` raghavendra rajkumar - chitraloka.com | Kannada Movie News, Reviews | Image

raghavendra rajkumar

  • Run Anthony To Begin From December 14th

    run anthony image

    Vinay Rajakumar's new film 'Run Anthony' being directed by newcomer Raghu Shastry is all set to be launched on the 14th of December. Earlier, director Prem was supposed to direct a film for Vinay Rajakumar. The film which was titled as 'R The King' was shelved due to various reasons. After that, Vinay and his father Raghavendra Rajakumar approved a subject by debutante Raghu Shastry which is titled as 'Run Anthony'.

    The film is being produced by Parvathamma Rajakumar along with Raghavendra Rajakumar and Guru Rajakumar. Manikanth Kadri is the music director while Manohar Joshi is the cinematographer.

    There will be two heroines in the film and the heroines are yet to be finalised.

  • Singapore PM to watch 'Ammana Mane'

    prime minister of singapore to watch ammana mane

    Raghavendra Rajakumar's comeback film 'Ammana Mane' is all set to release across Karnataka on the 08th of March. Now the latest news is, the film will be released in Singapore and Prime Minister Lee Hsien Loong will be watching the film.

    Raghavendra Rajakumar was admitted in a Singapore Hospital few years ago. Many Kannadigas who are settled in Singapore met Raghavendra Rajakumar in hospital and wished him a speedy recovery. Now the Kannadigas who are settled in Singapore has organised a special show of the film and has invited Singapore Prime Minister for the screening.

    The film is scripted and directed by Nikhil Manjoo. Atmasri and R S Kumar have produced the film under Srilalithe Chitralaya. Apart from Raghavendra Rajakumar, Nikhil Manjoo, Suchendra Prasad and others play prominent roles in the film. Sameer Kulakarni is the music director, while PVR Swamy is the cinematographer.

  • Vinay Rajakumar's New Film Launched

    vinay rajkumar's untitled movie launched

    Vinay Rajakumar's new film being directed by Karam Chawla was launched at the Dharmagiri Manjunatha Swamy Temple in Bangalore on Sunday.

    The launch of the untitled film was attended by Raghavendra Rajakumar, Rakshith Shetty, Hemanth Rao, K S Sridhar, Vinay Rajakumar, Anusha Ranganath and others. 

    The new untitled film is being produced by Pushkar Mallikarjunaiah and is directed by cinematographer Karam Chawala. Karam had earlier  worked as a cinematographer for films like 'Ulidavaru Kandanthe', 'Kirik Party', 'Run Antony' and others. This is his debut film as a director. The new film is a commercial entertainer and Vinay plays the role of a boxer in the film.

  • ಅಣ್ಣನ ಆಸೆಯಂತೆ ಅತ್ತಿಗೆಯ ಬೇಬಿ ಶವರ್ ನೆರವೇರಿಸಿದ ಧ್ರುವ

    Meghana Raj's Baby Shower Held

    ನಟಿ ಮೇಘನಾ ರಾಜ್ ಅವರು ಗರ್ಭಿಣಿ. ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಿರುವ ನೋವಿನಲ್ಲಿರುವ ಮೇಘನಾ ಅವರನ್ನು ಸಂತಸ, ಸಂಭ್ರಮದಲ್ಲಿಡಲು ಎರಡೂ ಕುಟುಂಬಗಳು ಪಣತೊಟ್ಟಿವೆ. ತುಂಬು ಗರ್ಭಿಣಿ ಮೇಘನಾ ರಾಜ್ ಅವರಿಗೆ ಮೊನ್ನೆ ಮೊನ್ನೆಯಷ್ಟೇ ಸುಂದರ್ ರಾಜ್,ಪ್ರಮೀಳಾ ಜೋಷಾಯ್ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನೆರವೇರಿತ್ತು. ಈಗ ಸರ್ಜಾ ಮನೆಯಲ್ಲಿ ಬೇಬಿ ಶವರ್ ಕಾರ್ಯಕ್ರಮ ನಡೆದಿದೆ.

    ಎರಡೂ ಕಾರ್ಯಕ್ರಮಗಳಲ್ಲಿ ಎರಡೂ ಮನೆಯವರು ಹಾಜರಿದ್ದು, ಮೇಘನಾ ಅವರ ಸೀಮಂತದ ಸಂಭ್ರಮ ಹೆಚ್ಚಿಸಿದರು. ಈ ಕಾರ್ಯಕ್ರಮ ನಡೆದಿದ್ದು ಖಾಸಗಿ ಹೋಟೆಲ್‍ವೊಂದರಲ್ಲಿ. ಬೇಬಿ ಶವರ್ ಹೇಗೆ ಮಾಡಬೇಕು ಎಂದು ಚಿರು ಕನಸು ಕಂಡಿದ್ದರೋ, ಅದರಂತೆಯೆ ಅತ್ತಿಗೆಯ ಬೇಬಿ ಶವರ್ ನಡೆಸಿಕೊಟ್ಟಿದ್ದಾರೆ ಧ್ರುವ. ಅಣ್ಣನ ಕನಸನ್ನು ಈಡೇರಿಸಿದ ನೆಮ್ಮದಿಯ ನಡುವೆಯೂ ಧ್ರುವ ಸರ್ಜಾ ಕಣ್ಣು ಒದ್ದೆಯಾಗಿತ್ತು. ನೋವನ್ನು ಮರೆತು ನಗು ಹಂಚುತ್ತಿದ್ದರು ಮೇಘನಾ.

  • ಅಣ್ಣನ ಮದುವೆಯಲ್ಲಿ ಅತ್ತಿಗೆ ತಂಗಿ ಮೇಲೆ ಪ್ರೀತಿ - ರಾಘಣ್ಣನ ಲವ್ ಸ್ಟೋರಿ

    raghavendra rajkumar talks about his love story

    ರಾಘವೇಂದ್ರ ರಾಜ್‍ಕುಮಾರ್ ಪರ್ಸನಲ್ ಲೈಫ್ ಅನೇಕರಿಗೆ ಗೊತ್ತಿಲ್ಲ. ಸ್ವಲ್ಪ ಸೀರಿಯಸ್ ಎನಿಸುವ ರಾಘವೇಂದ್ರ ರಾಜ್‍ಕುಮಾರ್, ತಮ್ಮ ಲವ್ ಸ್ಟೋರಿಯನ್ನು ಹೊರಗೆ ಹೇಳಿಕೊಂಡೂ ಇರಲಿಲ್ಲ. ಇದೇ ಮೊದಲ ಬಾರಿಗೆ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ ರಾಘಣ್ಣ. 

    ರಾಘಣ್ಣ, ತಮ್ಮ ಪತ್ನಿ ಮಂಗಳಾ ಅವರನ್ನು ನೋಡಿದ್ದು, ಶಿವಣ್ಣನ ಮದುವೆಯಲ್ಲಿ. ಅತ್ತಿಗೆ ಗೀತಾ ಹಾಗೂ ಮಂಗಳ ಇಬ್ಬರೂ ಸಂಬಂಧಿಕರು. ಅಕ್ಕ-ತಂಗಿಯರೇ ಆಗಬೇಕು. ಗೀತಾ ಅವರ ತಾಯಿಗೆ, ಮಂಗಳ ಅವರ ತಾಯಿ ತಂಗಿಯಾಗಬೇಕು. ಅದು ಬೇರೆ ಕಥೆ. ಅಣ್ಣನ ಮದುವೆಯಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದ ರಾಘಣ್ಣನಿಗೆ ಮಂಗಳ ಇಷ್ಟವಾಗಿಬಿಟ್ಟರು. ಪ್ರೀತಿಯೂ ಆಯ್ತು, ಮದುವೆಯೂ ಆಯ್ತು. ಈಗ ಅವರದ್ದು ತುಂಬು ಸಂಸಾರ.

    ಮದುವೆಯಾದ ಹೊಸದರಲ್ಲಿಯೇ ಬಂದಿದ್ದ ನಂಜುಂಡಿ ಕಲ್ಯಾಣ ಸಿನಿಮಾ, ಆ ಚಿತ್ರದಲ್ಲಿನ ರೊಮ್ಯಾಂಟಿಕ್ ದೃಶ್ಯಗಳನ್ನು ನೋಡಿ, ಸಿನಿಮಾ ರಂಗದ ಬಗ್ಗೆ ಅಷ್ಟಾಗಿ ಗೊತ್ತಿಲ್ಲದ ಮಂಗಳಾ, ಪತಿಯೊಂದಿಗೆ ಜಗಳವಾಡಿದ್ದರಂತೆ. 

  • ಅಣ್ಣನ ಸಿನಿಮಾ ಟ್ರೇಲರ್ ತಮ್ಮನಿಂದ ರಿಲೀಸ್

    puneeth rajkumar ro release tryambakam release

    ದಯಾಳ್ ಪದ್ಮನಾಭನ್ ನಿರ್ದೇಶನದ, ರಾಘವೇಂದ್ರ ರಾಜ್‍ಕುಮಾರ್ ಅಭಿನಯದ ತ್ರಯಂಬಕಂ ಸಿನಿಮಾದ ಟ್ರೇಲರ್ ರಿಲೀಸ್ ಮುಹೂರ್ತ ಫಿಕ್ಸ್ ಆಗಿದೆ. ಅಣ್ಣನ ಸಿನಿಮಾ ಟ್ರೇಲರ್ ಬಿಡುಗಡೆ ಮಾಡ್ತಿರೋದು ತಮ್ಮ ಪುನೀತ್ ರಾಜ್‍ಕುಮಾರ್.

    ತ್ರಯಂಬಕಂ ಚಿತ್ರದ ಮುಹೂರ್ತದ ದಿನ ಶುಭ ಹಾರೈಸಿದ್ದ ಪುನೀತ್, ಟ್ರೇಲರ್ ರಿಲೀಸ್ ಕೂಡಾ ಮಾಡುತ್ತಿದ್ದಾರೆ. 

    ಅನುಪಮಾ ಗೌಡ, ಆರ್‍ಜೆ ರೋಹಿತ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ. ನವೀನ್ ಕೃಷ್ಣ ಸಂಭಾಷನೆ, ಗಣೇಶ್ ನಾರಾಯಣ್ ಸಂಗೀತದ ಬಲ ಚಿತ್ರಕ್ಕಿದೆ. ಕರಾಳ ರಾತ್ರಿ, ಪುಟ 109 ಚಿತ್ರಗಳ ಮೂಲಕ ವಿಭಿನ್ನ ಅನುಭವ ನೀಡಿದ್ದ ದಯಾಳ್, ಮತ್ತೊಂದು ಡಿಫರೆಂಟ್ ಸ್ಟೋರಿಯೊಂದಿಗೇ ಥ್ರಿಲ್ ನೀಡಲು ಬರುತ್ತಿದ್ದಾರೆ.

  • ಅಪ್ಪು `ದೇವರ' ಕುರ್ಚಿಯನ್ನು ಕೇಳಿದ ರಾಘಣ್ಣ

    ಅಪ್ಪು `ದೇವರ' ಕುರ್ಚಿಯನ್ನು ಕೇಳಿದ ರಾಘಣ್ಣ

    ಲಕ್ಕಿಮ್ಯಾನ್. ನಟರಾಗಿ ಅಪ್ಪು ನಟಿಸಿರುವ ಕೊನೆಯ ಸಿನಿಮಾ. ದೇವರ ಪಾತ್ರದಲ್ಲಿ ನಟಿಸಿರುವ ಅಪ್ಪು ಪಾತ್ರವನ್ನು ನೋಡಿ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಅವರದ್ದು ಗೆಸ್ಟ್ ಅಪಿಯರೆನ್ಸ್ ಅಷ್ಟೆ. ಆದರೆ.. ಅದು ಚಿತ್ರದುದ್ದಕ್ಕೂ ಇರುತ್ತದೆ. ದೇವರಾಗಿ ಅಪ್ಪು ತಮ್ಮ ನಗು, ಮುಗ್ಧತೆಯಲ್ಲಿಯೇ ಅಭಿನಯಸಿದ್ದಾರೆ.

    ಲಕ್ಕಿಮ್ಯಾನ್ ಚಿತ್ರವನ್ನು ನೋಡಿ ರಾಘಣ್ಣ ವಿಷಲ್ ಹಾಕಿ ಸಂಭ್ರಮಿಸಿದ್ದರು. ಭಾವುಕರಾಗಿದ್ದರು. ಎಲ್ಲ ಮುಗಿದ ಮೇಲೆ ರಾಘಣ್ಣ ಚಿತ್ರತಂಡದವರಲ್ಲಿ ಕೇಳಿದ್ದು ಒಂದೇ ಬೇಡಿಕೆ. ಅಪ್ಪು ಚಿತ್ರದಲ್ಲಿ ಕುಳಿತಿದ್ದ ಕುರ್ಚಿಯನ್ನು ಕೊಟ್ಟುಬಿಡಿ ಅನ್ನೋದೊಂದೇ.

    ಅಪರೂಪಕ್ಕೆ ಯಾವುದನ್ನಾದರೂ ಕೇಳುವ ಅಭ್ಯಾಸದ ರಾಘಣ್ಣನವರ ಬೇಡಿಕೆಗೆ ಚಿತ್ರತಂಡ ಸ್ಪಂದಿಸಿದೆ. ಚಿತ್ರದಲ್ಲಿ ಅಪ್ಪು ಕುಳಿತಿರುವ ಕುರ್ಚಿಯನ್ನು ಕಲಾತಂಡದವರೊಬ್ಬರ ಬಳಿ ಬಾಡಿಗೆಗೆ ತರಲಾಗಿತ್ತಂತೆ. ಅದೇ ಕುರ್ಚಿಯನ್ನು ಹುಡುಕಿಸುತ್ತಿದ್ದೇವೆ. ಸಿಕ್ಕ ಕೂಡಲೇ ರಾಘಣ್ಣ ಮನೆಗೆ ತಲುಪಿಸುತ್ತೇವೆ ಎಂದಿದ್ದಾರೆ ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ.

  • ಆಘಾತದಿಂದ ಇನ್ನೂ ಹೊರಬರದ ರಾಘಣ್ಣ : ಪ್ರತಿದಿನ ಸಮಾಧಿಗೆ ಭೇಟಿ

    ಆಘಾತದಿಂದ ಇನ್ನೂ ಹೊರಬರದ ರಾಘಣ್ಣ : ಪ್ರತಿದಿನ ಸಮಾಧಿಗೆ ಭೇಟಿ

    ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನ ಇಡೀ ಕರ್ನಾಟಕದ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್. ಈಗಲೂ ಎಷ್ಟೋ ಜನ ಈ ಸುದ್ದಿ ನಿಜವೋ.. ಸುಳ್ಳೋ.. ಅರ್ಥವಾಗುತ್ತಿಲ್ಲ ಅನ್ನುತ್ತಿದ್ದಾರೆ. ಅಪ್ಪು ಮರಣ ಸಂಭವಿಸಿದ ದಿನ ಎಲ್ಲರಿಗೂ ಧೈರ್ಯ ಹೇಳಬೇಕಿದ್ದ ಮನೆ ಹಿರಿಯ ಶಿವಣ್ಣ, ಬಿಕ್ಕಿ ಬಿಕ್ಕಿ ಅತ್ತು ಕುಸಿದು ಬಿದ್ದರು. ಆಗ ಎಲ್ಲರೆದುರು ಬಂದು ಮಾತನಾಡಿದ್ದು ರಾಘವೇಂದ್ರ ರಾಜ್‍ಕುಮಾರ್. ಆದರೆ.. ಈಗ ನೋಡಿದರೆ ಪರಿಸ್ಥಿತಿಯೇ ಬೇರೆ. ಶಿವಣ್ಣ ನಾನಿನ್ನು ಅಳೋದಿಲ್ಲ. ಅವನ ಕೆಲಸಗಳನ್ನು ಮುಂದುವರಿಸೋಕೆ ಏನು ಮಾಡಬೇಕು ನೋಡೋಣ.. ಎಂದು ಧೈರ್ಯ ತೆಗೆದುಕೊಂಡಿದ್ದರೆ, ಆಘಾತದಿಂದ ಹೊರಬರದೇ ಇರೋದು ರಾಘವೇಂದ್ರ ರಾಜ್‍ಕುಮಾರ್.

    ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸ್ಟ್ರೋಕ್ ಆದಾಗ ದೊಡ್ಮನೆಯ ಇಡೀ ಕುಟುಂಬ ಜೊತೆಗೆ ನಿಂತು ಆರೈಕೆ ಮಾಡಿತ್ತು. ಭಾವುಕರಾಗಿದ್ದ ರಾಘವೇಂದ್ರ ರಾಜ್‍ಕುಮಾರ್ ಅಣ್ಣನನ್ನು ತಂದೆಯ ಸ್ಥಾನಕ್ಕೇರಿಸಿದ್ದರು. ಅತ್ತಿಗೆ, ಪತ್ನಿಯನ್ನು ತಾಯಿಯ ಸ್ಥಾನಕ್ಕೇರಿಸಿದ್ದರು. ಅಪ್ಪು ನನ್ನ ಮಗ ಎನ್ನುತ್ತಿದ್ದ ರಾಘಣ್ಣ, ಇಡೀ ಕುಟುಂಬದ ಜೊತೆ ಚೆಂದದ ಬಾಂಧವ್ಯ ಇಟ್ಟುಕೊಂಡಿದ್ದರು. ಮನೆಯೂ ಪಕ್ಕದಲ್ಲೇ ಇತ್ತು. ಅಂತ್ಯಕ್ರಿಯೆ ವೇಳೆ ಬಂಡೆಯಂತೆ ನಿಂತಿದ್ದ ರಾಘಣ್ಣ, ಈಗ ಪ್ರತಿದಿನವೂ ಸಮಾಧಿಗೆ ಹೋಗುತ್ತಿದ್ದಾರೆ. ದಿನಕ್ಕೆರಡು ಬಾರಿ.. ತಮ್ಮನ ಸಾವಿನ ಆಘಾತ ಅವರನ್ನು ಇನ್ನೂ ಇನ್ನೂ ಕಾಡುತ್ತಲೇ ಇದೆ. ಈಗ ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಈ ಶಾಕ್‍ನಿಂದ ಹೊರತರಲು ಇಡೀ ಕುಟುಂಬ ಹೆಣಗುತ್ತಿದೆ.

  • ಆಡುವ ಗೊಂಬೆಯಲ್ಲಿ ರಾಜ್ ಅಣ್ಣತಮ್ಮಂದಿರ ಸಮಾಗಮ

    raj brothers sings a song for aduva bombe movie

    ಹಿರಿಯ ನಿರ್ದೇಶಕ ಭಗವಾನ್ ನಿರ್ದೇಶನದ 50ನೇ ಸಿನಿಮಾ ಆಡುವ ಗೊಂಬೆ. ಈ ಚಿತ್ರದಲ್ಲಿ 14 ವರ್ಷಗಳ ನಂತರ ರಾಘವೇಂದ್ರ ರಾಜ್‍ಕುಮಾರ್ ಹಾಡಿದ್ದರು. ಈಗ ಅದನ್ನೂ ಮೀರಿಸುವ ಸಂಭ್ರಮದ ಸುದ್ದಿ ಬಂದಿದೆ.

    ಆಡುವ ಗೊಂಬೆ ಚಿತ್ರಕ್ಕೆ ಹಾಡಿರುವುದು ರಾಘವೇಂದ್ರ ರಾಜ್‍ಕುಮಾರ್ ಒಬ್ಬರೇ ಅಲ್ಲ, ಪುನೀತ್ ರಾಜ್‍ಕುಮಾರ್, ಶಿವರಾಜ್‍ಕುಮಾರ್ ಕೂಡಾ ತಲಾ ಒಂದೊಂದು ಹಾಡಿದ್ದಾರೆ. ಇನ್ನೊಂದು ಹಾಡನ್ನು ವಿಜಯ್ ರಾಘವೇಂದ್ರ ಹಾಡಿದ್ದಾರೆ. ಅಲ್ಲಿಗೆ ಹೆಚ್ಚೂ ಕಡಿಮೆ ರಾಜ್‍ಕುಟುಂಬವೆಲ್ಲ ಚಿತ್ರದಲ್ಲಿ ಪಾಲ್ಗೊಂಡಂತಾಗಿದೆ.

    22 ವರ್ಷಗಳ ನಂತರ ನಿರ್ದೇಶನಕ್ಕಿಳಿದಿರುವ ಭಗವಾನ್ ಅವರ ಚಿತ್ರದಲ್ಲಿ ಅನಂತ್‍ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ ನಟಿಸಿದ್ದಾರೆ.

  • ಗಾಜನೂರಿನಲ್ಲಿ ಪರಶುರಾಮ್ ಆದ ರಾಘವೇಂದ್ರ ರಾಜಕುಮಾರ್

    ಗಾಜನೂರಿನಲ್ಲಿ ಪರಶುರಾಮ್ ಆದ ರಾಘವೇಂದ್ರ ರಾಜಕುಮಾರ್

    ಗಾಜನೂರು ಎಂದರೆ ಥಟ್ಟನೆ ನೆನಪಾಗೋದು ಅಣ್ಣಾವ್ರು. ಗಾಜನೂರು ಕನ್ನಡಿಗರಿಗೆ ಡಾ.ರಾಜ್ ಎಂಬ ವರನಟನನ್ನ ಕೊಟ್ಟ ಊರು. ಈ ಊರಿನಲ್ಲಿ ಇದುವರೆಗೆ ಅಣ್ಣಾವ್ರ ಕೆಲವು ಚಿತ್ರಗಳ ಕೆಲವು ದೃಶ್ಯಗಳ ಚಿತ್ರೀಕರಣವಾಗಿದೆಯೇ ಹೊರತು, ಮುಹೂರ್ತ, ಇಡೀ ಸಿನಿಮಾ ಚಿತ್ರೀಕರಣ ಮುಂತಾದುವೆಲ್ಲ ನಡೆದಿಲ್ಲ. ಅದನ್ನು ಮಾಡಿರೋದು ಖಡಕ್ ಹಳ್ಳಿ ಹುಡುಗರು ಚಿತ್ರತಂಡ.

    ಗಾಜನೂರಿನಲ್ಲಿಯೇ ಚಿತ್ರದ ಮುಹೂರ್ತ ಮಾಡಿ ಶೂಟಿಂಗ್ ಶುರು ಮಾಡಿದೆ ಖಡಕ್ ಹಳ್ಳಿ ಹುಡುಗರ ಟೀಂ. ಕ್ಯಾಮೆರಾ ಆನ್ ಮಾಡಿ ಶುಭ ಕೋರಿರುವುದು ಡಾ.ರಾಜ್ ಅವರ ತಂಗಿ ನಾಗಮ್ಮ ಮತ್ತು ಮಂಗಳಾ ರಾಘವೇಂದ್ರ ರಾಜಕುಮಾರ್. ಎಂ.ಯು.ಪ್ರಸನ್ನ ಹಳ್ಳಿ ನಿರ್ದೇಶನದ ಸಿನಿಮಾ ಖಡಕ್ ಹಳ್ಳಿ ಹುಡುಗರು. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ರಾಜೀವ್ ರಾಥೋಡ್, ಪ್ರಭಾಸ್ ರಾಜ್, ಪ್ರಭು ನಾಯಕರಾಗಿದ್ದಾರೆ.  ಯುಕ್ತಾ ಮಲ್ನಾಡ್, ದೀಪು ವಿಜಯ, ಚಂದ್ರಪ್ರಭಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ದಾರಿ ತಪ್ಪುವ ಹಳ್ಳಿ ಹುಡುಗರಿಗೆ ಗೈಡ್ ಮಾಡುವ, ಅವರನ್ನು ಮತ್ತೆ ಸರಿದಾರಿಗೆ ತರುವ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಹಿರಿಯನ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟಿಸುತ್ತಿದ್ದಾರೆ. ಅಂದಹಾಗೆ ರಾಘಣ್ಣನ ಪಾತ್ರದ ಹೆಸರು ಪರಶುರಾಮ್.

  • ತ್ರಯಂಬಂಕಂ ಥ್ರಿಲ್..

    thrayamabkam thrileer

    ತ್ರಯಂಬಂಕಂ. ದಯಾಳ್ ಪದ್ಮನಾಭ್ ಸಿನಿಮಾ. ಟ್ರೇಲರ್ ರಿಲೀಸ್ ಆಗಿದೆ. ಇದೊಂದು ಪಕ್ಕಾ ಸೈಕಲಾಜಿಕಲ್ ಥ್ರಿಲ್ಲರ್. ನೋ ಡೌಟ್. ವಿಜಯನಗರ ಕಾಲದ ಕಥೆಯಿಂದ ಶುರುವಾಗುವ ಕಥೆ, ಯಾವುದೋ ಪಾಷಾಣದ ಬೆನ್ನು ಹತ್ತುವ ಪತ್ರಕರ್ತೆ, ಮಗಳಿಗೆ ಆಕ್ಸಿಡೆಂಟ್ ಆಗಿಯೇ ಬಿಡುತ್ತೆ ಎಂದು ಭಾವಿಸಿ ಟೆನ್ಷನ್ ಆಗುವ ಅಪ್ಪ.. ಹೀಗೆ ಹೆಜ್ಜೆ ಹೆಜ್ಜೆಗೂ ತ್ರಯಂಬಕಂ ಸಿನಿಮಾ ಥ್ರಿಲ್ ಕೊಡುತ್ತಾ ಹೋಗುತ್ತೆ.

    ನಿರ್ದೇಶಕ ದಯಾಳ್, ಟ್ರೇಲರ್‍ನಲ್ಲಿ ಮೊದಲ ಗೆಲುವು ದಾಖಲಿಸಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್, ಚಿತ್ರದ ಅತಿದೊಡ್ಡ ಅಟ್ರ್ಯಾಕ್ಷನ್. ಆರ್.ಜೆ.ರೋಹಿತ್ ಅವರಿಗೆ ಇಲ್ಲಿ ಡಿಟೆಕ್ಟಿವ್ ಪಾತ್ರವಿದೆ.

    ಇದು ಕಾಮನ್ ಸಿನಿಮಾ ಅಲ್ಲ. ಒಳ್ಳೆ ಘಟನೆಯನ್ನ ಚೆನ್ನಾಗಿ ತೋರಿಸಿದ್ದಾರೆ. ಥಿಯೇಟರಿನಿಂದ ಹೊರಬಂದ ಮೇಲೆ ಯಾರು ಹೀರೋ ಅನ್ನೋದು ನಿಮಗೆ ಗೊತ್ತಾಗಲ್ಲ. ಒಂದು ಹೊಸ ಅನುಭವ ಎಂದಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

  • ತ್ರಯಂಬಂಕಂ.. ರಿಲೀಸ್‍ಗೂ ಮೊದಲೇ ನಿರ್ಮಾಪಕರು ಸೇಫ್

    trayamabakam producers safe before movie release

    ಕಡಿಮೆ ಬಜೆಟ್, ಅದ್ಭುತ ಕಥೆ, ಕಡಿಮೆ ಸಮಯ, ಒಳ್ಳೆಯ ಸಿನಿಮಾ..ಇದು ದಯಾಳ್ ಪದ್ಮನಾಭನ್ ಸ್ಪೆಷಾಲಿಟಿ. ಆ್ಯಕ್ಟರ್ ಚಿತ್ರದ ನಂತರ ತಮ್ಮ ವರಸೆಯನ್ನೇ ಬದಲಿಸಿಕೊಂಡು ಒಳ್ಳೆಯ ಚಿತ್ರಗಳನ್ನು ನೀಡಿ ಗೆದ್ದ ದಯಾಳ್, ತ್ರಯಂಬಕಂನಲ್ಲೂ ಆ ಸಾಧನೆ ರಿಪೀಟ್ ಮಾಡಿದ್ದಾರೆ. ಇದೇ ವಾರ ರಿಲೀಸ್ ಆಗುತ್ತಿರುವ ತ್ರಯಂಬಕಂ ಚಿತ್ರದ ನಿರ್ಮಾಪಕರು, ಈಗಾಗಲೇ ಬಜೆಟ್ಟಿನ ಶೇ.50ರಷ್ಟನ್ನು ಪಡೆದುಕೊಂಡಿದ್ದಾರೆ. ಅಷ್ಟರಮಟ್ಟಿಗೆ ನಿರ್ಮಾಪಕರು ಸೇಫ್.

    ರಾಘವೇಂದ್ರ ರಾಜ್‍ಕುಮಾರ್, ಅನುಪಮಾ ಗೌಡ, ಆರ್‍ಜೆ ರೋಹಿತ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಇದೆ. ವಿಶ್ವ ಮಾರುಕಟ್ಟೆಯ ಹಕ್ಕನ್ನು ಜಾಕ್ ಮಂಜು ಪಡೆದುಕೊಂಡಿದ್ದಾರೆ. ಇಂದು ಸಂಜೆ ಜಿಟಿ ಮಾಲ್‍ನಲ್ಲಿ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ.

  • ದಯಾಳ್ ಜೊತೆ ರಾಘವೇಂದ್ರ ರಾಜ್‍ಕುಮಾರ್ ಸಿನಿಮಾ

    dayal's next film is with raghavendra rajkumar

    ರಾಘವೇಂದ್ರ ರಾಜ್‍ಕುಮಾರ್ ಮತ್ತು ದಯಾಳ್ ಪದ್ಮನಾಭನ್ ಜೊತೆಯಾಗುತ್ತಿದ್ದಾರೆ. ಆ್ಯಕ್ಟರ್, ಆ ಕರಾಳ ರಾತ್ರಿ ಚಿತ್ರಗಳ ಮೂಲಕ ವಿಭಿನ್ನತೆಯ ಛಾಪು ಮೂಡಿಸಿರುವ ದಯಾಳ್ ಪದ್ಮನಾಭನ್, ಈ ಬಾರಿ ರಾಘವೇಂದ್ರ ರಾಜ್‍ಕುಮಾರ್‍ಗೆ ಸಿನಿಮಾ ಮಾಡಲು ಸಿದ್ಧರಾಗಿದ್ದಾರೆ.

    ತ್ರಯಂಬಕಮ್ ಅನ್ನೋದು ಈ ಸಿನಿಮಾದ ಹೆಸರು. ದಯಾಳ್ ಅವರ ಜೊತೆ ಸಂಭಾಷಣೆಕಾರರಾಗಿ ನವೀನ್ ಕೃಷ್ಣ ಇರುತ್ತಾರೆ. ರೋಹಿತ್ ಮತ್ತು ಅನುಪಮಾ ಗೌಡ ಚಿತ್ರದ ತಾರಾಗಣದಲ್ಲಿರುತ್ತಾರೆ. ನವೆಂಬರ್ 9ರಂದು ಚಿತ್ರ ಸೆಟ್ಟೇರಲಿದೆ. ದಯಾಳ್ ಪದ್ಮನಾಭನ್ ಅವರ ಪುಟ 109 ತೆರೆಗೆ ಸಿದ್ಧವಾಗಿದ್ದು, ಹೊಸ ಚಿತ್ರವೂ ಶೀಘ್ರದಲ್ಲೇ ಶುರುವಾಗಲಿದೆ.

  • ದುಷ್ಟಶಕ್ತಿಗಳ ವಿರುದ್ಧ ಹೋರಾಟಕ್ಕೆ ರಾಘಣ್ಣ ರೆಡಿ

    Raghavedra Rajkumar Gears Up To Fight Evil In 'Rajatantra'

    ನಟ ರಾಘವೇಂದ್ರ ರಾಜ್‍ಕುಮಾರ್ ಹೊಸ ಚಿತ್ರ, ಹೊಸ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರ ರಾಜತಂತ್ರ. ಈ ಚಿತ್ರದಲ್ಲಿ ಅವರು ನಿವೃತ್ತ ಕ್ಯಾಪ್ಟನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೌಬಾಯ್ ಕ್ಯಾಪ್, ಉದ್ದ ಕೂದಲು, ಗಡ್ಡ, ಕುತ್ತಿಗೆಗೆ ಮಫ್ಲರ್, ಕೋಟಿನ ಡ್ರೆಸ್‍ನಲ್ಲಿ ಲುಕ್ ಸಿಕ್ಕಾಪಟ್ಟೆ ಡಿಫರೆಂಟ್ ಎನಿಸುತ್ತಿದೆ.

    `ಅಮ್ಮನ ಮನೆ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ರಾಘಣ್ಣ, ಸೈನ್ಯದ ಸೇವೆ ಮುಗಿಸಿ ಬಂದ ನಂತರವೂ ದೇಶದ ರಕ್ಷಣೆಗೆ ಹೋರಾಡುವ ಕಥೆ ಚಿತ್ರದಲ್ಲಿದೆ. ಪಿವಿಆರ್ ಸ್ವಾಮಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ವಿಶ್ವ ಡಿಜಿಟಲ್ ಮೀಡಿಯಾ ಮೂಲಕ ವಿಜಯಭಾಸ್ಕರ್, ಜೆ.ಎಂ. ಪ್ರಹ್ಲಾದ್, ಪಿ.ಆರ್ ಶ್ರೀಧರ್ ನಿರ್ಮಾಪಕರಾಗಿದ್ದಾರೆ. 

  • ಧ್ರುವ ಸರ್ಜಾ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್

    raghavendra rajkumar to act in pogaru

    ರಾಘವೇಂದ್ರ ರಾಜ್‍ಕುಮಾರ್, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸದ್ದು ಮಾಡುತ್ತಿದ್ದಾರೆ. ಅವರೇ ಹೀರೋ ಆಗಿ ನಟಿಸಿರುವ ಅಮ್ಮನ ಮನೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ತ್ರಯಂಬಕಂ ಅನ್ನೋ ಚಿತ್ರದಲ್ಲಿಯೂ ನಟಿಸುತ್ತಿರುವ ರಾಘಣ್ಣ, ಅತಿಥಿ ನಟರಾಗಿ ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಧ್ರುವ-ರಶ್ಮಿಕಾ ಮಂದಣ್ಣ-ನಂದಕಿಶೋರ್ ಕಾಂಬಿನೇಷನ್ನಿನ ಸಿನಿಮಾ ಪೊಗರು ಚಿತ್ರದಲ್ಲಿ ರಾಘಣ್ಣ ಅವರಿಗಾಗಿಯೇ ವಿಶೇಷ ಪಾತ್ರವಿದೆಯಂತೆ. ಅದಕ್ಕಾಗಿ ರಾಘಣ್ಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಅಣ್ಣ ಶಿವರಾಜ್ ಕುಮಾರ್ ಹೀರೋ ಆಗಿ ನಟಿಸಿದ್ದ ಆಸೆಗೊಬ್ಬ ಮೀಸೆಗೊಬ್ಬ ಚಿತ್ರವನ್ನು ಬಿಟ್ಟರೆ, ಬೇರೆ ಯಾವುದೇ ಚಿತ್ರದಲ್ಲಿ ರಾಘಣ್ಣ ಅತಿಥಿ ನಟರಾಗಿ ನಟಿಸಿಲ್ಲ. ಪೊಗರು ಮೂಲಕ ಮತ್ತೊಮ್ಮೆ ಅತಿಥಿ ನಟರಾಗುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

  • ನಂಜುಂಡಿ ಕಲ್ಯಾಣ ಶತದಿನೋತ್ಸವದ ಆಪರೂಪದ ವಿಡಿಯೋ - ತಿಪಟೂರ್ ನಲ್ಲಿ ಭಾಗ 1

    nanjundi kalyana 100 days function at tiptur image

    ರಾಘವೇಂದ್ರ ರಾಜ್ ಕುಮಾರ್ ಮತ್ತು ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣ ಚಿತ್ರದ ಶತದಿನೋತ್ಸವದ  ಕಾರ್ಯಕ್ರಮ ತಿಪಟೂರ್ ನಲ್ಲಿ ನಡೆಯಿತು. ಇದರ ಆಪರೂಪದ ವಿಡಿಯೋ ಭಾಗ 1

    Superhit movie Nanjundi Kalyana Starrer Raghavendra Rajkumar and Malashree was directed by MS Rajashekar. Pravathamma Rajkumar was the producer. Movie 100 days celebration was held at Tiptur with Huge gattering. Watch Exclusive Video Part 1

    #Malashree #Rajkumar

     

  • ನಾಳೆ ಅಂತ್ಯಕ್ರಿಯೆ : ಅಪ್ಪಾ ಪಪ್ಪಾ ಎಲ್ಲಿ ಅಂದ್ರೆ ಏನು ಹೇಳಲಿ ಎಂದರು ರಾಘವೇಂದ್ರ

    ನಾಳೆ ಅಂತ್ಯಕ್ರಿಯೆ : ಅಪ್ಪಾ ಪಪ್ಪಾ ಎಲ್ಲಿ ಅಂದ್ರೆ ಏನು ಹೇಳಲಿ ಎಂದರು ರಾಘವೇಂದ್ರ

    ಶನಿವಾರವೇ ಅಂತ್ಯಕ್ರಿಯೆ ಎಂದುಕೊಂಡಿದ್ದ ಯೋಜನೆಯನ್ನು ಒಂದು ದಿನ ಮುಂದೂಡಿದೆ. ಪುನೀತ್ ದೊಡ್ಡ ಮಗಳು ಧೃತಿ, ನ್ಯೂಯಾರ್ಕ್ನಿಂದ ಬಂದು ಬೆಂಗಳೂರು ತಲುಪುವುದರೊಳಗೆ ಸಂಜೆಯಾಗುತ್ತೆ. ರಾತ್ರಿ ಹೊತ್ತು ಅಂತ್ಯಕ್ರಿಯೆ ಮಾಡುವಂತಿಲ್ಲ. ಹೀಗಾಗಿ ಅಂತ್ಯ ಸಂಸ್ಕಾರವನ್ನು ಭಾನುವಾರಕ್ಕೆ ಮುಂದೂಡಿದ್ದೇವೆ. ದಯವಿಟ್ಟು ಶಾಂತಿಯಿಂದ ಸಹಕರಿಸಿ ಎಂದು ಹೇಳಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿ.

    ಎಲ್ಲರೂ ನೊಂದಿದ್ದೀರಿ. ನಾವೂ ನೊಂದಿದ್ದೇವೆ. ದೊಡ್ಡ ಮಗಳು ಬರಬೇಕಿದೆ. ಅವಳು ನನ್ನನ್ನು ಅಪ್ಪಾ ಎನ್ನುತ್ತಿದ್ದಳು. ಅಪ್ಪುನನ್ನು ಪಪ್ಪಾ ಎನ್ನುತ್ತಿದ್ದಳು. ಅವಳು ಬಂದು ಅಪ್ಪಾ.. ಪಪ್ಪಾ ಎಲ್ಲಿ ಅಂದ್ರೆ ನಾನು ಏನು ಹೇಳಲಿ.. ಎಲ್ಲಿಗೆ ಕಳಿಸಿದೆ ಅಂದ್ರೆ ಏನು ಮಾಡಲಿ.. ಆ ಮಗು ಇನ್ನೂ ಎಷ್ಟು ಅಳುತ್ತೋ ಏನೋ.. ಗದ್ಗದಿತರಾಗಿಯೇ ಹೇಳಿದ್ಧಾರೆ ರಾಘವೇಂದ್ರ ರಾಜ್ಕುಮಾರ್.

    ನಾಳೆ ಕಂಠೀರವ ಸ್ಟುಡಿಯೋದಲ್ಲಿ ರಾಜ್, ಪಾರ್ವತಮ್ಮ ಸಮಾಧಿ ಪಕ್ಕದಲ್ಲಿಯೇ ಪುನೀತ್ ಸಂಸ್ಕಾರ ನೆರವೇರಲಿದೆ.

  • ನಿರ್ದೇಶಕಿಯೇ ನಾಯಕಿ.. ರಾಘವೇಂದ್ರ ರಾಜ್‍ಕುಮಾರ್ ನಾಯಕ : ರಾಜಿ ಸ್ಪೆಷಲ್

    ನಿರ್ದೇಶಕಿಯೇ ನಾಯಕಿ.. ರಾಘವೇಂದ್ರ ರಾಜ್‍ಕುಮಾರ್ ನಾಯಕ : ರಾಜಿ ಸ್ಪೆಷಲ್

    ನಿರ್ದೇಶಕರು ನಾಯಕರಾಗೋದು.. ನಾಯಕರು ನಿರ್ದೇಶಕರಾಗೋದು ಹೊಸದಲ್ಲ. ಕ್ಯಾಮೆರಾ ಹಿಂದಿರೋವ್ರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವುದೂ ಟ್ರೆಂಡ್ ಆಗಿಬಿಟ್ಟಿದೆ. ಆದರೆ, ನಿರ್ದೇಶಕಿಯೊಬ್ಬರು ನಾಯಕಿಯಾಗೋದು ಅಪರೂಪ. ಬಹುಶಃ ಇಂಥಾದ್ದೊಂದು ಪ್ರಯತ್ನ ಇದೇ ಮೊದಲಿದ್ದರೂ ಆಶ್ಚರ್ಯವಿಲ್ಲ. ಈ ದಾಖಲೆ ಆಗಿರೋದು ರಾಜಿ ಚಿತ್ರದಲ್ಲಿ.

    ಈ ಚಿತ್ರಕ್ಕೆ ರಾಘವೇಂದ್ರ ರಾಜ್‍ಕುಮಾರ್ ಹೀರೋ. ಪ್ರೀತಿ ಎಸ್.ಬಾಬು ನಾಯಕಿ. ನಾಯಕಿಯಷ್ಟೇ ಅಲ್ಲ, ನಿರ್ದೇಶಕಿಯೂ ಅವರೇ. ಚಿತ್ರಕ್ಕೆ ವಸುಮತಿ ಉಡುಪ ಅವರ ಕಥೆಯೇ ಆಧಾರ. ಗಂಡ ಹೆಂಡತಿ ನಡುವಣ ಒಂದು ಸುಂದರ ಒಪ್ಪಂದವನ್ನಿಟ್ಟುಕೊಂಡು ರೂಪಿಸಿರುವ ಸಿನಿಮಾ ಇದು. ವಿಶಿಷ್ಟವಾದ ಕಥೆ ಇದು ಎನ್ನುತ್ತಾರೆ ಪ್ರೀತಿ. ಸಹಕಲಾವಿದೆಯಾಗಿ, ಸಹ ನಿರ್ದೇಶಕಿಯಾಗಿ ಅನುಭವ ಇರೋ ಪ್ರೀತಿ ಈ ಚಿತ್ರದಲ್ಲಿ ನಿರ್ದೇಶಕಿಯೂ ಅವರೇ. ನಾಯಕಿಯೂ ಅವರೇ.

    ಬಸವರಾಜ್ ಎಂಬುವವರು ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ಚಿತ್ರದ ಮುಹೂರ್ತಕ್ಕೆ ಆಗಮಿಸಿ ಶುಭ ಕೋರಿದ್ದು ಮದಗಜ ಶ್ರೀಮುರಳಿ.

  • ನೆಗೆಟಿವ್ ಪಾತ್ರ ಕೈಬಿಟ್ಟ ರಾಘವೇಂದ್ರ ರಾಜ್‍ಕುಮಾರ್

    raghavendra rajkumar not doing negative shade in chillum

    ಚಿಲಂ. ಮನೋರಂಜನ್ ರವಿಚಂದ್ರನ್ ನಟಿಸುತ್ತಿರುವ ಈ ಸಿನಿಮಾವನ್ನು ರಾಘವೇಂದ್ರ ರಾಜ್‍ಕುಮಾರ್ ಕೈಬಿಟ್ಟಿದ್ದಾರೆ. ಹಲವು ವರ್ಷಗಳ ನಂತರ ರಾಘವೇಂದ್ರ ರಾಜ್‍ಕುಮಾರ್ ನಟಿಸಬೇಕಿದ್ದ ಚಿತ್ರ ಅದು. ನೆಗೆಟಿವ್ ಶೇಡ್ ಇರುವ ಆ ಪಾತ್ರದಲ್ಲಿ ನಟಿಸೋಕೆ ಸ್ವತಃ ಅವರೇ ಆಸಕ್ತಿ ತೋರಿಸಿದ್ದರು. ಆದರೆ, ಈಗ ಚಿತ್ರದಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣ ಅಭಿಮಾನಿಗಳಂತೆ.

    ಕೆಲವೊಂದಿಷ್ಟು ಅಭಿಮಾನಿಗಳು, ಒಂದು ದಿನ ನೇರ ಮನೆಗೇ ಬಂದು, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸಬೇಡಿ ಎಂದು ಬೇಡಿಕೆಯಿಟ್ಟರಂತೆ. ಆ ಪಾತ್ರದಲ್ಲಿ ಸಿಗರೇಟ್ ಸೇದುವ, ಕುಡಿಯುವ ದೃಶ್ಯಗಳಿದ್ದವು. ಅವನ್ನೆಲ್ಲ ನೀವು ಮಾಡಬೇಡಿ ಎಂದು ಅಭಿಮಾನಿಗಳು ಹಠ ಹಿಡಿದರು. ನಾನು ನಿರ್ದೇಶಕರಿಗೆ ಹೇಳಿದೆ. ಅವರು ಬದಲಾವಣೆಗೂ ಸಿದ್ಧ ಎಂದರು. ಆದರೆ, ನನಗಾಗಿ ಪಾತ್ರದಲ್ಲಿ ಬದಲಾವಣೆ ಮಾಡಬೇಡಿ, ಪಾತ್ರಕ್ಕೆ ಸೂಕ್ತವೆನಿಸಿದರೆ ಬೇರೆಯವರಿಂದ ಮಾಡಿಸಿ ಎಂದು ಹೇಳಿದೆ ಎಂದು ತಿಳಿಸಿದ್ದಾರೆ ರಾಘವೇಂದ್ರ ರಾಜ್‍ಕುಮಾರ್.

    ಸದ್ಯಕ್ಕೆ ರಾಘವೇಂದ್ರ ರಾಜ್‍ಕುಮಾರ್ ಅಮ್ಮನ ಮನೆ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದು, ಆ ಸಿನಿಮಾ ಅವರ ಹುಟ್ಟುಹಬ್ಬದ ದಿನ, ಆಗಸ್ಟ್ 15ರಂದು ಸೆಟ್ಟೇರಲಿದೆ. ನಿಖಿಲ್ ಮಂಜು ನಿರ್ದೇಶನವಿದೆ.

  • ಪುನೀತ್ ಮತ್ತು ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘಣ್ಣ

    ಪುನೀತ್ ಮತ್ತು ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘಣ್ಣ

    ಅಪ್ಪು. ಟೋಟೋ ಮತ್ತು ನುಕ್ಕಿ. ಈ ಮೂರೂ ಹೆಸರುಗಳನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ರಾಘವೇಂದ್ರ ರಾಜ್`ಕುಮಾರ್. ಧೃತಿ ಮತ್ತು ವಂದಿತಾ ಅಪ್ಪು ಅವರ ಮಕ್ಕಳು. ಅವರ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ರಾಘಣ್ಣ.

    ತಮಗೆ ಹಚ್ಚೆ ಹಾಕಿದ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್ಕುಮಾರ್ ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಹಾಗೂ ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ.

    ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು  ಹೆಣ್ಣು ಮಕ್ಕಳಾದ ಧೃತಿ ಮತ್ತು ವಂದಿತಾರ ನಿಕ್ ನೇಮ್. ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ಬಗ್ಗೆಯಂತೂ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಮೊದಲಿನಿಂದಲೂ ಬಹಳ ಮಮಕಾರ. ಅಪ್ಪು ಕಾಲವಾದ ಸಂದರ್ಭದಲ್ಲಿ ಅವರ ಮಕ್ಕಳನ್ನು ನೆನೆದು ರಾಘವೇಂದ್ರ ರಾಜ್ಕುಮಾರ್ ಬಹಳ ದುಖಃ ವ್ಯಕ್ತಪಡಿಸಿದ್ದರು.

    ರಾಘಣ್ಣ ಅವರಿಗೆ ಆರೋಗ್ಯ ತುಸು ಹದಗೆಟ್ಟಿತ್ತು. ಈಗಲೂ ಕೂಡಾ ಅವರು ಸವಾಲಿನ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ. ಹೀಗಿರುವಾಗ ಹಚ್ಚೆ ಹಾಕಿಸಿಕೊಳ್ಳೋ ಅಗತ್ಯವಿತ್ತೇ ರಾಘಣ್ಣ, ಅವರು ನಿಮೃ ಹೃದಯದಲ್ಲಿದ್ದಾರೆ, ಸಾಕಲ್ವಾ ಎಂದು ರಾಘಣ್ಣ ಬಗ್ಗೆ ಕಾಳಜಿ ತೋರಿಸಿದವರೂ ಇದ್ದಾರೆ.