` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಯುವರತ್ನ’ನಿಗೆ All The Best ಎಂದ ಸಲಗ

    ಯುವರತ್ನ’ನಿಗೆ All The Best ಎಂದ ಸಲಗ

    ಇದೇ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿರುವ ಯುವರತ್ನ ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ ನಟ ದುನಿಯಾ ವಿಜಯ್. ಯುವರತ್ನ ನಂತರ ಕ್ಯೂನಲ್ಲಿರೋ ಸಿನಿಮಾ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿ, ನಟಿಸಿರುವ ಸಲಗ. ಯುವರತ್ನ ಚಿತ್ರದ ಬಗ್ಗೆ ಖುಷಿ ಪಡೋಕೆ ದುನಿಯಾ ವಿಜಯ್ ಅವರಿಗೆ ಹಲವು ಕಾರಣಗಳಿವೆ.

    ಪುನೀತ್ ಸಿನಿಮಾ ಎಂದರೆ ಫ್ಯಾಮಿಲಿ ಓರಿಯಂಟೆಡ್ ಇರುತ್ತವೆ. ಇದು ಜನರನ್ನು ಖಂಡಿತಾ ಥಿಯೇಟರಿಗೆ ಜನರನ್ನು ಕರೆದುಕೊಂಡು ಬರಲಿದೆ. ಇನ್ನು ಗೆಳೆಯ ಸಂತೋಷ್ ಆನಂದರಾಮ್ ಈ ಹಿಂದೆ ರಾಜಕುಮಾರದಂತಾ ಸಕ್ಸಸ್ ಕೊಟ್ಟವರು. ಜೊತೆಗೆ ನನ್ನ ಪ್ರೀತಿಯ ಡಾಲಿ ಇಲ್ಲೂ ಅದ್ಭುತ ನಟನೆ ಮುಂದುವರೆಸಿದ್ದಾನೆ. ಆಲ್ ದಿ ಬೆಸ್ಟ್ ಯುವರತ್ನ ಟೀಂ ಎಂದಿದ್ದಾರೆ ದುನಿಯಾ ವಿಜಯ್.

    ಯುವರತ್ನ ಚಿತ್ರ ಥಿಯೇಟರಿಗೆ ಬರುವ ಹೊತ್ತಿಗೆ ದುನಿಯಾ ವಿಜಯ್ ತಮ್ಮ ಸಲಗ ಚಿತ್ರದ ಪ್ರಚಾರದ ವೇಗವನ್ನು ಹೆಚ್ಚಿಸಲಿದ್ದಾರೆ. ಕೋವಿಡ್ ಬಿಕ್ಕಟ್ಟಿನ ನಂತರ ಚಿತ್ರರಂಗದ ದೊಡ್ಡ ದೊಡ್ಡ ನಟರ ಚಿತ್ರಗಳು ಕನಿಷ್ಠ 2 ವಾರದ ಗ್ಯಾಪ್ ನೋಡಿಕೊಂಡು ಚಿತ್ರಗಳನ್ನು ರಿಲೀಸ್ ಮಾಡುತ್ತಿದ್ದು, ಮುಂದಿನ ಸರದಿ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ್ದಾಗಿದೆ.

  • ಯುವರತ್ನಕ್ಕೆ ಜಾನಿ ಮಾಸ್ಟರ್ ಎಂಟ್ರಿ

    johnny master once again with puneeth rajkuamr

    ಡ್ಯಾನ್ಸ್ ಅಪ್ಪು.. ಡ್ಯಾನ್ಸ್ ಅಪ್ಪು.. ಹಾಡಿನಲ್ಲಿ ಮೋಡಿ ಮಾಡಿದ್ದ ಪುನೀತ್ ರಾಜ್‍ಕುಮಾರ್ ಹಿಂದಿದ್ದವರು ಜಾನಿ ಮಾಸ್ಟರ್. ಈಗ ಯುವರತ್ನ ಚಿತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಜಾನಿ ಮಾಸ್ಟರ್ ಬರುತ್ತಿರುವ ಸುಳಿವು ಕೊಟ್ಟಿದ್ದಾರೆ ನಿರ್ದೇಶಕ ಸಂತೋಷ್ ಆನಂದ್‍ರಾಮ್.

    ತಮನ್ ಸಂಯೋಜನೆಯ ಸೂಪರ್ ಸಾಂಗ್‍ಗೆ ಹೆಜ್ಜೆ ಹಾಕಲಿದ್ದಾರೆ ಪುನೀತ್. ಡ್ಯಾನ್ಸ್ ಸ್ಟೆಪ್ ಹೇಳಿ ಕೊಡಲಿರುವುದು ಜಾನಿ ಮಾಸ್ಟರ್. ಒಟ್ಟಿನಲ್ಲಿ ಯುವರತ್ನ ಚಿತ್ರದ ಕ್ರೇಜ್ ಇನ್ನಷ್ಟು ಮತ್ತಷ್ಟು ಏರುತ್ತಲೇ ಹೋಗುತ್ತಿದೆ

  • ಯುವರತ್ನನ ಗುರು ಚಾಲೆಂಜ್  #MyGuru

    ಯುವರತ್ನನ ಗುರು ಚಾಲೆಂಜ್  #MyGuru

    ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರದ ಪ್ರಮೋಷನ್ ಸದ್ದಿಲ್ಲದೆ ದೊಡ್ಡ ಮಟ್ಟದಲ್ಲೇ ಶುರುವಾಗಿದೆ. ಈ ಹಾದಿಯಲ್ಲಿ ಯುವರತ್ನ ಟೀಂ ಇಟ್ಟಿರೋ ಹೆಜ್ಜೆ ಗುರು ಚಾಲೆಂಜ್. ಈ ಹಾದಿಯಲ್ಲಿ ಪುನೀತ್ ತಮ್ಮ ಟೀಚರ್  ವಿಜಯಲಕ್ಷ್ಮಿ ನನ್ನ ಗುರು ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಧ್ರುವ ಸರ್ಜಾ, ನನ್ನ ಅಣ್ಣ ಚಿರಂಜೀವಿ ಸರ್ಜಾ ನನ್ನ ಗುರು ಎಂದು ಟ್ವೀಟ್ ಮಾಡಿದ್ದಾರೆ.

    ಇದು ವೈರಲ್ ಆಗೋಕೆ ಶುರುವಾದಂತೆಯೇ ಅಭಿಮಾನಿಗಳೂ ಜೋರಾಗಿದ್ದಾರೆ. ಅವರು ತಮ್ಮ ತಮ್ಮ ಗುರುವಿನ ಜೊತೆ ಇರೋ ಫೋಟೋಗಳನ್ನು ಅಪ್ಲೋಡ್ ಮಾಡಿ, ಅವರ ಹೆಸರು ಹಾಕಿ, ಅದನ್ನು ಮುಂದಿನವರಿಗೆ ಪಾಸ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಯುವರತ್ನ ಚಿತ್ರದ ಬಿಡುಗಡೆಗೆ #MyGuru ಚಾಲೆಂಜ್ ವೇದಿಕೆ ಸಿದ್ಧಪಡಿಸುತ್ತಿದೆ.

    ಸಂತೋಷ್ ಆನಂದರಾಮ್ ನಿರ್ದೇಶನದಲ್ಲಿ ಪುನೀತ್ ಅವರಿಗೆ ಇದು 2ನೇ ಸಿನಿಮಾ. ರಾಜಕುಮಾರ ನಂತರ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು, ಸಂತೋಷ್ ಆನಂದರಾಮ್ ಮತ್ತು ಪುನೀತ್ ಮತ್ತೆ ಒಟ್ಟಿಗೇ ನಟಿಸುತ್ತಿರುವ ಸಿನಿಮಾ ಇದು. ಹೀಗಾಗಿ ಸೆನ್ಸೇಷನ್ ಜೋರಾಗಿದೆ.

  • ಯುವರತ್ನನ ಜೊತೆ 120 ಹೊಸಬರ ಎಂಟ್ರಿ..!

    ಯುವರತ್ನನ ಜೊತೆ 120 ಹೊಸಬರ ಎಂಟ್ರಿ..!

    ಒಬ್ಬರಲ್ಲ.. ಇಬ್ಬರಲ್ಲ.. ಬರೋಬ್ಬರಿ 120ಕ್ಕೂ ಹೆಚ್ಚು ಕಲಾವಿದರು. ಇವರೆಲ್ಲರೂ ಯುವರತ್ನ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರೆಲ್ಲರೂ ಸ್ಟೂಡೆಂಟ್ಸ್ ಎನ್ನುವುದು ವಿಶೇಷ. ಈಗಾಗಲೇ ಚಿತ್ರದಲ್ಲಿ 30ಕ್ಕೂ ಹೆಚ್ಚು ಕಲಾವಿದರಿದ್ದಾರೆ.

    ಯುವರತ್ನದ ಒಂದು ಸೆಗ್ಮೆಂಟ್ನಲ್ಲಿ ಕಾಲೇಜ್ ಸ್ಟೋರಿ ಇದ್ದು, ಅಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಅಂತಹ ಪಾತ್ರಗಳಿಗೆ ಜ್ಯೂ. ಆರ್ಟಿಸ್ಟ್ಗಳನ್ನೇ ಬಳಸಿಕೊಂಡುಬಿಡ್ತಾರೆ. ಆದರೆ, ಯುವರತ್ನ ಚಿತ್ರದಲ್ಲಿ ಅದಕ್ಕಾಗಿಯೇ 2 ಸಾವಿರಕ್ಕೂ ಹೆಚ್ಚು ಪ್ರತಿಭೆಗಳನ್ನು ಹುಡುಕಿ, 120 ಜನರನ್ನು ಆಯ್ಕೆ ಮಾಡಿ ಅವಕಾಶ ನೀಡಲಾಗಿದೆ. ಆ ಎಲ್ಲ 120 ಪ್ರತಿಭೆಗಳಿಗೂ ರಂಗಭೂಮಿ,  ಶಾರ್ಟ್ ಫಿಲಂ ಹಿನ್ನೆಲೆಯಿರುವುದು ವಿಶೇಷ.

    ಚಿತ್ರಕ್ಕೆ 140 ದಿನ ಶೂಟಿಂಗ್ ಮಾಡಲಾಗಿದ್ದು, ಅದರಲ್ಲಿ ಸುಮಾರು 120 ದಿನ ಈ ಎಲ್ಲ 120 ಹೊಸ ಪ್ರತಿಭಾವಂತರೂ ಸೆಟ್ನಲ್ಲಿದ್ದರಂತೆ. 30ಕ್ಕೂ ಹೆಚ್ಚು ಸೀನಿಯರ್ ಕಲಾವಿದರು, ತಂತ್ರಜ್ಞರ ಜೊತೆ ಇಷ್ಟು ದೊಡ್ಡ ತಂಡವನ್ನೂ ನಿಭಾಯಿಸಿ ಗೆದ್ದಿರುವುದು ವಿಜಯ್ ಕಿರಗಂದೂರು ಮತ್ತು ಸಂತೋಷ್ ಆನಂದರಾಮ್.  ಪುನೀತ್ ಅಭಿನಯಿಸಿರೋ ಚಿತ್ರ ಇದೇ ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿದೆ.

  • ಯುವರತ್ನನ ಜೊತೆ ಡಾಲಿ ಅಷ್ಟೇ ಅಲ್ಲ, ಚಿಟ್ಟೇನೂ ಇರುತ್ತೆ..!

    vasistha simha joins yuvaratna team

    ಪ್ರೇಮಿಗಳ ದಿನದಂದು ಯುವರತ್ನ ಚಿತ್ರದ ಶೂಟಿಂಗ್ ಆರಂಭಿಸೋದಾಗಿ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅಂದುಕೊಂಡಂತೆಯೇ ಸ್ಟಾರ್ಟ್.. ಕ್ಯಾಮೆರಾ.. ಆ್ಯಕ್ಷನ್ ಹೇಳಿಬಿಟ್ಟಿದ್ದಾರೆ. ಚಿತ್ರಕ್ಕಿನ್ನೂ ನಾಯಕಿ ಫೈನಲ್ ಆಗಿಲ್ಲ. ಆದರೆ, ವಿಲನ್‍ಗಳು ಫಿಕ್ಸ್.

    ನಿನ್ನೆಯಷ್ಟೇ ಯುವರತ್ನ ಚಿತ್ರದಲ್ಲಿ ಡಾಲಿ ಧನಂಜಯ್ ಇರ್ತಾರೆ ಎಂಬ ಸುದ್ದಿ ಕೊಟ್ಟಿದ್ದ ಚಿತ್ರತಂಡ, ಈಗ ಇನ್ನೊಂದು ವಿಲನ್ ಸುದ್ದಿ ಕೊಟ್ಟಿದೆ. ಡಾಲಿ ಜೊತೆ ಚಿಟ್ಟೆ ಕೂಡಾ ಚಿತ್ರದಲ್ಲಿರ್ತಾರಂತೆ. 

    ಚಿಟ್ಟೆ ವಸಿಷ್ಠ ಸಿಂಹ ಪಾತ್ರ ಏನು..? ಖಳನೋ.. ಪೋಷಕ ನಟನೋ.. ಅನ್ನೋದು ಇನ್ನೂ ಪಕ್ಕಾ ಆಗಿಲ್ಲ. ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ, ಭರ್ಜರಿ ನಿರೀಕ್ಷೆ ಹುಟ್ಟಿಸುತ್ತಿರುವುದಂತೂ ನಿಜ.

  • ಯುವರತ್ನನ ನಾಯಕಿ ರತ್ನ ಇವಳೇನಾ..?

    has sayeesha shaigal been roped in to play lean in yuvaratna

    ಯುವರತ್ನ ಚಿತ್ರಕ್ಕೆ ಇನ್ನೂ ನಾಯಕಿ ಫೈನಲ್ ಆಗಿಲ್ಲ. ಯಾರು.. ಯಾರು.. ಎಂದು ಹುಡುಕಾಟ ನಡೆಯುತ್ತಿರುವಾಗಲೇ ಬಾಲಿವುಡ್ ಚೆಲುವೆ ಸಯೇಷಾ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸರಸರನೆ ಸರಿದಾಡೋಕೆ ಶುರುವಾಗಿದೆ. ಈ ಸಯೇಶಾರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದು ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್. ದೇವಗನ್ ಅವರ ಶಿವಾಯ್ ಚಿತ್ರದ ಮೂಲಕ ತೆರೆಗೆ ಬಂದ ಸುಂದರಿ, ತೆಲುಗಿನಲ್ಲಿ ಅಖಿಲ್, ತಮಿಳಿನಲ್ಲಿ ಘಜಿನಿಕಾಂತ್, ಜುಂಗಾ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

    ಆದರೆ, ಆಯ್ಕೆ ಫೈನಲ್ ಆಗಿಲ್ಲ ಎನ್ನುತ್ತಿರುವುದು ನಿರ್ದೇಶಕ ಸಂತೋಷ್ ಆನಂದ್‍ರಾಮ್. ಕನ್ನಡದ ಹುಡುಗಿಯೇ ಆದರೆ ಚೆಂದ ಎನ್ನುವುದು ನನ್ನ ಮತ್ತು ಇಡೀ ಚಿತ್ರತಂಡದ ನಿರೀಕ್ಷೆ. ಇನ್ನೂ ಹುಡುಕಾಟದಲ್ಲಿದ್ದೇವೆ. ಯಾವುದೂ ಫೈನಲ್ ಆಗಿಲ್ಲ ಅಂತಾರೆ ಸಂತೋಷ್.

  • ಯುವರತ್ನನ ಪಾಠಶಾಲೆಯಲ್ಲಿ ಗುರು-ಶಿಷ್ಯರ ಸಮಾಗಮ

    ಯುವರತ್ನನ ಪಾಠಶಾಲೆಯಲ್ಲಿ ಗುರು-ಶಿಷ್ಯರ ಸಮಾಗಮ

    ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರದ ಪಾಠಶಾಲಾ ಹಾಡು ರಿಲೀಸ್ ಆಗಿದೆ. ಹಾಡಿನ ಬಗ್ಗೆ ಯಾವ ಮಟ್ಟದ ನಿರೀಕ್ಷೆಯಿತ್ತೋ.. ಅದನ್ನೂ ಮೀರಿ ಹಾಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿರೋದು ವಿಶೇಷ. ಹಾಡಿನಲ್ಲಿ ಸ್ಕೂಲು, ಗುರುಗಳ ನಡುವಿನ ಸಂಬಂಧವನ್ನು ಕಟ್ಟಿಕೊಟ್ಟಿರೋದು ನಿರ್ದೇಶಕ ಸಂತೋಷ್ ಆನಂದ ರಾಮ್. ವಿಜಯ ಪ್ರಕಾಶ್ ಧ್ವನಿಯಲ್ಲಿ ಹಾಡಿಗೆ ಬೇರೆಯದೇ ಆದ ಹಿರಿಮೆ ಸಿಕ್ಕಿದೆ.

    ಈ ಹಾಡಿನಲ್ಲಿ ದಿಗ್ಗಜರನ್ನು ಅವರ ಗುರುಗಳ ಜೊತೆ ನೆನಪಿಸಿಕೊಂಡಿರೋದು ವಿಶೇಷ. ಡಾ.ರಾಜ್ ಜೊತೆ ಗುಬ್ಬಿ ವೀರಣ್ಣ, ವಿಷ್ಣು ಜೊತೆ ಪುಟ್ಟಣ್ಣ ಕಣಗಾಲ್, ಸಚಿನ್ ಜೊತೆ ರಮಾಕಾಂತ್ ಅಚ್ರೇಕರ್, ಸ್ವಾಮಿ ವಿವೇಕಾನಂದರ ಜೊತೆ ರಾಮಕೃಷ್ಣ ಪರಮಹಂಸ, ಪಿ.ವಿ.ಸಿಂಧು ಜೊತೆ ಗೋಪಿಚಂದ್, ಉಪೇಂದ್ರ ಜೊತೆ ಕಾಶಿನಾಥ್, ವಿ.ಮನೋಹರ್ ಜೊತೆ ಹಂಸಲೇಖ.. ಹೀಗೆ ಖ್ಯಾತ ಗುರು ಶಿಷ್ಯರನ್ನು ಇಲ್ಲಿ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ ಸಂತೋಷ್ ಆನಂದ ರಾಮ್.

    ಈ ಹಾಡಿನ ಲಿರಿಕಲ್ ವಿಡಿಯೋ ನೋಡಿದವರಿಗೆ ಒಂದಂತೂ ಅರ್ಥವಾಗಿದೆ. ಚಿತ್ರದಲ್ಲಿ ಪ್ರಕಾಶ್ ರೈ ಅವರದ್ದು ಗುರುಗಳ ಪಾತ್ರ ಅನ್ನೋ ವಿಷಯ. ವಿಜಯ್ ಕಿರಗಂದೂರು ನಿರ್ಮಾಣದ ಈ ಸಿನಿಮಾ ಏಪ್ರಿಲ್ 1ಕ್ಕೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

  • ಯುವರತ್ನನ ಪ್ರೇಮಗೀತೆಯ ಸಂಭ್ರಮ

    ಯುವರತ್ನನ ಪ್ರೇಮಗೀತೆಯ ಸಂಭ್ರಮ

    ಪವರ್ ಆಫ್ ಯೂಥ್ ಹಾಡಿನ ಮೂಲಕ ಸೆನ್ಸೇಷನ್ ಸೃಷ್ಟಿಸಿದ್ದ ಯುವರತ್ನ, ಈಗ ಪ್ರೇಮದ ಮೃದಂಗ ಬಾರಿಸಿದ್ದಾನೆ. ನೀನಾದೆ ನಾ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ನಿಧಾನವಾಗಿ ಪ್ರೇಕ್ಷಕರ ಎದೆಗಿಳಿಯುತ್ತಿದೆ.. ಥೇಟು ಪ್ರೀತಿಯಂತೆ..

    ಪುನೀತ್, ಸಂತೋಷ್ ಆನಂದರಾಮ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು ಕಾಂಬಿನೇಷನ್ನಿನ 2ನೇ ಸಿನಿಮಾ ಇದು. ಎಸ್. ತಮನ್ ಸಂಗೀತ ನೀಡಿರುವ ಚಿತ್ರದ ಹಾಡು, ಕನ್ನಡ ಮತ್ತು ತೆಲುಗು 2 ಭಾಷೆಗಳಲ್ಲೂ ರಿಲೀಸ್ ಆಗಿದೆ. ಅರ್ಮಾನ್ ಮಲಿಕ್, ತಮನ್ ಹಾಗೂ ಶ್ರೇಯಾ ಘೋಷಾಲ್ ಹಾಡಿರುವ ಕ್ಲಾಸ್ ಹಾಡಿದು. ಸಾಹಿತ್ಯ ಬರೆದಿರುವುದು ಗೌಸ್ ಪೀರ್. ತೆಲುಗಿನಲ್ಲಿ ಸಾಹಿತ್ಯ ನೀಡಿರುವುದು ರಾಮಜೋಗಯ್ಯ ಶಾಸ್ತ್ರಿ.

  • ಯುವರತ್ನನ ಬೈಕ್ ನಂಬರ್ ಸೀಕ್ರೆಟ್ ಏನ್ ಗೊತ್ತಾ..?

    secret behind yuvaratna's bike number

    ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಯುವರತ್ನ. ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಕಾಲೇಜು ಹುಡುಗನ ಗೆಟಪ್ಪಲ್ಲಿ ಪುನೀತ್ ಯಂಗ್ ಆಗಿ ಕಾಣುತ್ತಿದ್ದಾರೆ. ಇದೆಲ್ಲದರ ಜೊತೆಗೆ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದಿರುವುದು ಪುನೀತ್ ಬೈಕ್ ನಂಬರ್.

    ಬೈಕ್ ನಂಬರ್ : KA 01 PS 0029 

    KA  01 ಎಂದರೆ ಕರ್ನಾಟಕ ನಂ.1 ಸ್ಟಾರ್.

    PS  ಅಂದ್ರೆ ಪವರ್ ಸ್ಟಾರ್ ಅಂತೆ. ಇನ್ನು 0029 ಅಂದ್ರೆ, ಅಪ್ಪು ಅಭಿನಯದ 29ನೇ ಸಿನಿಮಾ. 

    ನಂಬರ್ ಪ್ಲೇಟ್ ಅರ್ಥ ಗೊತ್ತಾಗಿದ್ದೇ ತಡ.. ಅಪ್ಪು ಫ್ಯಾನ್ಸ್ ಓಪನ್ ದ ಬಾಟಲ್..ಟಲ್..ಟಲ್.. ಎನ್ನುತ್ತಿದ್ದಾರೆ. 

  • ಯುವರತ್ನನಿಗೆ ಅದ್ಭುತ ಕಾಣಿಕೆ : ಅಪ್ಪು ಅಭಿಮಾನಿಗಳು ರಿಯಲೀ ಗ್ರೇಟ್..!

    ಯುವರತ್ನನಿಗೆ ಅದ್ಭುತ ಕಾಣಿಕೆ : ಅಪ್ಪು ಅಭಿಮಾನಿಗಳು ರಿಯಲೀ ಗ್ರೇಟ್..!

    ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಇಡೋ ಹೆಜ್ಜೆಯೇ ಬೇರೆ. ಇದು ಅಂಥದ್ದೇ ಕಥೆ. ಇದು ನಡೆದಿರೋದು ಬಳ್ಳಾರಿಯಲ್ಲಿ. ಅಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ಮಾರೆಪ್ಪ ಎಂಬ ವ್ಯಕ್ತಿಯ ಕಥೆ ಇದು. ಆತನ ಪಾಲಿಗೆ ಅಪ್ಪು ಫ್ಯಾನ್ಸ್ ಬೆಳಕಾಗಿ ಬಂದಿದ್ದಾರೆ.

    ಆಗಿದ್ದು ಇಷ್ಟೆ, ಮಾರಪ್ಪ ಸಿನಿಮಾ ಬಿಡುಗಡೆ ವೇಳೆ ಹಾಕಿರೋ ಬ್ಯಾನರುಗಳಿರ್ತವಲ್ಲ, ಅವುಗಳನ್ನ ತೆಗೆದುಕೊಂಡು ಹೋಗುತ್ತಿದ್ದರಂತೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಬೆನ್ನು ಹತ್ತಿದಾಗ ಗೊತ್ತಾಗಿದ್ದು, ಆತನ ಗುಡಿಸಲು ಮನೆ. ಸೋರುವ ಸೂರು. ಅದನ್ನು ಈ ಬ್ಯಾನರುಗಳಿಂದ ಮುಚ್ಚಿಕೊಳ್ಳೋ ಸರ್ಕಸ್ ಮಾಡುತ್ತಿದ್ದರು ಮಾರಪ್ಪ. ಇದು ಗೊತ್ತಾದದ್ದೇ ತಡ, ಮುತ್ತುರಾಜ್ ಗೆಳೆಯರ ಬಳಗ ಏನಾದರೂ ಮಾಡಬೇಕಲ್ಲ ಎಂದು ಹೊರಟಿತು.

    ಒಂದು ವಿಷಯವನ್ನಿಲ್ಲಿ ಹೇಳಲೇಬೇಕು. ಈ ಮುತ್ತುರಾಜ್ ಗೆಳೆಯರ ಬಳಗದಲ್ಲಿರೋ ಯಾರೊಬ್ಬರೂ ಕೋಟ್ಯಧಿಪತಿಗಳಲ್ಲ. ಇವರೂ ಬಡವರು ಅಥವಾ ಮಧ್ಯಮ ವರ್ಗದವರು. ಆದರೂ..  ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು.. ಎಂದು ಹೊರಟೇಬಿಟ್ಟರು. ಬಳಗದಲ್ಲಿದ್ದ ಎಲ್ಲ 24 ಸದಸ್ಯರೂ ಅಷ್ಟೋ.. ಇಷ್ಟೋ.. ಹಣ ಹೊಂದಿಸಿದರು. ನೋಡ ನೋಡುತ್ತಲೇ ಪುಟ್ಟ ಗಂಟಾಯ್ತು. ಮನೆಯೂ ಸಿದ್ಧವಾಯ್ತು.

    ಯುವರತ್ನ ಬಿಡುಗಡೆ ಹೊತ್ತಿಗೆ ಆ ಅಭಿಮಾನದ ಅರಮೆನಯ ಗೃಹ ಪ್ರವೇಶ ಮಾಡಿದ್ದಾರೆ ಮಾರಪ್ಪ-ಲಕ್ಷ್ಮೀ ದಂಪತಿ.

  • ಯುವರತ್ನನಿಗೆ ಯುವರಾಣಿ ಫೈನಲ್

    sayeesha finalized as heroine for yuvaratna

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ, ಸಂತೋಷ್ ಆನಂದರಾಮ್ ನಿರ್ದೇಶನದ, ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾ ಯುವರತ್ನ. ಈಗಾಗಲೇ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಚಿತ್ರದ ನಾಯಕಿಯನ್ನು ಫೈನಲ್ ಮಾಡಿದೆ. 

    ಪುನೀತ್‍ಗೆ ಹೀರೋಯಿನ್ ಆಗಿ ಬರುತ್ತಿರುವುದು ಸಯೇಷಾ. ಈಗಾಗಲೇ ತೆಲುಗು, ಹಿಂದಿಯಲ್ಲಿ ನಟಿಸಿರುವ ಸಯೇಷಾ ಪುನೀತ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಶೀಘ್ರದಲ್ಲೇ ಟೀಂ ಸೇರಿಕೊಳ್ಳುತ್ತೇನೆ ಎಂದಿದ್ದಾರೆ. 

    ಉಳಿದಂತೆ.. ಕಥೆ, ಪಾತ್ರದ ಬಗ್ಗೆ ಅವರು ಏನೆಂದರೆ ಏನೂ ಹೇಳಿಲ್ಲ. ಹೇಳುವಂತೆಯೂ ಇಲ್ಲ. ಏಕೆಂದರೆ, ಅದು ನಿರ್ದೇಶಕರ ಕಂಡೀಷನ್ನು.

  • ಯುವರತ್ನನಿಗೆ ರಾಧಿಕಾ ಅಮ್ಮ

    radhika sharath kumara joins yuvaratna team

    ಯುವರತ್ನ ಚಿತ್ರಕ್ಕೆ ಒಬ್ಬೊಬ್ಬರೇ ಸ್ಟಾರ್‍ಗಳ ಎಂಟ್ರಿ ಆಗೋಕೆ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರದಲ್ಲಿ ಈ ಬಾರಿ ರಾಧಿಕಾ ಎಂಟ್ರಿ ಕೊಟ್ಟಿದ್ದಾರೆ. ರಾಜಕುಮಾರ ಚಿತ್ರದಲ್ಲಿ ಶರತ್ ಕುಮಾರ್, ಅಪ್ಪುಗೆ ಅಪ್ಪನಾಗಿದ್ದರು. ಈ ಬಾರಿ ಯುವರತ್ನ ಚಿತ್ರದಲ್ಲಿ ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಅಮ್ಮನಾಗುತ್ತಿದ್ದಾರೆ. 

    ರಾಧಿಕಾಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಸತ್ಯಂ ಶಿವಂ ಸುಂದರಂ, ಜೀವನ ಚಕ್ರ, ಪ್ರಚಂಡ ಕುಳ್ಳ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದವರು. ಹೆಚ್ಚೂ ಕಡಿಮೆ 3 ದಶಕಗಳ ನಂತರ ಮತ್ತೆ ಬಂದಿದ್ದಾರೆ.

    ಸಂತೋಷ್ ಆನಂದ್ ರಾಮ್ ನಿರ್ದೇಶನದ ಚಿತ್ರಕ್ಕೆ ಸಯ್ಯೇಷಾ ನಾಯಕಿಯಾಗಿದ್ದು, ಹೊಂಬಾಳೆ ಬ್ಯಾನರ್ಸ್‍ನಲ್ಲಿ ಸಿನಿಮಾ ತಯಾರಾಗುತ್ತಿದೆ.

  • ಯುವರತ್ನನಿಗೆ ಸಿಕ್ಕ ಬೆಂಬಲ ಹೇಗಿತ್ತು..?

    ಯುವರತ್ನನಿಗೆ ಸಿಕ್ಕ ಬೆಂಬಲ ಹೇಗಿತ್ತು..?

    ಯುವರತ್ನ, ಏಪ್ರಿಲ್ 1ರಂದು ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಾದಿಯಲ್ಲಿದ್ದ ಸಿನಿಮಾ. ಈ ಸಿನಿಮಾಗೆ ಇದ್ದಕ್ಕಿದ್ದಂತೆ 50% ನಿರ್ಬಂಧ ಹೇರಿದ್ದು ರಾಜ್ಯ ಸರ್ಕಾರ. ಪುನೀತ್ ರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರರಂಗವೇ ಕೈಮುಗಿದು ಕೇಳಿಕೊಂಡಿತು. ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಿ ಎಂದು ಬೇಡಿಕೊಂಡಿತು. ಈ ಹಾದಿಯಲ್ಲಿ ಯುವರತ್ನ ಚಿತ್ರತಂಡಕ್ಕೆ ಸಿಕ್ಕ ಬೆಂಬಲವಂತೂ ಅಮೋಘವಾಗಿತ್ತು.

    ಕಿಚ್ಚ ಸುದೀಪ್, ಶಿವಣ್ಣ, ಯಶ್, ಜಗ್ಗೇಶ್, ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಶರಣ್, ರಿಷಬ್ ಶೆಟ್ಟಿ, ಜೋಗಿ ಪ್ರೇಮ್, ದಿನಕರ್ ತೂಗುದೀಪ್, ಪವನ್ ಒಡೆಯರ್, ಎ.ಪಿ.ಅರ್ಜುನ್. ಹೇಮಂತ್ ರಾವ್, ಶೈಲಜಾ ನಾಗ್, ಕೆ.ಪಿ.ಶ್ರೀಕಾಂತ್, ಚೇತನ್ ಕುಮಾರ್, ಸ್ವಪ್ನಾ ಕೃಷ್ಣ, ಪೃಥ್ವಿ ಅಂಬರ್, ವಿ.ನಾಗೇಂದ್ರ ಪ್ರಸಾದ್, ರವಿಶಂಕರ್ ಗೌಡ….. ಹೀಗೆ ಚಿತ್ರತಂಡದ ಸದಸ್ಯರಷ್ಟೇ ಅಲ್ಲದೆ ಇಡೀ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕರು ಯುವರತ್ನ ಬೆಂಬಲಕ್ಕೆ ನಿಂತರು.

    ಫಿಲಂ ಚೇಂಬರ್ ಒಗ್ಗಟ್ಟಾಗಿ ನಿಂತು ಸರ್ಕಾರದ ವಿರುದ್ಧ ಗುಡುಗಿತು. ರಾಜ್ಯ ಸರ್ಕಾರವೇ ಯುವರತ್ನ ಚಿತ್ರವನ್ನು ಕೊಂದು ಹಾಕಿತು ಎಂದು ನೇರವಾಗಿಯೇ ಗುಡುಗಿದರು ಸಾ.ರಾ.ಗೋವಿಂದು. ಇದರ ಹಿಂದೆ ಪಿತೂರಿಯೇ ನಡೆಯುತ್ತಿದೆ ಎಂಬ ಅನುಮಾನವನ್ನೂ ಹಲವು ಚೇಂಬರ್ನ ಹಲವು ಸದಸ್ಯರು ಹೇಳಿದರು. ಸಂಜೆಯ ಹೊತ್ತಿಗೆ ಫಿಲಂ ಚೇಂಬರ್ ಸಂಪೂರ್ಣ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ಕೋರಿ ಖುದ್ದು ಯಡಿಯೂರಪ್ಪನವರಿಗೇ ಮನವಿ ಸಲ್ಲಿಸಿತು.ಸರ್ಕಾರವೂ ಈಗ 100% ಪ್ರೇಕ್ಷಕರ ಭರ್ತಿಗೆ ಓಕೆ ಎಂದಿದೆ. ಅದೂ ಕೇವಲ 4 ದಿನ.

    ಇದೆಲ್ಲವೂ ಚಿತ್ರರಂಗದ ಮಾತಾದರೆ, ಅಭಿಮಾನಿ ದೇವರುಗಳ ರಿಯಾಕ್ಷನ್ ಬೇರೆಯೇ ಇತ್ತು. ಅವರು ನೇರವಾಗಿ ಚಿತ್ರಮಂದಿರಕ್ಕೆ ಹೋದರು. ಅಭಿಮಾನಿ ಸಂಘಟನೆ ಸದಸ್ಯರು ಫಿಲಂ ಚೇಂಬರ್ ಎದುರು ಪ್ರತಿಭಟನೆಗಿಳಿದರು. ಚಿತ್ರ ನೋಡಿದ್ದ ಪ್ರೇಕ್ಷಕರೇ ಪುಟ್ಟ ಪುಟ್ಟ ವಿಡಿಯೋ ಮಾಡಿ ಯುವರತ್ನ ಚಿತ್ರವನ್ನು ನೋಡಲು ಮತ್ತೊಬ್ಬರಿಗೆ ಕರೆ ಕೊಟ್ಟರು. ನೋಡ ನೋಡುತ್ತಲೇ ಯುವರತ್ನ ಚಿತ್ರವೀಗ ಕನ್ನಡಿಗರು ನೋಡಲೇಬೇಕಾದ ಚಿತ್ರವಾಗಿ ಹೋಗಿದೆ. ಯುವರತ್ನ ಗೆಲ್ಲಲಿ.

  • ಯುವರಾಣಿಯ ಜೊತೆ ಯುವರತ್ನನ ಫಾರಿನ್ ಟೂರ್

    yuvaratna song sequence shooting in australia and slovenia

    ಯುವರತ್ನ ಚಿತ್ರದ ದೃಶ್ಯಗಳ ಚಿತ್ರೀಕರಣ ಬಹುತೇಕ ಮುಗಿದಿದೆ. ಬಾಕಿ ಉಳಿದಿದ್ದದ್ದು ಹಾಡುಗಳ ಚಿತ್ರೀಕರಣ ಮಾತ್ರ. ಈಗ ಹಾಡುಗಳ ಚಿತ್ರೀಕರಣವೂ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಮತ್ತು ಸಯ್ಯೇಷಾ ವಿದೇಶಕ್ಕೆ ಹೊರಟಿದ್ದಾರೆ. ಯುವರತ್ನ ಟೀಂ ಹೋಗುತ್ತಿರುವುದು ಆಸ್ಟ್ರಿಯಾ ಮತ್ತು ಸ್ಲೊವೇನಿಯಾಗೆ.

    ಸ್ಲೊವೇನಿಯಾ ಮತ್ತು ಆಸ್ಟ್ರಿಯಾ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರೋದೇ ಅಪರೂಪ. ಇಲ್ಲವೇ ಇಲ್ಲ ಎನ್ನಬಹುದು. ಈ ದೇಶಗಳ ಅದ್ಭುತ ಪ್ರದೇಶಗಳನ್ನು ಸೆರೆಹಿಡಿಯಲು ಹೊರಟಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

    ಪುನೀತ್, ಸಂತೋಷ್ ಮತ್ತು ವಿಜಯ್ ಕಿರಗಂದೂರು 2ನೇ ಬಾರಿ ಜೊತೆಯಾಗಿರುವ ಸಿನಿಮಾ ಯುವರತ್ನ ಚಿತ್ರ, 2020ರ ಸೆನ್ಸೇಷನ್ ಚಿತ್ರ. ವೇಯ್ಟಿಂಗ್ ವೇಯ್ಟಿಂಗ್ ವೇಯ್ಟಿಂಗ್..

  • ಯೆಲ್ಲೋ ಬೋರ್ಡ್ ಹಾಡಿಗೆ ಅಪ್ಪು ಸಂಭಾವನೆ ಪಡೆಯಲಿಲ್ಲ ಏಕೆ?

    ಯೆಲ್ಲೋ ಬೋರ್ಡ್ ಹಾಡಿಗೆ ಅಪ್ಪು ಸಂಭಾವನೆ ಪಡೆಯಲಿಲ್ಲ ಏಕೆ?

    ಯೆಲ್ಲೋ ಬೋರ್ಡ್ ಅನ್ನೋ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಟೈಗರ್ ಪ್ರದೀಪ್ ಹೀರೋ ಆಗಿ ನಟಿಸಿರೋ ಚಿತ್ರವಿದು. ತ್ರಿಲೋಕ್ ರೆಡ್ಡಿ ನಿರ್ದೇಶನದ ಚಿತ್ರದಲ್ಲಿರೋದು ಟ್ಯಾಕ್ಸಿ ಡ್ರೈವರುಗಳ ಕಥೆ. ಹೀರೋ ಕೂಡಾ ಟ್ಯಾಕ್ಸಿ ಡ್ರೈವರ್. ಈ ಚಿತ್ರದಲ್ಲೊಂದು ಹಾಡನ್ನು ಅಪ್ಪು ಹಾಡಿದ್ದಾರೆ. ಅದೂ ಸಂಭಾವನೆ ಪಡೆಯದೇ..

    ಇದೇ ಮೊದಲ ಬಾರಿಗೆ ಟ್ಯಾಕ್ಸಿ ಡ್ರೈವರುಗಳ ಕಥೆಯ ಸಿನಿಮಾ ಮಾಡುತ್ತಿದ್ದೀರಿ. ಒಳ್ಳೆಯದಾಗಲಿ, ಹಾಡು ಚೆನ್ನಾಗಿದೆ ಎಂದಿದ್ದ ಪುನೀತ್ ಸಂಭಾವನೆ ಪಡೆದಿರಲಿಲ್ಲ. ಈ ಹಾಡನ್ನು ಅವರೇ ಬಿಡುಗಡೆ ಮಾಡಬೇಕಿತ್ತು. ನಾನೇ ಬಂದು ರಿಲೀಸ್ ಮಾಡುತ್ತೇನೆ ಎಂದಿದ್ದರು ಅಪ್ಪು ಎಂದು ನೆನಪಿಸಿಕೊಂಡು ಭಾವುಕರಾಗಿದ್ದು ಹೀರೋ ಪ್ರದೀಪ್.

    ಈ ಹಾಡಿಗೆ ಸಾಹಿತ್ಯ ಬರೆದುಕೊಟ್ಟಿದ್ದು ಚೇತನ್ ಕುಮಾರ್. ಹಾಡಿನ ಸಾಹಿತ್ಯಕ್ಕೆ ಮತ್ತು ಅಪ್ಪು ಅವರ ಧ್ವನಿಗೆ ಎಲ್ಲ ಟ್ಯಾಕ್ಸಿ ಚಾಲಕರಿಂದ ಮೆಚ್ಚುಗೆ ಸಿಕ್ಕಿದೆ ಎಂದು ಖುಷಿಯಾಗಿದ್ದಾರೆ ಡೈರೆಕ್ಟರ್ ತ್ರಿಲೋಕ್ ರೆಡ್ಡಿ.

    ಅಹಲ್ಯಾ ಸುರೇಶ್ ಮತ್ತು ಸ್ನೇಹಾ ನಾಯಕಿಯರಾಗಿದ್ದು, ವಿಂಟೇಜ್ ಫಿಲ್ಮಸ್‍ನ ನವೀನ್ ನಿರ್ಮಾಪಕರು. ಮಾರ್ಚ್ 4ರಂದು ಯೆಲ್ಲೋ ಬೋರ್ಡ್ ರಿಲೀಸ್ ಆಗುತ್ತಿದೆ.

  • ರಕ್ಷಾಬಂಧನಕ್ಕೆ ಅಪ್ಪು ರಾಖಿ

    ರಕ್ಷಾಬಂಧನಕ್ಕೆ ಅಪ್ಪು ರಾಖಿ

    ಅಪ್ಪು.. ಹಿರಿಯರ ಪಾಲಿಗೆ ಮಗನಾಗಿ.. ಕಿರಿಯರ ಪಾಲಿಗೆ ಅಣ್ಣನಾಗಿ.. ಯುವಜನತೆಯ ಪಾಲಿಗೆ ಸ್ಫೂರ್ತಿಯಾಗಿದ್ದ ನಟ. ಬಡವರ ಪಾಲಿಗೆ ದೇವರಾಗಿದ್ದ ವಿಷಯ ಗೊತ್ತಾಗಿದ್ದು ಅಪ್ಪು ದೂರವಾದ ಬಳಿಕ. ಪುನೀತ್ ಅವರಲ್ಲಿ ಅಣ್ಣ-ತಮ್ಮಂದಿರನ್ನು ಅದೆಷ್ಟು ಜೀವಗಳು ಕಂಡಿವೆಯೋ.. ಗೊತ್ತಿಲ್ಲ. ಅಪ್ಪು ಈಗ ರಕ್ಷಾ ಬಂಧನವಾಗಿದ್ದಾರೆ.

    ಇದೇ ಆಗಸ್ಟ್ 11-12ಕ್ಕೆ ರಾಖಿ ಹಬ್ಬವಿದೆ.  ತಂಗಿಯರು ಅಣ್ಣನಿಗೆ.. ಅಕ್ಕಂದಿರು ತಮ್ಮನಿಗೆ ರಾಖಿ ಕಟ್ಟಿ ರಕ್ಷಾಬಂಧನ ಮಾಡುತ್ತಾರೆ. ಹಬ್ಬ ಹತ್ತಿರವಾಗುತ್ತಿದ್ದಂತೆ ಅಪ್ಪು ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿರೋದು ಈ ಬಾರಿಯ ರಕ್ಷಾಬಂಧನದ ವಿಶೇಷ. ಹಾಗೆ ನೋಡಿದರೆ.. ರಕ್ಷಾಬಂಧನ ಕನ್ನಡಿಗರಿಗೆ ಹೊರಗಿನಿಂದ ಬಂದ ಹಬ್ಬ. ಉತ್ತರ ಭಾರತೀಯರಿಂದ ಬಂದು ಇಲ್ಲಿಯೂ ಜನಪ್ರಿಯವಾಗಿರುವ ಹಬ್ಬ. ನಮ್ಮಲ್ಲಿ ನಾಗರಪಂಚಮಿಯಂದೇ ಅಣ್ಣ-ತಂಗಿ, ಅಕ್ಕ-ತಮ್ಮ ಹಬ್ಬ ನಡೆಯುತ್ತೆ. ಆ ದಿನ ಕಂಕಣ ಕಟ್ಟುತ್ತಾರೆ. ಆದರೆ.. ಸೋದರ ಸೋದರಿಯರ ಹಬ್ಬಕ್ಕೆ.. ಭಾಷೆ..ಪ್ರದೇಶಗಳ ಗಡಿಯಾದರೂ ಏಕೆ ಅಲ್ಲವೇ.. ಈ ಬಾರಿಯ ಹಬ್ಬಕ್ಕೆ ಅಪ್ಪು ಕೂಡಾ ಇರುತ್ತಾರೆ.

  • ರಕ್ಷಿತ್, ಧ್ರುವಾ, ಶ್ರೀಮುರಳಿಗೆ ಅಪ್ಪು ಚಾಲೆಂಜ್

    puneeth challenges rakshith, dhruva and others

    ಕೇಂದ್ರ ಕ್ರೀಡಾ ಸಚಿವರಿಂದ ಫಿಟ್‍ನೆಸ್ ಚಾಲೆಂಜ್, ಮೋದಿ, ಕೊಹ್ಲಿ, ಬಾಲಿವುಡ್ ರೌಂಡ್ ಮುಗಿಸಿ ಈಗ ಸ್ಯಾಂಡಲ್‍ವುಡ್‍ನಲ್ಲಿ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್‍ಗೆ ಕ್ರಿಕೆಟಿಗ ವಿನಯ್ ಕುಮಾರ್ ಫಿಟ್‍ನೆಸ್ ಚಾಲೆಂಜ್ ಹಾಕಿದ್ದರು. ಸುದೀಪ್, ಅದನ್ನು ತಮ್ಮ ಪತ್ನಿ, ಯಶ್ ಹಾಗೂ ಶಿವರಾಜ್‍ಕುಮಾರ್‍ಗೆ ದಾಟಿಸಿದ್ದರು. ಈಗ ಫಿಟ್‍ನೆಸ್ ಚಾಲೆಂಜ್ ಹಾಕಿರೋದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್.

    ಪುನೀತ್ ಅವರಿಗೆ ಚಾಲೆಂಜ್ ಹಾಕಿರೋದು ಡಾ.ಅಶ್ವತ್ಥ್ ನಾರಾಯಣ ಹಾಗೂ ಹೇಮಂತ್ ಮುದ್ದಪ್ಪ ಎಂಬುವವರು. ಅದನ್ನು ಸ್ವೀಕರಿಸಿರುವ ಪುನೀತ್, ತಮ್ಮ ಪುಟ್ಟ ತಂಡದೊಂದಿಗೆ ಎಕ್ಸರ್‍ಸೈಜ್ ಮಾಡಿದ್ದಾರೆ. ಪ್ರತಿಯೊಬ್ಬರೂ ಫಿಟ್ ಆಗಿರಬೇಕು ಎಂದಿರುವ ಪುನೀತ್, ಚಾಲೆಂಜ್‍ನ್ನು ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಟ್‍ಗೆ ರವಾನಿಸಿದ್ದಾರೆ.

    ಇನ್ನು ಚಾಲೆಂಜ್ ಸ್ವೀಕರಿಸುರವ ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಶ್ರೀಮುರಳಿ ಹಾಗೂ ಡ್ಯಾನಿಶ್ ಸೇಟ್, ಮತ್ಯಾರಿಗೆ ಚಾಲೆಂಜ್ ಹಾಕ್ತಾರೆ.. ನೋಡಬೇಕು.

  • ರಚಿತಾ ರಾಮ್‍ಗೆ ಡೋಂಟ್‍ವರಿ ಎಂದ ಪುನೀತ್ 

    puneeth boosts rachitha's confidence

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ರಚಿತಾ ರಾಮ್ ನಾಯಕಿ. ಇದನ್ನು ಪುನೀತ್ ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಆದರೆ, ಕೆಲವೇ ಕೆಲವು ಅಭಿಮಾನಿಗಳು ರಚಿತಾ ಬೇಡ ಎಂದು ಅಭಿಯನ ನಡೆಸಿರುವುದಕ್ಕೆ ಸ್ವತಃ ನಟಿ ರಚಿತಾ ರಾಮ್ ಆಘಾತ ವ್ಯಕ್ತಪಡಿಸಿದ್ದಾರೆ.

    ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಹೀಗೇಕೆ ಆಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ನನಗೆ ಡಾ.ರಾಜ್‍ಕುಮಾರ್ ಫ್ಯಾಮಿಲಿ ಬಗ್ಗೆ ಗೌರವ ಇದೆ. ಪುನೀತ್ ರಾಜ್‍ಕುಮಾರ್ ಜೊತೆ ನಟಿಸುತ್ತಿರುವುದಕ್ಕೆ ಖುಷಿಯೂ ಇದೆ. ದಯವಿಟ್ಟು ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಬೇಡಿ. ನಾನು ನಿಮ್ಮ ಮನೆಯ ಹೆಣ್ಣು ಮಗಳು ಎಂದಿದ್ದಾರೆ ರಚಿತಾ.

    ಸ್ವತಃ ಪುನೀತ್ ರಾಜ್‍ಕುಮಾರ್ ಕೂಡಾ ರಚಿತಾ ಅವರಿಗೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ ಎಂದು ಧೈರ್ಯ ಹೇಳಿದ್ದಾರಂತೆ.

    Related Articles :-

    #ರಚಿತಾಬೇಡ ಅಭಿಯಾನ.. ನೈಜ ಅಭಿಮಾನಿಗಳದ್ದಲ್ಲ..!

    ಪುನೀತ್ ಜೊತೆ #ರಚಿತಾಬೇಡ. ಅಭಿಮಾನಿಗಳ ಅಭಿಯಾನ..

  • ರಾಕ್‍ಲೈನ್ ಬ್ಯಾನರ್ ನಮ್ದೇ - ಪುನೀತ್

    rockline banner is like family banner says puneeth

    ರಾಕ್‍ಲೈನ್ ವೆಂಕಟೇಶ್ ಬ್ಯಾನರ್‍ನಲ್ಲಿ ನಟಿಸುವಾಗ ನಾವು ಬೇರೆ ನಿರ್ಮಾಪಕರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎನ್ನಿಸುವುದಿಲ್ಲ. ಅದು ನಮ್ಮದೇ ಬ್ಯಾನರ್ ಎನಿಸುತ್ತೆ. ಹೀಗಾಗಿಯೇ ಅವರು ಆಫರ್ ಕೊಟ್ಟಾಗ ಮರುಮಾತಿಲ್ಲದೆ ಒಪ್ಪಿಕೊಂಡೆ. ಇದು ಪುನೀತ್ ರಾಜ್‍ಕುಮಾರ್ ಮಾತು.

    ರಾಕ್‍ಲೈನ್ ವೆಂಕಟೇಶ್ ಮತ್ತು ಡಾ.ರಾಜ್ ಮನೆತನದ ಸಂಬಂಧ, ಗೆಳೆತನ, ಬಾಂಧವ್ಯ ಇಡೀ ಕರ್ನಾಟಕಕ್ಕೇ ಗೊತ್ತು. ಹೀಗಾಗಿಯೇ, 

    ಪುನೀತ್ ರಾಜ್‍ಕುಮಾರ್ ಈ ಮಾತು ಹೇಳಿದ್ದಾರೆ.

    ನಟಸಾರ್ವಭೌಮ, ರಾಕ್‍ಲೈನ್ ಮತ್ತು ಪುನೀತ್ ಕಾಂಬಿನೇಷನ್‍ನ 3ನೇ ಸಿನಿಮಾ. ಈ ಹಿಂದೆ ಅಪ್ಪು ಅವರಿಗಾಗಿ ಅಜಯ್ ಮತ್ತು ಮೌರ್ಯ ಚಿತ್ರಗಳನ್ನು ರಾಕ್‍ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು.

  • ರಾಕ್‍ಲೈನ್, ಪುನೀತ್ ಸಂಗಮಕ್ಕೆ ದಶಕ ಬೇಕಾಯ್ತು..!

    puneeth rockline combination waiting for good script

    ಭಾರತ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಾಕ್‍ಲೈನ್ ವೆಂಕಟೇಶ್, ಡಾ.ರಾಜ್ ಕುಟುಂಬದ ಪ್ರತಿಯೊಬ್ಬರಿಗೂ ಹತ್ತಿರ ಹತ್ತಿರ. ರಾಜ್ ಮನೆಯಲ್ಲಿ ಏನೇ ಆದರೂ ಅಲ್ಲಿ  ರಾಕ್‍ಲೈನ್ ಇರಲೇಬೇಕು. ಅಫ್‍ಕೋರ್ಸ್, ಚಿತ್ರರಂಗದ ಬಹುತೇಕರಿಗೆ ರಾಕ್‍ಲೈನ್ ವೆಂಕಟೇಶ್ ಇರೋದೇ ಹಾಗೆ. ಹೀಗಿದ್ದರೂ, ಪುನೀತ್ ಜೊತೆ ರಾಕ್‍ಲೈನ್ ವೆಂಕಟೇಶ್ 13 ವರ್ಷಗಳ ಕಾಲ ಸಿನಿಮಾ ಮಾಡೋಕೆ ಆಗಿರಲಿಲ್ಲ.

    2004ರಲ್ಲಿ ಮೌರ್ಯ ಹಾಗೂ 2006ರಲ್ಲಿ ಅಜಯ್ ಚಿತ್ರಗಳನ್ನು ಪುನೀತ್ ಅವರಿಗಾಗಿ ನಿರ್ಮಿಸಿದ್ದ ರಾಕ್‍ಲೈನ್ ವೆಂಕಟೇಶ್, 13 ವರ್ಷಗಳ ಕಾಲ ಪುನೀತ್ ಸಿನಿಮಾ ನಿರ್ಮಿಸೋಕೆ ಆಗಿರಲಿಲ್ಲ.

    ನಾನು ಮೊದಲು ಕಥೆ ಕೇಳ್ತೇನೆ. ಕಥೆ ಓಕೆ ಎನಿಸಿದ ನಂತರ ಅದಕ್ಕೆ ಯಾರು ಸೂಟ್ ಆಗಬಹುದು ಎಂದು ಹುಡುಕುತ್ತೇನೆ. ನನಗೆ ಪುನೀತ್ ಅವರಿಗೆ ಸೂಟ್ ಆಗಬಹುದಾದ ಕಥೆ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲ, ನನಗೆ ಇಷ್ಟವಾದ ಕಥೆ ಅವರಿಗೂ ಇಷ್ಟವಾಗಬೇಕಲ್ಲ. ಹೀಗಾಗಿ ವಿಳಂಬವಾಯಿತು ಎಂದು ಕಾರಣ ಹೇಳಿದ್ದಾರೆ ರಾಕ್‍ಲೈನ್ ವೆಂಕಟೇಶ್.

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅತ್ಯದ್ಭುತವಾಗಿ ನಟಿಸಿದ್ದಾರೆ. ಅವರ ಇದುವರೆಗಿನ ಚಿತ್ರಗಳಿಗಿಂತ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಖಂಡಿತಾ ಈ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸಲಿದೆ ಎನ್ನುತ್ತಾರೆ ರಾಕ್‍ಲೈನ್. ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದೆ.