` dr vishnuvardhan, - chitraloka.com | Kannada Movie News, Reviews | Image

dr vishnuvardhan,

  • ಅಂಬಿ ನಿಧನದ ಬೆನ್ನಲ್ಲೇ ವಿಷ್ಣು ಸ್ಮಾರಕ ವಿವಾದಕ್ಕೆ ಮತ್ತೆ ಜೀವ

    vishnu smaraka issue raised again

    ವಿಷ್ಣುವರ್ಧನ್ ಸ್ಮಾರಕ ವಿವಾದ ಮತ್ತೆ ಬಿಸಿಯೇರಿದೆ. ಅಂಬರೀಷ್ ನಿಧನದ ಬೆನ್ನಲ್ಲೇ ಮತ್ತೆ ಕಾವು ಪಡೆದುಕೊಂಡಿದೆ. ವಿಷ್ಣು ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಮಾಡಬೇಕೋ.. ಕಂಠೀರವ ಸ್ಟುಡಿಯೊದಲ್ಲಿ ಮಾಡಬೇಕೋ.. ಅಥವಾ ಮೈಸೂರಿನಲ್ಲಿ ಮಾಡಬೇಕೋ ಅನ್ನೋ ಪ್ರಶ್ನೆ, ವಿವಾದಗಳ ರೂಪ ಪಡೆಯುತ್ತಿವೆ.

    ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಸ್ಮಾರಕ ನಿರ್ಮಿಸುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ ಬೆನ್ನಲ್ಲೇ ವಿಷ್ಣು ಅಭಿಮಾನಿಗಳು, ವಿಷ್ಣು ಸ್ಮಾರಕವನ್ನು ಮರೆತಿರಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿಯೇ 2 ಎಕರೆ ಮೀಸಲಿದೆ. 11 ಕೋಟಿ ರೂ. ಹಣ ಬಿಡುಗಡೆಯೂ ಆಗಿದೆ. ಆದರೆ, ಸ್ಮಾರಕ ನಿರ್ಮಾಣಕ್ಕೆ ಇನ್ನೂ ಶ್ರೀಕಾರ ಬಿದ್ದಿಲ್ಲ.

    ಡಾ.ರಾಜ್‍ಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್.. ಮೂವರ ಸ್ಮಾರಕವನ್ನೂ ಒಂದೇ ಕಡೆ ಮಾಡಬೇಕು ಅನ್ನೋ ಬೇಡಿಕೆಗಳೂ ಶುರುವಾಗಿವೆ. ರಾಜ್ ಸ್ಮಾರಕ ಹಾಗೆಯೇ ಇರಲಿ, ವಿಷ್ಣು ಮತ್ತು ಅಂಬಿ ಸ್ಮಾರಕ ಒಟ್ಟಿಗೇ ಆಗಲಿ ಅನ್ನೋದು ಇನ್ನೊಂದು ವಾದ. ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಸಿಎಂ ಕುಮಾರಸ್ವಾಮಿ.

    ವಿಷ್ಣು ಪುಣ್ಯಭೂಮಿಯ ಒಂದೇ ಒಂದು ಕಲ್ಲು ಅಲುಗಾಡಿದರೂ ಪರಿಸ್ಥಿತಿ ನೆಟ್ಟಗಿರಲ್ಲ. ಒಬ್ಬ ಮಗನಿಗೆ ಶರ್ಟ್ ಹೊಲಿದ ನಂತರ, ಬಟ್ಟೆ ಮಿಕ್ಕಿದೆ, ಇನ್ನೊಬ್ಬ ಮಗನಿಗೂ ಅದೇ ಬಟ್ಟೆಯಲ್ಲಿ ಚೆಡ್ಡಿ ಹೊಲೀತೀನಿ ಅಂತಾ ಟೈಲರ್ ಹೇಳಿದ ಹಾಗೆ ಹೇಳಬೇಡಿ. ವಿಷ್ಣು ಸ್ಮಾರಕ ಅವರ ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋದಲ್ಲೇ ಆಗಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.

    ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಮೈಸೂರಿನಲ್ಲಿ ಸ್ಮಾರಕ ಮಾಡಲಿ ಎಂದು ಗುಡುಗಿದ್ದಾರೆ ವಿಷ್ಣು ಅಳಿಯ ಅನಿರುದ್ಧ. ಅಂದಹಾಗೆ ಮೈಸೂರಿನಲ್ಲಿ 6 ಎಕರೆ ಜಾಗವನ್ನು ಸ್ಮಾರಕಕ್ಕಾಗಿ ಗುರುತಿಸಲಾಗಿದೆ.

  • ಅಭಿಮಾನಿಗಳೆಂದರೆ ನಿಮ್ಮ ಹಾಗಿರಬೇಕು - ವಿಷ್ಣುವರ್ಧನ್ ಅಭಿಮಾನಿಗಳನ್ನು ಮೆಚ್ಚಿಕೊಂಡ ಕಿಚ್ಚ

    sudeep salutes vishnu fans

    ವಿಷ್ಣುವರ್ಧನ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಸುತ್ತಿದ್ದಾರೆ. 

    ಆಗಸ್ಟ್ 27 ರಂದು ದೆಹಲಿಯಲ್ಲಿ 'ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಸಕಲ ಸಿದ್ಧತೆಗಳೂ ನಡೆದಿವೆ. ಆ ಸಮಾರಂಭಕ್ಕೆ ವಿಷ್ಣು ಅಭಿಮಾನಿಗಳು, ರಾಜಕೀಯ ಗಣ್ಯರು, ಸಿನಿಮಾ ದಿಗ್ಗಜರು ಸಾಕ್ಷಿಯಾಗುತ್ತಿದ್ದಾರೆ. ವಿಷ್ಣು ಹೆಸರಲ್ಲಿ ನಡೆಯುತ್ತಿರುವ ಆ ಉತ್ಸವಕ್ಕೆ ವಿಡಿಯೋ ಮೂಲಕ ಶುಭಾಶಯ ಹೇಳಿರುವ ಸುದೀಪ್, ವಿಷ್ಣು ಅಭಿಮಾನಿಗಳನ್ನು ಕೊಂಡಾಡಿದ್ದಾರೆ. ಅಭಿಮಾನಿಗಳೆಂದರೆ, ನಿಮ್ಮ ಹಾಗಿರಬೇಕು ಎಂದು ಮೆಚ್ಚಿಕೊಂಡಿದ್ದಾರೆ.

    ಸುದೀಪ್ ಪೂರ್ವನಿಗದಿತ ಕಾರ್ಯಕ್ರಮಗಳ ಪ್ರಕಾರ ಶೂಟಿಂಗ್​ನಲ್ಲಿರುವ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಡಿಯೋ ಮೂಲಕ ಶುಭ ಕೋರಿರುವ ಕಿಚ್ಚ, ಒಬ್ಬ ನಟ ನಮ್ಮ  ಜೊತೆ ಇಲ್ಲದಿರುವ ಸಂದರ್ಭಗಳಲ್ಲೂ ಅವರನ್ನು ಜೀವಂತವಾಗಿಡುವುದು ಅಭಿಮಾನಿಗಳಿಂದ ಮಾತ್ರ ಸಾಧ್ಯ. ಅಂಥಾದ್ದೊಂದು ಕೆಲಸ ಮಾಡುತ್ತಿರುವ ವಿಷ್ಣು ಅಭಿಮಾನಿಗಳಿಗೆ ನನ್ನ ನಮನ ಎಂದಿದ್ದಾರೆ.

    ವಿಷ್ಣು ಸರ್ ನೆನಪಲ್ಲಿ, ಈ  ಉತ್ಸವ ನಡೆಸುತ್ತಿರುವ ಅಭಿಮಾನಿಗಳಿಗೆ ನನ್ನ ಸಲ್ಯೂಟ್. ದೆಹಲಿಯಲ್ಲಿ ಈ ಉತ್ಸವ ನಡೆಯುತ್ತಿರುವುದು, ವಿಷ್ಣು ಸರ್ ಅವರ ಆರಡಿ ಎತ್ತರದ ಪ್ರತಿಮೆ ಉದ್ಘಾಟನೆ ಆಗುತ್ತಿರುವುದು, ದೆಹಲಿ ಬಾಗಿಲಿನಲ್ಲಿ ಮೆರವಣಿಗೆ ಮಾಡುತ್ತಿರುವುದು ತುಂಬಾ ಬಹಳ ಖುಷಿ ಆಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸುಮಾರು 500 ಜನ ಅಭಿಮಾನಿಗಳು ಬೆಂಗಳೂರಿನಿಂದ ದೆಹಲಿಗೆ ಹೋಗಿ ಭಾಗವಹಿಸುತ್ತಿರುವುದ ಸಂಭ್ರಮ ಹೆಚ್ಚಿಸಿದೆ ಎಂದಿದ್ಧಾರೆ ಸುದೀಪ್.

    ಚಿತ್ರಲೋಕ ವೀರೇಶ್​ಗೆ ಸುದೀಪ್ ಹಾರೈಕೆ

    ಇದೇ ಕಾರ್ಯಕ್ರಮದಲ್ಲಿ ಚಿತ್ರಲೋಕ ವೀರೇಶ್ ಅವರು ವಿಷ್ಣುವರ್ಧನ್ ಅವರ ಭಾವಚಿತ್ರಗಳನ್ನ ಪ್ರದರ್ಶನ ಮಾಡುತ್ತಿರುವುದನ್ನು ಪ್ರಸ್ತಾಪಿಸಿರುವ ಸುದೀಪ್, ವೀರೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ವಿಷ್ಣು ಸರ್ ಬಹಳ ದೊಡ್ಡ ಕಲಾವಿದರು. ಅದಕ್ಕಿಂತಲೂ ಹೆಚ್ಚಾಗಿ ಮಹಾನ್ ವ್ಯಕ್ತಿ. ಅವರ ಹೆಸರಲ್ಲಿ ಎಷ್ಟೇ ಕಾರ್ಯಕ್ರಮಗಳು ನಡೆದರೂ ಕೂಡ ಕಡಿಮೆಯೇ. ನನಗೆ ತುಂಬ ಸಂತೋಷವಿದೆ. ಯಾಕಂದ್ರೆ, ಜೀವನದಲ್ಲಿ ಕೆಲವು ಸಂದರ್ಭಗಳು ಅವರೊಂದಿಗೆ ಕಾಲಕಳೆಯುವ ಅವಕಾಶ ಸಿಕ್ಕಿತ್ತು. ಹತ್ತಿರದಲ್ಲಿ ಕೂತು ಮಾತನಾಡುವುದಕ್ಕೆ ಅವಕಾಶ ಸಿಕ್ಕಿತ್ತು. ನನಗೆ ಒಂದು ಪ್ರಶಸ್ತಿ ಎಂದಿದ್ದಾರೆ ಸುದೀಪ್.

    ವಿಷ್ಣು ಸರ್ ಹೆಸರಲ್ಲಿ ಕಾರ್ಯಕ್ರಮಗಳನ್ನ ನಡೆಸಿ, ವಿಷ್ಣು ಸರ್ ಅವರನ್ನ ಜೀವಂತವಾಗಿ ಇಟ್ಟಿದ್ದೀರಿ ಅದು ಶಾಶ್ವತವಾಗಿರಲಿ. ನಿಮ್ಮಂತಹ ಅಭಿಮಾನಿಗಳನ್ನು ವಿಷ್ಣು ಸರ್ ಧನ್ಯರು ಎಂದಿದ್ದಾರೆ ಸುದೀಪ್.

  • ಆಗ ಬಜೆಟ್ಟೇ 60 ಲಕ್ಷ.. ಹೊಸ ಟೆಕ್ನಾಲಜಿಗೆ 1 ಕೋಟಿ..!

    interestiong truth behind digitizalition of nishkarsha

    ನಿಷ್ಕರ್ಷ ಚಿತ್ರ ರಿಲೀಸ್ ಆಗಿದ್ದುದು 1993ರಲ್ಲಿ. ವಿಷ್ಣುವರ್ಧನ್, ಅನಂತ್ ನಾಗ್ ಅವರಂತಹ ಸ್ಟಾರ್ ನಟರಿದ್ದರೂ ಆಗ ಇಡೀ ಚಿತ್ರಕ್ಕೆ ಖರ್ಚಾಗಿದ್ದುದು 60 ಲಕ್ಷ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಿನಿಮಾ, ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆಂದೇ ಈ ವಾರ ರಿ-ರಿಲೀಸ್ ಆಗುತ್ತಿದೆ.

    ವಿಶೇಷವೇನು ಗೊತ್ತೇ.. ಅದೇ ಚಿತ್ರವನ್ನು ಹೊಸ ಟೆಕ್ನಾಲಜಿಯಲ್ಲಿ ರಿಲೀಸ್ ಮಾಡಲು ಆಗಿರುವ ವೆಚ್ಚ. ಚಿತ್ರದ ಮರುಬಿಡುಗಡೆಗಾಗಿಯೇ 1 ಕೋಟಿ ಖರ್ಚಾಗಿದೆಯಂತೆ. ಚಿತ್ರವನ್ನು ಡಿಜಿಟಲ್ ರೂಪಕ್ಕಿಳಿಸಲು ಈಶ್ವರ್ ಮುಂಬೈ, ಬೆಂಗಳೂರಿಗೆ ಸತತವಾಗಿ ಓಡಾಡಿದ್ದಾರೆ. ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ. ಸೆ.18ರಂದು ವಿಷ್ಣು ಹುಟ್ಟುಹಬ್ಬವಾದರೆ, ಸೆ.20ರಂದು ಸಿನಿಮಾ ರಿಲೀಸ್.

  • ಒಡಿಶಾ ಕಡಲ ತೀರದಲ್ಲಿ ವಿಷ್ಣುವರ್ಧನ್

    ಒಡಿಶಾ ಕಡಲ ತೀರದಲ್ಲಿ ವಿಷ್ಣುವರ್ಧನ್

    ಒಡಿಶಾದ ಕಡಲ ತೀರದಲ್ಲಿ ಈ ಬಾರಿ ವಿಷ್ಣುವರ್ಧನ್ ಕೀರ್ತಿ ಪತಾಕೆಯೂ ಹಾರುತ್ತಿದೆ. ಒಡಿಶಾದ ಪುರಿ ಮರೀನ್ ಡ್ರೈವ್ ಬೀಚ್‍ನಲ್ಲಿ ಮರಳುಶಿಲ್ಪಿ ಮನೀಶ್ ಕುಮಾರ್ ವಿಷ್ಣುವರ್ಧನ್ ಅವರನ್ನು ಮರಳು ಶಿಲ್ಪದಲ್ಲಿ ರೂಪಿಸಿದ್ದಾರೆ. 6 ಅಡಿ ಎತ್ತರ, 15 ಅಡಿ ಅಗಲದ ವಿಷ್ಣು ಮರಳುಶಿಲ್ಪ ನೋಡುಗರ ಗಮನ ಸೆಳೆಯುತ್ತದೆ.

    ಸೆ.18ರಂದು ವಿಷ್ಣುವರ್ಧನ್ ಅವರ 71ನೇ ಹುಟ್ಟುಹಬ್ಬದ ವಿಶೇಷವಾಗಿ ಈ ಮರಳುಶಿಲ್ಪ ರೂಪಿಸಲಾಗಿದೆ. ವಿಷ್ಣುವರ್ಧನ್ ಅವರ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಈ ಮರಳುಶಿಲ್ಪದ ರೂವಾರಿ. ಮರಳು ಶಿಲ್ಪಿಯ ಜೊತೆ ತಾವೂ ಕೈಜೋಡಿಸಿದ್ದಾರೆ ಶ್ರೀನಿವಾಸ್.

    ಕನ್ನಡಿಗರಿಗೆ ವಿಷ್ಣುವರ್ಧನ್ ಅವರ ಸಾಧನೆ, ವ್ಯಕ್ತಿತ್ವದ ಬಗ್ಗೆ ಹೇಳುವ ಅಗತ್ಯವಿಲ್ಲ. ಅವರ ಸಾಧನೆಯನ್ನು ಕರ್ನಾಟಕದ ಹೊರಗೆ ತೆಗೆದುಕೊಂಡು ಹೋಗಬೇಕು ಎನ್ನುವುದು ನನ್ನ ಮಹದಾಸೆ ಎಂದಿದ್ದಾರೆ ಶ್ರೀನಿವಾಸ್.

  • ಕನ್ನಡಿಗರ ಯಜಮಾನ.. ನಿಮಗಿದೋ ರಂಗನಮನ

    tribute to dr vishnuvardhan with dramas

    ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ ಇರುವುದು ಸೆಪ್ಟೆಂಬರ್ 18ಕ್ಕೆ. ಎಂದಿನಂತೆ ವಿಷ್ಣು ಸೇನಾ ಸಮಿತಿ ತಿಂಗಳಿಗೂ ಮೊದಲೇ ಯಜಮಾನನ ಉತ್ಸವಕ್ಕೆ ಚಾಲನೆ ಕೊಟ್ಟಿದೆ. 3 ವರ್ಷಗಳ ಹಿಂದೆ ದೆಹಲಿಯಲ್ಲಿ ಕಲರ್‍ಫುಲ್ ಕಾರ್ಯಕ್ರಮ ಮಾಡಿದ್ದ ವಿಎಸ್‍ಎಸ್, ಈ ಬಾರಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗಭೂಮಿ ಮೂಲಕ ನಮನ ಸಲ್ಲಿಸಲು ಮುಂದಾಗಿದೆ.

    ಸೆಪ್ಟೆಂಬರ್ 18,19 ಮತ್ತು 20ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕೋತ್ಸವ ನಡೆಯಲಿದೆ. ಕನ್ನಡಿಗರ ಯಜಮಾನ.. ನಿಮಗಿದೋ ರಂಗನಮನ ಎನ್ನುವುದೇ ಉತ್ಸವದ ಘೋಷವಾಕ್ಯ.

    ಚೋರ ಚರಣದಾಸ, ಊರು ಸುಟ್ರೂ ಹನುಮಪ್ಪ ಹರಗೆ, ಶರೀಫ, ವೇಷ, ಗುಲಾಬಿ ಗ್ಯಾಂಗು ನಾಟಕಗಳು ಆಯ್ಕೆಯಾಗಿವೆ. ರಾಜಗುರು ಹೊಸಕೋಟೆ ಉತ್ಸವದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

    ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿದ್ದು `ವಿಷ್ಣುವರ್ಧನ್ ಅವರ ಹುಟ್ಟುಹಬ್ಬಕ್ಕಾಗಿ ್ನ ನಾಟಕ, ಗೀತ ಗಾಯನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದಿದ್ದಾರೆ. ಕಿಚ್ಚ ಸುದೀಪ್ ಕೂಡಾ ವಿಷ್ಣು ನಾಟಕೋತ್ಸವಕ್ಕೆ ಶುಭ ಕೋರಿದ್ದಾರೆ.

  • ಚಿತ್ರರಂಗಕ್ಕೆ ಅವರೊಬ್ಬರೇ ಯಜಮಾನ.. ನನಗೆ ಅಂಬರೀಷಣ್ಣ

    he is the one and only yajamana and will remain the same

    ಚಿತ್ರರಂಗಕ್ಕೆ ಆವತ್ತು.. ಇವತ್ತು.. ಮುಂದೆ.. ಯಾವತ್ತಿಗೂ ಅಷ್ಟೆ. ವಿಷ್ಣುವರ್ಧನ್ ಒಬ್ಬರೇ ಯಜಮಾನ. ಇದು ದರ್ಶನ್ ಅವರ ಖಡಕ್ ಮಾತು. 

    ಯಜಮಾನ ಚಿತ್ರದ ಟೈಟಲ್ ಕುರಿತು ಕೇಳಿ ಬರುವ ಮಾತುಗಳಿಗೆ ಉತ್ತರ ಕೊಟ್ಟಿರೋ ದರ್ಶನ್, ಚಿತ್ರದ ಕಥೆಗೆ ಯಜಮಾನ ಟೈಟಲ್ ಸೂಕ್ತವಾಗಿದೆ. ಹಾಗಾಗಿ ಇಟ್ಟಿದ್ದೇವೆ. ಕಥೆಗಾಗಿ ಯಜಮಾನ ಟೈಟಲ್ ಹೊರತೂ, ದರ್ಶನ್‍ಗಾಗಿ ಯಜಮಾನ ಅಲ್ಲ ಎಂದಿದ್ದಾರೆ ದರ್ಶನ್.

    ಇಷ್ಟೆಲ್ಲ ಆದ ಮೇಲೆ ನಿಮ್ಮ ಯಜಮಾನ ಯಾರು ಎಂದರೆ, ಅಷ್ಟೇ ನೇರ ಉತ್ತರ ದರ್ಶನ್ ಅವರದ್ದು. ದರ್ಶನ್ ಪಾಲಿಗೆ ಯಾವತ್ತಿದ್ರೂ ಅಂಬರೀಷ್ ಅವರೇ ಯಜಮಾನ.

  • ನವದೆಹಲಿಯಲ್ಲಿ ಈ ಭಾನುವಾರ ವಿಷ್ಣುವರ್ಧನ್ ವಾರ

    vishnuvardhan

    ರಾಷ್ಟ್ರ ರಾಜಧಾನಿಯಲ್ಲಿ ಇಂದು ದಿನವಿಡೀ ವಿಷ್ಣು ನಾಮ ಸ್ಮರಣೆ. ಅಗಲಿದ ಕಲಾವಿದನೊಬ್ಬನ ನೆನಪಲ್ಲಿ, ಇಂಥಾದ್ದೊಂದು ಸ್ಮರಣೆ ಹಮ್ಮಿಕೊಂಡಿರುವುದು ವಿಷ್ಣು ಸೇನಾ ಸಮಿತಿ. ವಿಷ್ಣು ಈಗ ನಮ್ಮ ಮಧ್ಯೆ ಇಲ್ಲ. 8 ವರ್ಷಗಳೇ ಕಳೆದು ಹೋಗಿವೆ. ಅವರ ನೆನಪಿನಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಉತ್ಸವವೊಂದು ನಡೆಯುತ್ತಿದೆ. ವಿಷ್ಣು ಅಭಿಮಾನಿಗಳಷ್ಟೇ ಅಲ್ಲ, ಪ್ರತಿಯೊಬ್ಬ ಕನ್ನಡಿಗನೂ ಮೆಚ್ಚುವ ಈ ಕೆಲಸ ಮಾಡಿರುವುದು ವೀರಕಪುತ್ರ ಶ್ರೀನಿವಾಸ

    ಇಂದು (ಭಾನುವಾರ) ಬೆಳಗ್ಗೆ 6 ಗಂಟೆಗೆಲ್ಲ ಸಂಭ್ರಮ ಶುರುವಾಗುತ್ತೆ. ಇಡೀ ದಿನ ವಿಷ್ಣು ನೆನಪಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಚಿತ್ರರಂಗದ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 500ಕ್ಕೂ ಹೆಚ್ಚು ಅಭಿಮಾನಿಗಳು ಇದೇ ಉತ್ಸವಕ್ಕಾಗಿ ಬೆಂಗಳೂರಿನಿಂದ ದೆಹಲಿಗೆ ಆಗಮಿಸಿದ್ದಾರೆ. 

    6 ಅಡಿ ಎತ್ತರದ ವಿಷ್ಣು ಪ್ರತಿಮೆ ಅನಾವರಣ

    ಇದೇ ಮೊದಲ ಬಾರಿಗೆ ಕನ್ನಡದ ಕಲಾವಿದರೊಬ್ಬರ ಮೇಣದ ಪ್ರತಿಮೆ, ನವದೆಹಲಿಯಲ್ಲಿ ಅನಾವರಣಗೊಳ್ಳುತ್ತಿದೆ. ಬೆಳಗ್ಗೆ 6 ಗಂಟೆಗೆ ಆಸ್ಟ್ರೇಲಿಯಾದಿಂದ ಬಂದಿರುವ ವಿಷ್ಣು ಅಭಿಮಾನಿ ಬಲರಾಂ, ವಿಷ್ಣು ಭಾವಚಿತ್ರವಕ್ಕೆ ಪೂಜೆ ನಡೆಸಲಿದ್ದಾರೆ. ಅಲ್ಲಿಂದ ಕಾರ್ಯಕ್ರಮ ಆರಂಭ. 

    ವಿಷ್ಣು ಅವರಿಗಾಗಿಯೇ ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದಾರೆ. ಚಿತ್ರಲೋಕ ವೀರೇಶ್ ಅವರಿಂದ ವಿಷ್ಣುವರ್ಧನ್ ಚಿತ್ರಜೀವನದ ಮೈಲುಗಲ್ಲುಗಳ ಫೋಟೋ ಎಕ್ಸಿಬಿಷನ್ ಇದೆ. ವಿಷ್ಣು ಹಾದಿಯ ಕುರಿತು, ಸಾಂಸ್ಕøತಿಕ ಲೋಕಕ್ಕೆ ವಿಷ್ಣು ನೀಡಿರುವ ಕೊಡುಗೆಗಳ ಕುರಿತು ಖ್ಯಾತಿ ಪತ್ರಕರ್ತರಾದ ಜೋಗಿ, ಬಿ. ಗಣಪತಿ, ಸದಾಶಿವ ಶೆಣೈ, ಕೆ.ಎಂ. ವೀರೇಶ್, ಬಿ. ನಂದಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ.

    ಸಿಂಹಾವಲೋಕನ ಕೃತಿ ಬಿಡುಗಡೆ ಹಾಗೂ ಶಿವರಾಮಣ್ಣನವರಿಗೆ ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ. ಕೇಂದ್ರ ಸಚಿವ ಅನಂತ್ ಕುಮಾರ್, ರಾಜ್ಯದ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಹೆಚ್.ಎಂ. ರೇವಣ್ಣ, ಕರವೇ ಅಧ್ಯಕ್ಷ ನಾರಾಯಣ ಗೌಡ ಮೊದಲಾದ ಗಣ್ಯರು ಭಾಗವಹಿಸುತ್ತಿದ್ದಾರೆ.

    ಚಿತ್ರರಂಗದ ಕಲಾವಿದರ ಸಂಗಮ

    ಡಾ. ವಿಷ್ಣು ಒಡನಾಡಿಗಳೂ, ಗೆಳೆಯರೂ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು,  ಹೇಮಾ ಚೌಧರಿ, ತಾರಾ ಅನುರಾಧ, ಚರಣ್ ರಾಜ್.. ಇವರೆಲ್ಲ ವಿಷ್ಣು ಜೊತೆಯಲ್ಲೇ ಬೆಳೆದಿದ್ದವರು. ಆದಿತ್ಯ, ಕೋಕಿಲ ಮೋಹನ್, ಬಿ.ಸಿ. ಪಾಟೀಲ್, ಅರುಣ್ ಸಾಘರ್, ಶ್ರೀನಗರ ಕಟ್ಟಿ, ರಾಗಿಣಿ, ಶೋಭರಾಜ್, ಸಾಧುಕೋಕಿಲ, ರವಿಶಂಕರ್ ಗೌಡ.. ಇವರೆಲ್ಲ ವಿಷ್ಣು ಅವರನ್ನು ನೋಡಿಕೊಂಡು ಬೆಳೆದ ಕಲಾವಿದರು.

    ಅಟ್ಟಾವರ ರಾಮದಾಸ್, ವರದರಾಜ್ ಪೈ, ಹಾಗೂ ಕಾರ್ಯಕ್ರಮದ ರೂವಾರಿ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.. ಇವರೆಲ್ಲರ ಸಂಗಮವೂ ಇದೇ ವೇದಿಕೆಯಲ್ಲಿ ನಡೆಯಲಿದೆ. 

    ವಿಶೇಷಗಳು ಇನ್ನೂ ಹಲವಾರಿವೆ. ವಿಷ್ಣು ಉತ್ಸವವನ್ನು ಮಿಸ್ ಮಾಡಿಕೊಳ್ಳಬೇಡಿ. ಏಕೆಂದರೆ, ಇದು  ಅಭಿಮಾನಿಗಳಿಗಾಗಿ..ಅಭಿಮಾನಿಗಳಿಂದ..ಅಭಿಮಾನಿಗಳಿಗೋಸ್ಕರ..

  • ನವದೆಹಲಿಯಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ

    vishnu national festival

    ಅಗಲಿದ ಕಲಾವಿದನೊಬ್ಬನ ನೆನಪಲ್ಲಿ, ಅವರು ನಮ್ಮ ಮಧ್ಯೆ ಇಲ್ಲದಂತಾಗಿ ಹೋದ 8 ವರ್ಷದ ನಂತರ, ಅವರ ಸ್ಮರಣಾರ್ಥ ರಾಷ್ಟ್ರೀಯ ಉತ್ಸವವೊಂದು ನಡೆಯುತ್ತೆ ಎಂದರೆ, ಎಂಥವರೂ ಮೆಚ್ಚಲೇಬೇಕು. ಅಂಥಾದ್ದೊಂದು ಸಾಹಸ ಮಾಡಿರುವುದು ವೀರಕಪುತ್ರ ಶ್ರೀನಿವಾಸ್. ಇದೇ ಆಗಸ್ಟ್ಟ 27ಕ್ಕೆ ನವದೆಹಲಿಯಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯುತ್ತಿದೆ. ವಿಷ್ಣು ಸೇನಾ ಸಮಿತಿ ಹಮ್ಮಿಕೊಂಡಿರುವ ಈ ಸ್ಮರಣಾ ಕಾರ್ಯಕ್ರಮ ಕನ್ನಡಿಗರಿಗೆಲ್ಲ ಹೆಮ್ಮೆ

    ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಇಡೀ ದಿನ ವಿಷ್ಣು ಸ್ಮರಣೆ

    ಆ ದಿನ ಬೆಳಗ್ಗೆ 6 ಗಂಟೆಗೆಲ್ಲ ಸಂಭ್ರಮ ಶುರುವಾಗುತ್ತೆ. ಇಡೀ ದಿನ ವಿಷ್ಣು ನೆನಪಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಚಿತ್ರರಂಗದ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 500ಕ್ಕೂ ಹೆಚ್ಚು ಅಭಿಮಾನಿಗಳು ಇದೇ ಉತ್ಸವಕ್ಕಾಗಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದಾರೆ. 

    6 ಅಡಿ ಎತ್ತರದ ವಿಷ್ಣು ಪ್ರತಿಮೆ ಅನಾವರಣ

    ಇದೇ ಮೊದಲ ಬಾರಿಗೆ ಕನ್ನಡದ ಕಲಾವಿದರೊಬ್ಬರ ಮೇಣದ ಪ್ರತಿಮೆ, ನವದೆಹಲಿಯಲ್ಲಿ ಅನಾವರಣಗೊಳ್ಳುತ್ತಿದೆ. ಬೆಳಗ್ಗೆ 6 ಗಂಟೆಗೆ ಆಸ್ಟ್ರೇಲಿಯಾದಿಂದ ಬಂದಿರುವ ವಿಷ್ಣು ಅಭಿಮಾನಿ ಬಲರಾಂ, ವಿಷ್ಣು ಭಾವಚಿತ್ರವಕ್ಕೆ ಪೂಜೆ ನಡೆಸಲಿದ್ದಾರೆ. ಅಲ್ಲಿಂದ ಕಾರ್ಯಕ್ರಮ ಆರಂಭ. 

    ವಿಷ್ಣು ಅವರಿಗಾಗಿಯೇ ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದಾರೆ. ಚಿತ್ರಲೋಕ ವೀರೇಶ್ ಅವರಿಂದ ವಿಷ್ಣುವರ್ಧನ್ ಚಿತ್ರಜೀವನದ ಮೈಲುಗಲ್ಲುಗಳ ಫೋಟೋ ಎಕ್ಸಿಬಿಷನ್ ಇದೆ. ವಿಷ್ಣು ಹಾದಿಯ ಕುರಿತು, ಸಾಂಸ್ಕøತಿಕ ಲೋಕಕ್ಕೆ ವಿಷ್ಣು ನೀಡಿರುವ ಕೊಡುಗೆಗಳ ಕುರಿತು ಖ್ಯಾತಿ ಪತ್ರಕರ್ತರಾದ ಜೋಗಿ, ಬಿ. ಗಣಪತಿ, ಸದಾಶಿವ ಶೆಣೈ, ಕೆ.ಎಂ. ವೀರೇಶ್, ಬಿ. ನಂದಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ.

    ಸಿಂಹಾವಲೋಕನ ಕೃತಿ ಬಿಡುಗಡೆ ಹಾಗೂ ಶಿವರಾಮಣ್ಣನವರಿಗೆ ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ. ಕೇಂದ್ರ ಸಚಿವ ಅನಂತ್ ಕುಮಾರ್, ರಾಜ್ಯದ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಹೆಚ್.ಎಂ. ರೇವಣ್ಣ, ಕರವೇ ಅಧ್ಯಕ್ಷ ನಾರಾಯಣ ಗೌಡ ಮೊದಲಾದ ಗಣ್ಯರು ಭಾಗವಹಿಸುತ್ತಿದ್ದಾರೆ.

    ಚಿತ್ರರಂಗದ ಕಲಾವಿದರ ಸಂಗಮ

    ಡಾ. ವಿಷ್ಣು ಒಡನಾಡಿಗಳೂ, ಗೆಳೆಯರೂ ಆಗಿದ್ದ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು,  ಹೇಮಾ ಚೌಧರಿ, ತಾರಾ ಅನುರಾಧ, ಚರಣ್ ರಾಜ್.. ಇವರೆಲ್ಲ ವಿಷ್ಣು ಜೊತೆಯಲ್ಲೇ ಬೆಳೆದಿದ್ದವರು. ಆದಿತ್ಯ, ಕೋಕಿಲ ಮೋಹನ್, ಬಿ.ಸಿ. ಪಾಟೀಲ್, ಅರುಣ್ ಸಾಘರ್, ಶ್ರೀನಗರ ಕಟ್ಟಿ, ರಾಗಿಣಿ, ಶೋಭರಾಜ್, ಸಾಧುಕೋಕಿಲ, ರವಿಶಂಕರ್ ಗೌಡ.. ಇವರೆಲ್ಲ ವಿಷ್ಣು ಅವರನ್ನು ನೋಡಿಕೊಂಡು ಬೆಳೆದ ಕಲಾವಿದರು.

    ಅಟ್ಟಾವರ ರಾಮದಾಸ್, ವರದರಾಜ್ ಪೈ, ಹಾಗೂ ಕಾರ್ಯಕ್ರಮದ ರೂವಾರಿ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.. ಇವರೆಲ್ಲರ ಸಂಗಮವೂ ಇದೇ ವೇದಿಕೆಯಲ್ಲಿ ನಡೆಯಲಿದೆ. 

    ವಿಶೇಷಗಳು ಇನ್ನೂ ಹಲವಾರಿವೆ. ವಿಷ್ಣು ಉತ್ಸವವನ್ನು ಮಿಸ್ ಮಾಡಿಕೊಳ್ಳಬೇಡಿ. ಏಕೆಂದರೆ, ಇದು  ಅಭಿಮಾನಿಗಳಿಗಾಗಿ..ಅಭಿಮಾನಿಗಳಿಂದ..ಅಭಿಮಾನಿಗಳಿಗೋಸ್ಕರ..

  • ನಾಗರಹಾವು ನೋಡಿದ ಶಿವಣ್ಣ, ಜಗ್ಗೇಶ್

    nagarahaavu is superhit across karnataka

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ನಾಗರಹಾವು, ಬಾಕ್ಸಾಫೀಸ್‍ನ್ನು ಚಿಂದಿ ಉಡಾಯಿಸುತ್ತಿದೆ. ಹೊಸ ಸಿನಿಮಾಗೆ ಬರುವಂತೆ ಪ್ರೇಕ್ಷಕರು ಥಿಯೇಟರ್‍ಗೆ ಓಡೋಡಿ ಬರುತ್ತಿರುವುದು ಕ್ಲಾಸಿಕ್ ಸಿನಿಮಾ ಪವರ್‍ಗೆ ಸಾಕ್ಷಿಯಾಗುತ್ತಿದೆ. ಈ ಸಿನಿಮಾವನ್ನು ಥಿಯೇಟರ್‍ನಲ್ಲೇ ನೋಡೋದಾಗಿ ಚಿತ್ರೋದ್ಯಮದ ಹಲವರು ಹೇಳಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಇತ್ತೀಚೆಗೆ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ಚಿತ್ರ ನೋಡಿದ್ದಾರೆ. ಜಗ್ಗೇಶ್ ಕೂಡಾ, ಸಿನಿಮಾ ನೋಡಿ, ಹೊಸ ತಂತ್ರಜ್ಞಾನದಲ್ಲಿ ಹೊಸ ನಾಗರಹಾವು ಅದ್ಭುತವಾಗಿದೆ ಎಂದಿದ್ದಾರೆ.

    ಶಿವರಾಜ್‍ಕುಮಾರ್ ಜೊತೆ ರವಿಚಂದ್ರನ್ ಸೋದರ ಬಾಲಾಜಿ ಕೂಡಾ ಸಿನಿಮಾ ನೋಡಿದರು. ಈಶ್ವರಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಿವರಾಜ್‍ಕುಮಾರ್, ಇದೇ ವೇಳೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಬಗ್ಗೆಯೂ ಮಾತನಾಡಿದ್ದಾರೆ.

    ವಿಷ್ಣುವರ್ಧನ್ ಸ್ಮಾರಕ ಆಗಬೇಕು. ಆಗುತ್ತೆ. ಈ ಕುರಿತು ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ ಎಂದಿದ್ದಾರೆ.

    ಇದೆಲ್ಲದರ ಮಧ್ಯೆ ಸಿನಿಮಾವನ್ನು ಹೊರರಾಜ್ಯಗಳಲ್ಲೂ ರಿಲೀಸ್ ಮಾಡೋಕೆ ವಿತರಕರು ಮುಂದಾಗಿದ್ದಾರೆ. ಕೆಲವೇ ದಿನಗಳಲ್ಲಿ ಅಲಹಾಬಾದ್, ಹೈದರಾಬಾದ್‍ಗಳಲ್ಲೂ ನಾಗರಹಾವು ಭುಸುಗುಟ್ಟಲಿದೆ.

  • ನಾಗರಹಾವುಗೆ 50 ವರ್ಷದ ಸಂಭ್ರಮ

    ನಾಗರಹಾವುಗೆ 50 ವರ್ಷದ ಸಂಭ್ರಮ

    ಕೆಂಡದಂತ ಕೋಪ ತುಂಬಿಕೊಂಡಿದ್ದ ಹುಡುಗ.. ಚಿತ್ರದುರ್ಗದ ಕೋಟೆಯ ಮೇಲೆ.. ಹಾವಿನ ದ್ವೇಷ ಹನ್ನೆರಡು ವರುಷ.. ನನ್ನ ರೋಷ ನೂರು ವರುಷ.. ಎಂದು ಹಾಡುತ್ತಾ ಬಂದು ಸೃಷ್ಟಿಸಿದ ರೋಮಾಂಚನಕ್ಕೆ ಈಗ 50 ವರ್ಷ. 1972ರ ಡಿಸೆಂಬರ್ 29ರಂದು ನಾಗರಹಾವು ತೆರೆ ಕಂಡಿತ್ತು. ವೀರಸ್ವಾಮಿ ನಿರ್ಮಾಣದ ಚಿತ್ರಕ್ಕೆ ಪುಟ್ಟಣ್ಣ ಕಣಗಾಲ್ ನಿರ್ದೇಶನವಿತ್ತು. ವಿಷ್ಣುವರ್ಧನ್ ಹೀರೋ ಆಗಿ ಎಂಟ್ರಿ ಕೊಟ್ಟ ಚಿತ್ರವದು. ಅಂಬರೀಷ್ ಕೂಡಾ ಚಿತ್ರರಂಗ ಪ್ರವೇಶಿಸಿದ್ದು ಈ ಚಿತ್ರದಿಂದಲೇ. ರಾಮಾಚಾರಿ, ಅಲಮೇಲು, ಮಾರ್ಗರೇಟ್, ಜಲೀಲ, ಚಾಮಯ್ಯ ಮೇಷ್ಟು.. ಎಂಬ ಆಗಿನ ಪಾತ್ರಗಳು ಇವತ್ತಿಗೂ ಚಿತ್ರರಸಿಕರ ಎದೆಯಲ್ಲಿ ಜೀವಂತವಾಗಿವೆ. ತ.ರಾ.ಸು. ಅವರ ನಾಗರಹಾವು, ಒಂದು ಗಂಡು ಎರಡು ಹೆಣ್ಣು ಹಾಗೂ ಸರ್ಪ ಮತ್ಸರ ಎಂಬ ಮೂರು ಕಾದಂಬರಿಗಳ ಕಥೆಗಳ ಆಧಾರದಲ್ಲಿ ಪುಟ್ಟಣ್ಣ ಕಣಗಾಲ್ ರೂಪಿಸಿದ್ದ ಸಿನಿಮಾ ನಾಗರಹಾವು.

    ವೀರಸ್ವಾಮಿಯವರ ನಿರ್ಮಾಣದಲ್ಲಿ ಅದ್ಧೂರಿಯಾಗಿ ತೆರೆ ಕಂಡಿದ್ದ ನಾಗರಹಾವು ಚಿತ್ರದಲ್ಲಿದ್ದ ಬಹುತೇಕರು ಈಗ ನಮ್ಮೊಂದಿಗಿಲ್ಲ. ಬಹುಶಃ ಆರತಿ, ಲೀಲಾವತಿ ಬಿಟ್ಟರೆ ಉಳಿದವರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ನಾಗರಹಾವು ಸೃಷ್ಟಿಸಿದ್ದ ಸಂಚಲನ ಮಾತ್ರ ಇವತ್ತಿಗೂ ಇದೆ. ನಾಗರಹಾವು ಚಿತ್ರದ ಮೂಲಕ ಕನ್ನಡಕ್ಕೊಬ್ಬ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ವಿಷ್ಣುವರ್ಧನ್ ಪರಿಚಿತನಾಗಿದ್ದರು. ಮೊದಲ ಚಿತ್ರದಲ್ಲೇ ಆ ಮಟ್ಟದ ಸಕ್ಸಸ್ ಕಂಡ ಇನ್ನೊಬ್ಬ ನಟ ಇಲ್ಲ. ಚಿತ್ರದ ನಾಯಕ, ನಾಯಕಿ ಬಿಡಿ, ಒಂದು ಹಾಡಿನ ಮೂಲಕ ಓಬವ್ವಳಾಗಿ ಜಯಂತಿ ಅಮರರಾಗಿದ್ದು ಇದೇ ಚಿತ್ರದ ಮೂಲಕ.

    ನಾಗರಹಾವು ಎಷ್ಟು ದೊಡ್ಡ ಹಿಟ್ ಎಂದರೆ ಅದು ಹಲವು ಭಾಷೆಗಳಿಗೆ ರೀಮೇಕ್ ಆಯಿತು. ಹಿಂದಿಯಲ್ಲಿ ಜೆಹ್ರಿಲಾ ಇನ್ಸಾನ್ ಆಯ್ತು. ರಿಷಿ ಕಪೂರ್ ಹೀರೋ. ತಮಿಳಿನಲ್ಲಿ ರಾಜ ನಾಗಂ ಹಾಗೂ ತೆಲುಗಿನಲ್ಲಿ ಕೊಡೆ ನಾಗು ಹೆಸರಿನಲ್ಲಿ ರೀಮೇಕ್ ಆಯಿತು. ಆದರೆ ಕನ್ನಡದಲ್ಲಿ ಆದ ಮ್ಯಾಜಿಕ್ ಎಲ್ಲಿಯೂ ಆಗಲಿಲ್ಲ.

    ಮೊದಲ ಚಿತ್ರದಲ್ಲೇ ವಿಷ್ಣುವರ್ಧನ್ ಫಿಲ್ಮ್‍ಫೇರ್ ಹಾಗೂ ರಾಜ್ಯ ಪ್ರಶಸ್ತಿ ಎರಡನ್ನೂ ಗೆದ್ದರು. ಆರತಿ, ಅಶ್ವತ್ಥ್, ಲೀಲಾವತಿ, ತ.ರಾ.ಸು. ಪುಟ್ಟಣ್ಣ ಕಣಗಾಲ್.. ರಾಜ್ಯ ಪ್ರಶಸ್ತಿ ವಿಜೇತರಾದರು. ನಾಗರಹಾವು ಕೊರೊನಾಗೆ ಮೊದಲು ಕಲರ್ ವರ್ಷನ್‍ನಲ್ಲಿ ಹೊಸ ಸೌಂಡಿಂಗ್‍ನಲ್ಲಿ ರೀ ರಿಲೀಸ್ ಆಗಿತ್ತು. ಆಗಲೂ ಕೂಡಾ ಸಕ್ಸಸ್ ಕಂಡಿತ್ತು.

  • ನಿಷ್ಕರ್ಷ ನೋಡಲು ಕಾಯುತ್ತಿದ್ದಾರೆ ಶಿವಣ್ಣ

    shivarajkumar eagerly waiting for nishkarsha

    25 ವರ್ಷಗಳ ನಂತರ ತೆರೆಗೆ ಬರುತ್ತಿರುವ ಕನ್ನಡದ ಸೂಪರ್ ಹಿಟ್ ಚಿತ್ರ ನಿಷ್ಕರ್ಷ. ಸುನಿಲ್ ಕುಮಾರ್ ದೇಸಾಯಿ ಮಾಸ್ಟರ್ ಪೀಸ್. ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ.ಪಾಟೀಲ್ ಅಭಿನಯಿಸಿದ್ದ ಚಿತ್ರವನ್ನು ಮತ್ತೆ ರಿಲೀಸ್ ಮಾಡುತ್ತಿದ್ದಾರೆ ನಿರ್ಮಾಪಕ ಬಿ.ಸಿ.ಪಾಟೀಲ್. ಅದೂ ಹೊಸ ತಂತ್ರಜ್ಞಾನದಲ್ಲಿ.

    ವಿಷ್ಣು ಅಭಿಮಾನಿಗಳಂತೆಯೇ ಶಿವರಾಜ್‍ಕುಮಾರ್ ಕೂಡಾ ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ. `ನಾನು ಆ ಚಿತ್ರವನ್ನು ನಾಲ್ಕೈದು ಬಾರಿ ನೋಡಿದ್ದೇನೆ. ಪ್ರತಿಬಾರಿಯೂ ಥ್ರಿಲ್ ಕೊಟ್ಟಿದೆ. ಈಗಲೂ ಅಷ್ಟೆ, ಆ ಚಿತ್ರ ಹೊಸ ತಂತ್ರಜ್ಞಾನದಲ್ಲಿ ಬರುತ್ತಿದೆ. ಮತ್ತೊಮ್ಮೆ ನೋಡಲು ಕಾಯುತ್ತಿದ್ದೇನೆ' ಎಂದಿದ್ದಾರೆ ಶಿವಣ್ಣ.

  • ನಿಷ್ಕರ್ಷ ಸಿನಿಮಾ ಮಿಸ್ ಮಾಡದೇ ನೋಡಿ - ಅಪ್ಪು ಮನವಿ

    puneeth promores nishkarsha

    ನಿಷ್ಕರ್ಷ ಸಿನಿಮಾ 26 ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ವಿಷ್ಣುವರ್ಧನ್ ಅಭಿನಯದ ಈ ಕ್ಲಾಸಿಕ್ ಸಿನಿಮಾ ವಿಷ್ಣು ಹುಟ್ಟುಹಬ್ಬದ ಸ್ಪೆಷಲ್ ಆಗಿ ಇದೇ ಶುಕ್ರವಾರ ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ. 1993ರಲ್ಲಿ 100 ದಿನ ಓಡಿದ್ದ ಚಿತ್ರವಿದು.

    ವಿಷ್ಣು ಸರ್ ಅಭಿನಯದ ಸೂಪರ್ ಸಿನಿಮಾಗಳಲ್ಲಿ ಇದೂ ಒಂದು. ನಾನಂತೂ ಈ ಚಿತ್ರದ ಅಭಿಮಾನಿ. ಆಗಿನ ಕಾಲಕ್ಕೇ ಹಾಲಿವುಡ್ ಶೈಲಿಯ ಸಿನಿಮಾ ಕೊಟ್ಟಿದ್ದರು ಸುನಿಲ್ ಕುಮಾರ್ ದೇಸಾಯಿ. ನಾನಂತೂ ಈ ಚಿತ್ರವನ್ನು ಹಲವು ಬಾರಿ ನೋಡಿದ್ದೇನೆ. ಈಗ ನಿರ್ಮಾಪಕ ಬಿ.ಸಿ.ಪಾಟೀಲ್, ಚಿತ್ರವನ್ನು ಹೊಸ ಟೆಕ್ನಾಲಜಿಯಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಆಗ ನೋಡಿದ್ದವರೂ ಈಗ ಮತ್ತೆ ನೋಡಬೇಕು. ಖಂಡಿತಾ ಅದ್ಭುತ ಅನುಭವ ನಿಮ್ಮದಾಗಲಿದೆ ಎಂದಿದ್ದಾರೆ ಪುನೀತ್ ರಾಜ್ಕುಮಾರ್.

    ವಿಷ್ಣುವರ್ಧನ್ ಜೊತೆಗೆ ಅನಂತ್ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್ಕರ್ ನಟಿಸಿದ್ದ ಚಿತ್ರವನ್ನು ಆಗಿನ ಕಾಲಕ್ಕೆ 60 ಲಕ್ಷ ಬಜೆಟ್ಟಿನಲ್ಲಿ ನಿರ್ಮಿಸಲಾಗಿತ್ತು. ಈಗ ಅದೇ ಚಿತ್ರವನ್ನು 1 ಕೋಟಿ ಖರ್ಚು ಮಾಡಿ ರಿಲೀಸ್ ಮಾಡುತ್ತಿದ್ದಾರೆ ಬಿ.ಸಿ.ಪಾಟೀಲ್.

  • ನಿಷ್ಕರ್ಷಕ್ಕೆ ವಿಷ್ಣು ಪಡೆದಿದ್ದ ಸಂಭಾವನೆ ಎಷ್ಟು..?

    what was vishnuvardhan's remunaration for nishkarsha

    ಇದೇ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಹುಟ್ಟುಹಬ್ಬ. ವಿಷ್ಣು ಚಿತ್ರಜೀವನದಲ್ಲಿ ಹಲವು ಮೈಲುಗಲ್ಲು ಚಿತ್ರಗಳಿವೆ. ಅವುಗಳಲ್ಲಿ ನಿಷ್ಕರ್ಷ ಚಿತ್ರವೂ ಒಂದು. ಕನ್ನಡದ ಅದ್ಭುತ ಥ್ರಿಲ್ಲರ್ ಸಿನಿಮಾ. ಅವರ ಹುಟ್ಟುಹಬ್ಬಕ್ಕಾಗಿಯೇ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ವಿಷ್ಣುವರ್ಧನ್ ಪಡೆದಿದ್ದ ಸಂಭಾವನೆ ಎಷ್ಟು..?

    ಆಗ ವಿಷ್ಣುವರ್ಧನ್ ಅವರಿಗೆ 7.5 ಲಕ್ಷ ಸಂಭಾವನೆಗೆ ಮಾತನಾಡಿದ್ದೆವು. ಅನಂತ್ ನಾಗ್ ಅವರಿಗೆ 2 ಲಕ್ಷ ರೂ. ಸಂಭಾವನೆ. ಆದರೆ ಚಿತ್ರ ಸಾಗುತ್ತಾ ಹೋದಂತೆ ನಾವು ಪಡುತ್ತಿದ್ದ ಕಷ್ಟಗಳನ್ನು ನೋಡಿ ವಿಷ್ಣುವರ್ಧನ್ ಸಂಭಾವನೆಯಲ್ಲಿ 1 ಲಕ್ಷ ರೂ. ಬಿಟ್ಟಿದ್ದರು. 6.5 ಲಕ್ಷ ರೂ. ಸಂಭಾವನೆ ಪಡೆದರು.

    ನಿಷ್ಕರ್ಷ ಚಿತ್ರ ಗೆದ್ದಿದ್ದು ನೋಡಿ ಅವರಿಗೆ ಖುಷಿಯಾಗಿತ್ತು. ಸಂಘರ್ಷದಲ್ಲಿ ಕಳೆದುಕೊಂಡಿದ್ದನ್ನು ದೇಸಾಯಿ ಮತ್ತು ವಿಷ್ಣುವರ್ಧನ್ ನಿಷ್ಕರ್ಷದಲ್ಲಿ ಪಡೆದಿದ್ದರು.

  • ಪಡ್ಡೆಹುಲಿ ಕಥೆಗೂ ಸಾಹಸ ಸಿಂಹನಿಗೂ ಇದೆ ನಂಟು

    relationship between paddehuli and vishnuvardhan

    ನಿರ್ಮಾಪಕ ಕೆ.ಮಂಜು, ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾಗಿದ್ದವರು. ಅವರ ಕೊನೆಯ ದಿನಗಳಲ್ಲಿ ವಿಷ್ಣು ಜೊತೆಗಿದ್ದ ಆತ್ಮೀಯರಲ್ಲಿ ಮಂಜು ಕೂಡಾ ಒಬ್ಬರು. ಈಗ ಅವರ ಮಗ ಶ್ರೇಯಸ್ ಹೀರೋ ಆಗಿ ಬರುತ್ತಿದ್ದಾರೆ. ಪಡ್ಡೆಹುಲಿ ಚಿತ್ರದಲ್ಲಿ ಶ್ರೇಯಸ್, ವಿಷ್ಣು ಅಭಿಮಾನಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. 

    ಮಗನ ಮೊದಲ ಚಿತ್ರದಲ್ಲಿ ಶ್ರೇಯಸ್‍ಗೆ ನಾಗರಹಾವು ವಿಷ್ಣು ಗೆಟಪ್‍ನಲ್ಲಿ ಚಿತ್ರದುರ್ಗದ ಕೋಟೆಯಲ್ಲೇ ಹಾಡು ಸೃಷ್ಟಿಸಿದ್ದಾರೆ. ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ, ಮ್ಯೂಸಿಕಲ್ ಲವ್ ಸ್ಟೋರಿ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ವಿಷ್ಣುವರ್ಧನ್ ಅವರಿಗೂ ಈ ಚಿತ್ರದ ಕಥೆಗೂ ಒಂದು ಭಾವನಾತ್ಮಕ ನಂಟು ಇದೆ.

    ವಿಷ್ಣುವರ್ಧನ್ ಅವರೇ ಒಮ್ಮೆ ಮಂಜು ಅವರಿಗೆ ಕಾಲೇಜ್ ಬೇಸ್ ಇರುವ ಲವ್ ಸ್ಟೋರಿಯ ಎಳೆಯನ್ನು ಹೇಳಿದ್ದರಂತೆ. ಅದು ಮಂಜು ಅವರಿಗೂ ಇಷ್ಟವಾಗಿತ್ತು. ಅದನ್ನು ಡೆವಲಪ್ ಮಾಡು, ಒಳ್ಳೆ ಸಿನಿಮಾ ಆಗುತ್ತೆ ಎಂದು ಕೂಡಾ ಹೇಳಿದ್ದರಂತೆ.

    ತಮ್ಮ ಮಗನನ್ನು ಗ್ರ್ಯಾಂಡ್ ಆಗಿ ಎಂಟ್ರಿ ಕೊಡಿಸಲು ಕಥೆಯ ಹುಡುಕಾಟದಲ್ಲಿದ್ದಾಗ ನೆನಪಾಗಿದ್ದು ಈ ಕಥೆ. ಅದು ವಿಷ್ಣು ಆಶೀರ್ವಾದ ಎಂದೇ ನಂಬಿಕೊಂಡು ಸಿನಿಮಾ ರೆಡಿ ಮಾಡಿದ್ದಾರೆ.

    ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ರವಿಚಂದ್ರನ್, ಸುಧಾರಾಣಿ, ರಕ್ಷಿತ್ ಶೆಟ್ಟಿ, ಪುನೀತ್ ರಾಜ್‍ಕುಮಾರ್ ಕೂಡಾ ನಟಿಸಿದ್ದಾರೆ. ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ನಾಯಕಿ. 

  • ಪಡ್ಡೆಹುಲಿಯ ವಿಷ್ಣು ಪ್ರೇಮ

    paddehli vishnu rap song

    ಪಡ್ಡೆಹುಲಿ. ವಿಷ್ಣುವರ್ಧನ್ ಅವರನ್ನು ಗುರು ಎಂದೇ ಸ್ವೀಕರಿಸಿರುವ ಕೆ.ಮಂಜು ಅವರ ಮಗ ಶ್ರೇಯಸ್ ಅಬಿನಯದ ಮೊದಲ ಸಿನಿಮಾ. ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರತಂಡ, ವಿಷ್ಣು ಹುಟ್ಟುಹಬ್ಬಕ್ಕೆ ವಿಶೇಷ ರ್ಯಾಪ್ ಸಾಂಗ್ ರಿಲೀಸ್ ಮಾಡುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಚಾಮುಂಡಿ ತಾಯಿ ಮಡಿಲಲ್ಲಿ ಹುಟ್ಟಿ, ದುರ್ಗದ ಕೋಟೆಯಲ್ಲಿ ಬೆಳಕು ಕಂಡ ವಿಷ್ಣು ಚಿತ್ರಣವಿದೆ.

    ಸಿನಿಮಾದಲ್ಲಿ ಹೀರೋ ವಿಷ್ಣುವರ್ಧನ್ ಅಭಿಮಾನಿ. ನಾಯಕ ಗುರಿ ಮುಟ್ಟುವುದಕ್ಕೆ ನಾಗರಹಾವು ಸಿನಿಮಾ ಸ್ಫೂರ್ತಿಯಾಗುತ್ತೆ. ಚಿತ್ರದ ಕಥೆ ಶುರುವಾಗುವುದೇ ಚಿತ್ರದುರ್ಗದ ಕೋಟೆಯಿಂದ ಎಂದು ಕಥೆಯ ಒಂದಿಷ್ಟು ಎಳೆ ಬಿಟ್ಟುಕೊಟ್ಟಿದ್ದಾರೆ ಗುರು ದೇಶಪಾಂಡೆ.

    ನನಗೆ ವಿಷ್ಣು ಸರ್ ಗುರುಗಳು. ನನ್ನ ಬದುಕಿನ ಬಹುದೊಡ್ಡ ತಿರುವು, ಯಶಸ್ಸಿಗೆ ವಿಷ್ಣು ಸರ್ ಕಾರಣ. ಹೀಗಾಗಿ ನನ್ನ ಮಗನ ಮೊದಲ ಸಿನಿಮಾ ವಿಷ್ಣು ಸರ್ ಆಶೀರ್ವಾದ ಬೇಕು. ಅವರಿಗೆ ನಮನ ಸಲ್ಲಿಸಲಿಕ್ಕೆಂದೇ ಪಡ್ಡೆಹುಲಿ ಚಿತ್ರ ತಂಡದಿಂದ ಈ ರ್ಯಾಪ್ ಸಾಂಗ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಕೆ.ಮಂಜು.

  • ಪೋಷಕ ಪಾತ್ರಕ್ಕೆ ಕೋಟಿ ಪಡೆಯುವ ಪ್ರಕಾಶ್ ರೈ, ನಿಷ್ಕರ್ಷಕ್ಕೆ ಪಡೆದಿದ್ದ ಸಂಭಾವನೆ ಎಷ್ಟು..?

    what was prakash rai's remunaration for nishkarsha

    ಈಗ ಥಿಯೇಟರಿನಲ್ಲಿರುವ ವಿಷ್ಣು ಅಭಿನಯದ ಕ್ಲಾಸಿಕ್ ಸಿನಿಮಾ ನಿಷ್ಕರ್ಷ. 1993ರಲ್ಲಿ ಬಂದಿದ್ದ ಹಾಲಿವುಡ್ ಸ್ಟೈಲ್ ಸಿನಿಮಾ. ಆ ಸಿನಿಮಾ ಬಂದಾಗ ವಿಷ್ಣುವರ್ಧನ್ ಕನ್ನಡದ ಬಹುಬೇಡಿಕೆಯ ನಟ. ಆದರೆ, ಆ ಚಿತ್ರಕ್ಕೆ ವಿಷ್ಣು ಪಡೆದಿದ್ದ ಸಂಭಾವನೆ ಎಷ್ಟು ಗೊತ್ತೆ..? 6 ಲಕ್ಷ ರೂ. ಅದರಲ್ಲಿಯೂ 1 ಲಕ್ಷ ರೂ.ಗಳನ್ನು ನಿರ್ಮಾಪಕರಿಗೆ ಸಹಾಯಕವಾಗಲಿ ಎಂದು ವಾಪಸ್ ಕೊಟ್ಟಿದ್ದರಂತೆ ವಿಷ್ಣು.

    ಅದಕ್ಕಿಂತಲೂ ಅಚ್ಚರಿಯ ವಿಷಯ ಇನ್ನೊಂದಿದೆ. ನಿಷ್ಕರ್ಷ ಚಿತ್ರದಲ್ಲಿ ಪ್ರಕಾಶ್ ರೈ ಕೂಡಾ ನಟಿಸಿದ್ದಾರೆ. ನಿಮಗೆ ಗೊತ್ತಿದೆ, ಪ್ರಕಾಶ್ ರೈ ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಪೋಷಕ ನಟ. ಕನ್ನಡದಲ್ಲಷ್ಟೇ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿಯೂ ನಟಿಸುವ ಪ್ರಕಾಶ್ ರೈ ಪುಟ್ಟ ಪುಟ್ಟ ಪಾತ್ರಕ್ಕೆ ಕೋಟಿ ಕೋಟಿ ಸಂಭಾವನೆ ಕೊಡುವವರಿದ್ದಾರೆ.

    ಆದರೆ ಬಿ.ಸಿ.ಪಾಟೀಲ್ ನಿರ್ಮಾಣದ ಆ ಚಿತ್ರಕ್ಕೆ ಪ್ರಕಾಶ್ ರೈ ಸಂಭಾವನೆ ಎಷ್ಟು ಗೊತ್ತೇ..? 5000 ರೂ. ಯೆಸ್, ದೇಸಾಯಿ ನಿರ್ದೇಶನದ ನಿಷ್ಕರ್ಷ ಚಿತ್ರದಲ್ಲಿ ಪ್ರಕಾಶ್ ರೈ 5000 ರೂ. ಸಂಭಾವನೆ ಪಡೆದು ನಟಿಸಿದ್ದರು. ಚಿತ್ರದಲ್ಲಿ ಪ್ರಕಾಶ್ ರೈ ಅವರದ್ದು ಸುರೇಶ್ ಎಂಬ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್‍ನ ಕಮಾಂಡೋ ಪಾತ್ರ.

  • ಮದಕರಿಯಲ್ಲಿ ವಿಷ್ಣುವರ್ಧನ್ ಹುಡುಕಾಡಿದ ಎಸ್‍ವಿಆರ್ ಬಾಬು

    rajendra singh babu in rajasthan

    ಅದೇ ಹೋಟೆಲ್.. 30 ವರ್ಷಗಳ ಹಿಂದೆ ಉಳಿದುಕೊಂಡಿದ್ದ ಹೋಟೆಲ್. ಆ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದಾಗ ಅವರ ಜೊತೆಯಿದ್ದವರು ವಿಷ್ಣುವರ್ಧನ್ ಮತ್ತು ಸುಹಾಸಿನಿ. ಅದು ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದಾದ ಮುತ್ತಿನ ಹಾರ ಚಿತ್ರದ ಶೂಟಿಂಗ್‍ಗಾಗಿ. ಅದೆಲ್ಲವನ್ನೂ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಬರೋಬ್ಬರಿ 30 ವರ್ಷಗಳ ನಂತರ. ಅದಕ್ಕೆ ಕಾರಣ ರಾಜವೀರ ಮದಕರಿ ನಾಯಕ.

    ರಾಜವೀರ ಮದಕರಿ ನಾಯಕ ಚಿತ್ರದ ಶೂಟಿಂಗ್ ಶುರುವಾಗಿದೆ. ಕೇರಳದಲ್ಲಿ ಕೆಲವು ದಿನ ಶೂಟಿಂಗ್ ಮಾಡಿ ಬ್ರೇಕ್ ತೆಗೆದುಕೊಂಡಿದೆ. ಈಗ ಅರಮನೆ, ಕೋಟೆ ಕೊತ್ತಲಗಳ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕುತ್ತಿದ್ದಾರೆ ಸಿಂಗ್ ಬಾಬು.

    ದರ್ಶನ್ ಮದಕರಿಯಾಯಗಿ, ಸುಮಲತಾ ರಾಜಮಾತೆಯಾಗಿ ನಟಿಸುತ್ತಿರುವ ದುರ್ಗದ ಇತಿಹಾಸದ ಕಥೆ ರಾಜವೀರ ಮದಕರಿ ನಾಯಕನದ್ದು. ಬಿ.ಎಲ್.ವೇಣು ಕಥೆ, ಸಂಭಾಷಣೆ ಬರೆದಿರುವ ಚಿತ್ರಕ್ಕೆ ಹಂಸಲೇಖ ಸಂಗೀತವಿದೆ. ಚಿತ್ರಕ್ಕೆ ಬೆನ್ನೆಲುಬಾಗಿರುವುದು ರಾಕ್‍ಲೈನ್ ವೆಂಕಟೇಶ್.

  • ರಾಮಾಚಾರಿ, ಜಲೀಲ ಒಂದೇ ಚಿತ್ರದಲ್ಲಿ..!

    vishnu and ambi unite in rajasimha

    ವಿಷ್ಣುವರ್ಧನ್ ಮತ್ತು ಅಂಬರೀಷ್ ಚಿತ್ರರಂಗಕ್ಕೆ ಒಟ್ಟಿಗೇ ಬಂದವರು. ಅಂಬರೀಷ್ ಖಳನ ಪಾತ್ರಗಳಿಂದ ಆರಂಭಿಸಿ ರೆಬಲ್‍ಸ್ಟಾರ್ ಆದರೆ, ವಿಷ್ಣುವರ್ಧನ್ ಸಾಹಸ ಸಿಂಹನಾಗಿ ಮೆರೆದರು. ವಿಶೇಷವೆಂದರೆ ಪರಸ್ಪರ ಸ್ಪರ್ಧಿಗಳಾಗಿದ್ದರೂ ಅಂಬರೀಷ್ ಮತ್ತು ವಿಷ್ಣು ಜೀವದ ಗೆಳೆಯರು. ಅದು ಗುಟ್ಟಾಗಿಯೇನೂ ಇರಲಿಲ್ಲ. ಪರಸ್ಪರರ ಏಳಿಗೆಗೆ ನೆರವಾಗುತ್ತಿದ್ದ, ಸಂಕಟಗಳಲ್ಲಿ ಜೊತೆಯಾಗುತ್ತಿದ್ದ ಇಬ್ಬರೂ ಅದೆಷ್ಟೋ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. 

    ಅದರಲ್ಲಿಯೂ ದಿಗ್ಗಜರು ಚಿತ್ರದಲ್ಲಿ ವಿಷ್ಣು ಮತ್ತು ಅಂಬಿಯನ್ನು ನೋಡಿದವರು, ಅವರನ್ನು ಪಾತ್ರಗಳಾಗಿ ನೋಡಿರಲೇ ಇಲ್ಲ ಎನ್ನುವುದರಲ್ಲೇ ಕುಚಿಕು ಗೆಳೆಯರ ಶ್ರೇಯಸ್ಸಿದೆ. ಈಗ ಅವರಿಬ್ಬರೂ ಒಟ್ಟಿಗೇ, ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. 

    ಹೇಗೆ ಅಂತಾ ಗೊಂದಲ ಬೇಡ. ರಾಜಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್‍ನಲ್ಲಿ ಮರುಸೃಷ್ಟಿ ಮಾಡಲಾಗಿದೆ. ಅದೇ ಚಿತ್ರದಲ್ಲಿ ಅಂಬರೀಷ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿಷ್ಣು ಪತ್ನಿಯಾಗಿ ನಟಿಸಿರುವುದು ಭಾರತಿ. ವಿಷ್ಣು, ಸಿಂಹಾದ್ರಿಯ ಸಿಂಹನ ನರಸಿಂಹ ಗೌಡನಾಗಿ ಬರಲಿದ್ದಾರೆ. ಕುಚ್ಚಿಕು ಗೆಳೆಯರ ಪುನರ್‍ಮಿಲನವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳೂ ಕಾಯುತ್ತಿದ್ದಾರೆ. 

  • ವಲ್ಮೀಕ ಹೆಸರಿನ ಹಿಂದಿದೆ ವಿಷ್ಣು ಪ್ರಥಮ ಚಿತ್ರದ ನೆನಪು..!

    ವಲ್ಮೀಕ ಹೆಸರಿನ ಹಿಂದಿದೆ ವಿಷ್ಣು ಪ್ರಥಮ ಚಿತ್ರದ ನೆನಪು..!

    ವಲ್ಮೀಕ. ಇದರ ಅರ್ಥ ಹಾವಿನ ಹುತ್ತ. ವಾಲ್ಮೀಕಿಗೆ ವಾಲ್ಮೀಕಿ ಎಂಬ ಹೆಸರು ಬಂದಿದ್ದೇ ವಲ್ಮೀಕ ಅಂದರೆ ಹಾವಿನ ಹುತ್ತದಲ್ಲಿ ಕುಳಿತು ತಪಸ್ಸು ಮಾಡಿದ್ದರಿಂದ. ಆದರೆ ನಮ್ಮ ವಿಷ್ಣುವರ್ಧನ್ ಅವರ ಕನಸಿನ ಮನೆ ವಲ್ಮೀಕಕ್ಕೆ ಈ ಆರ್ಥ ಬಂದಿರುವ ಕಾರಣವೇ ಬೇರೆ. ವಿಷ್ಣುವರ್ಧನ್ ಅವರ ಮೊದಲ ಸಿನಿಮಾ. ನಾಗರಹಾವಿನ ಮನೆ ಹಾವಿನ ಹುತ್ತ ಅರ್ಥಾತ್ ವಲ್ಮೀಕ. ಹೀಗಾಗಿ ವಿಷ್ಣುವರ್ಧನ್ ಅವರ ಕನಸಿನ ಮನೆಗೆ ವಲ್ಮೀಕ ಎಂದೇ ಹೆಸರಿಟ್ಟಿದ್ದಾರೆ ಭಾರತಿ ವಿಷ್ಣುವರ್ಧನ್.

    ನಾಗರಹಾವು ಚಿತ್ರದ ಯಶಸ್ಸಿನ ನಂತರ ಇಲ್ಲೆ ಇದ್ದ ವಿಷ್ಣುವರ್ಧನ್ ಹಳೆಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದರು. 1976 ರಲ್ಲಿ  ಜಾಗ ಖರೀದಿ ಮಾಡಿದ್ದ ಜಾಗ ಇದು. ವಿಷ್ಣುವರ್ಧನ್ ಇಷ್ಟ ಪಟ್ಟ ಜಾಗ ಎಂದು ಮಾಲೀಕರು ಬಿಟ್ಟುಕೊಟ್ಟಿದ್ದ ಜಾಗವಿದು. ಅದೇ ಜಾಗದಲ್ಲೀಗ 6 ಬೆಡ್ ರೂಂನ  ಮನೆ ಕಟ್ಟಲಾಗಿದೆ.

     ಮನೆ ಮುಂಭಾಗದಲ್ಲೊಂದು ಕೃಷ್ಣನ ವಿಗ್ರಹವಿದೆ. ಅದೂ ಕೂಡಾ ವಿಷ್ಣು ಅವರೇ ಇಷ್ಟ ಪಟ್ಟು ಸ್ಥಾಪಿಸಿದ್ದ ವಿಗ್ರಹ. ಅದಕ್ಕೊಂದು ಕಲ್ಲು ಮಂಟಪ ಕಟ್ಟಿಸಲಾಗಿದೆ.

    ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರಡಿಯಲ್ಲಿ ಭವ್ಯವಾಗಿ ಈ ಮನೆ ನಿರ್ಮಾಣ ಮಾಡಲಾಗಿದೆ. ‘ವಲ್ಮೀಕ’ ಹೆಸರಿನಲ್ಲಿ ಗೇಟ್  ಮೇಲೆ ಸಿಂಹದ ಮುಖದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಸುಮಲತಾ ಅಂಬರೀಷ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

  • ವಿಲನ್ ಪಾತ್ರಕ್ಕೆ ಡಿಮ್ಯಾಂಡ್ ಇಟ್ಟು ನಿರ್ಮಾಪಕರಾಗಿದ್ದ ಬಿ.ಸಿ.ಪಾಟೀಲ್

    what was bc patils condition to suni kumar desai

    ನಿಷ್ಕರ್ಷ ಚಿತ್ರ 90ರ ದಶಕದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ರೆಗ್ಯುಲರ್ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡಿ, ಸಿದ್ಧಸೂತ್ರಗಳನ್ನೆಲ್ಲ ಆಚೆಯಿಟ್ಟು ನಿರ್ಮಿಸಿದ್ದ ಸಿನಿಮಾ. ಎಷ್ಟರಮಟ್ಟಿಗೆಂದರೆ ವಿಷ್ಣುವರ್ಧನ್, ಅನಂತ್ ನಾಗ್ ಇದ್ದರೂ.. ಈ ಚಿತ್ರ ಕನ್ನಡಕ್ಕಲ್ಲ ಎಂದು ವಿತರಕರು ಚಿತ್ರವನ್ನು ತೆಗೆದುಕೊಳ್ಳಲು ಹೆದರಿದ್ದರು. ಇಷ್ಟೆಲ್ಲ ಆಗಿ ಸಿನಿಮಾವನ್ನು ರಿಲೀಸ್ ಮಾಡಿ ಗೆದ್ದಿದ್ದರು ಬಿ.ಸಿ.ಪಾಟೀಲ್.

    ವಿಶೇಷವೇನು ಗೊತ್ತೇ.. ಚಿತ್ರದ ನಿರ್ಮಾಪಕ ಬಿ.ಸಿ.ಪಾಟೀಲ್ ನಿರ್ದೇಶಕ ದೇಸಾಯಿ ಅವರ ಎದುರು ಒಂದು ಕಂಡಿಷನ್ ಇಟ್ಟಿದ್ದರಂತೆ. ನನ್ನನ್ನು ವಿಲನ್ ಮಾಡುವುದಾದರೆ ನಾನು ಸಿನಿಮಾ ನಿರ್ಮಾಪಕನಾಗುತ್ತೇನೆ ಎಂದಿದ್ದರಂತೆ. ಅರೆ.. ದುಡ್ಡು ಹಾಕುವ, ನೋಡಲು ಚೆನ್ನಾಗಿಯೂ ಇರುವ ಬಿ.ಸಿ.ಪಾಟೀಲ್, ಹೀರೋ ಪಾತ್ರಕ್ಕೆ ಡಿಮ್ಯಾಂಡ್ ಇಡಬಹುದಾಗಿತ್ತಲ್ಲ ಎನ್ನುತ್ತೀರಾ..? ಅಲ್ಲಿಯೇ ಇರೋದು ಸ್ವಾರಸ್ಯ.

    ``ದೇಸಾಯಿ ನಿರ್ದೇಶನದ ಉತ್ಕರ್ಷದಲ್ಲಿ ಅಂಬರೀಷ್ ಹೀರೋ. ಆದರೆ ಮಿಂಚಿದ್ದು ದೇವರಾಜ್. ತರ್ಕ ಚಿತ್ರದಲ್ಲಿ ಶಂಕರ್ ನಾಗ್ ಹೀರೋ. ಆದರೆ ಮಿಂಚಿದ್ದು ದೇವರಾಜ್. ಹೀಗಾಗಿ ದೇಸಾಯಿ ಚಿತ್ರದಲ್ಲಿ ವಿಲನ್ ಆದರೆ ಮಿಂಚಬಹುದು ಎಂದುಕೊಂಡು ವಿಲನ್ ಪಾತ್ರಕ್ಕೆ ಷರತ್ತು ಹಾಕಿದ್ದೆ' ಎನ್ನುತ್ತಾರೆ ಬಿ.ಸಿ.ಪಾಟೀಲ್.

    ವಿಷ್ಣು, ಅನಂತ್ ಅವರಂತಹ ಸೀನಿಯರ್ ನಟರ ಎದುರು ಹೊಸಬನನ್ನು ವಿಲನ್ ಮಾಡುವುದು ಹೇಗೆ ಎಂಬ ಹಿಂಜರಿಕೆಯಲ್ಲೇ ಪಾತ್ರ ಕೊಟ್ಟಿದ್ದರಂತೆ ದೇಸಾಯಿ. ಆದರೆ ಸಿನಿಮಾ ನೋಡುವಾಗ ಜನರು ಬಿ.ಸಿ.ಪಾಟೀಲರಿಗೆ ಬೈಯ್ಯುವುದನ್ನು ನೋಡಿ ಗೆದ್ದುಬಿಟ್ರಿ ನೀವು ಎಂದು ಬೆನ್ನು ತಟ್ಟಿದ್ದರಂತೆ ದೇಸಾಯಿ.