` kiccha sudeepa - chitraloka.com | Kannada Movie News, Reviews | Image

kiccha sudeepa

  • ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

    ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

    ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಪ್ರೇಕ್ಷಕರ ಡಿಮ್ಯಾಂಡ್ ಮೇಲೆ 3ಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂಗಳು ಬರುತ್ತಿವೆ.

    ಇದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗಿರೋ ಅಭಿಪ್ರಾಯಗಳು. ಸಿನಿಮಾ ನೋಡಿದವರು ತಮಗನ್ನಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ ಚಿತ್ರದ ಬಗ್ಗೆ ಹೇಳಿಕೊಂಡಿರುವವರು ಪತ್ರಕರ್ತರಲ್ಲ. ವಿಮರ್ಶಕರೂ ಅಲ್ಲ. ಕೇವಲ ಸಿನಿಮಾ ಪ್ರೇಮಿಗಳು ಮತ್ತು ಪ್ರೇಕ್ಷಕರು ಮಾತ್ರ. ಇಲ್ಲಿ ಹಾಕಿರೋದು ಕೇವಲ ಒಪೀನಿಯನ್ಸ್‍ಗಳನ್ನಷ್ಟೇ..

    ಸುದೀಪ್ ಎಂಟ್ರಿ.. ಆ ಕಾಡು.. ಕಾಡಿನೊಳಗಿನ ಆ ಫೈಟು.. ಚಿಂದಿ ಚಿಂದಿ ಚಿಂದಿ ಬಿಜಿಎಂ..

    ಇಂಟರ್‍ವೆಲ್ ಟ್ವಿಸ್ಟ್ ಕಿ ಥಿಯೇಟರ್ ಬದಲ್ ಆಯ್‍ಪೋಯಿ.. ಇದೆಕ್ಕಡಿ ಮಾಸ್ ಟ್ವಿಸ್ಟ್ ರಾ ಮಾವ..

    ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಇನ್ನೊಂದು ಲೆವೆಲ್ಲಿಗೆ ಹೋಗುತ್ತಿದೆ. ನಾನು ನೋಡಿದ ಬೆಸ್ಟ್ ಇಂಡಿಯನ್ 3ಡಿ ಸಿನಿಮಾ. ಫುಲ್ ಪೈಸಾ ವಸೂಲ್.

    ಇಂಟರ್‍ವಲ್ ಸೀನ್‍ಗೆ ಥಿಯೇಟರ್ ಫುಲ್ ಹಾವಳಿ.. ಬೆಸ್ಟ್ 3ಡಿ ಸಿನಿಮಾ.

    ಇಂಟರ್‍ವೆಲ್ ಊಹಿಸಬಹುದು. ಆದರೆ ಕಿಕ್ ಕೊಡುತ್ತೆ. ರೆಗ್ಯುಲರ್ ಥ್ರಿಲ್ಲರ್ ಸಿನಿಮಾ ಅಲ್ಲ. ಕ್ಲೈಮಾಕ್ಸ್ ಬೆಂಕಿ..

    ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಟೇಕ್ ಎ ಬೋ..

    ಒಟ್ಟಿನಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರೋ.. ವ್ಯಕ್ತವಾಗಿರೋ ಅಭಿಪ್ರಾಯಗಳೆಲ್ಲ ಪಾಸಿಟಿವ್. ಒಂದು ಚಿತ್ರ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದಕ್ಕಿಂತ ಎಷ್ಟು ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು ಎನ್ನುವುದರಲ್ಲೇ ಸಿನಿಮಾ ಸಕ್ಸಸ್ ಇದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಮೇಲೆ ಮಿಕ್ಕ ದಾಖಲೆಗಳೆಲ್ಲ ಹಿಂದ್ ಹಿಂದೇನೇ ಓಡೋಡಿ ಬರ್ತವೆ..

  • ವಿಕ್ರಾಂತ್ ರೋಣ ರಿಲೀಸ್ ಯಾವಾಗ..?

    ವಿಕ್ರಾಂತ್ ರೋಣ ರಿಲೀಸ್ ಯಾವಾಗ..?

    ವಿಕ್ರಾಂತ್ ರೋಣ. ಸಿನಿಮಾ ಘೋಷಣೆಯಾದಾಗಿನಿಂದ ಥ್ರಿಲ್ ಕೊಡುತ್ತಿರುವ ಸಿನಿಮಾ. ಸ್ವತಃ ಸುದೀಪ್ ಕೂಡಾ ಥ್ರಿಲ್ ಆಗಿರುವ ಚಿತ್ರ ಈಗಾಗಲೇ ದೇಶದಾದ್ಯಂತ ಸದ್ದು ಮಾಡಿದೆ. ಚಿತ್ರದ ಮೇಕಿಂಗ್, ಕಿಚ್ಚನ ಕಾಸ್ಟ್ಯೂಮ್, ಬುರ್ಜ್ ಖಲೀಫಾದಲ್ಲಿ ಪೋಸ್ಟರ್, ಮುಂಬೈನಲ್ಲಿ ಪೋಸ್ಟರ್.. ಹೀಗೆ ಪ್ರತಿ ಹಂತದಲ್ಲೂ ಕ್ರೇಜ್ ಸೃಷ್ಟಿಸಿರೋ ಸಿನಿಮಾ ವಿಕ್ರಾಂತ್ ರೋಣ.

    ಈ ಚಿತ್ರದ ರಿಲೀಸ್ ಡೇಟ್ ಘೋಷಣೆ ಮಾಡೋಕೆ ಚಿತ್ರತಂಡ ಡೇಟ್ ಫಿಕ್ಸ್ ಮಾಡಿದೆ. ಡಿ.7ಕ್ಕೆ ಡೇಟ್ ಅನೌನ್ಸ್ ಆಗಲಿದೆ. ಬೆಳಗ್ಗೆ 11 ಗಂಟೆ 5 ನಿಮಿಷದ ಶುಭ ಮುಹೂರ್ತದಲ್ಲಿ.

    3ಡಿಯಲ್ಲೂ ಬರುತ್ತಿರೋ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ಹೀರೋ. ನಿರೂಪ್ ಭಂಡಾರಿ, ನೀತು ಅಶೋಕ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕ. ಶಾಲಿನಿ ಜಾಕ್ ಮಂಜು ಮತ್ತು ಅಲಂಕಾರ್ ಪಾಂಡಿಯನ್ ನಿರ್ಮಾಣದ ಸಿನಿಮಾದಲ್ಲಿ ಮಿಲನಾ ನಾಗರಾಜ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಪುಟ್ಟ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

  • ವಿಕ್ರಾಂತ್ ರೋಣ ಲುಲು ಹೈಲೈಟ್ಸ್

    ವಿಕ್ರಾಂತ್ ರೋಣ ಲುಲು ಹೈಲೈಟ್ಸ್

    ವಿಕ್ರಾಂತ್ ರೋಣ ಚಿತ್ರ ದೇಶದೆಲ್ಲೆಡೆ ಈವೆಂಟ್ ಮಾಡಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸೋ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಲುಲು ಮಾಲ್‍ನಲ್ಲಿ ವಿಕ್ರಾಂತ್ ರೋಣನ ಈವೆಂಟ್ ನಡೆದಿದ್ದು ವಿಶೇಷ. ಲುಲು ಮಾಲ್‍ನಲ್ಲಿ ನಡೆದ ಮೊದಲ ಈವೆಂಟ್ ಇದು ಎನ್ನುವುದು ಮತ್ತೊಂದು ವಿಶೇಷ.

    ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಡೈರೆಕ್ಟರ್ ಆಗಬೇಕು ಎಂದು ಬಂದವರನ್ನು ಹೀರೋ ಆಗಿ ಎಂದು ಹೇಳಿದ್ದು ನಾನೇ ಎಂದು ಖುಷಿ ಪಟ್ಟು ಹೇಳಿಕೊಂಡರು ಉಪ್ಪಿ. ಯಶ್ ಇಂಡಸ್ಟ್ರಿಯನ್ನು ಪ್ಯಾನ್ ಇಂಡಿಯಾ ಲೆವೆಲ್ಲಿಗೆ ತೆಗೆದುಕೊಂಡು ಹೋದರು. ಈ ಚಿತ್ರ ವಿಶ್ವಮಟ್ಟಕ್ಕೆ ಒಯ್ಯಲಿ ಎಂದು ಹಾರೈಸಿದರು.

    ಸಚಿವ ಮುನಿರತ್ನ, ಶಾಸಕ ಉದಯ್ ಗರುಡಾಚಾರ್ ಕೂಡಾ ವೇದಿಕೆಯಲ್ಲಿದ್ದು. ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅನುಶ್ರೀ.

    ವೇದಿಕೆಯಲ್ಲಿ ಅಭಿಮಾನಿಯೊಬ್ಬರು ಸುದೀಪ್ ಅವರಿಗಾಗಿ ಸ್ಪೆಷಲ್ ಜಾಕೆಟ್ ವೊಂದನ್ನು ತಂದಿದ್ದರು. ಪ್ರಕಾಶ್ ಥಿಯೇಟರ್ ಮಾಲೀಕರು ತಂದಿದ್ದ ಹ್ಯಾಂಡ್ ಮೇಡ್ ಜಾಕೆಟ್‍ನ್ನು ವೇದಿಕೆ ಮೇಲೆಯೇ ಧರಿಸಿ ಖುಷಿಪಟ್ಟರು ಸುದೀಪ್.

    ಪುಟ್ಟ ಮಕ್ಕಳು ಕಿಚ್ಚನ ಜೊತೆ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದರು.

    ಗರಗರ ಗಗ್ಗರ ಡೈಲಾಗ್ ಹೊಡೆದು ವೇದಿಕೆಯಲ್ಲಿ ಮಿಂಚು ಹರಿಸಿದ ಸುದೀಪ್ ನಿರ್ದೇಶಕ ಅನೂಪ್ ಭಂಡಾರಿಯವರನ್ನು ಹೊಗಳಿದರು. ನಿರ್ದೇಶಕರ ಕಲ್ಪನೆಗೆ ತಕ್ಕಂತೆಯೇ ಸಿನಿಮಾ ಬಂದಿದೆ ಎಂದರು.

    ಮಗಳಿಗಾಗಿ ವೇದಿಕೆಯಲ್ಲಿಯೇ ಚಿತ್ರದ ಹಾಡು ಹಾಡಿದ ಸುದೀಪ್ ಪ್ರತಿಯೊಬ್ಬ ಮಗಳೂ ತಮ್ಮ ತಮ್ಮ ತಂದೆಯಂದಿರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುತ್ತಾರೆ ಎಂದಿದ್ದು ವೇದಿಕೆಯಲ್ಲಿದ್ದವರನ್ನು ಭಾವುಕರನ್ನಾಗಿಸಿತು.

  • ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ರಿಲೀಸ್ ಆಗಿದ್ದಾಯ್ತು. ಪ್ರೇಕ್ಷಕರು ಕಣ್ತುಂಬಿಕೊಂಡಿದ್ದೂ ಆಯ್ತು. ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಮತ್ತು ಕಿಚ್ಚನ ಹೊಡೆದಾಟ ಸಖತ್ತಾಗಿದೆ. ಜಾಕ್ವೆಲಿನ್ ಗ್ಲಾಮರ್ರು.. ಟೆಂಪರೇಚರ್ ಹೆಚ್ಚಿಸುವಲ್ಲಿ ಗೆದ್ದಿದೆ. ಹೆಣ್ಣು ಮಕ್ಕಳಿದ್ದವರಿಗೆ ಸಿನಿಮಾ ಇಷ್ಟವಾಗುತ್ತೆ. ಸಿನಿಮಾ ನೋಡುವವರಿಗೆ ಫುಲ್ ಮೀಲ್ಸ್. ಪೈಸಾ ವಸೂಲ್. ಇದೆಲ್ಲದರ ಮಧ್ಯೆ ಚಿತ್ರದ ಹೀರೋಗಳು ಯಾರ್ ಯಾರು ಎಂದು ನೋಡಿದರೆ.. ಪಟ್ಟಿ ಸ್ವಲ್ಪ ದೊಡ್ಡದೇ ಇದೆ.

    ಚಿತ್ರದ ಗ್ರಾಫಿಕ್ಸ್ ಅದ್ಭುತವಾಗಿದೆ. ನಿರ್ಮಲ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದವರು.

    ಈ ಗ್ರಾಫಿಕ್ಸ್‍ಗೆ ಸರಿಯಾದ ಸೆಟ್ ಸಪೋರ್ಟ್ ಸಿಕ್ಕದೇ ಹೋದರೆ ತಾಳಮೇಳವೇ ತಪ್ಪಿಹೋಗುತ್ತಿತ್ತು. ಚಿತ್ರದ ಬಹುತೇಕ ಚಿತ್ರೀಕರಣವಾಗಿರೋದು ಸೆಟ್‍ನಲ್ಲಿ. ಆ ಸೆಟ್‍ನ ಸೃಷ್ಟಿಕರ್ತ ಶಿವಕುಮಾರ್.

    ಸೆಟ್‍ನಲ್ಲಿಯೇ ಬಹುತೇಕ ಸಿನಿಮಾ ಚಿತ್ರೀಕರಣವಾದರೂ ಒಂದೊಂದು ದೃಶ್ಯವೂ ಅದ್ಭುತ ಎನ್ನುವಂತೆ ಸೆರೆ ಹಿಡಿದು ದೃಶ್ಯಕಾವ್ಯ ಸೃಷ್ಟಿಸಿರೋದು ವಿಲಿಯಂ ಡೇವಿಡ್.

    ಆಶಿಕ್ ಕುಸುಗಳ್ಳಿ ಇಡೀ ಚಿತ್ರದ ಎಡಿಟಿಂಗ್ ಮತ್ತು ಕಲರಿಂಗ್ ನೋಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಅಂಶವನ್ನೂ ಗುರುತಿಸಿದ್ದಾರೆ.

    ಇವೆಲ್ಲವೂ ಸರಿಯಾಗಿದ್ದಾಗ ಬಿಜಿಎಂ ಕೆಟ್ಟರೆ ಸಕಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ. ಆದರೆ.. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದೊಂದಿಗೇ ಕ್ಯಾರಿ ಆಗುವ ಮ್ಯೂಸಿಕ್ ಪ್ರೇಕ್ಷಕರನ್ನು ನೆತ್ತರ ಪರ್ಬದ ಲೋಕಕ್ಕೆ ನೇರವಾಗಿ ಕೊಂಡೊಯ್ದು ಕೂರಿಸಿ ಬಿಡುತ್ತದೆ.

    ಇವೆಲ್ಲದಕ್ಕೂ ಒಂದು ಕೊಂಡಿಯಾಗಿ ಕುಳಿತು.. ಕನಸು ಕಂಡು.. ಆ ಕನಸು ನನಸಾಗುವ ತಂಡವನ್ನು ರೂಪಿಸಿರುವುದು ಅನೂಪ್ ಭಂಡಾರಿ.

    ಅನೂಪ್ ಭಂಡಾರಿಯ ಎಲ್ಲ ಕನಸುಗಳಿಗೆ ತನುಮನ ಹಾಗೂ ವಿಶೇಷವಾಗಿ ಧನ ನೀಡಿರುವ ಜಾಕ್ ಮಂಜು ಚಿತ್ರದ ರಿಯಲ್ ಹೀರೋ.

    ಈ ಎಲ್ಲ ಹೀರೋಗಳೂ ಒಟ್ಟಾಗಿ ಕೆಲಸ ಮಾಡಿದ ಪ್ರತಿಫಲ ವಿಕ್ರಾಂತ್ ರೋಣ. ಒಂದು ಸಿನಿಮಾವನ್ನು ಯಾರೋ ಒಬ್ಬರು ಗೆಲ್ಲಿಸೋಕೆ ಆಗಲ್ಲ.. ಅದೊಂದು ಟೀಂ ವರ್ಕ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ವಿಕ್ರಾಂತ್ ರೋಣ ಟೀಂ.

  • ವಿಕ್ರಾಂತ್ ರೋಣಕ್ಕೆ ಜಾತಿ ವಿವಾದ ಅಂಟಿಸಿದ ಆ ದಿನಗಳು ಚೇತನ್..!

    ವಿಕ್ರಾಂತ್ ರೋಣಕ್ಕೆ ಜಾತಿ ವಿವಾದ ಅಂಟಿಸಿದ ಆ ದಿನಗಳು ಚೇತನ್..!

    ವಿಕ್ರಾಂತ್ ರೋಣ ಚಿತ್ರ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದೆ. 150 ಕೋಟಿ ಕ್ಲಬ್ ಸೇರೋಕೆ ದಾಪುಗಾಲಿಡುತ್ತಿದೆ. ಕಿಚ್ಚ ಸುದೀಪ್ ಕೆರಿಯರ್‍ನಲ್ಲಿ ಇದು ಬೇರೆಯದೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು.. ಎಲ್ಲರೂ ಗೆದ್ದಿದ್ದಾರೆ. ಆದರೆ.. ವಿವಾದಗಳೇ ಮುಗಿಯುವಂತೆ ಕಾಣುತ್ತಿಲ್ಲ.

    ಆರಂಭದಲ್ಲಿ ಕೆಲವರು ಚಿತ್ರವೇ ಚೆನ್ನಾಗಿಲ್ಲ ಎಂದರು. ಪ್ರೇಕ್ಷಕರು ಮತ್ತೆ ಮತ್ತೆ ಬಂದು ನೋಡಿ ಅದನ್ನು ಸುಳ್ಳು ಮಾಡಿದರು.

    ರಂಗಿತರಂಗ ಪಾರ್ಟ್ 2 ಎಂದರು. ಹಾಗೆ ಹೇಳಿದವರಿಗೆ ಪ್ರೇಕ್ಷಕರೇ ಏನಿವಾಗ.. ಸಿನಿಮಾ ಚೆನ್ನಾಗಿದ್ಯಲ್ಲ ಎಂದರು.

    ಸುದೀಪ್ ಅವರಿಗೆ ಸ್ಟಾರ್`ಗಿರಿಗೆ ತಕ್ಕಂತೆ ಬಿಲ್ಡಪ್ ಇಲ್ಲ ಎಂದಾಗ ಸ್ವತಃ ಸುದೀಪ್ ಇನ್ನೂ ಎಷ್ಟು ದಿನ ಅದನ್ನೇ ಮಾಡೋದು. ಮುಂದಿನ ಸಿನಿಮಾ ಹಾಗೆಯೇ ಮಾಡೋಣ ಬಿಡಿ ಎಂದು ತೇಲಿಸಿಬಿಟ್ಟರು. ಇದರ ಮಧ್ಯೆ ಸ್ಟಾರ್ ಡಮ್ ಪಕ್ಕಕ್ಕಿಟ್ಟು ನಟಿಸಿದ ಸುದೀಪ್ ಹೊಸ ವರ್ಗದ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡರು.

    ಕನ್ನಡ ಹಿಂದಿ ವಿವಾದ, ಬುರ್ಜ್ ಖಲೀಫಾ ಮೇಲೆ ಬೇಕಿತ್ತಾ ಎಂಬಂತಹ ಚಿತ್ರ ವಿಚಿತ್ರ ವಿವಾದಗಳನ್ನು ಸೃಷ್ಟಿಸಿದವರಿಗೀಗ ಹೊಸ ವಿವಾದ ಕಣ್ಣಿಗೆ ಕಂಡಿದೆ.

    ಚಿತ್ರದಲ್ಲಿ ದಲಿತರನ್ನು ಕ್ರೂರಿಗಳಂತೆ ಪಿಶಾಚಿಗಳಂತೆ ತೋರಿಸಲಾಗಿದೆಯಂತೆ. ಮುಸ್ಲಿಮರನ್ನು ಅದದೇ ರೀತಿಯಲ್ಲಿ ತೋರಿಸಲಾಗಿದೆಯಂತೆ. ಸಿನಿಮಾ ಟೆಕ್ನಿಕಲಿ ಚೆನ್ನಾಗಿದೆ. ಪರ್ಫಾಮೆನ್ಸ್ ಕೂಡಾ ಚೆನ್ನಾಗಿದೆ. ಆದರೆ, ಇಂತಹ ಸೂಕ್ಷ್ಮಗಳನ್ನು ಜಾತಿ/ಧರ್ಮಗಳನ್ನು ಸೂಕ್ಷ್ಮವಾಗಿ ಚಿತ್ರಿಸಬೇಕಿತ್ತು ಎಂದಿದ್ದಾರೆ ನಟ ಚೇತನ್.

    ಆ ದಿನಗಳು ಖ್ಯಾತಿಯ ಚೇತನ್ ಅವರ ಈ ಟೀಕೆಗೆ ಪರ ವಿರೋಧ ಟೀಕೆಗಳಿವೆ. ಕೆಲವರು ಚೇತನ್ ಅವರನ್ನು ಬೆಂಬಲಿಸಿದ್ದರೆ, ಇನ್ನೂ ಕೆಲವರು ಸ್ವತಃ ಚೇತನ್ ಮಾಡಿರೋದು ರೌಡಿಗಳ ಕಥೆಗಳನ್ನು. ಇಂತಹ ಚೇತನ್ ಸೂಕ್ಷ್ಮತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಕ್ಕೂ ವಿಕ್ರಾಂತ್ ರೋಣ ಕಾಲ್ಪನಿಕ ಕಥೆ. ಇಲ್ಲದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಬುದ್ದಿ ಹೇಳಿದ್ದಾರೆ.

  • ವಿಕ್ರಾಂತ್ ರೋಣನ ಆ ಸೀಕ್ರೆಟ್ ಹೇಳಿಯೇ ಬಿಟ್ರು ಹೀರೋಯಿನ್..!

    ವಿಕ್ರಾಂತ್ ರೋಣನ ಆ ಸೀಕ್ರೆಟ್ ಹೇಳಿಯೇ ಬಿಟ್ರು ಹೀರೋಯಿನ್..!

    ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನಿರೀಕ್ಷೆಗಳೇನೂ ಕಡಿಮೆಯಿಲ್ಲ ಬಿಡಿ. ಇಡೀ ವಿಶ್ವದಲ್ಲಿ ಏಕಕಾಲಕ್ಕೆ ಸಾವಿರಾರು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರೋ ವಿಕ್ರಾಂತ್ ರೋಣ ಸಿನಿಮಾದ ಕಥೆ ಏನು? ಅನೂಪ್ ಭಂಡಾರಿ ಕುತೂಹಲ ಹೆಚ್ಚಿಸುತ್ತಿದ್ದಾರೆಯೇ ಹೊರತು ಕಥೆ ಹೇಳ್ತಿಲ್ಲ. ಪತ್ರಕರ್ತರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋ ಸುದೀಪ್, ಕಥೆಯ ಬಗ್ಗೆ ಕೇಳಿದಾಗ ನಕ್ಕು ನಗಿಸಿ ಸೈಲೆಂಟ್ ಮಾಡಿಸುತ್ತಿದ್ದಾರೆ. ಸುದೀಪ್ ಚಿತ್ರದ ಬಗ್ಗೆ ಹೇಳಿರೋ ಒಂದೇ ಒಂದು ವಿಷಯ ಇಷ್ಟೆ, ಅವರು ಚಿತ್ರದಲ್ಲಿ ದ್ವಿಪಾತ್ರ ಮಾಡಿಲ್ಲ. ಆದರೆ.. ಹೀರೋಯಿನ್ ನೀತಾ ಅಶೋಕ್ ಮಾತ್ರ ಚಿತ್ರದ ಒಂದು ಗುಟ್ಟನ್ನು ಹೇಳಿಬಿಟ್ಟಿದ್ದಾರೆ.

    ನೀತಾ ಅಶೋಕ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಅಕಾ ಪನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯನ್ನು ಹೇಳೋ ಸೂತ್ರಧಾರಿಣಿಯೇ ಅಪರ್ಣಾ. ಕನ್ನಡತಿ. ಆದರೆ ಮುಂಬೈನಲ್ಲಿ ಹುಟ್ಟಿ ಬೆಳೆದಿರೋ ಹುಡುಗಿ. ಕನ್ನಡ ಮತ್ತು ಹಿಂದಿಯಲ್ಲಿ ಪಟಪಟನೆ ಮಾತನಾಡುವ.. ಹೊಸ ಹೊಸ ಸ್ಥಳಗಳನ್ನು ಹುಡುಕುವ ಅಡ್ವೆಂಚರಸ್ ಹುಡುಗಿಯ ಪಾತ್ರ ಎಂದೆಲ್ಲ ಹೇಳಿರೋ ನೀತಾ ಅಶೋಕ್ ಚಿತ್ರವನ್ನು ಹೋಲ್ ಸೇಲ್ ಪ್ಯಾಕೇಜ್ ಎಂದಿದ್ದಾರೆ. ಮಿಸ್ಟರಿ, ಥ್ರಿಲ್, ಎಮೋಷನ್ಸ್, ಆ್ಯಕ್ಷನ್.. ಎಲ್ಲವೂ ಇರೋ ಕಂಪ್ಲೀಟ್ ಪ್ಯಾಕೇಜ್ ಎಂದಿದ್ದಾರೆ.

    ನಿರ್ದೇಶಕ, ನಾಯಕರು ತುಟಿಗೇ ಟೇಪ್ ಹಾಕಿಕೊಂಡಿರೋವಾಗ ರಿಲೀಸ್ ಹೊತ್ತಲ್ಲಿ ನಾಯಕಿ ಇಷ್ಟು ಹೇಳಿದರು ಎಂದು ಫ್ಯಾನ್ಸ್ ಖುಷಿಯಾಗಬೇಕಷ್ಟೆ. ಯಾಕಂದ್ರೆ ನೀತಾ ಅಶೋಕ್ ಕೂಡಾ ಪೂರ್ತಿ ಹೇಳಿಲ್ಲ. ಇದ್ದ ಥ್ರಿಲ್ಲಿಂಗ್ ಸಸ್ಪೆನ್ಸ್‍ನ್ನ ಡಬಲ್ ಮಾಡಿ ಹೋಗಿದ್ದಾರೆ. ನೀತಾ ಮಾತು ಕೇಳಿ ಆಕ್ಚುಯಲಿ ಥ್ರಿಲ್ ಆಗಿ ನಗು ಚೆಲ್ಲಿರೋದು ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು. ಚಿತ್ರದ ಕ್ರೇಜ್ ಹೆಚ್ಚಿದಷ್ಟೂ ಥ್ರಿಲ್ ಆಗಬೇಕಾದವರು ಅವರೇ ತಾನೆ..

  • ವಿಕ್ರಾಂತ್ ರೋಣನ ಎದುರೂ ಸೋತ ಆ ಚಿತ್ರಗಳು..!

    ವಿಕ್ರಾಂತ್ ರೋಣನ ಎದುರೂ ಸೋತ ಆ ಚಿತ್ರಗಳು..!

    ದಕ್ಷಿಣದ ಚಿತ್ರಗಳು ಎದುರು ಮತ್ತೊಮ್ಮೆ ಬಾಲಿವುಡ್ ಸೈಲೆಂಟ್ ಆಗಿದೆ. ವಿಕ್ರಾಂತ್ ರೋಣ ಚಿತ್ರದ ಎದುರು ಜಾನ್ ಅಬ್ರಹಾಂ ನಟಿಸಿದ್ದ ಏಕ್ ವಿಲನ್ ರಿಲೀಸ್ ಆಗಿತ್ತು. ಹಿಂದಿ ಮಾರ್ಕೆಟ್‍ನಲ್ಲಿ ಅಷ್ಟೋ ಇಷ್ಟೋ ಉಸಿರಾಡುತ್ತಿದೆಯಾದರೂ ಬೇರೆ ಮಾರ್ಕೆಟ್‍ಗಳಲ್ಲಿ ಢುಂ ಢುಂ ಢುಮ್ಕಿ. ಅತ್ತ ತೆಲುಗಿನಲ್ಲಿ ರವಿತೇಜ ಅಭಿನಯದ ರಾಮರಾವ್ ಆನ್ ಡ್ಯೂಟಿ ಚಿತ್ರ ಕೂಡಾ ನಿರೀಕ್ಷೆಯನ್ನು ರೀಚ್ ಮಾಡೋಕೆ ಆಗಿಲ್ಲ. ಇದರ ನಡುವೆ ಭರ್ಜರಿ ಪ್ರದರ್ಶನ ಕಾಣ್ತಿರೋದು ಒನ್ & ಓನ್ಲಿ ವಿಕ್ರಾಂತ್ ರೋಣ.

    ಈ ಹಿಂದೆ ಕೆಜಿಎಫ್ ಎದುರೂ ಜಾನ್ ಅಬ್ರಹಾಂ ಸಿನಿಮಾ ಸೋತಿತ್ತು. ಪುಷ್ಪ ಚಿತ್ರದ ಎದುರು ಕೆಲವು ಹಿಂದಿ ಚಿತ್ರಗಳು ಮಕಾಡೆ ಮಲಗಿದ್ದವು. ಆರ್.ಆರ್.ಆರ್. ಎದುರು ಬರುವ ಧೈರ್ಯವನ್ನು ಬಾಲಿವುಡ್`ನ ದೊಡ್ಡ ಚಿತ್ರಗಳು ಮಾಡಿರಲಿಲ್ಲ. ತಮಿಳಿನ ವಿಕ್ರಂ ಎದುರೂ ಹಿಂದಿ ಚಿತ್ರಗಳು ಮುಗ್ಗರಿಸಿ ಬಿದ್ದಿದ್ದವು.

    ವಿಶೇಷವೆಂದರೆ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಲೆಕ್ಕ ಮಾತ್ರ  ಸಿಗುತ್ತಿಲ್ಲ. ಒಬ್ಬೊಬ್ಬರ ಲೆಕ್ಕ ಒಂದೊಂದು ರೀತಿ. ಅತ್ಯಂತ ಕಡಿಮೆ ಲೆಕ್ಕವೆಂದರೆ 30 ಕೋಟಿ. ಹೆಚ್ಚು ಲೆಕ್ಕವೆಂದರೆ 35 ಕೋಟಿ. ಇದು ವಿಶ್ವದೆಲ್ಲೆಡೆಯ ಲೆಕ್ಕ.

    ತಮಿಳುನಾಡಿನಲ್ಲಿ ಮೊದಲ ದಿನ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದ್ದು, 2ನೇ ದಿನ ಇನ್ನೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ತೆಲುಗಿನ ಎರಡೂ ರಾಜ್ಯಗಳಲ್ಲಿ ಕಲೆಕ್ಷನ್ 2 ಕೋಟಿ ದಾಟಿದ್ದು, 2ನೇ ದಿನ ಆ ಲೆಕ್ಕವನ್ನೂ ಮೀರಿಸುವ ಸೂಚನೆ ಸಿಕ್ಕಿದೆ.

    ಹಿಂದಿ ಮಾರುಕಟ್ಟೆಯಲ್ಲಿ ಎರಡೂವರೆ ಕೋಟಿ ಕಲೆಕ್ಷನ್ ಆಗಿದ್ದು, ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಪಾಸಿಟಿವ್ ರೀವ್ಯೂ ಚಿತ್ರದ ಕಲೆಕ್ಷನ್ ಹೆಚ್ಚಿಸುವ ಸೂಚನೆ ಕೊಟ್ಟಿದೆ.

    ಟೋಟ್ಟಲ್ಲಿ.. ವಿಕ್ರಾಂತ್ ರೋಣ ಸಕ್ಸಸ್ ಸ್ಟೋರಿ ಇಷ್ಟೆ.. ರಾರಾ ರಕ್ಕಮ್ಮ.. ಸೂಪರ್ ಹಿಟ್ ಫಿಕ್ಸಮ್ಮ..

  • ವಿಕ್ರಾಂತ್ ರೋಣನ ಹಾಡಿನ ಹಬ್ಬಕ್ಕೆ ಮೊದಲೇ `ಆತ' ಹೇಳಿದ ಭವಿಷ್ಯ..!

    ವಿಕ್ರಾಂತ್ ರೋಣನ ಹಾಡಿನ ಹಬ್ಬಕ್ಕೆ ಮೊದಲೇ `ಆತ' ಹೇಳಿದ ಭವಿಷ್ಯ..!

    ವಿಕ್ರಾಂತ್ ರೋಣ. ರಿಲೀಸ್ ಆಗುತ್ತಿರೋದು ಜುಲೈ 28ಕ್ಕೆ. ಹಬ್ಬ ಶುರುವಾಗುತ್ತಿರೋದು ಇಂದು. ಚಿತ್ರದ ಗಡಂಗ್ ರುಕ್ಕಮ್ಮ.. ಹಾಡಿನ ಕನ್ನಡ ವರ್ಷನ್ ಮೊದಲ ಬಾರಿಗೆ ಇವತ್ತು ರಿಲೀಸ್ ಆಗುತ್ತಿದೆ. ಇದಾದ ನಂತರ ಹಂತ ಹಂತವಾಗಿ ಪ್ರತೀ ದಿನ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನ ಹಾಡುಗಳೂ ರಿಲೀಸ್ ಆಗಲಿವೆ. ದಿನಕ್ಕೊಂದು ಭಾಷೆಯ ಹಾಡು ರಿಲೀಸ್ ಮಾಡಿ ಹಬ್ಬ ಮಾಡುತ್ತಿದೆ ಚಿತ್ರತಂಡ. ಈ ಗಡಂಗ್ ರಕ್ಕಮ್ಮ ಹಾಡಿನಲ್ಲಿ ಕಿಚ್ಚನ ಜೊತೆ ಕುಣಿದು ಕಿಕ್ಕೇರಿಸಿರೋದು ಜಾಕ್ವೆಲಿನ್ ಫರ್ನಾಂಡಿಸ್.

    ಸಂಭ್ರಮವನ್ನು ಒಂದೇ ದಿನಕ್ಕೆ ಸೀಮಿತ ಮಾಡಬಾರದು. ದಿನಕ್ಕೊಂದು ಭಾಷೆಯ ಹಾಡನ್ನು ಬಿಡುಗಡೆ ಮಾಡೋದ್ರಿಂದ ಅದು ಹೆಚ್ಚು ಜನಕ್ಕೆ ತಲುಪುತ್ತದೆ ಎನ್ನುವುದು ಈ ಗಡಂಗ್ ರಕ್ಕಮ್ಮ ಹಾಡಿನ ಹಬ್ಬದ ಯೋಜನೆ ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜು.

    ಇದರ ಮಧ್ಯೆ ಈ ಚಿತ್ರದ ಬಗ್ಗೆ ಭರ್ಜರಿ ಭವಿಷ್ಯ ನುಡಿದಿರೋದು ರಾಮ್ ಗೋಪಾಲ್ ವರ್ಮಾ. ನೋಡಿದವರು.. ಕೇಳಿದವರು ಒಪ್ಪುತಾರೋ.. ಬಿಡುತ್ತಾರೋ.. ತನಗೆ ಅನ್ನಿಸಿದ್ದನ್ನು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳೋ ಆರ್.ಜಿ.ವಿ. ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ಕನ್ನಡದಿಂದ ಇನ್ನೊಂದು ಮಾಸ್ಟರ್ ಪೀಸ್ ಆಗಿ ಹೊರಹೊಮ್ಮಲಿದೆ. ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ್ದೇನೆ. ಚೆನ್ನಾಗಿದೆ. ಜೊತೆಗೆ ಚಿತ್ರದ ಬಿಡುಗಡೆಗೆ ಪಿವಿಆರ್ ಕೈಜೋಡಿಸಿರುವುದು ತುಂಬಾ ಖುಷಿಯಾಯಿತು ಎಂದಿದ್ದಾರೆ ಆರ್.ಜಿ.ವಿ.

    ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ಈಗಾಗಲೇ ಪ್ರಚಾರ ಶುರು ಮಾಡಿದೆ. ಹಿಂದಿಯಲ್ಲಿ ಸಲ್ಮಾನ್, ಝೀ ಸ್ಟುಡಿಯೋಸ್ ಮತ್ತು ಪಿವಿಆರ್ ಚಿತ್ರದ ಜೊತೆ ಕೈಜೋಡಿಸಿವೆ. ಇಂಟರ್‍ನ್ಯಾಷನಲ್ ರಿಲೀಸ್ ಈಗಾಗಲೇ 10 ಕೋಟಿ ಡೀಲ್ ಮಾಡಿದೆ.

  • ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ಒಂದು ಕಡೆ ವಿಕ್ರಾಂತ್ ರೋಣ ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಕನ್ನಡದ ಸಿನಿಮಾ ವಿಕ್ರಾಂತ್ ರೋಣ. ರಕ್ಕಮ್ಮ ಹಾಡಿನ ಕ್ರೇಜ್ ಒಂದು ಕಡೆಯಾದರೆ, ಉಳಿದ ಹಾಡುಗಳ ಕಿಚ್ಚು ಮತ್ತೊಂದು ಕಡೆ. ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್`ನ ಸಿನಿಮಾ ಅಮಿತಾಭ್ ಬಚ್ಚನ್ ಸೇರಿದಂತೆ ಸ್ಟಾರ್ ನಟರನ್ನೆಲ್ಲ ಸೆಳೆಯುವಲ್ಲಿ ಗೆದ್ದಿದೆ. ಇದರ ಮಧ್ಯೆಯೇ ಕಿಚ್ಚ ಹೊಸ ಬಿಸಿನೆಸ್ ಆರಂಭಿಸುವ ಉತ್ಸಾಹ ತೋರಿಸಿದ್ದಾರೆ. ಇದು ಸಿನಿಮಾಗೆ ಸಂಬಂಧಿಸಿದ್ದಲ್ಲ. ಸಿನಿಮಾ ಹೊರತಾದ ಅಡುಗೆಗೆ ಸಂಬಂಧಿಸಿದ್ದು.

    ಕಿಚ್ಚ ಸುದೀಪ್ ಅವರ ಕ್ವಾಲಿಟಿಗಳಲ್ಲಿ ಇನ್ನೊಂದು.. ಸುದೀಪ್ ಒಳ್ಳೆಯ ಅಡುಗೆ ಭಟ್ಟ. ಮನೆಗೆ ಹೋದವರಿಗೆ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವುದು ಎಂದರೆ ಸುದೀಪ್‍ಗೆ ವಿಶೇಷ ಸಂಭ್ರಮ. ಆ ಸಂಭ್ರಮವೇ ಈಗ ಬಿಸಿನೆಸ್ ಆಗುತ್ತಿದೆ.

    ಕಾಫಿ & ಬನ್ಸ್ ಇನ್ನೋವೇಷನ್ಸ್ ಅನ್ನೋ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಆರಂಭಿಸುತ್ತಿದ್ದಾರೆ ಸುದೀಪ್. ಈ ಉದ್ದಿಮೆಗೆ ಎಂದಿನಂತೆ ಸಾಥ್ ಕೊಟ್ಟಿರುವುದು ಪ್ರಿಯಾ ಸುದೀಪ್.

    ಅಪ್ಪ ಹೋಟೆಲ್ ಉದ್ಯಮಿ. ಅವರಂತೆ ಸರೋವರದಂತಾ ದೊಡ್ಡ ಸಂಸ್ಥೆ ಕಟ್ಟುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಒಂದಂತೂ ನಿಜ. ಅದರಲ್ಲಿ ಸ್ವಲ್ಪವನ್ನಾದರೂ ಸಾಧಿಸಬಲ್ಲೆ. ಈ ಸಂಸ್ಥೆಯ ಅಡಿಯಲ್ಲಿ ಹೋಟೆಲ್, ಕೆಫೆ, ರೆಸ್ಟೋರೆಂಟ್ ಶುರು ಮಾಡಲಿದ್ದೇವೆ ಎಂದಿದ್ದಾರೆ ಸುದೀಪ್. ಸಂಸ್ಥೆಯ ಚೇರ್ಮನ್ ಪ್ರಿಯಾ ಸುದೀಪ್.

    ಇದು ಸುದೀಪ್ ಅವರದ್ದೇ ಐಡಿಯಾ. ಹೆಸರೂ ಅವರದ್ದೇ ಸೆಲೆಕ್ಷನ್. 26 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದಾರೆ. ಸಿನಿಮಾ, ಕ್ರಿಕೆಟ್, ಹೋಟೆಲ್ ಅವರ ಇಷ್ಟವಾದ ಪ್ಯಾಷನ್ ಎಂದಿದ್ದಾರೆ ಪ್ರಿಯಾ.

    ಹಾಗಂತ ಸುದೀಪ್ ಸಿನಿಮಾದಿಂದ ದೂರವಾಗುತ್ತಾರೆ ಎಂದಲ್ಲ. ಕೆಫೆ ಬಿಸಿನೆಸ್ ಪ್ರಿಯಾ ಅವರದ್ದಾದರೆ, ಸಿನಿಮಾ ಸುದೀಪ್ ಅವರದ್ದೇ.  ಪ್ರಿಯಾ ಸುದೀಪ್ ಅವರಿಗೆ ವ್ಯವಹಾರ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಸುದೀಪ್ ಅವರ ಬೆನ್ನ ಹಿಂದಿನ ಶಕ್ತಿಯಾಗಿರೋ ಪ್ರಿಯಾ ಸುದೀಪ್ ತಾವು ಬಿಸಿನೆಸ್ ನೋಡಿಕೊಂಡು ಸುದೀಪ್ ಅವರನ್ನು ಸಂಪೂರ್ಣ ಚಿತ್ರರಂಗಕ್ಕೆ ಬಿಡಲಿದ್ದಾರೆ.

    ಇದೆಲ್ಲದರ ಮಧ್ಯೆ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪ್ರಚಾರದಲ್ಲಿ ಬ್ಯುಸಿ. ಇದರ ಅಂಗವಾಗಿ ಜುಲೈ 25ಕ್ಕೆ ಕಿಚ್ಚವರ್ಸ್ ಲಾಂಚ್ ಆಗುತ್ತಿದೆ.

  • ವಿಕ್ರಾಂತ್ ರೋಣನಿಗೆ ಸಲ್ಲು ಪವರ್

    ವಿಕ್ರಾಂತ್ ರೋಣನಿಗೆ ಸಲ್ಲು ಪವರ್

    ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ವಿಕ್ರಾಂತ್ ರೋಣ ಈಗಾಗಲೇ ಮೇಕಿಂಗ್‍ನಿಂದ ಗಮನ ಸೆಳೆದಿದೆ. ಟೀಸರ್ ವ್ಹಾವ್ ಎನ್ನಿಸಿದೆ. ಗುಮ್ಮನ ಕಥೆಯ ಸಸ್ಪೆನ್ಸ್ ಕೊಟ್ಟಿರುವ ಅನೂಪ್ ಭಂಡಾರಿ ಚಿತ್ರವನ್ನು 3ಡಿಯಲ್ಲೂ ರಿಲೀಸ್ ಮಾಡುತ್ತಿದ್ದಾರೆ. ಜುಲೈ 28ಕ್ಕೆ ರಿಲೀಸ್ ಆಗುತ್ತಿರೋ ಕಿಚ್ಚನ ಡಿಫರೆಂಟ್ ಚಿತ್ರಕ್ಕೆ ಸಲ್ಮಾನ್ ಖಾನ್ ಸಪೋರ್ಟು ಕೂಡಾ ಸಿಕ್ಕಿದೆ.

    ವಿಕ್ರಾಂತ್ ರೋಣ ಚಿತ್ರದ ಹಿಂದಿ ವರ್ಷನ್‍ನ್ನು ಸಲ್ಮಾನ್ ಖಾನ್ ಅವರ ಎಸ್‍ಕೆಎಫ್ ರಿಲೀಸ್ ಮಾಡುತ್ತಿದೆ. ಸಲ್ಮಾನ್ ಮತ್ತು ಸುದೀಪ್ ಸ್ನೇಹ ಹೊಸದೇನಲ್ಲ. ದಬಾಂಗ್‍ನಲ್ಲಿ ಕೇವಲ ಸಲ್ಮಾನ್ ಖಾನ್ ಅವರಿಗಾಗಿ ವಿಲನ್ ಆಗಿ ನಟಿಸಿದ್ದರು ಕಿಚ್ಚ. ಸುದೀಪ್ ಅವರೊಂದಿಗೆ ಇರುವ ಸ್ನೇಹವನ್ನು ವಿಭಿನ್ನ ರೀತಿಯಲ್ಲಿ ಸೆಲಬ್ರೇಟ್ ಮಾಡಿರುವುದು ಸಲ್ಮಾನ್ ಖಾನ್. ಈಗ ವಿಕ್ರಾಂತ್ ರೋಣ ಹಿಂದಿ ಡಿಸ್ಟ್ರಿಬ್ಯೂಷನ್ ಹೊಣೆ ಹೊತ್ತಿದ್ದಾರೆ ಸಲ್ಮಾನ್.

    ವಿಕ್ರಾಂತ್ ರೋಣ ಚಿತ್ರಕ್ಕೆ ಈಗಾಗಲೇ ಬೇರೆ ಬೇರೆ ಚಿತ್ರರಂಗದಲ್ಲಿ ಸ್ಟಾರ್ ನಟರ ಬೆಂಬಲ ಸಿಕ್ಕಿದೆ. ಕನ್ನಡದ ಜೊತೆಗೆ ಏಕಕಾಲದಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ನಿರ್ಮಾಣ ಜಾಕ್ ಮಂಜು ಅವರದ್ದು. ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತು ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್ ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಗುಮ್ಮನ ಕಥೆಯಲ್ಲಿದೆ.

  • ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..!

    ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..!

    ವಿಕ್ರಾಂತ್ ರೋಣ ಚಿತ್ರದ ಡೆವಿಲ್ ಸಾಂಗ್ ರಿಲೀಸ್ ಆಗಿದ್ದು, ಟ್ರೆಂಡ್ ಆಗಿದ್ದು ಎಲ್ಲ ಓಲ್ಡ್. ಈಗ ಅದನ್ನೂ ಮೀರಿಸುವ ಇನ್ನೊಂದು ಹಾಡು ಬಂದಿದೆ. ಈ ಹಾಡಿನ ಸೃಷ್ಟಿಕರ್ತರು ಜಾಕ್ ಮಂಜು ಅಲ್ಲ. ಅನೂಪ್ ಭಂಡಾರಿ ಅಲ್ಲ. ಅಜನೀಶ್ ಲೋಕನಾಥ್ ಅಲ್ಲ. ಕಿಚ್ಚ ಸುದೀಪ್ ಕೂಡಾ ಅಲ್ಲ. ಫ್ಯಾನ್ಸ್. ಕಿಚ್ಚನ ಫ್ಯಾನ್ಸ್. ಹೀಗಾಗಿಯೇ.. ಇಡೀ ಚಿತ್ರತಂಡ ಡಬಲ್ ಖುಷಿಯಾಗಿದೆ.

    ಎಂ.ಎಸ್.ವಿಕ್ರಂ ಅನ್ನೋ ಕಿಚ್ಚ ಸುದೀಪ್ ಅಭಿಮಾನಿ ಸ್ವತಃ ಒಂದು ಗುಮ್ಮ ಹಾಡನ್ನು ಸೃಷ್ಟಿಸಿದ್ದಾರೆ. ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಲಿಖಿತ್ ಗೌಡ ಈ ಗುಮ್ಮ ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಒಟ್ನಲ್ಲಿ ವಿಕ್ರಾಂತ ಹಬ್ಬ.

  • ವಿಲನ್ ಕ್ಯಾರೆಕ್ಟರ್ : ಕಿಚ್ಚನಿಗೆ ಹೊಸದಲ್ಲ.. ಚಾಲೆಂಜ್ ಆಗಲೇ ಗೆದ್ದಾಗಿದೆ..

    kiccha sudeep talks about the villain role in dabanng 3

    ಕಿಚ್ಚ ಸುದೀಪ್ ದಬಾಂಗ್ 3ಯಲ್ಲಿ ವಿಲನ್. ಸಲ್ಮಾನ್ ಖಾನ್ ಎದುರು ಖಳನಯಕನಾಗಿ ಅಬ್ಬರಿಸುತ್ತಿದ್ದಾರೆ. ಕನ್ನಡದಲ್ಲಿ ಇಷ್ಟು ದೊಡ್ಡ ಸ್ಟಾರ್ ಆಗಿ, ಬೇರೆ ಭಾಷೆಯಲ್ಲಿ ವಿಲನ್ ಆಗೋದೇಕೆ.. ಎನ್ನುವುದು ಹಲವರ ಪ್ರಶ್ನೆ. ಆದರೆ, ಅವುಗಳಿಗೆಲ್ಲ ಸುದೀಪ್ ಕೊಡುವ ಉತ್ತರವೇ ಬೇರೆ. ಒಬ್ಬ ಕಲಾವಿದ ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬೇಕು ಅನ್ನೋದು ಅವರ ಮೊದಲ ವಾದ. ಎರಡನೆಯದು ತಮ್ಮೊಂದಿಗೆ ಕನ್ನಡವೂ ಅಲ್ಲಿಗೆ ತಲುಪಲಿದೆ ಎನ್ನುವ ದೂರಗಾಮಿ ಆಲೋಚನೆ.

    ಹಾಗೆ ನೋಡಿದರೆ ಸುದೀಪ್ ವಿಲನ್ ಅಥವಾ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿರುವುದು ಇದೇ ಮೊದಲಲ್ಲ. ಸುದೀಪ್ ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲೇ ವಾಲಿ ಚಿತ್ರ ಮಾಡಿದ್ದರು. ತಮ್ಮನ ಪತ್ನಿಯನ್ನು ಮೋಹಿಸುವ ಅಣ್ಣನಾಗಿ ಎದೆ ಝಲ್ ಎನ್ನುವ ಅಭಿನಯ ನೀಡಿದ್ದರು.

    ಇನ್ನು ಸುದೀಪ್ ವೃತ್ತಿ ಜೀವನದ ಮೌಂಟ್ ಎವರೆಸ್ಟ್ ಈಗದಲ್ಲಿಯೂ ಅಷ್ಟೆ. ಆ ಚಿತ್ರದಲ್ಲಿ ಹೀರೋಗಿಂತ ಹೆಚ್ಚು ವಿಜೃಂಭಿಸಿದ್ದವರು ಸುದೀಪ್.

    ಹಿಂದಿಯಲ್ಲಿ ಸುದೀಪ್ ಕೇವಲ ವಿಲನ್ ಪಾತ್ರಗಳನ್ನಷ್ಟೇ ಮಾಡುತ್ತಿಲ್ಲ. ಬೇರೆ ರೀತಿಯ ಪಾಸಿಟಿವ್ ಪಾತ್ರಗಳನ್ನೂ ಆಯ್ಕೆ ಮಾಡಿಕೊಂಡಿದ್ದಾರೆ.

    ಈಗ ಸುದೀಪ್ ವಿಲನ್ ಆಗಿ ನಟಿಸಿರುವ ದಬಾಂಗ್ 3 ಬಾಕ್ಸಿಂಗ್ ಡೇಯಂದು ರಿಲೀಸ್ ಆಗುತ್ತಿದೆ. ಪ್ರಭುದೇವ ನಿರ್ದೇಶನ, ಸಲ್ಮಾನ್-ಸೋನಾಕ್ಷಿ ಸಿನ್ಹಾ ಅಭಿನಯದ ಚಿತ್ರದಲ್ಲಿ ಸುದೀಪ್ ವಿಲನ್.

  • ವಿಲನ್ ಚೆನ್ನಾಗಿಲ್ಲ ಎಂದವರಿಗೆ ಸುದೀಪ್ ಹೇಳಿದ್ದೇನು..?

    sudeep replies to people who disliked the villain

    ದಿ ವಿಲನ್. ರಾಜ್ಯಾದ್ಯಂತ ರಿಲೀಸ್ ಆಗಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳಿಬ್ಬರೂ ಖುಷಿಯಾಗಿದ್ದಾರೆ. ತಾಯಿಯ ಸೆಂಟಿಮೆಂಟ್ ಪ್ಲೇ ಮಾಡಿರುವ ಜೋಗಿ ಪ್ರೇಮ್ ಗೆದ್ದುಬಿಟ್ಟಿದ್ದಾರೆ. ಸಿ.ಆರ್. ಮನೋಹರ್ ಮುಖದಲ್ಲಿ ಗೆಲುವಿನ ಸಂಭ್ರಮ. ಅಭಿಮಾನಿಗಳ ಶಿಳ್ಳೆ ಚಪ್ಪಾಳೆಯ ನಡುವೆ ವಿಲನ್ ಹ್ಯಾಪಿ ಹ್ಯಾಪಿ.

    ಹಾಗಂತ ಎಲ್ಲರೂ ಖುಷಿಯಾಗಿದ್ದಾರೆ ಎಂದರ್ಥವಲ್ಲ. ಇಡೀ ಸಿನಿಮಾ ಸ್ವಲ್ಪವೂ ಚೆನ್ನಗಿಲ್ಲ ಎಂದು ದೂರಿದವರೂ ಇದ್ದಾರೆ. ಅಂಥವರಿಗೆಲ್ಲ ಸುದೀಪ್ ಕೊಟ್ಟಿರೋ ಉತ್ತರ ಇದು.

    ಒಂದು ಹೋಟೆಲ್‍ಗೆ ಪ್ರತಿದಿನ ತುಂಬಾ ಜನ ಬರ್ತಾರೆ. ಕೆಲವರು ದೋಸೆ ಸರಿಯಿಲ್ಲ ಅಂತಾರೆ. ಇನ್ನೂ ಕೆಲವರು ಇಡ್ಲಿ ಸರಿಯಿಲ್ಲ ಅಂತಾರೆ. ಮತ್ತೂ ಕೆಲವರು ಚಟ್ನಿ ಸರಿಯಿಲ್ಲ ಅಂತಾರೆ. ಹಾಗೆ ಕಮೆಂಟ್ ಮಾಡುವವರ ಬಗ್ಗೆ ಹೋಟೆಲ್ ಮಾಲೀಕ ತಲೆಕೆಡಿಸಿಕೊಳ್ಳಲ್ಲ. ದಿನದ ಕೊನೆಗೆ ವ್ಯವಹಾರ ಎಷ್ಟಾಯ್ತು ಅಂತಾ ನೋಡ್ತಾನೆ. ಹಾಗೆ ಟೀಕಿಸುವವರು ಕೂಡಾ ಮತ್ತೊಮ್ಮೆ ಅದೇ ಹೋಟೆಲ್‍ಗೆ ಬರ್ತಾರೆ. ಹೀಗೆ ಹೇಳಿರುವ ಸುದೀಪ್, ಇದೇ ಚಿತ್ರದ ಬಗ್ಗೆ ಲಕ್ಷಾಂತರ ಜನ ನೋಡಿ ಥ್ರಿಲ್ಲಾಗಿರುವುದನ್ನು ಮರೆಯಬೇಡಿ. ಚಿತ್ರವನ್ನು ಮೆಚ್ಚಿಕೊಂಡಿರುವವರೇ ಹೆಚ್ಚು ಎಂದೂ ಹೇಳಿದ್ದಾರೆ.

  • ವಿಲನ್ ಬರೋದ್ಯಾವಾಗ..? ಚೌತಿಗೆ ಹೇಳ್ತಾರೆ

    the villain release date will be announced on ganesha festival

    ದಿ ವಿಲನ್. ಇಡೀ ಕನ್ನಡ ಚಿತ್ರರಂಗ, ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುವ ಸಿನಿಮಾ. ಶಿವರಾಜ್‍ಕುಮಾರ್, ಸುದೀಪ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ಕಾಯುವಿಕೆಗೆ ಗಣೇಶನ ಹಬ್ಬದ ದಿನ ಉತ್ತರ ಸಿಗಲಿದೆ. ಅಂದ್ರೆ, ಇನ್ನೇನಲ್ಲ, ಆ ದಿನ ಸಿನಿಮಾ ಬಿಡುಗಡೆ ಯಾವಾಗ ಅಂತಾ ಹೇಳ್ತಾರಂತೆ. ಅದನ್ನು ಹೇಳಿಕೊಂಡಿರೋದು ನಿರ್ದೇಶಕ ಪ್ರೇಮ್.

    ಸಿನಿಮಾ 2 ಗಂಟೆ, 55 ನಿಮಿಷ ಇದ್ಯಂತೆ. ಹಾಗಂತ ಸಿನಿಮಾ ಉದ್ದ ಅಂದ್ಕೋಬೇಡಿ. ಒಂದು ನಿಮಿಷವೂ ಸಿನಿಮಾ ಬೋರ್ ಹೊಡೆಸಲ್ಲ. ಫುಲ್ ಎಂಟರ್‍ಟೈನ್‍ಮೆಂಟ್ ಎಂದಿದ್ದಾರೆ ಪ್ರೇಮ್.

    ಸಿನಿಮಾದ ದೃಶ್ಯವೊಂದರಲ್ಲಿನ ಬ್ಲಡ್‍ಶೇಡ್ ಕಡಿಮೆ ಮಾಡಿ, ಒಂದ ಡೈಲಾಗ್‍ಗೆ ಮ್ಯೂಟ್ ಮಾಡಿಸಿ, ಯು/ಎ ಸರ್ಟಿಫಿಕೇಟ್ ಪಡೆದಿದ್ದೇವೆ. ಸಿನಿಮಾ ಸಂಪೂರ್ಣ ಸಿದ್ಧವಾಗಿದೆ. ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಗಣೇಶನ ಹಬ್ಬದ ದಿನ ಹೇಳ್ತೀವಿ ಅಂದಿದ್ದಾರೆ.

    ಗಣಪತಿ ಬಪ್ಪಾ ಮೋರಯಾ.. 

  • ವಿಲನ್ ಶೂಟಿಂಗ್ ಮುಗೀತು..!

    the villain shooting completed

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್‍ನ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಅದ್ದೂರಿ ಚಿತ್ರ ದಿ ವಿಲನ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಹೆಚ್ಚೂ ಕಡಿಮೆ ಒಂದೂವರೆ ವರ್ಷ ಶೂಟಿಂಗ್ ನಡೆಸಲಾಗಿದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದನ್ನು ಪ್ರೇಮ್ ಖುಷಿಯಿಂದ ಹೇಳಿಕೊಂಡಿದ್ದಾರೆ.

    ಚಿತ್ರಕ್ಕಾಗಿ 118 ದಿನಗಳ ಶೂಟಿಂಗ್ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ಕೊನೆಯ ದಿನದ ಶೂಟಿಂಗ್ ಮುಗಿಸಿದ ಪ್ರೇಮ್, ಶಿವಣ್ಣ ಡಾರ್ಲಿಂಗ್, ಸುದೀಪ್ ಹಾಗೂ ಆ್ಯಮಿ ಜಾಕ್ಸನ್‍ಗೆ ಧನ್ಯವಾದ ಹೇಳಿದ್ದಾರೆ. ಪ್ರೇಮ್ ಅವರನ್ನು ಫ್ಯಾಷನೇಟ್ ಡೈರೆಕ್ಟರ್ ಎಂದು ಹೊಗಳಿರುವ ಸುದೀಪ್, ಇಂಥಾದ್ದೊಂದು ಚಿತ್ರದಲ್ಲಿ ನಟಿಸಲು ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

    ಸಿನಿಮಾದ ಆಡಿಯೋ ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ. ಸಿನಿಮಾ ಅಕ್ಟೋಬರ್‍ನಲ್ಲಿ ಬರಬಹುದು.

  • ವಿಲನ್‍ಗೆ ಟೀಂಗೆ ಈಗ ಆ್ಯಮಿಯೇ ವಿಲನ್..!

    prem disappointed over amy jackson

    ದಿ ವಿಲನ್ ಚಿತ್ರತಂಡ ಅದ್ಧೂರಿ ಬಿಡುಗಡೆಗೆ ಭರ್ಜರಿಯಾಗಿ ಸಿದ್ಧವಾಗುತ್ತಿರುವಾಗಲೇ, ಚಿತ್ರದ ನಾಯಕಿಯ ವಿರುದ್ಧ ಗರಂ ಆಗಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ಕಾರಣ ಇಷ್ಟೆ, ಚಿತ್ರದ ಪ್ರಚಾರದಲ್ಲಿ ಆ್ಯಮಿ ಕಾಣಿಸಿಕೊಳ್ತಾನೇ ಇಲ್ಲ. ದುಬೈನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮವೊಂದನ್ನು ಬಿಟ್ಟರೆ, ಆ್ಯಮಿ ವಿಲನ್ ಪ್ರಚಾರದಿಂದ ದೂರವೇ ಉಳಿದಿದ್ದಾರೆ.

    ಆ್ಯಮಿ ಜಾಕ್ಸನ್, ಚಿತ್ರದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆ ವಿಷಯದಲ್ಲಿ ನನಗೆ ಅವರ ಬಗ್ಗೆ ಗೌರವ ಇದೆ. ಆದ್ರೆ, ಸಿನಿಮಾ ಪ್ರಮೋಷನ್ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಪ್ರಚಾರದ ವಿಚಾರವಾಗಿ ಕಾಂಟ್ಯಾಕ್ಟ್ ಮಾಡಿದ್ರೆ, ಎಷ್ಟೋ ದಿನ ಆದ ಮೇಲೆ ಅಲ್ಲಿಂದ ರಿಯಾಕ್ಷನ್ ಬರುತ್ತೆ ಅನ್ನೋದು ಪ್ರೇಮ್ ಬೇಸರಕ್ಕೆ ಕಾರಣ.

    ಶಿವರಾಜ್‍ಕುಮಾರ್, ಸುದೀಪ್ ಕಾಂಬಿನೇಷನ್ ಎಂಬ ಕಾರಣಕ್ಕೆ ಇಡೀ ಚಿತ್ರರಂಗ, ಕೋಟ್ಯಂತರ ಕನ್ನಡಿಗರು ದಿ ವಿಲನ್ ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿ.ಆರ್. ಮನೋಹರ್ ನಿರ್ಮಾಣದ ಬಹುಕೋಟಿ ವೆಚ್ಚದ ಸಿನಿಮಾ ಇದೇ ವಾರ ರಿಲೀಸ್ ಆಗುತ್ತಿದೆ.

  • ವಿಲನ್‍ಗೆ ಟೆರರಿಸ್ಟ್ ಚಾಲೆಂಜ್

    the terrorist release opposite the villain

    ದಿ ವಿಲನ್. ಶಿವರಾಜ್ ಕುಮಾರ್ ಮತ್ತು ಸುದೀಪ್ ಕಾಂಬಿನೇಷನ್‍ನ ಸಿನಿಮಾ. ಸಿ.ಆರ್.ಮನೋಹರ್ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಹಲವಾರು ಸಿನಿಮಾಗಳು ದಾರಿ ಮಾಡಿಕೊಟ್ಟಿವೆ. ಆ ದಿನವೇ ರಾಗಿಣಿ ದ್ವಿವೇದಿ ಅಭಿನಯದ ದಿ ಟೆರರಿಸ್ಟ್ ಸಿನಿಮಾ ರಿಲೀಸ್ ಆಗುತ್ತಿದೆ.

    ನಾವು ಪ್ಲಾನ್ ಪ್ರಕಾರವೇ ಬರುತ್ತಿದ್ದೇವೆ. ಯಾವತ್ತೇ ರಿಲೀಸ್ ಮಾಡಿದ್ರೂ ಒಂದಲ್ಲ ಒಂದು ಸಿನಿಮಾ ಜೊತೆ ಸ್ಪರ್ಧೆ ಮಾಡಲೇಬೇಕು. ಅಕ್ಟೋಬರ್ 18 ಬಿಟ್ಟರೆ, ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನೂ ಹೆಚ್ಚಾಗಲಿದೆ. ಹೀಗಾಗಿ ಅಕ್ಟೋಬರ್ 18ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

    ದಿ ಟೆರರಿಸ್ಟ್ ಸಿನಿಮಾ ಬೆಂಗಳೂರಿನಲ್ಲಿ ನಡೆಯುವ ಸ್ಫೋಟ, ಮುಸ್ಲಿಂ ಮಹಿಳೆಯೊಬ್ಬಳ ಕಥೆಯಾಗಿದ್ದು, ಯು ಸರ್ಟಿಫಿಕೇಟ್ ಪಡೆದಿರುವ ಚಿತ್ರ. 

  • ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಶುಭ ಕೋರಿದ ಕಿಚ್ಚ 

    sudeep

    ಆಗಸ್ಟ್ 27ರಂದು ನವದೆಹಲಿಯಲ್ಲಿ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯುತ್ತಿದೆ. ದೇಶ ವಿದೇಶಗಳಿಂದ ನೂರಾರು ಅಭಿಮಾನಿಗಳು ಆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಸಿನಿಮಾ, ಜೀವನ, ಕೊಡುಗೆ, ಅದರ್ಶಗಳ ಸ್ಮರಣೆ ನಡೆಯಲಿದೆ. ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಆ ಕಾರ್ಯಕ್ರಮಕ್ಕೆ ತೆರಳುತ್ತಿರುವುದು ವಿಶೇಷ. ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಮೇಣದ ಪ್ರತಿಮೆಯೂ ಅನಾವರಣಗೊಳ್ಳಲಿದೆ. 

    ಈ ಕುರಿತು ಅಭಿಮಾನಿಯೊಬ್ಬರು ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್, ವಿಷ್ಣುವರ್ಧನ್ ನಮ್ಮ ಹೆಮ್ಮೆ. ನನ್ನ ಆದರ್ಶ. ವಿಷ್ಣು ರಾಷ್ಟ್ರೀಯ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

    Related Articles :-

    ರಾಷ್ಟ್ರ ರಾಜಧಾನಿಯಲ್ಲಿ ವಿಷ್ಣುವರ್ಧನ್

  • ಶಾನ್ವಿ ಶ್ರೀವಾಸ್ತವ್ ಬ್ಯಾಂಗ್`ಗೆ ಕಿಚ್ಚ ಸುದೀಪ್ ವಾಯ್ಸ್

    ಶಾನ್ವಿ ಶ್ರೀವಾಸ್ತವ್ ಬ್ಯಾಂಗ್`ಗೆ ಕಿಚ್ಚ ಸುದೀಪ್ ವಾಯ್ಸ್

    ಕಿಚ್ಚ ಸುದೀಪ್ ಚಿತ್ರವೊಂದಕ್ಕೆ ಹಿನ್ನೆಲೆ ಧ್ವನಿ ನೀಡುವುದು ಹೊಸದೇನಲ್ಲ. ಪ್ರೀತಿ, ಸ್ನೇಹ, ಅಭಿಮಾನಕ್ಕಾಗಿ ಈ ಹಿಂದೆಯೂ ಹಲವು ಚಿತ್ರಗಳಿವೆ ವಾಯ್ಸ್ ಓವರ್ ಕೊಟ್ಟಿದ್ದಾರೆ.  ಕಠಾರಿ ವೀರ ಸುರಸುಂದರಾಂಗಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಶ್ರಾವಣಿ ಸುಬ್ರಮಣ್ಯ, ಆರ್ಯನ್, ಹಗ್ಗದ ಕೊನೆ, ರಿಕ್ಕಿ, ಜೈ ಮಾರುತಿ 800, ಚಕ್ರವ್ಯೂಹ, ಮಂಡ್ಯ ಟು ಮುಂಬೈ, ರಾಗ, ತಾಯಿಗೆ ತಕ್ಕ ಮಗ, ಉದ್ಗರ್ಷ ಮುಂತಾದ ಚಿತ್ರಗಳಿಗೆ ಕಿಚ್ಚ ಸುದೀಪ್ ವಾಯ್ಸ್ ಓವರ್ ಕೊಟ್ಟಿದ್ದರು. ಇದೀಗ ಶಾನ್ವಿ ಅಭಿನಯದ ಬ್ಯಾಂಗ್ ಚಿತ್ರಕ್ಕೆ ಸುದೀಪ್ ವಾಯ್ಸ್ ಕೊಟ್ಟಿದ್ದಾರೆ.

    ಚಿತ್ರದ ಟ್ರೇಲರ್ ಶುರುವಾಗುವುದೇ ಸುದೀಪ್ ಅವರ ವಾಯ್ಸಿನಲ್ಲಿ. ಒಂದು ಅನಪೇಕ್ಷಿತ ಸುಳಿಯೊಳಗೆ ಸಿಲುಕುವ ಮೂವರು ಯುವಕರು, ಆ ವ್ಯೂಹಕ್ಕೆ ತಾವಾಗಿಯೇ ಸಿಲುಕಿದರಾ..? ಯಾರಾದರೂ ಸಿಲುಕಿಸಿದರಾ ಎಂಬ ಪ್ರಶ್ನೆ ಟ್ರೇಲರ್ ನೋಡಿದವರಿಗೆ ಹುಟ್ಟುತ್ತೆ. ಆದರೆ, ಅದರತ್ತ ಗಮನ ಹರಿಸದಂತೆ ತಡೆಯುವುದು ಶಾನ್ವಿಯವರ ಆಕ್ಷನ್ ಸೀಕ್ವೆನ್ಸ್‍ಗಳು.

    ಬ್ಯಾಂಗ್ ಚಿತ್ರದಲ್ಲಿನ ಸುದೀಪ್ ಅವರ ವಾಯ್ಸ್‍ನ್ನ ಅವರ ಅಭಿಮಾನಿಗಳು ಸಹ ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ಈ ಕನಸನ್ನು ನನಸು ಮಾಡಿದ ಶಾನ್ವಿ ಶ್ರೀವಾಸ್ತವ ಅವರಿಗೆ ಮತ್ತು ಒಂದು ಹೊಸ ತಂಡದ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಸುದೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ ನಿರ್ದೇಶಕ ಗಣೇಶ್ ಪರಶುರಾಮ್.  ಸುದೀಪ್ ಚಿತ್ರಗಳನ್ನೇ ನೋಡಿ ಬೆಳೆದಿದ್ದ ಗಣೇಶ್ ಪರಶುರಾಮ್ ಅವರಂತೂ ಥ್ರಿಲ್ ಆಗಿ ಹೋಗಿದ್ದಾರೆ. ನಾವೆಲ್ಲ ಸುದೀಪ್ ಚಿತ್ರಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡ್ತಾ ಇದ್ದವರು. ಅವರು ನಮ್ಮ ಚಿತ್ರಕ್ಕೆ ಧ್ವನಿ ನೀಡಿದಾಗ, ಅವರನ್ನು ಭೇಟಿಯಾಗಿ ಕೈಕುಲುಕಿದಾಗ, ನಮ್ಮ ಬಹುವರ್ಷಗಳ ಕನಸು ನನಸಾದಂತಾಯಿತು ಎಂದಿದ್ದಾರೆ ಗಣೇಶ್.

    ಪೂಜಾ ವಸಂತ್ ಕುಮಾರ್ ನಿರ್ಮಾಣದ ‘ಬ್ಯಾಂಗ್’ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ ಜೊತೆಗೆ ರಘು ದೀಕ್ಷಿತ್, ಸಾತ್ವಿಕಾ, ರಿತ್ವಿಕ್ ಮುರಳೀಧರ್, ಸುನಿಲ್ ಗುಜ್ಜಾರ್, ನಾಟ್ಯರಂಗ ಮುಂತಾದವರು ಅಭಿನಯಿಸಿದ್ದಾರೆ.

  • ಶಿವಣ್ಣ 124ನೇ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲಾಪ್

    ಶಿವಣ್ಣ 124ನೇ ಚಿತ್ರಕ್ಕೆ ಕಿಚ್ಚ ಸುದೀಪ್ ಕ್ಲಾಪ್

    ಶಿವರಾಜ್ ಕುಮಾರ್ ಅವರ 124ನೇ ಸಿನಿಮಾ. ಟೈಟಲ್ `ನೀ ಸಿಗೋವರೆಗೂ..' ಟೈಟಲ್ ಕೊಟ್ಟಿದ್ದು ಸ್ವತಃ ಶಿವಣ್ಣ ಅವರೇ ಅಂತೆ. ರಾಮ್ ಧೂಲಿಪುಡಿ ನಿರ್ದೇಶನದ ಈ ಚಿತ್ರದಲ್ಲಿ ಮೆಹ್ರಿನ್ ಹೀರೋಯಿನ್. ಶಿವಣ್ಣನ ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಕಿಚ್ಚ ಸುದೀಪ್.

    ನಾವು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗ ಶಿವಣ್ಣ ನಮ್ಮ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಮುಹೂರ್ತಕ್ಕೆ ಬಂದರೆ ರೋಮಾಂಚನವಾಗುತ್ತಿತ್ತು. ಈಗ ಅವರ ಚಿತ್ರಕ್ಕೆ ಕ್ಲಾಪ್ ಮಾಡುತ್ತಿರುವುದು ಖುಷಿ ಕೊಡುತ್ತಿದೆ ಎಂದರು ಕಿಚ್ಚ ಸುದೀಪ್.

    ಇದೊಂದು ಲವ್ ಸ್ಟೋರಿ. ಆರ್ಮಿ ಆಫೀಸರ್ ಮತ್ತು ಲವ್ ಸ್ಟೋರಿ. ನನಗೆ ನಮ್ಮೂರ ಮಂದಾರ ಹೂವೆ, ಜನುಮದ ಜೋಡಿ ನೆನಪಾಗುತ್ತಿದೆ ಎಂದ ಶಿವಣ್ಣ ಇದು ನಮ್ಮೊಳಗೆ ಮತ್ತು ಹೊರಗೆ ನಡೆಯುವ ಎರಡು ಯುದ್ಧಗಳ ಕಥೆ ಎಂದರು.

    ಮುಹೂರ್ತದಲ್ಲಿ ನಾಯಕಿ ಮೆಹ್ರಿನ್ ಕೌರ್, ಗೀತಾ ಶಿವರಾಜ್ ಕುಮಾರ್, ರಾಮ್ ಧೂಲಿಪುಡಿ, ನಿರ್ಮಾಪಕರಾದ ನರಾಲ ಶ್ರೀನಿವಾಸ ರೆಡ್ಡಿ, ಸ್ವಾತಿ ವನಪಲ್ಲಿ, ಶ್ರೀಕಾಂತ್ ಧೂಲಿಪುಡಿ ಸೇರಿದಂತೆ ಆಲ್‍ಮೋಸ್ಟ್ ಫಿಲ್ಮ್ ಟೀಂ ಸೇರಿತ್ತು.