` rajinikanth - chitraloka.com | Kannada Movie News, Reviews | Image

rajinikanth

  • ಬೆಂಗಳೂರಿನಲ್ಲಿ ಕಂಡಕ್ಟರ್ ಶಿವಾಜಿ ರಾವ್ ಗಾಯಕ್`ವಾಡ್ : ಬಂದು ಹೋಗಿದ್ದರ ಹಿಂದಿನ ಕಥೆ

    ಬೆಂಗಳೂರಿನಲ್ಲಿ ಕಂಡಕ್ಟರ್ ಶಿವಾಜಿ ರಾವ್ ಗಾಯಕ್`ವಾಡ್ : ಬಂದು ಹೋಗಿದ್ದರ ಹಿಂದಿನ ಕಥೆ

    ರಜನಿಕಾಂತ್ ಬೆಂಗಳೂರಿನಲ್ಲಿಯೇ ಬಸ್ ಕಂಡಕ್ಟರ್ ಆಗಿದ್ದದ್ದು ಎಲ್ಲರಿಗೂ ಗೊತ್ತು. ಜಯನಗರದಲ್ಲಿರೋ ಬಸ್ ಡಿಪೋ ನಂ.4ರಲ್ಲಿ ಕೆಲಸ ಮಾಡುತ್ತಿದ್ದ ರಜನಿಕಾಂತ್, ತಾವು ಯಾವ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದರೋ.. ಅದೇ ಬಸ್`ನ್ನು ಹುಡುಕಿಹೊರಟರು. ಅದೇ ಬಸ್ಸಿನ ಎದುರು ನಿಂತು ಫೋಟೋ ತೆಗೆಸಿಕೊಳ್ಳೋದು ಅವರ ಉದ್ದೇಶವಾಗಿತ್ತು. ಹಾಗೆ ಹೊರಟ ರಜನಿಕಾಂತ್ ಇನ್ನೋವಾ ಕಾರಿನಲ್ಲಿ ಬಂದಿಳಿದರು.

    ರಜನಿಯವರನ್ನು ಆಕಸ್ಮಿಕವಾಗಿ ನೋಡಿದ ಅಲ್ಲಿದ್ದ ಸಿಬ್ಬಂದಿ ಒಂದು ಕ್ಷಣ ಅವಾಕ್ಕಾಗಿದ್ದಾರೆ. ನಿಜವಾಗಿಯೂ ಇದು ರಜನಿಕಾಂತ್ ಅವರಾ ಅಥವಾ ಅವರಂತೆಯೇ ಇರುವ ಬೇರೊಬ್ಬ ವ್ಯಕ್ತಿಯಾ ಅಂತ ಒಂದು ಕ್ಷಣ ಬೆರಗಾಗಿದ್ದಾರೆ. ಅಲ್ಲಿದ್ದ ಕೆಲವರಿಗೆ ಮಾಧ್ಯಮಗಳಲ್ಲಿ ರಾವ್ ಬಹದ್ದೂರ್ ಅವರನ್ನು ನೋಡಿ ಪರಿಚಯ ಇದ್ದಿದ್ದರಿಂದಾಗಿ, ಕೂಡಲೇ ಬಂದಿದ್ದವರು ರಜನಿಯವರೇ ಅಂತ ಖಾತ್ರಿಪಡಿಸಿಕೊಂಡು ನೇರವಾಗಿ ಹೋಗಿ ರಜನಿಯವರನ್ನು ಮಾತನಾಡಿಸಿದ್ದಾರೆ. ಕ್ರಮೇಣ ಎಲ್ಲರೂ ಬಂದು ರಜನಿಯವರನ್ನು ಮಾತನಾಡಿಸಿದ್ದಾರೆ. ಲ್ಲರ ಜೊತೆಗೆ ಕನ್ನಡದಲ್ಲೇ ಮಾತನಾಡಿದ ರಜನಿಯವರನ್ನು ನೋಡಿ ಪುಳಕಿತಗೊಂಡ ಅನೇಕ ಸಿಬ್ಬಂದಿಯು ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಸುಮಾರು 15 ನಿಮಿಷಗಳವರೆಗೆ ಡಿಪೋದಲ್ಲಿದ್ದ ರಜನಿಯವರು ಎಲ್ಲರೊಂದಿಗೆ ಮಾತನಾಡುತ್ತಾ, ಸುಮಾರು 200 ಜನರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಲ್ಲಿಂದ ಹೊರಟಿದ್ದಾರೆ.

    ಅಲ್ಲಿಂದ ನೇರವಾಗಿ ಚಾಮರಾಜಪೇಟೆಯ ರಾಯರ ಮಠಕ್ಕೆ ಹೋದ ಅವರು, ಅಲ್ಲಿ ರಾಯರಿಗೆ ಪೂಜೆ ನೆರವೇರಿಸಿದರು. ಆನಂತರ, ಮಂತ್ರಾಕ್ಷತೆ ಹಾಗೂ ಪ್ರಸಾದವನ್ನು ಸ್ವೀಕರಿಸಿ  ಆಶೀರ್ವಾದ ಪಡೆದು ಹೊರಟಿದ್ದಾರೆ. ಕಂಡಕ್ಟರ್ ಆಗುವುದಕ್ಕೆ ಮುಂಚಿನ ದಿನಗಳಿಂದಲೂ ಅಲ್ಲಿನ ರಾಯರ ಮಠಕ್ಕೆ ಹೋಗುತ್ತಿದ್ದರಂತೆ ರಜನಿಕಾಂತ್. ಇದೆಲ್ಲವನ್ನೂ ಪ್ಲಾನ್ ಮಾಡಿಕೊಂಡೇ ಬಂದಿದ್ದರಾ ಎಂದರೆ.. ಹಾಗೇನಿಲ್ಲ.

    ಬೆಂಗಳೂರಿಗೆ ಬರುವ ಐಡಿಯಾ ಅವನಿಗೆ ಇರಲಿಲ್ಲ. ದೇವನಹಳ್ಳಿಯಲ್ಲಿ ಯಾವುದೋ ಒಂದು ಫಂಕ್ಷನ್ ಇತ್ತು. ಅದನ್ನ ನಿನ್ನೆ ಸಂಜೆ ಅಟೆಂಡ್ ಮಾಡಿ, ಬೆಳಗ್ಗೆ ನನಗೆ ಫೋನ್ ಮಾಡಿದ. ಬೆಳಗ್ಗೆ 10 ಗಂಟೆಗೆ ಬಂದ.  ರಾಯರ ಮಠಕ್ಕೆ ಹೋದ್ವಿ. ಬಸ್ ಡಿಪೋಗೆ ಹೋದ್ವಿ. ಬಳಿಕ ನನ್ನನ್ನ ಡ್ರಾಪ್ ಮಾಡಿ ಚೆನ್ನೈಗೆ ತೆರಳಲು ಏರ್ಪೋರ್ಟ್ ಕಡೆಗೆ ಹೋದ ಎಂದಿದ್ದಾರೆ ರಜನಿಕಾಂತ್ ಆತ್ಮೀಯ ಗೆಳೆಯ ರಾಜ್ ಬಹದ್ದೂರ್.

    ಹಳೇ ಫ್ರೆಂಡ್ಸ್ ಸಿಗುತ್ತಿರುತ್ತಾರೆ, ಎಲ್ಲರೂ ನಿನ್ನ ಬಗ್ಗೆ ಕೇಳುತ್ತಿರುತ್ತಾರೆ, ನಿನ್ನನ್ನ ಭೇಟಿ ಮಾಡಬೇಕು ಅಂತ ತುಂಬಾ ಆಸೆ ಪಡ್ತಾರೆ, ಒಮ್ಮೆ ಮೀಟ್ ಮಾಡು ಅಂತ ಹೇಳಿದೆ. ಸರಿ ಮುಂದಿನ ಬಾರಿ ಮೀಟ್ ಮಾಡುತ್ತೇನೆ ಅಂತ ಹೇಳಿದ್ದಾನೆ ಎಂದಿದ್ದಾರೆ ಬಹದ್ದೂರ್. ಆದರೆ ರಜನಿಕಾಂತ್ ಬೆಂಗಳೂರಿಗೆ ಬಂದಾಗ ವಿದ್ಯಾರ್ಥಿ ಭವನಕ್ಕೆ ಹೋಗಿ ದೋಸೆ ತಿಂತಾರೆ. ಚಾಮರಾಜಪೇಟೆಯ ಸರ್ಕಾರಿ ಸ್ಕೂಲಿಗೆ ಭೇಟಿ ಕೊಡ್ತಾರೆ ಅಂತೆಲ್ಲ ಸುದ್ದಿಯಾಗಿತ್ತು. ಆದರೆ ಹಾಗೇನಾಗಲಿಲ್ಲ. ಅದನ್ನು ರಜನಿಕಾಂತ್ ಕ್ಯಾನ್ಸಲ್ ಮಾಡಿದರೋ.. ಅಥವಾ ಪ್ಲಾನ್ ಇರಲಿಲ್ಲವೋ ಗೊತ್ತಾಗಲಿಲ್ಲ.

  • ಮಂಗಳೂರಿನಲ್ಲಿ ಸೆಂಚುರಿ ಸ್ಟಾರ್..ಸೂಪರ್ ಸ್ಟಾರ್..

    ಮಂಗಳೂರಿನಲ್ಲಿ ಸೆಂಚುರಿ ಸ್ಟಾರ್..ಸೂಪರ್ ಸ್ಟಾರ್..

    ಕನ್ನಡದ ಸೆಂಚುರಿ ಸ್ಟಾರ್ ಮತ್ತು ದ.ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇಬ್ಬರೂ ಒಟ್ಟಿಗೇ ಜೈಲರ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವಂಥದ್ದೇ. ಆ ಮೂಲಕ ತಮಿಳಿಗೆ ಎಂಟ್ರಿ ಕೊಡುತ್ತಿರುವ ಶಿವಣ್ಣ, ರಜನಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಜೈಲರ್ ಚಿತ್ರದ ಕೆಲವು ದೃಶ್ಯಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ರಜನಿ ತಮ್ಮ ಚಿತ್ರಗಳಲ್ಲಿ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಮೈಸೂರಿನ ಒಂದಾದರೂ ದೃಶ್ಯ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿಯೇ ಈಗಾಗಲೇ ಮೈಸೂರಿನ ಚಿತ್ರೀಕರಣ ಮುಗಿಸಿದ್ದು, ಇದೀಗ ಮಂಗಳೂರಿನಲ್ಲಿ ಜೈಲರ್ ತಂಡ ಬೀಡುಬಿಟ್ಟಿದೆ.

    ರಜನಿಕಾಂತ್ ನಟನೆಯ ಜೈಲು ಸಿನಿಮಾದ ಶೂಟಿಂಗ್ ಗಾಗಿ ಅವರು ಮಂಗಳೂರಿಗೆ ಬಂದಿದ್ದು, ಜೊತೆಗೆ ಮಂಗಳೂರಿನ ಹಲವು ದೇವಸ್ಥಾನಗಳಿಗೂ ಅವರು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಮಂಗಳೂರಿಗೆ ಸಿನಿಮಾ ಚಿತ್ರೀಕರಣ ನಡೆಯಲಿದೆ. ಈ ಶೂಟಿಂಗ್ ಮಧ್ಯೆಯೂ ಅವರು ಮಂಗಳೂರಿನ ಪ್ರಮುಖ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಚಿತ್ರತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಜೈಲರ್ ಚಿತ್ರದಲ್ಲಿ ಶಿವಣ್ಣ ಮತ್ತು ರಜನಿಕಾಂತ್ ಪಾತ್ರವೇನು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲವಾದರೂ, ಗಾಂಧಿನಗರದ ಮೂಲಗಳು ಶಿವಣ್ಣ ವಿಲನ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೇ ಮೊದಲ ಬಾರಿ ಇಬ್ಬರೂ ಒಟ್ಟಿಗೇ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ರಜನಿಗೆ ತಮನ್ನಾ ಹೀರೋಯಿನ್. ಬೀಸ್ಟ್ ಚಿತ್ರ ಮಾಡಿದ್ದ ದಿಲೀಪ್ ಡೈರೆಕ್ಷನ್ ಇದೆ.

    ಅಷ್ಟೇ ಅಲ್ಲ, 1981ರಲ್ಲಿ ರಜನಿಕಾಂತ್ ಗರ್ಜನೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಕನ್ನಡದ ಸಿನಿಮಾಗಳಲ್ಲಿ ರಜನಿ ನಟಿಸಿಯೇ ಇಲ್ಲ. ಇದೀಗ ಹೊಂಬಾಳೆಯವರ ಜೊತೆ ರಜನಿಕಾಂತ್ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ರಜನಿಕಾಂತ್ ರಾಜ್ಯಕ್ಕೆ ಬಂದಿರುವ ಸಮಯದಲ್ಲಿಯೇ ಈ ಮಾತುಕತೆಯೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  • ಮತ್ತೆ ರಜನಿಕಾಂತ್-ಕಮಲ್ ಹಾಸನ್ ಒಂದೇ ಚಿತ್ರದಲ್ಲಿ..!?

    ಮತ್ತೆ ರಜನಿಕಾಂತ್-ಕಮಲ್ ಹಾಸನ್ ಒಂದೇ ಚಿತ್ರದಲ್ಲಿ..!?

    ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಲಿಸ್ಟಿನಲ್ಲಿ ಯಾರು ನಂ.1 ಎಂದರೆ ಕಟ್ಟಾ ಅಭಿಮಾನಿಗಳೂ ರಜನಿಕಾಂತ್ ಅವರಾ.. ಕಮಲ್ ಹಾಸನ್ ಅವರಾ ಎಂದು ಕನ್`ಫ್ಯೂಸ್ ಆಗ್ತಾರೆ. ವಿಶೇಷವೆಂದರೆ ಈ ಇಬ್ಬರೂ ಗೆಳೆಯರು. ಜೀವಕ್ಕೆ ಜೀವ ಕೊಡುವ ಗೆಳೆಯರು. ಒಂದು ಕಾಲದಲ್ಲಿ ರಜನಿಕಾಂತ್ ಅವರಿಗೆ ಅವಕಾಶ ಇಲ್ಲದಿದ್ದಾಗ ಸಹಾಯ ಮಾಡಿದ್ದವರು ಕಮಲ್ ಹಾಸನ್. ಕಮಲ್ ಹಾಸನ್ ರಾಜಕೀಯ ವಿರೋಧಿಗಳ ಆಟಕ್ಕೆ ಗುರಿಯಾಗುತ್ತಿದ್ದಾಗ ರಜನಿಕಾಂತ್ ಅವರ ಒಂದು ಹೇಳಿಕೆ, ವಿರೋಧಿಗಳು ಬಾಲಮುದುರಿಕೊಳ್ಳೋ ಹಾಗೆ ಮಾಡಿತ್ತು. ವೇದಿಕೆಗಳಲ್ಲಿ ರಜನಿಯನ್ನು ಕಮಲ್, ಕಮಲ್ ಅವರನ್ನು ರಜನಿ ಹೊಗಳೋದು ಕಾಮನ್. ಆದರೆ.. ಇವರಿಬ್ಬರೂ ಒಟ್ಟಿಗೇ ನಟಿಸುವ ಆಸೆ ಹಾಗೆಯೇ ಉಳಿದುಕೊಂಡಿದೆ.

    ಒಂದು ಕಾಲದಲ್ಲಿ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದವರು ಎನ್ನುವುದನ್ನೂ ಮರೆಯುವಂತಿಲ್ಲ. ಇದೀಗ ರಜನಿ-ಕಮಲ್ ಇಬ್ಬರೂ ಮತ್ತೊಮ್ಮೆ ಒಟ್ಟಿಗೇ ನಟಿಸುವ ಕಾಲ ಕೂಡಿ ಬಂದಂತೆ ಕಾಣ್ತಿದೆ. ಆದರೆ.. ಒಂದು ಸಣ್ಣ ಟ್ವಿಸ್ಟ್ ಇದೆ. ರಜನಿ ನಟಿಸ್ತಾರೆ. ಕಮಲ್ ನಟಿಸಲ್ಲ. ಹೀಗೇಕೆ ಎನ್ನಬೇಡಿ. ಇರೋದೇ ಹಾಗೆ.

    ಈ ಬಗ್ಗೆ ಕಮಲ್ ಹಾಸನ್ ಅವರೇ ರಜನಿಯ ಒಂದು ಸಿನಿಮಾ ನಿರ್ಮಾಣ ಮಾಡಬೇಕಿದೆ. ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದಾರೆ. ಡೈರೆಕ್ಟರ್ ಯಾರು? ಕಥೆ ಎಂಥದ್ದು ಎಲ್ಲವನ್ನ ಸೈಡಿಗಿಡಿ, ಪಕ್ಕಾ ಎಂದು ಹೇಳಿಬಿಡಿ ಸಾಕು ಎನ್ನುತಿದ್ದಾರೆ ಫ್ಯಾನ್ಸ್.

    ಸದ್ಯಕ್ಕೆ ರಜನಿಕಾಂತ್ ಜೈಲರ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಆ ಜೈಲರ್ ಚಿತ್ರದಲ್ಲಿ ಶಿವಣ್ಣ ಕೂಡಾ ಇದ್ದಾರೆ ಅನ್ನೋದು ಸ್ಪೆಷಲ್. ಈ ನಡುವೆಯೇ ಈ ಸಿನಿಮಾ ಸೆನ್ಸೇಷನ್ ಸೃಷ್ಟಿಯಾಗಿದೆ.

  • ಯೋಗಿಯ ಕಾಲಿಗೆ ರಜನಿಕಾಂತ್ ನಮಸ್ಕಾರ : ಸೋಷಿಯಲ್ ಮೀಡಿಯಾದಲ್ಲಿ ಟೀಕೆ..ಸಮರ್ಥನೆಗಳ ಸುರಿಮಳೆ

    ಯೋಗಿಯ ಕಾಲಿಗೆ ರಜನಿಕಾಂತ್ ನಮಸ್ಕಾರ : ಸೋಷಿಯಲ್ ಮೀಡಿಯಾದಲ್ಲಿ ಟೀಕೆ..ಸಮರ್ಥನೆಗಳ ಸುರಿಮಳೆ

    ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್, ಆಶ್ರಮ ವಾಸ ಮುಗಿಸಿ ವಾಪಸ್ ಆಗುತ್ತಿದ್ದಾರೆ. ಹಾಗೆ ವಾಪಸ್ ಆಗುವಾಗ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಜನಿಕಾಂತ್ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ನಮಸ್ಕಾರ ಮಾಡಿರುವುದು ಹಾಗೂ ಯೋಗಿ ಆಶೀರ್ವಾದ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಪ್ರತಿಟೀಕೆ ಸಮರ್ಥನೆಗಳ ಸುರಿಮಳೆಯಾಗುವಂತೆ ಮಾಡಿದೆ.

    ರಜನಿಕಾಂತ್ ಅವರ ವಯಸ್ಸು 72.  ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ 51 ವರ್ಷ ವಯಸ್ಸು. ವಯಸ್ಸಿನಲ್ಲಿ ಹಿರಿಯರಾಗಿರುವ ರಜನಿಕಾಂತ್, ಯೋಗಿಯ ಕಾಲಿಗೆ ನಮಸ್ಕರಿಸಿದ್ದು ಸರಿಯಲ್ಲ. ಅವರಿಗೆ ಆಶೀರ್ವಾದವನ್ನೂ ಮಾಡುವ ಯೋಗಿ ಅವರದ್ದು ಅಹಂಕಾರದ ವರ್ತನೆ ಎನ್ನುವುದು ಯೋಗಿಯನ್ನು ಟೀಕಿಸುವವರ ವಾದ.

    ಇದನ್ನು ಸಮರ್ಥನೆ ಮಾಡಿಕೊಳ್ಳುವವರ ವಾದವೇನೆಂದರೆ ಯೋಗಿ ಕೇವಲ ರಾಜಕಾರಣಿಯಲ್ಲ. ಸನ್ಯಾಸಿ. ನಾಥ ಸಂಪ್ರದಾಯದಲ್ಲಿ ಗುರು. ಗೋರಖ್‍ನಾಥ ದೇವಸ್ಥಾನದ ಅರ್ಚನೆ ಮಾಡುವ ಯೋಗಿ ಆದಿತ್ಯನಾಥ್ ಅವರು ಮಹಂತ ಪದವಿ ಸ್ವೀಕರಿಸಿದ್ದವರು. ಗೋರಖನಾಥ್ ಮಠದ ಪೀಠಾಧ್ಯಕ್ಷರು. ಅವರಿಗೆ ರಜನಿಕಾಂತ್ ಅವರು ನಮಸ್ಕಾರ ಮಾಡುವುದು ಸಹಜ. ಅದರಲ್ಲಿ ತಪ್ಪೇನಿದೆ. ಸನ್ಯಾಸಿಯಾದ ವ್ಯಕ್ತಿಗೆ ಹೆತ್ತ ತಾಯಿಯೊಬ್ಬರನ್ನು ಮಿಕ್ಕವರೆಲ್ಲ ನಮಸ್ಕಾರ ಮಾಡುತ್ತಾರೆ. ತಂದೆಯೂ ಸನ್ಯಾಸಿಯಾದವರಿಗೆ ನಮಸ್ಕಾರ ಮಾಡಬೇಕು. ಹಿಂದೂ ಧರ್ಮದ ಪದ್ಧತಿ, ಸಂಪ್ರದಾಯಗಳ ಬಗ್ಗೆ ಗೊತ್ತಿಲ್ಲದೆ ಮಾತನಾಡಬೇಡಿ ಎನ್ನುವುದು ಯೋಗಿ ಸಮರ್ಥಕರ ವಾದ.

    ಇದರ ಮಧ್ಯೆ ಜೈಲರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಸಂಚಲನ ಮೂಡಿಸುತ್ತಿದ್ದು, 500 ಕೋಟಿ ಕ್ಲಬ್ ಸೇರಿದೆ.

  • ರಜನಿ 2.0 ಚಿತ್ರಕ್ಕೆ ಶಿವಣ್ಣ, ಉಪ್ಪಿ ಶುಭ ಹಾರೈಕೆ

    shivarajkumar and upendra wish rajinikanth for 2.0

    sಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಅಭಿನಯದ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನವಿದೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಶುಭ ಹಾರೈಸಿದ್ದು ವಿಶೇಷವಾಗಿತ್ತು.

    ನಿದೇಶಕ ಶಂಕರ್, ಉಪೇಂದ್ರ ಅವರ ಎ ಚಿತ್ರದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿಕೊಂಡರೆ, ಶಿವಣ್ಣ ರಜನಿ ಚಿತ್ರಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿಕೊಂಡರು.

  • ರಜನಿ ಚಿತ್ರದಲ್ಲಿ ಶಿವಣ್ಣ : ಈಗ ಅಧಿಕೃತ

    ಜನಿ ಚಿತ್ರದಲ್ಲಿ ಶಿವಣ್ಣ : ಈಗ ಅಧಿಕೃತ

    ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರಂತೆ ಎನ್ನುವ ಸುದ್ದಿ ಹಳೆಯದೇನಲ್ಲ. ಆದರೆ ಸೆಂಚುರಿ ಸ್ಟಾರ್ ಇದಕ್ಕೆ ಯೆಸ್ ಅಥವಾ ನೋ.. ಎಂದು ಹೇಳದೆ ಕುತೂಹಲ ಉಳಿಸಿದ್ದರು. ನಿರ್ದೇಶಕ ನೆಲ್ಸನ್ ಮತ್ತು ಅವರ ತಂಡ ಶಿವಣ್ಣ ಅವರನ್ನು ಭೇಟಿ ಮಾಡಿ ಒನ್ ಲೈನ್ ಸ್ಟೋರಿ ಹೇಳಿದೆ.

    ರಜನಿ ಸರ್ ಜೊತೆಗೆ ನಟಿಸುವ ಅವಕಾಶ ಸಿಗುವುದೇ ಅದೃಷ್ಟ ಮತ್ತು ಅಪರೂಪ. ಸಂತೋಷದಿಂದ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದೇನೆ. ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಶೀಘ್ರದಲ್ಲೇ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ ಶಿವಣ್ಣ.

    ಇದೇ ವೇಳೆ ರಜನಿ ಸರ್ ಮತ್ತು ನಮ್ಮ ಕುಟುಂಬದ ಬಾಂಧವ್ಯ ತುಂಬಾ ಹಳೆಯದು. ನನ್ನನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದಾರೆ. ಅವರೊಂದಿಗೆ ನನಗೆ, ನಮ್ಮ ಕುಟುಂಬಕ್ಕೆ ವಿಶೇಷ ಬಾಂಧವ್ಯ ಇದೆ. ಚಿತ್ರ ಬಹುಶಃ ಆಗಸ್ಟ್‍ನಲ್ಲಿ ಸೆಟ್ಟೇರಲಿದ್ದು, ನನ್ನ ಪಾತ್ರದ ಶೂಟಿಂಗ್ ಸೆಪ್ಟೆಂಬರ್‍ನಲ್ಲಿ ನಡೆಯಬಹುದು. ಮೈಸೂರು ಅಥವಾ ಬೆಂಗಳೂರಿನಲ್ಲಿ ಚಿತ್ರೀಕರಣವಾಗಹುದು ಎಂದಿದ್ದಾರೆ ಶಿವಣ್ಣ.

  • ರಜನಿ ಜೊತೆಸಿನಿಮಾ ಸಸ್ಪೆನ್ಸ್ :  ಶಿವಣ್ಣ ರಿಯಾಕ್ಷನ್ ಇಷ್ಟೆ..

    ರಜನಿ ಜೊತೆಸಿನಿಮಾ ಸಸ್ಪೆನ್ಸ್ :  ಶಿವಣ್ಣ ರಿಯಾಕ್ಷನ್ ಇಷ್ಟೆ..

    ತಮಿಳುನಾಡು ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಶಿವಣ್ಣ ಸಿನಿಮಾ ಮಾಡ್ತಾರೆ ಅನ್ನೋ ನಿರೀಕ್ಷೆ ಇದೆ. ರಜನಿಕಾಂತ್ ಚಿತ್ರಕ್ಕೆ ಶಿವಣ್ಣ ಅನ್ನೋದು ಚಿತ್ರರಂಗದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ತಲೈವರ್ 169 ಅನ್ನೋದು ಚಿತ್ರದ ಸದ್ಯದ ಟೈಟಲ್. 169 ಅನ್ನೋದು ರಜನಿ ಚಿತ್ರಗಳ ನಂಬರ್. ಚಿತ್ರವನ್ನು ನಿರ್ದೇಶನ ಮಾಡ್ತಿರೋದು ನೆಲ್ಸನ್. ಇತ್ತೀಚೆಗೆ ರಿಲೀಸ್ ಆದ ಬೀಸ್ಟ್, ಕೊಲಮಾವು ಕೋಕಿಲ, ಡಾಕ್ಟರ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನೆಲ್ಸನ್, ಮುಂದಿನ ಚಿತ್ರದಲ್ಲಿ ರಜನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ಆ ಚಿತ್ರದಲ್ಲಿ ಶಿವಣ್ಣ ಅವರಿಗೊಂದು ಪಾತ್ರವಿದೆಯಂತೆ. ಸನ್ ಗ್ರೂಪ್`ನ ಕಲಾನಿಧಿ ಮಾರನ್ ನಿರ್ಮಾಣದ ಈ ಚಿತ್ರದಲ್ಲಿ ಶಿವಣ್ಣ ಅವರಿಗೆ ನಟಿಸೋಕೆ ಕೇಳಿಕೊಳ್ಳಲಾಗಿದೆಯಂತೆ. ಚಿತ್ರ ಆಗಸ್ಟ್‍ನಲ್ಲಿ ಸೆಟ್ಟೇರಲಿದೆ.

    ಹೌದಾ ಸರ್ ಎಂದರೆ ಶಿವಣ್ಣ ಹೇಳೋದೇ ಬೇರೆ. ಕೆಜಿಎಫ್ ಚಾಪ್ಟರ್ 2 ನೋಡೋಕೆ ಥಿಯೇಟರಿಗೆ ಬಂದಿದ್ದ ವೇಳೆ ಶಿವಣ್ಣಗೆ ಈ ಪ್ರಶ್ನೆ ಎದುರಾಯ್ತು. ಅದಕ್ಕೆ ಶಿವಣ್ಣ ಕೊಟ್ಟ ಉತ್ತರವೂ ಅಷ್ಟೆ. ಸಿಂಪಲ್. ಅದು ಸರ್‍ಪ್ರೈಸ್. ಸರ್‍ಪ್ರೈಸಾಗಿಯೇ ಇರಲಿ ಎಂದರು ಶಿವಣ್ಣ.

    ರಾಜ್ ಫ್ಯಾಮಿಲಿ ಜೊತೆಗೆ ರಜನಿಗೆ ಅತ್ಯುತ್ತಮ ಬಾಂಧವ್ಯವಿದೆ. ಹಿಗಾಗಿ ಶಿವಣ್ಣ ಒಪ್ಪಬಹುದು. ಈ ಹಿಂದೆ ತೆಲುಗಿನಲ್ಲಿ ಬಾಲಕೃಷ್ಣ ಅವರ ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ, ಶಿವಣ್ಣ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ನಟಿಸಿಲ್ಲ. ನೆಲ್ಸನ್ ಅವರು ಈ ಚಿತ್ರಕ್ಕಾಗಿ ಖುದ್ದು ಶಿವಣ್ಣ ಅವರನ್ನು ಭೇಟಿ ಮಾಡಲಿದ್ದು, ನಂತರವೇ ತೀರ್ಮಾನ ಹೊರಬೀಳಲಿದೆ. ಇತ್ತ ಶಿವಣ್ಣ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಸ್ಪೆನ್ಸ್.. ಕಂಟಿನ್ಯೂ...

  • ರಜನಿ ಬಾಬಾ ಜೊತೆ ಜೈಲರ್ ನೋಡ್ತಾರೆ ಬುಲ್ಡೋಜರ್ ಬಾಬಾ

    ರಜನಿ ಬಾಬಾ ಜೊತೆ ಜೈಲರ್ ನೋಡ್ತಾರೆ ಬುಲ್ಡೋಜರ್ ಬಾಬಾ

    ಬಾಕ್ಸಾಫೀಸ್‍ನಲ್ಲಿ ಜೈಲರ್ ತೂಫಾನ್`ನಂತೆ ಸಂಚಲನ ಸೃಷ್ಟಿಸುತ್ತಿದೆ. ನೆಲ್ಸನ್ ನಿರ್ದೇಶನ. ರಜನಿಕಾಂತ್, ರಮ್ಯಕೃಷ್ಣ, ಶಿವಣ್ಣ, ತಮನ್ನಾ ಭಾಟಿಯಾ ಅಭಿನಯದ ಜೈಲರ್ ದೂಳೆಬ್ಬಿಸುತ್ತಿದ್ದರೆ, ರಜನಿಕಾಂತ್ ಹೃಷಿಕೇಶದಲ್ಲಿ ಆಶ್ರಮ ಸೇರಿದ್ದರು. ಈ ನಡುವೆ ಜೈಲರ್ ಮೇಲೆ ಯೋಗಿ ಆದಿತ್ಯನಾಥ್ ಕಣ್ಣು ಬಿದ್ದಿದೆ. ಅವರೂ ಸಿನಿಮಾ ನೋಡೋಕೆ ಮುಂದಾಗಿದ್ದಾರಂತೆ.

    ತಮಿಳು ಸೂಪರ್ಸ್ಟಾರ್ ಮತ್ತು ಭಾರತೀಯ ಚಿತ್ರರಂಗದ ಅತಿ ಎತ್ತರದ ವ್ಯಕ್ತಿಗಳಲ್ಲಿ ಒಬ್ಬರಾದ ರಜನಿಕಾಂತ್ ಲಖನೌಗೆ ಆಗಮಿಸಿದ್ದಾರೆ. ಹಾಗೆ, ನಾನು ಬುಲ್ಡೋಜರ್ ಬಾಬಾ ಅಥವಾ ಯೋಗಿ ಅದಿತ್ಯನಾಥ್ ಅವರೊಂದಿಗೆ ಜೈಲರ್ ಚಲನಚಿತ್ರ ನೋಡುತ್ತೇನೆ ಎಂದು ಹೇಳಿದ್ದಾರೆ.

    ಚಿತ್ರದ ಎಲ್ಲ ಗೆಲುವನ್ನೂ ದೇವರಿಗೆ ಅರ್ಪಿಸಿರುವ ರಜನಿಕಾಂತ್, ಇದೆಲ್ಲವೂ ದೇವರ ಆಶೀರ್ವಾದ ಎಂದಿದ್ದಾರೆ.

  • ರಜನಿ ಶಿವಣ್ಣ ಕಥೆಗೆ ಟೈಟಲ್ ಫಿಕ್ಸ್

    ರಜನಿ ಶಿವಣ್ಣ ಕಥೆಗೆ ಟೈಟಲ್ ಫಿಕ್ಸ್

    ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಶಿವಣ್ಣ ನಟಿಸುತ್ತಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಇದು ರಜನಿಯ 169ನೇ ಸಿನಿಮಾ. ಜೈಲರ್ ಇದು ಟೈಟಲ್. ಸನ್‌ ಪಿಕ್ಚರ್ಸ್ ಚಿತ್ರದ ಫಸ್ಟ್‌ ಲುಕ್‌ ರಿಲೀಸ್ ಮಾಡಿದ್ದು, ರಕ್ತ ಸಿಕ್ತ ಕತ್ತಿಯನ್ನು ಮಾತ್ರ ತೋರಿಸಲಾಗಿದೆ. ಜೈಲರ್ ಶೀರ್ಷಿಕೆ ನೋಡಿದವರಿಗೆ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಹುಟ್ಟಿದೆ.

    ರಜನಿ ಇದರಲ್ಲಿ ಮಾಸ್ ಅವತಾರದಲ್ಲಿರುತ್ತಾರೆ ಎನ್ನುವುದು ಒಂದು ನಿರೀಕ್ಷೆ. ಕೊಲಮಾವು ಕೋಕಿಲ, ಡಾಕ್ಟರ್, ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನೆಲ್ಸನ್ ನಿರ್ದೇಶನದ ಚಿತ್ರವಿದು.

    ಬೀಸ್ಟ್ ಸಿನಿಮಾ ದೊಡ್ಡ ಹಿಟ್ ಆಗಿರಲಿಲ್ಲ. ಆದರೂ ಸನ್ ಪಿಕ್ಚರ್ಸ್ ನೆಲ್ಸನ್ ಅವರಿಗೇ ಚಿತ್ರದ ನಿರ್ದೇಶನದ ಅವಕಾಶ ನೀಡಿರುವುದು ವಿಶೇಷ.

    ತಲೈವಾ ಜೊತೆಗಿನ ಸಿನಿಮಾ ಕುರಿತಂತೆ ನೆಲ್ಸನ್ ಶಿವಣ್ಣ ಜೊತೆ ಮಾತುಕತೆ ನಡೆಸಿದ್ದರು. ಚಿತ್ರಕ್ಕೆ ಯೆಸ್ ಹೇಳಿದ್ದೇನೆ ಎಂದು ಶಿವಣ್ಣ ಕೂಡಾ ಹೇಳಿದ್ದರು. ಆದರೆ ಶಿವಣ್ಣ ಪಾತ್ರವೇನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಇದೆ. ಈ ಚಿತ್ರದ ಮೂಲಕ ಶಿವಣ್ಣ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

    ರಜನಿಕಾಂತ್ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ. ಅವರು ನನ್ನನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದಾರೆ. ಅವರೊಂದಿಗೆ ನನ್ನ ಒಡನಾಟ ಹಲವು ವರ್ಷಗಳಷ್ಟು ಹಳೆಯದು. ನಟಿಸುವುದಕ್ಕೆ ಕಾಯುತ್ತಿದ್ದೇನೆ ಎಂದಿದ್ದರು ಶಿವಣ್ಣ.

    ಆಗಸ್ಟ್‌ನಲ್ಲಿ ಚಿತ್ರೀಕರಣ ಶುರುವಾಗುತ್ತಿದ್ದು, ರಜನಿಕಾಂತ್ ಮತ್ತು ಶಿವ ರಾಜ್ ಕುಮಾರ್  ದೃಶ್ಯಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುವ ಸಾಧ್ಯತೆ ಇದೆ.ಮೈಸೂರು ರಜನಿಕಾಂತ್ ಅವರಿಗೆ ಲಕ್ಕಿ ಸ್ಪಾಟ್.

  • ರಜನಿ, ಕಮಲ್ ಚಿತ್ರಗಳಿಗೆ ಕರ್ನಾಟಕದಲ್ಲಿ ಬಹಿಷ್ಕಾರ

    sa ra govindu calls for ban on rajini, kamal movies

    ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ತಮಿಳು ಸೂಪರ್‍ಸ್ಟಾರ್ ರಜನಿಕಾಂತ್ ಹಾಗೂ ಕಮಲ್‍ಹಾಸನ್‍ರ ಚಿತ್ರಗಳಿಗೆ ಕರ್ನಾಟಕದಲ್ಲಿ ಬಹಿಷ್ಕಾರ ಹಾಕುವ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಕರೆ ಕೊಟ್ಟಿದ್ದಾರೆ. ಚಿತ್ರದ ಪ್ರದರ್ಶನದ ಹಕ್ಕುಗಳನ್ನು ಖರೀದಿ ಮಾಡದಂತೆ ವಿತರಕರಿಗೆ ಸೂಚಿಸಿದ್ದಾರೆ.

    ಅಷ್ಟೇ ಅಲ್ಲ, ರಜನಿ, ಕಮಲ್ ಚಿತ್ರಗಳನ್ನು ಪ್ರದರ್ಶನ ಮಾಡದಂತೆ ಪ್ರದರ್ಶಕರಿಗೂ ಮನವಿ ಮಾಡಿದ್ದಾರೆ. ಅಕಸ್ಮಾತ್ ಪ್ರದರ್ಶನ ಮಾಡಿದರೆ ಪ್ರತಿಭಟನೆ ನಡೆಸಿ ಚಿತ್ರಪ್ರದರ್ಶನ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

    ತಮಿಳುನಾಡು ಹೋರಾಟ ಬೆಂಬಲಿಸುವುದು ನಿಮ್ಮ ಕರ್ತವ್ಯ. ಆದರೆ, ಹಾಗೆಂದು ಕರ್ನಾಟಕವನ್ನು ಟೀಕಿಸುವುದು ಸರಿಯಲ್ಲ. ಸ್ವಾಭಿಮಾನಿ ಕನ್ನಡಿಗರು ಇದನ್ನು ಸಹಿಸುವುದಿಲ್ಲ. ನಿಮ್ಮ ರಾಜಕೀಯಕ್ಕಾಗಿ ಕಾವೇರಿಯನ್ನು ಬಳಸಿಕೊಳ್ಳಬೇಡಿ ಎಂದು ಕಮಲ್‍ಹಾಸನ್ ಹಾಗೂ ರಜನಿಕಾಂತ್ ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದಾರಾ ಸಾ.ರಾ.ಗೋವಿಂದು.

  • ರಜನಿಕಾಂತ್ 2.0 ಜೊತೆ ಕೆಜಿಎಫ್

    kgf shows in rajinikant's 2.0 movie shows

    ರಜನಿಕಾಂತ್-ಅಕ್ಷಯ್‍ಕುಮಾರ್-ಶಂಕರ್ ಕಾಂಬಿನೇಷನ್‍ನ 2.0 ಸಿನಿಮಾ, ಜಗತ್ತಿನ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಇದರ ಜೊತೆಯಲ್ಲೇ ಕೆಜಿಎಫ್ ಕೂಡಾ ಸದ್ದು ಮಾಡುತ್ತಿದೆ.

    ಡಿಸೆಂಬರ್ ಅಂತ್ಯದ ಭಾರತದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ಕೆಜಿಎಫ್ ಟ್ರೇಲರ್‍ನ್ನು ವಿದೇಶದ ಎಲ್ಲ 2.0 ಸ್ಕ್ರೀನ್‍ಗಳಲ್ಲಿ ಪ್ರದರ್ಶನ ಮಾಡಲಾಗಿದೆ. 2.0 ಕೂಡಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿರುವ ಚಿತ್ರ. ಹೀಗಾಗಿ ವಿದೇಶದಲ್ಲಿ ತೆಲುಗು ಸ್ಕ್ರೀನ್‍ನಲ್ಲಿ ತೆಲುಗು ಕೆಜಿಎಫ್, ತಮಿಳಿ 2.0ನಲ್ಲಿ ತಮಿಳು ಕೆಜಿಎಫ್, ಹಿಂದಿ 2.0ನಲ್ಲಿ ಹಿಂದಿ ಕೆಜಿಎಫ್ ಹಾಗೂ ಮಲಯಾಳಂ 2.0 ಪ್ರದರ್ಶನದಲ್ಲಿ ಮಲಯಾಳಂ ಕೆಜಿಎಫ್‍ನ ಟ್ರೇಲರ್ ಪ್ರದರ್ಶನ ಮಾಡಲಾಗಿದೆ.

  • ರಜನಿಕಾಂತ್ ಎದುರು ಗೆದ್ದ ಶಿವಣ್ಣ

    ರಜನಿಕಾಂತ್ ಎದುರು ಗೆದ್ದ ಶಿವಣ್ಣ

    ಎರಡೂವರೆ ಗಂಟೆಯ ಚಿತ್ರದಲ್ಲಿ ಇರೋದು ಕೆಲವೇ ನಿಮಿಷ. ಬರೋದು ಎರಡೋ ಮೂರೋ ಸೀನ್. ಇರೋದು ಚಿಕ್ಕ ಚಿಕ್ಕ ಡೈಲಾಗು. ಹೀರೋ ಸೂಪರ್ ಸ್ಟಾರ್ ರಜನಿಕಾಂತ್. ತಮಿಳಿನಲ್ಲಿ ಫಸ್ಟ್ ಆಕ್ಟಿಂಗ್.  ಆದರೆ ಶಿವಣ್ಣಂಗೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೈಲರ್  ಸಿನಿಮಾದಲ್ಲಿ ನರಸಿಂಹ ಅನ್ನೋ ಪಾತ್ರಕ್ಕೆ ನಟ ಶಿವರಾಜ್ಕುಮಾರ್ ಅವರು ಬಣ್ಣ ಹಚ್ಚಿದ್ದಾರೆ. ಕೆಲವೇ ಕೆಲವು ನಿಮಿಷಗಳ ಸಮಯ ತೆರೆಮೇಲೆ ಕಂಡರೂ ಶಿವಣ್ಣ ಮೂಡಿಸುವ ಇಂಪ್ಯಾಕ್ಟ್ ಭರ್ಜರಿ ಆಗಿದೆ. ಇದು ಫ್ಯಾನ್ಸ್ಗೆ ಭರ್ಜರಿ ಖುಷಿ ನೀಡಿದೆ. ಆ ಕಾರಣಕ್ಕಾಗಿಯೇ ಬೆಂಗಳೂರಿನಲ್ಲಿ 'ಜೈಲರ್'ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

    ಪ್ರಿ-ಕ್ಲೈಮ್ಯಾಕ್ಸ್ನಲ್ಲಿ ಬರುವ ಸೀನ್ನಲ್ಲಂತೂ ಅಕ್ಷರಶಃ ಶಿವಣ್ಣ ಅವರ ಮ್ಯಾರಿಸಂ, ಆಕ್ಟಿಂಗ್ ಬೇರೆ ಲೆವೆಲ್ನಲ್ಲಿ ಇದೆ. ಮುಖ್ಯವಾಗಿ ಈ ಸೀನ್ ಫ್ಯಾನ್ಸ್ಗೆ ಭಾರಿ ಇಷ್ಟವಾಗಿದೆ. ಬರೀ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು, ಕೇರಳದಲ್ಲೂ ಕೂಡ ಶಿವಣ್ಣನ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಜೈಲರ್ ರಿಲೀಸ್ ಆಗಿದ್ದರಿಂದ ಟ್ವಿಟರಿನಲ್ಲಿ ರಜನಿಕಾಂತ್ ಹೆಸರು ಸಹಜವಾಗಿಯೇ ಟ್ರೆಂಡಿಂಗ್`ನಲ್ಲಿತ್ತು. ಆದರೆ ಅದನ್ನೂ ಮೀರಿಸುವಂತೆ ಇದ್ದಕ್ಕಿದ್ದಂತೆ ಶಿವಣ್ಣ ಹೆಸರು ಟ್ರೆಂಡಿಂಗಿಗೆ ಬಂತು. ನೆಲ್ಸನ್ ನಿರ್ದೇಶನ ಮಾಡಿರುವ 'ಜೈಲರ್' ಸಿನಿಮಾದಲ್ಲಿ ಶಿವಣ್ಣ ಜೊತೆಗೆ ಮೋಹನ್ಲಾಲ್, ಜಾಕಿಶ್ರಾಫ್ ಕೂಡ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಶಿವಣ್ಣ ನಿಭಾಯಿಸಿರುವ ನರಸಿಂಹ ಪಾತ್ರ ಜಾಸ್ತಿಯೇ ಜನಪ್ರಿಯತೆಯನ್ನು ಪಡೆದುಕೊಂಡಿದೆ.

    ಸಿನಿಮಾ ನೋಡಿದ ಪ್ರೇಕ್ಷಕರು ಅದರಲ್ಲೂ ತಮಿಳು ಪ್ರೇಕ್ಷಕರು ನಾನು ಇವತ್ತಿನಿಂದ ಶಿವಣ್ಣನ ಫ್ಯಾನ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ರಜನಿ ಎದುರು ಇಷ್ಟು ಸಖತ್ತಾಗಿ ನಟಿಸಿದ್ದಾರಲ್ಲ.. ಯಾರಿವರು ಎಂದು ಹುಡುಕಾಡಿದ್ದಾರೆ. ಇಷ್ಟೆಲ್ಲ ಆಗಿ ಶಿವಣ್ಣ ಹೆಸರು ಟೈಟಲ್ ಕಾರ್ಡಿನಲ್ಲಿ ಕನ್ನಡದಲ್ಲಿಯೇ ಬರುವುದು ಇನ್ನೊಂದು ಥ್ರಿಲ್ ಕೊಟ್ಟಿದೆ.

  • ರಜನಿಕಾಂತ್ ಚಿತ್ರಕ್ಕೆ ಶಿವಣ್ಣ..!?

    ರಜನಿಕಾಂತ್ ಚಿತ್ರಕ್ಕೆ ಶಿವಣ್ಣ..!?

    ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರ ಶುರುವಾಗುತ್ತಿದೆ. ತಲೈವರ್ 169 ಅನ್ನೋದು ಚಿತ್ರದ ಸದ್ಯದ ಟೈಟಲ್. 169 ಅನ್ನೋದು ರಜನಿ ಚಿತ್ರಗಳ ನಂಬರ್. ಚಿತ್ರವನ್ನು ನಿರ್ದೇಶನ ಮಾಡ್ತಿರೋದು ನೆಲ್ಸನ್. ಇತ್ತೀಚೆಗೆ ರಿಲೀಸ್ ಆದ ಬೀಸ್ಟ್, ಕೊಲಮಾವು ಕೋಕಿಲ, ಡಾಕ್ಟರ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನೆಲ್ಸನ್, ಮುಂದಿನ ಚಿತ್ರದಲ್ಲಿ ರಜನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ಆ ಚಿತ್ರದಲ್ಲಿ ಶಿವಣ್ಣ ಅವರಿಗೊಂದು ಪಾತ್ರವಿದೆಯಂತೆ. ಸನ್ ಗ್ರೂಪ್`ನ ಕಲಾನಿಧಿ ಮಾರನ್ ನಿರ್ಮಾಣದ ಈ ಚಿತ್ರದಲ್ಲಿ ಶಿವಣ್ಣ ಅವರಿಗೆ ನಟಿಸೋಕೆ ಕೇಳಿಕೊಳ್ಳಲಾಗಿದೆಯಂತೆ. ಚಿತ್ರ ಆಗಸ್ಟ್‍ನಲ್ಲಿ ಸೆಟ್ಟೇರಲಿದೆ.

    ರಾಜ್ ಫ್ಯಾಮಿಲಿ ಜೊತೆಗೆ ರಜನಿಗೆ ಅತ್ಯುತ್ತಮ ಬಾಂಧವ್ಯವಿದೆ. ಹಿಗಾಗಿ ಶಿವಣ್ಣ ಒಪ್ಪಬಹುದು. ಈ ಹಿಂದೆ ತೆಲುಗಿನಲ್ಲಿ ಬಾಲಕೃಷ್ಣ ಅವರ ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ, ಶಿವಣ್ಣ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ನಟಿಸಿಲ್ಲ. ನೆಲ್ಸನ್ ಅವರು ಈ ಚಿತ್ರಕ್ಕಾಗಿ ಖುದ್ದು ಶಿವಣ್ಣ ಅವರನ್ನು ಭೇಟಿ ಮಾಡಲಿದ್ದು, ನಂತರವೇ ತೀರ್ಮಾನ ಹೊರಬೀಳಲಿದೆ.

  • ರಜನಿಕಾಂತ್ ಜೊತೆ ಶಬರಿಮಲೆ ಯಾತ್ರೆಯ ದಿನ ನೆನಪಿಸಿಕೊಂಡ ಶಿವಣ್ಣ

    ರಜನಿಕಾಂತ್ ಜೊತೆ ಶಬರಿಮಲೆ ಯಾತ್ರೆಯ ದಿನ ನೆನಪಿಸಿಕೊಂಡ ಶಿವಣ್ಣ

    ರಜನಿಕಾಂತ್ ಅವರು ಡಾ.ರಾಜ್ ಮನೆಯ ಸದಸ್ಯರಿದ್ದಂತೆ. ಶಿವಣ್ಣ, ಪುನೀತ್ ಅವರ ಹಲವು ಚಿತ್ರಗಳ ಗೆಲುವಿನ ಸಂಭ್ರಮದಲ್ಲಿ ಜೊತೆಯಾಗಿದ್ದಾರೆ. ಅಷ್ಟೇ ಅಲ್ಲ, ಡಾ.ರಾಜ್ ಮನೆಯ ಯಾವುದೇ ಸಮಾರಂಭವಿರಲಿ, ರಜನಿಕಾಂತ್ ತಪ್ಪುವುದಿಲ್ಲ. ಅಂತಹ ರಜನಿಕಾಂತ್ ನನಗೆ ಚಿಕ್ಕಪ್ಪನವರ ಸಮಾನ ಎಂದಿದ್ದಾರೆ ಶಿವಣ್ಣ.

    ಒಂದು ದಿನ ನನ್ನ ತಂದೆ ಶಬರಿಮಲೆಗೆ ಹೋದಾಗ ರಜನಿ ನಾನು ಸರ್ ಅವರ ಹಿಡಿದುಕೊಂಡು ಹೋಗಿದ್ದೆ. ಬಾಲ್ಯದಲ್ಲಿ ಕೈ ಹಿಡಿದು ಅಂದು ತೋರಿದ ಪ್ರೀತಿಯನ್ನು ಈಗಲೂ ತೋರಿಸುತ್ತಾರೆ. ಅವರು ನನ್ನ ಚಿಕ್ಕಪ್ಪನ ಹಾಗೆ ಎಂದು ಹೇಳಿದರೆ ತಪ್ಪಾಗದು ಎಂದಿದ್ದಾರೆ ಶಿವಣ್ಣ. ರಜನಿಕಾಂತ್ ಅವರ ಜೈಲರ್ ಚಿತ್ರ ರಿಲೀಸ್ ಆಗುತ್ತಿದ್ದು, ಆ ಚಿತ್ರದ ಈವೆಂಟ್‍ನಲ್ಲಿ ಈ ಕಥೆ ಹೇಳಿದ್ಧಾರೆ ಶಿವಣ್ಣ.

    ಇದೇ ಮೊದಲ ಬಾರಿಗೆ ರಜನಿ ಜೊತೆ ಶಿವಣ್ಣ ಆಕ್ಟ್ ಮಾಡಿದ್ದಾರೆ.   ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ನಟಿಸಿರುವುದರಿಂದ  ಕನ್ನಡಿಗರಿಗೂ ಈ ಕೂಡ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಶಿವರಾಜ್ ಕುಮಾರ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.

    ಬೀಸ್ಟ್ ಚಿತ್ರೀಕರಣದ ನಂತರ ನೆಲ್ಸನ್ ನನಗೆ ಕರೆ ಮಾಡಿದರು. ನಂತರ ನಾನು ವಿಜಯ್ ಸರ್ ಅವರನ್ನು ಭೇಟಿಯಾದೆ ಎಂದಿರುವ ಶಿವಣ್ಣ, ಚೆನ್ನೈ ಜೊತೆಗಿನ ತಮ್ಮ ನೆನಪನ್ನೂ ಹೇಳಿಕೊಂಡಿದ್ದಾರೆ. ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಚೆನ್ನೈನಲ್ಲಿ. ಆಕ್ಟಿಂಗ್ ಕೋರ್ಸ್ ಮಾಡಿದ್ದು ಇಲ್ಲೇ. ಚೆನ್ನೈ ಎಂದರೆ ಎಮೋಷನಲ್ ಸ್ಥಳ. ನನಗೆ ಚೆನ್ನೈ ತುಂಬಾ ಇಷ್ಟ' ಎಂದು ಹೇಳಿದ್ದಾರೆ.

    ಜೈಲರ್ ರಜನಿಕಾಂತ್ ನಟಿಸಿರುವ ಸಿನಿಮಾ. ರಜನಿಕಾಂತ್ ಜೊತೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳ ಸ್ಟಾರ್ ನಟರು ನಟಿಸಿದ್ದಾರೆ. ಶಿವಣ್ಣ ಅವರಷ್ಟೇ ಅಲ್ಲ,  ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್, ಮಲಯಾಳಂ ಸ್ಟಾರ್ ಮೋಹನ್ ಲಾಲ್, ರಮ್ಯಾ ಕೃಷ್ಣ, ಯೋಗಿ ಬಾಬು ಅವರೆಲ್ಲ ಇದ್ದಾರೆ. ತಮನ್ನಾ ಭಾಟಿಯಾ ಹೀರೋಯಿನ್.

  • ರಜನಿಕಾಂತ್ ಮನೆಯಲ್ಲೇ ಇದ್ದು.. ಕದ್ದು.. ಮನೆಯನ್ನೇ ಖರೀದಿಸಿದರು..!  

    ರಜನಿಕಾಂತ್ ಮನೆಯಲ್ಲೇ ಇದ್ದು.. ಕದ್ದು.. ಮನೆಯನ್ನೇ ಖರೀದಿಸಿದರು..!  

    ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರೇ ಕಳ್ಳರಾಗಿದ್ದರು. ರಜನಿಕಾಂತ್ ಮಗಳು ಐಶ್ವರ್ಯಾ ಅವರ ಒಡವೆಗಳನ್ನು ಕದ್ದಿದ್ದರು ಎಂಬ ವಿಷಯ ಗೊತ್ತಾಗಿದೆ. ಯುಗಾದಿಗೆ ಮುನ್ನ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಐಶ್ವರ್ಯಾ ಅವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಒಡವೆಗಳು ಈಚೆಗೆ ಕಳ್ಳತನವಾಗಿದ್ದವು. ಈ ಸಂಬಂಧ ತೆಯ್ನಂಪೇಟ್ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ರಜನಿಕಾಂತ್ ಅವರು ದೂರು ದಾಖಲು ಮಾಡಿದ್ದರು. ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಈಶ್ವರಿ, ಲಕ್ಷ್ಮೀ ಮತ್ತು ಡ್ರೈವರ್ ವೆಂಕಟೇಶನ್ ಮೇಲೆ ಐಶ್ವರ್ಯಾ ಅವರು ಅನುಮಾನ ವ್ಯಕ್ತಪಡಿಸಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಈಗ ಕಳ್ಳರನ್ನು ಬಂಧಿಸಿದ್ದಾರೆ. ಐಶ್ವರ್ಯಾ ಅವರ ಅನುಮಾನ ನಿಜವಾಗಿದ್ದು, ಮನೆಗೆಲಸದವರೇ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

    ಬಂಧಿತ ಕಾರು ಚಾಲಕ ವೆಂಕಟೇಶನ್ ಮತ್ತು ಮನೆಗೆಲಸದ ಮಹಿಳೆ ಈಶ್ವರಿ 100 ಸವರನ್ ಚಿನ್ನದ ಒಡವೆ, 30 ಗ್ರಾಂ ವಜ್ರದ ಒಡವೆ, ನಾಲ್ಕು ಕೆಜಿ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದರು ಎಂಬುದು ಗೊತ್ತಾಗಿದೆ. ಮನೆಗೆಲಸದ ಮಹಿಳೆ ಈಶ್ವರಿ ಒಡವೆಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಮನೆಯನ್ನು ಖರೀದಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಈಶ್ವರಿ 18 ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದಾರೆ. ಐಶ್ವರ್ಯಾ ರಜನಿಕಾಂತ್ ಮನೆಯ ಬಗ್ಗೆ ಸಂಪೂರ್ಣವಾಗಿ ಈಶ್ವರಿಗೆ ತಿಳಿದಿತ್ತು. ಐಶ್ವರ್ಯಾಗೆ ಸೇರಿದ ಲಾಕರ್ನಿಂದ ಅನೇಕ ಬಾರಿ ಈಶ್ವರಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಹೀಗೆ ಕದ್ದ ಹಣದಲ್ಲಿ ಒಂದು ಮನೆಯನ್ನೇ ಖರೀದಿ ಮಾಡಿದ್ದಾರೆ ಎಂದರೆ ಇವರು ಎಷ್ಟು ಬಾರಿ.. ಎಷ್ಟೆಷ್ಟು ಒಡವೆ ಕದ್ದಿರಬಹುದು ಎಂದು ಅಂದಾಜು ಮಾಡಬಹುದು. ಕಳುವಾದ ಒಂದಷ್ಟು ಸಾಮಗ್ರಿಗಳನ್ನು ಮತ್ತು ಮನೆ ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಈಶ್ವರಿಯಿಂದ ವಶಕ್ಕೆ ಪಡೆಯಲಾಗಿದೆ.

    2019ರಲ್ಲಿ ನಡೆದ ತಂಗಿಯ ಮದುವೆಯಲ್ಲಿ ಒಡವೆಗಳನ್ನು ಧರಿಸಿದ್ದ ಐಶ್ವರ್ಯಾ, ಆನಂತರ ಅವುಗಳನ್ನು ಲಾಕರ್ನಲ್ಲಿ ಇಟ್ಟಿದ್ದರು. 2021ರ ಆಗಸ್ಟ್ನಲ್ಲಿ ಆ ಲಾಕರ್ ಅನ್ನು ಮಾಜಿ ಪತಿ ಧನುಷ್ ಅವರ ಫ್ಲ್ಯಾಟ್ನಿಂದ ಐಶ್ವರ್ಯಾ ತೆಗೆದುಕೊಂಡು ಬಂದಿದ್ದರು. ಐಶ್ವರ್ಯಾ ಅವರು ಕಳೆದ ಫೆಬ್ರವರಿ 10ರಂದು ಲಾಕರ್ ಓಪನ್ ಮಾಡಿದಾಗ ಕೆಲವು ಒಡವೆಗಳು ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದರು. ವಜ್ರದ ಒಡವೆಯ ಸೆಟ್, ಚಿನ್ನಾಭರಣಗಳು, ನವರತ್ನಂ ಸೆಟ್ಗಳು, ಬಳೆಗಳು ಸೇರಿದಂತೆ ಸುಮಾರು 3.60 ಲಕ್ಷ ರೂ.ಮೌಲ್ಯದ ಅಭರಣಗಳು ಕಳ್ಳತನ ಆಗಿರುವುದು ಐಶ್ವರ್ಯಾ ಗಮನಕ್ಕೆ ಬಂದಿತ್ತು. ಹಲವು ವರ್ಷಗಳ ಕಾಲ ಜೊತೆಗೆ ಇದ್ದ ಮನೆಗೆಲಸವರೇ ಈ ರೀತಿ ಮಾಡಿರುವುದು ಅಚ್ಚರಿ ಉಂಟು ಮಾಡಿದೆ.

  • ರಜನಿಕಾಂತ್ ರಾಜಕೀಯಕ್ಕೆ ಬರಲ್ಲ : ಕಾರಣ ಇಲ್ಲಿದೆ

    ರಜನಿಕಾಂತ್ ರಾಜಕೀಯಕ್ಕೆ ಬರಲ್ಲ : ಕಾರಣ ಇಲ್ಲಿದೆ

    ರಜನಿಕಾಂತ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..? ಇದು ಒಂದೆರಡು ದಿನ, ತಿಂಗಳು, ವರ್ಷಗಳ ಪ್ರಶ್ನೆಯಲ್ಲ. ದಶಕಗಳ ಪ್ರಶ್ನೆ ಮತ್ತು ಕುತೂಹಲ. ಈ ಕುತೂಹಲವನ್ನು ಕಾಯ್ದುಕೊಂಡೇ ಬಂದಿದ್ದ, ಇದೇ ಡಿ.31ರಂದು ಹೊಸ ಪಕ್ಷ ಘೋಷಿಸುವುದಾಗಿ ಹೇಳಿ ಸಂಚಲನ ಸೃಷ್ಟಿಸಿದ್ದ ರಜನಿ, ಈಗ ರಾಜಕೀಯವೇ ಬೇಡ ಎಂದು ಹಿಂದೆ ಸರಿದಿದ್ದಾರೆ.

    ಹೊಸ ಚಿತ್ರದ ಚಿತ್ರೀಕರಣ ವೇಳೆ ಟೀಂನಲ್ಲಿದ್ದ ನಾಲ್ವರಿಗೆ ಕೊರೊನಾ ಬಂತು. ಹೀಗಾಗಿ ಎಲ್ಲರೂ ಟೆಸ್ಟ್‍ಗೆ ಹೋದರು. ರಜನಿಗೆ ಕೊರೊನಾ ನೆಗೆಟಿವ್ ಇತ್ತು. ಆದರೆ ಬಿಪಿ ಹೈಲೆವೆಲ್‍ನಲ್ಲಿತ್ತು. ರಜನಿ ಈಗ ಬದುಕುತ್ತಿರುವುದು ಕಸಿ ಮಾಡಿದ ಕಿಡ್ನಿಗಳಿಂದ. ಬಿಪಿ ಹೆಚ್ಚಾದರೆ ಆ ಕಿಡ್ನಿಗಳಿಗೆ ಡೇಂಜರ್. ಇದೆಲ್ಲವೂ ಗೊತ್ತಾದ ನಂತರ ರಜನಿ ಈ ನಿರ್ಧಾರ ಕೈಗೊಂಡಿದ್ದಾರೆ.

    120 ಜನರ ಮಧ್ಯೆಯೇ ಬಿಪಿ ಹೆಚ್ಚಾಗುವಂತ ಆರೋಗ್ಯ ಇರುವಾಗ, ರಾಜಕೀಯಕ್ಕೆ ಬಂದು ಲಕ್ಷಾಂತರ ಜನರ ಮಧ್ಯೆ ಓಡಾಡುವುದು ಸಾಧ್ಯವಿಲ್ಲದ ಮಾತು. ಹೀಗಾಗಿ ನಾನು ರಾಜಕೀಯಕ್ಕೆ ಬರುತ್ತಿಲ್ಲ. ಕ್ಷಮಿಸಿ ಎಂದಿದ್ದಾರೆ ರಜನಿ.

  • ರಜನಿಕಾಂತ್`ಗೆ ಹೃದಯ ಸಮಸ್ಯೆಯೇ..?

    ರಜನಿಕಾಂತ್`ಗೆ ಹೃದಯ ಸಮಸ್ಯೆಯೇ..?

    ರಜನಿಕಾಂತ್ ವಿಶೇಷ ಅನುಮತಿ ಪಡೆದು ಅಮೆರಿಕಾಕ್ಕೆ ತೆರಳಿದ್ದಾರೆ. ಅಮೆರಿಕದ ಮೆಯೋ ಕ್ಲಿನಿಕ್`ಗೆ ಹೋಗಿದ್ದಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಕೇಂದ್ರ ಸರ್ಕಾರದ ಸ್ಪೆಷಲ್ ಪರ್ಮಿಷನ್ ತೆಗೆದುಕೊಂಡು ಕುಟುಂಬದವರೊಂದಿಗೆ ಹೋಗಿದ್ದಾರೆ. ಮೆಯೋ ಕ್ಲಿನಿಕ್ ಹೃದಯ ಸಂಬಂಧಿ ಚಿಕಿತ್ಸೆಗಳಿಗೆ ಹೆಸರುವಾಸಿಯಾಗಿರುವುದೇ ರಜನಿಕಾಂತ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂಬ ಅನುಮಾನಕ್ಕೆ ಕಾರಣ.

    ಈ ಕುರಿತು ತಮಿಳು ಕಿರುತೆರೆ ಕಲಾವಿದೆ ಕಸ್ತೂರಿ ಶಂಕರ್ ಧ್ವನಿಯೆತ್ತಿದ್ದಾರೆ. ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ನಮಗೆ ಮಾಹಿತಿ ನೀಡಿ. ನಾನೇನು ರಜನಿಕಾಂತ್ ಅವರ ದ್ವೇಷಿಯಲ್ಲ. ಆದರೆ, ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ನನ್ನ ಕಳಕಳಿ ಅಷ್ಟೆ. ದಯವಿಟ್ಟು ರಜನಿ ಅಭಿಮಾನಿಗಳು ಈ ಬಗ್ಗೆ ಬೇಸರ ಮಾಡಿಕೊಳ್ಳಬಾರದು ಎಂದಿದ್ದಾರೆ ಕಸ್ತೂರಿ ಶಂಕರ್.

    ರಜನಿ ಅವರಿಗೆ ಭಾರತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದಿಲ್ಲವೇ? ಜಯಲಲಿತಾ ವಿಚಾರದಲ್ಲಿಯೂ ಹೀಗೆಯೇ ಆಯಿತು. ಅವರಿಗೆ ಏನಾಗಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲೇ ಇಲ್ಲ ಎಂದಿದ್ದಾರೆ ಕಸ್ತೂರಿ ಶಂಕರ್.

  • ರಜನಿಗೆ 51ನೇ ದಾದಾ ಸಾಹೇಬ್ : ಅಣ್ಣ ಮತ್ತು ಬಹದ್ದೂರ್‍ಗೆ ಅರ್ಪಣೆ

    ರಜನಿಗೆ 51ನೇ ದಾದಾ ಸಾಹೇಬ್ : ಅಣ್ಣ ಮತ್ತು ಬಹದ್ದೂರ್‍ಗೆ ಅರ್ಪಣೆ

    ಸೂಪರ್ ಸ್ಟಾರ್ ರಜನಿಕಾಂತ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಪಾತ್ರರಾದ ತಮಿಳು ಚಿತ್ರರಂಗದ 3ನೇ ವ್ಯಕ್ತಿ ರಜನಿಕಾಂತ್. ಒಟ್ಟಾರೆ ಈ ಪ್ರಶಸ್ತಿಗೆ ಪಾತ್ರರಾದ 51ನೇ ಕಲಾವಿದ ರಜನಿ. ಪ್ರಧಾನಿ ಮೋದಿ ಸೇರಿದಂತೆ ದೇಶದ ಕೋಟಿ ಕೋಟಿ ಅಭಿಮಾನಿಗಳು ರಜನಿಕಾಂತ್‍ಗೆ ಪ್ರಶಸ್ತಿ ಸಿಕ್ಕಿದ್ದನ್ನು ಸಂಭ್ರಮಿಸಿದ್ದಾರೆ. ಆದರೆ, ರಜನಿ ಈ ಪುರಸ್ಕಾರವನ್ನು ಅರ್ಪಿಸಿರುವುದು ಯಾರಿಗೆ ಗೊತ್ತಾ..?

    ತಮ್ಮ ಜೀವದ ಗೆಳೆಯ ರಾವ್ ಬಹದ್ದೂರ್ ಅವರಿಗೆ. ರಜನಿಕಾಂತ್ ಕಂಡಕ್ಟರ್ ಆಗಿದ್ದ ಕಥೆ ಗೊತ್ತಲ್ಲ.. ಆ ಬಸ್ಸಿಗೆ ಡ್ರೈವರ್ ಆಗಿದ್ದವರು ಇದೇ ರಾವ್ ಬಹದ್ದೂರ್. ಬೆಂಗಳೂರಿಗೆ ಬಂದರೆ ಈಗಲೂ ಮಿಸ್ ಮಾಡದೆ ಹೋಗುವ ಮನೆ ರಾವ್ ಬಹದ್ದೂರ್ ಅವರದ್ದೇ. ರಜನಿ ನಟನಾಗಲು ಸಹಾಯ, ಸಹಕಾರ ನೀಡಿದವರು.

    ಬಿಎಂಟಿಸಿ ಬಸ್ ಡ್ರೈವರ್ ರಾವ್ ಬಹದ್ದೂರ್, ಕಂಡಕ್ಟರ್ ಆಗಿದ್ದ ನನ್ನ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿದರು. ನನ್ನ ಅಣ್ಣ ಸತ್ಯನಾರಾಯಣ ರಾವ್, ನನ್ನನ್ನು ನಟನನ್ನಾಗಿ ಮಾಡಲು ಮಾಡಿದ ತ್ಯಾಗಗಳು ಒಂದೆರಡಲ್ಲ. ನನ್ನನ್ನು ಸಿನಿಮಾಗೆ ಪರಿಚಯಿಸಿದ ಗುರು ಕೆ.ಬಾಲಚಂದರ್ ಅವರಿಗೆ ಮತ್ತು ನನ್ನ ಚಿತ್ರದ ಎಲ್ಲ ನಿರ್ದೇಶಕರು, ತಂತ್ರಜ್ಞರು, ಸಹಕಲಾವಿದರು, ನಿರ್ಮಾಪಕರಿಗೆ ಈ ಪ್ರಶಸ್ತಿ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ ರಜನಿ.

  • ರಜನಿಗೆ ಓಪನ್ ಚಾಲೆಂಜ್ ಮಾಡಿ ಶಾಕ್ ಕೊಟ್ಟ ರಾಕರ್ಸ್

    rajinikanth shocked by tamil rockers

    ಎಲ್ಲ ದೇಶಗಳ, ಎಲ್ಲ ಭಾಷೆಗಳ ಚಿತ್ರಗಳಿಗೂ ಕಾಡುತ್ತಿರುವ ಅತಿದೊಡ್ಡ ಭೂತ ಪೈರಸಿ. ರಜನಿಕಾಂತ್ ಸಿನಿಮಾಗಳನ್ನೂ ಅದು ಬಿಟ್ಟಿಲ್ಲ. ಅದರಲ್ಲೂ ಈ ಬಾರಿ ಓಪನ್ ಚಾಲೆಂಜ್ ಮಾಡಿ ಗೆದ್ದಿದ್ದಾರೆ ಪೈರಸಿ ಕಿರಾತರಕು.

    ತಮಿಳ್ ರಾಕರ್ಸ್ ಎಂಬ ವೆಬ್‍ಸೈಟ್‍ನವರು ರಜನಿಕಾಂತ್‍ಗೆ ಓಪನ್ ಚಾಲೆಂಜ್ ಮಾಡಿದ್ದರು. ನೀವು ಅದ್ಯಾವುದೇ ಸೆಕ್ಯುರಿಟಿ ತೆಗೆದುಕೊಳ್ಳಿ, ಅದೆಂಥದ್ದೇ ಟೆಕ್ನಾಲಜಿ ಅಳವಡಿಸಿಕೊಳ್ಳಿ.. ನಿಮ್ಮ ಸಿನಿಮಾ ರಿಲೀಸ್ ಆದ 24 ಗಂಟೆಯೊಳಗೆ ನಾವು ಪೈರಸಿ ಬಿಡುತ್ತೇವೆ ಎಂಬ ಚಾಲೆಂಜ್ ಮಾಡಿದ್ದರು. ತಮಿಳ್ ರಾಕರ್ಸ್ ಅಟ್ಟಹಾಸವನ್ನು ಅರಿತಿದ್ದ ಚಿತ್ರತಂಡ, ತಕ್ಷಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತು. ಇಡೀ ಪ್ರಕರಣವನ್ನು ವಿವರಿಸಿತ್ತು. ಮದ್ರಾಸ್ ಹೈಕೋರ್ಟ್ ತಮಿಳ್ ರಾಕರ್ಸ್‍ನ 2000 ವೆಬ್‍ಸೈಟ್‍ಗಳೂ ಸೇರಿದಂತೆ, ಒಟ್ಟು 12,564 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಿಸಿತ್ತು. ಇದೆಲ್ಲವನ್ನೂ ದಾಟಿ ತಮಿಳ್ ರಾಕರ್ಸ್ 2.0 ಚಿತ್ರದ ಪೈರಸಿ ಬಿಟ್ಟಿದ್ದಾರೆ. ರಜನಿ ಸೋತಿದ್ದಾರೆ.

  • ರಜನಿಗೆ.. ಮಗನೇ.. ಮನೆಗ್ ಬರ್ಲಿಲ್ಲ ಅಂದ್ರೆ ಸಾಯ್ಸಿಬಿಡ್ತೀನಿ ಅಂದಿದ್ರು

    rajinikanth and ambareesh's friendship

    ರಜನಿಕಾಂತ್ ಮತ್ತು ಅಂಬರೀಷ್ ಆಪ್ತಮಿತ್ರರು. ಹೋಗೋ.. ಬಾರೋ ಫ್ರೆಂಡ್ಶಿಪ್. ಏಕವಚನದಲ್ಲಿಯೇ ಮಾತನಾಡಿಕೊಳ್ಳುತ್ತಿದ್ದವರು. ರಜನಿಯ ಕಷ್ಟದ ದಿನಗಳಲ್ಲಿ ಎಂದಿನಂತೆ ನೆರವಿನ ಹಸ್ತ ಚಾಚಿದ್ದವರು ಅಂಬಿ. ಹೆಗಲಾಗಿ ನಿಂತಿದ್ದವರು. ರಜನಿ ಕೂಡಾ ಅಷ್ಟೆ.. ಸೂಪರ್ಸ್ಟಾರ್ ಆಗಿದ್ದರೂ, ಅಂಬಿಯ ಎದುರು ಫ್ರೆಂಡ್.. ಅಷ್ಟೆ.

    ಇಂತಹ ರಜನಿಕಾಂತ್ ಬೆಂಗಳೂರಿಗೆ ಬಂದಾಗಲೆಲ್ಲ ಅಂಬಿ ಮನೆಗೆ ಬರಲೇಬೇಕಿತ್ತು.ಒಂದು ದಿನವಾದರೂ ಅವರ ಮನೆಯಲ್ಲಿ ಊಟ ಮಾಡಲೇಬೇಕಿತ್ತು. ಹೀಗಿದ್ದರೂ.. ಕಳೆದ ವರ್ಷ ರಜನಿ ಬೆಂಗಳೂರಿಗೆ ನಾಲ್ಕಾರು ಬಂದು ಹೋದರೂ ಅಂಬಿ ಮನೆಗೆ ಹೋಗೋಕೆ ಆಗಿರಲಿಲ್ಲ. ತರಾತುರಿಯಲ್ಲಿ ಬಂದು ಹೋಗಿದ್ದ ರಜನಿಗೆ ಅಂಬಿ ವಾರ್ನಿಂಗ್ ಮಾಡಿದ್ದರು.

    ಮಗನೇ.. ಈ ಸಾರಿ ಬೆಂಗಳೂರಿಗೆ ಬಂದಾಗ ಮನೆಗೆ ಬರ್ಲಿಲ್ಲ ಅಂದ್ರೆ, ಸಾಯಿಸಿಬಿಡ್ತೀನಿ ಎಂದು ಎಚ್ಚರಿಕೆ ಕೊಟ್ಟು ಸಂಸ್ಕೃತದಲ್ಲಿ ಬೈದಿದ್ದರು. ಅದೆಲ್ಲವನ್ನೂ ನೆನಪಿಸಿಕೊಂಡು ಗೆಳೆಯನ ಪಾರ್ಥಿವ ಶರೀರದ ಎದುರು ಕಣ್ಣೀರಾದರು ರಜನಿಕಾಂತ್.