` kiccha sudeepa - chitraloka.com | Kannada Movie News, Reviews | Image

kiccha sudeepa

  • ನಾಳೆಯಿಂದ ಅಂಬಿ ನಿಂಗ್ ವಯಸ್ಸಾಯ್ತೋ..

    ambi ninge vaisaitho to release tomorrow in abroad

    ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರ (ಕುರುಕ್ಷೇತ್ರ ಇನ್ನೂ ಬಿಡುಗಡೆಯಾಗಿಲ್ಲ) ಅಂಬಿ ನಿಂಗ್ ವಯಸ್ಸಾಯ್ತೋ.. ನಾಳೆ ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಅಂಬರೀಷ್ ನಿಧನದ ಬೆನ್ನಲ್ಲೇ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡೋದಾಗಿ ಹೇಳಿದ್ದ ನಿರ್ಮಾಪಕ ಜಾಕ್ ಮಂಜು, ವಿದೇಶಗಳಲ್ಲಿಯೇ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ. 

    ಕೆನಡಾದ ಅಟ್ಲಾಂಟಾ, ಮಿಲ್ಪಿಟಾಸ್, ಐರ್ಲೆಂಡ್,ಅಮೆರಿಕದ ಚಿಕಾಗೋ, ಡಲ್ಲಾಸ್ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.ಸೀಟಲ್, ಸ್ಯಾಂಡಿಯಾಗೋ, ತಂಪಾ, ಲಾಸ್‍ಏಂಜಲೀಸ್, ಸ್ಯಾನ್‍ಜೋಸ್‍ಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.

    ಇನ್ನೊಂದು ವಿಶೇಷವೆಂದರೆ, ಈ ಪ್ರದರ್ಶನದಿಂದ ಬರುವ ಸಂಪೂರ್ಣ ಲಾಭಾಂಶ ಅಂಬರೀಷ್ ನಿಧನರಾದ ದಿನವೇ ಮಂಡ್ಯದಲ್ಲಿನ ಕನಗನ ಮರಡಿ  ಬಸ್  ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಲು ಚಿತ್ರತಂಡ ನಿರ್ಧರಿಸಿದೆ.

  • ನಿರ್ದೇಶಕರಿಗೆ ಅಂಬಿಯೇ ಧೈರ್ಯ ತುಂಬಿದ್ದರು..!

    ambi talks about ambi ninge vaiaitho

    ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ, ಅಂಬರೀಷ್‍ರ ವಯಸ್ಸಿನ ಅರ್ಧಕ್ಕಿಂತ ಚಿಕ್ಕ ವಯಸ್ಸಿನ ಹುಡುಗ. ಸುದೀಪ್ ಅಂಬರೀಷ್ ಬಳಿ `ಮಾಮ, ನನ್ನ ಬಳಿ ಒಬ್ಬ ಹುಡುಗ ಇದ್ದಾನೆ. ತುಂಭಾ ಟ್ಯಾಲೆಂಟೆಡ್ ಫೆಲೋ. ನೋಡಿದ್ರೆ ಚಿಕ್ಕ ಹುಡುಗನ ಥರಾ ಕಾಣ್ತಾನೆ. ಆದರೆ ಒಳ್ಳೆಯ ಕೆಲಸಗಾರ' ಎಂದು ಹೇಳಿ ಗುರುದತ್‍ನನ್ನು ಕಳಿಸಿಕೊಟ್ಟಿದ್ದರಂತೆ. ಮೇಲಿಂದ ಕೆಳಗೆ ನೋಡಿದ ಅಂಬರೀಷ್, ಇವನ್ಯಾರೋ.. ಒಳ್ಳೆ ಮಗು ಥರಾ ಇದ್ದಾನೆ. ಹೇಗಪ್ಪ ಎಂದುಕೊಂಡಿದ್ದರಂತೆ.

    ಮೊದಲನೇ ದಿನ ಸೆಟ್‍ಗೆ ಹೋದರೆ, ಏನಾದರೂ ಹೇಳಿಕೊಳ್ಳೋಕೂ ಹೆದರುತ್ತಿದ್ದ ಹುಡುಗನಿಗೆ ನಂತರ ಅಂಬರೀಷ್ ಅವರೇ ಧೈರ್ಯ ಹೇಳಿದ್ರಂತೆ. ಡೈರೆಕ್ಟರೇ.. ಹೆದರಿಕೊಳ್ಳಬೇಡಿ. ನಾನು ಹೊರಗೆ ಮಾತ್ರ ಅಂಬರೀಷ್. ಸೆಟ್‍ನಲ್ಲಿ ಡೈರೆಕ್ಟರ್ ಹೇಳಿದಂತೆ ಕೇಳುವ ನಟ ಅಷ್ಟೆ ಎಂದು ಧೈರ್ಯ ತುಂಬಿದರಂತೆ. ಅದಾದ ಮೇಲೆ ಸರಿ ಹೋಯ್ತು ಎಂದು ಹೇಳಿಕೊಂಡಿದ್ದಾರೆ ಅಂಬಿ. ಎಷ್ಟೆಂದರೂ ಪುಟ್ಟಣ್ಣ ಗರಡಿಯಲ್ಲಿ ಬೆಳೆದವರು. ನಿರ್ದೇಶಕರನ್ನು ಗೌರವಿಸುವ ಗುಣ, ಸಹಜವಾಗಿಯೇ ಬಂದಿದೆ.

    ಅಷ್ಟೇ ಅಲ್ಲ, ದಿಲೀಪ್ ರಾಜ್‍ಗೆ ಚಿತ್ರದಲ್ಲಿ ಅಂಬರೀಷ್‍ರನ್ನು ಬೈಯ್ಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ಮಾಡೋಕೆ ಹೆದರುತ್ತಿದ್ದ ದಿಲೀಪ್ ರಾಜ್‍ಗೆ `ನೀನು ಬೈತಿರೋದು ಅಂಬರೀಷ್‍ಗೆ ಅಲ್ಲ, ಸಿನಿಮಾದಲ್ಲಿರೋ ಅಂಬಿಯ ಪಾತ್ರಕ್ಕೆ' ಎಂದು ಹೇಳಿ ಧೈರ್ಯ ತುಂಬಿದರಂತೆ.

    ಹೀಗೆ ಕಿರಿಯರ ಜೊತೆ ಪ್ರೀತಿಯಿಂದ ಕೆಲಸ ಮಾಡಿಸಿ ತಂದಿರುವ ಸಿನಿಮಾ ಈಗ ಥಿಯೇಟರಿನಲ್ಲಿದೆ. ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುದೀಪ್ ನಿರ್ಮಾಪಕರೂ ಹೌದು. ಕಲಾವಿದರೂ ಹೌದು. ಶೃತಿ ಹರಿಹರನ್, ಯಂಗ್ ಸುಹಾಸಿನಿಯಾಗಿ ನಟಿಸಿದ್ದಾರೆ. 

    ನನ್ನ ವಯಸ್ಸಿಗೆ ತಕ್ಕಂತೆ ಕಥೆ, ಸ್ಕ್ರಿಪ್ಟ್ ಬಂದರೆ ನಟಿಸೋಕೆ ಸಿದ್ಧ ಎಂದಿರೋ ಅಂಬರೀಷ್, ಹೊಸ ಪ್ರತಿಭೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನಿರ್ಮಾಪಕರ ಪಾಲಿಗೆ ಹೀರೋ ಆಗ್ತಾನಾ ವಿಲನ್..?

    the villain demands more share from multiplex

    ದಿ ವಿಲನ್ ಚಿತ್ರ, ಕನ್ನಡ ಚಿತ್ರರಂಗದ ಎಲ್ಲ ನಿರ್ಮಾಪಕರ ಪಾಲಿಗೆ ಹೀರೋ ಆಗುತ್ತಾ..? ಅಂಥದ್ದೊಂದು ಚರ್ಚೆಗೆ ನಾಂದಿ ಹಾಡಿದೆ ವಿಲನ್ ಸಿನಿಮಾ. ದಿ ವಿಲನ್ ಚಿತ್ರ ಅಕ್ಟೋಬರ್ 18ಕ್ಕೆ ಬಿಡುಗಡೆಯಾಗುತ್ತಿದ್ದು, ಮಲ್ಟಿಪ್ಲೆಕ್ಸ್‍ಗಳು ಸಿನಿಮಾ ಲಾಭಾಂಶದ ಷೇರ್‍ನ್ನು 50:50 ಅನುಪಾತಕ್ಕಿಂತ ಹೆಚ್ಚು ಕೊಡುವಂತೆ ಚಿತ್ರ ತಂಡ ಫಿಲಂ ಚೇಂಬರ್‍ಗೆ ಮನವಿ ಮಾಡಿದೆ.

    ಈಗ ಇರುವ ನಿಯಮಗಳ ಪ್ರಕಾರ, ಮಲ್ಟಿಪ್ಲೆಕ್ಸ್‍ಗಳು ಸಿನಿಮಾ ಪ್ರದರ್ಶನದಿಂದ ಲಾಭದಲ್ಲಿ ನಿರ್ಮಾಪಕರಿಗೆ ಶೇ.50ರಷ್ಟು ಮೊತ್ತ ನೀಡಿ, ಉಳಿದ ಶೇ.50ರಷ್ಟನ್ನು ತಾವು ಪಡೆದುಕೊಳ್ಳುತ್ತಿವೆ. ಇರಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ನಷ್ಟವೇ ಹೆಚ್ಚು ಅನ್ನುವುದು ದಿ ವಿಲನ್ ತಂಡದ ವಾದ. ಅಲ್ಲದೆ ಆಂಧ್ರಪ್ರದೇಶದಲ್ಲಿ ನಿರ್ಮಾಪಕರಿಗೆ ಶೇ.55 ಮತ್ತು ಮಲ್ಟಿಪ್ಲೆಕ್ಸ್‍ನವರಿಗೆ ಶೆ.45 ಲಾಭಾಂಶ ಹಂಚಿಕೆ ಸೂತ್ರವಿದೆ. ಕರ್ನಾಟಕದಲ್ಲಿ 60:40 ಹಂಚಿಕೆ ಸೂತ್ರ ಮಾಡುವಂತೆ ಚಿತ್ರತಂಡ ಮನವಿ ಮಾಡಿದೆ.

    ಈ ಕುರಿತು ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ. ಮಲ್ಟಿಪ್ಲೆಕ್ಸ್ ಮಾಲೀಕರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಸಭೆಯಲ್ಲಿ ನಿರ್ದೇಶಕ ಪ್ರೇಮ್, ನಿರ್ಮಾಪಕರು ಮತ್ತು ವಿತರಕರೂ ಆಗಿರುವ ಜಾಕ್ ಮಂಜು, ಜಯಣ್ಣ, ಕೆ.ಮಂಜು, ರಮೇಶ್ ಯಾದವ್, ಎನ್.ಕುಮಾರ್ ಮೊದಲಾದವರು ಭಾಗವಹಿಸಿದ್ದರು.

  • ನೇಪಾಳ, ಭೂತಾನ್‍ಗೂ ಪೈಲ್ವಾನ್..!

    pailwan to release in nepal and bhutan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಏಕಕಾಲಕ್ಕೆ ಇಂಡಿಯಾ ಹಾಗೂ ಹೊರದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಈ ಬಾರಿಯ ವಿಶೇಷವೆಂದರೆ, ಪಕ್ಕದ ನೇಪಾಳ ಹಾಗೂ ಭೂತಾನ್‍ನಲ್ಲೂ ಸಿನಿಮಾ ರಿಲೀಸ್ ಆಗುತ್ತಿರುವುದು. ಇಡೀ ಉತ್ತರ ಭಾರತದ ಕನ್ನಡೇತರ ಪೈಲ್ವಾನ್ ಡಿಸ್ಟ್ರಿಬ್ಯೂಷನ್ ಹೊಣೆಯನ್ನು ಜೀ ಸ್ಟುಡಿಯೋಸ್ ಹೊತ್ತುಕೊಂಡಿದ್ದರೆ, ಕನ್ನಡದ ಪೈಲ್ವಾನ್ ವಿತರಣೆ ಹೊಣೆಯನ್ನು ಕೆಆರ್‍ಜಿ ಸ್ಟುಡಿಯೋಸ್ ನಿರ್ವಹಣೆ ಮಾಡುತ್ತಿದೆ. ಜೀ ಸ್ಟುಡಿಯೋಸ್‍ನವರೇ ಚಿತ್ರವನ್ನು ನೇಪಾಳ ಹಾಗೂ ಭೂತಾನ್‍ಗೆ ಒಯ್ಯುತ್ತಿದ್ದಾರೆ.

    `ನನ್ನ ಕುಟುಂಬ ಈಗ ಇನ್ನಷ್ಟು ದೊಡ್ಡದಾಗುತ್ತಿದೆ. ನಮ್ಮ ಸಿನಿಮಾದಲ್ಲಿ ಯೂನಿವರ್ಸಲ್ ಸಬ್ಜೆಕ್ಟ್ ಇದೆ. ಜವಾಬ್ದಾರಿಯೂ ಹೆಚ್ಚಿದೆ' ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಕೃಷ್ಣ.

    ಪೈಲ್ವಾನ್ ಬಹುತೇಕ ಆಗಸ್ಟ್ 29ರಂದು ರಿಲೀಸ್ ಆಗುವ ಪ್ಲಾನ್ ಮಾಡಿಕೊಂಡಿದ್ದು, ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಸೌದಿ ರಾಷ್ಟ್ರಗಳು, ಆಫ್ರಿಕಾ.. ಹೀಗೆ ವಿದೇಶಗಳಲ್ಲಿಯೂ ತೆರೆ ಕಾಣಲಿದೆ.

  • ನೈಟಿ ಹಾಕ್ಕೊಬೇಡ ಮೇನಕ.. ಕಿಚ್ಚ ಹಾಡವ್ರೆ ರೆಡಿಯಾಗಿ ಕೇಳಲಿಕ್ಕ..

    sudeep to sing a song for krishna talkies

    ಕಿಚ್ಚ ಸುದೀಪ್ ಒಳ್ಳೆಯ ನಟ, ಅಡುಗೆ ಭಟ್ಟ ಅಷ್ಟೇ ಅಲ್ಲ, ಸಿಂಗರ್. ಗಿಟಾರ್ ವಾದಕ. ಈಗ ಕೃಷ್ಣ ಟಾಕೀಸ್ ಚಿತ್ರದಲ್ಲಿ ಹಾಡೊಂದನ್ನು ಹಾಡಲು ರೆಡಿಯಾಗಿದ್ದಾರೆ. `ನೈಟಿ ಮಾತ್ರ ಹಾಕ್ಕೊಬೇಡ ಮೇನಕ.. ನಮಗೆ ನೈಂಟಿ ಹೊಡದಂಗಾಗ್ತದೆ ಜೀವಕ.. ಅನ್ನೋ ಹಾಡಿದು.

    ಪ್ರಮೋದ್ ಮರವಂತೆ, ಅಭಿ ಎಸ್. ಬರೆದಿರುವ ಹಾಡಿದು. ಈಗಾಗಲೇ ಹಾಡಿನ ಶೂಟಿಂಗ್ ಆಗಿದೆ. ಸುದೀಪ್ ಕೂಡಾ ಶ್ರೀಧರ್ ಸಂಭ್ರಮ್ ಕಳಿಸಿದ್ದ ಹಾಡಿನ ಟ್ರಾö್ಯಕ್ ಕೇಳಿ ಇಷ್ಟಪಟ್ಟು ಹಾಡಲು ಓಕೆ ಎಂದಿದ್ದಾರೆ.

    ಕೃಷ್ಣ ಅಜೇಯ್ ರಾವ್, ಸಂಜನಾ ಆನಂದ್ ನಟಿಸುತ್ತಿರುವ ಚಿತ್ರಕ್ಕೆ ವಿಜಯ್ ಆನಂದ್ ನಿರ್ದೇಶಕ. ಗೋವಿಂದ ರಾಜು ನಿರ್ಮಾಪಕ.

  • ಪಟಾಕಿ ಪೋರಿಯೋ.. ಕೋಟಿಗೊಬ್ಬನ ಚಕೋರಿಯೋ..

    Kotgobba 3 'Pataki' Special

    ಪಟಾಕಿ ಪೋರಿಯೋ.. ನಾಟಿ ನಾಟಿ ಚೋರಿಯೋ.. ಡಬಲ್ ಬ್ಯಾರಲ್ ಕೋವಿಯೋ.. ಎಂದು ಬರೋ ಹಾಡು.. ಪಡ್ಡೆಗಳ ಎದೆಯೊಳಗೆ ಬುಲೆಟ್ಟ್ ಇಟ್ಟಂತಾಗಿಬಿಟ್ಟಿದೆ. ವಿಜಯ್ ಪ್ರಕಾಶ್ ಮತ್ತು ಅನುರಾಧಾ ಭಟ್ ಧ್ವನಿ, ಕಿಚ್ಚ ಸುದೀಪ್ ಮತ್ತು ಅಶಿಕಾ ರಂಗನಾಥ್ ಮೋಷನ್ ಫೋಟೋಗಳು, ಅರ್ಜುನ್ ಜನ್ಯಾರ ಕಿಕ್ಕು ಕೊಡೋ ಮ್ಯೂಸಿಕ್ಕಿನ.. ಉಪ್ಪು.. ಹುಳಿ.. ಖಾರ ಹೆಚ್ಚಿಸೋದು ಅನೂಪ್ ಭಂಡಾರಿಯವರ ಸಾಹಿತ್ಯ.

    ಸೂರಪ್ಪ ಬಾಬು ಪ್ರೊಡಕ್ಷನ್, ಶಿವ ಕಾರ್ತಿನ್ ಡೈರೆಕ್ಷನ್ ಇರೋ ಕೋಟಿಗೊಬ್ಬ 3 ಚಿತ್ರದ ಪೆಪ್ಪಿ ಸಾಂಗ್ ಇದು. ಈ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್, ರವಿಶಂಕರ್, ಅಫ್ತಾಬ್ ಶಿವದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿದ್ದಾರೆ.

  • ಪಿಎಸ್ ನಿರ್ಮಾಣ ಸಂಸ್ಥೆ ಜೊತೆ ಕಿಚ್ಚನ ಹೊಸ ಸಾಹಸ

    ಪಿಎಸ್ ನಿರ್ಮಾಣ ಸಂಸ್ಥೆ ಜೊತೆ ಕಿಚ್ಚನ ಹೊಸ ಸಾಹಸ

    ವಿಕ್ರಾಂತ್ ರೋಣ ಸೂಪರ್ ಹಿಟ್ ಆದ ನಂತರ ಕಿಚ್ಚ ಸುದೀಪ್ ಮುಂದೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸುದೀಪ್ ಮುಂದಿನ ಚಿತ್ರ ಯಾವುದಿರಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರೆ.. ಅತ್ತ ಬಿಗ್ ಬಾಸ್ ನಿರೂಪಣೆ, ಫ್ಯಾಮಿಲಿ ಜೊತೆ ಪ್ರವಾಸ ಮತ್ತು ತೀರ್ಥಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ ಕಿಚ್ಚ ಸುದೀಪ್. ಅಫ್‍ಕೋರ್ಸ್, ಎಂದಿನಂತೆ ಹಲವು ಕಥೆ ಕೇಳುತ್ತಿದ್ದರೂ.. ಸಮಾಧಾನವಾದಂತಿಲ್ಲ. ಆದರೆ ಈಗ ಗುಡ್ ನ್ಯೂಸ್ ಒಂದು ತಮಿಳು ಚಿತ್ರರಂಗದಿಂದ ಬಂದಿದೆ. ಕಿಚ್ಚ ಸುದೀಪ್ ಹೊಸ ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಅದೂ ಲೈಕಾ ಸಂಸ್ಥೆ ಜೊತೆಗೆ.

    ರಜನಿಕಾಂತ್, ಕಮಲ್ ಹಾಸನ್, ಅಜಿತ್, ವಿಜಯ್, ಅಕ್ಷಯ್ ಕುಮಾರ್, ಐಶ್ವರ್ಯಾ ರೈ.. ಮೊದಲಾದವರಿಗೆ ಸಿನಿಮಾ ಮಾಡಿದ್ದ ಲೈಕಾ ಸಂಸ್ಥೆ ಜೊತೆ ಸುದೀಪ್ ಸಿನಿಮಾ ಒಪ್ಪಿಕೊಂಡಿದ್ದಾರಂತೆ. 2.0, ಪೊನ್ನಿಯನ್ ಸೆಲ್ವನ್ (ಪಿಎಸ್), ಇಂಡಿಯನ್ 2, ದರ್ಬಾರ್, ರಾಮ್ ಸೇತು, ಕತ್ತಿ, ಖೈದಿ 150, ಕೊಲಮಾವು ಕೋಕಿಲ.. ಹೀಗೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಲೈಕಾ ಸಂಸ್ಥೆ ಹೊಸ ಪ್ರಾಜೆಕ್ಟ್‍ಗಾಗಿ ಸುದೀಪ್ ಅವರನ್ನು ಕಾಂಟ್ಯಾಕ್ಟ್ ಮಾಡಿದೆ. ಕಥೆಯನ್ನು ಸುದೀಪ್ ಓಕೆ ಮಾಡಿದ್ದಾರೆ ಎಂಬ ಸುದ್ದಿಯೂ ಇದೆ. ಅಧಿಕೃತ ಘೋಷಣೆಯೊಂದು ಬಾಕಿ ಉಳಿದಿದೆ. ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಲೈಕಾದವರು ಹೊಸ ಸಿನಿಮಾ ಯಾವುದು ಎಂದು ಘೋಷಣೆ ಮಾಡಲಿದ್ದಾರೆ.

    ಇತ್ತೀಚೆಗೆ ಸುದೀಪ್ ಅವರ ಶಾಂತಿನಿವಾಸಕ್ಕೆ (ಸುದೀಪ್ ಅವರ ಮನೆಯ ಹೆಸರು) ಲೈಕಾದವರು ಭೇಟಿ ನೀಡಿದ್ದರಂತೆ. ಎಲ್ಲವೂ ಓಕೆ ಆಗಿದ್ದು ಜನವರಿಯಲ್ಲಿ ಸುದೀಪ್ ಅವರ 46ನೇ ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಇದೆ.

  • ಪುನರ್ ಪರಿಶೀಲನಾ ಸೆನ್ಸಾರ್‍ಗೆ ದಿ ವಿಲನ್ 

    the villain goes to revising committeee

    ಶಿವರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ಪ್ರಮಾಣಪತ್ರ ನೀಡುತ್ತೇವೆ ಎಂದಿದ್ದಾರೆ. ಈ ಸರ್ಟಿಫಿಕೇಟ್ ಕೊಡೋಕೆ ಅವರು ನೀಡುತ್ತಿರುವ ಕಾರಣಗಳಿವೆ. ಚಿತ್ರದಲ್ಲಿ ಆ್ಯಕ್ಷನ್ ದೃಶ್ಯಗಳಿವೆ. ಭಾರತೀಯರು ಬ್ರಿಟಿಷರ ಬಗ್ಗೆ ಮಾತನಾಡುವ ಡೈಲಾಗ್‍ಗಳಿವೆ. ಅಂಡರ್‍ವಲ್ರ್ಡ್ ಸಬ್ಜೆಕ್ಟ್. ಹೀಗಾಗಿ ಎ ಪ್ರಮಾಣ ಪತ್ರ ಎನ್ನುತ್ತಿದ್ದಾರೆ ಸೆನ್ಸಾರ್ ಅಧಿಕಾರಿಗಳು.

    ನಾವು ಮಾಡಿರುವು ಫ್ಯಾಮಿಲಿ ಓರಿಯಂಟೆಡ್ ಕಮರ್ಷಿಯಲ್ ಸಿನಿಮಾ. ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಕೂಡಾ ಇದೆ. ಎ ಸರ್ಟಿಫಿಕೇಟ್ ಕೊಟ್ಟರೆ, ಮಲ್ಟಿಪ್ಲೆಕ್ಸ್‍ಗಳಲ್ಲಿ ಪ್ರಾಬ್ಲಂ ಆಗುತ್ತೆ. ಯು/ಎ ಪ್ರಮಾಣ ಪತ್ರವನ್ನಾದರೂ ಕೊಟ್ಟರೆ ಒಳ್ಳೆಯದು. ಹೀಗಾಗಿ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಒಯ್ಯುವುದಾಗಿ ತಿಳಿಸಿದ್ದಾರೆ ನಿರ್ದೇಶಕ ಪ್ರೇಮ್.

    ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರವನ್ನು ಗೌರಿಗಣೇಶ ಹಬ್ಬಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ರಿವೈಸಿಂಗ್ ಕಮಿಟಿ ನಿರ್ಧಾರ ಏನಾಗಲಿದೆಯೋ.. ಕಾಯಬೇಕಷ್ಟೆ.

  • ಪುನೀತ್ ಜೀವನ ಚರಿತ್ರೆ ಬಿಡುಗಡೆ ಮಾಡಿದ ಕಿಚ್ಚ

    ಪುನೀತ್ ಜೀವನ ಚರಿತ್ರೆ ಬಿಡುಗಡೆ ಮಾಡಿದ ಕಿಚ್ಚ

    ಇತ್ತ ಜೇಮ್ಸ್ ರಿಲೀಸ್ ಹೊತ್ತಿನಲ್ಲೇ ಪುನೀತ್ ರಾಜಕುಮಾರ್ ಅವರ ಜೀವನ ಚರಿತ್ರೆ ಪುಸ್ತಕವೂ ಹೊರಬಂದಿದೆ. ಈ ಜೀವನ ಚರಿತ್ರೆಯ ಹೆಸರು ನೀನೇ ರಾಜಕುಮಾರ.  ಈ ಕೃತಿ ಬರೆದಿರುವುದು ಶರಣು ಹುಲ್ಲೂರು. ಪುನೀತ್ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಿರುವುದು ಕಿಚ್ಚ ಸುದೀಪ್.

    ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿಯಲ್ಲಿ ಅದನ್ನು ಚೆನ್ನಾಗಿ ಹಿಡಿದಿಟ್ಟಿದ್ದಾರೆ. ನಾನು ಯಾವತ್ತಿಗೂ ಮಿಸ್ ಮಾಡಿಕೊಳ್ಳುವ ವ್ಯಕ್ತಿ ಪುನೀತ್ ಎಂದಿದ್ದಾರೆ ಸುದೀಪ್.

    ಶರಣು ಹುಲ್ಲೂರು ಅವರ ಕೃತಿಗೆ ಸಾಹಿತಿ, ಪತ್ರಕರ್ತ ಜೋಗಿ ಬೆನ್ನುಡಿ ಬರೆದಿದ್ದಾರೆ. ಮುರಳೀಧರ ಖಜಾನೆ ಮುನ್ನುಡಿ ಬರೆದಿದ್ದಾರೆ.

  • ಪುನೀತ್ ಹುಟ್ಟಹಬ್ಬಕ್ಕೆ ಕಬ್ಜ ರಿಲೀಸ್

    ಪುನೀತ್ ಹುಟ್ಟಹಬ್ಬಕ್ಕೆ ಕಬ್ಜ ರಿಲೀಸ್

    ಈ ವರ್ಷದ.. ಕನ್ನಡದಿಂದ ತಯಾರಾಗಿರುವ ಪ್ಯಾನ್ ಇಂಡಿಯಾ ಮೂವಿಗಳಲ್ಲಿ ನಂ.1 ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್, ಶ್ರಿಯಾ ಸರಣ್ ನಟಿಸಿರೋ ಚಿತ್ರ ಒಟ್ಟಾರೆ 7 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಿರ್ದೇಶಕ ಮತ್ತು ನಿರ್ಮಾಪಕ ಆರ್.ಚಂದ್ರು ಇದೀಗ ಕಬ್ಜ ರಿಲೀಸ್ ಮಾರ್ಚ್ 17ಕ್ಕೆ ಎಂದು ಘೋಷಿಸಿಬಿಟ್ಟಿದ್ದಾರೆ. ಮಾರ್ಚ್ 17, ಪುನೀತ್ ರಾಜಕುಮಾರ್ ಜಯಂತಿ.

    ಕಬ್ಬ ಚಿತ್ರದ ಬಗ್ಗೆ ಪುನೀತ್ ಅವರಿಗೆ ಭಾರಿ ಕುತೂಹಲವಿತ್ತು. ಆಗಾಗ್ಗೆ ಶೂಟಿಂಗ್`ಗೆ ಬಂದು ಹೋಗುತ್ತಿದ್ದರು. ಅವರಿಂದಲೇ ಟೀಸರ್, ಟ್ರೇಲರ್ ರಿಲೀಸ್ ಮಾಡಿಸುವ ಪ್ಲಾನ್ ಕೂಡಾ ಇತ್ತು. ಈಗ ಅವರ ಹುಟ್ಟುಹಬ್ಬದ ದಿನವೇ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ಆರ್.ಚಂದ್ರು.

    ಆ ವೇಳೆಗೆ ಯುಗಾದಿಯೂ ಬರಲಿದೆ. ಹೊಸ ವರ್ಷದ ಆರಂಭಕ್ಕೆ ಕಬ್ಜ ಕೊಡುಗೆಯಾಗಲಿದೆ ಎಂದಿದ್ದಾರೆ ಆರ್.ಚಂದ್ರು. ಒಟ್ಟಾರೆ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಕಬ್ಜ ರಿಲೀಸ್ ಆಗಲಿದೆ. ಕಬ್ಜದಲ್ಲಿ 1940ರ ಕಾಲದ ಭೂಗತ ಲೋಕದ ಕಥೆಯಿದೆ. ಈಗಾಗಲೇ ಚಿತ್ರದ ಟೀಸರ್ ಹವಾ ಎಬ್ಬಿಸಿದೆ. ದೇಶ ವಿದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದು. 2022ರಲ್ಲಿ ಕನ್ನಡ ಚಿತ್ರರಂಗ ಇಂಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಕೆಜಿಎಫ್ ಚಾಪ್ಟರ್ 2, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ ಚಿತ್ರಗಳು ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದವು. ಇದೀಗ ಕಬ್ಜ. ಜೊತೆಗೆ ಪುನೀತ್ ಜಯಂತಿ. ಕಬ್ಬ ಹಬ್ಬವಾಗಲಿದೆ.

  • ಪೈರಸಿಯಿಂದ ಪೈಲ್ವಾನ್ ಕಳೆದುಕೊಂಡಿದ್ದು 5 ಕೋಟಿಗೂ ಹೆಚ್ಚು..!

    pailwan looses more than 5 crores

    ಪೈಲ್ವಾನ್ ಚಿತ್ರ 100 ಕೋಟಿ ಕ್ಲಬ್ ಸೇರಿತಾ..? ಅಷ್ಟೊಂದು ಭರ್ಜರಿ ಪ್ರದರ್ಶನ ಕಾಣುತ್ತಿರೋ ಚಿತ್ರ ಈವರೆಗೆ ಗಳಿಸಿರೋ ಹಣ ಎಷ್ಟು..? ಹೀಗೆ ಪ್ರೇಕ್ಷಕರದ್ದು ಹತ್ತಾರು ಪ್ರಶ್ನೆ. ಪೈಲ್ವಾನ್ ನಿರ್ಮಾಪಕರು ಸೇಫ್ ಹಂತ ದಾಟಿ, ಲಾಭ ನೋಡುತ್ತಿದ್ದಾರೆ. ಒಂದು ಮೂಲದ ಪ್ರಕಾರ ಚಿತ್ರದ ಗಳಿಕೆ 85 ಕೋಟಿ ದಾಟಿದೆ. ಆದರೆ ಅಧಿಕೃತವಾಗಿ ಹೇಳಿಕೊಳ್ಳುತ್ತಿಲ್ಲ. ಇದು ಒಂದು ವಿಷಯವಾದರೆ, ಪೈರಸಿಯಿಂದಾಗಿ ಚಿತ್ರತಂಡ ಕಳೆದುಕೊಂಡಿರೋದು 5 ಕೋಟಿಗೂ ಹೆಚ್ಚು ಎನ್ನುವ ಸುದ್ದಿ ಬಹಿರಂಗವಾಗಿದೆ.

    ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನೂ ಹಲವು ಕ್ರಿಮಿನಲ್‍ಗಳ ಹುಡುಕಾಟ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡಿದರೂ ಗೊತ್ತಾಗಲ್ಲ ಎಂದುಕೊಂಡಿದ್ದವರನ್ನು ಸುಮ್ಮನೆ ಬಿಡಲ್ಲ ಎಂದು ಸುದೀಪ್ ಗುಡುಗಿರುವುದಷ್ಟೇ ಅಲ್ಲ, ಸೀರಿಯಸ್ಸಾಗಿ ಹೆಜ್ಜೆಯಿಟ್ಟಿದ್ದಾರೆ.

    ಪ್ರತಿದಿನವೂ 100ಕ್ಕೂ ಹೆಚ್ಚು ಪೈರಟ್ ಸಿನಿಮಾ ಲಿಂಕ್ ಡಿಲೀಟ್ ಮಾಡುತ್ತಿರುವ ಚಿತ್ರತಂಡ, ಪೈರಸಿಯಿಂದಾಗಿಯೇ ಕಳೆದುಕೊಂಡಿರುವ ಮೊತ್ತ 5 ಕೋಟಿಗೂ ಹೆಚ್ಚು. ಇದರಿಂದಾಗಿ ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಿಸಿದ ನಿರ್ಮಾಪಕರಿಗೆ ಬರಬೇಕಾದ ಹಣ, ಎಲ್ಲೋ ಕತ್ತಲಲ್ಲಿ ಕುಳಿತು ಕದ್ದು ಸಿನಿಮಾ ಮಾಡಿದವನಿಗೆ ಹೋಗುತ್ತಿದೆ. ಇದುವರೆಗೆ ಹೆಚ್ಚೂ ಕಡಿಮೆ 1 ಸಾವಿರ ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದೆ.

  • ಪೈಲ್ವಾನ ಟ್ರೇಲರ್ ಪ್ರತಾಪ

    pailwan trailer creates sensation

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿರುವ ಚಿತ್ರಕ್ಕೆ ಗಜಕೇಸರಿ ಕೃಷ್ಣ ಅಲಿಯಾಸ್ ಹೆಬ್ಬುಲಿ ಕೃಷ್ಣ ಅಲಿಯಾಸ್ ಪೈಲ್ವಾನ್ ಕೃಷ್ಣ ನಿರ್ದೇಶಕ. ನಿರ್ಮಾಪಕಿ ಸ್ವಪ್ನಾ ಕೃಷ್ಣ. ಚಿತ್ರದ ಟ್ರೇಲರ್ ದೊಡ್ಡ ಹವಾ ಎಬ್ಬಿಸಿದೆ.

    ಬಲ ಇದೆ ಅಂತಾ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋದು ಯೋಧ ನಮ್ಮ ಕಿಚ್ಚ ಕಣಕ್ಕಿಳಿದ ಅಂದ್ರೆ ಸಿಂಹ ಸಾರ್ ಸಿಂಹ ನಾನು ಗೆಲ್ತೀನೋ.. ಇಲ್ವೋ ಗೊತ್ತಿಲ್ಲ. ಆದರೆ ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ ಟ್ರೇಲರ್‍ನಲ್ಲಿರೋ ಡೈಲಾಗ್‍ಗಳ ಸ್ಯಾಂಪಲ್ ಇವು. ಶಿಳ್ಳೆ ಹೊಡೆಯುವಂತಿವೆ. 

    ಸೆಪ್ಟೆಂಬರ್ 12ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಶರತ್ ಲೋಹಿತಾಶ್ವ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್ ಚಿತ್ರದ ಇನ್ನಿತರ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

  • ಪೈಲ್ವಾನನ ಗರಡಿಯಲ್ಲಿ ಜೈ ಆಂಜನೇಯ

    phailwan sets in hyderabad

    ಕಿಚ್ಚ ಸುದೀಪ್, ಕೃಷ್ಣ ಕಾಂಬಿನೇಷನ್‍ನ ಪೈಲ್ವಾನ್ ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದ ಕುಸ್ತಿ ದೃಶ್ಯಗಳ ಶೂಟಿಂಗ್‍ಗೆಂದೇ 8 ಸೆಟ್ ಹಾಕಲಾಗಿದೆ. ಒಂದೊಂದು ಸೆಟ್ ಕೂಡಾ ಅದ್ಭುತ.. ಅದ್ಧೂರಿ.. 

    ಕುಸ್ತಿಯ ಅಖಾಡ, ಗರಡಿ ಮನೆಯ ಅಖಾಡ, ಆಂಜನೇಯದ ವಿಗ್ರಹ, ಅರಮನೆಯ ಎದುರಿನ ಅಖಾಡ, ಬಾಕ್ಸಿಂಗ್ ರಿಂಗ್.. ಹೀಗೆ ತರಹೇವಾರಿ ಸೆಟ್‍ಗಳು ಸಿದ್ಧವಾಗಿವೆ. ಸೆಟ್‍ಗಳನ್ನು ನೋಡುತ್ತಿದ್ದರೆ ಚಿತ್ರದ ದೃಶ್ಯಗಳು ಹೇಗಿರಬಹುದು ಎಂಬ ಕಲ್ಪನೆ ಪ್ರೇಕ್ಷಕರ ಕಣ್ಣೆದುರು ಸುಳಿದು ಹೋಗುವುದು ಖಂಡಿತಾ.

  • ಪೈಲ್ವಾನನ ಚೆಲುವೆಗೆ ಕಣ್ಣಲ್ಲೇ ಚಪ್ಪಾಳೆ ಹೊಡೆದ ಪ್ರೇಕ್ಷಕ..!

    pailwan heroine impresses audience

    ಪೈಲ್ವಾನ್ ಸಿನಿಮಾ ನೋಡಿದವರಿಗೆ ಸುದೀಪ್, ಸುನಿಲ್ ಶೆಟ್ಟಿ ಅಚ್ಚರಿ ಎನಿಸಿಲ್ಲ. ಕಾರಣ ಸಿಂಪಲ್, ಅವರು ಈಗಾಗಲೇ ತಮ್ಮ ಪ್ರತಿಭೆಯನ್ನು ಪ್ರೂವ್ ಮಾಡಿಕೊಂಡಿರುವವರು. ಅದ್ಭುತವಾಗಿ ನಟಿಸುತ್ತಾರೆ ಎಂಬ ಬಗ್ಗೆ ಯಾವ ಅನುಮಾನವೂ ಇರಲಿಲ್ಲ. ಆದರೆ, ಪ್ರೇಕ್ಷಕರು ಕಣ್ಣಲ್ಲೇ ಚಪ್ಪಾಳೆ ಹೊಡೆದಿರುವುದು ನಾಯಕಿ ಆಕಾಂಕ್ಷಾ ಸಿಂಗ್ ಅಭಿನಯ ಪ್ರತಿಭೆಗೆ.

    ಸೋಷಿಯಲ್ ಮೀಡಿಯಾದಲ್ಲಂತೂ ಪೈಲ್ವಾನ್ ಚಿತ್ರದ ಸರ್ಪ್ರೈಸ್ ಆಕಾಂಕ್ಷಾ ಎಂದು ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ ಸಿನಿಮಾ ನೋಡಿದವರು. ಚಿತ್ರದ ' ಕಣ್ಣ ಮಣಿಯೇ, ಕಣ್ಣು ಹೊಡಿಯೇ', 'ಕಣ್ಣು ಚಪ್ಪಾಳೆ' ಹಾಡು ರಿಲೀಸ್ ಆದಾಗ ಮೆಚ್ಚಿದ್ದ ಪ್ರೇಕ್ಷಕರು, ಈಗ ಆಕೆಯ ಅಭಿನಯಕ್ಕೆ ಕಣ್ಣಲ್ಲೆ ಚಪ್ಪಾಳೆ ಹೊಡೆದಿದ್ದಾರೆ.

    ಆಕಾಂಕ್ಷಾ ಸಿಂಗ್ ಚಿತ್ರದಲ್ಲಿ ಗ್ಲಾಮರ್ ಮತ್ತು ಅಭಿನಯ ಎರಡರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದೂ ಸುದೀಪ್ ಎದುರು. ಆಕಾಂಕ್ಷಾ ಪಂಜಾಬಿ ಬೆಡಗಿ. ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲಿ ಪೋಷಕ ನಟಿಯಾಗಿದ್ದವರು, ತೆಲುಗಿನ ಮಲ್ಲಿ ರಾವಾ, ದೇವದಾಸ ಚಿತ್ರಗಳಲ್ಲಿ ನಾಯಕಿಯಾಗಿದ್ದವರು. ಮಿಕ್ಕಂತೆ ಆಕೆ ಕಿರುತೆರೆಯಲ್ಲಿ ಜನಪ್ರಿಯ ನಟಿ. ಪೈಲ್ವಾನ್ 4ನೇ ಸಿನಿಮಾ. 28 ವರ್ಷದ ಆಕಾಂಕ್ಷಾ ಅವರಿಗೆ ಮದುವೆಯೂ ಆಗಿದೆ. ಆದರೆ, ಪೈಲ್ವಾನ್ ಚಿತ್ರದಲ್ಲಿನ ಆಕೆಯ ಚೆಂದದ ಅಭಿನಯ ಮತ್ತು ಚೆಂದಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

     

  • ಪೈಲ್ವಾನನ ಶೂಟಿಂಗ್ ಶುರು

    phailwan shooting starts

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಶೂಟಿಂಗ್ ಶುರುವಾಗಿದೆ. ಚಿತ್ರದ ಶೂಟಿಂಗ್‍ನ ಒಂದಷ್ಟು ಫೋಟೋಗಳನ್ನು ಸ್ವತಃ ಕಿಚ್ಚ ಸುದೀಪ್ ಅಭಿಮಾನಿಗಳ ಮುಂದಿಟ್ಟಿದ್ದಾರೆ. ಫೋಟೋಗಳನ್ನು ನೋಡಿದ್ರೆ, ಸುದೀಪ್ ಚಿತ್ರದಲ್ಲಿ ಶಂಕರ್‍ನಾಗ್ ಅಭಿಮಾನಿಯಾಗಿರಬಹುದಾ ಅನ್ನೋ ಅನುಮಾನ ಬರೋದು ಸುಳ್ಳಲ್ಲ. ಏಕೆಂದರೆ ಆ ಬೋರ್ಡ್‍ನಲ್ಲಿ ಆಟೋರಾಜ ಶಂಕರ್‍ನಾಗ್ ಗೆಳೆಯರ ಬಳಗ ಅನ್ನೋ ಬೋರ್ಡ್ ಇದೆ. ಭುವನೇಶ್ವರಿ ನಗರದ ಅಡ್ರೆಸ್ ಇದೆ. ಉಳಿದದ್ದು ಸಿನಿಮಾ ನೋಡಿದ ಮೇಲೆ ಹೇಳಬೇಕು.

    ನಾಯಕಿಯಾಗಿ ಆಕಾಂಕ್ಷಾ ಸಿಂಗ್ ಎಂಬ ನಟಿ ನಟಿಸುತ್ತಿದ್ದಾರೆ. ನಾನು ಮೂಲತಃ ಮುಂಬೈನವಳು. ಕನ್ನಡದ ನಟರ ಬಗ್ಗೆ ಗೊತ್ತಿರಲಿಲ್ಲ. ಆದರೆ, ಸುದೀಪ್ ಬಗ್ಗೆ ತಿಳಿದ ಮೇಲೆ ಖುಷಿಯಾಯಿತು. ಅವರಿಂದ ಕಲಿಯುವುದು ತುಂಬಾ ಇದೆ ಎಂದು ಹೇಳಿಕೊಂಡಿದ್ದಾರೆ ಆಕಾಂಕ್ಷಾ. ನಮ್ಮಂತಹವರ ಕೆರಿಯರ್‍ಗೆ ಸುದೀಪ್ ಅವರ ಜೊತೆ ನಟಿಸುವುದರಿಂದ ಪ್ಲಸ್ ಆಗುತ್ತೆ ಎಂದು ಹೇಳಿಕೊಂಡಿದ್ದಾರೆ ಆಕಾಂಕ್ಷಾ.

  • ಪೈಲ್ವಾನನಿಗೆ ಆಕಾಂಕ್ಷಾ ಜೋಡಿ

    phialwan gets his heroine

    ಕಿಚ್ಚ ಸುದೀಪ್ ಅಲ್ಲಲ್ಲ ಪೈಲ್ವಾನ್ ಸುದೀಪ್‍ಗೆ ತಕ್ಕ ಜೋಡಿ ಕೊನೆಗೂ ಸಿಕ್ಕಾಗಿದೆ. ರಾಜಸ್ಥಾನ ಮೂಲದ ಆಕಾಂಕ್ಷಾ ಸಿಂಗ್ ಎಂಬ ಸುಂದರಿ, ಕಿಚ್ಚನಿಗೆ ಜೊತೆಗಾತಿಯಾಗಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಆಕಾಂಕ್ಷಾ ವೃತ್ತಿಯಲ್ಲಿ ಮಾಡೆಲ್. ಈಗಾಗಲೇ ಕೆಲವು ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಪೈಲ್ವಾನ್ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

    ಹಿಂದಿಯಲ್ಲಿ ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲಿ ಅಲಿಯಾ ಭಟ್ ಗೆಳತಿಯಾಗಿ, ತೆಲುಗಿನ ಮಳ್ಳಿರಾವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಹಿಂದಿಯಲ್ಲಿ ನಾ ಬೋಲೇ ತುಮ್ ನ ಮೈನೇ ಕುಚ್ ಕಹಾ ಧಾರಾವಾಹಿ ಮೂಲಕ ತೆರೆಗೆ ಬಂದ ಆಕಾಂಕ್ಷಾ ಕೆಲವು ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ. ಈಗ ಪೈಲ್ವಾನನಿಗೆ ಜೊತೆಯಾಗಲು ಕನ್ನಡಕ್ಕೆ ಬರುತ್ತಿದ್ದಾರೆ.

    ಆಕಾಂಕ್ಷಾ ಅವರನ್ನು ಅಡಿಷನ್ ಮೂಲಕ ಆಯ್ಕೆ ಮಾಡಿದ್ದೇವೆ. ನಮ್ಮ ಚಿತ್ರದ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ತಿಳಿಸಿದ್ದಾರೆ ನಿರ್ದೇಶಕ ಕೃಷ್ಣ.

     

     

     

  • ಪೈಲ್ವಾನ್ 2 ಕಿಚ್ಚ ರೆಡಿ : ಕಂಡಿಷನ್ಸ್ ಅಪ್ಲೈ

    sudeep ready for pailan sequel

    ಪೈಲ್ವಾನ್ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದ್ದಂತೆಯೇ ಪೈಲ್ವಾನ್ 2ಗೆ ಸಿದ್ಧರಾಗುತ್ತಿದ್ದಾರೆ ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್. ಈಗಾಗಲೇ ಕೃಷ್ಣ ಕಥೆಯನ್ನೂ ಸುದೀಪ್ ಅವರಿಗೆ ಹೇಳಿದ್ದಾರಂತೆ. ಕಥೆಯನ್ನು ಇಷ್ಟಪಟ್ಟಿರುವ ಸುದೀಪ್, ಕೃಷ್ಣಗೆ ಕೆಲವು ಕಂಡೀಷನ್ಸ್ ಹಾಕಿದ್ದಾರಂತೆ.

    ಕಿಚ್ಚ ಸುದೀಪ್ ಅವರಿಗೆ ಕಥೆ ಹೇಳಿದ್ದೇನೆ. ಅದು ಅವರಿಗೂ ಇಷ್ಟವಾಗಿದೆ. ಆದರೆ ಡೆವಲಪ್ ಮಾಡುವಂತೆ ಸೂಚನೆ ಸಿಕ್ಕಿಲ್ಲ ಎಂದಿದ್ದಾರೆ ಕೃಷ್ಣ. ಆದರೆ ಸುದೀಪ್ ಪೈಲ್ವಾನ್ 2ನಲ್ಲಿ ಪೈಲ್ವಾನ್ ಆಗುವ ಬದಲು, ಪೈಲ್ವಾನ್‍ನ ಗುರು ಆಗುವ ಬಯಕೆ ಹೊಂದಿದ್ದಾರಂತೆ. ಕಾರಣ ಇಷ್ಟೆ, ಕಷ್ಟದ ಸಾಹಸ ದೃಶ್ಯಗಳಿರೋದಿಲ್ಲ ಎನ್ನುವುದು.

    ಆದರೆ, ಇಂಥದ್ದೊಂದು ಸುದ್ದಿ ಹೊರಬಿದ್ದ ಬೆನ್ನಲ್ಲೇ ನಾನ್ ರೆಡಿ ಎನ್ನುವ ಅರ್ಥದಲ್ಲಿ ಹೊರಬಿದ್ದಿರುವ ಸುದೀಪ್ ಅವರ ಟ್ವೀಟ್, ಪೈಲ್ವಾನ್ ಫ್ಯಾನ್ಸ್ ಶಿಳ್ಳೆ ಹೊಡೆಯುವಂತೆ ಮಾಡಿದೆ. ಅಂದಹಾಗೆ ಪೈಲ್ವಾನ್ ಮುಗಿಸಿದ ನಂತರವೂ ಕಿಚ್ಚ ಜಿಮ್ ಬಿಟ್ಟಿಲ್ಲ. ಪ್ರತಿದಿನ ತಪ್ಪದೇ ಜಿಮ್ ಮಾಡುತ್ತಿದ್ದಾರೆ.

  • ಪೈಲ್ವಾನ್ 50 : ಪ್ರೇಕ್ಷಕರಿಗೆ ಪೈಲ್ವಾನನ 50% ಕಾಣಿಕೆ

    pailwan ticket at half price

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್, ನಿರೀಕ್ಷೆಯಂತೆಯೇ ಅತ್ಯದ್ಭುತವಾಗಿ ಅರ್ಧಶತಕ ಪೂರೈಸಿದೆ. ಸಹಜವಾಗಿಯೇ ಕಿಚ್ಚ ಹ್ಯಾಪಿ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಡಬಲ್ ಹ್ಯಾಪಿ. ನಿರ್ದೇಶಕ ಪೈಲ್ವಾನ್ ಕೃಷ್ಣ ತ್ರಿಪ್ಪಲ್ ಹ್ಯಾಪಿ. ಈ ಖುಷಿಯಲ್ಲೇ ಇಡೀ ಚಿತ್ರತಂಡ ಪ್ರೇಕ್ಷಕರಿಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದೆ.

    ಥಿಯೇಟರುಗಳಲ್ಲಿ ಅದರಲ್ಲಿಯೂ ಸಿಂಗಲ್ ಸ್ಕ್ರೀನ್ ಟಾಕೀಸುಗಳಲ್ಲಿ ಪೈಲ್ವಾನ್ ಚಿತ್ರದ ಟಿಕೆಟ್ ದರ ಈ ವಾರ ಅಂದರೆ ಇಂದಿನಿಂದ ಮುಂದಿನ ಗುರುವಾರದವರೆಗೆ ಇಡೀ ವಾರ 50% ಕಡಿಮೆ ಇರಲಿದೆ. ಅರ್ಥಾತ್, ಆ ಟಾಕೀಸ್‍ನ ರೆಗ್ಯುಲರ್ ಟಿಕೆಟ್ ದರ 100 ರೂ. ಇದ್ದರೆ, ಈ ವಾರ 50 ರೂ. ಇದು ಪೈಲ್ವಾನ್ ಚಿತ್ರತಂಡದ ಭರ್ಜರಿ ಗಿಫ್ಟ್.

    ಸಿನಿಮಾ ಎಷ್ಟು ಹಣ ಮಾಡಿತು ಎಂಬುದಕ್ಕಿಂತ ಈ ಚಿತ್ರ ಹಲವರ ಬದುಕಿಗೆ ಸ್ಫೂರ್ತಿಯಾಗಿದೆ. ಅದೇ ನನಗೆ ದೊಡ್ಡ ಹೆಮ್ಮೆ ಎಂದಿದ್ದಾರೆ ಸ್ವಪ್ನಾ ಕೃಷ್ಣ ಮತ್ತು ಕೃಷ್ಣ.

  • ಪೈಲ್ವಾನ್ ಅಡ್ವಾನ್ಸ್ ಬುಕ್ಕಿಂಗ್ ನುಗ್ಗಿ ಬಂದ್ರು ಪೈಲ್ವಾನ್ಸ್ ಫ್ಯಾನ್ಸ್

    pailwan advance booking craze

    ಎಂದಿಗೂ ಎಣೆಯಿಲ್ಲ ಈ ಪ್ರೀತಿಗೆ.. ಬಂದ್ರು ನೋಡೋ ಫ್ಯಾನ್ಸು.. ಎಂದು ಕಿಚ್ಚ ಸುದೀಪ್ ಹಾಡಬೇಕಾದ ಟೈಮ್ ಇದು. ಪೈಲ್ವಾನ್ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದೇ ತಡ, ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ.

    ಬೆಂಗಳೂರಿನ ಸಿದ್ದೇಶ್ವರ ಟಾಕೀಸ್‍ನಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ. ಚಂದ್ರೋದಯ, ಕಾವೇರಿ ಥಿಯೇಟರುಗಳಲ್ಲೂ ಅರ್ಲಿ ಮಾರ್ನಿಂಗ್  ಶೋ ಇದೆ. ಹೆಚ್ಚುತ್ತಿರುವ ಡಿಮ್ಯಾಂಡ್ ನೋಡಿದರೆ ಮಧ್ಯರಾತ್ರಿ ಶೋ ಶುರುವಾದರೂ ಆಶ್ಚರ್ಯವಿಲ್ಲ.

    ಪೈಲ್ವಾನ್‍ಗೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದು, ಸ್ವಪ್ನಾ ಕೃಷ್ಣ ನಿರ್ಮಾಪಕಿ. ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ.

     

  • ಪೈಲ್ವಾನ್ ಕಿಚ್ಚನಿಗೂ.. ವಾರಾಹಿಗೂ ಇದೆ ಬಿಡಿಸಲಾಗದ ಅನುಬಂಧ

    there is an interesting story between sudeep ad varahi chalan chitram

    ವಾರಾಹಿ ಚಲನಚಿತ್ರಂ. ತೆಲುಗಿನ ಅತಿದೊಡ್ಡ ಬ್ಯಾನರ್. ಈ ಸಂಸ್ಥೆಯೇ ಈಗ ತೆಲುಗಿನಲ್ಲಿ ಪೆಹಲ್ವಾನ್ ಚಿತ್ರದ ವಿತರಣೆ ಹಕ್ಕು ಪಡೆದುಕೊಂಡಿರೋದು. ಅಂದಹಾಗೆ ಈ ಚಿತ್ರಕ್ಕೂ, ಸಂಸ್ಥೆಗೂ, ಸುದೀಪ್‍ಗೂ ಬಿಡಿಸಲಾರದ ಒಂದು ಬಂಧವಿದೆ. ಏಕೆಂದರೆ ಈ ಚಿತ್ರ ಸಂಸ್ಥೆಯ ಆರಂಭವೇ ಕಿಚ್ಚ ಸುದೀಪ್.

    ಕಿಚ್ಚ ಸುದೀಪ್ ಅವರ ತೆಲುಗು ಬ್ಲಾಕ್‍ಬಸ್ಟರ್ ಈಗ ಚಿತ್ರವನ್ನು ನಿರ್ಮಿಸಿದ್ದು ಇದೇ ಸಂಸ್ಥೆ. ಅದು ವಾರಾಹಿಯ ಮೊದಲ ಸಿನಿಮಾ.

    ಈಗ ಅದೇ ಸಂಸ್ಥೆ ಪೆಹಲ್ವಾನ್ ವಿತರಣೆ ಮಾಡುತ್ತಿದೆ. ಕನ್ನಡದ ಪೈಲ್ವಾನ್, ತೆಲುಗಿನಲ್ಲಿ ಪೆಹಲ್ವಾನ್ ಆಗಿದೆ. ಇದೇ 12ರಂದು ರಿಲೀಸ್ ಆಗುತ್ತಿರುವ ಪೈಲ್ವಾನ್‍ನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ ರಿಲೀಸ್ ಮಾಡುತ್ತಿರುವುದು ಇದೇ ಸಂಸ್ಥೆ. ಕೆಜಿಎಫ್ ವಿತರಣೆ ಮಾಡಿದ್ದುದೂ ಇದೇ ಸಂಸ್ಥೆ. ಕಿಚ್ಚ ಮತ್ತೊಮ್ಮೆ ಮೋಡಿ ಮಾಡುವ ಎಲ್ಲ ಶುಭ ಸೂಚನೆಗಳೂ ಇವೆ.