` radhika pandit, - chitraloka.com | Kannada Movie News, Reviews | Image

radhika pandit,

  • Zoom is BBFC Certified

    zoom movie image

    Ganesh starrer Zoom is the first Kannada film to be censored by the British Board for Film Certification. With the BBFC in hand the film will be extensively released across Europe.

    Earlier,  the film was said to release across many centers in Europe. However,  the team had applied for certificate from BBFC and now the film has been granted a certificate from BBFC.  With the certificate in hand,  the team plans to release the film across Europe in a big way.

    Zoom Movie Images - View

    Also See

    Zoom Movie Review 

    Zoom Collects 10 Crores In 25 Days

    Zoom Rakes In Five Crores In Three Days

    Zoom To Be Dubbed In French, Korean and Malay languages

    Zoom To Release In Africa Also

    Zoom Trailer To Be Released On The 12th Of June

    Zoom Audio Released

    Murali Sings a Song For Ganesh's Zoom

    Ganesh in Italy For Zoom Shooting

    Kashinath Returns To Zoom as Scientist

  • Zoom Rakes In Five Crores In Three Days

    zoom movie image

    Ganesh starrer Zoom is running successfully and according to director Prashanth Raj, the film has raked in five crore rupees in the first three days.Prashanth Raj was talking during the success meet of the film held at actor Ganesh's residence in Rajarajeshwari Nagar in Bangalore.

    A total of  shows has been held and 11 lakh people have watched the audience. 200 shows were houseful totally and the film has raked in 1.45 crores, 1.60 crores and 3.18 crores in the first first three days. A total of five crores gross has been collected and we are yet to release the film in overseas' said Prashanth Raj.

    Zoom Movie Images - View

    Also See

    Zoom Movie Review 

    Zoom To Be Dubbed In French, Korean and Malay languages

    Zoom To Release In Africa Also

    Zoom Trailer To Be Released On The 12th Of June

    Zoom Audio Released

    Murali Sings a Song For Ganesh's Zoom

    Ganesh in Italy For Zoom Shooting

    Kashinath Returns To Zoom as Scientist

    Ramya Promotes Aryan in Full Zoom

  • Zoom To Be Dubbed In French, Korean and Malay languages

    zoom movie image

    Ganesh and Radhika Pandith starrer Zoom is all set to be released on the 01st of July. The film will be releasing in 11 states as well as many countries simultaneously.Another highlight of the film is, it is all set to be dubbed in French, Korean and Malay languages and the dubbed versions will be releasing by the second week of July. Already the dubbing is under progress and is expected to conclude soon.

    The film is being written and directed by Prashanth Raj. S S Thaman has composed the songs for the film, while Santhosh Rai Pathaje is the cameraman. Ganesh, Radhika Pandith, Kashinath, Sadhu Kokila and others play prominent roles in the film.

    Zoom Movie Gallery - View

    Also See

    Zoom To Release In Africa Also

    Zoom Trailer To Be Released On The 12th Of June

    Zoom Audio Released

    Murali Sings a Song For Ganesh's Zoom

    Ganesh in Italy For Zoom Shooting

    Kashinath Returns To Zoom as Scientist

    Ramya Promotes Aryan in Full Zoom

     

  • Zoom To Release In Africa Also

    zoom movie image

    Kannada films releasing in America, Europe, Australia and Middle East is not a big deal in these days. Now Ganesh starrer Zoom is all set to be released in Africa simultaneously for the very first time. Zoom is all set to be released on the 01st of July and apart from getting released in India, North America, Europe, Middle East and Australia, the film is also being released in Johannesburg and Cape Town (South Africa), Lusaka, Aaccra, Cairo, Kampala, Nairobi, Lagos and Kigali.

    The film is being written and directed by Prashanth Raj. S S Thaman has composed the songs for the film, while Santhosh Rai Pathaje is the cameraman.

    Zoom Movie Gallery - Click

    Also See

    Zoom Trailer To Be Released On The 12th Of June

    Zoom Audio Released

    Murali Sings a Song For Ganesh's Zoom

    Ganesh in Italy For Zoom Shooting

    Kashinath Returns To Zoom as Scientist

  • Zoom Trailer To Be Released On The 12th Of June

    zoom movie image

    Ganesh starrer ‘Zoom’ is scheduled for a July 01st release worldwide. Meanwhile, director Prashanth Raj is all set to release the trailer of the film on the 12th of June. The trailer release is organized in the Urvashi Theater in Bangalore at 6 PM and many stars including Ganesh, Radhika Pandith, Prem and others are expected to be a part of this trailer release function.

     ‘Zoom’ is being written and directed by Prashanth Raj. S S Thaman has composed the songs for the film, while Santhosh Rai Pathaje is the cameraman

  • ಅಡುಗೆ ಭಟ್ಟನಾದರು ರಾಕಿಂಗ್ ಸ್ಟಾರ್

    yash cooks for his wife radhika pandit

    ರಾಕಿಂಗ್ ಸ್ಟಾರ್ ಯಶ್, ಅಡುಗೆ ಭಟ್ಟನಾಗಿದ್ದಾರೆ. ಮೊಗ್ಗಿನ ಮನಸ್ಸಿನ ಹುಡುಗಿಗಾಗಿ. ಪತ್ನಿ ರಾಧಿಕಾ ಪಂಡಿತ್‍ಗಾಗಿ ಅಡುಗೆ ಮಾಡಿ ಬಡಿಸಿದ್ದಾರೆ ಯಶ್.ಗರ್ಭಿಣಿಯಾಗಿರುವ ರಾಧಿಕಾ ಪಂಡಿತ್‍ಗೆ ಇದು ಬಸುರಿ ಬಯಕೆಯಾ..? ಗೊತ್ತಿಲ್ಲ. ಪತ್ನಿ ಕೇಳಿದ್ದೆಲ್ಲವನ್ನೂ ಪ್ರೀತಿಯಿಂದ ಮಾಡುವ ಯಶ್, ಈ ಬಾರಿ ಅಡುಗೆ ಮಾಡಿದ್ದಾರೆ. 

    ಪರವಾಗಿಲ್ಲ, ಕೆಟ್ಟ ಅಡುಗೆ ಭಟ್ಟನೇನೂ ಅಲ್ಲ. ಎಷ್ಟೆಂದ್ರೂ ರಾಕಿಂಗ್ ಸ್ಟಾರ್ ಅಲ್ವಾ.. ಎಂದು ಕಿಚಾಯಿಸಿದ್ದಾರೆ ರಾಧಿಕಾ ಪಂಡಿತ್.

  • ಅವಳ ಮದುವೆಗೆ ಒಪ್ಪಿಗೆ ಕೊಡ್ತಾನಾ ಗಂಡ..? ಆದಿಲಕ್ಷ್ಮೀ ಪುರಾಣ

    adi lakshmi purana traile released

    ಮದುವೆಯಾಗು.. ಹುಡುಗಿ ನೋಡು.. ಎನ್ನುತ್ತಿದ್ದ ತಾಯಿಗೆ ಹುಡುಗಿಯನ್ನು ನೋಡಿಕೊಂಡು ಬಂದ ಮಗ ಹೇಳ್ತಾನೆ. ``ನಾನೊಂದು ಹುಡುಗಿಯನ್ನ ಇಷ್ಟಪಟ್ಟಿದ್ದೀನಿ. ಅವಳನ್ನೇ ಮದುವೆಯಾಗ್ತೀನಿ' ತಾಯಿ ಹೇಳ್ತಾಳೆ `ಕೇಳೋಣ ಬಿಡು' ಆದರೆ ಮಗನ ಮುಂದಿನ ರಿಯಾಕ್ಷನ್ ನೋಡಿ.. ಕೇಳೋದಾದ್ರೆ, ಅವಳ ಗಂಡನ್ನೇ ಕೇಳಬೇಕು..

    ಇಂತಹ ಸಣ್ಣದೊಂದು ಪಂಚ್ ಕೊಟ್ಟೇ ಟ್ರೇಲರ್ ಬಿಟ್ಟಿದ್ದಾರೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದಿಲಕ್ಷ್ಮೀ ಪುರಾಣದ ಟ್ರೇಲರ್‍ನ ಝಲಕ್ ಇದು. ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಅಭಿನಯದ ಈ ಸಿನಿಮಾಗೆ ಪ್ರಿಯಾ ನಿರ್ದೇಶಕಿ.

    2016ರಲ್ಲಿ ಯಶ್ ಜೊತೆ ನಟಿಸಿದ್ದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ನಂತರ ರಾಧಿಕಾ ಪಂಡಿತ್ ಅವರು ನಟಿಸಿರುವ ಚಿತ್ರವಿದು. ಯಶ್ ಅವರನ್ನು ಮದುವೆಯಾದ ಮೇಲೆ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿರೋ ಮೊದಲ ಚಿತ್ರ. 

  • ಆದಿಲಕ್ಷ್ಮಿ ಪುರಾಣ

    adi lakshmi purana highlights

    ಆದಿ ದಕ್ಷ, ಪ್ರಾಮಾಣಿಕ ಅಧಿಕಾರಿ. ಸುಳ್ಳು ಹೇಳುವವರನ್ನು ಕಂಡ್ರೆ ಆಗೋದಿಲ್ಲ... ಅದು ನಿರೂಪ್ ಭಂಡಾರಿ..

    ಅವನಿಗೆ ಮದುವೆಯಾಗಿಲ್ಲ. ಹುಡುಗಿ ಹುಡುಕುತ್ತಿದ್ದಾರೆ. ಇವನೇ ಯಾರಿಗೂ ಎಸ್ ಅಂತಿಲ್ಲ.. ಇವನಿಗೆ ಎಂತ ಹುಡುಗಿ ಬೇಕು ಅಂದ್ರೆ, ಅವಳನ್ನು ನೋಡಿದ ತಕ್ಷಣ ಮಿಂಚು ಹೊಡೀಬೇಕು. ಹಾರ್ಟಲ್ಲಿ ಸುನಾಮಿ ಎದ್ದೇಳಬೇಕು...

    ನಿರೂಪ್‍ಗೆ ಮಿಂಚು ಹೊಡೆಸಿ, ಸುನಾಮಿಯನ್ನೂ ಏಳುವಂತೆ ಮಾಡುವ ಚೆಲುವೆ ಸಿಂಡ್ರೆಲಾ ರಾಧಿಕಾ ಪಂಡಿತ್.

    ನಿಮ್ಮ ಹೆಸರು ನಂದಿನಿ ಅಲ್ಲ ತಾನೆ.. ಹಳೆಯ ಕಾಲದಿಂದಲೂ ಆ ಹೆಸರಿನ ಹುಡುಗೀರೇ ಹುಡುಗರಿಗೆ ಹುಚ್ಚು ಹಿಡಿಸಿರೋದು ಎನ್ನುವ ಡೈಲಾಗಿನಲ್ಲಿ ಬಂಧನ, ಮುಂಗಾರು ಮಳೆ ಚಿತ್ರಗಳನ್ನೆಲ್ಲ ನೆನಪಿಸಿಬಿಡ್ತಾರೆ.

    ಆದಿ ಲಕ್ಷ್ಮಿ ಲವ್ ಪುರಾಣದ ಕಥೆ ಇಷ್ಟರಲ್ಲೇ ಕುತೂಹಲ ಹುಟ್ಟಿಸಿಬಿಡುತ್ತೆ. ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ನಿರ್ದೇಶನದ ಮೊದಲ ಚಿತ್ರವಿದು. 

    ಈಗ ಕುತೂಹಲವನ್ನು ಹಿಮಾಲಯದ ಎತ್ತರಕ್ಕೆ ಹೊತ್ತೊಯ್ಯುವ ಈ ಡೈಲಾಗ್ ಕೇಳಿಬಿಡಿ.

    ನಾನೊಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಅಂತಾನೆ ನಾಯಕ. ಓಕೆ ಅನ್ನೋದನ್ನೇ ಕಾಯುತ್ತಿರುವ ನಾಯಕನ ಅಮ್ಮ ತಾರಾ, ಬಾ.. ಹೋಗಿ ಅವರ ಅಪ್ಪ ಅಮ್ಮನನ್ನ ಕೇಳಿಬಿಡೋಣ ಅಂತಾರೆ.

    ನಾವು ಹೆಣ್ಣು ಕೇಳೋದಾದ್ರೆ, ಅವಳ ಗಂಡನನ್ನೇ ಕೇಳಬೇಕು ಅಂತಾನೆ ನಾಯಕ.. ಮುಂದಿನದ್ದು.. ನಿಮ್ಮ ಊಹೆಗೆ ಬಿಟ್ಟಿದ್ದು. ಉತ್ತರ ಸಿಕ್ಕೋದು ಮುಂದಿನ ವಾರ.

  • ಆದಿಲಕ್ಷ್ಮೀ ಪುರಾಣದಲ್ಲಿ ಹೆಣ್ಮಕ್ಳದ್ದೇ ಸಾಮ್ರಾಜ್ಯ

    women power in adilakshmi purana

    ಆದಿಲಕ್ಷ್ಮೀ ಪುರಾಣ, ರಾಧಿಕಾ ಪಂಡಿತ್‍ರನ್ನು 3 ವರ್ಷಗಳ ನಂತರ ತೆರೆಗೆ ತರುತ್ತಿರುವ ಚಿತ್ರವಿದು. ರಾಜರಥ ನಂತರ ನಿರೂಪ್ ಭಂಡಾರಿ ನಟಿಸಿರುವ ಚಿತ್ರವೂ ಆದಿಲಕ್ಷ್ಮೀ ಪುರಾಣ. ಮದುವೆಯಾಗಿರುವ ಹುಡುಗಿಯನ್ ಲವ್ ಮಾಡೋ ಸ್ಟೋರಿ ಇರುವ ಆದಿಲಕ್ಷ್ಮೀಪುರಾಣದಲ್ಲಿ ಹೆಣ್ಮಕ್ಕಳದ್ದೇ ಸಾಮ್ರಾಜ್ಯ.

    ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್. ಆದರೆ, ಚಿತ್ರದ ನಿರ್ದೇಶಕಿ ಪ್ರಿಯಾ. ಆಕೆ ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಹುಡುಗಿ. ಅವರಷ್ಟೇ ಅಲ್ಲ, ಚಿತ್ರದ ಛಾಯಾಗ್ರಹಕಿಯೂ ಪ್ರೀತಾ ಅನ್ನೋ ಇನ್ನೊಬ್ಬ ಹುಡುಗಿ. ಸ್ಸೋ.. ಇಲ್ಲಿ ಚಿತ್ರತಂಡದವರನ್ನೆಲ್ಲ ಆಡಿಸಿರೋದು, ಕುಣಿಸಿರೋದು ಹೆಂಗಸರೇ. ಚಿತ್ರ ರಿಲೀಸ್‍ಗೆ ರೆಡಿಯಾಗಿ ನಿಂತಿದೆ. ಜಸ್ಟ್ ವೇಯ್ಟ್..

  • ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ಸ್ : ನಟಿಸದಿದ್ದವರೇ ನಂ.1.. ನಂ.3.. ನಂ.4..

    ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ಸ್ : ನಟಿಸದಿದ್ದವರೇ ನಂ.1.. ನಂ.3.. ನಂ.4..

    ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ಕನ್ನಡದ ಜನಪ್ರಿಯ ನಟಿಯರು ಯಾರ್ ಯಾರು ಅನ್ನೋ ಸಮೀಕ್ಷೆ ಮಾಡಿತ್ತು. ಟಾಪ್ ಲಿಸ್ಟ್‍ನ್ನು ಕೂಡಾ ಬಿಡುಗಡೆ ಮಾಡಿತ್ತು.ನಿರೀಕ್ಷೆಯಂತೆಯೇ ಶ್ರೀವಳ್ಳಿ ಖ್ಯಾತಿಯ ರಶ್ಮಿಕಾ ಮಂದಣ್ಣ ನಂ.1 ಸ್ಥಾನ ಪಡೆದಿದ್ದರು. ಅದು ಕನ್ನಡತಿಯಾಗಿ ನಂ.1. ಏಕೆಂದರೆ ರಶ್ಮಿಕಾ ಕೂಡಾ ಕನ್ನಡ ಚಿತ್ರದಲ್ಲಿ ನಟಿಸಿ ವರ್ಷಗಳೇ ಆಗಿವೆ.

    ನಂ.2 ಸ್ಥಾನದಲ್ಲಿದ್ದವರು ರಚಿತಾ ರಾಮ್. ಸಹಜವೇ. ಅತೀ ಹೆಚ್ಚು ಚಿತ್ರಗಳು ಹಾಗೂ ಅತಿ ಹೆಚ್ಚು ಯಶಸ್ವಿ ಚಿತ್ರಗಳು ಇರುವುದು ಅವರ ಹೆಸರಲ್ಲೆ..

    3ನೇ ಸ್ಥಾನದಲ್ಲಿರೋದು ರಾಧಿಕಾ ಪಂಡಿತ್. ವಿಶೇಷವೆಂದರೆ ರಾಧಿಕಾ ಪಂಡಿತ್ ಕೂಡಾ ನಟಿಸಿ.. ಅವರ ಚಿತ್ರವೊಂದು ರಿಲೀಸ್ ಆಗಿ ಕೆಲವು ವರ್ಷಗಳೇ ಆಗಿವೆ.

    ಇನ್ನು 4ನೇ ಸ್ಥಾನ ಇನ್ನೂ ಇಂಟ್ರೆಸ್ಟಿಂಗ್. ನಂ.4 ಸ್ಥಾನದಲ್ಲಿರೋದು ರಮ್ಯಾ. ರಮ್ಯಾ ಕನ್ನಡ ಅಷ್ಟೇ ಅಲ್ಲ, ಅವರು ನಟಿಸಿದ್ದ ಸಿನಿಮಾ ತೆರೆ ಕಂಡೇ 8 ವರ್ಷಗಳು ಕಳೆದು ಹೋಗಿದೆ.

    ನಂ.5 ಸ್ಥಾನದಲ್ಲಿರೋದು ಅಶಿಕಾ ರಂಗನಾಥ್.

    ವಿಶೇಷವೆಂದರೆ ಈ ಲಿಸ್ಟ್‍ನಲ್ಲಿ ಇರೋ ಟಾಪ್ 5ನಲ್ಲಿರೋ ನಟಿಯರಲ್ಲಿ ರಶ್ಮಿಕಾ ಕನ್ನಡದಲ್ಲಿ ನಟಿಸುತ್ತಿಲ್ಲ. ರಮ್ಯಾ ಮತ್ತು ರಾಧಿಕಾ ಪಂಡಿತ್ ಇಬ್ಬರೂ ನಟಿಸಿ ವರ್ಷಗಳೇ ಕಳೆದುಹೋಗಿವೆ. ಆಕ್ಟಿವ್ ಇರೋದು ರಚಿತಾ ರಾಮ್ ಮತ್ತು ಅಶಿಕಾ ರಂಗನಾಥ್ ಮಾತ್ರ.

    ನಟನೆ ನಿಲ್ಲಿಸಿದ್ದರೂ ಕ್ರೇಜ್ ಇದೆ ಅಂತನಾ..?

    ಅಥವಾ..

    ಹೊಸದಾಗಿ ಬಂದವರು ಕ್ರೇಜ್ ಸೃಷ್ಟಿಸಿಲ್ಲ ಅಂತಾನಾ? ಈ ಸಮೀಕ್ಷೆಯ ಮಾನದಂಡವೇನೋ.. ಯಾವನಿಗ್ಗೊತ್ತು..

     

  • ಗಲಿ ಗಲಿ ಮೇ.. ಡ್ಯಾನ್ಸ್ ಯಶ್ ಜೊತೆ ರಾಧಿಕಾ ಪಂಡಿತ್ ಹೆಜ್ಜೆ

    yash dances for gali gali

    ಕೆಜಿಎಫ್‍ನಲ್ಲಿ ಭರ್ಜರಿ ಸೌಂಡು ಮಾಡಿದ್ದ ಹಾಡು ಗಲೀ ಗಲೀ ಮೇ.. ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನು ಬಳಸಿದ್ದರೆ, ಹಿಂದಿ ವರ್ಷನ್‍ನಲ್ಲಿ ಗಲಿ ಗಲಿ ಮೇ.. ಹಾಡನ್ನು ಬಳಸಲಾಗಿತ್ತು. ಆ ಹಾಡಿಗೆ ಯಶ್ ಜೊತೆ ಹೆಜ್ಜೆ ಹಾಕಿದ್ದ ಚೆಲುವೆ ಮೌನಿ ರಾಯ್ ಹಾಡಿ ಕುಣಿದಿದ್ದರು. ಈಗ ಅದೇ ಹಾಡಿಗೆ ಯಶ್ ಜೊತೆ ರಾಧಿಕಾ ಪಂಡಿತ್ ಹೆಜ್ಜೆ ಹಾಕಿದ್ದಾರೆ.

    2ನೇ ಮಗುವಿಗೆ ತಾಯಿಯಾಗುತ್ತಿರುವ ರಾಧಿಕಾ ಪಂಡಿತ್ ಜೊತೆ ಯಶ್ ಗಲೀ ಗಲೀ ಮೇ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈಗಲೂ ನಾನು ನಿಮ್ಮೊಂದಿಗೆ ನಿಮ್ಮ ರಿದಂಗೆ ಹೆಜ್ಜೆ ಹಾಕಬಲ್ಲೆ ಎಂದು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್. 

  • ಗೆಳತಿಯರಿಂದಲೇ ರಾಧಿಕಾ ಪಂಡಿತ್ ಸೀಮಂತ

    radhika pandit'a baby shower

    ನಟಿ ರಾಧಿಕಾ ಪಂಡಿತ್ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಮಗು ಐರಾಳ ತೊದಲು ಮಾತು ಕೇಳುವ ಹೊತ್ತಿನಲ್ಲಾಗಲೇ 2ನೇ ಮಗುವಿಗಾಗಿ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ರಾಧಿಕಾ ಪಂಡಿತ್ ಸೀಮಂತವೂ ಆಗಿದೆ.

    ವೆಸ್ಟರ್ನ್ ಶೈಲಿಯಲ್ಲಿ ರಾಧಿಕಾರ ಸೀಮಂತ ಮಾಡಿರುವುದು ಗೆಳತಿಯರು. ಫೇರಿಟೇಲ್ ನೆನಪಿಸುವ ಶೈಲಿಯಲ್ಲಿ ರಾಧಿಕಾ ಪಂಡಿತ್ ಅವರ ಸೀಮಂತ ಮಾಡಿ ಸಂಭ್ರಮಿಸಿದ್ದಾರೆ. ಮನೆಯವರು ಮಾಡುವುದು ಬೇರೆ.. ಅಣ್ಣನೋ.. ಅಕ್ಕನೋ.. ತಂಗಿಯರೋ ಮಾಡುವುದು ಬೇರೆ.. ಇದು ಹಾಗಲ್ಲ. ರಾಧಿಕಾ ಪಂಡಿತ್ ತಮ್ಮ ಗೆಳತಿಯರನ್ನು ಪ್ರೀತಿಸುವ ಪರಿ ಹೇಗಿದೆ ಎಂಬುದಕ್ಕೆ ಈ ಸೀಮಂತವೇ ಉದಾಹರಣೆ.

  • ಚಾಹಲ್ ದಂಪತಿ ಜೊತೆ ಯಶ್ ದಂಪತಿ

    ಚಾಹಲ್ ದಂಪತಿ ಜೊತೆ ಯಶ್ ದಂಪತಿ

    ಯಜುವೇಂದ್ರ ಚಾಹಲ್, ಟೀಂ ಇಂಡಿಯಾದ ನಂಬಿಕಸ್ತ ಬೌಲರ್. ಅದ್ಭುತ ಆಟಗಾರನಷ್ಟೇ ಅಲ್ಲ, ಸಿಕ್ಕಾಪಟ್ಟೆ ತರಲೆಯೂ ಹೌದು. ಇತ್ತೀಚೆಗಷ್ಟೇ ಮದುವೆಯಾಗಿರುವ ಚಾಹಲ್, ತಮ್ಮ ಪತ್ನಿಯೊಂದಿಗೆ ಯಶ್ ದಂಪತಿಯನ್ನು ಭೇಟಿ ಮಾಡಿರುವುದು ವಿಶೇಷ. ಅದೂ ಬೆಂಗಳೂರಿನಲ್ಲೇ.

    ಯಶ್ ಜೊತೆಯಲ್ಲೇ ಇರುವ ಅವರ ಗೆಳೆಯ ಹಾಗೂ ಆಪ್ತ ಸಹಾಯಕ ಚೇತನ್ ಮದುವೆಯಲ್ಲಿ ಯಶ್ ದಂಪತಿ ಹಾಜರಿದ್ದರು. ಈ ವೇಳೆಯಲ್ಲೇ ಚಾಹಲ್ ಹಾಗೂ ಧನಶ್ರೀ ವರ್ಮಾ ಯಶ್ ಮತ್ತು ರಾಧಿಕಾರನ್ನು ಭೇಟಿ ಮಾಡಿದ್ದಾರೆ.

    ಏಕೆ ಅನ್ನೋದು ಗೊತ್ತಿಲ್ಲವಾದರೂ, ಸದ್ಯಕ್ಕೆ ಈ ಫೋಟೋಗಳು ಸೆನ್ಸೇಷನ್ ಸೃಷ್ಟಿಸಿವೆ.

  • ಜ್ಯೂ. ಯಶ್ ಹವಾ

    jr yash's photo revealed

    ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಹೇಗಿದ್ದಾನೆ..? ಐರಾಳ ತಮ್ಮ ನೋಡೋಕೆ ಐರಾಳಂತೆಯೇ ಮುದ್ದು ಮುದ್ದಾಗಿದ್ದಾನಾ..? 6 ತಿಂಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ `ರಾಯ' ದಂಪತಿ.

    `ನನ್ನ ಕಣ್ಣಿಗೆ ಇವನು ಸೇಬಿನ ಹಣ್ಣು. ಮನೆಯವರ ಕಣ್ಣಿಗೆ ಕಾಮನಬಿಲ್ಲು. ಖಂಡಿತವಾಗಿಯೂ ಅಮ್ಮನ ಮಗ. ಪುಟಾಣಿ ಜ್ಯೂನಿಯರ್ ಇಲ್ಲಿದ್ದಾನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇರಲಿ' ಇದು ರಾಧಿಕಾ ಪಂಡಿತ್ ಅವರ ಪುಟ್ಟ ಬರಹ.

  • ಡುಮ್ಮಿ.. ಲಡ್ಡೂ.. ಸೋಡಾಬುಡ್ಡಿ.. ಲಕ್ಷ್ಮೀ.. ರಾಧಿಕಾ ಪಂಡಿತ್

    radhika is a sweet faced liar in adi lakshmi purana

    ಡುಮ್ಮಿ ಲಕ್ಷ್ಮೀ ಎಂದರೂ ಅವಳು ತಿರುಗಿ ನೋಡ್ತಾಳೆ.. ಸೋಡಾಬುಡ್ಡಿ ಅಂದ್ರೂ ಹಾ ಅಂತಾಳೆ.. ಲಡ್ಡೂ ಲಕ್ಷ್ಮಿ ಎಂದರೂ ಓ ಅಂತಾಳೆ.. ಅವಳು ಆದಿಲಕ್ಷ್ಮೀ ಪುರಾಣದ ಲಕ್ಷ್ಮಿ.. ಅರ್ಥಾತ್ ರಾಧಿಕಾ ಪಂಡಿತ್.

    ಇಂತಹ ಮಾತುಗಳನ್ನೇ ಕೇಳಿ ಬೆಳೆದ ಲಕ್ಷ್ಮಿ, ನಾನು ನೋಡೋಕೆ ಚೆನ್ನಾಗಿಲ್ಲ.. ಕುರೂಪಿ ಎನ್ನುವ ಭಾವನೆಯಲ್ಲೇ ಬೆಳೆದಿರುತ್ತಾಳೆ ಲಕ್ಷ್ಮಿ. ಯಾರಾದರೂ ನೀನು ಚೆನ್ನಾಗಿದ್ದೀಯ ಅಂದ್ರೂ ನಂಬೋಕೆ ರೆಡಿ ಇರಲ್ಲ. ಧೋನಿ ಅಂದ್ರೆ ಈ ಲಕ್ಷ್ಮೀಗೆ ಪಂಚಪ್ರಾಣ. ಇಂತಹ ಹುಡುಗಿಯನ್ನು  ಆದಿ ಅರ್ಥಾತ್ ನಿರೂಪ್ ಭಂಡಾರಿ ಲವ್ ಮಾಡ್ತಾರೆ. ಅಷ್ಟು ಹೊತ್ತಿಗೆ ಈ ಲಡ್ಡೂಗೆ ಮದುವೆಯಾಗಿ 7 ವರ್ಷದ ಮಗುವೂ ಇರುತ್ತಾ..? ಟ್ರೇಲರ್ ನೋಡೋವ್ರಿಗೆ ಕಾಡುವ ಕುತೂಹಲವಿದು.

    ನಿರ್ದೇಶಕಿ ಪ್ರಿಯಾ, ಸುಳ್ಳುಗಳಿಂದಲೇ ತುಂಬಿ ತುಳುಕುವ ಒಂದು ಮಜಾ ಸ್ಟೋರಿ ಹೇಳಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಆದಿ ಲಕ್ಷ್ಮೀ ಪುರಾಣ ಚಿತ್ರ ಈಗ ಥಿಯೇಟರುಗಳಲ್ಲಿದೆ. ನೋಡಿ.. ಮಜಾ ಮಾಡಿ..

  • ಡೊಲ್ಲ ಅಂದ್ರೆ ತಿರುಗಿ ನೋಡ್ಲೇಬೇಕು ಯಶ್..!

    radhika's nick name for yash is dolla

    ರಾಕಿಂಗ್ ಸ್ಟಾರ್ ಯಶ್, ಡೊಲ್ಲ ಅಂತ ಕೂಗಿದ್ರೆ ತಿರುಗಿ ನೋಡ್ಲೇಬೇಕು. ಯೆಸ್.. ಏಕಂದ್ರೆ, ಅದು ರಾಧಿಕಾ ಪಂಡಿತ್ ಮೊಬೈಲ್‍ನಲ್ಲಿ ಯಶ್ ಅವರ ನಂಬರ್‍ಗೆ ರಾಧಿಕಾ ಇಟ್ಟುಕೊಂಡಿರೋ ಹೆಸರು.

    ಮದುವೆಗೂ ಮೊದಲು ಯಾರಿಗೂ ಗೊತ್ತಾಗದಂತೆ  ಸೀಕ್ರೆಟ್ ಮೈನ್‍ಟೇನ್ ಮಾಡುವಾಗ ಯಶ್ ಅವರ ಹೆಸರನ್ನು ಡೊಲ್ಲ ಎಂದು ಸೇವ್ ಮಾಡಿಟ್ಟುಕೊಂಡಿದ್ದರಂತೆ. ಮದುವೆಯಾದ ಮೇಲೂ ಅದು ಬದಲಾಗಿಲ್ಲ. ಈಗಲೂ ರಾಧಿಕಾ ಪಂಡಿತ್ ಮೊಬೈಲ್‍ನಲ್ಲಿ ಡೊಲ್ಲ ಅಂತಾನೇ ಯಶ್ ನಂಬರ್ ಸೇವ್ ಆಗಿದೆ. 

  • ತಪ್ಪು ರಾಧಿಕಾ ಪಂಡಿತ್ ಅವರದ್ದಲ್ಲ.. ಅಭಿಮಾನಿಗಳದ್ದೇ..!

    ತಪ್ಪು ರಾಧಿಕಾ ಪಂಡಿತ್ ಅವರದ್ದಲ್ಲ.. ಅಭಿಮಾನಿಗಳದ್ದೇ..!

    ನಟಿ ರಾಧಿಕಾ ಪಂಡಿತ್ ಅವರು ಬುಧವಾರ ಹಾಕಿದ ಒಂದು ಪೋಸ್ಟ್‍ಗೆ ಅಭಿಮಾನಿಗಳು ಗರಂ ಆಗಿಬಿಟ್ಟರು. ಅಪ್ಪು ಅಗಲಿಕೆ ನೋವು ಸಹಿಸೋಕೆ ಆಗುತ್ತಿಲ್ಲ ಎಂದು ಹಾಕಿದ ತಕ್ಷಣ, ನೀವ್ಯಾಕೆ ಅಪ್ಪು ಅಂತ್ಯಸಂಸ್ಕಾರಕ್ಕೆ, ದರ್ಶನಕ್ಕೆ ಬರಲಿಲ್ಲ ಎಂದು ಕೆಂಡ ಕಾರೋಕೆ ಶುರು ಮಾಡಿದರು. ನಾನು ಬಂದಿದ್ದು ದೊಡ್ಮನೆಯವರಿಗೆ ಗೊತ್ತು. ಕ್ಯಾಮೆರಾ ಎದುರು ಮಾತನಾಡದೇ ಹೋದರೆ ತಪ್ಪು ಎಂದು ಗೊತ್ತಿರಲಿಲ್ಲ. ಅರ್ಥ ಮಾಡಿಕೊಳ್ಳಿ ಎಂದು ರಾಧಿಕಾ ಪಂಡಿತ್ ಹೇಳಿದರೂ ಕೆಲವು ಅಭಿಮಾನಿಗಳು ಕೇಳೋಕೆ ತಯಾರಿ ಇರಲಿಲ್ಲ. ಕೊನೆಗೆ ರಾಧಿಕಾ ಪಂಡಿತ್ ಅವರು ದರ್ಶನಕ್ಕೆ ಬಂದಿದ್ದ ವಿಡಿಯೋ ಹೊರಬಿತ್ತು.

    ಸಾವಿರಾರು ಅಭಿಮಾನಿ ದೇವರುಗಳ ಮಧ್ಯೆ ಸ್ವತಃ ರಾಧಿಕಾ ಪಂಡಿತ್ ಬಂದಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಕಣ್ಣೀರಿಡುತ್ತಲೇ ಅಪ್ಪು ದರ್ಶನ ಪಡೆದು ಹೋಗಿದ್ದಾರೆ ರಾಧಿಕಾ ಪಂಡಿತ್. ಮುಖಕ್ಕೆ ಮಾಸ್ಕ್ ಹಾಕಿದ್ದ ಕಾರಣ ರಾಧಿಕಾ ಅವರ ಗುರುತು ಸಡನ್ ಆಗಿ ಗೊತ್ತಾಗುವುದಿಲ್ಲ. ದರ್ಶನ ಪಡೆದ ನಂತರ ರಾಧಿಕಾ ಯಾವುದೇ ಚಾನೆಲ್ಲಿನ ಕ್ಯಾಮೆರಾಗೂ ಮಾತನಾಡಿಲ್ಲ. ಹೀಗಾಗಿ ಕೆಲವು ಅಭಿಮಾನಿಗಳು ರಾಧಿಕಾ ಪಂಡಿತ್ ಬಂದೇ ಇಲ್ಲ ಎಂದು ತಪ್ಪು ತಿಳಿದು ಟೀಕಿಸಿದ್ದಾರೆ.

    ಇಲ್ಲಿ ತಪ್ಪು ಕೆಲವು ಅಭಿಮಾನಿಗಳದ್ದೇ ಹೊರತು ರಾಧಿಕಾ ಪಂಡಿತ್ ಅವರದ್ದಲ್ಲ. ರಾಧಿಕಾ ಒಬ್ಬರೇ ಅಲ್ಲ, ಚಿತ್ರರಂಗದ ಹಲವರು ದರ್ಶನಕ್ಕೆ ಬಂದಿದ್ದಾರೆ. ನೂರಾರು ಜನ ಕ್ಯಾಮೆರಾಗಳಿಗೆ ಮಾತನಾಡಿಲ್ಲ. ಹಾಗೆಂದು ಅವರು ಬಂದಿಲ್ಲ ಎಂದರ್ಥವಲ್ಲ. ಅಪ್ಪು ಅವರನ್ನು ದ್ವೇಷಿಸುವ ಒಬ್ಬರೇ ಒಬ್ಬರು ಚಿತ್ರರಂಗದಲ್ಲಿಲ್ಲ. ಅಪ್ಪು ಪ್ರೀತಿಯನ್ನಷ್ಟೇ ಹಂಚಿ, ಪ್ರೀತಿಯನ್ನಷ್ಟೇ ತೆಗೆದುಕೊಂಡು ಹೋದ ಜೀವ ಎನ್ನುವುದರಲ್ಲಿ ಎರಡು ಮಾತಿಲ್ಲ.

  • ತಾಯಿ, ಮಗು ಕ್ಷೇಮ.. ನಿಮ್ಮ ಹಾರೈಕೆ ಪ್ರೀತಿ ಸದಾ ಇರಲಿ - ಯಶ್

    yash talks about his second child

    ರಾಧಿಕಾ ಪಂಡಿತ್ 2ನೇ ಮಗುವಿಗೆ ಜನ್ಮ ನೀಡಿ, ಈ ಬಾರಿ ಗಂಡುಮಗುವಿನ ತಾಯಿಯಾಗಿದ್ದಾರೆ. ಐರಾಗೊಬ್ಬ ತಮ್ಮ ಸಿಕ್ಕಿದ್ದಾನೆ. ಈ ಖುಷಿಯನ್ನು ಅಭಿಮಾನಿಗಳ ಜೊತೆ ಯಶ್ ಹಂಚಿಕೊಂಡಿದ್ದಾರೆ. ಒಂದು ವಿಶೇಷ ವಿಡಿಯೋ ಮಾಡಿ ಬಿಟ್ಟಿದ್ದಾರೆ ಯಶ್. ವಿಡಿಯೋದಲ್ಲಿ ಯಶ್ ಮಗಳು ಐರಾ ಮೊದಲು ತೊದಲು ನುಡಿಯುತ್ತಾಳೆ. ನಂತರ ಯಶ್ ಮಾತು ಶುರುವಾಗುತ್ತೆ.. ನನ್ನ ಮಗಳು ಏನು ಹೇಳೋಕೆ ಪ್ರಯತ್ನಿಸುತ್ತಿದ್ದಾಳೆ ಎಂದರೆ, ಅವಳು ತಮ್ಮನನ್ನು ಪಡೆದುಕೊಂಡಿದ್ದಾಳೆ. ಸಂತೋಷ ಹೆಚ್ಚಾಗಿದೆ. ನಿಮ್ಮ ಪ್ರೀತಿ, ಹಾರೈಕೆ ಸದಾ ಹೀಗೇ ಇರಲಿ ಎಂದಿದ್ದಾರೆ ಯಶ್.

    ನಂತರ ಮತ್ತೆ ಐರಾಳ ತೊದಲು ನುಡಿ ಮುಂದುವರಿಯುತ್ತೆ. ಆಗ ಯಶ್ ಸ್ವಲ್ಪ ಬ್ಯುಸಿ ಕಣ್ರಪ್ಪ ಮಕ್ಳು ಜೊತೆ.. ಸದ್ಯಕ್ಕೆ ಅಡ್ಜಸ್ಟ್ ಮಾಡ್ಕೊಳಿ ಎನ್ನುತ್ತಾರೆ. ವಿಡಿಯೋ ಓವರ್.

     

  • ತಾವೇ ತುಂಬಿಸಿದ ಕೆರೆಗೆ ಯಶ್, ರಾಧಿಕಾ ಬಾಗಿನ

    yash radhika pandit at yalaburga district

    ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ಬರದಿಂದ ನೀರೇ ಬತ್ತಿ ಹೋಗಿದ್ದ ಈ ಕೆರೆಯ ಪುನರುಜ್ಜೀವನಕ್ಕೆ ಯಶ್ ಸುಮಾರು 1 ಕೋಟಿ ಖರ್ಚು ಮಾಡಿದ್ದಾರೆ. ತಾವೇ ತುಂಬಿಸಿದ ಕೆರೆಗೆ ದಂಪತಿ ಬಾಗಿನ ಅರ್ಪಿಸಿ, ಗಂಗೆಗೆ ಕೈ ಮುಗಿದಿದ್ದಾರೆ.

    ಯಶೋಮಾರ್ಗ ಫೌಂಡೇಶನ್‌ ಮೂಲಕ ಫೆಬ್ರವರಿ 28ರಂದು ಕಾಮಗಾರಿ ಶುರುವಾಗಿತ್ತು. ಹೂಳು ತೆಗೆಯುವ ವೇಳೆ ಕೆಲವೇ ದಿನಗಳಲ್ಲಿ ಕೆರೆಯಲ್ಲಿ ಅಂತರ್ಜಲ ಉಕ್ಕಿ ಹರಿದಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಕೆರೆ ಮತ್ತಷ್ಟು ತುಂಬಿರುವುದು ಗ್ರಾಮಸ್ಥರ ಮೊಗದಲ್ಲಿ ಸಂತಸ ಮೂಡಿಸಿದೆ.

    ತುಂಬಿದ ಕೆರೆಯನ್ನು ನೋಡಲು ಸಂತಸವಾಗುತ್ತಿದೆ ಎಂದು ಯಶ್ ಹೇಳಿದ್ದಾರೆ.

  • ನಂಜುಂಡನ ಸನ್ನಿಧಿಯಲ್ಲಿ ಯಶ್-ರಾಧಿಕಾ ಮಗಳ ಮುಡಿ ಹರಕೆ

    yash and radhika pandit with their daughter in nanjangudu

    ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮುದ್ದು ಮಗಳ ಮುಡಿ ಹರಕೆ ತೀರಿಸಿದ್ದಾರೆ. ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಮುಡಿ ಸಲ್ಲಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ `ರಾಯ' ದಂಪತಿ.

    ಹರಕೆ ತೀರಿಸಿದ ನಂತರ ಮುದ್ದಾದ ಮಗಳು ಐರಾಳ ಫೋಟೋ ಹಂಚಿಕೊಂಡಿರೋ ಯಶ್ ಅವರಿಗೆ ಮಗಳು ಕೇಳುತ್ತಾಳೆ. ಅಪ್ಪ, ಇದು ಬೇಸಗೆ ಅಂತಾ ಗೊತ್ತು, ಹಾಗಂತ ನನಗೆ ಮಾಡಿಸಿರುವುದು ಬೇಸಗೆ ಕಟ್ ಅಲ್ಲ ತಾನೇ ಎಂದು ಐರಾ ಕೇಳುವ ರೀತಿಯಲ್ಲಿದ್ದರೆ, ಯಶ್ ಉತ್ತರವಿಲ್ಲದೆ ತಡಬಡಾಯಿಸುತ್ತಿರುವ ಫೋಟೋ ಅದು.