` puneeth rajkumar, - chitraloka.com | Kannada Movie News, Reviews | Image

puneeth rajkumar,

  • ರಾಕ್‍ಲೈನ್‍ಗೆ ಸಿಕ್ಕರು ಅಪ್ಪು..!

    puneeth's next movie is with rockline venkatesh

    ಅಂಜನೀಪುತ್ರದ ನಂತರ ಪುನೀತ್ ರಾಜ್‍ಕುಮಾರ್ ಮುಂದಿನ ಚಿತ್ರ ಯಾವುದು..? ಇಂಥಾದ್ದೊಂದು ಗೊಂದಲಕ್ಕೆ ಕಾರಣಗಳಿದ್ದವು. ಪುನೀತ್ ಬ್ಯಾನರ್‍ನಲ್ಲೇ ಶಶಾಂಕ್ ಪುನೀತ್ ಚಿತ್ರವನ್ನು ನಿರ್ದೇಶಿಸಲು ಮುಂದಾಗಿದ್ದರು. ಕಥೆಯೂ ಓಕೆಯಾಗಿತ್ತು. ಇನ್ನು ರಾಜಕುಮಾರ ಚಿತ್ರದ ನಂತರ ಮತ್ತೊಮ್ಮೆ ಸಂತೋಷ್ ಆನಂದ್‍ರಾಮ್ ಹಾಗೂ ಪುನೀತ್ ಮಿಲನ ಕನ್‍ಫರ್ಮ್ ಆಗಿತ್ತು. ಈ ಎರಡೂ ಚಿತ್ರಗಳ ಮಧ್ಯೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಸಿನಿಮಾ ಕುರಿತು ಮಾತು ಕೇಳಿ ಬರೋಕೆ ಶುರುವಾಯ್ತು.

    ಸದ್ಯಕ್ಕೆ ಯಾವುದೂ ಫೈನಲ್ ಆಗಿಲ್ಲ. ಫೆಬ್ರವರಿಯಲ್ಲಿ ಹೇಳ್ತೇನೆ ಎಂದಿದ್ದ ಪುನೀತ್, ಈಗ ರಾಕ್‍ಲೈನ್ ಚಿತ್ರಕ್ಕೆ ಗ್ರೀನ್‍ಸಿಗ್ನಲ್ ಕೊಟ್ಟಿದ್ದಾರೆ. ಪವನ್ ಒಡೆಯರ್ ನಿರ್ದೇಶಕ. ಇತ್ತ ಶಶಾಂಕ್, ತಮ್ಮ ನಿರ್ಮಾಣದ ತಾಯಿಗೆ ತಕ್ಕ ಮಗ ಚಿತ್ರದ ನಿರ್ದೇಶನದ ಹೊಣೆಯನ್ನೂ ಈಗ ತಾವೇ ಹೊತ್ತುಕೊಂಡಿದ್ದಾರೆ. ಸಂತೋಷ್ ಆನಂದ್‍ರಾಮ್ ಮುಂದೇನು ಮಾಡ್ತಾರೆ ಅನ್ನೋದು ಗೊತ್ತಿಲ್ಲ. ಒಟ್ಟಿನಲ್ಲಿ ಸುದೀರ್ಘ ವಿರಾಮದ ನಂತರ ಪುನೀತ್ ರಾಜ್‍ಕುಮಾರ್ ಮತ್ತು ರಾಕ್‍ಲೈನ್ ಜೋಡಿ ಮತ್ತೊಮ್ಮೆ ಒಂದಾಗಿದೆ.

  • ರಾಗಿಣಿ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ನಿರ್ಮಾಪಕ

    puneeth to produce ragini's movie

    ರಾಗಿಣಿ ಎಂದರೆ ರಾಗಿಣಿ ದ್ವಿವೇದಿ ಅಲ್ಲ. ರಾಗಿಣಿ ಚಂದ್ರನ್. ಪ್ರಜ್ವಲ್ ದೇವರಾಜ್ ಅವರ ಪತ್ನಿ. ದೇವರಾಜ್ ಅವರ ಸೊಸೆ. ಮೂಲತಃ ಮಾಡೆಲ್ ಆಗಿರುವ ರಾಗಿಣಿ, ನಾಯಕಿಪ್ರಧಾನ ಚಿತ್ರ ವಿಜಯದಶಮಿಯಲ್ಲಿ ನಟಿಸಬೇಕಿತ್ತು. ಎಲ್ಲವೂ ಓಕೆ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು ಎನ್ನುವಾಗ ನಿರ್ಮಾಪಕರು ಬದಲಾಗಿದ್ದಾರೆ. ಚಿತ್ರ ನಿರ್ಮಾಣದ ಹೊಣೆಯನ್ನು ಪುನೀತ್ ಅವರ ಪಿಆರ್‍ಕೆ ಪ್ರೊಡಕ್ಷನ್ಸ್ ಹೊತ್ತುಕೊಂಡಿದೆ.

    ರಾಗಿಣಿ ಚಂದ್ರನ್ ಪ್ರಧಾನ ಪಾತ್ರದಲ್ಲಿದ್ದು, ಇನ್ನೊಂದು ಪ್ರಮುಖ ಪಾತ್ರಕ್ಕೆ ಯುಗಳ ಗೀತೆ ಸೀರಿಯಲ್ ಖ್ಯಾತಿಯ ಸಿರಿ ಪ್ರಹ್ಲಾದ್ ಬಂದಿದ್ದಾರೆ. ನಿರ್ದೇಶಕ ರಘು ಸಮರ್ಥ್ ಅವರೇ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

  • ರಾಗಿಣಿ ಪ್ರಜ್ವಲ್ ದೇವರಾಜ್ ಚಿತ್ರದ ಹೆಸರು law

    prk productions next movie name is law

    ದೇವರಾಜ್ ಅವರ ಸೊಸೆ, ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಪುನೀತ್ ಬ್ಯಾನರ್ ಚಿತ್ರದಲ್ಲಿ ನಟಿಸುತ್ತಿರುವುದು ಭಾರಿ ಸುದ್ದಿಯಾಗಿತ್ತು. ವಿಶೇಷವೆಂದರೆ, ರಘು ಸಮರ್ಥ ನಿರ್ದೇಶನದ ಚಿತ್ರದ ಚಿತ್ರೀಕರಣವೇ ಮುಗಿದು ಹೋಗಿದೆ. ಚಿತ್ರದ ಟೈಟಲ್ ಈಗಷ್ಟೇ ಹೊರಬಿದ್ದಿದೆ. ಹೆಸರು ಲಾ.

    ಲಾ ಎಂದರೆ ಕಾನೂನು. ರಾಗಿಣಿ ಚಿತ್ರದಲ್ಲಿ ಲಾಯರ್ ಆಗಿ ನಟಿಸಿದ್ದಾರೆ. ಚಿತ್ರದ ಪ್ರತಿ ದೃಶ್ಯವನ್ನೂ ಅವರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಅವರು ಪ್ರತಿದಿನ ಸೆಟ್‍ಗೆ ಬರುವ ಮುನ್ನ ಸಂಪೂರ್ಣ ಸಿದ್ಧರಾಗಿ ಬರುತ್ತಿದ್ದರು ಎಂದಿದ್ದಾರೆ ರಘು ಸಮರ್ಥ.

    ಜಾಹೀರಾತುಗಳಲ್ಲಿ ನಟಿಸಿದ್ದ, ಮಾಡೆಲಿಂಗ್ ಮಾಡಿರುವ, ನೃತ್ಯ ಕಲಾವಿದೆಯೂ ಆಗಿರುವ ರಾಗಿಣಿ ಚಂದ್ರನ್, ಸಿನಿಮಾ ಮಾತ್ರ ಹೊಸದು.

  • ರಾಘಣ್ಣ ಕಂ ಬ್ಯಾಕ್ - ಅಪ್ಪು ಹೇಳಿದ್ದೇನು..?

    puneeth rjkumar talks about trayambakam

    ಅದು ತ್ರಯಂಬಕಂ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ. ಅಪ್ಪಟ ಶಿವನಂತೆ ಢಮರುಗ ಬಾರಿಸಿ ಟ್ರೇಲರ್ ರಿಲೀಸ್ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಣ್ಣ ಮತ್ತೆ ಬಣ್ಣ ಹಚ್ಚಿರುವ ಬಗ್ಗೆ ಮಾತನಾಡುತ್ತಾ ಹೋದ ಪುನೀತ್ ``ನಂಗೆ ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ಪಿಲ್ಲರ್‍ಗಳಿದ್ದಂತೆ. ರಾಘಣ್ಣ ಮತ್ತೆ ನಟಿಸುತ್ತಿದ್ದಾರೆ ಎನ್ನುವುದೇ ನನಗೆ ಖುಷಿ. ನಾಲ್ಕೈದು ವರ್ಷಗಳ ಹಿಂದೆ ರಾಘಣ್ಣ ಆರೋಗ್ಯ ಹದಗೆಟ್ಟಾಗ, ಅವರು ಮತ್ತೆ ಬಣ್ಣ ಹಚ್ಚುತ್ತಾರೆ ಎಂಬ ಕಲ್ಪನೆಯೂ ನಮಗಿರಲಿಲ್ಲ.

    ಅಣ್ಣನಿಗೆ ಎಷ್ಟು ಖುಷಿಯಾಗಿದ್ಯೋ ಅದರ 10 ಪಟ್ಟು ಖುಷಿ ನನಗಾಗಿದೆ'' ಎಂದಿದ್ದಾರೆ ಪುನೀತ್.

  • ರಾಘಣ್ಣನ ಚಿತ್ರಕ್ಕೆ ಅಪ್ಪು ಕ್ಲಾಪ್

    puneeth claps for trayambhakam

    ರಾಘವೇಂದ್ರ ರಾಜ್‍ಕುಮಾರ್, ದಯಾಳ್ ಪದ್ಮನಾಭ್ ಕಾಂಬಿನೇಷನ್‍ನ ಹೊಸ ಸಿನಿಮಾ ತ್ರಯಂಬಕಂ. ಚಿತ್ರ ಶುರುವಾಗಿದೆ. ಚಿತ್ರಕ್ಕೆ ಕ್ಲಾಪ್ ಮಾಡಿರುವುದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ಇದೇ ಮೊದಲ ಬಾರಿಗೆ ಅಣ್ಣನ ಸಿನಿಮಾಗೆ ಕ್ಲಾಪ್ ಮಾಡಿದ್ದಾರಂತೆ ಪುನೀತ್.

    ಆರ್‍ಜೆ ರೋಹಿತ್ ಡಿಟೆಕ್ಟಿವ್ ಆಗಿ, ಅನುಪಮಾ ಗೌಡ ಜರ್ನಲಿಸ್ಟ್ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಅನುಪಮಾ ಗೌಡಗೆ ತಂದೆಯಾಗಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜ್‍ಕುಮಾರ್. ಕೋಲಾರದ ಅಂತರಗಂಗೆ ಬೆಟ್ಟದ ಸುತ್ತಮುತ್ತ ಚಿತ್ರೀಕರಣ ಶುರುವಾಗಿದೆ. ಶಿವರಾತ್ರಿಯ ವೇಳೆಗೆ ಸಿನಿಮಾ ರಿಲೀಸ್ ಎಂದಿದ್ದಾರೆ ದಯಾಳ್.

  • ರಾಜಕುಮಾರ ಮತ್ತೆ ಬಿಡುಗಡೆ : ಅಭಿಮಾನಿಗಳಿಗೆ ಉಚಿತ

    ರಾಜಕುಮಾರ ಮತ್ತೆ ಬಿಡುಗಡೆ : ಅಭಿಮಾನಿಗಳಿಗೆ ಉಚಿತ

    ರಾಜಕುಮಾರ. ಪುನೀತ್ ರಾಜ್‍ಕುಮಾರ್ ಜನಪ್ರಿಯತೆಯನ್ನು ಬೇರೆಯದ್ದೇ ಉತ್ತುಂಗಕ್ಕೇರಿಸಿದ ಚಿತ್ರ. ಪುನೀತ್ ನಿಧನದ ಹಿನ್ನೆಲೆಯಲ್ಲಿ ಆ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗುತ್ತಿದೆ. ಹಾಗಂತ.. ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಲ್ಲಿ ಅಲ್ಲ. ಬದಲಿಗೆ ಉಚಿತವಾಗಿ.

    ಇದು ನಡೆಯುತ್ತಿರೋದು ಬೆಂಗಳೂರಿನ ಶ್ರೀನಿವಾಸ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರದ ಪ್ರದರ್ಶನ ನಡೆಯುತ್ತಿದೆ. ಪದ್ಮನಾಭನಗರದ ಗೌಡನಪಾಳ್ಯದಲ್ಲಿರೋ ಶ್ರೀನಿವಾಸ ಚಿತ್ರಮಂದಿರದಲ್ಲಿ ಶೋ ನಡೆಯುತ್ತಿದೆ. ಇದೇ ಚಿತ್ರಮಂದಿರದಲ್ಲಿ ಶಿವಣ್ಣ ಅಭಿಮಾನಿಗಳ ಜೊತೆ ಕುಳಿತು ಭಜರಂಗಿ 2 ನೋಡಿದ್ದರು.

    ಚಿತ್ರಮಂದಿರದ ಮ್ಯಾನೇಜರ್ ರವಿ ಪುನೀತ್ ತಮ್ಮ ಚಿತ್ರಮಂದಿರಕ್ಕೆ ಬರುತ್ತಿದ್ದದ್ದು ಮತ್ತು ಚಿತ್ರಮಂದಿರದ ಸಿಬ್ಬಂದಿ ಜೊತೆ ಬೆರೆಯುತ್ತಿದ್ದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಪುನೀತ್ ಅವರ ಅಭಿನಯದ ಎಲ್ಲ ಚಿತ್ರಗಳೂ ಈ ಥಿಯೇಟರಿನಲ್ಲಿ ರಿಲೀಸ್ ಆಗಿವೆ ಎನ್ನುವುದು ಮತ್ತೊಂದು ವಿಶೇಷ.

  • ರಾಜಕುಮಾರನ ಭಾರ ಹೊತ್ತಿಲ್ಲ ಪುನೀತ್

    puneeth rajkumar Image

    ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ಇದೇ ವಾರ ರಿಲೀಸಾಗುತ್ತಿದೆ. ಮುಂದಿನ ಗುರುವಾರ ಮಧ್ಯರಾತ್ರಿಯೇ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಆದರೆ, ಚಿತ್ರದ ಬಗ್ಗೆ ಅತಿ ದೊಡ್ಡ ನಿರೀಕ್ಷೆ ಯಾವುದು ಗೊತ್ತಾ..? ಅಂಜನೀಪುತ್ರ, ರಾಜಕುಮಾರ ಚಿತ್ರದ ನಂತರ ಬರುತ್ತಿರುವ ಮೊದಲ ಪುನೀತ್ ಸಿನಿಮಾ. ನಿರೀಕ್ಷೆಯ ಭಾರ ಸಹಜವಾಗಿಯೇ ಹೆಚ್ಚಾಗಿದೆ.

    ಆದರೆ, ಅದರ ಭಾರ ನಾನು ಹೊರುವುದಿಲ್ಲ. ರಾಜಕುಮಾರ ದೊಡ್ಡ ಸಕ್ಸಸ್ ನಿಜ. ಆದರೆ, ಸಿನಿಮಾದಿಂದ ಸಿನಿಮಾಗೆ ನಾವು ಬದಲಾಗಲೇಬೇಕು. ಇಲ್ಲಿ ನಾನು ಒಂದು ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಪಾತ್ರವಷ್ಟೇ ಆಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ ಪುನೀತ್.

    ಅಂಜನೀಪುತ್ರದ ನಿರ್ದೇಶಕ ಹರ್ಷ. ಪುನೀತ್ & ಹರ್ಷ ಸುಮಾರು 18 ವರ್ಷಗಳಿಂದ ಸ್ನೇಹಿತರು. ಆ ಸ್ನೇಹ ಸಿನಿಮಾ ನಿರ್ಮಾಣದಲ್ಲೂ ಕೆಲಸ ಮಾಡಿದೆ. 

  • ರಾಜಕುಮಾರನ ಸಂಭ್ರಮದಲ್ಲಿ ನೆನಪಿನ ಕಾಣಿಕೆಗಳಷ್ಟೇ ಇರಲ್ಲ

    rajakumara 100 days invite

    ಜುಲೈ 7ಕ್ಕೆ, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​ನಲ್ಲಿ ರಾಜಕುಮಾರ ಚಿತ್ರದ ಶತದಿನೋತ್ಸವ ಸಂಭ್ರಮಾಚರಣೆ ನಡೆಯುತ್ತಿದೆ.ಇತರರಿಗೆ ಮಾದರಿಯಾಗುವಂತೆ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ, ಚಿತ್ರದಲ್ಲಿ ದುಡಿದ ಕಲಾವಿದರ, ತಂತ್ರಜ್ಞರಿಗೆ ತಮಗೆ ಬಂದ ಲಾಭದ ಸ್ವಲ್ಪ ಲಾಭಾಂಶವನ್ನೂ ಹಂಚುತ್ತಿದ್ದಾರೆ. ಸುಮಾರು 140 ತಂತ್ರಜ್ಞರಿಗೆ ಕಾರ್ಮಿಕರಿಗೆ, ಉಡುಗೊರೆಯ ಜೊತೆ ಲಾಭದ ಪಾಲನ್ನೂ ನೀಡುತ್ತಿದ್ದಾರೆ. 

    ಲಾಭ ಬಂದ ನಂತರ ಹೀಗೆ ಹಂಚಲೇಬೇಕು ಎನ್ನುವ ನಿಯಮವೇನೂ ಇಲ್ಲ. ಆದರೆ, ಕಾರ್ತಿಕ್ ಗೌಡ, ಹೊಸ ಸತ್​ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಸಮಾರಂಭದ ವೇದಿಕೆಯಲ್ಲಿ ಪುನೀತ್ ರಾಜ್​ಕುಮಾರ್, ನಿರ್ದೇಶಕ ಸಂತೋಷ್ ಆನಂದ್​ರಾಮ್ ಜೊತೆ ಇಡೀ ಚಿತ್ರತಂಡ, ರಾಜ್ ಕುಟುಂಬ, ಯಶ್, ಸುದೀಪ್, ಜಗ್ಗೇಶ್, ಉಪೇಂದ್ರ, ರವಿಚಂದ್ರನ್ ಸೇರಿದಂತೆ ಎಲ್ಲರೂ ಭಾಗವಹಿಸುತ್ತಿರುವುದು ವಿಶೇಷ. ರಾಜಕುಮಾರ ಚಿತ್ರದ ಯಶಸ್ಸು, ಇಡೀ ಚಿತ್ರರಂಗದ ಪಾಲಿಗೆ ಹಬ್ಬವಾಗಿದೆ.

     

    ಕಾರ್ಯಕ್ರಮದಲ್ಲಿ ನಟಿ ಹರಿಪ್ರಿಯಾ ಡ್ಯಾನ್ಸ್ ಇರಲಿದೆ. ಸಾಧು ಕೋಕಿಲ, ಚಿಕ್ಕಣ್ಣ ಕಾಮಿಡಿ ಇರಲಿದೆ. ಲೇಜರ್ ಶೋ, ಮಕ್ಕಳ ನೃತ್ಯ ಸೇರಿದಂತೆ ಭರ್ಜರಿ ಮನರಂಜನೆ ಇರಲಿದೆ. 

  • ರಾಜಕುಮಾರನಿಗೆ ಫೇಸ್​ಬುಕ್​ನಲ್ಲೂ ಪೈರಸಿ ಕಾಟ

    raajakumara

    ರಾಜಕುಮಾರ ಚಿತ್ರ ಶತದಿನೋತ್ಸವ ಆಚರಿಸಿ, ಚಿತ್ರರಂಗವನ್ನೇ ಸಂಭ್ರಮದಲ್ಲಿ ಮುಳುಗಿಸಿದೆ ನಿಜ. ಆದರೆ, ಅದ್ಭುತ ಸಂದೇಶವೂ ಇರುವ ಪುನೀತ್ ರಾಜ್​ಕುಮಾರ್ ಅಭಿನಯದ ಚಿತ್ರಕ್ಕೂ ಪೈರಸಿ ಕಾಟ ತಪ್ಪಿಲ್ಲ. ಈ ಮೊದಲು ಕೇಬಲ್ ಚಾನೆಲ್​ವೊಂದರಲ್ಲಿ ಚಿತ್ರ ಪ್ರಸಾರವಾಗಿತ್ತು. ನಂತರ ಅದು ಸಿಡಿಗಳ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು. ಖುದ್ದು ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ ಅವರೇ ಪೈರಸಿ ವಿರುದ್ಧ ಹೋರಾಡಿದ್ದರು.

    ಈ ಪೈರಸಿ ಕಾಟ ಈಗ ಫೇಸ್​ಬುಕ್​ಗೂ ಕಾಲಿಟ್ಟಿದೆ. ಫೇಸ್​ಬುಕ್​ನಲ್ಲಿ ಹಲವು ಪೇಜ್​ಗಳಲ್ಲಿ ರಾಜಕುಮಾರ ಚಿತ್ರದ ವಿಡಿಯೋ ಓಡಾಡುತ್ತಿದೆ. ಈ ಹಿಂದೆ ಚಿತ್ರಲೋಕ.ಕಾಮ್, ಕನ್ನಡ ಚಿತ್ರಗಳ ಪೈರಸಿ ಬಗ್ಗೆ ಮಾಹಿತಿ ನೀಡಿತ್ತು. ಚಿತ್ರರಂಗದ ಹಲವರಿಗೂ ಮಾಹಿತಿ ಹೋಗಿ, ಪೈರಸಿ ವಿರುದ್ಧ ಸಮರವೇ ನಡೆದಿತ್ತು.

    ಅಷ್ಟೇ ಏಕೆ, ಸ್ವತಃ ಹೊಂಬಾಳೆ ಪ್ರೊಡಕ್ಷನ್ಸ್​ನ ಕಾರ್ತಿಕ್ ಗೌಡ, 800ಕ್ಕೂ ಹೆಚ್ಚು ಲಿಂಕ್​ಗಳನ್ನು ಡಿಲೀಟ್ ಮಾಡಿಸಿದ್ದರು. ಇಷ್ಟಿದ್ದರೂ ಪೈರಸಿ ನಿಂತಿಲ್ಲ. 

    ಕನ್ನಡ ಚಿತ್ರರಸಿಕರಿಗೆ ಚಿತ್ರಲೋಕ.ಕಾಮ್ ಕೂಡಾ ಮಾಡುವ ಮನವಿ ಇಷ್ಟೆ. ಇಂತಹ ಪೈರಸಿ ಬಗ್ಗೆ ಮಾಹಿತಿ ಸಿಕ್ಕರೆ, ಗಮನಕ್ಕೆ ಬಂದರೆ, ತಕ್ಷಣ ಸಂಬಂಧಪಟ್ಟವರಿಗೆ ಅಥವಾ ಪೊಲೀಸರಿಗೆ ಮಾಹಿತಿ ಕೊಡಿ. ಚಿತ್ರರಂಗಕ್ಕೆ ಅಂಟಿರುವ ಶನಿಯಾಗಿರುವ ಪೈರಸಿ ನಿರ್ಮೂಲನೆಯಾಗಲೇ ಬೇಕು. ಕನ್ನಡ ಮತ್ತು ಕನ್ನಡ ಚಿತ್ರರಂಗದ ಉಳಿವಿಗಾಗಿ ಅದು ನಮ್ಮ ಸೇವೆ ಎಂದರೂ ತಪ್ಪಿಲ್ಲ.

  • ರಾಜಕುಮಾರನಿಗೆ ಶರಣಾದ ಬಾಹುಬಲಿ 2

    baahubali 2 surrendered to raajkumara

    ಬಾಹುಬಲಿ ಎಲ್ಲ ಕಡೆ ದಾಖಲೆ ಬರೆದು ಮುನ್ನುಗ್ಗಿರಬಹುದು. ಆದರೆ, ಲಾಂಗ್ ರನ್ ವಿಚಾರಕ್ಕೆ ಬಂದರೆ, ಕರ್ನಾಟಕದಲಿ ಬಾಹುಬಲಿ ಕನ್ನಡದ ರಾಜಕುಮಾರನ ಎದುರು ಶರಣಾಗಿದೆ. 100ನೇ ದಿನ ಸಮೀಪಿಸಿದರೂ,  ರಾಜಕುಮಾರನ ಕ್ರೇಜ್ ಹಾಗೇ ಇದೆ. ಜನ ಥಿಯೇಟರುಗಳಿಗೆ ಬರುತ್ತಲೇ ಇದ್ದಾರೆ. ರಾಜಕುಮಾರನಿಗೆ ಹೋಲಿಸಿದರೆ, ಬಾಹುಬಲಿ ಕಡಿಮೆ ಇದೆ.

    ಬಾಹುಬಲಿ ರಿಲೀಸ್ ಆಗಿ 50 ದಿನ ಕಳೆದಿದೆ. ಈಗ ಬೆಂಗಳೂರು ಒಂದನ್ನೇ ನೋಡೋದಾದ್ರೆ, ಬಾಹುಬಲಿ ಪ್ರದರ್ಶನವಾಗ್ತಾ ಇರೋ ಚಿತ್ರಮಂದಿರಗಳ ಸಂಖ್ಯೆ 21. ಆದರೆ, ರಾಜಕುಮಾರ ಚಿತ್ರ 35ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಂಟಿನ್ಯೂ ಆಗ್ತಿದೆ.  

    ಒಂದು ಚಿತ್ರ ಕಡಿಮೆ ಅವಧಿಯಲ್ಲಿ ಬಾಕ್ಸಾಫೀಸ್ ಗೆಲ್ಲುವುದು ಬೇರೆ. ಆದರೆ, ಚಿತ್ರವೊಂದು 100 ದಿನ ಸಮೀಪಿಸಿದರೂ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದರೆ, ಚಿತ್ರದಲ್ಲಿ, ಚಿತ್ರದ ಕಥೆಯಲ್ಲಿ ಅಂಥಾದ್ದೊಂದು ತಾಕತ್ ಇರಬೇಕು.

    ಅಷ್ಟೇ ಅಲ್ಲ, ರಾಜಕುಮಾರ ಚಿತ್ರಕ್ಕೆ ಪೈರಸಿ ಕಾಟವೂ ಕಾಡಿದೆ. ಅದನ್ನು ಕೇಬಲ್ ಚಾನೆಲ್‍ನಲ್ಲಿ ಹಾಕಿ, ಪ್ರಸಾರವನ್ನೂ ಮಾಡಲಾಗಿದೆ. ಈ ಎಲ್ಲದರ ನಡುವೆಯೂ ಪ್ರೇಕ್ಷಕರು ಥಿಯೇಟರ್‍ಗೇ ಬಂದು ಚಿತ್ರವನ್ನು ಮೆಚ್ಚುತ್ತಿದ್ದಾರೆ. ಆ ದೃಷ್ಟಿಯಲ್ಲಿ ರಾಜಕುಮಾರನ ಗೆಲುವನ್ನು ಇಡೀ ಚಿತ್ರರಂಗ ಸಂಭ್ರಮಿಸಲೇಬೇಕು.

     

     

     

  • ರಾಜಕುಮಾರರ ಸಿನಿಮಾ ಟೈಟಲ್ ಏನು..? ರಾಜ್ಯೋತ್ಸವಕ್ಕೆ ಕಾಯಬೇಕು..!

    rajakumara team will reveal movie title on nov 1st

    ರಾಜಕುಮಾರ ನಂತರ ಹೊಂಬಾಳೆ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಆನಂದ್‍ರಾಮ್ ಮತ್ತೊಮ್ಮೆ ಪುನೀತ್ ರಾಜ್‍ಕುಮಾರ್ ಜೊತೆ ಸೇರಿರುವ ಸಿನಿಮಾದ ಬಗ್ಗೆ ಅಕ್ಟೋಬರ್ 10ಕ್ಕೆ ಗುಡ್‍ನ್ಯೂಸ್ ಎಂದಿದ್ದ ಚಿತ್ರತಂಡ, ಈಗ ನವೆಂಬರ್ 1ರ ರಾಜ್ಯೋತ್ಸವದ ದಿನ ಗುಡ್‍ನ್ಯೂಸ್ ಎಂದಿದೆ. ನವೆಂಬರ್ 1ನೇ ತಾರೀಕು, ಅಭಿಮಾನಿ ದೇವರಿಂದ ಚಿತ್ರದ ಟೈಟಲ್ ಲಾಂಚ್ ಆಗಲಿದೆ.

    ಅಕ್ಟೋಬರ್ 10ರಂದೇ ಟೈಟಲ್ ಗೊತ್ತಾಗಲಿದೆ ಎಂದು ಕಾಯುತ್ತಿದ್ದವರಿಗೆ ಚಿತ್ರತಂಡ ಇನ್ನೂ ಒಂದು ತಿಂಗಳು ಕಾಯುವಿಕೆಯ ಮುಹೂರ್ತವಿಟ್ಟಿದೆ. ಆ ದಿನ ಅಭಿಮಾನಿಗಳಿಂದ.. ಅಭಿಮಾನದಿಂದ ಚಿತ್ರದ ಟೈಟಲ್ ಲಾಂಚ್ ಆಗಲಿದೆಯಂತೆ. ಕ್ಲೂ ಸಿಕ್ತಾ..?

  • ರಾಜರಥ ಟೀಂನಿಂದ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ

    powerstar mix to app by rajaratha tema

    ರಾಜರಥ ಚಿತ್ರದ ಟೈಟಲ್ ರೋಲ್ ಯಾರು..? ಹೀರೋ ನಿರೂಪ್ ಭಂಡಾರಿ ಅಲ್ಲ. ಅದು ಒಂದು ಬಸ್ಸು. ಆ ಬಸ್ಸಿನ ಹೆಸರೇ ರಾಜರಥ. ಆ ರಾಜರಥದ ಧ್ವನಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಂದರೆ ರಿಯಲ್ ರಾಜರಥ ಪುನೀತ್ ಅವರೇ. ತಮ್ಮ ಚಿತ್ರಕ್ಕೆ ಧ್ವನಿ ನೀಡಿ ಸಹಕರಿಸಿದ ಪುನೀತ್‍ಗೆ ರಾಜರಥ ಚಿತ್ರತಂಡ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ ನೀಡಿದೆ.

    ಪುನೀತ್ ರಾಜ್‍ಕುಮಾರ್, ಬಾಲ್ಯದಲ್ಲೇ ನಟನಾಗಿ ಮಿಂಚಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದವರು. ಹೀರೋ ಆದ ಮೇಲೆ ಸೂಪರ್ ಸ್ಟಾರ್ ಆದವರು. ಆದರೆ, ತಾನೊಬ್ಬ ಸ್ಟಾರ್ ಎಂಬ ಯಾವ ಹಮ್ಮು ಬಿಮ್ಮೂ ಇಲ್ಲದೆ ಬೆರೆಯುವ ಪುನೀತ್‍ಗೆ ಚಿತ್ರತಂಡ ಕೊಟ್ಟ ಉಡುಗೊರೆಯೇ ಪವರ್‍ಸ್ಟಾರ್ ಮಿಕ್ಸ್. ಅದು ಹುಟ್ಟುಹಬ್ಬದ ಕೊಡುಗೆ.

    ಪುನೀತ್ ಅಭಿನಯದ ಎಲ್ಲ ಚಿತ್ರಗಳ ಹೆಸರು ಮತ್ತು ಆ ಚಿತ್ರದಲ್ಲಿನ ಪುನೀತ್ ಲುಕ್ ಇರುವ ಫೋಟೋ ಬಳಸಿ ಸೃಷ್ಟಿಸಲಾಗಿರುವ ಪುಟ್ಟ ವಿಡಿಯೋದಲ್ಲಿ ರಾಜರಥ ಚಿತ್ರದ ಬಸ್ ಡೈಲಾಗುಗಳಿವೆ. 

    ರಾಜರ ವಂಶ ನಮ್ದು.. ನನ್ ಹೆಸರೇ ರಾಜರಥ ಅನ್ನೋ ಡೈಲಾಗ್‍ನೊಂದಿಗೆ ಎಂಡ್ ಆಗುವ ಈ ಪುಟ್ಟ ವಿಡಿಯೋ ಆನ್‍ಲೈನ್‍ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ. ಮೂರೇ ದಿನದಲ್ಲಿ ಲಕ್ಷಾಂತರ ಹಿಟ್ಸ್ ಗಿಟ್ಟಿಸಿರುವ ಪವರ್‍ಸ್ಟಾರ್ ಮಿಕ್ಸ್, ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. 

    ರಾಜರಥದಲ್ಲಿ ನಟನಾಗಿ ಅಲ್ಲದೆ, ಧ್ವನಿಯಾಗಿ ನಟಿಸಿರುವ ಪುನೀತ್, ರಾಜರಥದ ಹೀರೋಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ. ರಾಜರಥ ಚಿತ್ರವನ್ನು ನೋಡೋಕೆ, ಅವರ ಅಭಿಮಾನಿಗಳೂ ಈಗ ತುದಿಗಾಲಲ್ಲಿ ಕಾಯುವಂತಾಗಿದೆ.

  • ರಾಜ್ ಕುಟುಂಬದ ನಿಂದನೆಗೆಂದೇ ನಕಲಿ ಖಾತೆ ಸೃಷ್ಟಿ ದಂಧೆ

    ರಾಜ್ ಕುಟುಂಬದ ನಿಂದನೆಗೆಂದೇ ನಕಲಿ ಖಾತೆ ಸೃಷ್ಟಿ ದಂಧೆ

    ಇತ್ತೀಚೆಗೆ ಡಾ.ರಾಜ್ ಕುಟುಂಬದ ಹೀಯಾಳಿಸುವ ದಂಧೆ ಜೋರಾಗಿಯೇ ನಡೆಯುತ್ತಿದೆ. ಡಾ.ರಾಜ್, ಪಾರ್ವತಮ್ಮ, ಪುನೀತ್ ಅವರನ್ನಷ್ಟೇ ಅಲ್ಲ, ಅಶ್ವಿನಿಯವರನ್ನೂ ಬಿಡದೆ ಅಸಹ್ಯವಾಗಿ ಪೋಸ್ಟ್ ಹಾಕುವ ದಂಧೆಯೇ ನಡೆಯುತ್ತಿದೆ. ಶಿವಣ್ಣ, ಗೀತಾ, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಯಾರನ್ನ ಬಿಟ್ಟಿಲ್ಲ. ಅವರ ಮಕ್ಕಳನ್ನೂ ಬಿಟ್ಟಿಲ್ಲ. ಸಾವು, ಕಾಯಿಲೆ, ಬಣ್ಣ, ದೇಹದ ಗಾತ್ರ.. ಹೀಗೆ ಪ್ರತಿಯೊಂದನ್ನೂ ಹಿಡಿದು ಟ್ರೋಲ್ ಮಾಡುವ ಜನ ವ್ಯಕ್ತಿತ್ವ ಚಾರಿತ್ರ್ಯ ಹರಣಕ್ಕೂ ಇಳಿದಿದ್ದಾರೆ. ಸಾಮಾನ್ಯವಾಗಿ ರಾಜ್ ಫ್ಯಾಮಿಲಿ ಇಂತಹವುಗಳಿಗೆಲ್ಲ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರು ಆಕ್ಟಿವ್ ಕೂಡಾ ಇರಲಿಲ್ಲ. ಆದರೆ ಇತ್ತೀಚೆಗೆ ರೋಸಿ ಹೋದ ಅಭಿಮಾನಿಗಳೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದ್ದರು. ಇಂತಹ ಕೆಲವು ಅಕೌಂಟ್‍ಗಳನ್ನು ಪತ್ತೆ ಮಾಡಿರುವ ಸೈಬರ್ ಪೊಲೀಸರು ಸದ್ಯಕ್ಕೆ ಅವುಗಳನ್ನು ಡಿ-ಆಕ್ಟಿವೇಟ್ ಮಾಡಿದ್ದಾರೆ. ಶೀಘ್ರದಲ್ಲೇ ಅರೆಸ್ಟ್ ಕೂಡಾ ಮಾಡಲಿದ್ದಾರೆ.

    ಮಂಡ್ಯದ ಒಬ್ಬ ಯುವಕ ಡಿ ಬಾಸ್ ಕರ್ನಾಟಕ ಎಂಬ ಅಕೌಂಟ್ ತೆರೆದಿದ್ದಾನೆ. ಮತ್ತೊಬ್ಬ ಮೈಸೂರಿನಲ್ಲಿ ನಾಗರಾಜ್ ದಚ್ಚ ಎಂಬ ಹೆಸರಲ್ಲಿ ಅಕೌಂಟ್ ಆಕ್ಟಿವ್ ಮಾಡಿದ್ದ. ಕಿಚ್ಚ ಹರೀಶ್ ಎಂಬ ಮತ್ತೊಬ್ಬ ಬೆಂಗಳೂರಿನವನು. ಗಡ್ಡ ಸ್ಟೈಲ್ ದಚ್ಚು ನಾಗರಾಜ್ (ಡಿ ಬಾಸ್) ಎಂಬ ಮತ್ತೊಬ್ಬ ಮೈಸೂರಿನವನು. ಇವರೆಲ್ಲ ಒಬ್ಬೊಬ್ಬರೂ ಹಲವು ಫೇಕ್ ಅಕೌಂಟ್ ಸೃಷ್ಟಿಸಿ, ಅವುಗಳಲ್ಲಿ ಡಾ.ರಾಜ್ ಕುಟುಂಬದವರ ಬಗ್ಗೆ ಅವಹೇಳನ, ಲೇವಡಿಯನ್ನೇ ಕಾಯಕ ಮಾಡಿಕೊಂಡಿದ್ದರು. ಒಬ್ಬನಂತೂ 150ಕ್ಕೂ ಹೆಚ್ಚು ಅಕೌಂಟ್ ಓಪನ್ ಮಾಡಿ ಟ್ರೋಲ್ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಈ ಬಗ್ಗೆ ಸೈಬರ್ ಪೊಲೀಸರು ಸದ್ಯಕ್ಕೆ ನಾಲ್ವರ ಹೆಸರು ಬಹಿರಂಗಪಡಿಸಿದ್ದು, ಇಂತಹ ಇನ್ನು ಹಲವರ ಹೆಸರುಗಳಿದ್ದು, ಶೀಘ್ರದಲ್ಲೇ ಅರೆಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.

  • ರಾಜ್ ಸಮಾಧಿಯೆದರು ಪುನೀತ್, ಚರಣ್ ರಾಜ್ ಭೇಟಿಯಾದಾಗ...

    surprise meet of two rajsmaraka

    ಚರಣ್ ರಾಜ್, ಕನ್ನಡದವರೇ. ಸ್ಟಾರ್ ಆಗಿ ಬೆಳೆದಿದ್ದು ತಮಿಳು ಚಿತ್ರರಂಗದಲ್ಲಿ. ಇವರು ಇತ್ತೀಚೆಗೆ ಡಾ.ರಾಜ್ ಸಮಾಧಿಗೆ ಭೇಟಿ ಕೊಟ್ಟಿದ್ದರು. ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದ ವೇಳೆ ಚರಣ್‍ರಾಜ್ ಬೆಂಗಳೂರಿನಲ್ಲಿ ಇರಲಿಲ್ಲ. ಅದಾದ ಮೇಲೆ ಬರಲೂ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಚರಣ್‍ರಾಜ್, ಇತ್ತೀಚೆಗೆ ಡಾ.ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. 

    ಇನ್ನು ಕಾಕತಾಳೀಯವೋ ಎಂಬಂತೆ ಪುನೀತ್ ರಾಜ್‍ಕುಮಾರ್ ಕೂಡಾ ಅಲ್ಲಿಗೆ ಬಂದಿದ್ದಾರೆ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ದಿಢೀರನೆ ಸಮಾಧಿಗೆ ಭೇಟಿ ಕೊಡುವುದು ಹೊಸದೇನೂ ಅಲ್ಲ. ಅಲ್ಲಿಯೇ ಚರಣ್‍ರಾಜ್ ಅವರನ್ನು ಭೇಟಿ ಮಾಡಿದ ಪುನೀತ್, ನಿಮ್ಮ ಜೊತೆ ಸಿನಿಮಾ ಮಾಡಲು ಕಾಲ ಕೂಡಿ ಬರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ದೊಡ್ಡಮನೆ ಸಿನಿಮಾ ಮಾಡೋದಕ್ಕಿಂತ ಭಾಗ್ಯ ಇನ್ನೇನಿದೆ. ಶಿವಣ್ಣನ ಜೊತೆ ಈಗಾಗಲೇ ಸಿನಿಮಾ ಮಾಡಿದ್ದೇನೆ. ನೀವು ಯಾವಾಗ ಕರೆದರೂ ನಾನು ರೆಡಿ ಎಂದರಂತೆ ಚರಣ್‍ರಾಜ್. ಬೇಗನೆ ಒಟ್ಟಿಗೇ ಸಿನಿಮಾ ಮಾಡೋ ಕಾಲ ಹತ್ತಿರದಲ್ಲಿದೆ ಎಂದರಂತೆ ಪುನೀತ್. ಅಭಿಮಾನಿಗಳು ಕಾಯುತ್ತಿದ್ದಾರೆ. 

     

  • ರಾಜ್ಯದ 600+ ಚಿತ್ರಮಂದಿರಗಳಲ್ಲಿ ಇಂದು ಅಪ್ಪುಗೆ ಶ್ರದ್ಧಾಂಜಲಿ

    ರಾಜ್ಯದ 600+ ಚಿತ್ರಮಂದಿರಗಳಲ್ಲಿ ಇಂದು ಅಪ್ಪುಗೆ ಶ್ರದ್ಧಾಂಜಲಿ

    ಸಂಜೆ 6 ಗಂಟೆಗೆ ರಾಜ್ಯದ 600ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಾವಿರಾರು ಜನ ನೆರಯಲಿದ್ದು, ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. ಶ್ರದ್ಧಾಂಜಲಿ ಅರ್ಪಿಸಲು ಸಿನಿಮಾಗೆ ಟಿಕೆಟ್ ಪಡೆದು ಹೋಗಿರುವ ಪ್ರೇಕ್ಷಕರೇ ಆಗಿರಬೇಕಿಲ್ಲ. ಶ್ರದ್ಧಾಂಜಲಿ ನಡೆಯುವುದು ಥಿಯೇಟರ್ ಆವರಣಗಳಲ್ಲಿ. ಅಭಿಮಾನಿಗಳಾಗಿದ್ದವರು ಯಾರು ಬೇಕಾದರೂ ಹೋಗಿ ಈ ಶ್ರದ್ಧಾಂಜಲಿಯಲ್ಲಿ ಭಾಗವಹಿಸಬಹುದು.

    ಗೀತಾಂಜಲಿ.. ಪುಷ್ಪಾಂಜಲಿ.. ದೀಪಾಂಜಲಿ.. ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ನೂರಾರು ದೀಪ ಬೆಳಗಿಸಿ ಅಪ್ಪು ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಡಾ.ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಮೂಲಕ ನಮನ ಸಲ್ಲಿಸಲಾಗುತ್ತದೆ ಎಂದು ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ತಿಳಿಸಿದ್ದಾರೆ.

  • ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅಪ್ಪುಗೆ ಶ್ರದ್ಧಾಂಜಲಿ

    ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅಪ್ಪುಗೆ ಶ್ರದ್ಧಾಂಜಲಿ

    ರಾಜ್ಯದ 650ಕ್ಕೂ ಹೆಚ್ಚು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲಿ ಏಕಕಾಲಕ್ಕೆ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಲ್ಲ ಚಿತ್ರಮಂದಿರಗಳಲ್ಲಿ ದೀಪ ಬೆಳಗಿ, ಮೌನಾಚರಣೆ ಮಾಡಿ ಅಪ್ಪು ಆತ್ಮಕ್ಕೆ ಪ್ರದರ್ಶಕರು, ಚಿತ್ರಮಂದಿರದ ಸಿಬ್ಬಂದಿ ಅಶ್ರುತರ್ಪಣ ಮಾಡಿದರು.

    ವೀರೇಶ್ ಚಿತ್ರಮಂದಿರದಲ್ಲಿ ನಡೆದ ಅಶ್ರುತರ್ಪಣದಲ್ಲಿ ಭಾಗವಹಿಸಿದ್ದ  ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ `ನಮ್ಮ ಚಿತ್ರಮಂದಿರಕ್ಕೆ ಅಣ್ಣಾವ್ರು ಸಿನಿಮಾ ಮಾಡೋಕೆ ಬರುತ್ತಿದ್ದರು. ಅಣ್ಣಾವ್ರ ಚಿತ್ರಗಳು ನಿರಂತರವಾಗಿ ಪ್ರದರ್ಶನವಾಗುತ್ತಿದ್ದ ಚಿತ್ರಮಂದಿರ ನಮ್ಮದು. ಆಮೇಲೆ ಅಪ್ಪು ಚಿತ್ರಗಳು ಬರುತ್ತಿದ್ದವು ಎಂದು ನೆನಪಿಸಿಕೊಂಡು ಭಾವುಕರಾದರು.

    ಅಪ್ಪು ಶ್ರದ್ಧಾಂಜಲಿಗೆಂದೇ ಡಾ.ನಾಗೇಂದ್ರ ಪ್ರಸಾದ್ ಬರೆದಿದ್ದ ಹಾಡು ಕೇಳಿ ಅಭಿಮಾನಿಗಳು ಕಣ್ಣೀರಾದರು. ನನಗೆ ಈ ಕ್ಷಣಕ್ಕೂ ಅಪ್ಪು ಇಲ್ಲ ಅನ್ನೋದನ್ನು ನಂಬೋಕೆ ಆಗುತ್ತಿಲ್ಲ ಎಂದರು ನಾಗೇಂದ್ರ ಪ್ರಸಾದ್.

  • ರಾಜ್ಯೋತ್ಸವಕ್ಕೆ ಕರ್ನಾಟಕ ರತ್ನ ಪ್ರದಾನ

    ರಾಜ್ಯೋತ್ಸವಕ್ಕೆ ಕರ್ನಾಟಕ ರತ್ನ ಪ್ರದಾನ

    ದಿ.ಪುನೀತ್ ರಾಜಕುಮಾರ್ ಅವರಿಗೆ ರಾಜ್ಯ ಸರ್ಕಾರ ಈಗಾಗಲೇ ಕರ್ನಾಟಕ ರತ್ನ ಪುರಸ್ಕಾರ ಘೋಷಿಸಿದೆ. ಮರಣೋತ್ತರವಾಗಿ ಘೋಷಣೆಯಾಗಿದ್ದ ಪ್ರಶಸ್ತಿ ಪ್ರದಾನ ಯಾವಾಗ ಎಂಬುದು ನಿಗದಿಯಾಗಿರಲಿಲ್ಲ. ಈಗ ಖುದ್ದು ಸಿಎಂ ಬೊಮ್ಮಾಯಿಯವರೇ ದಿನಾಂಕ ಘೋಷಿಸಿದ್ದಾರೆ. 2022ರ ನವೆಂಬರ್ 1ರಂದು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವುದಾಗಿ ಹೇಳಿದ್ದಾರೆ.

    ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಈ ಬಾರಿ ಪುನೀತ್ ನೆನಪಿನಲ್ಲಿಯೇ ಆಯೋಜಿಸಲಾಗಿದೆ. ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪುಷ್ಪೋತ್ಸವದಲ್ಲಿ ಪುನೀತ್, ಡಾ.ರಾಜ್ ಪ್ರತಿಮೆಗಳೇ ಆಕರ್ಷಣೆ. ಈ ಕಾರ್ಯಕ್ರಮ ಉದ್ಘಾಟನೆ ವೇಳೆ ಬೊಮ್ಮಾಯಿ ಕರ್ನಾಟಕ ರತ್ನ ದಿನಾಂಕ ಘೋಷಿಸಿದ್ದಾರೆ.

    2021ರ ನವೆಂಬರ್ 1ರಂದು ಇಡೀ ಕರುನಾಡು ಪುನೀತ್ ಅವರನ್ನು ಕಳೆದುಕೊಂಡ ನೋವಿನಲ್ಲಿತ್ತು. ಈ ಬಾರಿ ಅದೇ ನವೆಂಬರ್ 1 ಪುನೀತ್ ಹಬ್ಬವಾಗಲಿದೆ. ಆ ಕಾರ್ಯಕ್ರಮದಲ್ಲಿ ದೊಡ್ಡಮನೆಯ ಎಲ್ಲರೂ ಭಾಗವಹಿಸಲಿದ್ದಾರೆ.

  • ರಾಮಾ ರಾಮಾ ರೇ ಡೈರೆಕ್ಟರ್ ಚಿತ್ರದಲ್ಲಿ ಅಪ್ಪು

    puneeth's next film with satyaprakash

    ಪುನೀತ್ ರಾಜ್‌ಕುಮಾರ್, ಅತ್ತ ಕಡೆ ಕಮರ್ಷಿಯಲ್.. ಇತ್ತ ಕಡೆ ಪ್ರಯೋಗಾತ್ಮಕ ಚಿತ್ರಗಳ ಪ್ರಯೋಗಕ್ಕಿಳಿದಿದ್ದಾರೆ. ತಮ್ಮದೇ ಬ್ಯಾನರ್‌ನಲ್ಲಿ ತಾವೇ ನಿರ್ಮಾಪಕರಾಗಿ ಕವಲುದಾರಿಯಂತಹ ಚಿತ್ರ ನೀಡಿ ಗೆದ್ದ ಪುನೀತ್, ಈಗ ಮಾಯಾಬಜಾರ್ ಚಿತ್ರವನ್ನು ರಿಲೀಸ್ ಮಾಡಲು ರೆಡಿಯಾಗುತ್ತಿದ್ದಾರೆ. ಇನ್ನೂ ಎರಡು ಚಿತ್ರಗಳು ಪ್ರೊಡಕ್ಷನ್ ಹಂತದಲ್ಲಿವೆ. ಹೀಗಿರುವಾಗಲೇ ತಾವೇ ಹೀರೋ ಆಗಿರುವ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಪಿಆರ್‌ಕೆ ಬ್ಯಾನರ್‌ನಲ್ಲಿ ರಾಮಾ ರಾಮಾ ರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರೇ ಹೀರೋ. ಅವರೇ ಪ್ರೊಡ್ಯೂಸರ್. ೨೦೨೦ರ ಆರಂಭದಲ್ಲಿ ಚಿತ್ರದ ಕೆಲಸ ಶುರುವಾಗಲಿದ್ದು, ಸತ್ಯಪ್ರಕಾಶ್ ಪ್ರಿಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  • ರಾಯರನ್ನು ನೆನೆದ ಯುವರತ್ನ ಟೀಂ

    ರಾಯರನ್ನು ನೆನೆದ ಯುವರತ್ನ ಟೀಂ

    ಭರ್ಜರಿ ಓಪನಿಂಗ್ ಕಂಡು, ಕಣ್ಣಿಗೆ ಕಾಣದ ತಂತ್ರಗಳಿಗೆ ಅಡೆತಡೆಯನ್ನೂ ಎದುರಿಸಿ, ಅಭಿಮಾನಿ ಮತ್ತು ಅಭಿಮಾನದಿಂದ ಗೆದ್ದು ಬೀಗುತ್ತಿರುವ ಯುವರತ್ನ ಚಿತ್ರತಂಡ ಮಂತ್ರಾಲಯದಲ್ಲಿ ಗುರು ರಾಯರ ಆಶೀರ್ವಾದ ಪಡೆದುಕೊಂಡಿದೆ.

    ಪುನೀತ್ ರಾಜ್‍ಕುಮಾರ್ ಜೊತೆ ನಿರ್ಮಾಪಕರಾದ ಕಾರ್ತಿಕ್ ಗೌಡ, ಡೈರೆಕ್ಟರ್ ನಂದಕಿಶೋರ್ ಹಾಗೂ ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಮಂತ್ರಾಲಯ ಮಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಶ್ರೀಗಳು ಪುನೀತ್ ಅವರಿಗೆ ಆಶೀರ್ವಚನ ನೀಡಿದರು.

  • ರೆಡ್ಡಿ ಪುತ್ರ ಕಿರೀಟಿ ಕಂಡಂತೆ ಪುನೀತ್

    ರೆಡ್ಡಿ ಪುತ್ರ ಕಿರೀಟಿ ಕಂಡಂತೆ ಪುನೀತ್

    ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದಕ್ಕಾಗಿ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಪುನೀತ್ ನಿರ್ಮಿಸಿದ್ದ ಮಾಯಾಬಜಾರ್ ಚಿತ್ರ ನಿರ್ದೇಶಿಸಿದ್ದ ರಾಧಾಕೃಷ್ಣ ಅವರೇ, ಕಿರೀಟಿಯ ಮೊದಲ ಚಿತ್ರಕ್ಕೆ ಡೈರೆಕ್ಟರ್. ಸಿನಿಮಾದ ಟೀಸರ್ ಬಿಡುಗಡೆಗೆ ಮುನ್ನ ಕಿರೀಟಿ ಅಪ್ಪು ಜೊತೆ ಕಳೆದಿದ್ದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಬಾಲ್ಯದಲ್ಲಿದ್ದಾಗ ಅಪ್ಪು ಜೊತೆ ತೆಗೆಸಿಕೊಂಡಿದ್ದ ಫೋಟೋ ಮತ್ತು ಜಾಕಿ ಚಿತ್ರದ ರಿಲೀಸ್ ವೇಳೆ ತೆಗೆಸಿಕೊಂಡಿದ್ದ ಮತ್ತೊಂದು ಫೋಟೋ.. ಎರಡನ್ನೂ ಸೋಷಿಯಲ್ ಮೀಡಿಯಾಗೆ ಹಾಕಿದ್ದಾರೆ. ಜಾಕಿ ರಿಲೀಸ್ ದಿನ ಮಳೆ ಬರುತ್ತಿತ್ತಂತೆ. ಆ ದಿನ ಅಪ್ಪು ಅವರೇ ಇವರಿಗೂ ಕೊಡೆ ಹಿಡಿದುಕೊಂಡು ಕರೆದುಕೊಂಡು ಬಂದಿದ್ದರಂತೆ. ನನ್ನಂತಹ ಚಿಕ್ಕ ಹುಡುಗನಿಗೆ ಕೊಡೆ ಹಿಡಿದಿದ್ದ ಅಪ್ಪು ಸರಳತೆಯ ಮೌಲ್ಯವನ್ನು ಕಲಿಸಿಕೊಟ್ಟರು.

    ನನಗೆ ಅವರೇ ಸ್ಫೂರ್ತಿ, ಮಾರ್ಗದರ್ಶಿ ಮತ್ತು ಮಾದರಿ. ನಿಮ್ಮನ್ನು ನೀವು ಹೇಳಿದ್ದ ಮಾತುಗಳನ್ನು ಮರೆಯಲ್ಲ ಸರ್. ನಿಮ್ಮ ನಂಬಿಕೆಗೆ ಚ್ಯುತಿ ಬರದಂತೆ ಎಲ್ಲರೂ ಹೆಮ್ಮೆ ಪಡುವಂತೆ ಶ್ರಮಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ ಕಿರೀಟಿ.