` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಹುಟ್ಟುಹಬ್ಬದ ಸಂಭ್ರಮವನ್ನೇ ಬಿಟ್ಟ ಜಗ್ಗೇಶ್

    ಹುಟ್ಟುಹಬ್ಬದ ಸಂಭ್ರಮವನ್ನೇ ಬಿಟ್ಟ ಜಗ್ಗೇಶ್

    ಮಾರ್ಚ್ 17. ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬವಷ್ಟೇ ಅಲ್ಲ, ಜಗ್ಗೇಶ್ ಅವರ ಹುಟ್ಟುಹಬ್ಬವೂ ಅವತ್ತೇ. ಹೀಗಾಗಿ ಪರಸ್ಪರ ವಿಷ್ ಮಾಡುವ ಸಂಪ್ರದಾಯ ಇಬ್ಬರಲ್ಲೂ ಇತ್ತು. ಪ್ರತೀ ವರ್ಷ ಪುನೀತ್ ಜಗ್ಗೇಶ್ ಅವರಿಗೆ ಕರೆ ಮಾಡಿ ಅಣ್ಣಾ.. ಹ್ಯಾಪಿ ಬರ್ತ್ ಡೇ ಎನ್ನುತ್ತಿದ್ದರು.

    ಈ ವರ್ಷ ಪುನೀತ್ ಇಲ್ಲ. 59ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮನಸ್ಸೂ ಇಲ್ಲ. ಪ್ರತೀ ವರ್ಷ ಮಾರ್ಚ್ 17ರಂದು ಬರುತ್ತಿದ್ದ ಪುನೀತ್ ಕರೆ ಅಣ್ಣಾ ಹ್ಯಾಪಿ ಬರ್ತ್ ಡೇ ಎಂದು. ಮತ್ತೆ ಎಂದೂ ಬರದಂತಾಯಿತು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್. ಮಾರ್ಚ್ 17ರಂದು ಜೇಮ್ಸ್ ರಿಲೀಸ್. ಅಪ್ಪು ಇರಲ್ಲ. 

  • ಹೆಣ್ಣು ಮಕ್ಕಳ ಸ್ಮಗ್ಲಿಂಗ್ ತಡೆಗೆ ಕೈಜೋಡಿಸಿದ ಅಪ್ಪು

    puneeth lends voice to amoli movie

    ಪುನೀತ್ ರಾಜ್‍ಕುಮಾರ್, ಅಮೋಲಿ ಎಂಬ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಆ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡುವುದಕ್ಕೆ ಕಾರಣ, ಆ ಡಾಕ್ಯುಮೆಂಟರಿಯಲ್ಲಿದ್ದ ಕಥೆ ಮತ್ತು ಸಂದೇಶ. ಈ ಡಾಕ್ಯುಮೆಂಟರಿಯಲ್ಲಿರೋದು ಹೆಣ್ಣು ಮಕ್ಕಳ ಕಳ್ಳಸಾಗಾಣಿಕೆ ವಿರುದ್ಧದ ಜಾಗೃತಿಯ ಕಥೆ. ಹೀಗಾಗಿಯೇ ಈ ಡಾಕ್ಯುಮೆಂಟರಿಗೆ ಧ್ವನಿ ನೀಡಿದ್ದಾರೆ ಪುನೀತ್. ಅಷ್ಟೇ ಅಲ್ಲ, ತಮ್ಮದೇ ಪಿಆರ್‍ಕೆ ಆಡಿಯೋದಿಂದ ಡಾಕ್ಯುಮೆಂಟರಿಯನ್ನು ರಿಲೀಸ್ ಕೂಡಾ ಮಾಡಿದ್ದಾರೆ.

    ಜಾಸ್ಮಿನ್ ಕೌರ್ ಮತ್ತು ಅವಿನಾಶ್ ರಾಯ್ ಎಂಬುವರು ನಿರ್ದೇಶಿಸಿರುವ ಡಾಕ್ಯುಮೆಂಟರಿಯನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬೇಕು ಎನ್ನುವುದೇ ನನ್ನ ಉದ್ದೇಶ. ನನ್ನ ಧ್ವನಿಯಿಂದಾಗಿ ಹೆಚ್ಚು ಜನಕ್ಕೆ ರೀಚ್ ಆದರೆ, ಜಾಗೃತಿ ಮೂಡಿದರೆ ಅದು ಕೊಡುವ ಸಂತೃಪ್ತಿಯೇ ಬೇರೆ ಎಂದಿದ್ದಾರೆ ಪುನೀತ್. 

    ಅಂದಹಾಗೆ ಇದೇ ಡಾಕ್ಯುಮೆಂಟರಿ ಬೇರೆ ಭಾಷೆಯಲ್ಲೂ ಬಂದಿದೆ. ತಮಿಳಿನಲ್ಲಿ ಕಮಲ್‍ಹಾಸನ್, ತೆಲುಗಿನಲ್ಲಿ ನಾನಿ, ಹಿಂದಿಯಲ್ಲಿ ರಾಜ್‍ಕುಮಾರ್ ರಾವ್, ಮರಾಠಿಯಲ್ಲಿ ಸಚಿನ್ ಖೇಡ್ಕರ್ ಡಾಕ್ಯುಮೆಂಟರಿಯನ್ನು ನಿರೂಪಣೆ ಮಾಡಿದ್ದಾರೆ.

    ಪುನೀತ್ ಅವರ ಜಾಕಿ ಚಿತ್ರದಲ್ಲೂ ಕೂಡಾ ಇದೇ ಕಥೆಯಿತ್ತು. ಸಾಮಾಜಿಕ ಜಾಗೃತಿ ಮೂಡಿಸುವ ವಿಚಾರ ಬಂದಾಗ ಇಲ್ಲ ಎನ್ನಲು ಸಾಧ್ಯವಾಗಲಿಲ್ಲ. ನಮ್ಮ ಸಂಸ್ಥೆಯಿಂದಲೂ ಇಂತಹ ಜಾಗೃತಿ ಮೂಡಿಸುವ ಡಾಕ್ಯುಮೆಂಟರಿ ಮಾಡುವ ಆಲೋಚನೆಯಿದೆ ಎಂದು ಹೇಳಿಕೊಂಡಿದ್ದಾರೆ ಪುನೀತ್.

  • ಹೆಬ್ಬುಲಿ ನಿರ್ಮಾಪಕರ ಜೊತೆ ಅಪ್ಪು ಹೊಸ ಚಿತ್ರ - ಯಾವ ಕಥೆ ಇಷ್ಟವಾಗುತ್ತೋ..?

    Hebbuli producer & puneeth team up in 2018

    ಎಸ್ಜಿಬಿ ಮೈನ್ಸ್ & ಕನ್ಸ್ಟ್ರಕ್ಷನ್ನ ಮಾಲೀಕ ಉಮಾಪತಿ, ಹೆಬ್ಬುಲಿ ಸಿನಿಮಾ ಮೂಲಕ ಖ್ಯಾತರಾದವರು. ಈಗ ಉಮಾಪತಿ ಪುನೀತ್ ಜೊತೆಗೊಂದು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಚಿತ್ರ ಸೆಟ್ಟೇರೋದು 2018ರಲ್ಲಿ. ಪುನೀತ್ಗೆ ಈಗ ಮೂವರು ನಿರ್ದೇಶಕರು

    ಕಥೆ ಹೇಳುತ್ತಿದ್ದಾರಂತೆ. ಆ ಮೂವರಲ್ಲಿ ಯಾರ ಕಥೆ ಇಷ್ಟವಾಗುತ್ತೋ, ಅದು ಸಿನಿಮಾ ಆಗಲಿದೆ. ಆ ಚಿತ್ರದಲ್ಲಿ ಪುನೀತ್, ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದೂ ಲೀಕ್ ಆಗಿದೆ. ಸದ್ಯಕ್ಕೆ ಆಂಜನಿಪುತ್ರ ಚಿತ್ರದಲ್ಲಿ ಬ್ಯುಸಿಯಾಗಿರುವ

    ಪುನೀತ್ ರಾಜ್ಕುಮಾರ್, ನಂತರ ಇನ್ನೆರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಆ ಎರಡೂ ಚಿತ್ರಗಳು ಮುಗಿದ ನಂತರ, 3ನೇ ಸಿನಿಮಾ ಹೆಬ್ಬುಲಿ ನಿರ್ಮಾಪಕರ ಪಾಲಿಗೆ ದಕ್ಕಿದೆ.

     

     

     

  • ಹೊಸ ಚರಿತ್ರೆ ಸೃಷ್ಟಿಸಲಿ ಯುವರತ್ನ - ಬಾದ್‍ಷಾ ಹಾರೈಕೆ

    sudeep wishes yuvaratna puneeth

    ಯುವರತ್ನ.. ಪವರ್ ಆಫ್ ಯೂತ್.. ಇದು ಅಪ್ಪು-ಸಂತೋಷ್-ಹೊಂಬಾಳೆ ಕಾಂಬಿನೇಷನ್‍ನ ಸಿನಿಮಾ. ರಾಜಕುಮಾರ ಚಿತ್ರದಲ್ಲಿ ಹೊಸ ದಾಖಲೆ ಬರೆದಿದ್ದ ಜೋಡಿಗಳು ಮತ್ತೆ ಒಂದಾಗಿವೆ. ಈ ಜೋಡಿ.. ಮತ್ತೊಂದು ಹೊಸ ಇತಿಹಸ ಸೃಷ್ಟಿಸಲಿ. ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯಲಿ ಎಂದು ಶುಭ ಹಾರೈಸಿದ್ದಾರೆ ಕಿಚ್ಚ ಬಾದ್‍ಷಾ ಸುದೀಪ್ ಹಾರೈಕೆ. 

    ಪುನೀತ್ ರಾಜ್‍ಕುಮಾರ್ ಸಿನಿಮಾಗಳು ಸೈಲೆಂಟ್ ಆಗಿಯೇ ಕ್ರೇಜ್ ಸೃಷ್ಟಿಸುತ್ತವೆ. ಅಬ್ಬರವಿಲ್ಲದೆ ಬಂದು, ಬಾಕ್ಸಾಫೀಸ್‍ನಲ್ಲಿ ಅಬ್ಬರಿಸುತ್ತವೆ. ಈಗ ಯುವರತ್ನ ಅನ್ನೋ ಸಿನಿಮಾ.. ಶೂಟಿಂಗ್ ಶುರುವಾಗುವ ಮೊದಲೇ ಕ್ರೇಜ್ ಸೃಷ್ಟಿಸಿದೆ. ಕಾರಣ ಸಿಂಪಲ್.. ಅದು ರಾಜಕುಮಾರ ಜೋಡಿಯ ಪುನರ್‍ಮಿಲನದ ಸಿನಿಮಾ. 

    ಈಗ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಹೊರಬಿಟ್ಟಿರುವುದು ಯುವರತ್ನ ಚಿತ್ರದ ಟೈಟಲ್‍ನ ಮುದ್ದಾದ ಫಾಂಟ್‍ಗಳನ್ನು. ಉಳಿದಂತೆ.. ಚಿತ್ರತಂಡದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನೂ ನಡೆಯುತ್ತಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಸದ್ಯಕ್ಕೆ ಕೆಜಿಎಫ್ ಚಿತ್ರದ ರಿಲೀಸ್‍ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.

  • ಹೊಸ ದಾಖಲೆ ಬರೆಯಲಿದೆ ಕಟಕ ಟ್ರೇಲರ್

    kataka trailer

    ರವಿ ಬಸ್ರೂರ್‌ ನಿರ್ದೇಶನದ 'ಕಟಕ' ಚಿತ್ರದ ಟ್ರೇಲರ್‌ ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ. ಶನಿವಾರ ಸಂಜೆ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಟ್ರೇಲರ್ ರಿಲೀಸ್ ಮಾಡಲಿರುವುದು ಪವರ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್. 

    ಇಲ್ಲಿ ದಾಖಲೆ ಬರೆಯುತ್ತಿರುವುದು ಯಾವ ವಿಚಾರದಲ್ಲಿ ಗೊತ್ತಾ..? ಕಟಕ ಚಿತ್ರದ ಟ್ರೇಲರ್ ಏಕಕಾಲಕ್ಕೆ 13 ಭಾಷೆಗಳಲ್ಲಿ ರಿಲೀಸ್ ಅಗುತ್ತಿದೆ. ಕನ್ನಡ, ತುಳು, ಕೊಡವ, ಹಿಂದಿ, ಮಲಯಾಳಂ, ತಮಿಳು ಸೇರಿದಂತೆ 13 ಭಾಷೆಗಳಲ್ಲಿ ಕಟಕ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

    ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಂದು ಚಿತ್ರದ ಟ್ರೇಲರ್‌ ಅತೀ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    Related Articles :-

    Puneeth and Yash To Release The Trailer of Kataka

  • ಹೊಸ ಬ್ಯಾನರ್, ಹೊಸ ಡೌಟ್ಸು - ಪುನೀತ್ ಉತ್ತರ

    puneeth image

    ಪುನೀತ್ ರಾಜ್‍ಕುಮಾರ್ ಪಿಆರ್‍ಕೆ ಪ್ರೊಡಕ್ಷನ್ಸ್ ಎಂಬ ಹೊಸ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಪುನೀತ್ ಹೊಸ ಬ್ಯಾನರ್ ನಿರ್ಮಿಸಿದರು ಎಂದ ಕೂಡಲೇ ಒಂದಷ್ಟು ಹೊಸ ಅನುಮಾನಗಳು, ಪ್ರಶ್ನೆಗಳು ಎದ್ದಿವೆ. ಆ ರೀತಿಯ ಪ್ರಶ್ನೆಗಳು ಏಳೋದು ಸಹಜ. ಅಂತಹ ಪ್ರಶ್ನೆಗಳಿಗೆಲ್ಲ ಪುನೀತ್ ಉತ್ತರ ಕೊಟ್ಟಿದ್ದಾರೆ. ಇನ್ನೊಂದು ವಿಶೇಷವಿದೆ ಕೇಳಿ. ಪಿಆರ್‍ಕೆ ಪ್ರೊಡಕ್ಷನ್ಸ್ ಎಂದರೆ, ಪುನೀತ್ ರಾಜ್‍ಕುಮಾರ್ ಪ್ರೊಡಕ್ಷನ್ಸ್ ಅಲ್ಲ. ಪಾರ್ವತಮ್ಮ ರಾಜ್‍ಕುಮಾರ್ ಪ್ರೊಡಕ್ಷನ್ಸ್. ಇದು ತಾಯಿಯ ಹೆಸರಲ್ಲಿ ಪುನೀತ್ ಆರಂಭಿಸಿರುವ ಹೊಸ ಚಿತ್ರ ನಿರ್ಮಾಣ ಸಂಸ್ಥೆ.

    ಪ್ರಶ್ನೆ : ವಜ್ರೇಶ್ವರಿಯಿಂದ ಪಿಆರ್‍ಕೆ ಹೇಗೆ ಭಿನ್ನ..? ಇದು ಬೇರೆಯೇ ಸಂಸ್ಥೆನಾ..?

    ಪುನೀತ್ : ಪಿಆರ್‍ಕೆ ಬ್ಯಾನರ್ ಉದ್ಘಾಟನೆಯಾಯಿತು ಎಂದ ಕೂಡಲೇ ವಜ್ರೇಶ್ವರಿ ಸಂಸ್ಥೆಯಿಂದ ದೂರವೇನೂ ಇರಲ್ಲ. ಅದರಂತೆಯೇ ಇದು ಕೂಡಾ ಇನ್ನೊಂದು ಬ್ಯಾನರ್ ಅಷ್ಟೆ. ಮುಂದಿನ ವರ್ಷ ಸ್ವಂತ ಬ್ಯಾನರ್‍ನಲ್ಲೇ ಚಿತ್ರ ನಿರ್ಮಾಣದ ಯೋಚನೆ ಇದೆ. ವಜ್ರೇಶ್ವರಿಯಲ್ಲಾದರೂ ನಿರ್ಮಾಣವಾಗಬಹುದು, ಪಿಆರ್‍ಕೆ ಬ್ಯಾನರ್‍ನಲ್ಲಾದರೂ ನಿರ್ಮಾಣವಾಗಬಹುದು.

    ಪ್ರಶ್ನೆ : ಇನ್ನು ಮುಂದೆ ಬೇರೆ ಬ್ಯಾನರ್‍ಗಳಲ್ಲಿ ನಟಿಸೋದಿಲ್ವಾ..?

    ಪುನೀತ್ : ಹಾಗೇನಿಲ್ಲ. ಬೇರೆ ಬ್ಯಾನರ್‍ಗಳಲ್ಲೂ ನಟಿಸುತ್ತೇನೆ. ನಮ್ಮ ಬ್ಯಾನರ್‍ನಲ್ಲೂ ನಟಿಸುತ್ತೇನೆ.

    ಪ್ರಶ್ನೆ : ನೀವು ನಿರ್ಮಿಸುತ್ತಿರುವ ಚಿತ್ರದಲ್ಲಿ ಬೇರೊಬ್ಬರು ಹೀರೋ ಆಗುವದು ಹೊಸ ಪ್ರಯತ್ನ ಅಲ್ಲವೇ..?

    ಪುನೀತ್ : ಹಾಗೇನಿಲ್ಲ. ಈ ಹಿಂದೆ, ಸುದೀಪ್, ದರ್ಶನ್ ಇಂಥ ಪ್ರಯತ್ನ ಮಾಡಿದ್ದಾರೆ. ನಮ್ಮಲ್ಲೂ ಹೊಸ ಹೊಸ ಪ್ರಯೋಗಗಳಿಗೆ ಜನ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂಥ ಕೆಲಸಕ್ಕೆ ಕೈ ಹಾಕಲು ಧೈರ್ಯವಾಯಿತು.

    ಪ್ರಶ್ನೆ : ನಿಮ್ಮ ಬ್ಯಾನರ್‍ನಿಂದ ಎಂಥ ಸಿನಿಮಾಗಳು ಬರುತ್ತವೆ..?

    ಪುನೀತ್ ; ಕಮರ್ಷಿಯಲ್ ಸಿನಿಮಾಗಳೇ ಬರುತ್ತವೆ. ಪ್ರಯೋಗಾತ್ಮಕ ಕಮರ್ಷಿಯಲ್ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಮನಸ್ಸಿದೆ. ನನ್ನ ಪ್ರಕಾರ, ಸಿನಿಮಾಗಳನ್ನು ಕಮರ್ಷಿಯಲ್, ಆರ್ಟ್ ಎಂದು ವಿಭಜಿಸಲೇಬಾರದು. ಒಂದು ಸಿನಿಮಾ ಎಲ್ಲರಿಗೂ ತಲುಪುವಂತಿರಬೇಕು.

  • ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣ

    ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಅನಾವರಣ

    ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿ ಅನಾವರಣವಾಗಿದೆ. ಆ ಪುತ್ಥಳಿ ಅನಾವರಣ ಮಾಡಿದವರು ಅಣ್ಣ ರಾಘವೇಂದ್ರ ರಾಜಕುಮಾರ್. ಅಪ್ಪು ಪುತ್ಥಳಿಯ ಪಾದಕ್ಕೆ ಮುತ್ತಿಟ್ಟ ರಾಘಣ್ಣ, ಪುತ್ಥಳಿ ಅನಾವರಣಗೊಳಿಸಿದರು. ರಾಘಣ್ಣ ಸ್ಥಿತಪ್ರಜ್ಞರಾಗಿದ್ದರೆ, ಪತ್ನಿ ಮಂಗಳಾ ಕಣ್ಣೀರು ಹಾಕುತ್ತಿದ್ದರು.

    ಅಪ್ಪ ಹೋದಾಗ, ಅಮ್ಮ ಹೋದಾಗ ಏನೂ ಅನಿಸಿರಲಿಲ್ಲ. ಅಪ್ಪು ಹೋದಾಗ ಅನಾಥನಾಗಿಬಿಟ್ಟೆ ಎನಿಸಿತು ಎಂದರು ರಾಘಣ್ಣ. ಆ ಅಪ್ಪು ನಮಗೊಂದಿಷ್ಟು ಜವಾಬ್ದಾರಿ ಹೊರಿಸಿ ಹೋಗಿದ್ದಾನೆ. ಅದನ್ನು ನಿಭಾಯಿಸೋಣ.. ಎಂದು ಕರೆಕೊಟ್ಟರು.

    ನಿರ್ದೇಶಕ ಸಂತೋಷ್ ಆನಂದರಾಮ್, ನಟ ಅಜೇಯ್ ರಾವ್, ಸಚಿವ ಆನಂದ ಸಿಂಗ್, ಪ್ರವೀಣ್ ಸೂರ್ಯ, ಸಂಗೀತ ನಿರ್ದೇಶಕ ಋಷಿ ಹಾಗೂ ಸಾವಿರಾರು ಪುನೀತ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ನಮ್ಮೂರಲ್ಲಿ ಅಪ್ಪು ಪುತ್ಥಳಿ ಅನಾವರಣವಾಗ್ತಿದೆ ಎನ್ನುವುದೇ ನಮಗೆ ಹೆಮ್ಮೆ ಎಂದವರು ಅಜೇಯ್ ರಾವ್. ಇದು ಅಪ್ಪು ಅಡ್ಡಾ ಎಂದು ಘೋಷಿಸಿದ್ದು ಸಂತೋಷ್ ಆನಂದರಾಮ್.

    ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಕೆಲಕಾಲ ನೂಕುನುಗ್ಗಲು ಉಂಟಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಪರದಾಡಿದರು.