` radhika pandit, - chitraloka.com | Kannada Movie News, Reviews | Image

radhika pandit,

  • ರಾಧಿಕಾ ಪಂಡಿತ್ ಕುಟುಂಬಕ್ಕೆ ಲಕ್ಷ್ಮಿ ಬಂದಳು..!

    radhika pandit welcomes brothers daughter

    ಯಶ್ ಅವರನ್ನು ಮದುವೆಯಾದ ಮೇಲೆ ರಾಧಿಕಾ ಪಂಡಿತ್ ಅವರಿಗೆ ಆಗಾಗ ಮುಂದಿನ ಗುಡ್ ನ್ಯೂಸ್ ಯಾವಾಗ ಅನ್ನೋ ಪ್ರಶ್ನೆ ಎದುರಾಗ್ತಾನೇ ಇರುತ್ತೆ. ಸದ್ಯಕ್ಕಿಲ್ಲ ಎಂದು ನಕ್ಕು ಮುಂದೆ ಸಾಗುವ ರಾಧಿಕಾ ಪಂಡಿತ್, ಈಗ ಅತ್ತೆಯಾಗಿದ್ದಾರೆ. ರಾಧಿಕಾ ಅವರ ಸಹೋದರ ಗೌರಂಗ್ ಪಂಡಿತ್, ಅತ್ತಿಗೆ ಸಹನಾ ದಂಪತಿ ಮುದ್ದು ಮಗುವಿಗೆ ಜನ್ಮ ನೀಡಿದ್ದಾರೆ. ಅತ್ತಿಗೆಯ ಹೆರಿಗೆಗಾಗಿ ಅಮೆರಿಕಕ್ಕೇ ಹೋಗಿದ್ದ ರಾಧಿಕಾ, ಮಗುವಿನ ಫೋಟೋ ಜೊತೆ ತಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನ ಸಾರಿದ್ದಾರೆ.

    `ನಾನು ಈಗ ಅತ್ತೆ ಆಗಿದ್ದೇನೆ. ಮುದ್ದು ಕಂದನನ್ನು ನೋಡಿದ ತಕ್ಷಣ ನಾನು ಎಮೋಷನಲ್ ಆದೆ. ನನ್ನ ನೋಟವನ್ನು ಬೇರೆಡೆ ಬದಲಿಸಲು ಆಗುತ್ತಿಲ್ಲ. ಈಗ ಅಣ್ಣ ಅತ್ತಿಗೆ ಪೋಷಕರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ ರಾಧಿಕಾ.

    ಸದ್ಯಕ್ಕೆ ಚಿಕಾಗೋದಲ್ಲಿರುವ ರಾಧಿಕಾ, ಇನ್ನೂ 22 ದಿನ  ಯಶ್‍ರನ್ನು ನೋಡದೇ ಇರಬೇಕು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

  • ರಾಧಿಕಾ ಪಂಡಿತ್ ಸ್ವಾಗತಕ್ಕೆ ಸಿದ್ಧರಾಗಿ..

    adilakshmi purana coming soon

    ರಾಧಿಕಾ ಪಂಡಿತ್ ತೆರೆಯ ಮೇಲೆ ಕಾಣಿಸಿಕೊಂಡು ಹೆಚ್ಚೂ ಕಡಿಮೆ 3 ವರ್ಷ. ಮದುವೆ.. ಬಾಣಂತನ, ಕಂದನ ಆರೈಕೆಗಳಲ್ಲೇ ಮುಳುಗಿಹೋಗಿದ್ದ ರಾಧಿಕಾ ಪಂಡಿತ್ ಮತ್ತೆ ಬರುತ್ತಿದ್ದಾರೆ. ಅಫ್‍ಕೋರ್ಸ್, ಇದು ಯಶ್ ಮದುವೆಯಾದ ಮೇಲೆ ಅವರು ನಟಿಸಿದ್ದ ಸಿನಿಮಾ. ಆದಿಲಕ್ಷ್ಮೀ ಪುರಾಣ.

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹೀರೋ.

    ಮಣಿರತ್ನಂ ಅವರ ಬಳಿ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ಚಿತ್ರದ ಬಿಡುಗಡೆಗೆ ವ್ಯವಸ್ಥೆಗಳಾಗುತ್ತಿದ್ದು, ಜೂನ್ 21ಕ್ಕೆ ಆದಿಲಕ್ಷ್ಮೀ ಪುರಾಣದ ಆಡಿಯೋ ರಿಲೀಸ್ ಆಗಲಿದೆ. ಜುಲೈನಲ್ಲಿ ಸಿನಿಮಾ ತೆರೆ ಮೇಲೆ ಬರಲಿದೆ.

  • ರಾಧಿಕಾ ಪಂಡಿತ್ ಹೀಗಿದ್ದಾರ್ ನೋಡಿ..

    second year engagement anniversary for yash and radhika

    ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ತಾವು ತಾಯಿಯಾಗುತ್ತಿರುವುದನ್ನು ಖಚಿತ ಪಡಿಸಿರುವ ರಾಧಿಕಾ, ತುಂಬಿದ ಹೊಟ್ಟೆಯಲ್ಲಿ ಹೇಗೆ ಕಾಣಿಸುತ್ತಿದ್ದಾರೆ ಅನ್ನೋದನ್ನ ಎಲ್ಲರ ಜೊತೆ ಹಂಚಿಕೊಂಡಿದ್ದಾರೆ. ಯಶ್ ಜೊತೆ ಬಸುರಿ ರಾಧಿಕಾರನ್ನು ನೋಡುವುದೇ ಒಂದು ಚೆಂದ.

    ಅಂದಹಾಗೆ ಆಗಸ್ಟ್ 12, ಯಶ್-ರಾಧಿಕಾ ನಿಶ್ಚಿತಾರ್ಥವಾದ ದಿನ. 2 ವರ್ಷಗಳ ಹಿಂದೆ ಆಗಸ್ಟ್ 12ರಂದೇ ಮದುವೆಯ ಗುಟ್ಟು ಮುರಿದಿದ್ದ ಜೋಡಿ, ಈಗ ಅದೇ ಆಗಸ್ಟ್ 12ರಂದು ಮಗುವಿನ ಗುಟ್ಟು ಹೇಳಿದೆ. ಮರಿ ಕೃಷ್ಣನೋ.. ರಾಧೆಯೋ.. ಚೆಂದದ ಮಗು ಮಡಿಲಿಗೆ ಬರಲಿ. ಅದು ಅಭಿಮಾನಿಗಳ ಹಾರೈಕೆ.

  • ರಾಧಿಕಾ ಪಂಡಿತ್, ಯಶ್ ದಂಪತಿಗೆ ಗಂಡು ಮಗು

    radhika pandit yash blessed with baby boy

    ಯಶ್ ಮತ್ತು ರಾಧಿಕಾ ಪಂಡಿತ್ ಮನೆಯಲ್ಲೀಗ ಮತ್ತೆ ಸಂಭ್ರಮ. ಐರಾಗೊಬ್ಬ ತಮ್ಮ ಬಂದಿದ್ದಾನೆ. ರಾಧಿಕಾ ಪಂಡಿತ್ 2ನೇ ಮಗುವಿಗೆ ತಾಯಿಯಾಗಿದ್ದಾರೆ. ಪೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಡಿಸೆಂಬರ್ 2, 2018ರಂದು ರಾಧಿಕಾ ಪಂಡಿತ್, ಐರಾಳಿಗೆ ಜನ್ಮ ನೀಡಿದ್ದರು. ನಂತರ ಜೂನ್‍ನಲ್ಲಿ ಮತ್ತೊಮ್ಮೆ ಗರ್ಭಿಣಿ ಎನ್ನುವುದನ್ನು ಬಹಿರಂಗಪಡಿಸಿದ್ದರು. ಈಗ ಅಕ್ಟೋಬರ್ 30ರಂದು ಮಗ ಹುಟ್ಟಿದ್ದಾನೆ.

  • ರಾಧಿಕಾ ಶೂಟಿಂಗ್ ಸ್ಟಾರ್ಟ್..!

    radhika shoots for simple sundari

    ಯಶ್ ಅವರ ಜೊತೆ ವಿವಾಹವಾದ ನಂತರ ಸಿನಿಮಾ ರಂಗದಿಂದ ಸ್ವಲ್ಪ ಬಿಡುವು ತೆಗೆದುಕೊಂಡಿದ್ದ ರಾಧಿಕಾ ಪಂಡಿತ್, ಮತ್ತೆ ಶೂಟಿಂಗ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಆಲ್‍ಮೋಸ್ಟ್ ಒಂದು ವರ್ಷದ ಬಳಿಕ ರಾಧಿಕಾ ನಟಿಸುತ್ತಿರುವ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಹೀರೋ.

    ಸಿಂಪಲ್ ಸುಂದರಿಯ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿ.ಪ್ರಿಯಾ. ಮಣಿರತ್ನಂ ಅವರ ಜೊತೆಗೆ ಅಸಿಸ್ಟೆಂಟ್ ಆಗಿದ್ದ ನಿರ್ದೇಶಕಿ ಪ್ರಿಯಾಗೆ ಇದು ಮೊದಲ ಕನ್ನಡ ಚಿತ್ರ. ಶೂಟಿಂಗ್‍ನಲ್ಲಿದ್ದ ಒಂದು ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್, ನಿಮ್ಮ ಶುಭ ಹಾರೈಕೆಗಳಿರಲಿ ಎಂದಿದ್ದಾರೆ. 

  • ರಾಧಿಕಾ-ನಿರೂಪ್ ಆದಿ ಲಕ್ಷ್ಮೀ ಪುರಾಣ

    radhika nirup's new movie title is aadi lakshmi purana

    ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ಹೊಸ ಸಿನಿಮಾ ಟೈಟಲ್ ಕೊನೆಗೂ ಫಿಕ್ಸ್ ಆಗಿದೆ. ಶೂಟಿಂಗ್ ಮುಗಿಸಿ, ಈಗಾಗಲೇ ಪೋಸ್ಟ್ ಪ್ರೊಡಕ್ಷನ್‍ನಲ್ಲಿರೋ ಸಿನಿಮಾಗೆ ಟೈಟಲ್ ಇಟ್ಟಿರಲಿಲ್ಲ. ಈಗ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಟೈಟಲ್ ಫೈನಲ್ ಮಾಡಿದ್ದಾರೆ ನಿದೇಶಕಿ ಪ್ರಿಯಾ.

    ಯಶ್ ಜೊತೆ ಮದುವೆಯಾದ ನಂತರ ರಾಧಿಕಾ ಪಂಡಿತ್ ನಟಿಸಿರುವ ಸಿನಿಮಾ ಇದು. ರಂಗಿತರಂಗ, ರಾಜರಥ ನಂತರ, ಅಣ್ಣನನ್ನು ಬಿಟ್ಟು ಬೇರೆ ನಿರ್ದೇಶಕರ ಜೊತೆ ನಿರೂಪ್ ಭಂಡಾರಿ ನಟಿಸಿರುವ ಮೊದಲ ಸಿನಿಮಾ ಇದು. ಮಣಿರತ್ನಂ, ಸುಹಾಸಿನಿ ಜೊತೆ ಕೆಲಸ ಮಾಡಿದ್ದ ಪ್ರಿಯಾ ಈ ಚಿತ್ರದ ನಿರ್ದೇಶಕಿ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ. ಹೀಗಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

    ಆದಿ ಅನ್ನೊದು ನಾಯಕನ ಹೆಸರು. ಲಕ್ಷ್ಮೀ ಅನ್ನೋದು ನಾಯಕಿ ಹೆಸರು. ಹೀಗಾಗಿ ಚಿತ್ರಕ್ಕೆ ಆದಿ ಲಕ್ಷ್ಮೀ ಪುರಾಣ ಎಂಬ ಹೆಸರಿಟ್ಟಿದ್ದೇವೆ. ಶೀರ್ಷಿಕೆಗೆ ತಕ್ಕಂತೆ ಸಿನಿಮಾದಲ್ಲಿ ಮುದ್ದಾದ ವಿಭಿನ್ನವಾದ ಪ್ರೇಮ ಕಥೆ ಇದೆ ಎಂದು ಭರವಸೆ ಕೊಟ್ಟಿದ್ದಾರೆ ಪ್ರಿಯಾ.

  • ರಾಧಿಕಾ-ಯಶ್ ಮಾಲ್ಡೀವ್ಸ್‍ನಲ್ಲಿ ಬೇಬಿ ಮೂನ್

    yash and radhika pandit o their babymoon

    ರಾಧಿಕಾ ಪಂಡಿತ್ ತಾಯಿಯಾಗುತ್ತಿದ್ದಾರೆ. ಕುಟುಂಬಕ್ಕೆ ಬರುತ್ತಿರುವ ಹೊಸ ಅತಿಥಿಯ ಸ್ವಾಗತವನ್ನು ವಿಶೇಷವಾಗಿ ಸಂಭ್ರಮಿಸುತ್ತಿದ್ದಾರೆ ಯಶ್ ಮತ್ತು ರಾಧಿಕಾ. ದಂಪತಿಯ ಸಂಭ್ರಮ ಈಗ ಮಾಲ್ಡೀವ್ಸ್‍ಗೆ ಕಾಲಿಟ್ಟಿದೆ.

    ಪತ್ನಿಯೊಂದಿಗೆ ಮಾಲ್ಡೀವ್ಸ್‍ನಲ್ಲಿ ಬೇಬಿ ಮೂನ್ ಸೆಲಬ್ರೇಟ್ ಮಾಡುತ್ತಿದ್ದಾರೆ ರಾಧಿಕಾ ಪಂಡಿತ್. ಪತಿಯೊಂದಿಗೆ ಮಾಲ್ಡೀವ್ಸ್‍ನ ಸುಂದರ ಬೀಚುಗಳಲ್ಲಿ ಸುತ್ತಾಡುತ್ತಿದ್ದಾರೆ. ವಿಶೇಷ ಫೋಟೋಶೂಟ್ ಕೂಡಾ ಮಾಡಿಸಿದ್ದಾರೆ. 

  • ರಾಧಿಕಾರದ್ದು ಕಮ್‍ಬ್ಯಾಕ್ ಎನ್ನಬೇಡಿ - ಯಶ್

    radhika's is not a come back film

    ಪತ್ನಿ ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ಚುತ್ತಿರುವುದಕ್ಕೆ ಪತಿ ಯಶ್ ನೀಡಿರುವ ಪ್ರತಿಕ್ರಿಯೆ ಇದು. ಅವರೇನೂ ಚಿತ್ರರಂಗದಿಂದ ದೂರ ಹೋಗಿರಲಿಲ್ಲ. ಗ್ಯಾಪ್ ತೆಗೆದುಕೊಂಡಿದ್ದರು, ಅಷ್ಟೆ. ಅದು ಕಮ್‍ಬ್ಯಾಕ್ ಅಲ್ಲ. ಈಗ ನಾನೂ ಕೂಡಾ ಮದುವೆಯಾದ ಮೇಲೆ ಕೆಜಿಎಫ್‍ನಲ್ಲಿ ನಟಿಸುತ್ತಿದ್ದೇನೆ.

    ನನ್ನ ಚಿತ್ರವನ್ನೇಕೆ ಕಮ್‍ಬ್ಯಾಕ್ ಎನ್ನುವುದಿಲ್ಲ. ಮಹಿಳೆಯರು ಮದುವೆಯಾದ ಮೇಲೆ ನಟಿಸಿದರೆ ಮಾತ್ರ ಕಮ್‍ಬ್ಯಾಕ್ ಎನ್ನುವುದೇಕೆ..ಎಂದೆಲ್ಲ ಪ್ರಶ್ನಿಸಿದ್ದಾರೆ ನಟ ಯಶ್.

    Related Articles :-

    ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ರಾಧಿಕಾ ಪಂಡಿತ್

  • ರಾಮಾಚಾರಿಗೆ 8.. ಗೆಲುವಿಗೆ ಕಾರಣ ಯಾರು..? 

    ರಾಮಾಚಾರಿಗೆ 8.. ಗೆಲುವಿಗೆ ಕಾರಣ ಯಾರು..? 

    ಮಿಸ್ಟರ್ & ಮಿಸಸ್ ರಾಮಾಚಾರಿ.  ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಸಿನಿಮಾ. ಕೆಜಿಎಫ್ ಬಿಡುಗಡೆಗೂ ಮುನ್ನ ಯಶ್ ವೃತ್ತಿ ಬದುಕಿನಲ್ಲಿ ದೊಡ್ಡ ಮಟ್ಟದ ಹಿಟ್ ಆಗಿದ್ದಿದ್ದು ಇದೇ ಸಿನಿಮಾ. 2014ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರಕ್ಕೀಗ 8 ವರ್ಷ. ಯಶ್ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿರುವ ಜಯಣ್ಣ-ಭೋಗೇಂದ್ರ ಈ ಚಿತ್ರಕ್ಕೂ ನಿರ್ಮಾಪಕರು. ಸಂಭಾಷಣೆ, ಸಾಹಿತ್ಯ ಬರೆದುಕೊಂಡಿದ್ದ ಸಂತೋಷ್ ಆನಂದರಾಮ್ ಎಂಬ ಹುಡುಗ ಕನ್ನಡ ಚಿತ್ರರಂಗದ ಸಕ್ಸಸ್ ಸ್ಟಾರ್ ಡೈರೆಕ್ಟರ್ ಆಗಿದ್ದು ಇದೇ ಚಿತ್ರದಿಂದ.

    ಚಿತ್ರದ ಯಶಸ್ಸಿಗೆ ಏನು ಕಾರಣ.. ಹುಡುಕಿದರೆ ನೂರೆಂಟು ಕಾರಣ ಸಿಗುತ್ತವೆ. ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಯಶ್, ಕೇರ್‍ಲೆಸ್ ಹುಡುಗನಾಗಿ.. ನಂತರ ಜವಾಬ್ದಾರಿಯುತ ಮಗನಾಗಿ.. ಪ್ರೇಮಿಯಾಗಿ.. ನಟಿಸಿದ್ದರು. ಚಿತ್ರದುದ್ದಕ್ಕೂ ವಿಷ್ಣು ದಾದಾ ಕ್ಯಾರಿ ಆಗಿದ್ದರು. ಹೀರೋ ಉಢಾಳನೋ.. ಪೋಲಿಯೋ.. ಹೇಗೆಂದು ನಿರ್ಧರಿಸೋಕೆ ಸಾಧ್ಯವಿಲ್ಲದೆ ಪ್ರೇಕ್ಷಕರು ತೆರೆದ ಹೃದಯದಿಂದ ಅಪ್ಪಿಕೊಂಡಿದ್ದರು. ಯಶ್-ರಾಧಿಕಾ ಪಂಡಿತ್ ಲವ್ ಸ್ಟೋರಿ, ಬಾಗಿನ ಕೊಟ್ಟು ಪ್ರಪೋಸ್ ಮಾಡುವ ಸ್ಟೈಲ್ ಇವತ್ತಿಗೂ ಟ್ರೆಂಡಿಂಗ್‍ನಲ್ಲಿದೆ. ನಾನ್ ಬರೋವರ್ಗೂ ಮಾತ್ರ ಬೇರೆಯವರ ಹವಾ.. ನಾನ್ ಬಂದ್ ಮೇಲೆ ನಂದೇ ಹವಾ.. ಚಿತ್ರದ ಫೇಮಸ್ ಡೈಲಾಗ್.. ಆನಂತರ ಯಶ್ ಕೆರಿಯರಿಗೂ ಮ್ಯಾಚ್ ಆಗುವಂತೆ ಸಕ್ಸಸ್ ಸಿಕ್ಕಿತು. ಹರಿಕೃಷ್ಣ ಮ್ಯೂಸಿಕ್ಕಿನಲ್ಲಿ ಎಲ್ಲ ಹಾಡುಗಳೂ ಸೂಪರ್ ಹಿಟ್.

    ನಿರ್ದೇಶಕ ಸಂತೋಷ್ ಆನಂದರಾಮ್ 8 ವರ್ಷಗಳ ಸಕ್ಸಸ್ ಟ್ವೀಟ್‍ನಲ್ಲಿ ನೆನಪಿಸಿಕೊಂಡಿರುವುದು ಯಶ್ ಅವರನ್ನೇ. ನಿರ್ಮಾಪಕ ಜಯಣ್ಣ ಕೂಡಾ ಚಿತ್ರದ ಗೆಲುವಿನ ಕ್ರೆಡಿಟ್‍ನ್ನು ಯಶ್ ಅವರಿಗೇ ಕೊಟ್ಟಿದ್ದಾರೆ. ಸಿನಿಮಾ ಚಿತ್ರೀಕರಣದ ಹೊತ್ತಿಗೆ ಯಶ್ ಮತ್ತು ರಾಧಿಕಾ ಪರಸ್ಪರ ಪ್ರೀತಿಸುತ್ತಿದ್ದುದು ಗೊತ್ತಾಗಿತ್ತು. ಆದರೆ ಇಬ್ಬರೂ ಬಹಿರಂಗಪಡಿಸಿರಲಿಲ್ಲ. ಅದು ಗೊತ್ತಿದ್ದೇ ಚಿತ್ರದ ಕೆಲವು ಸೀನ್ ರೂಪಿಸಿದ್ದೆವು ಎಂದಿದ್ದಾರೆ ಜಯಣ್ಣ.

    ಯಶ್ ಫ್ಯಾನ್ಸ್ ಈಗ ರಾಜ್ಯಾದ್ಯಂತ ಸೆಲಬ್ರೇಷನ್ ಮಾಡುತ್ತಿದ್ದು 8ನೇ ವರ್ಷಕ್ಕೆ 8 ದಿನ ಸಂಭ್ರಮ ಇಟ್ಟುಕೊಂಡಿದ್ದಾರೆ. ಜನವರಿ 1ರಿಂದ ಜನವರಿ 8ರವರೆಗೆ ಯಶ್ ಟೈಮ್ಸ್ ಹೆಸರಲ್ಲಿ ಕ್ಯಾಂಪೇನ್ ಶುರುವಾಗುತ್ತಿದೆ. ಪ್ರತಿ ಸಂಜೆ 6ಕ್ಕೆ ಯಶ್ ಅವರೇ ಖುದ್ದು ಫ್ಯಾನ್ಸ್ ಸರ್‍ಪ್ರೈಸ್ ಕೊಡುತ್ತಾರೆ. 8ನೇ ತಾರೀಕು ಯಶ್ ಹೊಸ ಸಿನಿಮಾ ಅನೌನ್ಸ್ ಆಗುವ ಸೂಚನೆಗಳಿವೆ. ನಿರೀಕ್ಷೆಗಳಿವೆ. ಆದರೆ.. ಪಕ್ಕಾ ಇಲ್ಲ. ಏಕಂದ್ರೆ ಅದನ್ನು ಡಿಸೈಡ್ ಮಾಡೋದು ಯಶ್ ಆಗಿರುವ ಕಾರಣ ಕನ್‍ಫರ್ಮ್ ಮಾಡುವುದಕ್ಕೆ ಆಗುತ್ತಿಲ್ಲ.

  • ರಾಯ'ರ ಮಗಳ ಹೆಸರೇನ್ ಗೊತ್ತಾಯ್ತ..?

    yash radhika pandit's baby name will be announced tomorrow

    ರಾಕಿಂಗ್ ಸ್ಟಾರ್ ಯಶ್, ಮೊಗ್ಗಿನ ಮನಸ್ಸಿನ ರಾಧಿಕಾ ಪಂಡಿತ್ ದಂಪತಿಯ ಮುದ್ದಾದ ಮಗಳ ಹೆಸರೇನು..? ಅಭಿಮಾನಿಗಳು ಕುತೂಹಲದಿಂದ ಕಾಯ್ತಿರೋ ಆ ಹೆಸರು ಈಗಾಗಲೇ ಫೈನಲ್ ಆಗಿದೆ. ಕೆಲವು ಅಭಿಮಾನಿಗಳು ಹೆಸರನ್ನೂ ಸೂಚಿಸಿದ್ದಾರೆ. ಬೇಬಿ ವೈಆರ್ ಅರ್ಥಾತ್ ರಾಯರ ಮಗಳ ಹೆಸರನ್ನು ಯಶ್ ಮತ್ತು ರಾಧಿಕಾ ಓಕೆ ಮಾಡಿದ್ದಾರೆ.

    ಆದರೆ, ಅದು ಏನು ಎಂದು ಗೊತ್ತಾಗಬೇಕೆಂದರೆ ನಾಳೆವರೆಗೆ ಅಂದ್ರೆ ಜೂನ್ 23ರವರೆಗೆ ಕಾಯಬೇಕು. ಆ ಹೆಸರಿನಲ್ಲಿ ವೈ ಮತ್ತು ಆರ್ ಎರಡೂ ಇರುತ್ತಾ..? ಸಸ್ಪೆನ್ಸ್ ಮುಗಿದಿಲ್ಲ.

  • ರಾಯರ ಮಗಳು ಐರಾ : ಏನಿದರ ಅರ್ಥ..?

    what is the meaning of ayra

    ಯಶ್, ರಾಧಿಕಾ ಪಂಡಿತ್‍ರ ಮುದ್ದು ಕೂಸಿಗೆ ನಾಮಕರಣವಾಗಿದೆ. ಹೆಸರು ಐರಾ. ಏನಿದು.. ಹೆಸರು..? ಏನೋ ಹೊಸದಾಗಿದೆಯಲ್ಲ ಎಂದು ತಲೆಕೆಡಿಸಿಕೊಂಡಿರಾ..? 

    ಐರಾ ಅಂದ್ರೆ ಲಕ್ಷ್ಮೀ ಎಂದರ್ಥ. ಐರಾ ಅಂದ್ರೆ ಗೌರವಾನ್ವಿತ ಎಂಬ ಅರ್ಥವೂ ಇದೆ.

    ಐರಾ ಎನ್ನುವುದು ಇಂದ್ರನ ಐರಾವತದ ಮೊದಲ ಎರಡು ಅಕ್ಷರ. ಇಷ್ಟೆಲ್ಲ ಆಗಿ ಐರಾ ಅನ್ನೋ ಹೆಸರಿನಲ್ಲಿ ರಾಧಿಕಾ ಮತ್ತು ಯಶ್ ಇಬ್ಬರ ಹೆಸರುಗಳೂ ಇವೆ. 

  • ಸರ್ಕಾರಿ ಮದುವೆ ಭಾಗ್ಯಕ್ಕೆ ಯಶ್-ರಾಧಿಕಾ ಪಂಡಿತ್ ಬ್ರಾಂಡ್ ಅಂಬಾಸಿಡರ್ಸ್

    Yash - Radhika Pandit Turns Brand Ambadassor For 'Maduve Bhagya' Government Scheme

    ಬಿಜೆಪಿ ಸರ್ಕಾರ ಬಂದ ನಂತರ ಸರ್ಕಾರದಿಂದಲೇ ಸಾಮೂಹಿಕ ಮದುವೆ ಕಾರ್ಯಕ್ರಮ ಘೋಷಿಸಿದ್ದು ನೆನಪಿದೆ ತಾನೇ.. ಯಡಿಯೂರಪ್ಪ ಸರ್ಕಾರದ ಈ ಮದುವೆ ಭಾಗ್ಯ ಯೋಜನೆಯಲ್ಲಿ 1 ಸಾವಿರ ಜೋಡಿಗೆ ಸಾಮೂಹಿಕ ಮದುವೆ ಭಾಗ್ಯ ಸಿಗಲಿದೆ. ಅಷ್ಟೂ ಜೋಡಿಗಳಿಗೆ ಸರ್ಕಾರ 65 ಸಾವಿರ ರೂ. ಮತ್ತು 8 ಗ್ರಾಂ ತಾಳಿಯನ್ನು ನೀಡುವುದಾಗಿ ಘೋಷಿಸಿತ್ತು. ಆ ಕಾರ್ಯಕ್ರಮ 2020ರ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ.

    ಆ ಮದುವೆ ಭಾಗ್ಯ ಕಾರ್ಯಕ್ರಮಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಪ್ರಚಾರ ರಾಯಭಾರಿಗಳಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್, ಸುಧಾಮೂರ್ತಿ, ’?ಶ್ರೀ ಶ್ರೀ ಶ್ರೀ ರವಿಶಂಕರ್ ಕೂಡಾ ಸಾಥ್ ನೀಡಲಿದ್ದಾರಂತೆ.

  • ಸುಹಾಸಿನಿ ಮೆಚ್ಚಿದ ಕಥೆ, ರಾಕ್‍ಲೈನ್‍ಗೆ ತಲುಪಿದ ಹಾದಿಯೇ ರೋಚಕ

    adi lakshmi purana has interesting story

    ಆದಿ ಲಕ್ಷ್ಮೀ ಪುರಾಣ ಬಿಡುಗಡೆಗೆ ರೆಡಿಯಾಗಿದೆ. ಮುಂದಿನ ವಾರ ತೆರೆಗೆ ಬರುತ್ತಿರುವ ಈ ಚಿತ್ರದ ನಿರ್ದೇಶಕಿ ಪ್ರಿಯಾ ಹಾಗೂ ಕ್ಯಾಮೆರಾಮನ್ ಪ್ರೀತಾ ಜಯರಾಮನ್ ಇಬ್ಬರೂ ಮಹಿಳೆಯರೇ. ರಾಧಿಕಾ ಪಂಡಿತ್ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು. ರಾಧಿಕಾ ಪಂಡಿತ್ ಮದುವೆಯಾದ ಮೇಲೆ ನಟಿಸಿರುವ ಮೊದಲ ಚಿತ್ರವೂ ಇದೇ.. ಹೀಗೆ ವಿಶೇಷಗಳ ಮೇಲೆ ವಿಶೇಷವಿರುವ ಚಿತ್ರದ ಮತ್ತೂ ಒಂದು ವಿಶೇಷವೆಂದರೆ ಚಿತ್ರದ ಕಥೆ.

    ಮಣಿರತ್ನಂ ಬಳಿ ಸಹಾಯಕಿಯಾಗಿದ್ದ ಪ್ರಿಯಾ, ತಮ್ಮ ಕಥೆಯನ್ನು ಸುಹಾಸಿನಿ ಅವರ ಬಳಿಯೂ ಹೇಳಿದ್ದರು. ಕಥೆ ಸುಹಾಸಿನಿಗೆ ಇಷ್ಟವಾಗಿತ್ತು. ಆ ಕಥೆಯನ್ನು ಅವರು ಯಶ್‍ಗೆ ಹೇಳಿದರು. ಹೀಗೆ ಸುಹಾಸಿನಿ ಇಷ್ಟ ಪಟ್ಟು ಶುರುವಾದ ಕಥೆ ಈಗ ಸಿನಿಮಾ ಆಗಿದೆ.

    ನಿರೂಪ್ ಭಂಡಾರಿ, ರಾಧಿಕಾ ಪಂಡಿತ್ ಪಾತ್ರಗಳು, ಆ ಪಾತ್ರಗಳು ಪರಸ್ಪರ ಹೇಳಿಕೊಳ್ಳುವ ಸುಳ್ಳುಗಳು, ಅವು ಸೃಷ್ಟಿಸುವ ಅವಾಂತರಗಳು.. ಅಬ್ಬಾ.. ತೆರೆಯ ಮೇಲೆ ಅದರಿಂದ ಸೃಷ್ಟಿಯಾಗುವ ಗೊಂದಲಗಳು ಮಜಾ ಕೊಡುತ್ತವೆ ಎನ್ನುತ್ತಾರೆ ರಾಕ್‍ಲೈನ್ ವೆಂಕಟೇಶ್.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

    yash and radhika pandit blessed with baby girl

    ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ರಾಧಿಕಾ ಪಂಡಿತ್, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆ 20 ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ರಾಧಿಕಾ ಪಂಡಿತ್. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಯಶ್ ತಮಗೆ ಹೆಣ್ಣು ಮಗು ಬೇಕು ಎಂದು ಆಸೆಪಟ್ಟಿದ್ದರು. ಅವರ ಆಸೆ ಈಡೇರಿದಂತಾಗಿದೆ.

  • ಹೇಗಿದ್ದಾನೆ ಜೂ.ಯಶ್ : ಹೊರಬಂತು ಫೋಟೋ

    yash rdhika pose with their son

    ರಾಕಿ ಭಾಯ್ ಯಶ್, ಸ್ಯಾಂಡಲ್‍ವುಡ್ ಸಿಂಡ್ರೆಲಾ ದಂಪತಿಯ ಪುತ್ರ ಹೇಗಿದ್ದಾನೆ..? ಈ ಒಂದು ಕುತೂಹಲ ಹಾಗೆಯೇ ಇತ್ತು. ಮಗಳು ಐರಾಳನ್ನು ನೋಡಿ ಖುಷಿಪಟ್ಟಿದ್ದವರಿಗೆ ಯಶ್ ಪುತ್ರನ ದರ್ಶನ ಭಾಗ್ಯ ಸಿಕ್ಕಿರಲಿಲ್ಲ. ಈಗ ದಂಪತಿ ಹೊಸ ವರ್ಷದ ದಿನ ಮಗನ ದರ್ಶನ ಮಾಡಿಸಿದ್ದಾರೆ.

    ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುವಾಗ ಯಶ್ ಐರಾಳನ್ನು ಎತ್ತಿಕೊಂಡಿದ್ದರೆ, ರಾಧಿಕಾ ಜ್ಯೂ.ಯಶ್‍ನನ್ನು ಎತ್ತಿಕೊಂಡಿದ್ದಾರೆ.