` komal - chitraloka.com | Kannada Movie News, Reviews | Image

komal

  • No Changes In 'Kempegowda 2' Release

    no changes in kempegowda 2 release

    Actor Komal has said that there are no changes in the release of his latest release 'Kempegowda 2' and the film will release as per schedule.

    'Kempegowda 2' was scheduled to release on the auspicious day of Varamahalakshmi festival on the 09th of August. But recently, Darshan starrer 'Kurukshetra' which was supposed to release on the 02nd of August, was postponed to August 09th. With a big competition like 'Kurukshetra', there were doubts whether 'Kempegowda 2' will also release on the same date and there was news that the film might get postponed to a later date. Now Komal has said that there is no plans of postponement and the film will release as per schedule.

    'Kempegowda 2' is directed by Shankar Gowda. Komal plays a rough and tough cop in the film, while cricketer Srishanth plays the antagonist in the film. Rishika Sharma is the heroine. Yogi plays a prominent role. The music is scored by Varun Unni.

     

  • ಅಲಾ ಕೋಮಲ್.. ಯಲಾ ಕುನ್ನಿ..!

    ಅಲಾ ಕೋಮಲ್.. ಯಲಾ ಕುನ್ನಿ..!

    ಯಲಾಕುನ್ನಿ.. ಈ ಡೈಲಾಗ್ ನೆನಪಾದರೆ ಸಾಕು, ವಜ್ರಮುನಿ ನೆನಪಾಗುತ್ತಾರೆ. ನಟಭಯಂಕರ ವಜ್ರಮುನಿ ಪಾತ್ರಗಳಲ್ಲಿ ತುಂಬಾ ಫೇಮಸ್ ಡೈಲಾಗ್ ಇದು. ವಜ್ರಮುನಿ ಅವರನ್ನು ಮೀರಿಸಿದ ಇನ್ನೊಬ್ಬ ವಿಲನ್ ಕನ್ನಡಕ್ಕೆ ಇನ್ನೂ ಸಿಕ್ಕಿಲ್ಲ. ಹೀಗಾಗಿಯೇ ಈಗಲೂ ನಟಭಯಂಕರ ಅನ್ನೋ ಸಿನಿಮಾ ರಿಲೀಸ್ ಆಗುತ್ತೆ. ಈಗ ಅವರ ಫೇಮಸ್ ಡೈಲಾಗ್ ಕೂಡಾ ಸಿನಿಮಾ ಆಗುತ್ತಿದೆ. ಯಲಾ ಕುನ್ನಿ. ಸಿನಿಮಾದ ಸಬ್ ಟೈಟಲ್ ಮೇರಾ ನಾಮ್ ವಜ್ರಮುನಿ.

    ಯಲಾ ಕುನ್ನಿ ಸಿನಿಮಾವನ್ನು ಮಹೇಶ್ ಗೌಡ್ರು ನಿರ್ಮಿಸುತ್ತಿದ್ದು, ಎನ್. ಆರ್ ಪ್ರದೀಪ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಓಂಪ್ರಕಾಶ್ ರಾವ್, ಮುಸ್ಸಂಜೆ ಮಹೇಶ್ ಅವರೊಂದಿಗೆ ಕೆಲಸ ಮಾಡಿರೋ ಪ್ರದೀಪ್ ಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರನ್ನು ನಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದು 1981ರ ಕಾಲಘಟ್ಟದಲ್ಲಿ ನಡೆಯೋ ಕಥೆ. ಹೀಗಾಗಿ ಶ್ರೀರಂಗಪಟ್ಟಣ ಹಾಗೂ ಮೈಸೂರು ಸುತ್ತಮುತ್ತ ಹಳ್ಳಿ ಹಾಗೂ ದೇವಸ್ಥಾನದ ಸೆಟ್ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಲಾಗುತ್ತಿದೆ. ಇನ್ನು ಈ ಸಿನಿಮಾದಲ್ಲಿ ಹಿರಿಯ ಕಲಾವಿದ ಮುಸುರಿ ಕೃಷ್ಣ ಮೂರ್ತಿ ಅವರ ಪುತ್ರ ಜಯಸಿಂಹ ಮುಸುರಿ, ನವರಸ ನಾಯಕ ಜಗ್ಗೇಶ್ ಕಿರಿಯ ಪುತ್ರ ಯತಿರಾಜ್ ಹಾಗೂ ಮಹಾಂತೇಶ್ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.

    ಸಿನಿಮಾದ ಪೋಸ್ಟರ್ ವಿಭಿನ್ನಾಗಿದ್ದು, ಉದಯಿಸುತ್ತಿರುವ ಸೂರ್ಯನ ಮೇಲೆ ಮೂಡಿಸಿರುವ ವಜ್ರಮುನಿಯ ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ಪೋಸ್ಟರ್ನಲ್ಲಿ ಪುಣ್ಯಕೋಟಿ ಗೋವಿನ ಹಾಡಿನಲ್ಲಿ ಹುಲಿಯನ್ನು ಬಣ್ಣಿಸುವ ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಬುದಾನೆಂಬ ವ್ಯಾಘ್ರನು ಅಬ್ಬರಿಸಿ ಹಸಿ-ಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು ಎಂಬ ಸಾಲುಗಳನ್ನು ಬರೆಯಲಾಗಿದೆ.

  • ಕಾಲಾಯ ನಮಃ ನಂತರ ಈಗ ರೋಲೆಕ್ಸ್ : ಕೋಮಲ್ ಕಮಾಲ್ ಶುರು

    ಕಾಲಾಯ ನಮಃ ನಂತರ ಈಗ ರೋಲೆಕ್ಸ್ : ಕೋಮಲ್ ಕಮಾಲ್ ಶುರು

    ಹೆಚ್ಚೂ ಕಡಿಮೆ 2 ವರ್ಷ ಬ್ರೇಕ್ ತೆಗೆದುಕೊಂಡು ಇಂಡಸ್ಟ್ರಿಯಿಂದಲೇ ದೂರವಾಗಿದ್ದ ನಟ ಕೋಮಲ್ ಮತ್ತೊಮ್ಮೆ ಕಮ್ ಬ್ಯಾಕ್ ಮಾಡುತ್ತಿರುವುದು ಗೊತ್ತಿರುವ ವಿಷಯವಷ್ಟೇ. ಇತ್ತೀಚೆಗೆ ಕೋಮಲ್ ಅವರ ಪತ್ನಿ ಅನುಸೂಯ ಅವರೇ ನಿರ್ಮಾಣ ಮಾಡುತ್ತಿರುವ ಕಾಲಯ ನಮಃ ಸೆಟ್ಟೇರಿತ್ತು. ಮತಿವಣ್ಣನ್ ನಿರ್ದೇಶನದ ಚಿತ್ರಕ್ಕೆ ಶುಭ ಕೋರಿದ್ದ ಜಗ್ಗೇಶ್ ನನ್ನ ತಮ್ಮನ ಗುಡ್ ಟೈಂ ಇನ್ನು ಶುರುವಾಗುತ್ತೆ ಎಂದು ವಿಶ್ವಾಸದಿಂದ ಹೇಳಿಕೊಂಡಿದ್ದರು. ಕಾಲಾಯ ನಮಃ ಚಿತ್ರದಲ್ಲಿ ಆಸಿಯಾ ಫಿರ್ದೋಸ್ ಹೀರೋಯಿನ್. ಜಗ್ಗೇಶ್ ಪುತ್ರ ಯತಿರಾಜ್, ತಿಲಕ್, ಸುಚೇಂದ್ರ ಪ್ರಸಾದ್ ಮೊದಲಾದವರು ನಟಿಸುತ್ತಿದ್ದಾರೆ. ಇದರ ನಡುವೆಯೇ ಇನ್ನೊಂದು ಸಿನಿಮಾ ಸೆಟ್ಠೇರಿದೆ. ರೋಲೆಕ್ಸ್.

    ರೊಲೆಕ್ಸ್ ಅನ್ನೋ ಸಿನಿಮಾ ಸೆಟ್ಟೇರುತ್ತಿದ್ದು ಒನ್ಸ್ ಎಗೇನ್ ಇದು ಕಂಟೆಂಟ್ ಬೇಸ್ ಸಿನಿಮಾ. ಅನಿಲ್ ಕುಮಾರ್ ಎಸ್. ಎಂಬುವರು ನಿರ್ಮಿಸುತ್ತಿರುವ ಚಿತ್ರಕ್ಕೆ ಶ್ರೀನಿವಾಸ್ ಮಂಡ್ಯ ಈ ಚಿತ್ರಕ್ಕೆ ಡೈರೆಕ್ಟರ್. ಬಿಲ್ ಗೇಟ್ಸ್ ಸಿನಿಮಾ ಮೂಲಕ ಗಮನ ಸೆಳೆದಿದ್ದ ಶ್ರೀನಿವಾಸ್ ಮಂಡ್ಯ ಈ ಚಿತ್ರದ ಮೇಲೂ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸ್ಸೋ.. ಕೋಮಲ್ ಪರ್ವ ಶುರುವಾಗಿದೆ.

  • ಕೊಂಕಾಪಾಸ್ ಇಂಡೋ-ಚೀನಾ ಬಾರ್ಡರ್ ಕಥೆನಾ..?

    komal's next is kongka pass

    ನಟ ಕೋಮಲ್ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರಾಗುತ್ತಿದ್ದಾರೆ. ನಿರ್ಮಾಪಕರೂ ಅವರೇ. ಚಿತ್ರದ ಟೈಟಲ್ ಕೊಂಕಾಪಾಸ್.

    ಕೊಂಕಾ ಪಾಸ್ ಅನ್ನೋದು ಇಂಡಿಯಾ-ಚೀನಾ ಬಾರ್ಡರ್‍ನಲ್ಲಿ ಬರೋ ಪ್ರದೇಶದ ಹೆಸರು. ಹಾಗಾದರೆ ಚಿತ್ರದ ಕಥೆ ಏನಿರಬಹುದು..? ಆ ಕುತೂಹಲಕ್ಕೆ ಸ್ವಲ್ಪ ವೇಯ್ಟ್ ಮಾಡಿ, ಚಿತ್ರವಿನ್ನೂ ಪ್ರೀಪ್ರೊಡಕ್ಷನ್ ಹಂತದಲ್ಲಿದೆ ಎನ್ನುತ್ತಿದ್ದಾರೆ ಕೋಮಲ್.

  • ಕೊರೊನಾ ಗೆದ್ದ ಕೋಮಲ್

    ಕೊರೊನಾ ಗೆದ್ದ ಕೋಮಲ್

    ಕೊರೊನಾ ಹೆಮ್ಮಾರಿ ಯಾರನ್ನೂ ಬಿಡುತ್ತಿಲ್ಲ. ಚಿತ್ರರಂಗದಲ್ಲಂತೂ ಪ್ರತಿದಿನವೂ ಕೊರೊನಾಘಾತವೇ. ಒಬ್ಬರು.. ಇಬ್ಬರು.. ಮತ್ತೊಬ್ಬರು.. ಹೀಗೆ.. ಇದರ ನಡುವೆ ನಟ ಕೋಮಲ್, ಕೊರೊನಾಗೆ ತುತ್ತಾಗಿ ಅತೀವ ಸಂಕಷ್ಟಕ್ಕೂ ಸಿಲುಕಿ ಇದೀಗ ಗೆದ್ದು ಬಂದಿದ್ದಾರೆ.

    ನಟ ಕೋಮಲ್ ಅವರಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿತ್ತು. ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಡಿತ್ತು. ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿ ಕಾವಲಿಗೆ ನಿಂತಿದ್ದರು ಅಣ್ಣ ಜಗ್ಗೇಶ್. ಕೊರೊನಾ ಇದ್ದ ಕಾರಣ ದೂರದಿಂದ ನೋಡುವಂತೆಯೂ ಇರಲಿಲ್ಲ. ಎಲ್ಲ ಭಾರವನ್ನೂ ಗುರುರಾಯರ ಮೇಲೆ ಹಾಕಿದ್ದ ಜಗ್ಗೇಶ್ ಅವರಿಗೆ ಕೊನೆಗೂ ನಿರಾಳತೆ ಸಿಕ್ಕಿದೆ. ಕೋಮಲ್ ಇನ್ನೂ ಕೊರೊನಾದಿಂದ ಗುಣಮುಖವಾಗಿಲ್ಲ. ಆದರೆ, ಉಸಿರಾಟದ ಸಮಸ್ಯೆಯ ಅಪಾಯದಿಂದ ಪಾರಾಗಿದ್ದಾರೆ. ಎಲ್ಲವೂ ಗುರುರಾಯರ ಕೃಪೆ ಎಂದಿದ್ದಾರೆ ಜಗ್ಗೇಶ್.

     

  • ಕೋಮಲ್ 2020

    ಕೋಮಲ್ 2020

    2020. ಯೆಸ್, ಇದು ಕೋಮಲ್ ಅಭಿನಯಿಸುತ್ತಿರೋ ಹೊಸ ಸಿನಿಮಾ. ಟಿ.ಆರ್.ಚಂದ್ರಶೇಖರ್ ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಕೋಮಲ್ ಹುಟ್ಟುಹಬ್ಬದ ದಿನ ರಿಲೀಸ್ ಆಗಿದೆ. 2020ರಲ್ಲಿ ಲಾಕ್ ಡೌನ್ ಸಂದರ್ಭದ ಬೆಳವಣಿಗೆಗಳನ್ನೇ ಇಟ್ಟುಕೊಂಡು ರೂಪಿಸಿರುವ ಕಥೆ 2020ಯಲ್ಲಿದೆ.

    99% ಹಾಸ್ಯ, 1% ಎಮೋಷನ್ ಇರುವ ಕಥೆ ಇದು. ಲಾಕ್ ಡೌನ್ ಸಮಯದಲ್ಲಿ ಸಿಲುಕಿಕೊಳ್ಳೋ ನಮ್ಮ ನಾಯಕ, ಅವುಗಳಿಂದ ಹೇಗೆ ಬಚಾವ್ ಆಗಿ ಬರುತ್ತಾನೆ ಎನ್ನುವುದೇ ಚಿತ್ರದ ಕಥೆ ಎಂದಿದ್ದಾರೆ ಡೈರೆಕ್ಟರ್ ರಾಜಶೇಖರ್. ರಾಜಶೇಖರ್ ಅವರು ಇದುವರೆಗೆ ಡೈಲಾಗ್ ರೈಟರ್ ಆಗಿದ್ದವರು, ಈ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.

    ಕೋಮಲ್‍ಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ ನಟಿಸುತ್ತಿದ್ದಾರೆ. 

  • ಕೋಮಲ್ ಮೇಲೆ ರೌಡಿ ಹಲ್ಲೆ

    actor komal assualted by miscreants

    ನಟ ಕೋಮಲ್ ಮೇಲೆ ರೌಡಿಯೊಬ್ಬ ಹಲ್ಲೆ ನಡೆಸಿದ್ದಾನೆ. ಮಲ್ಲೇಶ್ವರದ ಸಂಪಿಗೆ ರಸ್ತೆಯ ಅಂಡರ್‍ಪಾಸ್ ಬಳಿ ವಿಜಯ್ ಎಂಬ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಬೈಕ್‍ಗೆ ಕಾರ್ ತಾಗಿದ್ದಕ್ಕೆ ಶುರುವಾದ ಜಗಳ, ಹೊಡೆದಾಟಕ್ಕೆ ತಿರುಗಿದೆ. ಮಾತಿನ ಚಕಮಕಿ ಜೋರಾದಾಗ ಬೈಕ್ ಸವಾರ ವಿಜಯ್ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಆಟೋ ಚಾಲಕರೊಬ್ಬರು ಕೋಮಲ್‍ರನ್ನು ಸಮಾಧಾನಪಡಿಸಿ ಕಾರ್ ಬಳಿ ಕರೆದುಕೊಂಡು ಹೋದ ನಂತರ ಬೈಕ್ ಸವಾರನ ಮಾತು ಇನ್ನಷ್ಟು ಜೋರಾಗಿದೆ. ಅವಾಚ್ಯ ಶಬ್ಧಗಳಿಗೆ ತಿರುಗಿದೆ. ಮತ್ತೆ ಗಲಾಟೆ ಶುರುವಾಗಿ ವಿಜಯ್ ಕೋಮಲ್ ಮುಖಕ್ಕೆ ಗುದ್ದಿದ್ದಾನೆ. ಸ್ಥಳೀಯ ಆಟೋ ಚಾಲಕರೇ ಕೋಮಲ್‍ರನ್ನು ರಕ್ಷಿಸಿದ್ದಾರೆ.

    ಕೋಮಲ್ ಮೂಗು, ತುಟಿಯಲ್ಲಿ ರಕ್ತ ಬಂದಿದ್ದು ಚಿಕಿತ್ಸೆ ಪಡೆದಿದ್ದಾರೆ. ಕೋಮಲ್ ಅಣ್ಣ ಜಗ್ಗೇಶ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ರೌಡಿಗಳನ್ನು ಸುಮ್ಮನೆ ಬಿಡೋದಿಲ್ಲ ಎಂದು ಗುಡುಗಿದ್ದಾರೆ.

    ಹೇ.. ನಿಂದು ಜಾಸ್ತಿ ಆಯ್ತು ಎಂದು ಗಲಾಟೆ ತೆಗೆದ ಬೈಕ್ ಸವಾರ ವಿಜಯ್, ಈ ನಟರಿಗೆ ದುರಹಂಕಾರ ಜಾಸ್ತಿ, ಅದಕ್ಕೇ ಹೊಡೆದೆ ಎಂದು ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾನಂತೆ.  2017, ಆಗಸ್ಟ್ 14ರಂದು ನಟ ಜಗ್ಗೇಶ್ ಪುತ್ರ ಗುರುದತ್ ಮೇಲೆ ಶಿವಶಂಕರ್ ಎಂಬ ವ್ಯಕ್ತಿ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈಗ ಕೋಮಲ್ ಮೇಲೆ ಹಲ್ಲೆಯಾಗಿದೆ.

    Related Articles :-

    Komal Assaulted By Miscreants In Bangalore

  • ಚಾಲೆಂಜ್ ಸ್ವೀಕರಿಸಿದಾಗಲೆಲ್ಲ ಗೆದ್ದಿದ್ದಾರೆ ಕೋಮಲ್..!

    komal talks about his heartfelt jounery

    ಕೋಮಲ್, ಸದ್ಯಕ್ಕೆ ಕೆಂಪೇಗೌಡ-2 ಚಿತ್ರದ ಬಿಡುಗಡೆ ಖುಷಿಯಲ್ಲಿದ್ದಾರೆ. ಸುದೀರ್ಘ ವಿರಾಮದ ನಂತರ ಬರುತ್ತಿರುವ ಕೋಮಲ್ ಅಭಿನಯದ ಸಿನಿಮಾ, ಶಂಕರೇಗೌಡರು ನಿರ್ಮಿಸಿರುವ ಸಿನಿಮಾ ಅಷ್ಟೇ ಅಲ್ಲ, ಸುದೀಪ್ ಅಭಿನಯದಲ್ಲಿ ಸೂಪರ್ ಹಿಟ್ ಆಗಿದ್ದ ಕೆಂಪೇಗೌಡ ಟೈಟಲ್‍ನ ಭಾರ. ಎಲ್ಲವೂ ದೊಡ್ಡ ಚಾಲೆಂಜುಗಳೇ. ವಿಶೇಷವೇನು ಗೊತ್ತೇ.. ಚಾಲೆಂಜ್ ತೆಗೆದುಕೊಂಡಾಗಲೆಲ್ಲ ಕೋಮಲ್ ಗೆದ್ದಿದ್ದಾರೆ.

    ನಾನು ಆರಂಭದಲ್ಲಿ ಕೆಲವು ವಿಲನ್ ರೋಲ್ ಮಾಡಿದೆ. ಕಾಮಿಡಿ ಏನೆಂಬುದೇ ಗೊತ್ತಿರಲಿಲ್ಲ. ಕುರಿಗಳು ಸಾರ್ ಕುರಿಗಳು ಚಿತ್ರದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನನಗೆ ಬೈದಿದ್ದರು. ದೊಡ್ಡಣ್ಣ ಅವರಂತೂ ಅಷ್ಟು ದೊಡ್ಡ ಕಲಾವಿದನ ತಮ್ಮನಾಗಿ ಕಾಮಿಡಿ ಮಾಡೋಕೆ ಬರೊಲ್ವಾ ಎಂದು ಕಪಾಳಕ್ಕೆ ಹೊಡೆದಿದ್ದರು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ಕುರಿಗಳು ಸಾರ್ ಕುರಿಗಳು ಬಂದ ಮೇಲೆ ಸ್ಟಾರ್ ಆದೆ.

    ಕಾಮಿಡಿಗಷ್ಟೆ ಸೀಮಿತ ಎಂದುಕೊಂಡಿದ್ದಾಗ ಶಿವಣ್ಣನ ಜೊತೆ ತವರಿಗೆ ಬಾ ತಂಗಿ ಸಿನಿಮಾ ಮಾಡಿದೆ. ಅದು ಸೆಂಟಿಮೆಂಟ್ ಪಾತ್ರ. ಅದಕ್ಕೆ ರಾಜ್ಯ ಪ್ರಶಸ್ತಿ ಗೆದ್ದುಕೊಂಡೆ.

    ಅವಕಾಶ ಕಮ್ಮಿ ಆದಾಗ ಗರಗಸ ಚಿತ್ರದಲ್ಲಿ ಹೀರೋ ಆಗಿ ಮಾಡಿದೆ. ಅದು ಹಿಟ್ ಆಯ್ತು. ಹೀರೋ ಆಗಿ ಗೆದ್ದೆ.

    ಈಗ ಕೆಂಪೇಗೌಡ-2 ಮಾಡಿದ್ದೇನೆ. ಕಾಮಿಡಿ ಪೀಸ್‍ಗೆ ಇವೆಲ್ಲ ಬೇಕಾ ಎಂದು ಕೆಲವರು ಕಾಲೆಳೆಯುತ್ತಿದ್ದಾರೆ. ಅದನ್ನೂ ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ. ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎನ್ನುತ್ತಾರೆ ಕೋಮಲ್. 

  • ಬ್ಯಾಂಕಾಕ್‍ನಲ್ಲಿ ಕಾಣೆಯಾದವರ ಬಗ್ಗೆ ಪ್ರಕಟಣೆ

    rambo 2 director anil starts his new movie

    ದಿಲ್‍ವಾಲಾ, ಕೃಷ್ಣ ರುಕ್ಕು, ರ್ಯಾಂಬೋ-2, ಶಕ್ತಿ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಅನಿಲ್ ಕುಮಾರ್, ಈಗ ಕಾಣೆಯಾದವರ ಬಗ್ಗೆ ಪ್ರಕಟಣೆ ಮಾಡುತ್ತಿದ್ದಾರೆ. ಇದು ಅವರದ್ದೇ ನಿರ್ದೇಶನದ ಹೊಸ ಚಿತ್ರದ ಟೈಟಲ್. ಚಿತ್ರಕ್ಕೆ ಬ್ಯಾಂಕಾಕ್‍ನಲ್ಲಿಯೇ ಮುಹೂರ್ತವಾಗಿದೆ. ಚಿತ್ರದ ಶೂಟಿಂಗ್ 16 ದಿನ ಬ್ಯಾಂಕಾಕ್‍ನಲ್ಲಿಯೇ ನಡೆಯಲಿದೆಯಂತೆ.

    ರವಿಶಂಕರ್, ರಂಗಾಯಣ ರಘು, ಚಿಕ್ಕಣ್ಣ, ತಬಲಾ ನಾಣಿ ನಟಿಸುತ್ತಿರುವ ಚಿತ್ರಕ್ಕೆ ನವೀನ್ ಕುಮಾರ್ ನಿರ್ಮಾಪಕ