` kiccha sudeepa - chitraloka.com | Kannada Movie News, Reviews | Image

kiccha sudeepa

  • ಬೀದಿಗೆ ಬಿದ್ದ ವಿದ್ಯಾರ್ಥಿಗಳ ಕಣ್ಣೀರಿಗೆ ಕರಗಿದ ಸುದೀಪ

    ಬೀದಿಗೆ ಬಿದ್ದ ವಿದ್ಯಾರ್ಥಿಗಳ ಕಣ್ಣೀರಿಗೆ ಕರಗಿದ ಸುದೀಪ

    ರಾಮನಗರದ ಗಾಂಧಿವಾಡಾದಲ್ಲಿನ ಹರಿಜನ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದರು. ಕಟ್ಟಡದ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ವಿದ್ಯಾರ್ಥಿಗಳನ್ನು ಹೊರಗೆ ಹಾಕಿದ್ದ. ವಿದ್ಯಾರ್ಥಿನಿಯರು ಬೀದಿಯಲ್ಲಿ ಅಳುತ್ತಿದ್ದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಸುದೀಪ್ ಕಣ್ಣಿಗೂ ಬಿತ್ತು.

    ತಕ್ಷಣ ಸುದೀಪ್ ಹುಬ್ಬಳ್ಳಿಯ ಗಾಂಧಿವಾಡ ಕಚೇರಿಗೆ ಭೇಟಿ ನೀಡುವಂತೆ ತಮ್ಮ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಅವರಿಗೆ ಸೂಚಿಸಿದ್ರು. ರಮೇಶ್ ತಕ್ಷಣಕ್ಕೆ ಬಾಡಿಗೆ ಕಟ್ಟಡ ನೀಡುವ ಭರವಸೆ ಕೊಟ್ಟಿದ್ದಾರೆ. ಮಕ್ಕಳೊಂದಿಗೆ ಸ್ವತಃ ಸುದೀಪ್ ಕೂಡಾ ವಿಡಿಯೋ ಕಾಲ್‍ನಲ್ಲಿ ಮಾತನಾಡಿ ಧೈರ್ಯ ಹೇಳಿದ್ದಾರೆ.

    ನಿಮ್ಮ ಜೊತೆ ನಾವಿದ್ದೇವೆ. ಬಾಡಿಗೆಯೋ.. ಸ್ವಂತ ಕಟ್ಟಡವೋ.. ಆಡಳಿತ ಮಂಡಳಿ ತೀರ್ಮಾನಿಸಿ ತಿಳಿಸಿದರೆ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್.

  • ಬೆಂಗಳೂರು ಬುಲ್ಸ್ ಕಬಡ್ಡಿಗೆ ಕಿಚ್ಚನೇ ರಾಯಭಾರಿ

    ಬೆಂಗಳೂರು ಬುಲ್ಸ್ ಕಬಡ್ಡಿಗೆ ಕಿಚ್ಚನೇ ರಾಯಭಾರಿ

    ಇತ್ತೀಚೆಗೆ ಕ್ರಿಕೆಟ್‍ನಷ್ಟೇ ಜನಪ್ರಿಯವಾಗಿರೋದು ಪ್ರೊ ಕಬಡ್ಡಿ. ಈ ಕಬಡ್ಡಿ ಟೂರ್ನಮೆಂಟಿನಲ್ಲಿ ಬೆಂಗಳೂರು ಬುಲ್ಸ್ ನಮ್ಮ ಟೀಂ. ಈ ತಂಡಕ್ಕೀಗ ಕಿಚ್ಚ ಸುದೀಪ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಟೂರ್ನಮೆಂಟ್ ಇದೇ 22ರಿಂದ ಶುರುವಾಗುತ್ತಿದೆ.

    ಪ್ರೊ ಕಬಡ್ಡಿ ಟೂರ್ನಿಯ ಪ್ರಚಾರ ಶುರುವಾಗಿದ್ದು, ಪ್ರೋಮೋಗಳಲ್ಲಿ ಈಗಾಗಲೇ ಕಿಚ್ಚ ಸುದೀಪ್ ರಂಗು ತುಂಬಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ಕಚ್ಚೆ, ಜುಬ್ಬಾ, ಪೇಟದಲ್ಲಿ ಸುದೀಪ್ ಖಡಕ್ಕಾಗಿ ಕಾಣ್ತಾರೆ.

  • ಭಾರತದ ಮೊದಲ ಅಡ್ವೆಂಚರ್ ಹೀರೋ ಸಿನಿಮಾ ಫೆ.24ಕ್ಕೆ ರಿಲೀಸ್ ಆಗಲ್ಲ..!

    ಭಾರತದ ಮೊದಲ ಅಡ್ವೆಂಚರ್ ಹೀರೋ ಸಿನಿಮಾ ಫೆ.24ಕ್ಕೆ ರಿಲೀಸ್ ಆಗಲ್ಲ..!

    ಭಾರತದ ಮೊದಲ ಅಡ್ವೆಂಚರ್ ಹೀರೋ ಸಿನಿಮಾ ವಿಕ್ರಾಂತ್ ರೋಣ. ಅದನ್ನು ನಿರ್ಮಾಪಕ ಜಾಕ್ ಮಂಜು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎಲ್ಲವೂ ಅವರ ಪ್ಲಾನ್ ಪ್ರಕಾರವೇ ಜರುಗಿದ್ದರೆ ಫೆ.24ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಅದನ್ನು ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿಯಾಗಿತ್ತು. ಆದರೆ ಈಗ ಜಾಕ್ ಮಂಜು ಅವರೇ ಅಧಿಕೃತವಾಗಿ ಫೆ.24ಕ್ಕೆ ರಿಲೀಸ್ ಇಲ್ಲ ಎಂದಿದ್ದಾರೆ.

    ಸುದೀಪ್ ಅವರ ಸಿನಿಮಾವನ್ನು ಈಗಾಗಲೇ ಅಭಿಮಾನಿಗಳೇ ಪ್ರಚಾರ ಮಾಡುತ್ತಿದ್ದಾರೆ. ಸದ್ಯಕ್ಕಿನ್ನೂ ಸರ್ಕಾರ ಥಿಯೇಟರುಗಳಲ್ಲಿ 50:50 ರೂಲ್ಸ್ ತೆಗೆದಿಲ್ಲ. ಯಾವಾಗ 100% ಪ್ರೇಕ್ಷಕರಿಗೆ ಅವಕಾಶ ಕೊಡುತ್ತಾರೋ.. ಅದೂ ಗೊತ್ತಿಲ್ಲ. ಈ ಗೊಂದಲದಲ್ಲಿ ಸಿನಿಮಾ ರಿಲೀಸ್ ಮಾಡೋದು ಬೇಡ ಎನ್ನುವುದು ಜಾಕ್ ಮಂಜು ವಾದ. ಸಿನಿಮಾವನ್ನ 3ಡಿಯಲ್ಲಿಯೂ ರೂಪಿಸಲಾಗಿದೆ. ಹೀಗಾಗಿಯೇ 100 ಕೋಟಿ ಆಫರ್ ಬಂದರೂ ಸಿನಿಮಾವನ್ನು ಒಟಿಟಿಗೆ ಕೊಟ್ಟಿಲ್ಲ.

    ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಪಕರಾಗಿದ್ದು, ಅಲಂಕಾರ್ ಪಾಂಡ್ಯನ್ ಸಹ ನಿರ್ಮಾಪಕರಾಗಿದ್ದಾರೆ.

  • ಭಾರ್ಗವ್ ಭಕ್ಷಿ ಸುದೀಪ್

    ಭಾರ್ಗವ್ ಭಕ್ಷಿ ಸುದೀಪ್

    ಪಾತ್ರ ಚೆನ್ನಾಗಿದೆ, ಅಭಿನಯಕ್ಕೆ ಸ್ಕೋಪ್ ಇದೆ, ಎಕ್ಸ್‍ಪೆರಿಮೆಂಟ್ ಮಾಡೋಕೆ ಅವಕಾಶವಿದೆ.. ಎನಿಸಿದರೆ ಹೀರೋನಾ..? ವಿಲನ್ನಾ..? ಪೋಷಕ ಪಾತ್ರನಾ ಅನ್ನೋದನ್ನೂ ನೋಡದೆ ಯೆಸ್ ಎನ್ನುವ ಕಿಚ್ಚ ಸುದೀಪ್, ಈ ಬಾರಿ ಭಾರ್ಗವ್ ಭಕ್ಷಿ ಆಗುತ್ತಿದ್ದಾರೆ. ಅದು ಕಬ್ಜ ಚಿತ್ರದಲ್ಲಿ. ಈ ಚಿತ್ರಕ್ಕೆ ಹೀರೋ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು. ಒಟ್ಟು 7 ಭಾಷೆಗಳಲ್ಲಿ ಬರುತ್ತಿರುವ ಸಿನಿಮಾಗೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

    ಸುದೀಪ್ ಪಾತ್ರ ಏನು..? ಹೀರೋನಾ..? ವಿಲನ್ನಾ..? ಹೇಗಿರುತ್ತೆ ಪಾತ್ರ ಅನ್ನೋದನ್ನು ತೆರೆಯ ಮೇಲೇ ನೋಡಿ ಎಂದಿದ್ದಾರೆ ಚಂದ್ರು.

    ಆರ್.ಚಂದ್ರು ಅವರ ಕಥೆ, ತಮ್ಮ ಪಾತ್ರದ ನರೇಷನ್ ಹಾಗೂ ಚಂದ್ರು ಅವರ ಕಬ್ಜ ಮೇಕಿಂಗ್ ನೋಡಿಯೇ ಪಾತ್ರಕ್ಕೆ ಓಕೆ ಎಂದಿದ್ದಾರಂತೆ ಸುದೀಪ್.

  • ಮಗಳ ಎದುರು ಆಗಲೇ ಗೆದ್ದಾಗಿದೆ ಪೈಲ್ವಾನ್

    sudeep's daughters first reaction on pailwan

    ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಹುಬ್ಬೇರಿಸಿದ್ದರು. ಮೂಗಿನ ಮೇಲೆ ಬೆರಳಿಟ್ಟಿದ್ದರು. ಅಭಿಮಾನಿಗಳು ವಾರೆ ವ್ಹಾ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿದೆ.ಕೃಷ್ಣ ಡೈರೆಕ್ಷನ್, ಸ್ವಪ್ನಾ ಕೃಷ್ಣ ನಿರ್ಮಾಣದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನವೂ ಅದ್ಭುತವಾಗಿದೆ.

    ಪ್ರೇಕ್ಷಕರ ಒಪ್ಪಿಗೆಗೂ ಮೊದಲೇ ಸುದೀಪ್ ಮೊದಲ ಗೆಲುವು ದಾಖಲಿಸಿದ್ದಾರೆ. ಅದೂ ಅವರ ಪ್ರೀತಿಯ ಮಗಳು ಸಾನ್ವಿಯ ಎದುರು. ನನ್ನ ಪೈಲ್ವಾನ್ ಪೋಸ್ಟರ್ ನೋಡಿ ನನ್ನ ಮಗಳು ವ್ಹಾವ್ ಎಂದರೂ.. ಆಮೇಲೆ ಪದೇ ಪದೇ ನಿಜಾನಾ ಅಂಥ ಕೇಳ್ತಾ ಇದ್ಲು. ಆಗ ಅವಳಿಗೆ ನಾನು ಜಿಮ್ ಮಾಡುತ್ತಿರುವ ದೃಶ್ಯಗಳನ್ನು ತೋರಿಸಿ ಪ್ರೂವ್ ಮಾಡಿದೆ. ನಿಜಕ್ಕೂ ಮಕ್ಕಳು ನನ್ನ ಸಿನಿಮಾ ಇಷ್ಟಪಡ್ತಾರೆ ಎಂದಿರುವ ಸುದೀಪ್, ಪೈಲ್ವಾನ್ ಚಿತ್ರದಿಂದಾಗಿ ನಾನು ಸರಿಯಾಗಿ ನಿದ್ದೆ, ಊಟ ಮತ್ತು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.

  • ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಲಕ್ಕಿಮ್ಯಾನ್. ಸೆಪ್ಟೆಂಬರ್`ನಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ ಇದು. ನಾನ್ ಕಡುವುಳೆ ಚಿತ್ರದ ರೀಮೇಕ್ ಆಗಿರೋ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭುದೇವ ಕೂಡಾ ನಟಿಸಿರೋ ಚಿತ್ರಕ್ಕೆ ಪ್ರಭುದೇವ  ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶಕ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬಾರೋ ರಾಜ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಿಚ್ಚ ಸುದೀಪ್, ರಾಘವೇಂದ್ರ ರಾಜಕುಮಾರ್, ಸಾಧುಕೋಕಿಲ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

    ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ನಟಿಸುವುದು ನನಗೆ ಹೊಸದಲ್ಲ. ಈ ಹಿಂದೆ ಅಭಿನಯಿಸಿದ್ದೇನೆ. ಆದರೆ ನಾನು ಲೀಡ್ ರೋಲಿನಲ್ಲಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸಿದ್ದಾರೆ ಎನ್ನುವುದು ನನ್ನ ಹೆಮ್ಮೆ ಎಂದರು ಕೃಷ್ಣ.

    ಈ ಚಿತ್ರವನ್ನು ಬಾಚಿ ತಬ್ಬಿಕೊಂಡು ಬಿಡಿ. ಅಪ್ಪುನ ಮತ್ತೆ ನೋಡಬಹುದು ಅನ್ನೋ ಕಾರಣಕ್ಕೆ ನಾನು ಟ್ರೇಲರ್ ನೋಡಿ ಖುಷಿಪಟ್ಟೆ. ಅಪ್ಪು ಅವರು ಈಗಿಲ್ಲ. ಅವರು ದೇವರಾಗಿದ್ದಾರೆ. ಈ ಸಿನಿಮಾದಲ್ಲೂ ದೇವರಾಗಿ ನಟಿಸಿದ್ದಾರೆ. ಮತ್ತೆ ಬೇಕು ಅಂದ್ರೂ ಅಪ್ಪು ನೋಡೋಕೆ ಸಿಗಲ್ಲ. ಅಪ್ಪುಗೆ ದೇವರ ಪಾತ್ರ ಚೆನ್ನಾಗಿ ಸೂಟ್ ಆಗುತ್ತೆ ಎಂದವರು ಸುದೀಪ್.

    ಚಿತ್ರದ ನಿರ್ದೇಶಕ ನಾಗೇಂದ್ರ ಪ್ರಸಾದ್ ಎಲ್ಲವನ್ನೂ ನಡೆಸಿಕೊಟ್ಟ ಅಣ್ಣ ಪ್ರಭುದೇವಗೆ ಥ್ಯಾಂಕ್ಸ್ ಹೇಳಿದರು. ಪ್ರಭುದೇವ ಫೋನಿನಲ್ಲಿ ಕೇಳಿದ ತಕ್ಷಣ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅಪ್ಪು.

    ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಅತಿಥಿ ನಟರಾಗಿದ್ದರೂ ಅವರ ಪಾತ್ರ ಮುಕ್ಕಾಲು ಗಂಟೆ ಇರಲಿದೆಯಂತೆ.

    ಲಕ್ಕಿಮ್ಯಾನ್ ಒಂದು ರೀತಿಯಲ್ಲಿ ಅಪ್ಪು ನಟನೆಯ ಕಟ್ಟಕಡೆಯ ಸಿನಿಮಾ. ಇದಾದ ನಂತರ ಗಂಧದ ಗುಡಿ ಬರಲಿದೆಯಾದರೂ ಅದು ಸಾಕ್ಷ್ಯಚಿತ್ರ. ಸಿನಿಮಾ ಅಲ್ಲ.

  • ಮತ್ತೊಮ್ಮೆ ಬಚ್ಚನ್ ಜೊತೆ ಸುದೀಪ್

    amitab bachchan and sudeep to act again

    ಕಿಚ್ಚ ಸುದೀಪ್ ಮತ್ತೊಮ್ಮೆ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದು ಆಂಖೇ-2 ಚಿತ್ರದಲ್ಲಿ. ರಣ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದ ಅಮಿತಾಬ್ ಮತ್ತು ಸುದೀಪ್, ತೆಲುಗಿನ ಸೈರಾ ಚಿತ್ರದಲ್ಲೂ ನಟಿಸಿದ್ದಾರೆ. ಈಗ.. ಮತ್ತೊಮ್ಮೆ ಆಂಖೇ-2 ನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

    ಅಷ್ಟೇ ಅಲ್ಲ, ದಬಾಂಗ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರೆ.  ನವೆಂಬರ್‍ನಲ್ಲಿ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಲಿರೋ ಸುದೀಪ್, ಜನವರಿಗೆಯಲ್ಲಿ ದಬಾಂಗ್-3 ಟೀಂ ಜೊತೆಯಾಗಲಿದ್ದಾರೆ. ಮುಂದಿನ ವರ್ಷ ಸೈರಾ ನರಸಿಂಹ ರೆಡ್ಡಿ ತೆಲುಗಿನಲ್ಲಿ, ಹಿಂದಿಯಲ್ಲಿ, ಇಂಗ್ಲಿಷ್‍ನಲ್ಲಿ.. ಒಟ್ಟಿನಲ್ಲಿ.. 2019ರಲ್ಲಿ ಸುದೀಪ್ ಅಭಿಮಾನಿಗಳಿಗೆ ವರ್ಷಪೂರ್ತಿ ಹಬ್ಬ.

  • ಮತ್ತೊಮ್ಮೆ ಹೃದಯವಂತಿಕೆ ಮೆರೆದ ಕಿಚ್ಚ

    sudeep's heartwarming act

    ಕಿಚ್ಚ ಸುದೀಪ್ ಕೋಟಿಗೊಬ್ಬರಷ್ಟೇ ಅಲ್ಲ, ಹೃದಯವಂತರೂ ಹೌದು ಅನ್ನೋದಕ್ಕೆ ಈ ಪ್ರಕರಣ ಇನ್ನೊಂದು ಸಾಕ್ಷಿ ಅನ್ನೋಕೆ ಅಡ್ಡಿಯಿಲ್ಲ. ಬಳ್ಳಾರಿ ಮೂಲದ ವಿನುತಾ, ಸುದೀಪ್ ಅವರ ಅಪ್ಪಟ ಅಭಿಮಾನಿ. ಕ್ಯಾನ್ಸರ್ 4ನೇ ಹಂತದಲ್ಲಿರುವ ವಿನುತಾ ಅವರಿಗೆ ಒಮ್ಮೆಯಾದರೂ ಸುದೀಪ್ ಅವರನ್ನು ನೋಡಬೇಕು, ಮಾತನಾಡಿಸಬೇಕು ಎಂಬ ಆಸೆ. 

    ತಮ್ಮ ಅಭಿಮಾನಿ ಸಂಘ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ವಿಷಯ ತಿಳಿದುಕೊಂಡ ಸುದೀಪ್, ಮನೆಗೇ ಸ್ವತಃ ತೆರಳಿ ವಿನುತಾ ಅವರನ್ನು ಭೇಟಿಯಾಗಿದ್ದಾರೆ. ಅಭಿಮಾನಿಯ ಜೊತೆ ಗಂಟೆಗೂ ಹೆಚ್ಚು ಕಾಲ ಕಳೆದು ಅಭಿಮಾನಿಯ ಅಂತಿಮ ಆಸೆ ಈಡೇರಿಸಿದ್ದಾರೆ.

  • ಮದಕರಿ ಜಾತಿ ವಿವಾದ - ಕಲಾ ದೇವಿಗೇಕೆ ಜಾತಿ..?

    caste ism is non sense to film industry

    ಚಿತ್ರದುರ್ಗದ ಕೋಟೆಯನ್ನು ನೋಡಲು ಹೋಗುವವರು ಮದಕರಿ ನಾಯಕನ ಜಾತಿ ನೋಡಿ ಹೋಗ್ತಾರಾ..? ಓಬವ್ವನ ಕಥೆ ಕೇಳಿ ಹೆಮ್ಮೆ ಪಟ್ಟುಕೊಂಡವರಿಗೆ ಆಕೆಯ ಜಾತಿ ಯಾವುದೆಂದು ಗೊತ್ತಾ..? ಅನಗತ್ಯವಾಗಿದ್ದ ವಿವಾದವೊಂದನ್ನು ಸೃಷ್ಟಿಸಿದ ವಾಲ್ಮೀಕಿ ಸ್ವಾಮೀಜಿ, ಪದೇ ಪದೇ ವಿವಾದದ ಬೆಂಕಿ ಹಚ್ಚುತ್ತಲೇ ಹೋಗಿಬಿಟ್ಟರು. ಕಲಾದೇವಿಗೊಂದು ಜಾತಿಯ ಕಳಂಕ ಅಂಟಿಸಿಬಿಟ್ಟರು.

    ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹೇಳಿದ್ದೂ ಇದನ್ನೇ. ಎಲ್ಲವನ್ನೂ ಜಾತಿ ನೋಡಿಕೊಂಡು ಮಾಡಿದ್ದರೆ, ಡಾ.ರಾಜ್ ಒಂದೇ ಒಂದು ಐತಿಹಾಸಿಕ ಪಾತ್ರವನ್ನೂ ಮಾಡುವಂತಿರಲಿಲ್ಲ. ಕನಕದಾಸ ಎನ್ನಿ, ಪುರಂದರದಾಸ ಎನ್ನಿ, ಶ್ರೀಕೃಷ್ಣ ದೇವರಾಯ ಎನ್ನಿ, ಮಯೂರ ಎನ್ನಿ, ಬಭ್ರುವಾಹನ ಎನ್ನಿ, ಭಕ್ತ ಕುಂಬಾರ ಎನ್ನಿ, ಭಕ್ತ ಚೇತ ಎನ್ನಿ, ಸರ್ವಜ್ಞಮೂರ್ತಿ ಎನ್ನಿ, ರಾಘವೇಂದ್ರ ಸ್ವಾಮಿ ಎನ್ನಿ, ರಣಧೀರ ಕಂಠೀರವ ಎನ್ನಿ.. ಕಣ್ಣ ಮುಂದೆ ಬರುವುದು ಡಾ.ರಾಜ್‍ಕುಮಾರ್. ರಾಜಕೀಯದಲ್ಲಿ ಜಾತಿಯಿಲ್ಲದೆ ಏನೂ ನಡೆಯಲ್ಲ. ಜಾತ್ಯತೀ ಪಕ್ಷ ಎಂದು ಕರೆಸಿಕೊಳ್ಳುವವರೂ ಜಾತಿ ರಾಜಕೀಯವನ್ನೇ ಮಾಡೋದು. ಅದು ದೇಶದ ಜನರಿಗೆಲ್ಲ ಗೊತ್ತಿರುವ ಬಹಿರಂಗ ಗುಟ್ಟು. ಆದರೆ, ಚಿತ್ರರಂಗದಲ್ಲಿ ಜಾತಿ ಇರಲಿಲ್ಲ. 

    ಒಬ್ಬ ಕಲಾವಿದನನ್ನು ಆತನ ಶ್ರೇಷ್ಟತೆಯಿಂದಲೇ ಗೌರವಿಸುತ್ತಿದ್ದರು. ಗೌರವಿಸುತ್ತಿದ್ದಾರೆ. ಕನ್ನಡದಲ್ಲಿ ಕೆಲವು ಹಿರಿಯ ನಿರ್ದೇಶಕರು, ಕಲಾವಿದರಿಗೆ.. ಕಣ್ಣಿಗೆ ಕಂಡ ತಕ್ಷಣ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಚಿತ್ರರಂಗದ ಕಿರಿಯರು. ಅಲ್ಲಿ ಜಾತಿ ನೋಡುವುದಿಲ್ಲ. ಕಾಣುವುದು ಕಲಾ ಸರಸ್ವತಿ. ಡಾ.ರಾಜ್, ವಿಷ್ಣು, ಪುಟ್ಟಣ್ಣನಂತಹವರಿಗೆ ಆ ಗೌರವ ಸಿಗುತ್ತಿತ್ತು. ಈಗಲೂ.. ಅಂಬಿ, ರವಿಚಂದ್ರನ್, ಶಿವಣ್ಣ, ಭಾರ್ಗವ, ಭಗವಾನ್.. ರಂತಹ ಹಿರಿಯರಿಗೆ ನಮಸ್ಕರಿಸುವಾಗ.. ಅವರ ಜಾತಿ ಯಾವುದೆಂದು ನಮ್ಕಸರಿಸುವವರು ನೆನಪಿಸಿಕೊಳ್ಳಲ್ಲ. ಇಷ್ಟಕ್ಕೂ ಅವರಿಗೆ ಆ ಗೌರವ ಸಿಕ್ಕಿದ್ದೇ ಕಲಾದೇವಿ ಒಲಿದ ಮೇಲೆ. ಕಲಾದೇವಿ ಒಲಿಯುವುದೇ ಜಾತಿಯ ಅರಿವು ಸತ್ತ ಮೇಲೆ. 

    ಜಗ್ಗೇಶ್ ಹೇಳಿದ ಮಾತಿನಲ್ಲಿ ಅರ್ಥವಿದೆ ಎನಿಸುವುದು ಆಗಲೇ. ಕಲೆಗೆ ಜಾತಿ ಎಲ್ಲಿಯದು..? ಇಷ್ಟಕ್ಕೂ ಮದಕರಿ ನಾಯಕನನ್ನು ಒಬ್ಬ ಜಾತಿಯ ನಾಯಕ ಎಂದು ಸೀಮಿತಗೊಳಿಸುವುದೇ ನಮಗೆ ನಾವು ಮಾಡಿಕೊಳ್ಳುವ ಅವಮಾನ. ಈಗ ಈ ಸ್ವಾಮೀಜಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ.. ಆ ಪಾತ್ರದಲ್ಲಿ ನಟಿಸುವ ಕಲಾವಿದನ ಜಾತಿಯನ್ನೂ ಎತ್ತಿಬಿಟ್ಟಿದ್ದಾರೆ.

    ಒಬ್ಬ ಸ್ವಾಮೀಜಿಯ ಅತಿರೇಕದಿಂದ ಒಬ್ಬ ಕಲಾವಿದನ ಜಾತಿ ಗೊತ್ತಾಗುವಂತಾಯ್ತೇ ಹೊರತು, ಮತ್ತೇನಲ್ಲ. ಸುದೀಪ್‍ರನ್ನು ಕನ್ನಡಿಗರು ಪ್ರೀತಿಸುವುದು ಆತ ಒಬ್ಬ ಕಲಾವಿದ. ಕನ್ನಡದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳಗಲು ಪ್ರಯತ್ನಿಸುತ್ತಿರುವ ಸಾಹಸಿ ಎಂಬ ಕಾರಣಕ್ಕೆ. ಜಾತಿ ಕಟ್ಟಿಕೊಂಡು ಆಗಬೇಕಾದ್ದೇನು..? ದರ್ಶನ್ ಜಾತಿಯೂ ಎಷ್ಟೋ ಜನರಿಗೆ ಗೊತ್ತಿಲ್ಲ. ಗೊತ್ತಾಗುವ ಅಗತ್ಯವೂ ಇಲ್ಲ. ಕಲಾವಿದರ ಜಾತಿ ಕಟ್ಟಿಕೊಂಡು ನಮಗೇನಾಗಬೇಕು..? 

    ಇಷ್ಟಕ್ಕೂ ಮದಕರಿ ನಾಯಕನ ಎರಡು ಸಿನಿಮಾ ಬರುತ್ತವಾ..? ಬರಲಿ ಬಿಡಿ. ನಮ್ಮ ಮದಕರಿ ನಾಯಕನ ಇತಿಹಾಸ ಮನೆ ಮನೆಗೂ ತಲುಪಲಿ. ಅದಕ್ಕೆ ಹೆಮ್ಮೆ ಪಡೋಣ.

    ಕೆ.ಎಂ.ವೀರೇಶ್

    ಸಂಪಾದಕರು

    ಚಿತ್ರಲೋಕ.ಕಾಮ್

  • ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್ ನಲ್ಲಿ ಅರಳಿದ ಕಿಚ್ಚ ಸುದೀಪ್ ಅವರ ಮರಳು ಶಿಲ್ಪ..

    ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್ ನಲ್ಲಿ ಅರಳಿದ ಕಿಚ್ಚ ಸುದೀಪ್ ಅವರ ಮರಳು ಶಿಲ್ಪ..

    ಅಭಿನಯ ಚಕ್ರವರ್ತಿ ಸುದೀಪ್ ಅವರು ರಾಷ್ಟ್ರದಾದ್ಯಂತ ಖ್ಯಾತಿ ಜೊತೆಗೆ ಅಭಿಮಾನ ಸಮೂಹವನ್ನು ಹೊಂದಿರುವ ಕನ್ನಡದ ಮೇರುನಟ. ಸೆಪ್ಟೆಂಬರ್ 2ರಂದು ಸುದೀಪ್ ಅವರ ಜನ್ಮದಿನ. ಈ ಜನ್ಮದಿನವನ್ನು ಸ್ಮರಣೀಯವಾಗಿಸಲು ಮತ್ತು ಸಂಭ್ರಮವನ್ನು ದುಪ್ಪಟ್ಟುಗೊಳಿಸಲು ಮಾನಸ್ ಕುಮಾರ್ ಎಂಬ ಹೆಸರಾಂತ ಮರಳುಶಿಲ್ಪಿ ಒರಿಸ್ಸಾದ ಸಮುದ್ರ ತೀರದಲ್ಲಿ ಕಿಚ್ಚ ಸುದೀಪ್ ಅವರ ಮರಳು ಶಿಲ್ಪವನ್ನು ನಿರ್ಮಿಸುವ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ. 

    ಈ ಶಿಲ್ಪವು 20 ಅಡಿ ಅಗಲ, 7 ಅಡಿ ಎತ್ತರವಿದೆ. ಈ ಶಿಲ್ಪಕ್ಕಾಗಿ ಸುಮಾರು 20 ಟನ್ ಮರಳನ್ನು ಬಳಸಲಾಗಿದೆ ಎಂದು ಶಿಲ್ಪಿ ತಿಳಿಸಿದ್ದಾರೆ. ಸುದೀಪ್ ಅವರ ಆಪ್ತರಾದ ವೀರಕಪುತ್ರ ಶ್ರೀನಿವಾಸ ಅವರು ಯಾವಫೋಟೋ ಬಳಸಬೇಕು ಮತ್ತು ಕನ್ನಡ ಬರವಣಿ ಹೇಗಿರಬೇಕು ಎಂಬ ಗೊಂದಲಕ್ಕೆ ಅಗತ್ಯವಿದ್ದ ಮಾಹಿತಿಯನ್ನು ನೀಡಿರುವುದನ್ನು ತಿಳಿಸಿದರು. 

    ದಕ್ಷಿಣ ಭಾರತದಲ್ಲಿಯೇ ಈ ಮರಳು ಶಿಲ್ಪ ಗೌರವಕ್ಕೆ ಪಾತ್ರವಾಗುತ್ತಿರುವ ಎರಡನೇ ಕಲಾವಿದರೆಂದರೆ ಅದು ಕಿಚ್ಚ ಸುದೀಪ್ ಅವರು ಮಾತ್ರ. ಈ ಹಿಂದೆ 2020ರಲ್ಲಿ ಡಾ.ವಿಷ್ಣುವರ್ಧನ್ ಅವರ 70ನೇ ಜನ್ಮದಿನ ಪ್ರಯುಕ್ತ ಮರಳು ಶಿಲ್ಪದ ಗೌರವ ನೀಡಲಾಗಿತ್ತು ಎಂಬುದು ಬಿಟ್ಟರೆ ಇದುವರೆಗೆ ಯಾವುದೇ ದಕ್ಷಿಣ ಭಾರತದ ನಟರಿಗೆ ಈ ಗೌರವ ದಕ್ಕಿರಲಿಲ್ಲ. ಈಗ ಎರಡನೆಯವರಾಗಿ ಕಿಚ್ಚ ಸುದೀಪ್ ಅವರು ಅಂತಹ ಗೌರವವಕ್ಕೆ ಪಾತ್ರರಾಗಿದ್ದಾರೆ. ನಿನ್ನೆ ತಾನೇ ಅಂಚೆ ಇಲಾಖೆಯಿಂದ ವಿಶೇಷ ಲಕೋಟೆಯ ಗೌರವವನ್ನು ಪಡೆದಿದ್ದಂತಹ ಸುದೀಪ್ ಅವರು ಈಗ ಮರಳು ಶಿಲ್ಪ ಗೌರವಕ್ಕೂ ಪಾತ್ರರಾಗಿರುವುದು ಅವರ ಅಭಿಮಾನಿಗಳನ್ನು ಖುಷಿಯಿಂದ ಕುಣಿಯುವಂತೆ ಮಾಡಿದೆ. 

    ಮರಳು ಶಿಲ್ಪದ ಕುರಿತ ಇತರೆಮಾಹಿತಿಗಳಿಗಾಗಿ ಶಿಲ್ಪಿ ಮಾನಸ್ ಕುಮಾರ್ ಅವರನ್ನು ಸಂಪರ್ಕಿಸಬಹುದು 9437280477

  • ಮರೆತೇನೆಂದರೆ ಮರೆಯಲಿ ಹ್ಯಾಂಗ : ಹುಚ್ಚನ ನೆನಪು ಬಿಚ್ಚಿಟ್ಟ ಕಿಚ್ಚ

    sudeep recalls huchcha days in an hindi show

    ಕಿಚ್ಚ ಸುದೀಪ್, ಅಭಿಮಾನಿಗಳ ಪಾಲಿಗೆ ಪ್ರೀತಿಯ ಕಿಚ್ಚ. ಸುದೀಪ್ ಎಂದು ಕರೆಯುವ ಅಭಿಮಾನಿಗಳ ಸಂಖ್ಯೆಯೇ ಕಡಿಮೆ ಎನ್ನಬೇಕು. ಹಾಗೆ ನೋಡಿದರೆ ಕನ್ನಡದಲ್ಲಿ ಹೀರೋಗಿಂತ ಹೀರೋ ಅಭಿನಯಿಸಿದ ಪಾತ್ರಗಳ ಹೆಸರು ಜನಪ್ರಿಯವಾಗಿರುವುದು ಸ್ವಲ್ಪ ಕಡಿಮೆ ಎನ್ನಬೇಕು. ಬಂಗಾರದ ಮನುಷ್ಯದ ರಾಜೀವ, ಭೂತಯ್ಯನ ಮಗ ಅಯ್ಯು ಚಿತ್ರದ ಗುಳ್ಳ, ನಾಗರಹಾವಿನ ರಾಮಾಚಾರಿ, ಜನುಮದ ಜೋಡಿಯ ಮಣಿ-ಕೃಷ್ಣ, ಬಂಧನದ ಡಾ.ಹರೀಶ್, ನಂದಿನಿ, ಮುಂಗಾರು ಮಳೆಯ ಪ್ರೀತಮ್, ನಂಜುAಡಿ ಕಲ್ಯಾಣದ ದುರ್ಗಿ.. ಇಂತಹ ಲಿಸ್ಟುಗಳಲ್ಲಿ ಅಜರಾಮಜರವಾಗಿ ಉಳಿದಿರುವ ಇನ್ನೊಂದು ಹೆಸರೇ ಕಿಚ್ಚ. ಪಾತ್ರದ ಹೆಸರನ್ನು ವೊರಿಜಿನಲ್ ಹೆಸರಿನ ಜೊತೆಯಲ್ಲಿಟ್ಟುಕೊಂಡಿರುವ ಸುದೀಪ್, ಪಾತ್ರವನ್ನೂ ಅಜರಾಮಜರವಾಗಿಸಿದ್ದಾರೆ. ಆ ಚಿತ್ರದ ನೆನಪಿನ ಜೊತೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಸುದೀಪ್ ಬಿಚ್ಚಿಟ್ಟಿದ್ದಾರೆ. ದಬಾಂಗ್ 3 ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸುದೀಪ್, ಹಿಂದಿ ಶೋವೊಂದರಲ್ಲಿ ಈ ಕಥೆ ಹೇಳಿದ್ದಾರೆ.

    ಸುದೀಪ್ ಹುಚ್ಚ ಮಾಡುವುದಕ್ಕೂ ಮೊದಲು ಕೆಲವು ಚಿತ್ರಗಳು ಸೆಟ್ಟೇರಿ ಅರ್ಧಕ್ಕೇ ನಿಂತು ಹೋಗಿದ್ದವು. ಆಗ ಎಲ್ಲರೂ ಅವರನ್ನು ಐರನ್ ಲೆಗ್ ಎನ್ನುತ್ತಿದ್ದರಂತೆ. ಸ್ಪರ್ಶ ಆಗತಾನೇ ಬಂದಿತ್ತು. ಆಗ ಬಂದ ಆಫರ್ ಹುಚ್ಚ ಚಿತ್ರದ್ದು.

    ಆ ಚಿತ್ರದಲ್ಲಿ ಹೀರೋ ತಲೆಬೋಳಿಸಿಕೊಳ್ತಾನೆ. ಅದೊಂದು ಕಾರಣಕ್ಕಾಗಿ ಹಲವರು ಆ ಪಾತ್ರ ಬೇಡ ಎಂದಿದ್ದರAತೆ. ಅದರ ಅರ್ಥ ಬೇರೆಯವರು ರಿಜೆಕ್ಟ್ ಮಾಡಿದ್ದ ಪಾತ್ರ ಅದು.

    ಸಿನಿಮಾ ಶೂಟಿಂಗ್ ವೇಳೆ 3ನೇ ಮಹಡಿಯಿಂದ ಬಿದ್ದು ಮೂಳೆಗೆ ಪೆಟ್ಟು ಮಾಡಿಕೊಂಡು, ಆ ನೋವಿನಲ್ಲೇ ಶೂಟಿಂಗ್ ಮಾಡಿದ್ದರಂತೆ ಸುದೀಪ್.

    ಎಲ್ಲಕ್ಕಿಂತ ದೊಡ್ಡ ಶಾಕಿಂಗ್ ಸ್ಟೋರಿ ಸಿನಿಮಾ ರಿಲೀಸ್ ಆದ ಮೇಲಿನದು. ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಯಲು ಥಿಯೇಟರಿಗೆ ಹೋದ ಸುದೀಪ್‌ಗೆ ಥಿಯೇಟರ್ ಎದುರು ಕಂಡಿದ್ದು ನಾಲ್ಕೇ ನಾಲ್ಕು ಜನ. ಥಿಯೇಟರ್ ಮ್ಯಾನೇಜರ್‌ನ್ನು ಕಂಡು ಮಾತನಾಡಿದಾಗಲೇ ಗೊತ್ತಾಗಿದ್ದು, ಸಿನಿಮಾ ಹೌಸ್‌ಫುಲ್ ಆಗಿದೆ. ಜನರೆಲ್ಲ ಥಿಯೇಟರ್ ಒಳಗಿದ್ದಾರೆ. ಶೋ ಶುರುವಾಗೋಕೆ ಇನ್ನೂ ಟೈಂ ಇದ್ದ ಕಾರಣ, ಹೊರಗೆ ಆ  4 ಜನ ಕಾಯ್ತಿದ್ದಾರೆ ಅನ್ನೋ ಸತ್ಯ.

    ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಕೇಳಿಸಿಕೊಂಡು ಹೊರಬಂದ ಸುದೀಪ್‌ರನ್ನು ಪ್ರೇಕ್ಷಕರೇ ಗುರುತಿಸಿದರು. ಆದರೆ, ಎಷ್ಟೋ ಜನರಿಗೆ ಸುದೀಪ್ ಎಂಬ ಹೆಸರು ಗೊತ್ತಿರಲಿಲ್ಲ. ಹೀಗಾಗಿ ಕಿಚ್ಚ.. ಕಿಚ್ಚ.. ಎಂದೇ ಕೂಗಿದರು. ಸುದೀಪ್ ಕಿಚ್ಚನನ್ನು ಬಿಡಲಿಲ್ಲ.

  • ಮಲ್ಟಿಪ್ಲೆಕ್ಸ್ ವಿವಾದ - ನಿರ್ದೇಶಕ ಪ್ರೇಮ್ ಅಕ್ರೋಶ

    prem expresses his anger against multiplexes

    ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಬುಕಿಂಗ್ ಇಂದಿನಿಂದ ಶುರುವಾಗಲಿದೆ. ಶಿವಣ್ಣ-ಸುದೀಪ್ ಕಾಂಬಿನೇಷನ್‍ನ ಈ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ದೊಡ್ಡ ಬಜೆಟ್ ಚಿತ್ರವೂ ಆಗಿರೋದ್ರಿಂದ ಮಲ್ಟಿಪ್ಲೆಕ್ಸ್‍ಗಳಲ್ಲಿ ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಷೇರು ಬದಲಾವಣೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು ನಿರ್ದೇಶಕ ಪ್ರೇಮ್. ಬೇರೆ ಭಾಷೆಯ ನಿರ್ಮಾಪಕರಿಗೆ ನೀಡುವಂತೆ ಕನ್ನಡ ನಿರ್ಮಾಪಕರಿಗೂ 60:40 ಷೇರು ನೀಡುವಂತೆ ಮನವಿ ಮಾಡಿದ್ದರು. ಈ ಕುರಿತು ಫಿಲಂ ಚೇಂಬರ್‍ನಲ್ಲಿ ಸಭೆಯನ್ನೂ ನಡೆಸಲಾಗಿತ್ತು.

    ಆದರೆ, ಬುಕ್ಕಿಂಗ್ ಶುರುವಾಗುತ್ತಿದ್ದರೂ ಮಲ್ಟಿಪ್ಲೆಕ್ಸ್ ಮಂಡಳಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಸಭೆಯಲ್ಲಿ ಬಹುತೇಕ ಒಪ್ಪಿಕೊಂಡಂತೆ ಕಾಣಿಸಿದ್ದ ಮಲ್ಟಿಪ್ಲೆಕ್ಸ್ ಮಾಲೀಕರು ನಂತರ ಬೇರೆಯೇ ಮಾತನಾಡುತ್ತಿದ್ದಾರೆ. ಈ ಕುರಿತು ಆಕ್ರೋಶಗೊಂಡಿರುವ ನಿರ್ದೇಶಕ ಪ್ರೇಮ್, ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು ಎಂದು ಮನವಿ ಮಾಡಿದ್ದಾರೆ.

  • ಮಾತು ಮುಗಿಸಿದ ಕೋಟಿಗೊಬ್ಬ 3

    jotigobba 3 talkie portion completed

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3ಗೆ ಶಿವ ಕಾರ್ತಿಕ್ ನಿರ್ದೇಶಕ. ಮಡೊನ್ನಾ ಸೆಬಾಸ್ಟಿಯನ್ ನಾಯಕಿಯಾಗಿರುವ ಚಿತ್ರದಲ್ಲಿ ಬಾಲಿವುಡ್‌ನ ಅಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್, ಸುಧಾಂಶು ಪಾಂಡೆ ಮೊದಲಾದ ಸೀನಿಯರ್ ಕಲಾವಿದರೇ ನಟಿಸಿದ್ದಾರೆ.

    ಮಾತಿನ ಭಾಗದ ಎಲ್ಲ ದೃಶ್ಯಗಳ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಬಾಕಿಯಿದೆಯಂತೆ. ಅರ್ಜುನ್ ಜನ್ಯ ಸಂಗೀತದಲ್ಲಿ 3 ಹಾಡುಗಳಿದ್ದು, ಪುದುಚೇರಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ.

  • ಮಾನನಷ್ಟ ಮೊಕದ್ದಮೆ : ಕುಮಾರ್, ಸುರೇಶ್ ವಿರುದ್ಧ ಸುದೀಪ್`ಗೆ ಮುನ್ನಡೆ

    ಮಾನನಷ್ಟ ಮೊಕದ್ದಮೆ : ಕುಮಾರ್, ಸುರೇಶ್ ವಿರುದ್ಧ ಸುದೀಪ್`ಗೆ ಮುನ್ನಡೆ

    ಸಿನಿಮಾದಲ್ಲಿ ನಟಿಸುವುದಾಗಿ ಹೇಳಿ ಏಳೆಂಟು ವರ್ಷಗಳ ಹಿಂದೆ ನಟ ಸುದೀಪ್ ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದು ಸಿನಿಮಾಕ್ಕೆ ಡೇಟ್ ನೀಡಿಲ್ಲ. ಕೋಟ್ಯಂತರ ರೂಪಾಯಿ ಹಣವನ್ನು ಸುದೀಪ್ ಕೊಡಬೇಕಿದೆ ಎಂದು ಆರೋಪಿಸಿದ್ದರು ನಿರ್ಮಾಪಕ ಕುಮಾರ್. ನಿರ್ಮಾಪಕ ಸುರೇಶ್ ಸಹ ಅವರೊಟ್ಟಿಗಿದ್ದರು. ಏಳೆಂಟು ವರ್ಷಗಳ ಹಿಂದೆಯೇ ಸುದೀಪ್ಗೆ ತಾವು 45 ಲಕ್ಷ ಹಣ ನೀಡಿದ್ದಾಗಿ ಹೇಳಿದ್ದರು. ಬೇರೆ ಸಿನಿಮಾಗಳ ನಿರ್ಮಾಣ ಮಾಡಲು ಸಹ ಸುದೀಪ್ ಅಡ್ಡಿ ಆಗಿದ್ದರು ಎಂದು ಸಹ ನಿರ್ಮಾಪಕ ಕುಮಾರ್ ಆರೋಪ ಮಾಡಿದ್ದರು. ಅದಾದ ಮೇಲೆ ವಿವಾದದ ಇತ್ಯರ್ಥಕ್ಕೆ ರವಿಚಂದ್ರನ್ ಬಂದರು. ರವಿಚಂದ್ರನ್ ಅವರ ಮನೆಯಲ್ಲಿ ಒಂದೆರಡು ದಿನ ಸಂಧಾನ ನಡೆಯಿತಾದರೂ, ಫಲಪ್ರದವಾಗಲಿಲ್ಲ.

    ಅದಕ್ಕೂ ಮೊದಲೇ ಕೋರ್ಟಿಗೆ ಹೋಗಿದ್ದ ಸುದೀಪ್ ಅವರಿಗೆ ಈಗ ಮೊದಲ ಮುನ್ನಡೆ ಸಿಕ್ಕಿದೆ. ಇದೀಗ ನ್ಯಾಯಾಲಯವು ನಿರ್ಮಾಪಕರಿಗೆ ಸಮನ್ಸ್ ನೀಡಿದೆ. ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಸುರೇಶ್ ಅವರುಗಳಿಗೆ ಸಮನ್ಸ್ ಜಾರಿ ಮಾಡಿ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಆದೇಶಿಸಿದೆ. ಪ್ರಕರಣ ಕುರಿತಾಗಿ ಆಗಸ್ಟ್ 10ರಂದು ಸುದೀಪ್ ಅವರಿಂದ ಸ್ವಯಂ ಹೇಳಿಕೆಯನ್ನು ದಾಖಲು ಮಾಡಿದ್ದರು. ಹೇಳಿಕೆ ದಾಖಲು ಮಾಡಿಕೊಂಡಿದ್ದ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ, ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲು ಸೂಚಿಸಿದ್ದು ಆಗಸ್ಟ್ 26ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

    Related Articles :-

    ಬಗೆಹರಿದಿಲ್ಲ ವಿವಾದ : ಕೋರ್ಟಿನಲ್ಲಿಯೇ ಇತ್ಯರ್ಥವಾಗಲಿದೆ ಸುದೀಪ್-ಎಂ.ಎನ್.ಕುಮಾರ್, ಎನ್.ಎಂ.ಸುರೇಶ್ ಸಂಘರ್ಷ

  • ಮಿನರ್ವ ಮಿಲ್ ಈಗ ಕಂಪ್ಲೀಟ್ ಕಬ್ಜಾ

    ಮಿನರ್ವ ಮಿಲ್ ಈಗ ಕಂಪ್ಲೀಟ್ ಕಬ್ಜಾ

    ಅಲ್ಲಿ ನೋಡಿದರೆ ಮುಂಬೈ ಗಲ್ಲಿ.. ಇಲ್ಲಿ ನೋಡಿದರೆ ಅದ್ಯಾವುದೋ ಬೀದಿ.. ಅತ್ತ ಕಡೆ ಜೈಲು.. ಇತ್ತ ಕಡೆ ಸೆಲ್ಲು.. ಮಧ್ಯದಲ್ಲೊಂದು ಮೈದಾನ.. ಅಲ್ಲೆಲ್ಲೋ ಒಂದು ದೇವಸ್ಥಾನ.. 80ರ ದಶಕದ ಡಿಸೈನ್ ಡಿಸೈನ್ ಕಾರುಗಳು... ಬಿಡುವೇ ಇಲ್ಲದೆ ದುಡಿಯುತ್ತಿರೋ 300ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರು...

    ಇದೆಲ್ಲವೂ ಕಾಣ್ತಿರೋದು ಮಿನರ್ವ ಮಿಲ್‍ನಲ್ಲಿ. ಉಪೇಂದ್ರ, ಸುದೀಪ್ ಒಟ್ಟಿಗೇ ನಟಿಸುತ್ತಿರುವ ಈ ಚಿತ್ರಕ್ಕೀಗ ಆರ್.ಚಂದ್ರು 40ಕ್ಕೂ ಹೆಚ್ಚು ಸೆಟ್‍ಗಳನ್ನ ಹಾಕಿಸ್ತಿದ್ದಾರೆ.

    ಕೆಜಿಎಫ್ ಸಿನಿಮಾಗೆ ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ್ದ ಶಿವಕುಮಾರ್, ಇಲ್ಲಿ ಅದಕ್ಕಿಂತ ಭಿನ್ನವಾಗಿ ಕಲರ್ ಫುಲ್ ಸೆಟ್ ಹಾಕಿದ್ದಾರೆ.

    ಪ್ಯಾನ್ ಇಂಡಿಯಾ ಸಿನಿಮಾಗೆ ಇಷ್ಟು ದೊಡ್ಡ ಬಜೆಟ್, ಅದ್ಧೂರಿತನ ಬೇಕೇ ಬೇಕು. ಇಲ್ಲಿಯೇ ಸುಮಾರು 80 ದಿನ ಶೂಟಿಂಗ್ ನಡೆಯುತ್ತೆ. ಒಟ್ಟಾರೆ 40 ಸೆಟ್ ಹಾಕಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು.

  • ಮುಚ್ಚಿದ್ದ ಥಿಯೇಟರ್ ಓಪನ್ ಮಾಡಿಸಿದ ಪೈಲ್ವಾನ್..!

    pailwan brings good news to kannada film industry

    ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಥಿಯೇಟರ್ ಜಾಗ ಮಾಲ್ಗಳಾಗಿವೆ. ಮಲ್ಟಿಪ್ಲೆಕ್ಸುಗಳಾಗಿವೆ. ಅತ್ತ ಗ್ರಾಮೀಣ ಪ್ರದೇಶಕ್ಕೆ ಹೋದರೆ.. ಅಲ್ಲಿ ಇನ್ನೊಂದು ಸಮಸ್ಯೆ. ಕೆಲವು ಚಿತ್ರಮಂದಿರಗಳು ಬೇರೇನೂ ಮಾಡಲು ಸಾಧ್ಯವಾಗದೆ ಬಾಗಿಲು ಮುಚ್ಚುತ್ತಿವೆ. ಗಡಿ ಭಾಗದಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರುಗಳೇ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೂ ಪೈಲ್ವಾನ್ ಉತ್ತರ ಕೊಟ್ಟಿದೆ.

    ಗ್ರಾಮೀಣ ಭಾಗದಲ್ಲಿ ಮುಚ್ಚಲ್ಪಟ್ಟಿದ್ದ ಕೆಲವು ಚಿತ್ರಮಂದಿರಗಳು ಪೈಲ್ವಾನ್ ಚಿತ್ರಕ್ಕಾಗಿ ರೀ-ಓಪನ್ ಆಗಿವೆ. ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ವಿತರಕ ಕಾರ್ತಿಕ್ ಗೌಡ. ಹೈದರಾಬಾದ್ ಕರ್ನಾಟಕ, ಕೋಲಾರದಲ್ಲಿ ಕೆಲವು ಚಿತ್ರಮಂದಿರಗಳು ಪೈಲ್ವಾನನಿಗಾಗಿ ಮತ್ತೆ ಬಾಗಿಲು ತೆರೆದಿವೆ. ಅದರಲ್ಲೂ ಗ್ರಾಮೀಣ ಪ್ರದೇಶಧ ‘ಸಿ' ಸೆಂಟರ್ ಟಾಕೀಸುಗಳು ಮತ್ತೆ ಪ್ರದರ್ಶನ ಆರಂಭಿಸಿವೆ.

    ಪೈಲ್ವಾನ್ ಮಾದರಿಯ ಇನ್ನೂ ಹಲವು ಚಿತ್ರಮಂದಿರಗಳು ಬಂದರೆ ಚಿತ್ರರಂಗಕ್ಕೆ ಖಂಡಿತಾ ಶುಭ ಸೂಚನೆಯಾಗಲಿದೆ. ಪೈಲ್ವಾನ್ 5 ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದ್ದು, 3000ಕ್ಕೂ ಹೆಚ್ಚು ಸೆಂಟರ್ನಲ್ಲಿ ಶೋ ಇವೆ. ಸ್ವಪ್ನಾ ಕೃಷ್ಣ ನಿರ್ಮಾಣದ ಪೈಲ್ವಾನ್ಗೆ ಹೆಬ್ಬುಲಿ ಕೃಷ್ಣ ನಿರ್ದೇಶಕ.

  • ಮುದ್ದಿನ ಸೊಸೆಗೆ ಕಿಚ್ಚನ ಕಾಣಿಕೆ

    kichcha sudeep gists his neice a jeep

    ಕಿಚ್ಚ ಸುದೀಪ್ ತಮ್ಮ ಜೀವನದಲ್ಲಿ ತಾಯಿಯಷ್ಟೇ ಗೌರವಿಸುವ ವ್ಯಕ್ತಿ ಅವರ ಅಕ್ಕ ಸುಜಾತ. ಸುಜಾತ ಅವರ ಮಗಳು ಶ್ರೇಯಾಗೆ ಈ ಬಾರಿ ಕಿಚ್ಚ ಸುದೀಪ್ ಒಂದು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಅದು ಕಪ್ಪು ಬಣ್ಣದ ಜೀಪ್.

    ಅಕ್ಕನ ಮಗಳನ್ನು ತಮ್ಮ ಮಗಳಂತೆಯೇ ಪ್ರೀತಿಸುವ ಸುದೀಪ್, ಈ ಬಾರಿ ಮುದ್ದಿನ ಸೊಸೆಗೆ ದೊಡ್ಡ ಕಾಣಿಕೆಯನ್ನೇ ಕೊಟ್ಟಿದ್ದಾರೆ. ಮೊದ ಮೊದಲು ಇದನ್ನು ಸುದೀಪ್ ತಮಗಾಗಿ ಖರೀದಿಸಿದ ಹೊಸ ಜೀಪ್ ಎನ್ನಲಾಗಿತ್ತು. ಆದರೆ, ಅಂತಹ ಕ್ರೇಜ್‍ಗಳಿಂದ ಸ್ವಲ್ಪ ಸ್ವಲ್ಪವೇ ದೂರವಾಗುತ್ತಿರುವ ಸುದೀಪ್, ಈ ಬಾರಿ ಅಕ್ಕನ ಮಗಳಿಗೆ ಉಡುಗೊರೆ ಕೊಟ್ಟಿರುವುದು ವಿಶೇಷ.

  • ಮುಂಬೈನಲ್ಲಿ ಮತ್ತೊಮ್ಮೆ ಸುದೀಪ್ ಕನ್ನಡ ಡಿಂಡಿಮ

    ಮುಂಬೈನಲ್ಲಿ ಮತ್ತೊಮ್ಮೆ ಸುದೀಪ್ ಕನ್ನಡ ಡಿಂಡಿಮ

    ಕಿಚ್ಚ ಸುದೀಪ್ ಕನ್ನಡದ ಹೆಮ್ಮೆಯ ನಟ. ಎಲ್ಲಿಯೇ ಹೋದರು ಕನ್ನಡತನವನ್ನಂತೂ ಬಿಡುವುದಿಲ್ಲ. ಇತ್ತೀಚೆಗೆ ಕನ್ನಡದ ವಿಷಯಕ್ಕೆ ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅವರಿಗೆ ಕನ್ನಡದ ಪಾಠ ಮಾಡಿದ್ದ ಸುದೀಪ್, ಹಿಂದಿಯ ಟಿವಿ ಶೋವೊಂದರಲ್ಲಿ ಕನ್ನಡ್ ಎಂದ ನಿರೂಪಕಿಗೆ ಕನ್ನಡ್ ಅಲ್ಲ, ಅದು ಕನ್ನಡ ಎಂದು ತಿದ್ದಿ ಹೇಳಿದ್ದರು. ಇದೀಗ ಮುಂಬೈನಲ್ಲಿ ಮತ್ತೊಮ್ಮೆ ಕನ್ನಡ ಡಿಂಡಿಮ ಮೊಳಗಿಸಿದ್ದಾರೆ. ಕಬ್ಜ ಪ್ರೀ ರಿಲೀಸ್ ಈವೆಂಟ್‍ನಲ್ಲಿ.

    ಉಪೇಂದ್ರ, ಸುದೀಪ್, ಶಿವಣ್ಣ ಅಭಿನಯದ ಕಬ್ಜ ಚಿತ್ರದ ಪ್ರೀ-ರಿಲೀಸ್ ಈವೆಂಟ್‍ನಲ್ಲಿ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಆರ್ ಚಂದ್ರು ಸುದೀಪ್, ಉಪೇಂದ್ರ, ಶಿವಣ್ಣ ಅವರ ಅಭಿಮಾನಿ ನಾನು. ಅವರೊಟ್ಟಿಗೆ ಒಂದು ಫೋಟೊ ತೆಗೆದುಕೊಂಡರೆ ಸಾಕು ಎಂದುಕೊಂಡಿದ್ದವನು ನಾನು ಆದರೆ ಅವರು ಕೊಟ್ಟಂತಹಾ ಪ್ರೀತಿ, ನನ್ನ ಮೇಲಿಟ್ಟ ವಿಶ್ವಾಸದಿಂದಲೇ ಕಬ್ಜ ಸಿನಿಮಾ ಆಗಿದೆ. ಕಬ್ಜ’ ಸಿನಿಮಾವನ್ನು ನಾನು ಮಾಡಿದ್ದಲ್ಲ. ಯಾವುದೋ ಒಂದು ಶಕ್ತಿ ನನ್ನಿಂದ ಈ ಸಿನಿಮಾವನ್ನು ಮಾಡಿಸಿದೆ. ಇಷ್ಟು ದೊಡ್ಡ ಸ್ಟಾರ್ಗಳು ಅಲ್ಲಿಂದ ಇಲ್ಲಿಯವರೆಗೆ ಬಂದು ಬೆಂಬಲಿಸುತ್ತಿರುವುದು ಪುಣ್ಯ. 17 ರಂದು ಸಿನಿಮಾ ಬಿಡುಗಡೆ ಆದ ಮೇಲೆ ನಾನು ಮಾತನಾಡುತ್ತೀನಿ. ಕಬ್ಜ ಸಿನಿಮಾ ನಾನೊಬ್ಬನೆ ಮಾಡಿದ್ದಲ್ಲ. ಇದೊಂದು ಟೀಂ ವರ್ಕ್. ನಟರು, ತಂತ್ರಜ್ಞರು ಸೇರಿ ಮಾಡಿದ ಸಿನಿಮಾ ಎಂದರು. ತಕ್ಷಣ ಮೈಕ್ ತೆಗೆದುಕೊಂಡ ಸುದೀಪ್ ಇವರ ಮಾತನ್ನು ನಾನು ತರ್ಜುಮೆ ಮಾಡುತ್ತೇನೆ ಎಂದು ಹೇಳಿ, ಇವರು ಬಹಳ ವಿಶಾಲ ಅರ್ಥದಲ್ಲಿ ಹೇಳಿದ್ದೇನೆಂದರೆ ಬೇಗ ಕನ್ನಡ ಕಲಿಯಿರಿ ಎನ್ನುವ ಮೂಲಕ ಕನ್ನಡ ಡಿಂಡಿಮ ಮೊಳಗಿಸಿದರು.

    ಮೊದಲೆಲ್ಲ ಹೀಗಿರಲಿಲ್ಲ. ಬೇರೆ ಭಾಷೆಯವರು ಅಲ್ಲಿನ ವೇದಿಕೆಗಳಲ್ಲಿ ಏನೇ ಎಡವಟ್ಟು ಮಾಡಿದರೂ ಸಹಿಸಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಹಾಗಿಲ್ಲ. ಕೆಜಿಎಫ್ ಈವೆಂಟ್‍ನಲ್ಲಿ ತೆಲುಗು ನಿರ್ಮಾಪಕರೊಬ್ಬರು ಕೆಜಿಎಫ್ ಬಂದ ಮೇಲೆ ಕನ್ನಡ ಚಿತ್ರರಂಗದ ಗೊತ್ತಾಯ್ತು ಎಂಬ ಅರ್ಥದಲ್ಲಿ ಮಾತನಾಡಿದಾಗ ವೇದಿಕೆಯಲ್ಲೇ ಯಶ್ ತಿದ್ದಿದ್ದರು. ತಮ್ಮದೇ ಚಿತ್ರವನ್ನು ವಿತರಣೆ ಮಾಡುತ್ತಿದ್ದವರಿಗೆ ಕನ್ನಡ ಚಿತ್ರರಂಗ ಬೆಳೆಸಿದ್ದು ನಾವಲ್ಲ. ಹಿಂದೆಯೂ ಒಳ್ಳೆಯ ಚಿತ್ರಗಳಿದ್ದವು ಎಂದಿದ್ದರು. ಸುದೀಪ್ ವಿಷಯವಂತೂ ಬೇರೆಯದೇ. ಬೇರೆ ಭಾಷೆಯ ನಟರಿಗೂ ಕನ್ನಡ ಕಲಿಸಿದ್ದು ಸುದೀಪ್ ಸಾಧನೆ. ಉಪೇಂದ್ರ, ದುನಿಯಾ ವಿಜಯ್, ಇದೀಗ ಬೇರೆ ಭಾಷೆಗೂ ಮುಖ ಮಾಡಿರುವ ಶಿವಣ್ಣ ಸೇರಿದಂತೆ ಎಲ್ಲರೂ ಈಗ ಕನ್ನಡವನ್ನು ಹೆಮ್ಮೆಯ ಭಾಷೆ ಎಂದು ಎದೆಯುಬ್ಬಿಸಿ ಹೇಳುತ್ತಿದ್ದಾರೆ.

  • ಮುಮ್ಮಟ್ಟಿ ಜೊತೆ ಸುದೀಪ್

    sudeep ready to act with mamoothy

    ಕಿಚ್ಚ ಸುದೀಪ್, ಪರಭಾಷೆಯ ಚಿತ್ರಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈಗವರು ಮುಮ್ಮಟ್ಟಿ ಜೊತೆ ಮಲಯಾಳಂ ಚಿತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ. ಅದು ಐತಿಹಾಸಿಕ ಕಥೆ. ಮಮಂಗಮ್ ಮೇಳ ಅನ್ನೋ ಮಧ್ಯಕಾಲೀನ ಯುಗದ ಸಮರಕಲೆಯನ್ನಾಧರಿಸಿದ ಕಥೆ. ಝಾಮೊರಿನ್ ದೊರೆಗಳ ವಿರುದ್ಧ ಹೋರಾಡುವ ಯೋಧನ ಕಥೆ. ಚಿತ್ರದ ಹೀರೋ ಮುಮ್ಮಟ್ಟಿ. 

    ಇದು ಮಲಯಾಳಂನಲ್ಲಷ್ಟೇ ಬರುತ್ತಿಲ್ಲ. ಎಲ್ಲ ಭಾಷೆಯಲ್ಲೂ ಬರುತ್ತಿದೆ. ಅಡೂರು ಗೋಪಾಲಕೃಷ್ಣನ್ ಅವರ ಬಳಿ ಸಹನಿರ್ದೇಶಕರಾಗಿದ್ದ ಸಂಜೀವ್ ಪಿಳ್ಳೈ ಚಿತ್ರಕ್ಕೆ ನಿರ್ದೇಶಕ.

    ಬಾಹುಬಲಿ ಚಿತ್ರಕ್ಕೆ ಕೆಲಸ ಮಾಡಿದ್ದ ಕೈಚಾ, ಈ ಚಿತ್ರಕ್ಕೆ ಕೊರಿಯಾಗ್ರಾಫರ್. ಬಹುಭಾಷೆಯಲ್ಲಿ ಬರುತ್ತಿರುವ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಮುಮ್ಮಡಿ ಚುಲ್‍ಬುಲ್ ಪಾಂಡೆಗೆ ಕಿಚ್ಚನೇ ಎದುರಾಳಿ..!

    sudeep all set to fight chulbul pandey

    ದಬಂಗ್ ಮತ್ತೊಮ್ಮೆ ಬರುತ್ತಿದೆ. ಅದೇ ಸಲ್ಮಾನ್ ಖಾನ್, ಚುಲ್‍ಬುಲ್ ಪಾಂಡೆಯಾಗಿ ಬರುತ್ತಿದ್ದಾರೆ. ಈ ಬಾರಿ ಚುಲ್‍ಬುಲ್ ಪಾಂಡೆಗೆ ಸ್ಟಾರ್ಟ್.. ಕ್ಯಾಮೆರಾ.. ಆ್ಯಕ್ಷನ್ ಎನ್ನುತ್ತಿರುವುದು ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ. ಈ ಬಾರಿ ಚುಲ್‍ಬುಲ್ ಪಾಂಡೆಗೆ ಸವಾಲು ಹಾಕೋಕೆ ರೆಡಿಯಾಗಿರುವುದು ನಮ್ಮ ಕಿಚ್ಚ ಸುದೀಪ್.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಟೈಗರ್ ಜಿಂದಾ ಹೈ ಚಿತ್ರದಲ್ಲೇ ಸಲ್ಮಾನ್ ಜೊತೆ ಸುದೀಪ್ ನಟಿಸಬೇಕಿತ್ತು. ಅದು ಈಗ ದಬಂಗ್ 3 ಮೂಲಕ ಈಡೇರುತ್ತಿದೆ. ನಿರ್ದೇಶಕ ಪ್ರಭುದೇವ ಈಗಾಗಲೇ ಸುದೀಪ್ ಅವರಿಗೆ ಕಥೆ, ಪಾತ್ರದ ಕುರಿತು ವಿವರ ಕೊಟ್ಟಿದ್ದಾರಂತೆ. ಸುದೀಪ್ ಕೂಡಾ ಓಕೆ ಎಂದಿದ್ದಾರೆ.

    ಒಂದು ಸುತ್ತಿನ ಮಾತುಕತೆ ನಡೆದಿದೆ. ಆದರೆ, ಅಧಿಕೃತವಾಗಿ ಇನ್ನೂ ಫೈನಲ್ ಆಗಿಲ್ಲ. ನಾನು ಯೆಸ್ ಎಂದಿರುವುದು ನಿಜ ಎಂದಿದ್ದಾರೆ ಸುದೀಪ್.ಬಹುಶಃ ಏಪ್ರಿಲ್‍ನಲ್ಲಿ ದಬಂಗ್ 3 ಶುರುವಾಗೋ ಚಾನ್ಸ್ ಇದೆ.