` puneeth rajkumar, - chitraloka.com | Kannada Movie News, Reviews | Image

puneeth rajkumar,

  • ರೆಬಲ್ ಸ್ಟಾರ್‍ಗೆ ಬೋಲ್ಡ್ ಆದ ಪವರ್ ಸ್ಟಾರ್

    powerstar clean bold over ambi

    ಅಂಬಿ ನಿಂಗ್ ವಯಸ್ಸಾಯ್ತೋ.. ಸಿನಿಮಾ ಚಿತ್ರಮಂದಿರಗಳಲ್ಲಿ ಝೂಮ್‍ನಲ್ಲಿದೆ. ಬಹುತೇಕ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರೆಲ್ಲ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ಚಿತ್ರವನ್ನು ನೋಡಿರುವ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಂತೂ ಚಿತ್ರವನ್ನು ಬಾಯ್ತುಂಬಾ ಹೊಗಳಿದ್ದಾರೆ. 

    ಮೊದಲ ವಾರದ ಮೊದಲ ದಿನವೇ ಸಿನಿಮಾ ನೋಡುವ ಆಸೆಯಿತ್ತು. ಕೆಲಸದ ಒತ್ತಡದಿಂದಾಗಿ ಆಗಿರಲಿಲ್ಲ. ಸಿನಿಮಾ ನೋಡಿದೆ ಎಂದಿರುವ ಪುನೀತ್, ಅಂಬಿ ನಿಂಗ್ ವಯಸ್ಸಾಯ್ತೋ ಅನ್ನೋದು ಚಿತ್ರದ ಟೈಟಲ್ ಮಾತ್ರ. ಅಂಬರೀಷ್ ಅಂಕಲ್‍ಗೆ ವಯಸ್ಸಾಗಲ್ಲ ಎಂದಿದ್ದಾರೆ. ಅಂಬರೀಷ್ ಮಾಮ ಇನ್ನೂ ಹಲವು ಚಿತ್ರಗಳನ್ನು ಮಾಡಲಿ ಎಂದಿರುವ ಪುನೀತ್, ಸುದೀಪ್, ಗುರುದತ್ ಗಾಣಿಗ, ಅರ್ಜುನ್ ಜನ್ಯ, ದಿಲೀಪ್ ರಾಜ್, ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬರೂ ಈ ಸಿನಿಮಾ ನೋಡಬೇಕು. ನಿಮ್ಮೊಳಗೆ ಇರುವ ಭಾವನೆಗಳು ನಿಮಗೆ ಗೊತ್ತಾಗುತ್ತವೆ ಅನ್ನೋದು ಪವರ್‍ಸ್ಟಾರ್ ಮಾತು. 

  • ಲಕ್ಕಿ ಮ್ಯಾನ್ : ಅಪ್ಪು ದೇವರು ಅಭಿಮಾನಿಗಳ ಸಾಗರ

    ಲಕ್ಕಿ ಮ್ಯಾನ್ : ಅಪ್ಪು ದೇವರು ಅಭಿಮಾನಿಗಳ ಸಾಗರ

    ಲಕ್ಕಿಮ್ಯಾನ್ ಚಿತ್ರ ಇದೇ ವಾರ ರಿಲೀಸ್. ಅಪ್ಪು ಕಡೆಯ ಬಾರಿಗೆ ನಟಿಸಿರುವ ಚಿತ್ರವಿದು. ಸಿನಿಮಾದಲ್ಲಿ ಅಪ್ಪುರನ್ನು ನೋಡೋಕೆ ಸಾಧ್ಯವಾಗೋದು ಇದು ಕಡೆಯ ಬಾರಿ. ಜೊತೆಗೆ ಈ ಚಿತ್ರದಲ್ಲಿ ಅಪ್ಪು ದೇವರಾಗಿ ನಟಿಸಿದ್ದಾರೆ. ಹೀಗಾಗಿಯೇ ಚಿತ್ರ ಬಿಡುಗಡೆಗೆ ಮುನ್ನವೇ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಲಕ್ಕಿಮ್ಯಾನ್ ಚಿತ್ರದಲ್ಲಿ ಹೀರೋ ಡಾರ್ಲಿಂಗ್ ಕೃಷ್ಣ. 777 ಚಾರ್ಲಿ ಖ್ಯಾತಿಯ ಸಂಗಿತಾ ಶೃಂಗೇರಿ ನಾಯಕಿ. ಪ್ರಭುದೇವ ಹಾಗೂ ಅಪ್ಪು ಅವರ ನೃತ್ಯ ಚಿತ್ರದ ಹೈಲೈಟ್. ನೆಕ್ಸ್ಟ್ ಬರೋದು ಗಂಧದಗುಡಿ. ಸಾಕ್ಷ್ಯಚಿತ್ರ. ಅಪ್ಪು ಅವರನ್ನು ಸಿನಿಮಾದಲ್ಲಿ ನೋಡೋಕೆ ಇದು ಕಡೆಯ ಅವಕಾಶ ಎಂಬ ಕಾರಣಕ್ಕೆ ಆನ್‍ಲೈನ್‍ಲ್ಲಿ ಬುಕ್ಕಿಂಗ್ ಜೋರಾಗಿದೆ.

    ಪಿ.ಆರ್.ಮೀನಾಕ್ಷಿ ಸುಂದರಂ ಹಾಗೂ ಆರ್.ಸುಂದರ ಕಾಮರಾಜ್ ನಿರ್ಮಾಣದ ಚಿತ್ರಕ್ಕೆ ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನವಿದೆ. ನಿರ್ಮಾಪಕ ಜಾಕ್ ಮಂಜು ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಥಿಯೇಟರುಗಳಲ್ಲಿ ಆಗಲೇ ಕಟೌಟುಗಳ ಭರಾಟೆ ಜೋರಾಗಿದೆ. ರಾಯರ ದಿನವಾದ ಗುರುವಾರವೇ ಸಿನಿಮಾ ರಿಲೀಸ್ ಆಗುತ್ತಿದ್ದು ರಾಯರ ಕೃಪಾಶೀರ್ವಾದವೂ ಚಿತ್ರದ ಮೇಲಿದೆ ಎನ್ನುವುದು ಭಕ್ತರ ನಂಬಿಕೆ.

  • ಲಕ್ಕಿಮ್ಯಾನ್ : ಅಪ್ಪು ದೇವರ ದರ್ಶನ ಎಷ್ಟು ಹೊತ್ತಿರುತ್ತೆ?

    ಲಕ್ಕಿಮ್ಯಾನ್ : ಅಪ್ಪು ದೇವರ ದರ್ಶನ ಎಷ್ಟು ಹೊತ್ತಿರುತ್ತೆ?

    ಲಕ್ಕಿಮ್ಯಾನ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶನಿ ಪ್ರಕಾಶ್ ಪ್ರಧಾನ ಪಾತ್ರದಲ್ಲಿರೋ ಈ ಚಿತ್ರದ ಅಪ್ಪು ಅಭಿನಯಿಸಿರುವ ಕೊನೆಯ ಸಿನಿಮಾ. ಪುನೀತ್ ರಾಜಕುಮಾರ್ ಅವರ ಜೊತೆಗೆ ಪ್ರಭುದೇವ ಒಟ್ಟಿಗೇ ನಟಿಸಿರುವ ಸಿನಿಮಾ. ಅಂದಹಾಗೆ ಇಡೀ ಸಿನಿಮಾ ಅವಧಿ 151 ನಿಮಿಷ. ಇದರಲ್ಲಿ 40ಕ್ಕೂ ಹೆಚ್ಚು ನಿಮಿಷ ಅವಧಿ ಪುನೀತ್ ತೆರೆ ಮೇಲಿರುತ್ತಾರೆ.

    ಪುನೀತ್ ರಿಯಲ್ ಲೈಫಲ್ಲಿ ಹೇಗಿದ್ದರೋ.. ತೆರೆಯ ಮೇಲೂ ಹಾಗೆಯೇ ಇರುತ್ತಾರೆ. ದೇವರಾಗಿ.. ದೇವರಂತೆ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ. ದಯೆ, ಕೇರಿಂಗ್, ನಿಷ್ಕಲ್ಮಷ ಪ್ರೀತಿ ಎಲ್ಲಕ್ಕಿಂತ ಹೆಚ್ಚಾಗಿ ನಗು.. ಮಾಸದ ಆ ನಗು ಇಡೀ ಚಿತ್ರದ ತುಂಬಾ ಇರುತ್ತದೆ. ಅವರನ್ನು ಆ ಪಾತ್ರದಲ್ಲಿ ನೋಡುತ್ತಿದ್ದರೆ ಅವರು ಅಭಿನಯಿಸುತ್ತಾರೆ ಎಂದೆನಿಸುವುದಿಲ್ಲ ಎನ್ನುತ್ತಾರೆ ನಾಯಕ ಡಾರ್ಲಿಂಗ್ ಕೃಷ್ಣ.

    ನಾಗೇಂದ್ರ ಪ್ರಸಾದ್ ನಿರ್ದೆಶನದ ಈ ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ಈ ಹಿಂದೆಯೂ ನಟಿಸಿದ್ದೇನೆ. ಆದರೆ ನಾನು ಹೀರೋ ಆಗಿರೋ ಚಿತ್ರದಲ್ಲಿ ಅಪ್ಪು ಸರ್ ಅತಿಥಿಯಾಗಿ ನಟಿಸುವುದು ನನ್ನ ಅದೃಷ್ಟ. ಈ ಚಿತ್ರದಲ್ಲಿ ಅವರದ್ದು ದೇವರ ಪಾತ್ರ. ಅವರು ನಟಿಸಿಲ್ಲ. ಹೇಗಿದ್ದರೋ ಹಾಗೆಯೇ ಇದ್ದಾರೆ ಎನ್ನುವುದು ಡಾರ್ಲಿಂಗ್ ಕೃಷ್ಣ ಮಾತು.

    ಸಿನಿಮಾ ಇದೇ ಸೆಪ್ಟೆಂಬರ್ 9ಕ್ಕೆ ತೆರೆ ಕಾಣಲಿದೆ.

  • ಲಕ್ಕಿಮ್ಯಾನ್ : ದೇವರ ಅದೊಂದು ಡೈಲಾಗ್'ಗೆ ಕಣ್ಣೀರಿಟ್ಟ ಪುನೀತ್ ಫ್ಯಾನ್ಸ್

    ಲಕ್ಕಿಮ್ಯಾನ್ : ದೇವರ ಅದೊಂದು ಡೈಲಾಗ್'ಗೆ ಕಣ್ಣೀರಿಟ್ಟ ಪುನೀತ್ ಫ್ಯಾನ್ಸ್

    ಬಾಲ್ಯದ ಗೆಳತಿಯನ್ನೇ ಮದುವೆಯಾಗುವ ನಾಯಕನಿಗೆ, ಅವಳ ಜೊತೆ  ರೊಮ್ಯಾನ್ಸ್ ಮಾಡುವ ಪ್ರೀತಿಯೇ ಹುಟ್ಟುವುದಿಲ್ಲ. ಒಳ್ಳೆ ಫ್ರೆಂಡ್ಸ್ ಆಗಿರ್ತಾರೆ. ಈ ನಡುವೆ ಅವನ ಸೀನಿಯರ್ ಕ್ರಷ್ ಒಬ್ಬಳು ಸಿಗುತ್ತಾಳೆ. ಕ್ರಷ್ ಲವ್ವಾಗುತ್ತೆ. ಇದರ ನಡುವೆ ಅವನು ಇಷ್ಟಪಡುವ ಮನಸ್ಸುಗಳಿಗೆ ನೋವಾಗಿರುತ್ತೆ. ಆಗ ದೇವರು ಅವನಿಗೊಂದು ಚಾನ್ಸ್ ಕೊಡುತ್ತಾನೆ.

    ನಿನಗೆ ಇನ್ನೊಂದು ಲೈಫ್ ಕೊಡ್ತಾ ಇದ್ದೀನಿ. ನೀನು ಪ್ರೀತಿಸುವ ಮನಸ್ಸುಗಳನ್ನೆಲ್ಲ ಮಾಡಿರುವ ತಪ್ಪುಗಳನ್ನೆಲ್ಲ ಸರಿಪಡಿಸಿಕೋ.. ಎನ್ನುತ್ತಾನೆ ದೇವರು. ನಾಯಕನಿಗೆ ಪುನಃ ಹೊಸ ಲೈಫ್ ಪ್ರಾಪ್ತಿ. ಸಿನಿಮಾದಲ್ಲಿ ದೇವರಾಗಿ ಬರುವುದು ಪುನೀತ್ ರಾಜಕುಮಾರ್.

    ಲಕ್ಕಿಮ್ಯಾನ್ ನೋಡಿದ ಅಪ್ಪು ಅಭಿಮಾನಿಗಳು ಕಣ್ಣೀರಿಟ್ಟಿದ್ದೇ ಅದಕ್ಕೆ. ಪುನೀತ್ ಇನ್ನಿಲ್ಲ ಎನ್ನುವುದನ್ನು ಇವತ್ತಿಗೂ ನಂಬದ ಸಾವಿರಾರು ಅಭಿಮಾನಿಗಳಿದ್ದಾರೆ. ಅದರ ಮಧ್ಯೆ ದೇವರು ಯಾರ್ಯಾರಿಗೋ ಒಂದು ಚಾನ್ಸ್ ಕೊಡ್ತಾನೆ. ನಮ್ಮ ಅಪ್ಪುಗೆ ಒಂದು ಚಾನ್ಸ್ ಕೊಡೋಕೆ ಆಗ್ತಾ ಇರಲಿಲ್ವಾ ಎಂದು ದೇವರನ್ನು ಬೈದುಕೊಳ್ಳೋ ಅಭಿಮಾನಿಗಳಿಗೂ ಲೆಕ್ಕವಿಲ್ಲ. ಅಂತಾದ್ರಲ್ಲಿ ಲಕ್ಕಿಮ್ಯಾನ್ ಚಿತ್ರದಲ್ಲಿ ಸ್ವತಃ ದೇವರ ಪಾತ್ರದಲ್ಲಿ ನಟಿಸಿರುವ ಪುನೀತ್ ಇನ್ನೊಂದು ಚಾನ್ಸ್ ಕೊಡ್ತೇನೆ ಎನ್ನುವಾಗ ಪುನೀತ್ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ.

    ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷನಿ ಪ್ರಕಾಶ್, ನಾಗಭೂಷಣ್, ಸಾಧುಕೋಕಿಲ ಅಭಿನಯದ ಲಕ್ಕಿಮ್ಯಾನ್ ಚಿತ್ರ ಓ ಮೈ ಕಡವುಳೆ ಚಿತ್ರದ ರೀಮೇಕ್. ನಾಗೇಂದ್ರ ಪ್ರಸಾದ್ ನಿರ್ದೇಶಕ.

  • ಲಕ್ಕಿಮ್ಯಾನ್ ಟೀಸರ್ : ಅದೊಂದು ಡೈಲಾಗ್ ಮತ್ತೆ ಭಾವುಕರನ್ನಾಗಿಸಿತು..

    ಲಕ್ಕಿಮ್ಯಾನ್ ಟೀಸರ್ : ಅದೊಂದು ಡೈಲಾಗ್ ಮತ್ತೆ ಭಾವುಕರನ್ನಾಗಿಸಿತು..

    ನಿನಗೆ ನಿನ್ನ ತಪ್ಪುಗಳನ್ನೆಲ್ಲ ತಿದ್ದಿಕೊಳ್ಳೋಕೆ ಸೆಕೆಂಡ್ ಚಾನ್ಸ್ ಕೊಡ್ತೀನಿ..

    ಲಕ್ಕಿಮ್ಯಾನ್ ಟೀಸರ್‍ನಲ್ಲಿ ಬರೋ ಡೈಲಾಗ್ ಅದು. ಆ ಸಂಭಾಷಣೆ ಹೇಳೋದು ಅಪ್ಪು. ಆ ಡೈಲಾಗ್ ಕೇಳಿದವರಿಗೆಲ್ಲ ಥಟ್ಟನೆ ನೆನಪಾಗೋದು.. ಅಪ್ಪುಗೆ ದೇವರು ಒಂದು ಚಾನ್ಸ್ ಕೊಡಬೇಕಿತ್ತು ಅನ್ನೋದು. ಲಕ್ಕಿಮ್ಯಾನ್ ಚಿತ್ರದ ಟೀಸರ್ ಹೊರಬಿದ್ದಾಗಿದೆ. ಚಿತ್ರದಲ್ಲಿ ಪುನೀತ್`ದು ದೇವರ ಪಾತ್ರ. ಅಭಿಮಾನಿಗಳ ಕಣ್ಣಲ್ಲಿ ದೇವರೇ ಆಗಿರುವ ಅಪ್ಪು.. ನಟಿಸಿರುವ ಕೊನೆಯ ಚಿತ್ರವಿದು. ಹೀರೋ ಆಗಿ ನಟಿಸಿದ್ದ ಕೊನೆಯ ಚಿತ್ರ ಜೇಮ್ಸ್ ರಿಲೀಸ್ ಆಗಿ ಬಾಕ್ಸಾಫೀಸ್‍ನಲ್ಲೂ ಗೆದ್ದಾಯ್ತು. ಈಗ ಲಕ್ಕಿಮ್ಯಾನ್ ಸರದಿ.

    ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಚಿತ್ರವಿದು. ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಹನಿ ಪ್ರಕಾಶ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಪ್ರಭುದೇವ ಜೊತೆ ಸ್ಟೆಪ್ಸ್ ಕೂಡಾ ಹಾಕಿದ್ದಾರೆ. ಇದು ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್. ಪಿ.ಆರ್. ಮೀನಾಕ್ಷಿ ಸುಂದರಂ ಮತ್ತು ಆರ್. ಸುಂದರ ಮೀನಾಕ್ಷಿ ನಿರ್ಮಿಸಿರುವ ಚಿತ್ರ ಆಗಸ್ಟ್‍ನಲ್ಲಿ ರಿಲೀಸ್ ಆಗೋಕೆ ಸಿದ್ಧವಾಗಿದೆ.

  • ಲಂಬೋದರನ ಹಾಡಿಗೆ ಪವರ್ ಸ್ಟಾರ್ ಪವರ್

    lambodara lyrical video song launched

    ಲಂಬೋದರ ಬಸವನಗುಡಿ ಬೆಂಗಳೂರು. ಯೋಗಿ ಅಭಿನಯದ ಹೊಸ ಸಿನಿಮಾ. ಪಕ್ಕಾ ಕಾಮಿಡಿ ಸಬ್ಜೆಕ್ಟ್‍ನ ಚಿತ್ರದ ಲಂಬೋದರ ಲೂಸ್ ಆಗೋದ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ರಿಲೀಸ್ ಮಾಡಿದ್ದಾರೆ.

    ಹಾಡು ಬಿಡುಗಡೆ ವೇಳೆ ಜಿಂಕೆ ಮರೀನಾ ಹಾಡನ್ನು ನೆನಪಿಸಿಕೊಂಡ ಪುನೀತ್, ಈ ಹಾಡಿನಲ್ಲಿ ಯೋಗಿ ಡ್ಯಾನ್ಸ್ ಮಾಡಿಲ್ಲ ಅನ್ನೋದೇ ಬೇಸರ ಎಂದರು. ಕೃಷ್ಣರಾಜ್ ಅಧಿಕಾರಿ ನಿರ್ದೇಶನದ ಸಿನಿಮಾಗೆ ಆಕಾಂಕ್ಷ ನಾಯಕಿ.  ವಿಶ್ವೇಶ್ವರ ಮತ್ತು ರಾಘವೇಂದ್ರ ಭಟ್ ನಿರ್ಮಾಣದ ಚಿತ್ರವಿದು.

  • ಲವ್ ಯೂ ಅಪ್ಪು ಸರ್ ಅಂದ್ರು ಶ್ರದ್ಧಾ..!

    shraddha feels happy wth

    ಪುನೀತ್ ರಾಜ್‍ಕುಮಾರ್ ಅವರನ್ನು ಕಣ್ಣಾರೆ ಕಂಡವರು, ಜೊತೆಯಲ್ಲಿ ನೋಡಿದವರಿಗೆ ಒಂದು ಶಾಕ್ ಖಂಡಿತಾ ಇರುತ್ತೆ. ಎಷ್ಟೆಂದರೂ ಡಾ.ರಾಜ್ ಪುತ್ರ, ಹ್ಯಾಟ್ರಿಕ್ ಹೀರೋ ತಮ್ಮ, ಸ್ವತಃ ಸ್ಟಾರ್ ನಟ...ಹೀಗೆಲ್ಲ ಇರುವಾಗ ಸ್ವಲ್ಪವಾದರೂ ಅಹಂ ಇದ್ದೇ ಇರುತ್ತೆ ಎಂದುಕೊಂಡವರಿಗೆ ಮೊದಲ ಶಾಕ್ ಸಿಗೋದು ಪುನೀತ್ ಅವರ ಸರಳತೆಯದ್ದು. ಪುನೀತ್ ಅವರ ಸರಳತೆ, ಸಜ್ಜನಿಕೆಗೆ ಮರುಳಾಗದವರೇ ಇಲ್ಲ. ಇದರಿಂದ ಶ್ರದ್ಧಾ ಶ್ರೀನಾಥ್ ಸಹ ಹೊರತಾಗಿಲ್ಲ.

    ಇತ್ತೀಚೆಗೆ ಏರ್‍ಪೋರ್ಟ್‍ವೊಂದರಲ್ಲಿ ಶ್ರದ್ಧಾ ಅವರಿಗೆ ಪುನೀತ್ ಆಕಸ್ಮಿಕವಾಗಿ ಎದುರಾಗಿದ್ದಾರೆ. ಅವರ ಜೊತೆ ಮಾತನಾಡಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಶ್ರದ್ಧಾಗೆ, ಪುನೀತ್ ಅವರ ಸಿಂಪ್ಲಿಸಿಟಿ ಇಷ್ಟವಾಗಿಬಿಟ್ಟಿದೆ. ಆ ಸೆಲ್ಫಿಯನ್ನು ಪೋಸ್ಟ್ ಮಾಡಿರುವ ಶ್ರದ್ಧಾ, ನನ್ನ ಮುಖ ನೋಡಿದರೇ ನಿಮಗೆ ಅರ್ಥವಾಗಿರಬಹುದು. ಖುಷಿಯೇ ಖುಷಿ. ಪುನೀತ್ ನನ್ನ ಜೊತೆ ಮಾತನಾಡಿದರು. ನನ್ನ ಬಗ್ಗೆ ಅವರು ಒಳ್ಳೆಯ ಮಾತು ಹೇಳಿದರು. ಅವರು ಒಬ್ಬ ಸ್ಟಾರ್, ನನಗೆ ಅವನ್ನೆಲ್ಲ ಹೇಳಬೇಕಾಗಿಯೇನೂ ಇರಲಿಲ್ಲ. ಪವರ್‍ಸ್ಟಾರ್ ಮತ್ತು ಸ್ಟಾರ್‍ಗೆ ಇರುವ ವ್ಯತ್ಯಾಸ ಇದು. ಅವರ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಅವರ ಭೇಟಿಯಿಂದ ಒಂದು ಸ್ಪಷ್ಟವಾಯಿತು. ಅವರದ್ದು ಬಂಗಾರದಂತಾ ಮನಸ್ಸು. ಲವ್ ಯೂ ಅಪ್ಪು ಸಾರ್ ಎಂದಿದ್ದಾರೆ ಶ್ರದ್ಧಾ.

  • ವಿಕ್ರಮ ಬೇತಾಳನನ್ನು ನೆನಪಿಸಿದ ಯುವರತ್ನ ಪುನೀತ್

    yuvaratna poster remonds of tales from vikram betal

    ವಿಕ್ರಮ ಬೇತಾಳ ಕಥೆಗಳನ್ನು ಓದಿರುವವರಿಗೆ ತಕ್ಷಣ ಆ ಕಥೆಯ ಚಿತ್ರ ನೆನಪಾದರೂ ಅಚ್ಚರಿಯಿಲ್ಲ. ಬೇತಾಳವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವ ವಿಕ್ರಮನ ಫೋಟೋ ಚಂದಮಾಮ ಮ್ಯಾಗಜಿನ್‍ನ ಆಕರ್ಷಣೆಯಾಗಿತ್ತು. ಈಗ ಸ್ವಲ್ಪ ಅದನ್ನು ನೆನಪಿಸುವ ಪೋಸ್ಟರ್ ಹೊರಬಂದಿದೆ.

    ಅಸ್ಥಿಪಂಜರ ಹೊತ್ತು ನಿಂತಿರುವ ಪುನೀತ್, ಅದರ ಹಿಂದೆ ಡೈನೋಸಾರ್ ಸ್ಕೆಲಟಿನ್. ನೋಡಿದವರ ತಲೆಯಲ್ಲಿ ಹುಳ ಫಿಕ್ಸ್. ಏಕೆಂದರೆ ಯುವರತ್ನ, ಕಾಲೇಜ್ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯುವ ಸ್ಪೋಟ್ರ್ಸ್ ಕಥೆ ಎಂದುಕೊಂಡಿದ್ದವರಿಗೆ ಇದೇನು ಎಂಬ ಪ್ರಶ್ನೆ ಹುಟ್ಟುಹಾಕಿದ್ದರೆ ಅಚ್ಚರಿಯಿಲ್ಲ. ನಿರ್ದೇಶಕ ಸಂತೋಷ್ ಆನಂದರಾಮ್ ನಿರೀಕ್ಷೆಯೂ ಅದೇ ಆಗಿತ್ತೇನೋ.. ಸೋಷಿಯಲ್ ಮೀಡಿಯಾದಲ್ಲಿ ಜನ ಕೇಳುತ್ತಿರುವುದೂ ಇದೇ ಪ್ರಶ್ನೆಯನ್ನು.

    ಎಜುಕೇಷನ್ ಸಿಸ್ಟಂ ಸುತ್ತ ಇರುವ ಕಥೆಯಲ್ಲಿ ಪುನೀತ್ ಹೀರೋ. ರಾಜಕುಮಾರ ನಂತರ ಹೊಂಬಾಳೆ ಫಿಲಂಸ್, ಪುನೀತ್ ಮತ್ತು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಮತ್ತೊಮ್ಮೆ ಜೊತೆಯಾಗಿರುವ ಯುವರತ್ನ, ಹಲವು ಕಾರಣಗಳಿಗೆ ನಿರೀಕ್ಷೆ ಹುಟ್ಟುಹಾಕಿದೆ.

  • ವಿದ್ಯಾರ್ಥಿ ಪುನೀತ್‍ಗೆ ಪ್ರಕಾಶ್ ರೈ ಪ್ರಿನ್ಸಿಪಾಲ್

    prakash raj joins yuvaratna team

    ಪ್ರಕಾಶ್ ರೈ ಮತ್ತೊಮ್ಮೆ ಪುನೀತ್ ಜೊತೆಯಾಗಿದ್ದಾರೆ. ಅಜಯ್ ಚಿತ್ರದಲ್ಲಿ ವಿಲನ್ ಆಗಿದ್ದ ರೈ, ರಾಜಕುಮಾರ ಚಿತ್ರದಲ್ಲೂ ಖಳನಟನಾಗಿಯೇ ಮಿಂಚಿದ್ದರು. ಈಗ ಯುವರತ್ನ ಚಿತ್ರದಲ್ಲಿ ಪೋಷಕ ನಟ. 

    ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪ್ರಕಾಶ್ ರೈ ಪ್ರಿನ್ಸಿಪಾಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಗೆ ಚಿತ್ರದ ತಾರಾಗಣದ ತೂಕ ಮತ್ತಷ್ಟು ಹೆಚ್ಚಿದೆ. ಈಗಾಗಲೇ ಚಿತ್ರದಲ್ಲಿ ಧನಂಜಯ್, ರಾಧಿಕಾ ಶರತ್ ಕುಮಾರ್ ಸೇರಿದಂತೆ ಘಟಾನುಘಟಿಗಳೇ ಇದ್ದಾರೆ. ಚಿತ್ರಕ್ಕೆ ಸಾಯೇಷಾ ಸೈಗಲ್ ನಾಯಕಿ. 

    ಸಂತೋಷ್ ಆನಂದ್‍ರಾಮ್ ನಿರ್ದೇಶನದ ರಾಜಕುಮಾರ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ರೈ, ಎಲೆಕ್ಷನ್ ನಂತರ ಸಂತೋಷ್ ಚಿತ್ರದ ಮೂಲಕವೇ ರೀ ಎಂಟ್ರಿ ಕೊಡುತ್ತಿದ್ದಾರೆ.

  • ವಿಧಾನಸಭೆಯಲ್ಲಿ ಅಪ್ಪು, ಶಿವರಾಂಗೆ ನುಡಿ ನಮನ

    ವಿಧಾನಸಭೆಯಲ್ಲಿ ಅಪ್ಪು, ಶಿವರಾಂಗೆ ನುಡಿ ನಮನ

    ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಈ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಸಂಪ್ರದಾಯದಂತೆ ಅಧಿವೇಶನದ ಮೊದಲ ದಿನ ಮೃತಪಟ್ಟ ಗಣ್ಯರ ಸಂತಾಪಕ್ಕೆ ಮೀಸಲಾಗಿತ್ತು. ಸದನದಲ್ಲಿ ಪುನೀತ್ ರಾಜ್‍ಕುಮಾರ್ ಮತ್ತು ಶಿವರಾಂ ಅವರಿಗೆ ಸಂತಾಪ ಸೂಚಿಸಲಾಯಿತು.

    ಬಸವರಾಜ ಬೊಮ್ಮಾಯಿ, ಸಿಎಂ : ಆ ದಿನ ನಾವು ಆಸ್ಪತ್ರೆಗೆ ಹೋಗುವಷ್ಟರ ವೇಳೆಗೆ ಪುನೀತ್ ಇಲ್ಲ ಅನ್ನೋದು ಗೊತ್ತಾಗಿತ್ತು. ಆ ನೋವಿನ ನಡುವೆಯೂ ಸರ್ಕಾರದ ಜೊತೆಗೆ ಅವರ ಇಡೀ ಕುಟುಂಬ ಸಹಕರಿಸಿತು. ಅವರು

    ತಂದೆಯನ್ನೇ ಮೀರಿಸಿದ ಮಗ. ಅವರ ಅಗಲಿಕೆಯನ್ನು ಕರ್ನಾಟಕಕ್ಕೆ ಇನ್ನೂ ಹಲವು ವರ್ಷ ಕಾಡಲಿದೆ. ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷ ನಾಯಕ : ವೈಯಕ್ತಿಕವಾಗಿ ನನಗೂ, ರಾಜ್ ಕುಟುಂಬಕ್ಕೂ ಬೇರೆಯದೇ ನಂಟು. ನಾವು ಒಂದೇ ಕಾಡಿನವರು. ಸಿನಿಮಾಗಳನ್ನು ನೋಡುವುದನ್ನೇ ಬಿಟ್ಟಿದ್ದ ನನ್ನನ್ನು ಮತ್ತೆ ಸಿನಿಮಾ ನೋಡುವಂತೆ ಮಾಡಿದ್ದು ಪುನೀತ್ ಚಿತ್ರಗಳು. ಪುನೀತ್ ರಾಜ್ ಮಗನಾಗಿ ಬಂದರೂ, ಹೋಗುವ ವೇಳೆಗೆ ತಮ್ಮದೇ ಆದ ವ್ಯಕ್ತಿತ್ವ, ಘನತೆ ರೂಪಿಸಿಕೊಂಡಿದ್ದರು. ರಾಜ್ ಮಗ ಎಂಬ ನೆರಳಿನಿಂದ ಹೊರಬಂದು ಬೆಳೆದು ನಿಂತಿದ್ದರು. ನನ್ನ ಜೀವನದಲ್ಲಿ ವ್ಯಕ್ತಿಯೊಬ್ಬನ ಅಗಲಿಕೆಗೆ ಇಷ್ಟೊಂದು ಜನ ಬಂದಿದ್ದು ನೋಡಿಲ್ಲ.

    ಮಾಧುಸ್ವಾಮಿ, ಸಚಿವ : ಪುನೀತ್ ಅವರದ್ದು ಸರಳ ವ್ಯಕ್ತಿತ್ವ. ಕೆಎಂಎಫ್ ರಾಯಭಾರಿಯಾಗಲು ಅವರು ಒಪ್ಪಿದ್ದರು. ಅದಕ್ಕಾಗಿ ಒಂದೇ ಒಂದು ಪೈಸೆಯನ್ನೂ ಸಂಭಾವನೆಯನ್ನಾಗಿ ಪಡೆದುಕೊಂಡಿರಲಿಲ್ಲ.

    ಶಶಿಕಲಾ ಜೊಲ್ಲೆ, ಸಚಿವೆ : ನನ್ನ ಮಗ ವಿಶೇಷ ಚೇತನ. ಆತನಿಗೆ ಈಗಲೂ ಸರಿಯಾಗಿ ಮಾತನಾಡೋಕೆ ಬರಲ್ಲ. ಆತನ ಬಗ್ಗೆ ಟಿವಿ9ನಲ್ಲಿ ಕಾರ್ಯಕ್ರಮ ಮಾಡಿದ್ದರು. ಅದನ್ನು ನೋಡಿದ್ದ ಪುನೀತ್ ಒಮ್ಮೆ ಮಡಿಕೇರಿಯಲ್ಲಿ ನನ್ನ ಮಗ ವಾಕ್ ಮಾಡುವಾಗ ಗುರುತು ಹಿಡಿದು ಮಾತನಾಡಿಸಿ, ಫೋಟೋ ತೆಗೆದುಕೊಂಡು ನನ್ನ ಮಗನಿಗೆ ಅಭಿನಂದನೆ ಸಲ್ಲಿಸಿದ್ದರು. ನಾನು ಅವರನ್ನು ಒಮ್ಮೆಯೂ ಭೇಟಿ ಮಾಡಿಲ್ಲ. ಆದರೆ ಪುನೀತ್ ನಿಧನರಾದ ದಿನ ಕಣ್ಣೀರು ಹಾಕಿದ್ದೆ.

    ಶಿವಲಿಂಗೇಗೌಡ, ಶಾಸಕ : ಅವರು ತಮ್ಮ ಚಿತ್ರಗಳು ಮತ್ತು ತಮ್ಮ ವ್ಯಕ್ತಿತ್ವದ ಮೂಲಕ ಒಳ್ಳೆಯತನ, ಸರಳತೆಯನ್ನೇ ಸಾರಿದರು. ಡಾ.ರಾಜ್ ಕುಮಾರ್ ಮಗ ಎನ್ನುವುದನ್ನೂ ಮೀರಿ ಬೆಳೆದು ನಿಂತರು. ಒಬ್ಬ ದೊಡ್ಡ ವ್ಯಕ್ತಿ ಹೇಗಿರಬೇಕು ಅನ್ನೋದಕ್ಕೆ ಅವರೇ ಮಾದರಿ.

    ಶಿವರಾಂ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಶಿವರಾಮ್ ಅವರ ಮನೆಯಲ್ಲಿ ಒಂದು ದೊಡ್ಡ ಲೈಬ್ರೆರಿ ಇದ್ದು, ಅದನ್ನು ಸಂರಕ್ಷಿಸಲು ಯೋಜನೆ ರೂಪಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

  • ವಿವಾದಗಳಲ್ಲಿ ಪುನೀತ್ ಇರಲ್ಲ - ಪುನೀತ್ ಹೇಳಿದ ಕಾರಣ ಇದು

    puneeth rajkumar reacts on controversy matter

    ಸ್ಯಾಂಡಲ್ ವುಡ್‍ನಲ್ಲಿ ಇತ್ತೀಚೆಗೆ ವಿವಾದಗಳಿಗೆ ಕೊನೆಯೇ ಇಲ್ಲ. ನಟರು ಸುಮ್ಮನಿದ್ದರೂ ಅಭಿಮಾನಿಗಳು ಸುಮ್ಮನಿರಲ್ಲ. ಆದರೆ ಇವೆಲ್ಲದಕ್ಕಿಂತ ಡಿಫರೆಂಟ್ ಆಗಿರೋದು ಪುನೀತ್ ರಾಜ್‍ಕುಮಾರ್. ಅವರು ಇದುವರೆಗೆ ಯಾವುದೇ ವಿವಾದಕ್ಕೆ ಸಿಕ್ಕವರಲ್ಲ. ವಿವಾದಗಳಾಗಬಹುದಾದ ವಿಚಾರಗಳನ್ನೂ ಅಷ್ಟೇ ಸಲೀಸಾಗಿ ಸೈಡಿಗೆ ತಳ್ಳಿ ಕೂಲ್ ಮಾಡುವ ವ್ಯಕ್ತಿತ್ವ ಅವರದ್ದು.

    ವಿವಾದಗಳೇ ಇಲ್ಲದೆ ಎಲ್ಲವನ್ನೂ ನಿಭಾಯಿಸುವುದು ಹೇಗೆ ಅನ್ನೋ ಪ್ರಶ್ನೆಯನ್ನು ಕನ್ನಡದ ಕೋಟ್ಯಧಿಪತಿಯಲ್ಲಿ ಹಾಟ್ ಸೀಟ್‍ನಲ್ಲಿ ಕುಳಿತಿದ್ದ ಪ್ರದೀಪ್ ಎಂಬುವರು ಕೇಳಿದ್ದಾರೆ. ಅದಕ್ಕೆ ಪುನೀತ್ ಕೊಟ್ಟಿರುವ ಉತ್ತರ ಇದು.

    ``ನಾನು ಹುಟ್ಟಿದಾಗಿನಿಂದ ಜನರ ಪ್ರೀತಿ ನೋಡಿದ್ದೇನೆ. ತಂದೆಯವರಿಂದ ಶುರುವಾದ ಪ್ರೀತಿ, ಈಗಲೂ ಹಾಗೆಯೇ ಇದೆ. 50 ವರ್ಷಗಳಿಂದ ಜನ ನಮ್ಮನ್ನು ಪ್ರೀತಿ, ವಿಶ್ವಾಸಗಳಿಂದ ಬೆಳೆಸಿದ್ದಾರೆ. ಜನರ ಪ್ರೀತಿಯೇ ಅಷ್ಟೊಂದು ಇರುವಾಗ ವಿವಾದಗಳು ಏಕೆ ಬೇಕು. ವಿವಾದ ನಮಗೆ ಬೇಡದೇ ಇರುವಂಥದ್ದು'' ಎಂಬ ಉತ್ತರ ಕೊಟ್ಟಿದ್ದಾರೆ ಪುನೀತ್.

  • ಶಕ್ತಿಧಾಮದಲ್ಲಿ ಅಪ್ಪು ಕನಸಿಗೆ ಈ ವರ್ಷ ಜೀವ..!

    ಶಕ್ತಿಧಾಮದಲ್ಲಿ ಅಪ್ಪು ಕನಸಿಗೆ ಈ ವರ್ಷ ಜೀವ..!

    ಶಕ್ತಿಧಾಮ. ಅದು ಶುರುವಾಗಿದ್ದು 1997ರಲ್ಲಿ. ಅನಾಥ ಮಹಿಳೆಯರಿಗಾಗಿಯೇ ಸ್ಥಾಪನೆಯಾದ ಈ ಶಕ್ತಿಧಾಮದಿಂದ ಇದೂವರೆಗೆ 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಿ ಹೊರಬಂದು ಬದುಕು ಕಟ್ಟಿಕೊಂಡಿದ್ದಾರೆ. ಸಾವಿರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈಗ ಶಕ್ತಿಧಾಮದಲ್ಲಿ ಶಾಲೆಯೂ ಶುರುವಾಗುತ್ತಿದೆ.

    ಶಕ್ತಿಧಾಮದಲ್ಲಿ ಒಂದು ಶಾಲೆ ಮಾಡಬೇಕು ಅನ್ನೋದು ಅಪ್ಪು ಕನಸಾಗಿತ್ತು. ನಾವೆಲ್ಲರೂ ನಮ್ಮ ದುಡಿಮೆಯ ಒಂದು ಭಾಗವನ್ನು ಅದಕ್ಕಾಗಿ ತೆಗೆದಿಡುತ್ತಿದ್ದೆವು. ಅಪ್ಪು ಶಾಲೆ ಮತ್ತು ಸ್ಪೋಟ್ರ್ಸ್ ಸ್ಕೂಲ್ ಬಗ್ಗೆ ಆಸಕ್ತಿ ಹೊಂದಿದ್ದ. ಶಕ್ತಿಧಾಮದಲ್ಲೀಗ 160 ಮಕ್ಕಳಿದ್ದು, ಶೀಘ್ರದಲ್ಲೇ ಸಂಖ್ಯೆ 200 ದಾಟಲಿದೆ. ಈಗ ಅವರನ್ನು ಮೈಸೂರಿನ ಬೇರೆ ಬೇರೆ ಶಾಲೆಗಳಲ್ಲಿ ಓದಿಸುತ್ತಿದ್ದೇವೆ. ಅವರಿಗಾಗಿ ಶಕ್ತಿಧಾಮದಲ್ಲೇ ಶಾಲೆ ಶುರುವಾಗಲಿದ್ದು, ಮುಂದಿನ ವರ್ಷ ಶಾಲೆ ಆರಂಭಿಸೋಕೆ ಅನುಮತಿ ಸಿಕ್ಕಿದೆ. 1 ರಿಂದ 8ನೇ ತರಗತಿವರೆಗೆ ಶಕ್ತಿಧಾಮದಲ್ಲಿರುವ ಮಕ್ಕಳೆಲ್ಲ ಅಲ್ಲಿಯೇ ಓದಲಿದ್ದಾರೆ. ಬೇರೆಯವರಿಗೂ ಅವಕಾಶ ಇದೆ ಎಂದಿದ್ದಾರೆ ಶಿವ ರಾಜ್ ಕುಮಾರ್.

    ಅಂದಹಾಗೆ ಶಕ್ತಿಧಾಮಕ್ಕೀಗ 25 ವರ್ಷ. ಪಾರ್ವತಮ್ಮ ನಿಧನದ ನಂತರ ಗೀತಾ ಶಿವ ರಾಜ್ ಕುಮಾರ್ ಇಡೀ ಶಕ್ತಿಧಾಮದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶಾಲೆಗಾಗಿಯೇ ಹೊಸ ಕಟ್ಟಡ ಕಟ್ಟುವ ಯೋಜನೆಯಿದ್ದು, ಸದ್ಯಕ್ಕೆ ಈಗಿರುವ ಕಟ್ಟಡದಲ್ಲೇ ವ್ಯವಸ್ಥೆ ಮಾಡಿಕೊಂಡು ಶಾಲೆ ಶುರು ಮಾಡಲಾಗುತ್ತಿದೆ.

  • ಶಿವಣ್ಣ, ಅಪ್ಪು ಒಟ್ಟಿಗೇ ನಟಿಸುವ ಯೋಗ ಯಾವಾಗ..?

    fans wait for puneeth shivanna combination

    ಶಿವರಾಜ್‍ಕುಮಾರ್, ಬಹುತೇಕ ತಮ್ಮ ಸಮಕಾಲೀನ ಸ್ಟಾರ್‍ಗಳು, ತಮಗಿಂತಲೂ ಮೊದಲಿನ ಸ್ಟಾರ್‍ಗಳು ಹಾಗೂ ತಮ್ಮ ನಂತರದ ಜನರೇಷನ್ ಸ್ಟಾರ್‍ಗಳೊಂದಿಗೆಲ್ಲ ತೆರೆ ಹಂಚಿಕೊಂಡಿದ್ದಾರೆ. ಡಾ.ರಾಜ್, ಅಂಬರೀಷ್, ರವಿಚಂದ್ರನ್, ಅನಂತ್‍ನಾಗ್, ಪ್ರಭಾಕರ್, ದೇವರಾಜ್, ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ಶಶಿಕುಮಾರ್.. ಅವರದ್ದೆಲ್ಲ ಎರಡು ಜನರೇಷನ್. ತಮ್ಮ ನಂತರದ ಕಲಾವಿದರಾದ ದರ್ಶನ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ಯೋಗಿ, ಧನಂಜಯ್.. ಇವರದ್ದೆಲ್ಲ ಇನ್ನೊಂದು ಜನರೇಷನ್. ಕಿಚ್ಚ ಸುದೀಪ್ ಜೊತೆ ನಟಿಸುತ್ತಿರುವ ದಿ ವಿಲನ್ ಅಂತೂ ಚಿತ್ರರಂಗವೇ ಎದುರು ನೋಡುವಂತೆ ಮಾಡಿದೆ.

    ಇನ್ನು ಪುನೀತ್ ರಾಜ್‍ಕುಮಾರ್ ಕೂಡಾ ಹಲವು ಸ್ಟಾರ್‍ಗಳ ಜೊತೆ ತೆರೆ ಹಂಚಿಕೊಂಡವರೇ. ತಮ್ಮ ಜನರೇಷನ್‍ನ ಯೋಗಿ, ಶ್ರೀನಗರ ಕಿಟ್ಟಿ, ದರ್ಶನ್, ಆದಿತ್ಯ.. ಮೊದಲಾದವರ ಜೊತೆ ತೆರೆ ಹಂಚಿಕೊಂಡಿದ್ದಾರೆ ಪುನೀತ್. ಆದರೆ, ಅಭಿಮಾನಿಗಳ ನಿರೀಕ್ಷೆ ಇರುವುದು ಅಣ್ಣ-ತಮ್ಮಂದಿರ ಮಿಲನದಲ್ಲಿ. ಯಾವಾಗ ಎನ್ನುವುದೇ ಎಲ್ಲರ ಪ್ರಶ್ನೆ.

    ಕಾಲ ಕೂಡಿ ಬರುತ್ತಿದೆ. ಬಹುಬೇಗನೆ ಒಟ್ಟಿಗೇ ನಟಿಸುತ್ತೇವೆ ಎಂಬ ಭರವಸೆ ಸಿಕ್ಕಿರುವುದು ಶಿವಣ್ಣ ಅವರಿಂದ. ಅಪ್ಪು ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಪುನೀತ್ ಮನೆಗೇ ಬಂದಿದ್ದ ಅಣ್ಣ ಶಿವಣ್ಣ, ಪುನೀತ್‍ಗೆ ಶುಭ ಕೋರಿದರು. ಅಭಿಮಾನಿಗಳ ಒಕ್ಕೊರಲ ಕೂಗಿಗೆ ಸ್ಪಂದಿಸಿದ ಶಿವಣ್ಣ, ತಮಗೂ ಅಪ್ಪು ಜೊತೆ ನಟಿಸುವ ಬಯಕೆ ಇದೆ ಎಂದು ಹೇಳಿಕೊಂಡರು.

    ಆದರೆ, ಯಾವಾಗ..? ಅಭಿಮಾನಿ ದೇವರುಗಳ ಕೂಗು ಈಡೇರಬೇಕೆಂದರೆ ನಿರ್ದೇಶಕ ದೇವರು ಮನಸ್ಸು ಮಾಡಬೇಕು. ಅಷ್ಟೆ. ಕಥೆ ಸಿಕ್ಕರೆ, ಅದು ಈಗಲೇ ಆಗಬಹುದು.

     

  • ಶಿವಣ್ಣನ ಅಪ್ಪು ಸ್ಟೈಲ್

    shivanna in puneeth's hairstyle

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸ್ಟೈಲಿಷ್ ನಟರೂ ಹೌದು. ಕಾಸ್ಟ್ಯೂಮ್, ಹೇರ್ ಸ್ಟೈಲ್ ವಿಷಯದಲ್ಲೂ ಟ್ರೆಂಡೀ.. ಶಿವರಾಜ್ ಕುಮಾರ್ ಸ್ಟೈಲ್‍ನ್ನು ಫಾಲೋ ಮಾಡೋವ್ರಿಗೇನೂ ಕಡಿಮೆಯಿಲ್ಲ. ಆದರೀಗ ಶಿವರಾಜ್ ಕುಮಾರ್ ಅವರೇ ಅಪ್ಪು ಹೇರ್ ಸ್ಟೈಲ್ ಫಾಲೋ ಮಾಡ್ತಿದ್ದಾರೆ.

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಬ್ಲೇಡ್ ರನ್ ಕಟ್ ಹೇರ್ ಸ್ಟೈಲ್ ಟ್ರೆಂಡ್ ಆಗಿತ್ತು. ಈಗ ಆ ಹೇರ್ ಸ್ಟೈಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ ಶಿವರಾಜ್ ಕುಮಾರ್. ಅಂದಹಾಗೆ ಶಿವಣ್ಣಗೀಗ 57 ವರ್ಷ. ಆದರೆ, 17ರ ಯುವಕರೂ ನಾಚುವಂತೆ ಫಿಟ್ ನೆಸ್ ಹೊಂದಿರೋ ಶಿವರಾಜ್‍ಕುಮಾರ್, ಈಗಿನ ಕಾಲದ ಟ್ರೆಂಡ್‍ಗಳಿಗೂ ಅಪ್‍ಡೇಟ್ ಆಗುತ್ತಿದ್ದಾರೆ.

  • ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ಗೆ ಪುನೀತ್ ಹೆಸರಿಡಲು ಮನವಿ : ಇದೆ ಪ್ರಬಲ ಕಾರಣ

    ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ಗೆ ಪುನೀತ್ ಹೆಸರಿಡಲು ಮನವಿ : ಇದೆ ಪ್ರಬಲ ಕಾರಣ

    ಈಗಾಗಲೇ ಪುನೀತ್ ರಾಜಕುಮಾರ್ ಹೆಸರಲ್ಲಿ ಒಂದು ರಸ್ತೆ ಇದೆ. ಬೆಂಗಳೂರಿನ ನಾಯಂಡಹಳ್ಳಿಯಲ್ಲಿರೋ 12 ಕಿ.ಮೀ. ಉದ್ದದ ಹೊರವರ್ತುಲ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಪುತ್ಥಳಿಯೂ ನಿರ್ಮಾಣವಾಗಿದೆ. ರಾಜ್ಯದ ಹಲವೆಡೆ ಪುನೀತ್ ರಾಜಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈಗ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ನಿರ್ಮಾಣವಾಗಿರುವ ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಇಡಬೇಕು ಎಂದು ಬಿಬಿಎಂಪಿಗೆ ಮನವಿ ಮಾಡಲಾಗಿದೆ.  ಮನವಿ ಮಾಡಿರುವುದು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್.

    ಶಿವಾನಂದ ಸರ್ಕಲ್ ಬಳಿಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಇದೆ. ಫಿಲ್ಮ್ ಚೇಂಬರ್ ಈ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಬಿಟ್ಟು ಕೊಟ್ಟ ಇತಿಹಾಸವೂ ಇದೆ. ಫಿಲಂ ಇಂಡಸ್ಟ್ರಿಗೆ ಡಾ.ರಾಜ್ ಕುಟುಂಬವೇ ಒಂದು ಕೊಡುಗೆ. ಚೇಂಬರ್ ಎದುರು ಡಾ.ರಾಜ್ ಪ್ರತಿಮೆಯೂ ಇದೆ. ಆ ಪ್ರತಿಮೆಗೆ ಅಭಿಮುಖವಾಗಿರುವ ಸ್ಟೀಲ್ ಬ್ರಿಡ್ಜ್ಗೆ ಪುನೀತ್ ಹೆಸರಿಟ್ಟರೆ ಸಾರ್ಥಕವಾಗಲಿದೆ ಎಂಬುದು ರಮೇಶ್ ವಾದ.

    ಈ ಬ್ರಿಡ್ಜ್ ಗೆ ಶಿವಾನಂದ ಸ್ಟೋರ್ನವರ ಹೆಸರು ಇಡಲು ಮಾತುಕತೆ ನಡೆದಿತ್ತು. ಇದನ್ನು ವಿರೋಧಿಸಿರುವ ರಮೇಶ್, ಇವತ್ತು ಸ್ಟಿಲ್ ಬ್ರಿಡ್ಜ್ ತಡವಾಗುವುದಕ್ಕೆ ಕಾರಣ, ಶಿವಾನಂದ ಸ್ಟೋರ್ ನವರು. ಹಾಗಾಗಿ ಅವರು ಹೆಸರನ್ನು ಇಡಬಾರದು ಎಂದು ಒತ್ತಾಯಿಸಿದ್ದಾರೆ.

  • ಶ್ರಾವಣ ಬಂತು.. ಶಿವಲಿಂಗ.. ನಟಸಾರ್ವಭೌಮ.. ಏನಿದು ಹೋಲಿಕೆ..?

    link between sravana banthu, shivalinga and natasarvabhouma

    ಶ್ರಾವಣ ಬಂತು. 1984ರಲ್ಲಿ ತೆರೆಗೆ ಬಂದಿದ್ದ ಚಿತ್ರ. ಮೇರಿ ಮೇರಿ ಮೇರಿ ಐ ಲವ್ ಯೂ, ಬಾನಿನ ಅಂಚಿದ ಬಂದೆ, ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ, ಶ್ರಾವಣ ಮಾಸ ಬಂದಾಗ.. ಹೀಗೆ ಆ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಊರ್ವಶಿ, ರಾಜ್ ಜೋಡಿಯಾಗಿ ನಟಿಸಿದ್ದರು. ಆ ಚಿತ್ರದಲ್ಲಿ ಡಾ.ರಾಜ್ ಗೆಳೆಯ ಹಾಗೂ ಆತ್ಮದ ಪಾತ್ರದಲ್ಲಿ ನಟಿಸಿದ್ದವರು ಪ್ರಣಯ ರಾಜ ಶ್ರೀನಾಥ್.

    ಅದೇ ರಾಗ ಅದೇ ಹಾಡು, ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಆ ಚಿತ್ರದಲ್ಲಿ ಪುನರ್ಜನ್ಮ ಹಾಗೂ ದೆವ್ವದ ಕಥೆಯಿತ್ತು.

    ಸಂಯುಕ್ತ ಚಿತ್ರದಲ್ಲಿ ದೆವ್ವದ ಎಳೆಯಿದ್ದರೂ, ದೆವ್ವದ ಸಿನಿಮಾ ಆಗಿರಲಿಲ್ಲ. ಅದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿತ್ತು. ತಂಗಾಳಿಯಾಗಿ ಹೋದೆ ಎಂಬ ಹಾಡಂತೂ ಬೆಚ್ಚಿ ಬೀಳಿಸುತ್ತಿತ್ತು.

    ಇನ್ನು ಇತ್ತೀಚೆಗೆ ಬಂದ ಶಿವಣ್ಣ ಅಭಿನಯದ ಶಿವಲಿಂಗ ಚಿತ್ರ ಅಪ್ಪಟ ದೆವ್ವದ ಸಿನಿಮಾ. ವಾಸು ನಿರ್ದೇಶನದ ಸಿನಿಮಾದಲ್ಲಿ ದೆವ್ವ, ಥ್ರಿಲ್ಲರ್ ಕಥೆಯನ್ನು ಹದವಾಗಿ ಬೆರೆಸಲಾಗಿತ್ತು.

    ಈಗ ನಟಸಾರ್ವಭೌಮ ಚಿತ್ರ. ಹೋಲಿಕೆ ಒಂದೇ.. ಅದು ಆತ್ಮ.

    ಪುನೀತ್ ರಾಜ್‍ಕುಮಾರ್ ಮೈಮೇಲೆ ಈ ಚಿತ್ರದಲ್ಲಿ ಆತ್ಮವೊಂದು ಬರುತ್ತಾ..? ಆತ್ಮದ ಕೈಗೊಂಬೆಯಾಗಿರ್ತಾರಾ ಪುನೀತ್ ರಾಜ್‍ಕುಮಾರ್..? 

    ನಿರ್ದೇಶಕ ಪವನ್ ಒಡೆಯರ್, ಅದ್ಯಾವ ರಹಸ್ಯವನ್ನೂ ಬಿಟ್ಟುಕೊಡ್ತಿಲ್ಲ. ರಚಿತಾ ರಾಮ್, ಅನುಪಮಾ ನಾಯಕಿಯಾಗಿರುವ ಚಿತ್ರದಲ್ಲಿ ದೆವ್ವದ ಕಥೆ ಹೇಳುವುದು ಚಿಕ್ಕಣ್ಣ, ಸಾಧು ಮತ್ತು ಅಚ್ಯುತ್ ಕುಮಾರ್.  ಉಳಿದಂತೆ.. ರಹಸ್ಯ ತಿಳಿದುಕೊಳ್ಳೋಕೆ ಫೆಬ್ರವರಿ 7ರವರೆಗೆ ಕಾಯಲೇಬೇಕು.

  • ಸಜ್ಜಿ ರೊಟ್ಟಿ ಚವಳಿಕಾಯ್.. ಪುನೀತ್ ಹಾಡಿದಾಗ.. 

    puneeth rajkumar's song is highlight in mataash

    ಸಜ್ಜಿ ರೊಟ್ಟಿ ಚವಳಿಕಾಯ್.. ಪದಗಳು ಕೇಳುತ್ತಿದ್ದಂತೆ ಬಾಯಲ್ಲಿ ನೀರು ಬರೋದು ಪಕ್ಕಾ. ಅದು ಉತ್ತರ ಕರ್ನಾಟಕ ಸ್ಪೆಷಲ್. ಈ ಸಾಲುಗಳೊಂದಿಗೆ ಆರಂಭವಾಗುವ ಗೀತೆಯನ್ನು ಪುನೀತ್ ಹಾಡಿದ್ದು, ಮಟಾಶ್ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.

    ಉತ್ತರ ಕರ್ನಾಟಕ ಶೈಲಿಯ ಈ ಹಾಡನ್ನು ಬರೆದಿರುವುದು ಸುನಿಲ್ ಕುಮಾರ್ ಸುಧಾಕರ್. ಆ ಹಾಡಿನ ಕಿಕ್ ಹೆಚ್ಚಿಸಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಪುನೀತ್ ಹಾಡಿನ ಜೋಶ್‍ನ್ನು ಹೆಚ್ಚಿಸಿದ್ದಾರೆ ಎಂದು ಖುಷಿಪಟ್ಟಿದ್ದಾರೆ ನಿರ್ದೇಶಕ ಕಮ್ ನಿರ್ಮಾಪಕ ಎಸ್.ಡಿ. ಅರವಿಂದ್. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.

  • ಸದ್ಗುರು ಜಗ್ಗಿ ವಾಸುದೇವ್ ಜೊತೆ ಪುನೀತ್ ರಾಜ್ಕುಮಾರ್ - ನದಿಗಳ ರಕ್ಷಣೆಗಾಗಿ

    puneeth rajkumar image

    ಸದ್ಗುರು ಜಗ್ಗಿ ವಾಸುದೇವ್. ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು. ಧರ್ಮಗುರು. ಭಾರತೀಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪರಿಚಯಿಸುತ್ತಿರುವ ಯೋಗಿಗಳಲ್ಲಿ ಒಬ್ಬರು. ಮೂಲತಃ ಮೈಸೂರಿನವರು. ಕನ್ನಡಿಗರು. ಇಂಥ ವಿಶ್ವ ಖ್ಯಾತಿಯ ಯೋಗಿಗಳ ಜೊತೆ ಈಗ ಪುನೀತ್ ರಾಜ್ಕುಮಾರ್ ಕೈ ಜೋಡಿಸಿದ್ದಾರೆ. ಇಶಾ ಫೌಂಡೇಶನ್ ಎಂಬ ಸಂಸ್ಥೆಯ ನದಿ ನೀರು ರಕ್ಷಣೆ ಜಾಗೃತಿ ಅಭಿಯಾನಕ್ಕೆ ಸದ್ಗುರು ಜೊತೆ ಸೇರಿದ್ದಾರೆ.

    ಇತ್ತೀಚೆಗಷ್ಟೇ  ಸದ್ಗುರು ವಾಸ್ ದೇವ್ ಅವರನ್ನು ಭೇಟಿ ಮಾಡಿದ ಪುನೀತ್ ರಾಜ್ ಕುಮಾರ್ , ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್ ಕುಮಾರ್ ಹಾಗು ವಿನಯ್ ರಾಜ್ ಕುಮಾರ್  ನದಿಗಳ ಜಾಗೃತಿ ಬಗ್ಗೆ  ಱಲಿಗೆ ಬೆಂಬಲಿಸಿದ್ದಾರೆ. ಇತ್ತೀಚೆಗಷ್ಟೇ ಗಣೇಶ್ ಕೂಡಾ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದೇಶಾದ್ಯಂತ ಈ ಜಲ ಜಾಗೃತಿ ಯಶಸ್ವಿಯಾಗಲಿ ಎಂದು ಹಾರೈಸೋಣ.

  • ಸಲಗ ಚಿತ್ರಕ್ಕೀಗ ಪವರ್ ಸ್ಟಾರ್ ಪವರ್

    ಸಲಗ ಚಿತ್ರಕ್ಕೀಗ ಪವರ್ ಸ್ಟಾರ್ ಪವರ್

    ಸಲಗ. ಚಿತ್ರದ ಬಳಗವೇ ದೊಡ್ಡದು. ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾದರೆ, ದುನಿಯಾ ವಿಜಯ್, ಡಾಲಿ ಧನಂಜಯ್, ಸಂಜನಾ ಆನಂದ್, ರಂಗಾಯಣ ರಘು, ಅಚ್ಯುತ್ ಕುಮಾರ್, ಚರಣ್ ರಾಜ್ ಮ್ಯೂಸಿಕ್ಕು.. ಹೀಗೆ ದೊಡ್ಡ ದೊಡ್ಡವರ ಶಕ್ತಿಯೇ ಸೇರಿದೆ. ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಆಶೀರ್ವಾದವೂ ಸಿಕ್ಕಿದೆ. ಶಿವಣ್ಣ ಫ್ಯಾಮಿಲಿಯ ಸದಸ್ಯರಂತೆಯೇ ಇರುವ ಕೆ.ಪಿ.ಶ್ರೀಕಾಂತ್ ಅವರ ಸಲಗ ಚಿತ್ರವನ್ನು ಅರ್ಪಿಸುತ್ತಿರುವುದು ಗೀತಾ ಶಿವರಾಜ್‍ಕುಮಾರ್. ಇದೆಲ್ಲದರ ಜೊತೆಗೆ ಪವರ್ ಸ್ಟಾರ್ ಪುನೀತ್ ಪವರ್ ಕೂಡಾ ಸಲಗ ಚಿತ್ರಕ್ಕೆ ಸಿಕ್ಕಿದೆ.

    ರಿಲೀಸ್ ಮಾಡೋಕೂ ಮೊದಲು ಸಲಗ ಟೀಂ ಅಕ್ಟೋಬರ್ 10ರಂದು ಸಲಗ ಚಿತ್ರದ ಪ್ರೀ-ಈವೆಂಟ್ ಶೋ ಇಟ್ಟುಕೊಂಡಿದೆ. ಆ ದಿನ ಸಲಗ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಅದನ್ನು ರಿಲೀಸ್ ಮಾಡೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಸಲಗನ ಆರ್ಭಟ ಜೋರಾಗುತ್ತಿದೆ. 

  • ಸಲಗ ಸಖತ್ : ಸಿದ್ದು, ಡಿಕೆಶಿ, ಶಿವಣ್ಣ, ಪುನೀತ್, ಉಪೇಂದ್ರ ಹೇಳಿದ್ದೇನು?  

    salaga image

    ಇದೇ ದಸರಾಗೆ ರಿಲೀಸ್ ಆಗುತ್ತಿರುವ ಸಿನಿಮಾ ಸಲಗ. ದುನಿಯಾ ವಿಜಯ್ ನಿರ್ದೇಶಿಸಿರುವ ಮೊದಲ ಚಿತ್ರ. ವಿಜಯ್ ಜೊತೆಗೆ ಡಾಲಿ ಧನಂಜಯ್ ಕೂಡಾ ಜೊತೆಯಾಗಿದ್ದು, ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾಗಿದ್ದಾರೆ. ಸಂಜನಾ ಆನಂದ್ ನಾಯಕಿ. ಚಿತ್ರದ ಬಿಡುಗಡೆಗೂ ಮುನ್ನ ಈವೆಂಟ್ ಆಯೋಜಿಸಿದ್ದ ಚಿತ್ರತಂಡಕ್ಕೆ ಚಿತ್ರರಂಗದಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದುಬಂತು. ಬೋನಸ್ ಆಗಿದ್ದುದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್. ಪ್ರತಿಯೊಬ್ಬರೂ ಚಿತ್ರದ ಬಗ್ಗೆ, ಚಿತ್ರದ ವಿಶೇಷತೆಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.

    ಸಿದ್ದರಾಮಯ್ಯ : ಸಲಗ ಚಿತ್ರದ ಮುಹೂರ್ತಕ್ಕೂ ನನ್ನನ್ನು ಕರೆದಿದ್ದರು. ಕ್ಲಾಪ್ ಮಾಡಿದ್ದೆ. ಈಗ ರಿಲೀಸ್ ಮಾಡೋಕೂ ಕರೆದಿದ್ದಾರೆ. ನಾನು ಥಿಯೇಟರ್‍ಗೆ ಹೋಗೋದು ಕಡಿಮೆ. ಒಂದು ಕಾಲದಲ್ಲಿ ವಾರಕ್ಕೆ ನಾಲ್ಕೈದು ಸಿನಿಮಾ ನೋಡುತ್ತಿದ್ದೆ. ರಾಜ್‍ಕುಮಾರ್ ಅಂದ್ರೆ ಇಷ್ಟ. ಅವರ ಚಿತ್ರಗಳನ್ನೇ ಹೆಚ್ಚು ನೋಡಿದ್ದು. ಈಗ ವಿಜಯ್ ನಿರ್ದೇಶಿಸಿರುವ ಸಿನಿಮಾ ಸಲಗ ರಿಲೀಸ್ ಆಗುತ್ತಿದೆ. ಸಲಗ ಅನ್ನೋ ಹೆಸರು ಕೇಳಿದರೆ ಚಿತ್ರವನ್ನು ಅದ್ಧೂರಿಯಾಗಿ ಮಾಡಿದ್ದಾರೆ ಎನಿಸುತ್ತಿದೆ. ಚಿತ್ರಕ್ಕೆ ಒಳ್ಳೆಯದಾಗಲಿ.

    ಡಿಕೆ ಶಿವಕುಮಾರ್ : ನಾನೂ ಚಿತ್ರರಂಗದವನೇ. ನನ್ನದು 23 ಥಿಯೇಟರುಗಳಿವೆ. ಚಿತ್ರಗಳ ವಿತರಣೆಯನ್ನೂ ಮಾಡಿದ್ದೆ. ನೀವೆಲ್ಲ ಬಣ್ಣ ಹಚ್ಚಿಕೊಂಡು ನಟಿಸುತ್ತೀರ. ನಾವು ಬಣ್ಣ ಹಚ್ಚದೇ ನಟಿಸುತ್ತೇವೆ. ಸಲಗ ಚಿತ್ರಕ್ಕೆ ಒಳ್ಳೆಯದಾಗಲಿ. ಖಂಡಿತಾ ನಾನು ಸಲಗ ಸಿನಿಮಾ ನೋಡುತ್ತೇನೆ.

    ಶಿವರಾಜ್‍ಕುಮಾರ್ : ನಿರ್ದೇಶಕರು, ನಿರ್ಮಾಪಕರು ಏನು ಹೇಳ್ತಾರೋ ಅದನ್ನು ಪಾಲಿಸಬೇಕು ಅನ್ನೋದು ನಮಗೆಲ್ಲ ಅಪ್ಪಾಜಿ ಹೇಳಿಕೊಟ್ಟಿದ್ದ ಪಾಠ. ಈಗ ದುನಿಯಾ ವಿಜಯ್ ನಿರ್ದೇಶಕರಾಗಿದ್ದಾರೆ. ಅವರೇನಾದರೂ ನನಗೆ ಡೈರೆಕ್ಷನ್ ಮಾಡೋದಾದ್ರೆ ನಾನು ರೆಡಿ. ಶ್ರೀಕಾಂತ್ ನಿರ್ಮಾಪಕ ಅನ್ನೋದಕ್ಕಿಂತ ಹೆಚ್ಚಾಗಿ ನನಗೆ ಹಳೆಯ ಸ್ನೇಹಿತ. ಚಿತ್ರ ಚೆನ್ನಾಗಿ ಬಂದಿದೆ. ಡಾಲಿ ಧನಂಜಯ್ ಲಕ್ಕಿ. ಚೆನ್ನಾಗಿ ನಟಿಸಿದ್ದಾರೆ.

    ಉಪೇಂದ್ರ : ದುನಿಯಾ ವಿಜಯ್ ಸೂರಿ ಜೊತೆ ಕೆಲಸ ಮಾಡುವಾಗಲೇ ನಿರ್ದೇಶನ ಕಲಿತಿದ್ದರು ಎನಿಸುತ್ತಿದೆ. ಸಲಗ ಚಿತ್ರದ ಜೊತೆಗೆ ಕೋಟಿಗೊಬ್ಬ 3 ಕೂಡಾ ಬರುತ್ತಿದೆ. ಎರಡೂ ಚಿತ್ರಗಳು ಹಿಟ್ ಆಗಲಿ.

    ಪುನೀತ್ ರಾಜ್‍ಕುಮಾರ್ : ದುನಿಯಾ ವಿಜಯ್ ನಿರ್ದೇಶನದ ಸಲಗ ಬರುತ್ತಿದೆ. ಅದೇ ದಿನ ಕೋಟಿಗೊಬ್ಬ 3 ಕೂಡಾ ಬರುತ್ತಿದೆ. ಎರಡೂ ಚಿತ್ರಗಳು ಯಶಸ್ವಿಯಾಗಲಿ.