದುಕಿದ್ದರೆ ಅವರಿಗೆ 72 ವರ್ಷ ತುಂಬುತ್ತಿತ್ತು. ವಿಷ್ಣು ಇಲ್ಲದೇ ಹೋದರೂ, ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ವಿಷ್ಣು ಅಭಿಮಾನಿಗಳು ಹುಟ್ಟುಹಬ್ಬವನ್ನು ಸಂಭ್ರಮದಿಂದಲೇ ಆಚರಿತ್ತಿದ್ದಾರೆ. ಯಜಮಾನೋತ್ಸವ.

    ವಿಷ್ಣುವರ್ಧನ್ ಅವರ 40 ಅಡಿ ಎತ್ತರದ ಒಟ್ಟು 50 ಕಟೌಟ್ ನಿಲ್ಲಿಸುತ್ತಿದ್ದೇವೆ. ವಿಷ್ಣುವರ್ಧನ್ ಪುಣ್ಯಭೂಮಿಯಲ್ಲಿ ಕಟೌಟ್‍ಗಳನ್ನು ಹಾಕುತ್ತಿದ್ದೇವೆ. ವಿಷ್ಣು ಅಭಿನಯದ 50 ಯಶಸ್ವಿ ಚಿತ್ರಗಳ ಕಟೌಟ್ ಮಾಡಲಾಗುತ್ತಿದೆ. ಈ ರೀತಿ ಒಂದೇ ಜಾಗದಲ್ಲಿ 50 ಕಟೌಟ್ ನಿಲ್ಲಿಸುವ ಮೂಲಕ ದಾಖಲೆ ಬರೆಯುತ್ತಿದ್ದಾರೆ ವಿಷ್ಣು ಫ್ಯಾನ್ಸ್.

    50 ಕಟೌಟ್‍ಗಳೇ ಏಕೆ ಎನ್ನುವುದಕ್ಕೂ ಒಂದು ಕಾರಣ ಇದೆ. ಇದೇ ವರ್ಷ ಡಿಸೆಂಬರ್ 29ಕ್ಕೆ ವಿಷ್ಣುವರ್ಧನ್ ಚಿತ್ರರಂಗಕ್ಕೆ ಬಂದು 50 ವರ್ಷ ಪೂರ್ಣವಾಗುತ್ತಿದೆ. ಹೀಗಾಗಿ 50 ಕಟೌಟ್ ಹಾಕುತ್ತಿದ್ದಾರೆ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.

  • ವಿಷ್ಣು ಹುಟ್ಟುಹಬ್ಬಕ್ಕೆ ಆಪ್ತಮಿತ್ರ-2

    p vasu, vishnuvardhan image

    ಇದೇ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಹುಟ್ಟುಹಬ್ಬವಿದೆ. ಆ ಹುಟ್ಟುಹಬ್ಬದ ದಿನ ಆಪ್ತಮಿತ್ರ-2 ಸೆಟ್ಟೇರುತ್ತಿದೆ. ಆ ಚಿತ್ರ ನಿರ್ಮಿಸುತ್ತಿರುವುದು ರಮೇಶ್ ಬಾಬು. ನಿರ್ದೇಶಕ ಒನ್ಸ್ ಎಗೇಯ್ನ್ ಪಿ.ವಾಸು. ಒಟ್ಟಿನಲ್ಲಿ ಬರೋಬ್ಬರಿ 13 ವರ್ಷಗಳ ನಂತರ ಆಪ್ತಮಿತ್ರ-2 ಬರುತ್ತಿದೆ. ಹಾಗೆ ನೋಡಿದರೆ, ವಿಷ್ಣು ಅಭಿನಯದ ಕೊನೆಯ ಚಿತ್ರ ಆಪ್ತರಕ್ಷಕ, ಆಪ್ತಮಿತ್ರ ಚಿತ್ರದ ಮುಂದುವರಿದ ಭಾಗದಂತೆಯೇ ಇತ್ತಾದರೂ, ನಿರ್ಮಾಪಕರು ಬೇರೆಯಾಗಿದ್ದರು. ಆಪ್ತಮಿತ್ರ ಎಂಬ ಹೆಸರು ಬಳಕೆಯಾಗಿರಲಿಲ್ಲ.

    ಇಲ್ಲಿಯವರೆಗೆ 21 ಚಿತ್ರ ನಿರ್ಮಿಸಿರುವ ರಮೇಶ್ ಬಾಬು, ವಿಷ್ಣು ಅಭಿಮಾನಿಯೂ ಹೌದು. ಹಾಗೆ ಯೋಚನೆ ಬಂದಿದ್ದೇ ತಡ, ನಿರ್ದೇಶಕರಾಗಿ ಹೊಳೆದ ಹೆಸರೇ ಪಿ.ವಾಸು ಅವರದು. ಅಂದಹಾಗೆ ಇದು ವೊರಿಜಿನಲ್ ಕಥೆಯಲ್ಲ. ಮಲಯಾಳಂನ `ಅರಮನೈ' ಚಿತ್ರವನ್ನು ಆಪ್ತಮಿತ್ರ-2ನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

    ಇದರಲ್ಲಿ ವಿಷ್ಣುವರ್ಧನ್ ಪಾತ್ರ ತರುವುದು ಹೇಗೆ ಎಂದು ಆಲೋಚಿಸಿದಾಗ, ವಿಷ್ಣು ಅವರನ್ನು ಮೈಸೂರು ದೊರೆ ಅಥವಾ ಸಾಮ್ರಾಟರಾಗಿ ತೋರಿಸುವ ಚಿಂತನೆ ನಡೆದಿದೆ. ಆಪ್ತಮಿತ್ರ-2ನಲ್ಲಿ ಮೂವರು ನಾಯಕಿಯರಿರುತ್ತಾರೆ. ಉಳಿದ ವಿವರಗಳನ್ನೇನಿದ್ದರೂ, ನಿರ್ದೇಶಕ ವಾಸು ಅವರನ್ನೇ ಕೇಳಬೇಕು ಎನ್ನುತ್ತಾರೆ ನಿರ್ಮಾಪಕ ರಮೇಶ್‍ಬಾಬು.

  • ವಿಷ್ಣು ಹುಟ್ಟುಹಬ್ಬಕ್ಕೆ ವಿಷ್ಣುಸೇನಾ ಏನೇನೆಲ್ಲ ಮಾಡ್ತಿದೆ ಗೊತ್ತಾ..?

    dr vishnuvardhan image

    ಸಾಹಸಸಿಂಹ ವಿಷ್ಣುವರ್ಧನ್ ಅವರ ಪ್ರತಿ ಹುಟ್ಟುಹಬ್ಬವನ್ನೂ ವಿಶೇಷವಾಗಿ ಸ್ಮರಣೀಯವಾಗಿ ಆಚರಿಸುವ ವಿಷ್ಣು ಸೇನಾ ಸಮಿತಿ, ಈ ಬಾರಿಯೂ ಬೇರೆಯದ್ದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಗಸ್ಟ್ 17ರಿಂದಲೇ ಕೆಲವು ಕಾರ್ಯಕ್ರಮಗಳು ಶುರುವಾಗಿವೆ. ಏಕೆಂದರೆ ಈ ಬಾರಿ ವಿಷ್ಣು ಅವರದ್ದು 70ನೇ ಹುಟ್ಟುಹಬ್ಬ. ಹೀಗಾಗಿ ಒಂದಿಡೀ ತಿಂಗಳು ವಿಷ್ಣು ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದೆ ವಿಷ್ಣು ಸೇನಾ ಸಮಿತಿ. ಕೊರೊನಾ ಕಾರಣದಿಂದಾಗಿ,ಈ ಬಾರಿ ಅದ್ದೂರಿತನ, ಸಮಾರಂಭಗಳಿಗೆ ಕಡಿವಾಣ ಬಿದ್ದಿದೆ.  ಹೀಗಾಗಿ ವಿಶಿಷ್ಟವಾಗಿ ಹಾಗೂ ಅರ್ಥ ಪೂರ್ಣವಾಗಿ ಹಬ್ಬ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ ವಿಎಸ್‍ಎಸ್ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.

    ಯಾವುದೋ ಅಪರಾಧದಲ್ಲಿ ಜೈಲು ಸೇರಿ, ಶಿಕ್ಷೆಯನ್ನೂ ಮುಗಿಸಿರುವ ಖೈದಿಗಳು ದಂಡ ಕಟ್ಟಲಾಗದೆ ಜೈಲಿನಲ್ಲೇ ಇರುತ್ತಾರೆ. ಅಂತಹ 10 ಖೈದಿಗಳನ್ನು ಗುರುತಿಸಿ ಬಿಡುಗಡೆಗೆ ವ್ಯವಸ್ಥೆ ಮಾಡುವುದು ಮೊದಲ ಹೆಜ್ಜೆ.

    you_tube_chitraloka1.gif

    ಇನ್ನು ಈ ತಿಂಗಳಲ್ಲಿ ವಿಷ್ಣು ಅಭಿಮಾನಿಗಳು ರಾಜ್ಯಾದ್ಯಂತ 70ನೇ ಹುಟ್ಟುಹಬ್ಬದ ಪ್ರಯುಕ್ತ 70 ಸಾವಿರ ಸಸಿ ನೆಡುತ್ತಿದ್ದಾರೆ. ಅಷ್ಟೇ ಅಲ್ಲ, ಹಾಗೆ ನೆಟ್ಟ ಗಿಡಗಳ ಪೋಷಣೆ ಮತ್ತು ರಕ್ಷಣೆಯೂ ಅವರದ್ದೇ.

    ಇನ್ನು 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ವಿಷ್ಣು ವೇಷಭೂಷಣ, ಅಭಿನಯ, ಗಾಯನ ಸ್ಪರ್ಧೆಯೂ ಇದೆ. ಆ ಮಕ್ಕಳು ವಿಷ್ಣುವರ್ಧನ್ ವೇಷ ತೊಟ್ಟು ನಟಿಸಿ ಅಥವಾ ಹಾಡಿ.. ಆ ವಿಡಿಯೋವನ್ನು 9972219267ಗೆ ಕಳಿಸಬೇಕು. ಸೆ.10ರೊಳಗೆ ಕಳಿಸಬೇಕು. ಅವರಲ್ಲಿ ಮೂರು ಮಕ್ಕಳನ್ನು ಆಯ್ಕೆ ಮಾಡಿ 20 ಸಾವಿರ, 15 ಸಾವಿರ ಹಾಗೂ 10 ಸಾವಿರ ಬಹುಮಾನ ನೀಡುವ ಯೋಜನೆ ಇದೆ.

    ಇನ್ನು ವಿಷ್ಣು ಅಭಿಮಾನಿಗಳು ಕನಿಷ್ಠ 700 ಯುನಿಟ್‍ನಿಂದ 7 ಸಾವಿರ ಯುನಿಟ್ ರಕ್ತದಾನ ಮಾಡಲು ಪ್ಲಾನ್ ಮಾಡಿದ್ದಾರೆ.

    ಡಾ.ವಿಷ್ಣುವರ್ಧನ್ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಸೂಚಿಸಲು ಆ.19ರಿಂದ ಅಭಿಯಾನ ಶುರುವಾಗುತ್ತಿದೆ.

  • ವಿಷ್ಣುಗೆ ಅವಮಾನ : ತೆಲುಗು ನಟನ ವಿರುದ್ಧ ಸಿಡಿದೆದ್ದ ಕನ್ನಡ ಕಲಾವಿದರು

    ವಿಷ್ಣುಗೆ ಅವಮಾನ : ತೆಲುಗು ನಟನ ವಿರುದ್ಧ ಸಿಡಿದೆದ್ದ ಕನ್ನಡ ಕಲಾವಿದರು

    ಸಾಹಸ ಸಿಂಹ, ಅಭಿನಯ ಭಾರ್ಗವ, ಅಭಿಮಾನಿಗಳ ಪಾಲಿನ ಪ್ರೀತಿಯ ಯಜಮಾನ ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ನೀಡಿರುವ ಹೇಳಿಕೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲ, ಹಲವು ಕಲಾವಿದರು ವಿಜಯ್ ರಂಗರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.

    ಪುನೀತ್ ರಾಜ್‍ಕುಮಾರ್ : ನಮ್ಮ ನಾಡಿನ ಮೇರುನಟರಲ್ಲಿ ಒಬ್ಬರಾದ ವಿಷ್ಣು ಸರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆ ಕಲಾವಿದ ಕೂಡಲೇ ಕ್ಷಮೆ ಕೇಳಿ, ತನ್ನ ಮಾತುಗಳನ್ನು ವಾಪಸ್ ಪಡೆಯಬೇಕು. ಭಾರತೀಯ ಚಿತ್ರರಂಗ ಒಂದು ಮನೆ. ಕಲಾವಿದರೆಲ್ಲರೂ ಒಂದು ಕುಟುಂಬ. ಕಲೆಗೆ, ಕಲಾವಿದರಿಗೆ ಗೌರವಿಸೋದು ನಮ್ಮ ಕರ್ತವ್ಯ. ಮೊದಲು ಮಾನವನಾಗು.

    ಕಿಚ್ಚ ಸುದೀಪ್ : ವಿಜಯ್ ರಂಗರಾಜು ಅವರೇ, ಒಬ್ಬ ವ್ಯಕಿಯ ಬಗ್ಗೆ ಏನು ಮಾತನಾಡಬೇಕು ಎಂಬುದು ನಿಮಗೆ ಬಿಟ್ಟಿದ್ದು. ಆದರೆ ಆ ವ್ಯಕ್ತಿ ಬದುಕಿದ್ದಾಗ ಮಾತನಾಡಿದ್ದರೆ, ಅದನ್ನು ಗಂಡಸ್ತನ ಎನ್ನಬಹುದಿತ್ತು. ವಿಷ್ಣು ಸರ್ ಬಗ್ಗೆ ಮಾತನಾಡಿರುವ ನಿಮ್ಮನ್ನು ನಿಮ್ಮವರೇ ಒಪ್ಪೋದಿಲ್ಲ. ವಿಷ್ಣು ಸರ್ ಇಲ್ಲ. ಆದರೆ, ನಾವೆಲ್ಲ ಇದ್ದೇವೆ. ಇಂಡಸ್ಟ್ರಿಯಲ್ಲಿ ನಾವೆಲ್ಲ ಚೆನ್ನಾಗಿದ್ದೇವೆ. ನಿಮ್ಮಿಂದ ಅದು ಹಾಳಾಗೋದು ಬೇಡ. ನಿಮ್ಮ ಮಾತುಗಳನ್ನು ವಾಪಸ್ ತೆಗೆದುಕೊಳ್ಳಿ.

    ಜಗ್ಗೇಶ್ : ನತದೃಷ್ಟ ಶಿಖಾಮಣಿ. ಇವನು ಕಲಾವಿದನಂತೆ. ಈ ದರಿದ್ರ ಮುಖವನ್ನು ಎಲ್ಲೂ ನೋಡಿದ ನೆನಪಿಲ್ಲ. ಇವನ ಉದ್ಧಟತನದ ಮಾತಿಗೆ ಕ್ಷಮೆ ಇಲ್ಲ. ಸತ್ತವರು ದೇವರ ಸಮ. ದುಃಖವಾಯಿತು.

    ಅನಿರುದ್ಧ : ಸುಮ್ಮನೆ ಮೀಸೆ ಬೆಳೆಸಿಕೊಂಡರೆ ಧೈರ್ಯಶಾಲಿ, ಶಕ್ತಿಶಾಲಿ ಎನ್ನಲು ಸಾಧ್ಯವಿಲ್ಲ. ಯಾರೋ ಏನೋ ಎಂದರು ಎಂದಾಕ್ಷಣ ಯಾರೂ ಬೇಜಾರು ಮಾಡಿಕೊಳ್ಳಬೇಕಿಲ್ಲ. ಅಭಿಮಾನಿಗಳ ಹೃದಯದಲ್ಲಿ ಅವರು ಶಾಶ್ವತ ಸ್ಥಾನ ಪಡೆದಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ತೆಲುಗು ಚಿತ್ರರಂಗದವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವಿಜಯ್ ರಂಗರಾಜು ಅವರೇ, ದಯವಿಟ್ಟು ಇಲ್ಲಿಗೆ ಬರಬೇಡಿ. ಬಂದರೆ ಇಲ್ಲಿನ ಸಿಂಹ, ಸಿಂಹಿಣಿಯರು ಏನು ಮಾಡ್ತಾರೆ ಅನ್ನೋದನ್ನು ಹೇಳೋಕಾಗಲ್ಲ.

    ಯಶ್ : ಸಾಧಕರನ್ನು ನಿಂದಿಸಿ ಹೆಸರು ಮಾಡುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನೇ ಅಲ್ಲ. ಕನ್ನಡ ಚಿತ್ರರಂಗ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದೆ. ಈ ವ್ಯಕ್ತಿಯಿಂದ ಅದು ಹಾಳಾಗಬಾರದು. ಈ ವ್ಯಕ್ತಿ ಕ್ಷಮೆ ಕೇಳಬೇಕು.

    ಗಣೇಶ್ : ದಾದಾ ಬಗ್ಗೆ ಇಷ್ಟು ಕೀಳುಮಟ್ಟದ ಹೇಳಿಕೆ ಕೊಟ್ಟ ಯಾವನೇ ಆದರೂ ತನ್ನ ದುರಹಂಕಾರವನ್ನು ಪಕ್ಕಕ್ಕಿಟ್ಟು ಮೊದಲು ಕ್ಷಮೆ ಕೇಳಬೇಕು.

    ರಿಷಬ್ ಶೆಟ್ಟಿ : ತನ್ನ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ವಿಷ್ಣು ಸರ್ ಬಗ್ಗೆ ನಟನೊಬ್ಬ ತುಚ್ಛವಾಗಿ ಮಾತನಾಡಿದ್ದು ಖಂಡನೀಯ. ಆತ ಕೂಡಲೇ ಕ್ಷಮೆ ಕೇಳಬೇಕು.

    ಸಿಂಪಲ್ ಸುನಿ : ಆಚಾರವಿಲ್ಲದ ನಾಲಿಗೆಯು ಎಂದೂ ಗಲೀಜು. ನಿನ್ನ ನೀಚಬುದ್ದಿಯ ಬಿಡು ರಂಗರಾಜು.

    ಒಳ್ಳೆ ಹುಡ್ಗ ಪ್ರಥಮ್ : ಸಂಸ್ಕಾರದ ಕೊರತೆಯಿಂದ ನರಳುತ್ತಿರೋ ಅನಾಗರಿಕ ತೆಲುಗು ನಟನಿಂದ ಇನ್ನೇನು ನಿರೀಕ್ಷೆ ಮಾಡೋಕೆ ಸಾಧ್ಯ..? ದಾದಾರಿಗೆ ಹೆಣ್ಣಿನ ವೀಕ್‍ನೆಸ್ ಇದ್ದಿದ್ರೆ 3-4 ಮದುವೆ ಆಗ್ತಿದ್ರು. ನಾಚಿಕೆ ಆಗ್ಬೇಕು ನಿಮ್ ಜನ್ಮಕ್ಕೆ..

    .... ಹೀಗೆ ಕನ್ನಡ ಚಿತ್ರರಂಗದ ನಟ, ನಟಿ, ತಂತ್ರಜ್ಞರೆಲ್ಲ ವಿಜಯ್ ರಂಗರಾಜು ವಿರುದ್ಧ ಕಿಡಿ ಕಾರಿದ್ದಾರೆ. ಈ ಕುರಿತು ದಕ್ಷಿಣ ಭಾರತ ಫಿಲಂ ಚೇಂಬರ್‍ನಲ್ಲಿ ಪ್ರಸ್ತಾಪ ಮಾಡುವುದಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.

    Also Read :-

    ವಿಷ್ಣು ಒಬ್ಬ ಲಜ್ಜೆಗೆಟ್ಟ ನಟ : ತೆಲುಗು ನಟ ವಿವಾದಾತ್ಮಕ ಹೇಳಿಕೆ

  • ವಿಷ್ಣುವರ್ಧನ್ ಓದಿದ ಶಾಲೆ ಉಳಿಸಿಕೊಳ್ತಾರಾ..?

    ವಿಷ್ಣುವರ್ಧನ್ ಓದಿದ ಶಾಲೆ ಉಳಿಸಿಕೊಳ್ತಾರಾ..?

    ವಿಷ್ಣುವರ್ಧನ್ ಓದಿದ ಶಾಲೆ ಎಂಬ ಖ್ಯಾತಿ ಚಾಮರಾಜಪೇಟೆಯಲ್ಲಿರುವ ಮಾಡೆಲ್ ಹೈಸ್ಕೂಲ್‍ಗೆ ಇದೆ. ಇದು ವಿಷ್ಣು ಓದಿದ ಶಾಲೆ ಎಂಬಷ್ಟಕ್ಕೇ ಸೀಮಿತವಾಗಿಲ್ಲ, ಇದು ಕರ್ನಾಟಕದಲ್ಲಿರುವ 150 ವರ್ಷಗಳ ಇತಿಹಾಸ ಹೊಂದಿರುವ ಶಾಲೆ. ಬೆಂಗಳೂರಿನ ಮೊತ್ತ ಮೊದಲ ಕನ್ನಡ ಮಾಧ್ಯಮದ ಶಾಲೆ. 1870ರಲ್ಲಿ ಬ್ರಿಟಿಷರ ಕಾಲದಲ್ಲಿ ಶುರುವಾದ ಶಾಲೆಯಿದು. ವಿಪರ್ಯಾಸವೆಂದರೆ ಚಾಮರಾಜಪೇಟೆಯ 4ನೇ ಮುಖ್ಯರಸ್ತೆಯಲ್ಲಿರೋ ಈ ಶಾಲೆಗೆ ಕಳೆದ 3 ವರ್ಷಗಳಿಂದ ಒಬ್ಬನೇ ಒಬ್ಬ ವಿದ್ಯಾರ್ಥಿ ಹಾಜರಾಗಿಲ್ಲ. ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯೀಗ ಮುಚ್ಚುವ ಸ್ಥಿತಿಗೆ ತಲುಪಿದ್ದು, ಬಾಗಿಲು ಹಾಕಲು ಸರ್ಕಾರವೂ ಒಂದು ಹೆಜ್ಜೆ ಮುಂದಿಟ್ಟಿದೆ.

    ಶಾಲೆಯ ಪೀಠೋಪಕರಣಗಳು ಮುರಿದು ಹೋಗಿದ್ದು, ಕಟ್ಟಡವೂ ಅಷ್ಟೆ, ಪಾಳು ಬಿದ್ದ ಸ್ಥಿತಿಗೆ ತಲುಪುತ್ತಿದೆ. ವಿಷ್ಣುವರ್ಧನ್ ಅವರಷ್ಟೇ ಅಲ್ಲ, ಕರ್ನಾಟಕ ಕ್ರಿಕೆಟ್‍ನ ದಂತಕತೆ ಜಿ.ಆರ್.ವಿಶ್ವನಾಥ್ ಅವರು ಓದಿದ್ದು ಕೂಡಾ ಇದೇ ಶಾಲೆಯಲ್ಲಿ. ಅಂದಹಾಗೆ ಈ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಸಿಎಂ ಆಗಿದ್ದಾಗ ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದರು. ಆದರೆ, ಹೇಳಿದಂತೆ ನಡೆದುಕೊಳ್ಳಲಿಲ್ಲ. 2017ರಲ್ಲಿ ಹೈಯರ್ ಸೆಕೆಂಡರಿ ಸ್ಕೂಲ್ ಮುಚ್ಚಿದರೆ, 2018ರಲ್ಲಿ ಪ್ರೈಮರಿ ಸ್ಕೂಲ್ ಕೂಡಾ ಮುಚ್ಚಿ ಹೋಯ್ತು. ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ, ಕಳಕಳಿ, ಜಾಗೃತಿ, ಲೈಕು, ಕಮೆಂಟುಗಳಾದಾಗ ಎಲ್ಲರಿಗೂ ನೆನಪಾಗುವ ಶಾಲೆ ಇದು.

    ಈಗ ಇದು ಸುದ್ದಿಯಾಗೋಕೆ ಕಾರಣ ಇಷ್ಟೆ, ನಟಿ ಪ್ರಣೀತಾ ಸುಭಾಷ್ ಸರ್ಕಾರ ಈ ಶಾಲೆಯನ್ನು ಪುನಃ ತೆರೆಯಬೇಕು. ಶಾಲೆಯ ಆರಂಭಕ್ಕೆ ಸರ್ಕಾರ ಮನಸ್ಸು ಮಾಡಿದರೆ ನಾವು ನಮ್ಮ ಪ್ರಣೀತಾ ಫೌಂಡೇಷನ್‍ನಿಂದ ಸಾಧ್ಯವಾದಷ್ಟೂ ನೆರವು ನೀಡುತ್ತೇವೆ. ಈ ಶಾಲೆಯನ್ನು ನಾವೆಲ್ಲರೂ ಉಳಿಸಿಕೊಳ್ಳೋಣ ಎಂದು ಸಿಎಂ ಅವರಿಗೆ ಟ್ವೀಟ್ ಮಾಡಿದ್ದಾರೆ. ಪ್ರಣೀತಾ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಕೂಡಾ ಈ ಶಾಲೆಯನ್ನು ರಕ್ಷಿಸಿಕೊಳ್ಳೋಣ ಎಂದು ಟ್ವೀಟ್ ಮಾಡಿದ್ದಾರೆ.

  • ವಿಷ್ಣುವರ್ಧನ್ ಕಟೌಟ್ ಜಾತ್ರೆ ದಾಖಲೆ ಬರೆದಾಗ..

    ವಿಷ್ಣುವರ್ಧನ್ ಕಟೌಟ್ ಜಾತ್ರೆ ದಾಖಲೆ ಬರೆದಾಗ..

    ಸೆಪ್ಟೆಂಬರ್ 18. ಆ ದಿನ ವಿಷ್ಣುವರ್ಧನ್ ಹುಟ್ಟುಹಬ್ಬವನ್ನ ನಾಡಹಬ್ಬದಂತೆ ಆಚರಿಸಿತ್ತು ವಿಷ್ಣುಸೇನೆ. ವೀರಕಪುತ್ರ ಶ್ರೀನಿವಾಸ್ ಅವರು ಆ ದಿನ ವಿಷ್ಣುವರ್ಧನ್ ಅವರ 50 ಕಟೌಟ್`ಗಳನ್ನು ವಿಷ್ಣುವರ್ಧನ್ ಪುಣ್ಯಭೂಮಿಯಲ್ಲಿ ನಿಲ್ಲಿಸಲಾಗಿತ್ತ. ಅದಕ್ಕೆ ಕಾರಣವೂ ಇತ್ತು. ನಾಗರಹಾವು ತೆರೆಕಂಡು 50 ವರ್ಷ ಪೂರೈಸಿದ ಸಂಭ್ರಮವನ್ನು ಹುಟ್ಟುಹಬ್ಬದಂದು ವಿಶೇಷವಾಗಿ ಆಚರಿಸಿದ್ದರು ವಿಷ್ಣು ಫ್ಯಾನ್ಸ್. ಇದೀಗ ಆ ಸಂಭ್ರಮ ವಿಶೇಷ ಪುರಸ್ಕಾರಕ್ಕೆ ಪಾತ್ರವಾಗಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ 'ಕಟೌಟ್ ಜಾತ್ರೆ' ದಾಖಲಾಗಿದೆ.

    ವಿಷ್ಣುವರ್ಧನ್ ಅವರ ೫೦ ಸೇನಾನಿಗಳು 2022ರ ಸೆಪ್ಟೆಂಬರ್ 18ರಂದು ಬೆಂಗಳೂರಿನ ಡಾ ವಿಷ್ಣು ಪುಣ್ಯಭೂಮಿಯಲ್ಲಿ 51 ಬೃಹತ್ ಕಟೌಟ್ಗಳನ್ನು ಸ್ಥಾಪಿಸಿ 'ಕಟೌಟ್ ಜಾತ್ರೆ' ಸಮಾರಂಭ ಆಯೋಜಿಸಿದ್ದರು. ಬೃಹತ್ ಹಾರಗಳನ್ನು ಸಹ ಹಾಕಿಸಿದ್ದರು. ಅಂದಾಜು 40 ಲಕ್ಷ ರೂಪಾಯಿ ಹಣ ಖರ್ಚಾಗಿತ್ತು. ಪೊಲೀಸ್ ಇಲಾಖೆಯ ಪ್ರಕಾರ, ಎರಡೂವರೆ ಲಕ್ಷ ಕನ್ನಡಿಗರು ಈ ಕಟೌಟ್ ಜಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ ವೀರಕಪುತ್ರ ಶ್ರೀನಿವಾಸ್.

    ಕಟೌಟ್ ಜಾತ್ರೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲು ಮನವಿಯನ್ನು ಸಲ್ಲಿಸಲಾಗಿತ್ತು. ಆ ಸಂಸ್ಥೆಗಳು ನಮ್ಮ ದಾಖಲೆ ಸಂಬಂಧ ಅನೇಕ ಹಂತದ ಪರೀಕ್ಷೆಗಳನ್ನು ನಡೆಸಿದ್ದರು. ಅಲ್ಲದೆ, ಅವರೇ ಖುದ್ದಾಗಿ ಸ್ಥಳ ಪರಿಶೀಲನೆಯನ್ನು ಮಾಡಿದ್ದರು. ಎಲ್ಲಾ ಹಂತದ ಪರೀಕ್ಷೆಗಳೂ ಮುಗಿದಿದ್ದು,  ಕಟೌಟ್ ಜಾತ್ರೆಯು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯಾಗಿ ಸೇರ್ಪಡೆಗೊಂಡಿವೆ. ದಾಖಲೆಯ ಪ್ರಮಾಣ ಪತ್ರ ಮತ್ತು ಪದಕಗಳು ನಮಗೆ ತಲುಪಿವೆ ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್.

    ಇದರ ಯಶಸ್ಸಿನ ಪಾಲು 50 ಸೇನಾನಿಗಳಿಗೆ ಹಾಗೂ ಕಟೌಟ್ ವಿನ್ಯಾಸ ಮಾಡಿದ ರಾಜು, ವಿಷ್ಣು ಹಾಗೂ ಇಡೀ ಕಾರ್ಯಕ್ರಮ ಆಯೋಜನೆ ನೋಡಿಕೊಂಡ ಆನಂದರಾಜ್, ಸಾಹಿತಿ ಜನಾರ್ದನ್ ರಾವ್ ಅವರಿಗೆ ಸಲ್ಲಬೇಕು ಎಂದು ಹೇಳಿಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್.

  • ವಿಷ್ಣುವರ್ಧನ್ ಮರೆತಿರಿ. ಯಾಕೆ? : ಅನಿರುದ್ಧ ಪ್ರಶ್ನೆ

    ವಿಷ್ಣುವರ್ಧನ್ ಮರೆತಿರಿ. ಯಾಕೆ? : ಅನಿರುದ್ಧ ಪ್ರಶ್ನೆ

    ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದಲ್ಲಿ ಡಾ.ರಾಜ್‍ಕುಮಾರ್ ಹೆಸರಿದೆ. ಸಂಘದ ಕಟ್ಟಡಕ್ಕೇ ರಾಜ್ ಹೆಸರಿಟ್ಟಿದ್ದಾರೆ. ಆಡಿಟೋರಿಯಂ ಒಂದಕ್ಕೆ ಅಂಬರೀಷ್ ಹೆಸರೂ ಇದೆ. ಆದರೆ, ಡಾ.ವಿಷ್ಣುವರ್ಧನ್ ಹೆಸರು ಎಲ್ಲಿ? ಇದು ನಟ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಪ್ರಶ್ನೆ.

    ಸಂಘದಲ್ಲಿ ಡಾ.ರಾಜ್ ಕುಮಾರ್, ಅಂಬರೀಷ್ ಹೆಸರು ಬಳಸಿಕೊಂಡಿದ್ದಾರೆ. ಇದು ಸಂತಸದ ವಿಷಯವೇ. ಆದರೆ, ವಿಷ್ಣುವರ್ಧನ್ ಅವರ ಹೆಸರು ಇಲ್ಲದಿರುವುದೂ ಅಷ್ಟೇ ಬೇಸರದ ಸಂಗತಿ ಎಂದಿದ್ದಾರೆ ಅನಿರುದ್ಧ.

    ವಿಷ್ಣುವರ್ಧನ್ ಅವರು ಯಾವುದನ್ನೂ ಎಕ್ಸ್‍ಪೆಕ್ಟ್ ಮಾಡ್ತಾ ಇರಲಿಲ್ಲ. ಅಕ್ಸೆಪ್ಟ್ ಮಾಡ್ತಾ ಇದ್ದರು. ಡಾ.ರಾಜ್ ಕುಮಾರ್ ಅವರಿಗೆ ಸಲ್ಲುವ ಗೌರವ ಸಲ್ಲಬೇಕು. ಅದೇ ರೀತಿ ವಿಷ್ಣುವರ್ಧನ್ ಅವರಿಗೂ ಗೌರವ ಸಿಗಬೇಕು ಎಂದಿರುವ ಅನಿರುದ್ಧ, ಫಿಲಂ ಚೇಂಬರ್‍ನಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಇಲ್ಲ. ಏಕೆ ಅನ್ನೋದನ್ನೂ ಪ್ರಶ್ನಿಸಿದ್ದಾರೆ.

  • ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಶುಭ ಕೋರಿದ ಕಿಚ್ಚ 

    sudeep

    ಆಗಸ್ಟ್ 27ರಂದು ನವದೆಹಲಿಯಲ್ಲಿ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯುತ್ತಿದೆ. ದೇಶ ವಿದೇಶಗಳಿಂದ ನೂರಾರು ಅಭಿಮಾನಿಗಳು ಆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಸಿನಿಮಾ, ಜೀವನ, ಕೊಡುಗೆ, ಅದರ್ಶಗಳ ಸ್ಮರಣೆ ನಡೆಯಲಿದೆ. ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಆ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ವಿಶೇಷ. ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಮೇಣದ ಪ್ರತಿಮೆಯೂ ಅನಾವರಣಗೊಳ್ಳಲಿದೆ. 

    ಈ ಕುರಿತು ಅಭಿಮಾನಿಯೊಬ್ಬರು ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್, ವಿಷ್ಣುವರ್ಧನ್ ನಮ್ಮ ಹೆಮ್ಮೆ. ನನ್ನ ಆದರ್ಶ. ವಿಷ್ಣು ರಾಷ್ಟ್ರೀಯ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

    Related Articles :-

    ರಾಷ್ಟ್ರ ರಾಜಧಾನಿಯಲ್ಲಿ ವಿಷ್ಣುವರ್ಧನ್

  • ವಿಷ್ಣುವರ್ಧನ್ ಸ್ಮಾರಕ : ವಿಷ್ಣುಸೇನಾ ಸಂಭ್ರಮವೇ ಸಂಭ್ರಮ

    ವಿಷ್ಣುವರ್ಧನ್ ಸ್ಮಾರಕ : ವಿಷ್ಣುಸೇನಾ ಸಂಭ್ರಮವೇ ಸಂಭ್ರಮ

    ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಕಾಲ ಕೂಡಿ ಬಂದಿದ್ದೇ ತಡ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮೋತ್ಸವಕ್ಕೆ ಸಿದ್ಧರಾಗತೊಡಗಿದ್ದಾರೆ. ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರಂತೂ ಸ್ಮಾರಕ ಉದ್ಘಾಟನೆಯನ್ನು ಸಂಭ್ರಮಿಸುತ್ತಿದ್ದಾರೆ.

    ಸ್ಮಾರಕ ಉದ್ಘಾಟನೆ ನಮ್ಮ ಪಾಲಿಗೆ ಜಾತ್ರೆಯೇ. 13 ವರ್ಷಗಳಿಂದ ಕಾದಿದ್ದೇವೆ. ಆ ದಿನ ನೂರಾರು ಕಾರುಗಳ ಮೂಲಕ ಬೆಂಗಳೂರು ಟು ಮೈಸೂರು ಪಥಸಂಚಲನ ನಡೆಯಲಿದೆ. ಬೆಂಗಳೂರಿನಿಂದ ಮೈಸೂರುವರೆಗೆ ನೂರಾರು ಕಟೌಟ್ ರಾರಾಜಿಸಲಿವೆ. ಮೈಸೂರಿನಲ್ಲಿ ವಿಷ್ಣುಸೇನಾ ಸಮಿತಿ ವತಿಯಿಂದಲೇ ಕುಂಭಮೇಳ, ಜಾನಪದ ತಂಡಗಳಿಂದ ನೃತ್ಯ, ಕುಣಿತ, ದೀಪೋತ್ಸವ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ ವೀರಕಪುತ್ರ ಶ್ರೀನಿವಾಸ್.

    ಜನವರಿ 29ರಂದು ರಾಜ್ಯ ಸರ್ಕಾರದಿಂದಲೇ ವಿಷ್ಣು ಸ್ಮಾರಕ ಉದ್ಘಾಟನೆಯಾಗಲಿದ್ದು, ಕಾರ್ಯಕ್ರಮವನ್ನು ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ. ಭಾರತಿ ವಿಷ್ಣುವರ್ಧನ್, ಅನಿರುದ್ಧ ಸೇರಿದಂತೆ ವಿಷ್ಣು ಅವರ ಇಡೀ ಕುಟುಂಬ ಹಾಗೂ ಸಾವಿರಾರು ಅಭಿಮಾನಿಗಳು ಸ್ಮಾರಕ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ.

  • ವಿಷ್ಣುವರ್ಧನ್ ಸ್ಮಾರಕ ಜ.29ರಂದು ಲೋಕಾರ್ಪಣೆ

    ವಿಷ್ಣುವರ್ಧನ್ ಸ್ಮಾರಕ ಜ.29ರಂದು ಲೋಕಾರ್ಪಣೆ

    13 ವರ್ಷಗಳ ಬಳಿಕ ಡಾ.ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಕಾಲ ಕೂಡಿ ಬಂದಿದೆ. ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಿದ್ದು ಜನವರಿ 29ರಂದು ಸ್ಮಾರಕ ಉದ್ಘಾಟನೆಯಾಗಲಿದೆ. ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮಾರಕ ಉದ್ಘಾಟನೆ ಮಾಡಲಿದ್ದಾರೆ.

    ಮೈಸೂರಿನ ಹಾಲಾಳು ಗ್ರಾಮದಲ್ಲಿ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಿತ್ತು. ಭೂಮಿ ವ್ಯಾಜ್ಯ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ನಿರ್ಮಾಣ ಕಾರ್ಯವೂ ಆಗುತ್ತಿತ್ತು. ಕೊನೆಗೂ ಎಲ್ಲ ಕಾನೂನು ಹೋರಾಟ ಮುಗಿಸಿ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದೆ. 5 ಎಕರೆ ಪ್ರದೇಶದಲ್ಲಿ 3 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ಅನಿರುದ್ಧ ಅವರು ಮಾಹಿತಿ ನೀಡಿದ್ದಾರೆ.

    ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ 600 ಅಪರೂಪದ ಚಿತ್ರಗಳು, ವಿಷ್ಣುವರ್ಧನ್ ಬಳುಸುತ್ತಿದ್ದ ವಸ್ತುಗಳು ಪ್ರದರ್ಶನಕ್ಕೆ ಇರಲಿವೆ. ಸ್ಮಾರಕದ ಎದುರು ವಿಭೂತಿ ಧಾರಿಯಾಗಿರುವ ವಿಷ್ಣುವರ್ಧನ್ ಅವರ 7 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸ್ಮಾರಕದಲ್ಲಿ ಒಂದು ಸಭಾಂಗಣವಿದ್ದು, ಇಲ್ಲಿ ನಾಟಕ ಹಾಗೂ ಸಿನಿಮಾಗಳ ಪ್ರದರ್ಶನಕೆಕ ಅವಕಾಶವಿದೆ. ಜೊತೆಗೆ ರಂಗ ತರಬೇತಿ ಕೇಂದ್ರವೂ ಇರಲಿದೆ. ಸಭಾಂಗಣದಲ್ಲಿಯೇ ಕಚೇರಿ ಹಾಗೂ ಎರಡು ಕೊಠಡಿಗಳ ನಿರ್ಮಾಣ ಮಾಡಲಾಗಿದೆ ಎಂದು ಅಳಿಯ ಹಾಗೂ ನಟ ಅನಿರುದ್ಧ ಮಾಹಿತಿ ನೀಡಿದ್ದಾರೆ. ಜೊತೆಗೆ ವಾಹನಗಳ ಪಾರ್ಕಿಂಗ್, ಸುಸಜ್ಜಿತ ಶೌಚಾಲಯಗಳು, ಕ್ಲಾಸ್ ರೂಂ, ಕ್ಯಾಂಟೀನ್, ಸುಂದರವಾದ ಕಾರಂಜಿ, ಹಸಿರಿನಿಂದ ಕಂಗೊಳಿಸುವ ಪಾರ್ಕ್ ಎಲ್ಲವೂ ಇರಲಿದೆ.

    ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದು ಅಭಿಮಾನ್ ಸ್ಟುಡಿಯೋದಲ್ಲಿ. ಆದರೆ ಹಲವು ಕಾರಣಗಳಿಂದ ಅದು ಈಡೇರಲಿಲ್ಲ. ವಿವಾದ ತಾರಕಕ್ಕೇರಿ ಭಾರತಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿತ್ತು. ಸಿದ್ದರಾಮಯ್ಯ ಸರ್ಕಾರವಿದ್ದಾಗ ಖುದ್ದು ಸುದೀಪ್ ಸೇರಿದಂತೆ ಚಿತ್ರರಂಗದ ಹಲವು ಹಿರಿಯರು ಈ ಬಗ್ಗೆ ಪ್ರಯತ್ನ ನಡೆಸಿದ್ದರು. ಕೊನೆಗೆ ಭಾರತಿ ವಿಷ್ಣುವರ್ಧನ್ ಆಗ್ರಹಕ್ಕೆ ಮಣಿದ ಸರ್ಕಾರ ಮೈಸೂರಿನ ಹಾಲಾಳು ಗ್ರಾಮದಲ್ಲಿ 5 ಎಕರೆ ಜಮೀನು ನೀಡಿದ್ದರು. ಅಲ್ಲಿಯೂ ಸಮಸ್ಯೆ ಶುರುವಾದಾಗ ಜಮೀನು ನೀಡಿದ್ದ ಸಿಎಂ ಆಗಿದ್ದ ಯಡಿಯೂರಪ್ಪನವರೇ ವಿವಾದ ಬಗೆಹರಿಸಿದ್ದರು. ಈಗ ಬೊಮ್ಮಾಯಿ ಆಗಿದ್ದಾರೆ. ಅವರಿಂದಲೇ ಸ್ಮಾರಕ ಉದ್ಘಾಟನೆಗೊಳ್ಳುತ್ತಿದೆ.

  • ವಿಷ್ಣುವರ್ಧನ್ ಸ್ಮಾರಕಕ್ಕೆ ಕೂಡಿ ಬಂದ ಕಾಲ : ಡಿ.18ಕ್ಕೆ ಉದ್ಘಾಟನೆ

    ವಿಷ್ಣುವರ್ಧನ್ ಸ್ಮಾರಕಕ್ಕೆ ಕೂಡಿ ಬಂದ ಕಾಲ : ಡಿ.18ಕ್ಕೆ ಉದ್ಘಾಟನೆ

    ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಹಲವು ವರ್ಷಗಳಿಂದ ವಿಷ್ಣು ಅಭಿಮಾನಿಗಳು ಕಾಯುತ್ತಿದ್ದ ವಿಷ್ಣು ಸ್ಮಾರಕಕ್ಕೆ ಕೊನೆಗೂ ಉದ್ಘಾಟನೆ ಭಾಗ್ಯ ಕೂಡಿ ಬಂದಿದೆ. ಮುಂದಿನ ತಿಂಗಳು ಡಿ.18ಕ್ಕೆ ಮೈಸೂರಿನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯಾಗಲಿದೆ. ದಿನಾಂಕ ನಿಗದಿಯಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮಾರಕ ಉದ್ಘಾಟಿಸಲಿದ್ದಾರೆ.

    ಮೈಸೂರಿನ ಹಾಲಾಳು ಗ್ರಾಮದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ.

    ವಿಷ್ಣುವರ್ಧನ್ ಅವರಿಗೆ ಸ್ಮಾರಕ ನಿರ್ಮಿಸಬೇಕು ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆಸೆಯಾಗಿತ್ತು. ಕನಸಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಸ್ಮಾರಕ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಒಂದು ಹಂತದಲ್ಲಿ ವಿಷ್ಣು ಅಭಿಮಾನಿಗಳು ಹಾಗೂ ಭಾರತಿ ವಿಷ್ಣುವರ್ಧನ್ ಅವರ ನಡುವೆ ಬಿರುಕು ಮೂಡುವ ಹಂತಕ್ಕೂ ಹೋಗಿತ್ತು. ವೀರಕಪುತ್ರ ಶ್ರೀನಿವಾಸ್ ಅಧ್ಯಕ್ಷರಾಗಿರುವ ವಿಷ್ಣುಸೇನೆ ಸೇರಿದಂತೆ ಹಲವು ಸಂಘಟನೆಗಳು ಹೋರಾಟ ನಡೆಸಿದ್ದವು. ಅಂದಹಾಗೆ ಈ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದವರು 2020ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ. ವಿವಾದಗಳನ್ನೆಲ್ಲ ಸಾವಧಾನವಾಗಿ ಬಗೆಹರಿಸಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಕೊಟ್ಟಿದ್ದರು.

    ವಿಷ್ಣುವರ್ಧನ್ ಸ್ಮಾರಕದ ಬಳಿ ವಿಷ್ಣುವರ್ಧನ್ ಸಿನಿ ಜರ್ನಿಯ ಆಡಿಯೋ ವಿಡಿಯೋ ಗ್ಯಾಲರಿ ಮತ್ತು ಪುಣೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಶಾಖೆ ಸಹ ಆರಂಭವಾಗಲಿದೆ. 

  • ವಿಷ್ಣುವರ್ಧನ್`ಗೆ ಕರ್ನಾಟಕ ರತ್ನ : ಸಿಎಂ ಬೊಮ್ಮಾಯಿ ಸುಳಿವು

    ವಿಷ್ಣುವರ್ಧನ್`ಗೆ ಕರ್ನಾಟಕ ರತ್ನ : ಸಿಎಂ ಬೊಮ್ಮಾಯಿ ಸುಳಿವು

    ಮೈಸೂರಿನಿನಿಂದ ಹೆಚ್.ಡಿ.ಕೋಟೆಗೆ ಹೋಗುವ ಮಾರ್ಗ ಮಧ್ಯೆ ಹಾಲಾಳು ಎಂಬ ಗ್ರಾಮವಿದೆ. ಅಲ್ಲಿ ಸುಮಾರು 11 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಮಾರಕವಿದು. ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಭವ್ಯ ಮೆರವಣಿಗೆ ನಡೆಸಿದ್ರು. ಕೋಟೆ ಆಂಜನೇಯಸ್ವಾಮಿ ದೇಗುಲ ಮುಂಭಾಗದಿಂದ ಸ್ಮಾರಕ ಸ್ಥಳಕ್ಕೆ ಅಭಿಮಾನಿಗಳು ಬೈಕ್ ಱಲಿ ಮೂಲಕ ತೆರಳಿದ್ರು. ಈ ವೇಳೆ ವಿಷ್ಣುವರ್ಧನ್ ಗೀತೆಗಳಿಗೆ ಫ್ಯಾನ್ಸ್ ಭರ್ಜರಿ ಡ್ಯಾನ್ಸ್ ಮಾಡಿದ್ದು, ಸಾಹಸ ಸಿಂಹನ ಪರ ಜೈಕಾರ ಕೂಗಿ ಸಂಭ್ರಮಿಸಿದ್ರು. ಹಲವು ವರ್ಷಗಳ ನಂತರ ನಮ್ಮ ಆಸೆ ಈಡೇರುತ್ತಿದೆ. ವಿಷ್ಣು ಸ್ಮಾರಕ ಮಾಡಿದ ಸರ್ಕಾರಕ್ಕೆ ಅಭಿನಂದನೆಗಳು ಎಂದು ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮಿಸಿದರು.

    ಒಟ್ಟು 2.75 ಎಕರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಆಗಿದೆ. . ವಿಷ್ಣು ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿದೆ .ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ.ನಟನ ಚಲನಚಿತ್ರ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ ಸೆಪ್ಟೆಂಬರ್ 15, 2020 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ. ಆಡಿಟೋರಿಯಂ ಕೂಡ ಇಲ್ಲಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತು ನಾಟಕಗಳ ಚಟುವಟಿಕೆ ನಡೆಸುವ ಕುರಿತು ವಿಷ್ಣು ಕುಟುಂಬಸ್ಥರು ಯೋಜನೆ ರೂಪಿಸಿದ್ದಾರೆ.

    ಭಾರತಿ ವಿಷ್ಣುವರ್ಧನ್, ಅನಿರುದ್ಧ, ಪುತ್ರಿ ಕೀರ್ತಿ ವಿಷ್ಣುವರ್ಧನ್ ಹಾಗೂ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ವಿಷ್ಣುವರ್ಧನ್ ಅವರನ್ನು ಮನಸಾರೆ ಹೊಗಳಿಸಿದರು. 13 ವರ್ಷಗಳ ನಂತರ ನಿರ್ಮಾಣವಾಗಿರುವ ಈ ಸ್ಮಾರಕ ಪ್ರವಾಸಿ ತಾಣವಾಗಬೇಕು ಎಂದರು. ಪುಟ್ಟ ಮಗುವೊಂದು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂಬ ಮನವಿಯಿಟ್ಟರು. ಇವುಗಳಿಗೆ ವೇದಿಕೆಯಲ್ಲಿಯೇ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ ನೀವು ಬೋರ್ಡ್‍ಗಳ ಮೂಲಕ ಇಟ್ಟಿರುವ ಬೇಡಿಕೆಯನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲನೆ ಮಾಡಲಿದೆ ಎಂದರು. ಇದುವರೆಗೆ 10 ಮಂದಿಗೆ ಕರ್ನಾಟಕ ರತ್ನ ನೀಡಲಾಗಿದೆ. ಚಿತ್ರರಂಗದಿಂದ ಇಬ್ಬರು ಕರ್ನಾಟಕ ರತ್ನ ಪುರಸ್ಕøತರು. ಡಾ.ರಾಜ್ ಹಾಗೂ ಮರಣೋತ್ತರವಾಗಿ ಡಾ.ಪುನೀತ್ ರಾಜಕುಮಾರ್ ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ.

  • ವಿಷ್ಣುವರ್ಧನ್‍ಗೇ ಥ್ರಿಲ್ ಕೊಟ್ಟಿದ್ದ ಪತ್ರಕರ್ತ.. ಆಮೇಲೆ ಶಾಕ್ ಕೊಟ್ಟಿದ್ದ ಕಥೆ

    25 years ago vishnuvardhan was shocked by that journalist

    ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್‍ಕರ್, ರಮೇಶ್ ಭಟ್.. ಹೀಗೆ ಹಲವು ಕಲಾವಿದರ ಸಂಗಮವಾಗಿದ್ದ ನಿಷ್ಕರ್ಷ, ಕನ್ನಡದ ಬೆಸ್ಟ್ ಥ್ರಿಲ್ಲರ್ ಸಿನಿಮಾಗಳಲ್ಲೊಂದು. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಟಾಪ್ ಸಿನಿಮಾ. ಆ ಸಿನಿಮಾವನ್ನು ನಿರ್ಮಾಪಕ ಬಿ.ಸಿ.ಪಾಟೀಲ್ ರೀರಿಲೀಸ್ ಮಾಡುತ್ತಿದ್ದಾರೆ. ನಿಷ್ಕರ್ಷದ ಥ್ರಿಲ್‍ನ್ನು ಮತ್ತೆ ಅನುಭವಿಸಲು ವಿಷ್ಣು ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ. ಆ ನಿಷ್ಕರ್ಷ ಚಿತ್ರದ ಪ್ರೆಸ್‍ಮೀಟ್‍ನಲ್ಲಿ ನಡೆದಿದ್ದ ಘಟನೆ ಇದು.

    ನಿಷ್ಕರ್ಷ ಚಿತ್ರಕ್ಕೆ ಮಯೂರ ಹೋಟೆಲ್‍ನಲ್ಲಿ ಮುಹೂರ್ತ ನೆರವೇರಿತ್ತು. ದಿನಾಂಕ : ಮೇ 12, 1993. ಶಂಕರ್ ಬಿದರಿ, ಕೆಂಪಯ್ಯ ಸೇರಿದಂತೆ ಸೀನಿಯರ್ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರೆಸ್‍ಮೀಟ್‍ನಲ್ಲಿ ವಿಷ್ಣುವರ್ಧನ್ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಆ ವೇಳೆ ಪತ್ರಕರ್ತರ ಗ್ಯಾಲರಿಯಲ್ಲಿದ್ದ ಯಂಗ್ ಜರ್ನಲಿಸ್ಟ್ ಒಬ್ಬರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು.

    ಪ್ರಶ್ನೆಗಳು ಎಷ್ಟೊಂದು ಇಂಟರೆಸ್ಟಿಂಗ್ ಆಗಿದ್ದವೆಂದರೆ ಆತನ ಪ್ರಶ್ನೆಗಳಿಗೆ ಸ್ವತಃ ವಿಷ್ಣುವರ್ಧನ್ ಕೂಡಾ ಥ್ರಿಲ್ಲಾಗಿದ್ದರು. ಹಲವು ಸೀನಿಯರ್ ಜರ್ನಲಿಸ್ಟುಗಳೂ ಆಸಕ್ತಿಯಿಂದ ಆ ಯುವ ಪತ್ರಕರ್ತ ಮತ್ತು ವಿಷ್ಣು ಜುಗಲ್‍ಬಂದಿ ನೋಡುತ್ತಿದ್ದರು. ಹೀಗೆ ಪ್ರಶ್ನೆ ಕೇಳುತ್ತಾ ಇದ್ದ ಆ ಯುವಕ, ಪ್ರಶ್ನೆಗಳು ಮುಗಿಯುತ್ತಿದ್ದಂತೆ ಎದ್ದು ಹೊರಟೇ ಬಿಟ್ಟ. ವಿಷ್ಣು ಸೇರಿದಂತೆ ಎಲ್ಲರಿಗೂ ಶಾಕ್.

    ಸಾಮಾನ್ಯವಾಗಿ ಸುದ್ದಿಗೋಷ್ಠಿಗಳು ಮುಗಿಯುವ ಮೊದಲೇ ಪತ್ರಕರ್ತರು ಹೊರಹೋಗುವುದಿಲ್ಲ. ಅದರಲ್ಲೂ ವಿಷ್ಣುರಂತಹ ಸೀನಿಯರ್ ನಟರಿದ್ದಾಗ ಪತ್ರಕರ್ತರೂ ಅಷ್ಟೇ ಶಿಸ್ತುಬದ್ಧರಾಗಿರುತ್ತಾರೆ. ಆದರೆ, ಅಷ್ಟೆಲ್ಲ ರೋಮಾಂಚನ ಹುಟ್ಟಿಸಿದ್ದ ಪತ್ರಕರ್ತ ಇದ್ದಕ್ಕಿದ್ದಂತೆ ಎದ್ದು ಹೋಗಿದ್ದೇಕೆ ಎಂದು ವಿಷ್ಣು ಕೂಡಾ ಗಾಬರಿಯಾದರು.

    ತಕ್ಷಣ ತಮ್ಮ ಸಹಾಯಕನನ್ನು ಆ ಯುವಕನನ್ನು ಹುಡುಕಿ ಮತ್ತೆ ಕರೆದುತರುವಂತೆ ಕಳಿಸಿಕೊಟ್ಟರು. ಆ ಯುವಕನ ಬೆನ್ನು ಹತ್ತಿ ಹೋದ ವಿಷ್ಣು ಸಹಾಯಕ ತಂದ ಉತ್ತರ, ವಿಷ್ಣು ಸೇರಿದಂತೆ ಎಲ್ಲ ಪತ್ರಕರ್ತರಿಗೂ ಶಾಕ್ ಕೊಟ್ಟಿತ್ತು.

    ಹಾಗೆ ಹೊರಗೆ ಹೋಗಿದ್ದ ಆ ಯಂಗ್ ಜರ್ನಲಿಸ್ಟ್, ಪತ್ರಕರ್ತನೇ ಆಗಿರಲಿಲ್ಲ. ವಿಷ್ಣುವರ್ಧನ್‍ಗೇ ರೋಮಾಂಚನಗೊಳಿಸಿದ್ದ ಆತ ವಿಷ್ಣು ಅಭಿಮಾನಿಯಾಗಿದ್ದ ಮತ್ತು ಆಟೋ ಡ್ರೈವರ್ ಆಗಿದ್ದ. ಸುದ್ದಿಗೋಷ್ಟಿಯ ನಡುವೆ ಎದ್ದು ಹೋದ ಅವನನ್ನು ಹುಡುಕಿತರಲು ಹೋದ ಸಹಾಯಕರಿಗೆ ಕಂಡಿದ್ದು ಆಟೋ ಡ್ರೈವರ್ ಯೂನಿಫಾರ್ಮಲ್ಲಿ ಆಟೋ ಓಡಿಸಿಕೊಂಡು ಹೋದ ಯುವಕ.