` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಪುನೀತ್ ಇಷ್ಟು ವರ್ಷ ಚಿತ್ರರಂಗದಲ್ಲಿ ಗಳಿಸಿದ್ದು ಇದನ್ನೇ..

    ಪುನೀತ್ ಇಷ್ಟು ವರ್ಷ ಚಿತ್ರರಂಗದಲ್ಲಿ ಗಳಿಸಿದ್ದು ಇದನ್ನೇ..

    ಪುನೀತ್ ಚಿತ್ರರಂಗಕ್ಕೆ ಬಂದು 45 ವರ್ಷಗಳಾಗಿ ಹೋಗಿವೆ. ಹುಟ್ಟಿದ ವರ್ಷದಿಂದಲೇ ಬಣ್ಣ ಹಚ್ಚಿರೋ ಖ್ಯಾತಿ ಪುನೀತ್ ಅವರದ್ದು. ಬಾಲನಟನಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಗೆದ್ದ ಪುನೀತ್, ಹೀರೋ ಆಗಿ ಪವರ್ ಸ್ಟಾರ್ ಆದವರು. ಇಂತಹ ಪುನೀತ್ ಇಷ್ಟು ವರ್ಷ ಚಿತ್ರರಂಗದಲ್ಲಿದ್ದು ಗಳಿಸಿದ್ದೇನು..? ಅದನ್ನು ವೇದಿಕೆಯಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದು ಯುವರತ್ನ ಟೀಂ. ಪ್ರತಿಯೊಬ್ಬರೂ ಇಷ್ಟಪಟ್ಟಿದ್ದು ಪುನೀತ್ ಸರಳತೆಯನ್ನೇ. ಎಲ್ಲರೂ ಮಾತನಾಡಿದ ಮೇಲೆ ಪುನೀತ್ ಹೇಳಿದ್ದಿಷ್ಟು..

    ನಾನು ಇಷ್ಟು ವರ್ಷ ಚಿತ್ರರಂಗದಲ್ಲಿದ್ದು ಗಳಿಸಿದ್ದು ಒಳ್ಳೆಯ ಅಭಿಮಾನಿಗಳನ್ನು. ಜೊತೆಗೆ ನಟಿಸಿದ ಕಲಾವಿದರ ಮನಸ್ಸು ಮತ್ತು ಹೃದಯದಲ್ಲಿ ಒಂದೊಳ್ಳೆ ಸ್ಥಾನವನ್ನು. ಅದಕ್ಕೆ ನನಗೆ ಬಹಳ ಹೆಮ್ಮೆಯಿದೆ ಎಂದ ಪುನೀತ್, ಚಿತ್ರದ ಬಗ್ಗೆ ವಿಶ್ವಾಸದಿಂದಲೇ ಹೇಳಿಕೊಂಡರು.

    ಯುದ್ಧಕ್ಕೆ ಇಳಿದಾಗಿದೆ. ಗೆಲ್ತೀವೋ.. ಸೋಲ್ತೀವೋ.. ನೋಡ್ಬೇಕು. ಆದರೆ ಒಂದೊಳ್ಳೆ ಸಿನಿಮಾವನ್ನಂತೂ ಮಾಡಿದ್ದೇವೆ. ಒಂದೊಳ್ಳೆ ಚಿತ್ರತಂಡದ ಜೊತೆ, ಹಿರಿಯ ಕಲಾವಿದರ ಜೊತೆ ನಾನೂ ನಟಿಸಿದ್ದೇನೆ. ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮ ಮೇಲಿರಲಿ ಎಂದು ಕೇಳಿಕೊಂಡಿದ್ದಾರೆ ಪುನೀತ್

  • ಪುನೀತ್ ಎದುರು ಕಾಲಕೇಯನ ಆರ್ಭಟ

    puneeth's face off with baahubali's kalakeya

    ಬಾಹುಬಲಿ 2 ಸಿನಿಮಾದಲ್ಲಿ ಜಿಬರಿಷ್ ಭಾಷೆಯ ಮೂಲಕ ಗಮನ ಸೆಳೆದಿದ್ದ ಕಾಲಕೇಯ ಪ್ರಭಾಕರ್, ಈಗ ಪುನೀತ್ ಎದುರು ನಟಿಸೋಕೆ ಬರುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ಎದುರು ವಿಲನ್ ಆಗಿರುವುದು ಪ್ರಭಾಕರ್. ಪ್ರಭಾಕರ್‍ಗೆ ಕನ್ನಡ ಚಿತ್ರಗಳು ಹೊಸದೇನಲ್ಲ. 

    ಬಾಹುಬಲಿಗೂ ಮುನ್ನ ಪ್ರಭಾಕರ್, ಆರ್.ಚಂದ್ರು ನಿರ್ದೇಶನದ ಕೋಕೋ, ಲಕ್ಷ್ಮಣ ಸಿನಿಮಾದಲ್ಲಿ ನಟಿಸಿದ್ದರು. ಚೌಕ ಚಿತ್ರದಲ್ಲಿ ದರ್ಶನ್ ಎದುರು ನಟಿಸಿದ್ದ ಪ್ರಭಾಕರ್, ಈಗ ನಟಸಾರ್ವಭೌಮ ಚಿತ್ರಕ್ಕೆ ಬರುತ್ತಿದ್ಧಾರೆ.

    ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾರಾಮ್ ನಾಯಕಿ. ಈ ಎಲ್ಲರ ಟೀಂನಲ್ಲಿ ಪ್ರಭಾಕರ್ ವಿಲನ್.

  • ಪುನೀತ್ ಕವಲುದಾರಿಯಲ್ಲಿ ಎಲೆಕ್ಷನ್ ಸದ್ದು

    kavaludaari trailer spikes interest

    ಕವಲುದಾರಿಯಲ್ಲಿ ಇರೋ ಕಥೆ ಏನು..? ಅದು ಮರ್ಡರ್ ಮಿಸ್ಟರಿಯಾ..? ರಾಜಕೀಯ ಮೋಸ ದ್ವೇಷದ ಕಥೆಯಾ..? ಮೋಹ ಮೋಸದ ಕಥೆಯಾ..? ಎರಡು ನಿಮಿಷದ ಟ್ರೇಲರ್, ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿಬಿಡುತ್ತೆ. ಪುನೀತ್ ರಾಜ್‍ಕುಮಾರ್ ನಿರ್ಮಾಣದ ಮೊದಲ ಸಿನಿಮಾ ಕವಲುದಾರಿ. ಹೇಮಂತ್ ರಾವ್ ಟ್ರೇಲರ್‍ನಲ್ಲಿ ಫಸ್ಟ್ ಕ್ಲಾಸ್ ಸ್ಕೋರ್ ಮಾಡಿದ್ದಾರೆ.

    ಅನಂತ್ ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಷಿನಿ ಪ್ರಕಾಶ್.. ಹೀಗೆ ಚಿತ್ರತಂಡದ ಕಲಾವಿದರು ಕೇವಲ ಪಾತ್ರವಾಗಿದ್ದಾರೆ. ಅನಂತ್ ನಾಗ್ ಮತ್ತು ರಿಷಿ, ರಹಸ್ಯ ಬೇಧಿಸುವವರಂತೆ ಕಾಣುತ್ತಾರೆ. ಸುಮನ್ ರಂಗನಾಥ್ ರಹಸ್ಯವನ್ನೆಲ್ಲ ಮುಚ್ಚಿಟ್ಟುಕೊಂಡಿರುವಂತೆ ಕಾಣುತ್ತಾರೆ. ಚರಣ್‍ರಾಜ್ ಸಂಗೀತವೂ ಟ್ರೇಲರ್‍ನ ತಾಕತ್ತು ಹೆಚ್ಚಿಸಿದೆ. 

  • ಪುನೀತ್ ಕೈಲಿರುವ ದಾರದ ಕಥೆ..

    story if ouneeth's wrist band

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ, ಸಹಜವಾಗಿಯೇ ಕುತೂಹಲದ ಮೂಟೆ ಹೊತ್ತಿರುವ ಸಿನಿಮಾ. ಚಿತ್ರದ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಾಯಕಿ ರಚಿತಾ ರಾಮ್, ವಿಶೇಷ ಪಾತ್ರದಲ್ಲಿ ಹಲವು ವರ್ಷಗಳ ನಂತರ ಬಿ.ಸರೋಜಾದೇವಿ ನಟಿಸಿರುವ ಸಿನಿಮಾ. ಈ ಸಿನಿಮಾದಲ್ಲಿ ಪುನೀತ್ ಫೋಟೋಗ್ರಾಫರ್ ಪಾತ್ರ ಮಾಡುತ್ತಿದ್ದಾರೆ.

    ಪುನೀತ್ ಅವರ ಫೋಟೋಗಳಲ್ಲಿ ಎದ್ದು ಕಾಣ್ತಿರೋದು ಅವರ ಕೈಲಿರುವ ಒಂದು ದಾರ. ಕಪ್ಪುದಾರದ ಬ್ಯಾಂಡ್‍ನಲ್ಲಿ ಒಂದು ಪುಟ್ಟ ಪದಕವೂ ಇದೆ. ಅದೇನು ಅದೃಷ್ಟದ ಸಂಕೇತವಾ ಎಂದರೆ, ನಿರ್ದೇಶಕ ಪವನ್ ಹಾಗೇನಿಲ್ಲ. ಅದಕ್ಕೂ ಚಿತ್ರದಲ್ಲಿ ಒಂದು ಕಥೆಯಿದೆ ಅಂತಾರೆ.

    ಸಿನಿಮಾದಲ್ಲಿ ಆ ಕಪ್ಪುದಾರದ ಬ್ಯಾಂಡ್‍ಗೂ ಒಂದು ಕಥೆಯಿದೆ. ಅದರ ಸ್ವಾರಸ್ಯವನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. ಹೇಳೋಕೆ ಹೋದರೆ ಇಡೀ ಸಿನಿಮಾ ಕಥೆಯನ್ನೇ ಹೇಳಬೆಕಾಗುತ್ತೆ ಅಂತಾರೆ ಪವನ್ ಒಡೆಯರ್.

    ಈಗಾಗಲೇ ಚಿತ್ರದ ಶೇ.40ರಷ್ಟು ಶೂಟಿಂಗ್ ಮುಗಿದಿದೆ. ಬೆಂಗಳೂರು, ಮೈಸೂರು ಶೂಟಿಂಗ್ ಮುಗಿಸಿರುವ ಚಿತ್ರತಂಡ, ಬಳ್ಳಾರಿಯತ್ತ ಹೊರಟಿದೆ.

  • ಪುನೀತ್ ಕೊಟ್ಟಿದ್ದ ದಾನದ ಇನ್ನೊಂದು ಕಥೆ ಹೇಳಿದ ಪ್ರಕಾಶ್ ರೈ

    ಪುನೀತ್ ಕೊಟ್ಟಿದ್ದ ದಾನದ ಇನ್ನೊಂದು ಕಥೆ ಹೇಳಿದ ಪ್ರಕಾಶ್ ರೈ

    ಪುನೀತ್ ರಾಜಕುಮಾರ್ ವಿಧಿವಶರಾದಾಗ ಅಭಿಮಾನಿಗಳ ನೋವು ಒಂದೆಡೆಯಾದರೆ, ಈ ಮನುಷ್ಯ ಅದೆಷ್ಟು ಜನರಿಗೆ ನೆರವು ನೀಡಿದ್ದಾರೆ ಎಂಬುದು ಬೆರಗು ಹುಟ್ಟಿಸಿತ್ತು. ನೆರವು ಪಡೆದವರೇ ಖುದ್ದಾಗಿ ಹೊರ ಬಂದು ಮೀಡಿಯಾಗಳಿಗೆ ಹೇಳುವವರೆಗೆ ಪುನೀತ್ ಅವರೊಳಗಿದ್ದ ದಾನಶೂರ ಕರ್ಣ ಜನರಿಗೆ ಗೊತ್ತೇ ಇರಲಿಲ್ಲ. ಬ್ಯಾಂಕ್ ಮೂಲಕವೇ ನೆರವು ನೀಡಿದರೂ, ಅದನ್ನ ಯಾರಿಗೂ ಹೇಳಬೇಡಿ ಎಂದು ಕೇಳಿಕೊಂಡು ತೆರೆಮರೆಯಲ್ಲೆ ಉಳಿಯುತ್ತಿದ್ದ ಅಪ್ಪು ಅವರ ಇನ್ನೊಂದು ದಾನದ ಕಥೆ ಇದು.

    ಮೈಸೂರಿನಲ್ಲಿ ಮಂಡಿ ಮೊಹಲ್ಲಾದಲ್ಲಿರುವ ಮಿಷನ್ ಆಸ್ಪತ್ರೆಗೆ ಹಿರಿಯ ನಟ ಪ್ರಕಾಶ್ ರೈ ಅಪ್ಪು ಎಕ್ಸ್‍ಪ್ರೆಸ್ ಹೆಸರಿನಲ್ಲಿ ಆಂಬುಲೆನ್ಸ್ ಒಂದನ್ನು ನೀಡಿದ್ದಾರೆ. ಇದೊಂದು ಆಸ್ಪತ್ರೆಗಷ್ಟೇ ಅಲ್ಲ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒಂದೊಂದು ಆಸ್ಪತ್ರೆ ಗುರುತಿಸಿ ನೆರವು ನೀಡುವುದು ಪ್ರಕಾಶ್ ರೈ ಗುರಿ. ಅದಕ್ಕೆ ಅವರು ಇಟ್ಟುಕೊಂಡಿರೋ ಹೆಸರು ಅಪ್ಪು ಎಕ್ಸ್‍ಪ್ರೆಸ್. ಅದಕ್ಕೇನು ಕಾರಣ ಎಂಬುದಕ್ಕೆ ಅವರೇ ತಮ್ಮ ಅನುಭವ ಹೇಳಿದ್ದಾರೆ.

    ಕೊರೊನಾ ಸಮಯದಲ್ಲಿ ಜನರ ಕಷ್ಟಕ್ಕೆ ಮಿಡಿದವರಲ್ಲಿ ಪ್ರಕಾಶ್ ರೈ ಕೂಡಾ ಒಬ್ಬರು. ತಮ್ಮ ಫೌಂಡೇಷನ್ ಮೂಲಕ ನೂರಾರು ಜನರಿಗೆ ಸಹಾಯ ಹಸ್ತ ಚಾಚಿದ್ದರು. ಅದನ್ನು ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡ ಪುನೀತ್, ಪ್ರಕಾಶ್ ರೈ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದಷ್ಟೇ ಅಲ್ಲ, ವೈಯಕ್ತಿಕವಾಗಿ ರೈ ಅವರ ಫೌಂಡೇಷನ್`ಗೆ 2 ಲಕ್ಷ ರೂ. ನೀಡಿದ್ದರಂತೆ. ಮತ್ತು.. ಎಂದಿನಂತೆ

    ನೆರವು ನೀಡಿದ್ದನ್ನು ಹೊರಗೆ ಹೇಳಬೇಡಿ ಎಂದು ಮನವಿ ಮಾಡಿದ್ದರಂತೆ.

  • ಪುನೀತ್ ಗಡ್ಡ ಬಿಡೋಕೆ ಇವರೇ ಕಾರಣ..!

    puneeth in beard

    ಪುನೀತ್ ರಾಜ್‍ಕುಮಾರ್, ತಮ್ಮ ಚಿತ್ರಗಳಲ್ಲಿಯಾಗಲೀ, ಹೊರಗೆ ಕಾರ್ಯಕ್ರಮಗಳಲ್ಲಿಯಾಗಲೀ ನೀಟ್ ಶೇವ್ ಆಗಿಯೇ ಕಾಣಿಸಿಕೊಳ್ಳುವವರು. ಅಂಥಾದ್ದರಲ್ಲಿ ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ಹೋದಲ್ಲಿ, ಬಂದಲ್ಲಿ ಗಡ್ಡ ಕಾಣ್ತಾನೇ ಇದೆ. ಜೊತೆಗೆ ಪುನೀತ್ ಸ್ವಲ್ಪ ದಪ್ಪಗಾಗಿರುವುದೂ ಕಾಣ್ತಾ ಇದೆ.

    ಫಿಟ್‍ನೆಸ್ ವಿಚಾರಕ್ಕೆ ಬಂದರೆ, ಪುನೀತ್ ನಂ.1 ಸ್ಥಾನದಲ್ಲಿ ನಿಲ್ಲುವವರು. ಅಂಥಾದ್ದರಲ್ಲಿ ಏನಿದು ಎಂದು ಬೆನ್ನು ಹತ್ತಿದರೆ, ಈ ಗಡ್ಡ ಹಾಗೂ ದಪ್ಪ ದೇಹದ ಹಿಂದಿನ ಕಾರಣಕರ್ತ ಶಶಾಂಕ್ ಎನ್ನುವುದು ಬಹಿರಂಗವಾಗಿದೆ. ನಿರ್ದೇಶಕ ಶಶಾಂಕ್, ಪುನೀತ್ ಅವರ ಸಿನಿಮಾ ನಿರ್ದೇಶಿಸುತ್ತಾರೆ ಎನ್ನುವುದು ಹಳೆಯ ಸುದ್ದಿ. ಶಶಾಂಕ್ ಅವರ ಆ ಚಿತ್ರಕ್ಕಾಗಿಯೇ ಪುನೀತ್ ಇಷ್ಟೆಲ್ಲ ಸರ್ಕಸ್ ಮಾಡುತ್ತಿದ್ದಾರೆ.

    ಪ್ರತಿದಿನ ಮಾಡುತ್ತಿದ್ದ ಜಿಮ್ ವರ್ಕೌಟ್‍ನ ಹೊರತಾಗಿ ಇನ್ನಷ್ಟು ಬೆವರು ಹರಿಸುತ್ತಿದ್ದಾರೆ. ಜಿಮ್ ಟ್ರೈನರ್ ಸುಧಾಕರ್ ಶೆಟ್ಟಿ, ಪುನೀತ್ ಅವರಿಂದ ಹೆವಿ ವರ್ಕೌಟ್ ಮಾಡಿಸುತ್ತಿದ್ದಾರೆ. ಶಶಾಂಕ್ ಅವರ ಚಿತ್ರದಲ್ಲಿ ಪುನೀತ್ ಗಡ್ಡಧಾರಿಯಾಗಿ, ಸಿಕ್ಸ್‍ಪ್ಯಾಕ್‍ನಲ್ಲಿ ಕಾಣಿಸಿಕೊಳ್ತಾರಂತೆ.

    ನನ್ನ ಕಲ್ಪನೆಯ ಪಾತ್ರಕ್ಕೆ ಪುನೀತ್ ಸಿದ್ಧರಾಗುತ್ತಿದ್ಧಾರೆ. ಅದರ ಹೊರತಾಗಿ ಚಿತ್ರ ಹಾಗೂ ಪುನೀತ್ ಪಾತ್ರದ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಶಶಾಂಕ್.

  • ಪುನೀತ್ ಚಿತ್ರಕ್ಕೆ ನೀವೂ ಹಾಡು ಬರೀಬಹುದು..!

    pavan wodeyar invites new comers

    ಪುನೀತ್ ರಾಜ್‍ಕುಮಾರ್ ಚಿತ್ರಕ್ಕೆ ಹಾಡು ಬರೆಯುವ ಸುವರ್ಣವಕಾಶ ನಿಮ್ಮದೂ ಆಗಬಹುದು. ಅಂತಾದ್ದೊಂದು ಚಾನ್ಸ್ ಕೊಡೋಕೆ ಸಿದ್ಧರಾಗಿರುವುದು ಪವನ್ ಒಡೆಯರ್. ನಟಸಾರ್ವಭೌಮ ಚಿತ್ರದ ನಿರ್ದೇಶಕ. 

    ಹೊಸಬರಿಂದ ಹಾಡು ಬರೆಸುವ ಯೋಚನೆಯಲ್ಲಿರುವ ಪವನ್ ಒಡೆಯರ್, ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ನೀಡಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ. ಹಾಡು ಬರೆಯಬೇಕಿರೋದು ಪುನೀತ್ ರಾಜ್‍ಕುಮಾರ್ ಇಂಟ್ರೊಡಕ್ಷನ್ ಸಾಂಗ್‍ಗೆ.

    ಸಾಹಿತ್ಯ ಚೆನ್ನಾಗಿದ್ದು, ಅದೃಷ್ಟವೂ ಚೆನ್ನಾಗಿದ್ದರೆ, ಪುನೀತ್ ಚಿತ್ರದಲ್ಲಿ ನಿಮ್ಮ ಹಾಡು ಮಿನುಗಲಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ಪುನೀತ್-ರಚಿತಾ ರಾಮ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಿ.

  • ಪುನೀತ್ ಚಿತ್ರಕ್ಕೆ ಬಂದ ಸತ್ಯಗೆ ಸಿಕ್ಕಿದ್ದು ಮ್ಯಾನ್ ಆಫ್ ದಿ ಮ್ಯಾಚ್ ಆಫರ್

    ಪುನೀತ್ ಚಿತ್ರಕ್ಕೆ ಬಂದ ಸತ್ಯಗೆ ಸಿಕ್ಕಿದ್ದು ಮ್ಯಾನ್ ಆಫ್ ದಿ ಮ್ಯಾಚ್ ಆಫರ್

    ಸತ್ಯ ಪ್ರಕಾಶ್, ಕನ್ನಡದಲ್ಲಿ ವಿಭಿನ್ನ ಕಥೆಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ. ಒಂದಲ್ಲ ಎರಡಲ್ಲ, ರಾಮಾ ರಾಮಾ ರೇ ಚಿತ್ರಗಳ ಮೂಲಕ ತಮ್ಮದೇ ಛಾಪು ಮೂಡಿಸಿರುವ ಸತ್ಯ ಪ್ರಕಾಶ್ ಇಷ್ಟು ಹೊತ್ತಿಗೆ ಪುನೀತ್ ಅವರಿಗಾಗಿಯೇ ಒಂದು ಕಮರ್ಷಿಯಲ್ ಸಿನಿಮಾ ಮಾಡಬೇಕಿತ್ತು. ಆದರೆ, ಹಾಗಾಗಲಿಲ್ಲ. ಯಾವಾಗ ಲಾಕ್ ಡೌನ್ ನಿರ್ಬಂಧ ಶುರುವಾಯಿತೋ, ಪುನೀತ್ ಡೇಟ್ಸ್ ಏರುಪೇರಾದವು. ಜೇಮ್ಸ್ ಮತ್ತು ಇನ್ನೊಂದು ಚಿತ್ರಕ್ಕಾಗಿ ಡೇಟ್ಸ್ ಹೊಂದಿಸಬೇಕಾಯಿತು. ಆದರೆ, ಸತ್ಯ ಪ್ರಕಾಶ್ ಅವರಿಗೆ ಪುನೀತ್ ಅವರ ಚಿತ್ರ ಕೈತಪ್ಪಿದರೂ, ಅವರದ್ದೇ ಇನ್ನೊಂದು ಚಿತ್ರದ ಆಫರ್ ಸಿಕ್ಕಿತು.

    ಪುನೀತ್ ಚಿತ್ರ ಕೈತಪ್ಪಿದಾಗ ಸತ್ಯ ಪ್ರಕಾಶ್ ಹೇಳಿದ ಇನ್ನೊಂದು ಕಥೆಗೆ ಥ್ರಿಲ್ ಆದ ಪುನೀತ್, ತಮ್ಮದೇ ಬ್ಯಾನರ್‍ನಲ್ಲಿ ಆ ಚಿತ್ರ ನಿರ್ಮಿಸೋಕೆ ಮುಂದಾದರು. ಅದೇ ಮ್ಯಾನ್ ಆಫ್ ದಿ ಮ್ಯಾಚ್. ಇಷ್ಟೊತ್ತಿಗೆ ಪುನೀತ್ ಅವರ ಜೊತೆ ಸಿನಿಮಾ ಶುರುವಾಗಬೇಕಿತ್ತು. ಆದರೆ ಲಾಕ್‍ಡೌನ್‍ನಿಂದಾಗಿ ಡೇಟ್ಸ್ ಕ್ಲಾಷ್ ಆದವು. ಇದರ ನಡುವೆ ನಾನು ಹೇಳಿದ ಇನ್ನೊಂದು ಕಥೆ ಪುನೀತ್ ಅವರಿಗೆ ಇಷ್ಟವಾಗಿ, ತಮ್ಮದೇ ಬ್ಯಾನರ್‍ನಲ್ಲಿ ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಈಗ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ ಎಂದಿದ್ದಾರೆ ಸತ್ಯ ಪ್ರಕಾಶ್.

    ಮ್ಯಾನ್ ಆಫ್ ದಿ ಮ್ಯಾಚ್ ಹೊಸಬರೇ ಇರುವ ಕಥೆ. ಚಿತ್ರದಲ್ಲಿ ನಟರಾಜ್, ಧರ್ಮಣ್ಣ ಕಡೂರ್, ವೀಣಾ ಸುಂದರ್ ಮೊದಲಾದವರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರೀಕರಣದ ಸ್ಥಳಕ್ಕೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಪುನೀತ್. ಚಿತ್ರವನ್ನು ಪಿಆರ್‍ಕೆ ಬ್ಯಾನರ್, ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ನಿರ್ಮಾಣ ಮಾಡುತ್ತಿದೆ.

  • ಪುನೀತ್ ಚಿತ್ರಗಳು ಡೈರೆಕ್ಟ್ ಮೊಬೈಲ್‍ಗೆ : ಮಲ್ಟಿಪ್ಲೆಕ್ಸ್ ಪ್ರದರ್ಶಕರು ಗರಂ

    puneeth rajkumar ott movie image

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನ್ನಡದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ಆಯುಷ್ಮಾನ್ ಖುರಾನಾ  ಇಟ್ಟಿರುವ ಹೆಜ್ಜೆಯಲ್ಲಿ ಕನ್ನಡದಲ್ಲಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ತಮ್ಮ ಬ್ಯಾನರ್‍ನ ಎರಡು ಚಿತ್ರಗಳನ್ನು ಡೈರೆಕ್ಟ್ ಆಗಿ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲೇ ರಿಲೀಸ್ ಮಾಡಲು ರೆಡಿಯಾಗಿದ್ದಾರೆ. ಅರ್ಥಾತ್, ಆ ಚಿತ್ರಗಳು ಥಿಯೇಟರಿಗೆ ಬರೋದೆ ಇಲ್ಲ.

    Producers Guild of India Justifies Direct Release of Movies On OTT Platforms

    ಒಂದು ಸ್ಪಷ್ಟನೆ ತಿಳಿದುಕೊಳ್ಳಿ. ಯುವರತ್ನ, ಜೇಮ್ಸ್ ಚಿತ್ರಗಳು ಥಿಯೇಟರ್‍ಗೇ ಬರ್ತವೆ. ನೋ ಕನ್‍ಫ್ಯೂಷನ್. ಆದರೆ ಪುನೀತ್ ಅವರ ಪಿಆರ್‍ಕೆ ಬ್ಯಾನರ್‍ನಲ್ಲಿ ನಿರ್ಮಿಸಿರುವ ಫ್ರೆಂಚ್ ಬಿರಿಯಾನಿ ಮತ್ತು ಲಾ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಎರಡೂ ಚಿತ್ರಗಳು ನೇರವಾಗಿ ಅಮೇಜಾನ್ ಪ್ರೈಮ್‍ನಲ್ಲಿ ರಿಲೀಸ್ ಆಗುತ್ತಿವೆ.

    Do Not To Skip The Theatrical Run: Inox Urge Content Creators

    ಪುನೀತ್ ನಿರ್ಧಾರದ ವಿರುದ್ಧ ಪಿವಿಆರ್ ಮತ್ತು ಐನಾಕ್ಸ್ ವಿರೋಧ ವ್ಯಕ್ತಪಡಿಸಿವೆ. ಪುನೀತ್ ಹೆಸರು ಪ್ರಸ್ತಾಪಿಸದೆ, ಚಿತ್ರ ನಿರ್ಮಾಣ ಸಂಸ್ಥೆಯೊಂದು ಚಿತ್ರಮಂದಿರಕ್ಕೆ ಸಿನಿಮಾ ರಿಲೀಸ್ ಮಾಡದೆ ಸಂಪ್ರದಾಯ ಮುರಿದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದಿವೆ.

    ಮೊಬೈಲ್‍ನಲ್ಲೇ ಥಿಯೇಟರ್.. ಒಟಿಟಿ ಮ್ಯಾಜಿಕ್..

    ಇದು ಅನಿವಾರ್ಯ. ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಹೆಜ್ಜೆಯಿಡಬೇಕು. ಪ್ರದರ್ಶಕರ ಬಗ್ಗೆ ನನಗೂ ಅಪಾರ ಗೌರವವಿದೆ. ಆದರೆ, ರಿಯಾಲಿಟಿಯನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಇಷ್ಟಕ್ಕೇ ಮುಗಿಯಲ್ಲ.

  • ಪುನೀತ್ ಜಯಂತಿ ವಿಶೇಷಗಳು ಒಂದಲ್ಲ..ಎರಡಲ್ಲ..

    ಪುನೀತ್ ಜಯಂತಿ ವಿಶೇಷಗಳು ಒಂದಲ್ಲ..ಎರಡಲ್ಲ..

    ಮಾರ್ಚ್ 17. ಪುನೀತ್ ರಾಜಕುಮಾರ್ ಹುಟ್ಟುಹಬ್ಬ. ಪುನೀತ್ ಮೃತರಾಗಿಲ್ಲ, ಈಗಲೂ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಹೀಗಾಗಿಯೇ ಪುನೀತ್ ಹುಟ್ಟುಹಬ್ಬವೂ ಅಭಿಮಾನಿಗಳ ಸಂಭ್ರಮದ ಹಬ್ಬವಾಗುತ್ತಿದೆ.

    ಅಪ್ಪು ಹುಟ್ಟುಹಬ್ಬಕ್ಕೆ ಬೆಂಗಳೂರಿನ ಜೆಪಿ ನಗರದ ಸಿದ್ಧಲಿಂಗೇಶ್ವರ ಚಿತ್ರಮಂದಿರ ವಿಶೇಷವಾಗಿ ರೆಡಿಯಾಗಿದ್ದು, ಉಚಿತ ಪ್ರದರ್ಶನ ಇದೆ. ರಾತ್ರಿ 9.30ಕ್ಕೆ ಶೋ ಇದ್ದು, ಸಿನಿಮಾ ಮುಗಿದ ಮೇಲೆ ರಾತ್ರಿ 12 ಗಂಟೆಗೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗುತ್ತದೆ.

    ಮಾರ್ಚ್ 17ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಅಪ್ಪು ಫ್ಯಾನ್ಸ್ ಹಮ್ಮಿಕೊಂಡಿದ್ದಾರೆ. ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ.

    ಅಪ್ಪು ನಟನೆಯ ಕೊನೆಯ ಸಾಕ್ಷ್ಯಚಿತ್ರ ಗಂಧದಗುಡಿ’ ಮಾರ್ಚ್ 17ರಂದು ಒಟಿಟಿಗೆ ಲಗ್ಗೆ ಇಡುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ.

    ಜೊತೆಗೆ ಅದೇ ದಿನ `ಕಬ್ಜ’ ಚಿತ್ರ ಕೂಡ ತೆರೆ ಕಾಣುತ್ತಿದ್ದು, ಚಿತ್ರತಂಡವು ಸಿನಿಮಾವನ್ನ ಪುನೀತ್ಗೆ ಅರ್ಪಣೆ ಮಾಡ್ತಿದ್ದಾರೆ.

    ಇನ್ನು ರಾಜ್ಯದ ಹಲವು ಕಡೆ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ, ಅಪ್ಪು, ಆಕಾಶ್ ಮೊದಲಾದ ಹಲವು ಚಿತ್ರಗಳು ವಿಶೇಷವಾಗಿ ಅಪ್ಪು ಅಭಿಮಾನಿಗಳಿಗಾಗಿ ಪ್ರದರ್ಶನಗೊಳ್ಳುತ್ತಿವೆ.

  • ಪುನೀತ್ ಜೀವನಚಿತ್ರ ಪಠ್ಯಪುಸ್ತಕಗಳಲ್ಲಿ..

    ಪುನೀತ್ ಜೀವನಚಿತ್ರ ಪಠ್ಯಪುಸ್ತಕಗಳಲ್ಲಿ..

    ಕರ್ನಾಟಕ ರತ್ನ, ಸಹಕಾರ ರತ್ನ ಪುನೀತ್ ರಾಜಕುಮಾರ್ ಅವರ ಜೀವನ ಚಿತ್ರ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಿಗೂ ಬರಲಿದೆ. ಪವರ್ ಸ್ಟಾರ್ ಎಂದರೆ ದೊಡ್ಡವರಿಗಿಂತ ಹೆಚ್ಚು ಮಕ್ಕಳಿಗೆ ಅಚ್ಚುಮೆಚ್ಚು. ಇದಕ್ಕೆ ತಕ್ಕಂತೆ ಅವರ ಜೀವನಗಾಥೆಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.

    ಪುನೀತ್ ಅವರ ಜೀವನವನ್ನು 4 ಅಥವಾ 5ನೇ ತರಗತಿ ಮಕ್ಕಳಿಗೆ ಪಠ್ಯವಾಗಿ ಬೋಧಿಸಿ ಎಂದು ಹಲವು ಸಂಘ ಸಂಸ್ಥೆಗಳು ಬಿಬಿಎಂಪಿಗೆ ಪತ್ರ ಬರೆದು ಒತ್ತಾಯಿಸಿದ್ದವು. ಅದರಲ್ಲಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅಭಿಯಾನವನ್ನೇ ಆರಂಭಿಸಿದ್ದರು. ಈ ಕುರಿತು ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳೋದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

  • ಪುನೀತ್ ಜೊತೆ #ರಚಿತಾಬೇಡ. ಅಭಿಮಾನಿಗಳ ಅಭಿಯಾನ..

    puneeth rajkumar, rachitha ram image

    ರಚಿತಾ ರಾಮ್, ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್. ಪುನೀತ್ ಜೊತೆ ಎರಡನೇ ಬಾರಿ ನಾಯಕಿಯಾಗುತ್ತಿರುವ ಚೆಲುವೆ. ನಟಸಾರ್ವಭೌಮ ಚಿತ್ರಕ್ಕೆ ಮೊದಲು ಆಯ್ಕೆಯಾಗಿದ್ದ ಪ್ರಿಯಾಂಕಾ ಜಾಗಕ್ಕೆ ಈಗ ರಚಿತಾ ಬಂದಿದ್ದಾರೆ. ನಾಯಕಿಯ ದಿಢೀರ್ ಬದಲಾವಣೆಗೆ ಡೇಟ್ಸ್ ಸಮಸ್ಯೆ ಕಾರಣ ಎಂದಿದ್ದರು ನಿರ್ದೇಶಕ ಪವನ್ ಒಡೆಯರ್. ಆದರೆ, ಈಗ ಅಭಿಮಾನಿಗಳ ಸಮಸ್ಯೆ ಶುರುವಾಗಿದೆ.

    ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ #ರಚಿತಾಬೇಡ ಎಂಬ ಅಭಿಯಾನವನ್ನೇ ನಡೆಸಿಬಿಟ್ಟಿದ್ದಾರೆ. ಚಕ್ರವ್ಯೂಹ ಚಿತ್ರದ ಪ್ರೊಮೋಷನ್ ವೇಳೆ, ಇದು ನಿಮ್ಮ ಅಪ್ಪು ಸಿನಿಮಾ, ನಿಮಗೆ ಇಷ್ಟವಾಗುತ್ತೆ ಎಂದು ಹೇಳಿದ್ದರು ರಚಿತಾ. ಹಾಗಾದರೆ, ಇದು ನಿಮ್ಮ ಸಿನಿಮಾ ಅಲ್ವಾ ಎಂದು ರೊಚ್ಚಿಗೆದ್ದಿದ್ದರು ಅಭಿಮಾನಿಗಳು. ಪುನೀತ್ ಮಧ್ಯಪ್ರವೇಶಿಸಿ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದರು.

    ಆ ಘಟನೆಯನ್ನು ಪುನೀತ್ ಮರೆತಿದ್ದರೂ, ಅಭಿಮಾನಿಗಳು ಮರೆತಿಲ್ಲ. ಇನ್ನೂ ಸಿನಿಮಾ ಆರಂಭದ ಹಂತದಲ್ಲಿದೆ. ಈಗಲೇ ಬೇರೆ ನಾಯಕಿಯನ್ನು ಆಯ್ಕೆ ಮಾಡಿ ಎಂದು ನಿರ್ದೇಶಕ ಪವನ್ ಒಡೆಯರ್ ಬೆನ್ನು ಬಿದ್ದಿದ್ದಾರೆ. ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ.

  • ಪುನೀತ್ ಜೊತೆ ನಟಿಸಿದ ಹುಡುಗಿಗೆ ಅದೊಂದೇ ಬೇಸರ..!

    anupama talks about her natasarvabhouma working experience

    ನಟಸಾರ್ವಭೌಮ ಚಿತ್ರ ಆನ್‍ಲೈನ್‍ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಚಿತ್ರದ ಟ್ರೇಲರ್ ಸೃಷ್ಟಿಸಿರುವ ಹವಾಗೆ ಬಾಲಿವುಡ್ ಕೂಡಾ ಶೇಕ್ ಶೇಕ್. ಚಿತ್ರದ ಬಿಡುಗಡೆ ಸಂಭ್ರಮದಲ್ಲಿರುವಾಗಲೇ ಚಿತ್ರದ ನಾಯಕಿ ಮಲೆಯಾಳಿ ಹುಡುಗಿ ಅನುಪಮಾ ಪರಮೇಶ್ವರನ್‍ಗೆ ಒಂದು ಬೇಸರ ಕಾಡುತ್ತಿದೆ. 

    `ನಾನು ನಟಿಸಿದ ಎಲ್ಲ ಭಾಷೆಯ ಚಿತ್ರಗಳಿಗೂ ನಾನೇ ಡಬ್ ಮಾಡಿದ್ದೇನೆ. ಭಾಷೆಯನ್ನು ಕಲಿತು ನನ್ನದೇ ಧ್ವನಿ ಕೊಟ್ಟಿದ್ದೇನೆ. ಆದರೆ, ನಟಸಾರ್ವಭೌಮ ಚಿತ್ರಕ್ಕೆ ಅದು ಸಾಧ್ಯವಾಗಲಿಲ್ಲ. ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದ ಕಾರಣ, ನಟಸಾರ್ವಭೌಮ ಚಿತ್ರದ ನನ್ನ ಪಾತ್ರಕ್ಕೆ ಡಬ್ ಮಾಡೋಕೆ ಆಗಲಿಲ್ಲ'' ಎಂದು ಬೇಸರಿಸಿಕೊಂಡಿದ್ದಾರೆ ಅನುಪಮಾ.

    ಚಿತ್ರದಲ್ಲಿ ಅನುಪಮಾ ಅವರದ್ದು ಲಾಯರ್ ಪಾತ್ರ. ಚಿತ್ರದ ಇನ್ನೊಬ್ಬ ನಾಯಕಿ ರಚಿತಾ ರಾಮ್. ಡೀಟೈಲ್ಸ್ ಏನಮ್ಮಾ ಅಂದ್ರೆ, ನೋ ನೋ.. ಇಷ್ಟೆ.. ಇದಕ್ಕಿಂತ ಜಾಸ್ತಿ ನಾನು ಹೇಳೋ ಹಾಗಿಲ್ಲ. ಡೈರೆಕ್ಟರ್ ಕಂಡೀಷನ್ನು ಅಂತಾರೆ. 

    ನಿರ್ದೇಶಕ ಪವನ್ ಒಡೆಯರ್ ಕೂಡಾ ಚಿತ್ರದ ಕಥೆಯ ಗುಟ್ಟು ಹೇಳಲ್ಲ. ಅಷ್ಟೇ ಅಲ್ಲ, ಕಥೆಯ ಸೀಕ್ರೆಟ್ ಹೊರಹಾಕದಂತೆ ಇಡೀ ಚಿತ್ರ ತಂಡಕ್ಕೆ ದಿಗ್ಬಂಧನ ಹಾಕಿಬಿಟ್ಟಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದೆ. 

  • ಪುನೀತ್ ಜೊತೆ ಸತ್ಯಪ್ರಕಾಶ್ ಸಿನಿಮಾ ಪಕ್ಕಾ

    puneeth's next film with satyaprakash

    ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್, ಒಳ್ಳೆಯ ಕಥೆ ಇರುವ ಸಿನಿಮಾಗಳಿಗೆ ಹೆಸರಾದವರು. ಒಂದಲ್ಲ ಎರಡಲ್ಲ ಚಿತ್ರದ ಮೂಲಕವೂ ಗಮನ ಸೆಳೆದವರು. ಪ್ರೇಕ್ಷಕರಿಗೆ  ವ್ಹಾವ್ ಎನಿಸುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಸತ್ಯಪ್ರಕಾಶ್, ಈಗ ಪುನೀತ್ ರಾಜ್‍ಕುಮಾರ್ ಅವರಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

    ಕಥೆಯ ಒನ್‍ಲೈನ್ ಕೇಳಿಯೇ ಥ್ರಿಲ್ ಆಗಿದ್ದ ಪುನೀತ್, ಕಥೆಯ ಮೇಲೆ ವರ್ಕ್ ಮಾಡುವಂತೆ ಹೇಳಿದ್ದರಂತೆ. ಎಲ್ಲವೂ ಫೈನಲ್ ಹಂತಕ್ಕೆ ಬಂದಿದೆ. ಪುನೀತ್ ಜೊತೆ ಕೆಲಸ ಮಾಡುವ ಅದೃಷ್ಟ ಸಿಕ್ಕಿದೆ. ಅವರು ಮತ್ತು ಅವರ ಅಭಿಮಾನಿಗಳಿಗೆ ಇಷ್ಟವಾಗುವಂಥೆ ಕಥೆ ಬರೆದಿದ್ದೇನೆ ಎಂದಿರುವ ಸತ್ಯಪ್ರಕಾಶ್ ಶೀಘ್ರದಲ್ಲೇ ಎಲ್ಲ ಮಾಹಿತಿಯನ್ನೂ ನೀಡಲಿದ್ದಾರಂತೆ.

  • ಪುನೀತ್ ಪರ್ವದಲ್ಲಿ ಯಾರೆಲ್ಲ ಇದ್ರು? ಏನೇನು ಹೇಳಿದ್ರು?

    ಪುನೀತ್ ಪರ್ವದಲ್ಲಿ ಯಾರೆಲ್ಲ ಇದ್ರು? ಏನೇನು ಹೇಳಿದ್ರು?

    ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಸಮಸ್ತ ಕನ್ನಡ ಚಿತ್ರರಂಗವೇ ಸೇರಿತ್ತು. ಅಶ್ವಿನಿ ಪುನೀತ್ ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಮೊದಲ ದಿನವೇ ಥಿಯೇಟರ್‍ನಲ್ಲಿ ಸಿನಿಮಾ ನೋಡುತ್ತೇನೆ. ಕ್ಷಮೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ ರಿಷಬ್ ಶೆಟ್ಟಿ. ಶಿವಣ್ಣ ಸೇರಿದಂತೆ ಇಡೀ ದೊಡ್ಮನೆ ಗೊಂಬೆ ಹೇಳುತೈತೆ ಹಾಡಿನ ಮೂಲಕ ಪುನೀತ್‍ಗೆ ಶ್ರದ್ಧಾಂಜಲಿ ಸಲ್ಲಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪುನೀತ್ ಅವರ ನಗುವನ್ನೇ ಮೈಮೇಲೆ ಹೊತ್ತುಕೊಂಡಿದ್ದರು. ನಗು ನಗುತ್ತಲೇ ಮಾತನಾಡಿದರು.

    ಸುಧಾ ಮೂರ್ತಿ : ನಾನು ಅಪ್ಪುವನ್ನ ಪುನೀತ್ ಎಂದು ಕರೆದವಳಲ್ಲ. ಲೋಹಿತ್ ಎಂದೇ ಕರೆಯುತ್ತಿದ್ದೆ. ಅವರು ಎಂತಹ ಸಜ್ಜನರು ಎಂದರೆ ಎಲ್ಲೇ ಕಂಡರೂ ಕಾಲಿಗೆ ನಮಸ್ಕರಿಸುತ್ತಿದ್ದರು. ಕೊಲಂಬೋ ವಿಮಾನನಿಲ್ದಾಣದಲ್ಲಿ ಕೂಡಾ ನಮಸ್ಕರಿಸಿದ್ದರು. ಇಲ್ಯಾಕೆ ಎಂದರೆ ಸಜ್ಜನರು ಎಲ್ಲೇ ಕಂಡರೂ ನಮಸ್ಕರಿಸಬೇಕು ಎನ್ನುತ್ತಿದ್ದರು. ನಾವೆಲ್ಲ ಹಳೆಯ ಕಾಲದವರು ಅಣ್ಣಾವ್ರ ಭಕ್ತರು.

    ಯಶ್ : ಒಂದು ವರ್ಷದ ಕೆಳಗೆ ಹತ್ತಿರಹತ್ತಿರ ಇದೇ ದಿನ ಇರಬಹುದು. ನಾನು, ಶಿವಣ್ಣ ಮತ್ತು ಪುನೀತ್ ಒಟ್ಟಿಗೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅವರಿದ್ದ ಕಡೆ ಉತ್ಸಾಹವಿರುತ್ತಿತ್ತು. ಅವರೊಬ್ಬರಿಗೆ ಮಾತ್ರ ಇಡೀ ಕರ್ನಾಟಕದ ಮಗ ಅನ್ನೋ ಫೀಲಿಂಗ್. ಕರ್ನಾಟಕದ ಜನ ಅವರನ್ನು ಮಾತ್ರ ಕರ್ನಾಟಕದ ಮಗ ಎಂದುಕೊಂಡಿದ್ದರು. ಅದು ಸಿಗೋದು ಅಪ್ಪು ಅವರಿಗೆ ಮಾತ್ರ.

    ರಮ್ಯಾ : ಇವತ್ತು ಈ ವೇದಿಕೆ ಮೇಲಿದ್ದೀನಿ. ಜನ ಪ್ರೀತಿ ತೋರಿಸುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣ ರಾಜ್ ಕುಟುಂಬ. ನನಗೆ ಅಪ್ಪು ಬದುಕಿಲ್ಲ ಎಂದು ಅನ್ನಿಸಿಲ್ಲ. ಅಭಿಮಾನಿಗಳ ಹೃದಯದಲ್ಲಿ ನೋಡುತ್ತಿದ್ದೇನೆ.

    ಸೂರ್ಯ : ನನಗೆ ಅಪ್ಪು ಅವರೊಂದಿಗೆ ಅದ್ಭುತ ನೆನಪುಗಳಿವೆ. ಆ ನೆನಪುಗಳೊಂದಿಗೆ ಅಪ್ಪು ಜೀವಂತವಾಗಿದ್ದಾರೆ. ಅಪ್ಪು ಅವರನ್ನು ಪಡೆದ ನೀವು ಅದೃಷ್ಟವಂತರು. ನಿಮ್ಮಂತ ಅಭಿಮಾನಿಗಳನ್ನ ಪಡೆದ ಅಪ್ಪು ಕೂಡಾ ಅದೃಷ್ಟವಂತರು.

    ರಕ್ಷಿತ್ ಶೆಟ್ಟಿ : ನನ್ನ ಚಾರ್ಲಿಗೆ ಎಡಿಟರ್ ಆಗಿದ್ದ ಪ್ರತೀಕ್ ಶೆಟ್ಟಿ ಗಂಧದ ಗುಡಿಗೂ ಎಡಿಟರ್. ಹೀಗಾಗಿ ಕೆಲವು ದೃಶ್ಯಗಳನ್ನು ನಾನು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಅಪ್ಪು ಅವರನ್ನು ಅಪ್ಪು ಅವರಾಗಿಯೇ ನೋಡುವ ಅವಕಾಶ ಇದುವರೆಗೆ ಸಿಕ್ಕಿರಲಿಲ್ಲ. ದೊಡ್ಡ ಪರದೆ ಮೇಲೆ ನೋಡೋಕೆ ಕಾಯುತ್ತಿದ್ದೇನೆ.

    ಸುಮಲತಾ ಅಂಬರೀಷ್ : ಅಪ್ಪು ನನಗೆ ತುಂಬಾನೇ ಸ್ಪೆಷಲ್. ನಾನು ಅಪ್ಪುನ ನೋಡಿದಾಗ ಅವನಿಗೆ 5 ವರ್ಷ. ಕನ್ನಡ ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದ್ದು ಡಾ.ರಾಜ್ ಮತ್ತು ಪಾರ್ವತಮ್ಮ. ಈಗ ಅಪ್ಪು ಲೈಫ್‍ನ್ನು ಸೆಲಬ್ರೇಟ್ ಮಾಡೋಣ

    ಧ್ರುವ ಸರ್ಜಾ : ಅಣ್ಣಾವ್ರ ಗಂಧದ ಗುಡಿ ನೋಡಿದ್ದೇವೆ. ಶಿವಣ್ಣನ ಗಂಧದ ಗುಡಿಯನ್ನೂ ನೋಡಿದ್ದೇವೆ. ಈಗ ಪುನೀತ್ ಗಂಧದ ಗುಡಿಯನ್ನು ಅಭಿಮಾನಿಗಳ ಜೊತೆಯಲ್ಲಿ ನೋಡುತ್ತೇನೆ.

    ದುನಿಯಾ ವಿಜಯ್ : ಗಂಧದ ಗುಡಿ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುತ್ತೇನೆ. ಕನ್ನಡಕ್ಕೆ ಒಬ್ಬನೇ ರಾಜಕುಮಾರ. ಅದು ಪುನೀತ್ ರಾಜಕುಮಾರ

    ರವಿಚಂದ್ರನ್ : ಡಾ.ರಾಜ್ ಅಪ್ಪುಗೆಯಿಂದ ನಾನು ನಟನಾದೆ. ಗಂಧದ ಗುಡಿ ಎಂದರೆ ಅಣ್ಣಾವ್ರ ಕುಟುಂಬ. ಗಂಧದ ಗುಡಿ ಎಂದರೆ ರಾಜ್‍ಕುಮಾರ್. ಗಂಧದ ಗುಡಿ ಎಂದರೆ ಶಿವರಾಜ್‍ಕುಮಾರ್. ಗಂಧದ ಗುಡಿ ಎಂದರೆ ಪುನೀತ್ ರಾಜ್‍ಕುಮಾರ್. ರಾಜ್ ಅಪ್ಪುಗೆಯಿದ ನಟನಾದೆ. ವೀರಸ್ವಾಮಿ ಅಪ್ಪುಗೆಯಿಂದ ನಿರ್ದೇಶಕನಾದೆ. ಅಪ್ಪು ಅಪ್ಪುಗೆಯಿಂದ ಅದೃಷ್ಟವಂತನಾದೆ..

    ಶಿವರಾಜ್‍ಕುಮಾರ್ : ಸಲಗೆ ಪ್ರೀಮಿಯರ್ ಶೋನಲ್ಲಿ ಅಣ್ಣ, ಟ್ರೇಲರ್ ರೆಡಿಯಾಗುತ್ತಿದೆ. ಚೆನ್ನಾಗಿದೆ. ತೋರಿಸುತ್ತೇನೆ ಎಂದಿದ್ದ. ತೋರಿಸದೆಯೇ ಹೋಗಿಬಿಟ್ಟ. ನಾನು ಶಿವಣ್ಣನ ಫ್ಯಾನ್ ಎನ್ನುತ್ತಿದ್ದ. ಆದರೆ ನಾನು ಅಪ್ಪು ಫ್ಯಾನ್. ಅವನು ದೂರವಾಗಿದ್ದರೆ ತಾನೇ ಮಿಸ್ ಮಾಡಿಕೊಳ್ಳೋದು..

     

  • ಪುನೀತ್ ಪುಣ್ಯಸ್ಮರಣೆ : ಅನ್ನ ಸಂತರ್ಪಣೆ, ಸಂಗೀತ ಸುಧೆ..

    ಪುನೀತ್ ಪುಣ್ಯಸ್ಮರಣೆ : ಅನ್ನ ಸಂತರ್ಪಣೆ, ಸಂಗೀತ ಸುಧೆ..

    ಮೊನ್ನೆ ಮೊನ್ನೆ ನಡೆದಿದೆಯೇನೋ.. ಎಂಬ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅಪ್ಪು ಅಗಲಿಕೆಗೆ ಆಗಲೇ ಒಂದು ವರ್ಷ. ಕಳೆದ ವರ್ಷ ಅಕ್ಟೋಬರ್ 29ರಂದು ಇಡೀ ಕರುನಾಡು ಕಣ್ಣೀರಿಟ್ಟಿತ್ತು. ಇಂದು ಅಪ್ಪು ಪುಣ್ಯಸ್ಮರಣೆ. ನಿನ್ನೆಯಷ್ಟೇ ಪುನೀತ್ ಕಟ್ಟಕಡೆಯ ಸಿನಿ-ಡಾಕ್ಯುಮೆಂಟರಿ ಅಥವಾ ಡಾಕ್ಯು-ಡ್ರಾಮಾ ಗಂಧದ ಗುಡಿ ರಿಲೀಸ್ ಆಗಿದೆ. ಇವತ್ತು ಪುಣ್ಯತಿಥಿ.

    ಪುಣ್ಯತಿಥಿ ಹಿನ್ನೆಲೆಯಲ್ಲಿ ರಾತ್ರಿಯಿಡೀ ಕಂಠೀರವದ ಸಮಾಧಿಯೆದುರು ಸಮಾಧಿಯೆದುರು ಸೇರಿ ಅಪ್ಪು ಅವರಿಗೆ ಗಾನ ನಮನ ಸಲ್ಲಿಸಿದರು. ನಿನ್ನೆ ರಾತ್ರಿಯಿಂದ ಇಂದು ರಾತ್ರಿಯವರಗೆ ನಡೆದ ಗಾನಸುಧೆಯಲ್ಲಿ ಹರಿಕೃಷ್ಣ, ಶಮಿತಾ ಮಲ್ನಾಡ್, ಜೋಟ್ಸಾನಾ ಶ್ರೀಕಾಂತ್, ಸುದರ್ಶನ್ ಮತ್ತು ತಂಡ, ವೇಣುಗೋಪಾಲ್ ವೆಂಕಿ ತಂಡ, ವೀಣಾ ವಾರುಣಿ ತಂಡ, ಮಜಾ ಟಾಕೀಸ್‍ನ ರೆಮೋ ತಂಡ ಸಮಗೀತ ಸುಧೆಯಲ್ಲಿ ಭಾಗವಹಿಸಿವೆ. ಭಾಗವಹಿಸುತ್ತಿವೆ. ಕರ್ನಾಟಕ ಫಿಲ್ಮ್ ಮ್ಯೂಸಿಕ್ ಅಸೋಸಿಯೇಷನ್ ಮೂಲಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿಯೊಮ್ಮೆ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಅಶ್ವಿನಿ ಅಭಿಮಾನಿಗಳ ಎದುರು ಕಣ್ಣೀರಾದರು.

    ಬೆಳಗ್ಗೆಯೇ ಅಶ್ವಿನಿ ಪುನೀತ್ ರಾಜಕುಮಾರ್ ಒಮ್ಮೆ ಸಮಾಧಿಗೆ ಹೋಗಿ ಭೇಟಿ ನೀಡಿ ಬಂದರು. ಶಿವಣ್ಣ-ಗೀತಾ ದಂಪತಿ, ಪುನೀತ್ ಅಕ್ಕಂದಿರಾದ ಪೂರ್ಣಿಮಾ, ಲಕ್ಷ್ಮೀ ಕುಟುಂಬದವರು ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದರು. ಡಾ.ರಾಜ್ ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೇ ಸಮಾಧಿ ಬಳಿಗೆ ತೆರಳಲಿದ್ದಾರೆ.

    ಇದೇ ವೇಳೆ ಸಮಾಧಿ ದರ್ಶನಕ್ಕೆ ಬರುವ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯೂ ಆಗಿದೆ. 2 ಲಕ್ಷ ಅಭಿಮಾನಿಗಳಿಗೆ ದೊಡ್ಮನೆ ಕಡೆಯವರು  ಹಾಗೂ ಅಭಿಮಾನಿ ಸಂಘಗಳು ಎರಡೂ ಕಡೆಯಿಂದ ವ್ಯವಸ್ಥೆಯಾಗಿದೆ.

  • ಪುನೀತ್ ಪುತ್ಥಳಿ ಎದುರು ಟೋಬಿ ಪ್ರಚಾರ

    ಪುನೀತ್ ಪುತ್ಥಳಿ ಎದುರು ಟೋಬಿ ಪ್ರಚಾರ

    ನಟ ರಾಜ್ ಬಿ.ಶೆಟ್ಟಿ ಪುನೀತ್ ಅವರನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಒಂದು ಮೊಟ್ಟೆಯ ಕಥೆ ಚಿತ್ರ ಮಾಡಿದಾಗ ಅಪ್ಪು ಸರ್ ಅವರಿಗೆ ನನ್ನ ಪರಿಚಯವೂ ಇರಲಿಲ್ಲ. ಅದರೆ ಸಿನಿಮಾ ನೋಡಿ ಇಷ್ಟವಾಗಿ ಚಿತ್ರವನ್ನು ಪ್ರಚಾರ ಮಾಡಿಕೊಟ್ಟಿದ್ದರು ಎಂದು ರಾಜ್ ಬಿ.ಶೆಟ್ಟಿ ಸದಾ ನೆನೆಯುತ್ತಲೇ ಇರುತ್ತಾರೆ. ಇದೀಗ ಟೋಬಿ ಚಿತ್ರದ ಪ್ರಚಾರ ಕೈಗೆತ್ತಿಕೊಂಡಿರುವ ರಾಜ್ ಬಿ ಶೆಟ್ಟಿ ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿ ಎದುರು ಸಿನಿಮಾ ಪ್ರಚಾರ ಮಾಡಿದ್ದಾರೆ.

    . ಹೊಸಪೇಟೆಯಲ್ಲಿ ಬೈಕ್ ರ್ಯಾಲಿ ಟೋಬಿ ತಂಡವು ಭರ್ಜರಿಯಾಗಿ ಪ್ರಮೋಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಟ ರಾಜ್ ಬಿ. ಶೆಟ್ಟಿಗೆ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಹೊಸಪೇಟೆಯ ಕಾಲೇಜು ರಸ್ತೆಯಿಂದ ಡಾ. ಪುನೀತ್ ರಾಜ್ಕುಮಾರ್ ವೃತ್ತದವರೆಗೆ ಬೈಕ್ ರ್ಯಾಲಿ ಮಾಡಲಾಯಿತು. ನಂತರ ಡಾ. ಪುನೀತ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಮಾಡಲಾಯಿತು. ಈ ವೇಳೆ ರಾಜ್ ಬಿ. ಶೆಟ್ಟಿ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಮಾಲೆಯನ್ನು ಮಾಲಾರ್ಪಣೆ ಮಾಡಿ , ಹೊಸಪೇಟೆ ಜನಕ್ಕೆ ನಾನು ಅಭಾರಿಯಾಗಿದ್ದೇನೆ. ಡಾ. ಪುನೀತ್ ರಾಜ್ಕುಮಾರ್ ಅವರ ಅಚ್ಚು ಮೆಚ್ಚಿನ ಊರಿದು. ಯಾರು ಕೈ ಬಿಟ್ರೂ ಹೊಸಪೇಟೆ ಜನ  ಕೈ ಬಿಡೋಲ್ಲಾ ಅಂದಿದ್ರು ಪುನೀತ್. ಹೊಸಪೇಟೆ ಜನರಿಗೆ ನಾವು ಅಭಾರಿಯಾಗಿದ್ದೇವೆ. ಪುನೀತ್ ರಾಜ್ಕುಮಾರ್ ಅವರ ಪುತ್ಥಳಿಯ ಕೈ ಹಿಡಿದ್ರೆ, ಇನ್ನೂ ಅವರದ್ದೇ ಕೈ ಹಿಡಿದ ನೆನೆಪು ಬರ್ತದೆ. ಅವರು ನನ್ನ ಕೈ ಹಿಡಿದಿದ್ದು ನೆನಪಾಗುತ್ತದೆ. ನನ್ನ ಮೊದಲ ಚಿತ್ರ ಒಂದು ಮೊಟ್ಟೆಯ ಕಥೆ ಗೆದ್ದಾಗ ಸಂಭ್ರಮ ಪಟ್ಟದ್ದು ನಮಗೆ ನೆನಪು ಇನ್ನೂ ಹಾಗೆ ಇದೆ ಎಂದು ಹೇಳಿದರು.

    ಪುನೀತ್ ಅವರ ಸಾವಿರಾರು ಅಭಿಮಾನಿಗಳಲ್ಲಿ ನಾನೂ ಒಬ್ಬ ಎಂದು ರಾಜ್ ಬಿ.ಶೆಟ್ಟಿ ಶ್ರಾವಣ ಮಾಸದಲ್ಲಿ ಮಾರಿ ಹಬ್ಬ ಮಾಡೋಕೆ ಬರುತ್ತಿದ್ದಾರೆ. ಇದೇ ಆಗಸ್ಟ್ 25ಕ್ಕೆ ವರಮಹಾಲಕ್ಷ್ಮಿ ಹಬ್ಬ. ಆ ದಿನ ಟೋಬಿ ಬೆಳ್ಳಿತೆರೆ ಮೇಲೆ ಎಂಟ್ರಿ ಕೊಡ್ತಿದೆ.

  • ಪುನೀತ್ ಫಿಟ್ ನೆಸ್ ಗುಟ್ಟು ಇದೇ ನೋಡಿ

    puneeth's fitness secret is

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಫಿಟ್ನೆಸ್ ವಿಡಿಯೋ ವೈರಲ್ ಟ್ರೆಂಡ್ ಆಗಿದೆ. ಕ್ರಾಸ್ ಫಿಟ್ನೆಸ್ ಮತ್ತು ರೋಪ್ ಫಿಟ್ನೆಸ್ ವಿಡಿಯೋಗಳನ್ನು ನೋಡಿದವರು ವ್ಹಾವ್ ಎನ್ನುತ್ತಿದ್ದಾರೆ. ಇಷ್ಟಕ್ಕೂ 40+ನಲ್ಲಿ ಈ ಫಿಟ್ನೆಸ್ ಕಾಯ್ದುಕೊಂಡಿರುವ ಪುನೀತ್ ಏನು ಮಾಡ್ತಾರೆ..?

    ಇನ್ನೇನಿಲ್ಲ, ಪ್ರತಿದಿನ 10 ಕಿ.ಮೀ. ರನ್ನಿಂಗ್ ಮಾಡ್ತಾರೆ. ಓಡುವುದು ತಪ್ಪಿಸಲ್ಲ. ಜೊತೆಗೆ ಸಮಯ ಸಿಕ್ಕಾಗ ಮಾರ್ಷಲ್ ಆರ್ಟ್ಸ್ ಪ್ರಾಕ್ಟೀಸ್ ಮಾಡ್ತಾರೆ. ಶೂಟಿಂಗ್ ಇರಲಿ, ಬಿಡಲಿ.. ಪ್ರತಿದಿನ 1 ಗಂಟೆ ವರ್ಕೌಟ್ ಪಕ್ಕಾ. ಸಂಜೆ ಹೊತ್ತು ಫ್ರೀ ಇದ್ದಾಗ ವಾಕಿಂಗ್ ಮಾಡ್ತಾರೆ. ಮನೆಯಲ್ಲೇ ಇರೋ ಜಿಮ್‌ನಲ್ಲಿ ಕ್ರಾಸ್ ಫಿಟ್ನೆಸ್ ವ್ಯಾಯಾಮ ಮಾಡಿದ್ರೆ, ಬೇರೆ ವರ್ಕೌಟ್‌ಗಳಿಗೆ ಜಿಮ್‌ಗೆ ಹೋಗ್ತಾರೆ. ಜೊತೆಗೆ ಆಗಾಗ್ಗೆ ಸೈಕ್ಲಿಂಗ್ ಮಾಡ್ತಾರೆ.

  • ಪುನೀತ್ ಬಿಎಂಟಿಸಿ ರಾಯಭಾರಿ : ಸಂಭಾವನೆ ಎಷ್ಟು..?

    puneeth rajkumar is the brand ambassador for bmtc's priority bus lane concept

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಈಗ ಬಿಎಂಟಿಸಿ ಬಸ್ ರಾಯಭಾರಿಯಾಗಿದ್ದಾರೆ. ಬ್ರಾö್ಯಂಡ್ ಅಂಬಾಸಿಡರ್. ಸುರಕ್ಷತೆಯ ಪ್ರಯಾಣಕ್ಕಾಗಿ ಬಿಎಂಟಿಸಿಯ ವಿಡಿಯೋ, ಪೋಸ್ಟರ್‌ಗಳಲ್ಲಿ ಇನ್ನು ಮುಂದೆ ಪುನೀತ್ ಇರುತ್ತಾರೆ.

    ವಿಶೇಷವೇನು ಗೊತ್ತೇ..? ಪುನೀತ್ ಸಂಭಾವನೆ. ಹೌದು, ಪುನೀತ್ ಈ ರಾಯಭಾರಕ್ಕಾಗಿ ಯಾವುದೇ ಸಂಭಾವನೆ ಪಡೆದಿಲ್ಲ. ಈ ಹಿಂದೆ ನಂದಿನಿ ಹಾಲಿಗೂ ಹೀಗೆಯೇ ಮಾಡಿದ್ದ ಪುನೀತ್, ಮತ್ತೊಮ್ಮೆ ಸಾರ್ವಜನಿಕರಿಗೆ ಅನುಕೂಲವಾಗುವ ಸರ್ಕಾರಿ ಕೆಲಸಕ್ಕೆ ಉಚಿತವಾಗಿ ಹೆಗಲು ಕೊಟ್ಟಿದ್ದಾರೆ.

    ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಶಿಖಾ, ನಿರ್ದೇಶಕ ಅನುಪಮ್ ಅಗರ್‌ವಾಲ್ ಪುನೀತ್ ಅವರನ್ನು ಈ ಸ್ಥಾನಕ್ಕೆ ಅಪ್ರೋಚ್ ಮಾಡಿದ್ದರು.

  • ಪುನೀತ್ ಮತ್ತು ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘಣ್ಣ

    ಪುನೀತ್ ಮತ್ತು ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘಣ್ಣ

    ಅಪ್ಪು. ಟೋಟೋ ಮತ್ತು ನುಕ್ಕಿ. ಈ ಮೂರೂ ಹೆಸರುಗಳನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ರಾಘವೇಂದ್ರ ರಾಜ್`ಕುಮಾರ್. ಧೃತಿ ಮತ್ತು ವಂದಿತಾ ಅಪ್ಪು ಅವರ ಮಕ್ಕಳು. ಅವರ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ ರಾಘಣ್ಣ.

    ತಮಗೆ ಹಚ್ಚೆ ಹಾಕಿದ ಟ್ಯಾಟೂ ಆರ್ಟಿಸ್ಟ್ ಜೊತೆಗೂ ರಾಘವೇಂದ್ರ ರಾಜ್ಕುಮಾರ್ ಫೊಟೊ ತೆಗೆಸಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ, ಆರೋಗ್ಯ ಸಮಸ್ಯೆಗಳ ನಡುವೆ ಸಹೋದರ ಹಾಗೂ ಅವರ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ಅವರ ಪ್ರೀತಿಯನ್ನು ಅಪ್ಪು ಅಭಿಮಾನಿಗಳು ಕೊಂಡಾಡಿದ್ದಾರೆ.

    ಟೊಟೊ ಹಾಗೂ ನುಕ್ಕಿ ಎಂಬುದು ಅಪ್ಪು ಅವರ ಇಬ್ಬರು  ಹೆಣ್ಣು ಮಕ್ಕಳಾದ ಧೃತಿ ಮತ್ತು ವಂದಿತಾರ ನಿಕ್ ನೇಮ್. ಅಪ್ಪು ಅವರ ಇಬ್ಬರು ಹೆಣ್ಣು ಮಕ್ಕಳ ಬಗ್ಗೆಯಂತೂ ರಾಘವೇಂದ್ರ ರಾಜ್ಕುಮಾರ್ ಅವರಿಗೆ ಮೊದಲಿನಿಂದಲೂ ಬಹಳ ಮಮಕಾರ. ಅಪ್ಪು ಕಾಲವಾದ ಸಂದರ್ಭದಲ್ಲಿ ಅವರ ಮಕ್ಕಳನ್ನು ನೆನೆದು ರಾಘವೇಂದ್ರ ರಾಜ್ಕುಮಾರ್ ಬಹಳ ದುಖಃ ವ್ಯಕ್ತಪಡಿಸಿದ್ದರು.

    ರಾಘಣ್ಣ ಅವರಿಗೆ ಆರೋಗ್ಯ ತುಸು ಹದಗೆಟ್ಟಿತ್ತು. ಈಗಲೂ ಕೂಡಾ ಅವರು ಸವಾಲಿನ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದಾರೆ. ಹೀಗಿರುವಾಗ ಹಚ್ಚೆ ಹಾಕಿಸಿಕೊಳ್ಳೋ ಅಗತ್ಯವಿತ್ತೇ ರಾಘಣ್ಣ, ಅವರು ನಿಮೃ ಹೃದಯದಲ್ಲಿದ್ದಾರೆ, ಸಾಕಲ್ವಾ ಎಂದು ರಾಘಣ್ಣ ಬಗ್ಗೆ ಕಾಳಜಿ ತೋರಿಸಿದವರೂ ಇದ್ದಾರೆ.