` kiccha sudeepa - chitraloka.com | Kannada Movie News, Reviews | Image

kiccha sudeepa

  • ದರ ಹೆಚ್ಚಾದ್ರೂ ದಿ ವಿಲನ್ ಹೌಸ್‍ಫುಲ್..!

    the villain advance booking craze begins

    ದಿ ವಿಲನ್ ರಿಲೀಸ್ ಆಗೋಕೆ ಕೆಲವೇ ದಿನಗಳಿವೆ. ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್ ಸಿನಿಮಾ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಟಿಕೆಟ್ ದರ ಹೆಚ್ಚಿಸಿಯೇ ಅಡ್ವಾನ್ಸ್ ಬುಕಿಂಗ್ ಶುರು ಮಾಡಲಾಗಿದೆ. ಟಿಕೆಟ್ ದರ ಹೆಚ್ಚಾದರೂ ಹಲವು ಥಿಯೇಟರುಗಳು ಈಗಾಗಲೇ ಹೌಸ್‍ಫುಲ್ ಆಗಿವೆ.

    ಬಾಹುಬಲಿ ಬಂದಾಗ ಇದೇ ರೀತಿ ಟಿಕೆಟ್ ದರ ಏರಿಸಲಾಗಿತ್ತು. ಈಗ ಕನ್ನಡದ ಸಿನಿಮಾಗೂ ಇದೇ ರೀತಿ ದರ ಹೆಚ್ಚಿಸಿದ್ದೇವೆ. ವಿಶೇಷವೆಂದರೆ ಯಾರೊಬ್ಬರೂ ಟಿಕೆಟ್ ದರ ಹೆಚ್ಚಳದ ವಿರುದ್ಧ ಮಾತನಾಡುತ್ತಿಲ್ಲ. ಬಹುತೇಕ ಕಡೆ ಈಗಾಗಲೇ ಹೌಸ್‍ಫುಲ್ ಆಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ದೇಶಕ ಪ್ರೇಮ್.

    ಇದೇ ಗುರುವಾರ ತೆರೆಗೆ ಬರುತ್ತಿರುವ ದಿ ವಿಲನ್ ಟಿಕೆಟ್ ದರ  ಗರಿಷ್ಟ 400 ರೂ. ಹಾಗೂ ಕನಿಷ್ಟ 150 ರೂ. ಇದೆ. 

  • ದರ್ಶನ್ ಮದಕರಿಯಾದರೆ ಕಾನೂನು ಹೋರಾಟ - ವಾಲ್ಮೀಕಿ ಸ್ವಾಮೀಜಿ

    madakri issue turns into cast fight

    ಮದಕರಿ ನಾಯಕ ಸಿನಿಮಾ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ದರ್ಶನ್ ಮದಕರಿ ನಾಯಕನ ಪಾತ್ರ ಮಾಡಲಿದ್ದಾರೆ ಎನ್ನುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಸುದೀಪ್ ಕೂಡಾ ವೀರ ಮದಕರಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಇನ್ನೊಂದು ಸುದ್ದಿ. ಇವೆರಡರ ನಡುವೆ ಚಿತ್ರದ ವಿವಾದಕ್ಕೆ ಜಾತಿಯ ಬಣ್ಣವೂ ಅಂಟಿಕೊಂಡಿದೆ. ವಾಲ್ಮೀಕಿ ಸಮುದಾಯದ ಸ್ವಾಮೀಜಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

    ನಮ್ಮ ಸಮುದಾಯದ ನಾಯಕ ಮದಕರಿ ನಾಯಕನ ಪಾತ್ರವನ್ನು ಕಿಚ್ಚ ಸುದೀಪ್ ಅವರೇ ಮಾಡಬೇಕು. ಅವರ ಬದಲಿಗೆ ಆ ಪಾತ್ರವನ್ನು ದರ್ಶನ್ ಮಾಡುತ್ತಾರೆ ಎನ್ನುವುದಾದರೆ ಅದಕ್ಕೆ ನಮ್ಮ ಸಮ್ಮತಿ ಇಲ್ಲ. ನಾವು ಕಾನೂನು ಹೋರಾಟಕ್ಕೂ ಸಿದ್ಧ ಎಂದಿದ್ದಾರೆ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಸ್ವಾಮೀಜಿ.

    ಸುದೀಪ್ ಅವರು ವಾಲ್ಮೀಕಿ ಸಮುದಾಯದವರು. 2010ರಲ್ಲಿಯೇ ಮದಕರಿ ನಾಯಕನ ಪಾತ್ರ ಮಾಡುವುದಾಗಿ ನನಗೆ ಭರವಸೆ ನೀಡಿದ್ದರು. ಆ ಪಾತ್ರವನ್ನು ಸುದೀಪ್ ಅವರೇ ಮಾಡಬೇಕು. ಬೇರೆಯವರು ಆ ಪಾತ್ರ ಮಾಡಿದರೆ ಕಾನೂನು ಹಾಗೂ ಸಾಂಘಿಕ ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದ್ದಾರೆ ಪ್ರಸನ್ನಾನಂದ ಪುರಿ ಸ್ವಾಮೀಜಿ.

  • ದರ್ಶನ್ ಹೀರೋಯಿನ್ ಆಗಿದ್ದವರೀಗ ಸುದೀಪ್'ಗೆ ಅಮ್ಮ

    ದರ್ಶನ್ ಹೀರೋಯಿನ್ ಆಗಿದ್ದವರೀಗ ಸುದೀಪ್'ಗೆ ಅಮ್ಮ

    ದರ್ಶನ್ ಚಿತ್ರಗಳಲ್ಲಿ ಮ್ಯೂಸಿಕಲಿ ಹಿಟ್ ಸಾಲಿನಲ್ಲಿರುವ ಚಿತ್ರ ಲಾಲಿಹಾಡು. ಆ ಚಿತ್ರದಲ್ಲಿ ದರ್ಶನ್‍ಗೆ ನಾಯಕಿಯಾಗಿದ್ದ ಅಭಿರಾಮಿ ಮತ್ತೊಮ್ಮೆ ವಾಪಸ್ ಬಂದಿದ್ದಾರೆ. ಸುದೀಪ್‍ಗೆ ತಾಯಿಯಾಗಿ.

    ಕೋಟಿಗೊಬ್ಬ 3 ಚಿತ್ರದಲ್ಲಿ ಅಭಿರಾಮಿ ಸುದೀಪ್ ಅವರಿಗೆ ತಾಯಿಯಾಗಿ ನಟಿಸಿದ್ದಾರೆ. ಮಲಯಾಳಂ ಮೂಲದ ಅಭಿರಾಮಿ ವಿದೇಶದಲ್ಲಿ ಸೆಟಲ್ ಆಗಿದ್ದರು. ಕನ್ನಡದಲ್ಲಿ ಅಭಿರಾಮಿ ಕಡೆಯದಾಗಿ ದಶರಥ ಚಿತ್ರದಲ್ಲಿ ನಟಿಸಿದ್ದರು. ಈಗ ಕೋಟಿಗೊಬ್ಬ 3 ಚಿತ್ರದಲ್ಲಿ ನಟಿಸುತ್ತಿದ್ದು, ಸುದೀಪ್ ಅವರ ತಾಯಿಯ ಪಾತ್ರ ಮಾಡಿದ್ದಾರಂತೆ.

  • ದಿ ವಿಲನ್ 3ನೇ ಹಾಡು ಆಗಸ್ಟ್ 4ಕ್ಕೆ

    the villain 4th song on saturday

    ಒಂದೊಂದೇ ಹಾಡಿನ ಮೂಲಕ ವಿಲನ್ ಹವಾ ಎಬ್ಬಿಸುತ್ತಿರುವ ಜೋಗಿ ಪ್ರೇಮ್, ಈಗ 3ನೇ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. 3ನೇ ಹಾಡು ಆಗಸ್ಟ್ 4ನೇ ತಾರೀಕು ಅಂದರೆ ಇದೇ ಶನಿವಾರ ಬಿಡುಗಡೆಯಾಗಲಿದೆ. ಮೊದಲ ಎರಡೂ ಹಾಡುಗಳು ಹೀರೋ ಇಮೇಜ್ ಸುತ್ತಮುತ್ತ ಇದ್ದಂಥವು. ಆದರೆ, 3ನೇ ಹಾಡು ಪಕ್ಕಾ ಲವ್ ಸಾಂಗ್ ಎನ್ನುವ ಸುಳಿವು ಸಿಕ್ಕಿದೆ.

    ಲವ್ ಆಗೋಯ್ತು ನಿನ್ನ ಮ್ಯಾಲೆ.. ಅನ್ನೋ ಹಾಡದು. ಅಫ್‍ಕೋರ್ಸ್... ಹುಳ ಬಿಡುವ ಟೆಕ್ನಾಲಜಿಯನ್ನು ಪ್ರೇಮ್ ಇಲ್ಲೂ ಬಿಟ್ಟಿಲ್ಲ. ಹಾಡು ರಿಲೀಸ್ ಆಗಲಿದೆ ಎಂದು ಹೇಳಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರೂ ಆ್ಯಮಿ ಜಾಕ್ಸನ್ ಜೊತೆ ಇರುವ ಎರಡು ಪೋಸ್ಟರ್ ಬಿಟ್ಟಿದ್ದಾರೆ ಪ್ರೇಮ್. ಹಾಗಾದರೆ, ಹಾಡು ಯಾರ ಮೇಲೆ..? ಹೋಗಲಿ.. ಇದು ತ್ರಿಕೋನ ಪ್ರೇಮಕಥೆನಾ..?

    ನಿಮ್ಮ ತಲೆಯಲ್ಲಿ ಪ್ರಶ್ನೆ ಹುಟ್ಟಿದವು ತಾನೇ. ಪ್ರೇಮ್‍ಗೆ ಬೇಕಾಗಿರುವುದೂ ಅದೇ.. ಹೋಗ್ಲಿಬಿಡಿ.. ಆಗಸ್ಟ್ 4ಕ್ಕೆ ಹೊಸ ಹಾಡು ಕೇಳೋಕೆ ರೆಡಿಯಾಗಿ.

  • ದಿ ವಿಲನ್ ಆ್ಯಮಿ ಜಾಕ್ಸನ್ ಪ್ರಾಬ್ಲಂ

    the villain has new villain

    ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ `ದಿ ವಿಲನ್' ಚಿತ್ರಕ್ಕೆ ಹೊಸ ವಿಲನ್ ಸೃಷ್ಟಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಅದ್ದೂರಿ ಚಿತ್ರಕೆಕ ವಿಲನ್ ಆಗಿರೋದು ಭಾರತೀಯ ವಿದೇಶಾಂಗ ಇಲಾಖೆ ಮತ್ತು ರಜಿನಿ ಅಭಿನಯದ ರೋಬೋ 2.0 ಚಿತ್ರ.

    ಆ್ಯಮಿ ಜಾಕ್ಸನ್‍ಗೆ ವೀಸಾ ಸಿಗುತ್ತಿಲ್ಲ. ಹೀಗಾಗಿ ಸುದೀಪ್ ಅವರ ಇಂಟ್ರೊಡಕ್ಷನ್ ಸಾಂಗ್‍ನ ಶೂಟಿಂಗ್‍ನಿಂದ ಆ್ಯಮಿ ದೂರವೇ ಉಳಿಯುವಂತಾಗಿದೆ. ಶೂಟಿಂಗ್ ಕೂಡಾ ಸಮಸ್ಯೆಯಾಗಿದೆ. ಇದರ ಜೊತೆಗೆ ರೋಬೋ 2.0 ಚಿತ್ರ ವಿಳಂಬವಾಗುತ್ತಿದ್ದು, ಡೇಟ್ ಕ್ಲಾಷ್ ಆಗುತ್ತಿದೆ. 

    ಈಗ ಪ್ರೇಮ್‍ಗೆ ಆಗಿರುವ ಸಮಸ್ಯೆಯೆಂದರೆ, ಆ್ಯಮಿ ಡೇಟ್ಸ್‍ಗೆ ಉಳಿದವರ ಡೇಟ್ಸ್ ಹೊಂದಿಸುವುದು. ಆದರೆ, ಚಿತ್ರದಲ್ಲಿ ನಟಿಸುತ್ತಿರುವ ಶಿವಣ್ಣ ಹಾಗೂ ಸುದೀಪ್, ಆ್ಯಮಿಗಿಂತಾ ಬ್ಯುಸಿ. ಪ್ರೇಮ್ ತಲೆ ಕಾದಹೆಂಚಿನಂತಾಗಿರುವುದಂತೂ ನಿಜ.

  • ದಿ ವಿಲನ್ ಕಥೆ ಇದೇ.

    fans started guessing the villain story

    ದಿ ವಿಲನ್ ಚಿತ್ರದ ಕಥೆ ಕೊನೆಗೂ ಗೊತ್ತಾಗಿ ಹೋಗಿದೆ. ಒಂದಲ್ಲ.. ಎರಡಲ್ಲ.. ಇದುವರೆಗೆ ಆರು ಟೀಸರ್ ಬಿಟ್ಟಿರುವ ಪ್ರೇಮ್, ಕಥೆಯನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದರೂ, ಸಿನಿಮಾ ಕಥೆ ಗೊತ್ತಾಗಿಬಿಟ್ಟಿದೆ. ವಿಲನ್ ಕಥೆಯನ್ನು ಬಹಿರಂಗಪಡಿಸಿರುವುದು ಬೇರೆ ಯಾರೂ ಅಲ್ಲ, ವಿಲನ್‍ಗಾಗಿ ಕಾಯ್ತಿರೋ ಅಭಿಮಾನಿಗಳು. ಟೀಸರ್‍ಗಳನ್ನು ನೋಡಿ, ಕಥೆ ಹೀಗೆಯೇ ಇರಬಹುದು ಎಂಬ ಕಲ್ಪನೆಯನ್ನು ಹರಿಬಿಟ್ಟಿದ್ದಾರೆ ಫ್ಯಾನ್ಸ್.

    ಕಥೆ ನಂ.1 - ಸುದೀಪ್ ಮತ್ತು ಶಿವರಾಜ್‍ಕುಮಾರ್, ಇಬ್ಬರೂ ಚಿತ್ರದಲ್ಲಿ ರೌಡಿ ಅಥವಾ ವಿಲನ್‍ಗಳು. ಇಬ್ಬರೂ ಕೂಡಾ ಒಬ್ಬರನ್ನು (ಆ್ಯಮಿ ಜಾಕ್ಸನ್)ರನ್ನು ಹುಡುಕುತ್ತಿರುತ್ತಾರೆ. ಆ ಬೇಟೆಯನ್ನು ನಾನೇ ಆಡಬೇಕು ಎಂದು ಹಠಕ್ಕೆ ಬೀಳ್ತಾರೆ. ಅಲ್ಲಿ ಹೋರಾಟ ನಡೆಯುತ್ತೆ. ಮಧ್ಯೆ ಮದರ್ ಸೆಂಟಿಮೆಂಟ್ ಕೂಡಾ ಇದೆ.

    ಕಥೆ ನಂ.2 - ಸುದೀಪ್ ವಿಲನ್. ಶಿವಣ್ಣ ರಾವಣ. ಇಬ್ಬರೂ ನೆಗೆಟಿವ್ ಶೇಡ್ ಕ್ಯಾರೆಕ್ಟರ್‍ಗಳೇ. ಒಬ್ಬರು ಲೋಕಲ್, ಇನ್ನೊಬ್ಬರು ಇಂಟರ್‍ನ್ಯಾಷನಲ್. ಇಬ್ಬರ ನಡುವೆ ಪರಸ್ಪರ ಬೇಟೆಯಾಡುವ ಕಥೆ ಇದೆ. ಇಬ್ಬರ ನಡುವೆ ಟ್ವಿಸ್ಟ್ ಕೊಡೋದು ಆ್ಯಮಿ ಜಾಕ್ಸನ್. 

    ಕಥೆ ನಂ. 3 - ಇದು ಅಂಡರ್‍ವಲ್ರ್ಡ್ ಸ್ಟೋರಿ. ಡಾನ್ ಯಾರಾಗಬೇಕು ಎಂದು ಇಬ್ಬರ ನಡುವೆ ಫೈಟ್ ಶುರುವಾಗುತ್ತೆ. ಅಥವಾ ಇಬ್ಬರೂ ತಮ್ಮ ತಮ್ಮ ಬಾಸ್‍ಗಳಿಗಾಗಿ ಫೈಟ್ ಶುರು ಮಾಡ್ತಾರೆ. ಆ್ಯಮಿ ಜಾಕ್ಸನ್ ತನಿಖಾಧಿಕಾರಿಯಾಗಿ ಇಬ್ಬರ ನಡುವೆ ದ್ವೇಷ ತಂದಿಟ್ಟು, ಗೇಮ್ ಆಡ್ತಾರೆ. 

    ಸದ್ಯಕ್ಕೆ ಅಭಿಮಾನಿಗಳಿಂದ ಹೊರಬಿದ್ದಿರುವ ಕಥೆಗಳು ಈ ಮೂರು. ಜೋಗಿ ಪ್ರೇಮ್ ಈ ಕಥೆಗಳಲ್ಲೇ ಹೊಸದೊಂದು ಕಥೆ ಸೃಷ್ಟಿಸಿದರೂ ಆಶ್ಚರ್ಯ ಪಡಬೇಡಿ. ನಿಜವಾದ ಕಥೆ ಏನು ಅನ್ನೋದನ್ನು ಪ್ರೇಮ್ ಇದುವರೆಗೂ ಸೀಕ್ರೆಟ್ ಆಗಿಯೇ ಇಟ್ಟಿದ್ದಾರೆ. ಆದರೆ, ಸಿನಿಮಾವೊಂದರ ಕಥೆಯ ಬಗ್ಗೆ ಅಭಿಮಾನಿಗಳಲ್ಲಿ ಈ ರೀತಿಯ ಕುತೂಹಲ ಮೂಡಿರುವುದು, ತಮ್ಮ ತಮ್ಮಲ್ಲೇ ಕಥೆ ಹೀಗೂ ಇರಬಹುದು ಎಂಬ ಚರ್ಚೆ ಶುರುವಾಗಿರೋದು ಚಿತ್ರದ ಮೇಲಿನ ನಿರೀಕ್ಷೆಗೆ ಒಂದು ಪುಟ್ಟ ಸಾಕ್ಷಿ.

  • ದಿ ವಿಲನ್ ಟಿಕೆಟ್ ರೇಟ್.. 400-1000 ರೂ...? 

    will the villain's ticket price go up

    ಶಿವಣ್ಣ ಮತ್ತು ಕಿಚ್ಚ ಸುದೀಪ್ ಜೋಡಿಯ ದಿ ವಿಲನ್ ಇದೇ ಕ್ಟೋಬರ್ 18ಕ್ಕೆ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ದಿನವನ್ನು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಹೆಚ್ಚುವರಿ ಲಾಭಾಂಶಕ್ಕೆ ಮನವಿ ಮಾಡಿದ್ದ ಚಿತ್ರತಂಡ, 60:40 ಲಾಭಾಂಶಕ್ಕೆ ಒಪ್ಪಿಸಿದೆ. 

    ವಿಲನ್ ನಿರ್ಮಾಪಕರಿಗೆ ಶೇ.60ರಷ್ಟು ಪಾಲು ನೀಡಲು ಮಲ್ಟಿಪ್ಲೆಕ್ಸ್ ಮಾಲೀಕರು ಬಹುತೇಕ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಅವಧಿ 3 ಗಂಟೆ ಇರುವುದರಿಂದ, ಜಾಹೀರಾತು ಅವಧಿ ಕಡಿಮೆ ಮಾಡುವಂತೆಯೂ ಚಿತ್ರತಂಡ ಮನವಿ ಮಾಡಿದೆ. ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್‍ಗಳಲ್ಲಿ 15ರಿಂದ 20 ನಿಮಿಷ ಜಾಹೀರಾತುಗಳಿರುತ್ತವೆ. ಇದೆಲ್ಲದರ ಜೊತೆಗೆ ದಿ ವಿಲನ್ ಟಿಕೆಟ್ ದರ ಮೊದಲ ವಾರದಲ್ಲಿ 400 ರೂ. 500 ರೂ. 1000 ರೂ. ಆಗುವ ಸಾಧ್ಯತೆ ಇದೆ.

    ದೊಡ್ಡ ಬಜೆಟ್‍ನಲ್ಲಿ ಸಿನಿಮಾ ನಿರ್ಮಾಣವಾಗಿರುವುದು ಕೂಡಾ ಟಿಕೆಟ್ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ. ಹಾಗೆಂದು ಇದು ಮೊದಲೇನೂ ಅಲ್ಲ. ಹಿಂದಿ, ತೆಲುಗು, ತಮಿಳು ಚಿತ್ರಗಳು ರಿಲೀಸ್ ಆದಾಗ ಮೊದಲ ವಾರ ಮಲ್ಟಿಪ್ಲೆಕ್ಸ್‍ಗಳಲ್ಲಿ ಇದೇ ರೀತಿ ಟಿಕೆಟ್ ದರ ಹೆಚ್ಚಿಸುವ ಸಂಪ್ರದಾಯವೇ ಇದೆ. ಒಟ್ಟಿನಲ್ಲಿ ದಿ ವಿಲನ್ ಚಿತ್ರವನ್ನು ಮೊದಲ ವಾರವೇ ನೋಡಬೇಕು ಎನ್ನುವ ಪ್ರೇಕ್ಷಕರು ಹೆಚ್ಚುವರಿ ಮೊತ್ತವನ್ನು ನೀಡಬೇಕಾಗಬಹುದು.

  • ದಿ ವಿಲನ್ ಹಬ್ಬಕ್ಕೆ ಟಿಕ್ ಟಿಕ್ ಟಿಕ್ ಟಿಕ್

    count down for the villain begins

    ದಿ ವಿಲನ್ ಹಬ್ಬಕ್ಕೆ ಟಿಕ್ ಟಿಕ್ ಶುರುವಾಗಿದೆ. ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳಂತೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದೆಲ್ಲವನ್ನೂ ನೋಡುತ್ತಾ ಎಂಜಾಯ್ ಮಾಡ್ತಿರೋದು ಪ್ರೇಮ್. ಇಡೀ ಸಂಭ್ರಮದಲ್ಲಿ ಖುಷಿ ಖುಷಿಗೊಂಡಿರೋದು ನಿರ್ಮಾಪಕ ಸಿ.ಆರ್. ಮನೋಹರ್. 

    ನಿರ್ಮಾಪಕರು ಖುಷಿ ಪಡೋದಕ್ಕೆ ಕಾರಣಗಳಿವೆ. ದಿ ವಿಲನ್ ಶೋನ ಮೊದಲ ದಿನದ ಎಲ್ಲ ಶೋಗಳೂ ಈಗಾಗಲೇ ಹೌಸ್‍ಫುಲ್ ಆಗಿವೆ. ಸತತ ರಜೆಗಳಿರೋದ್ರಿಂದ ಉಳಿದ ಶೋಗಳೂ ತುಂಬಿಕೊಳ್ಳೋದ್ರಲ್ಲಿ ನೋ ಡೌಟ್. ರಾಜ್ಯದಲ್ಲಿ ಹೆಚ್ಚೂಕಡಿಮೆ 450+ ಥಿಯೇಟರುಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಮುಂಬೈ, ಆಂಧ್ರ, ತೆಲಂಗಾಣ, ಚೆನ್ನೈ, ಕೇರಳದಲ್ಲೂ 80ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗುತ್ತಿದೆ. ಉತ್ತರ ಅಮೆರಿಕದಲ್ಲಿ ನಾಳೆಯಿಂದಲೇ ಶೋ ಶುರುವಾಗಲಿದ್ದು, ಉಳಿದ ಕಡೆ 2 ವಾರಗಳ ಬಳಿಕ ಸಿನಿಮಾ ರಿಲೀಸ್ ಆಗಲಿದೆ. ಮುಂಜಾಗ್ರತೆ ಕ್ರಮವಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಲ ಚಿತ್ರಮಂದಿರಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ. 

  • ದಿ ವಿಲನ್.. ರಿಲೀಸ್‍ಗೂ ಮೊದಲೇ 50 ಕೋಟಿ ಬ್ಯುಸಿನೆಸ್..?

    the villain does 50 crore business ?

    ಶಿವರಾಜ್‍ಕುಮಾರ್, ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಬಿಡುಗಡೆಗೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಸಿನಿಮಾ ಶುರುವಾದಾಗಿನಿಂದ ಸದ್ದು ಮಾಡುತ್ತಲೇ ಇದ್ದ ದಿ ವಿಲನ್, ಈಗ ರಿಲೀಸ್‍ಗೂ ಮೊದಲೇ ದಾಖಲೆ ಬರೆದಿದೆ. ಚಿತ್ರದ ಆಡಿಯೋ, ವಿಡಿಯೋ, ಸ್ಯಾಟಲೈಟ್, ಡಬ್ಬಿಂಗ್ ಹಾಗೂ ಹಂಚಿಕೆಯಲ್ಲಿ ಈಗಾಗಲೇ 50 ಕೋಟಿ ಬ್ಯುಸಿನೆಸ್ ಮಾಡಿದೆಯಂತೆ ದಿ ವಿಲನ್ ಟೀಂ.

    ಇದು ಕನ್ನಡ ಚಿತ್ರರಂಗದಲ್ಲಿ ದಾಖಲೆಯೇ ಸರಿ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಕನ್ನಡದ ಎರಡು ಧೃವತಾರೆಗಳು ಕಾಣಿಸಿಕೊಂಡಾಗಲೇ ಇದು ದಾಖಲೆ ಬರೆಯಲಿರುವ ಚಿತ್ರ ಎಂಬ ನಿರೀಕ್ಷೆಯಿತ್ತು. ಅದು ಹುಸಿಯಾಗುತ್ತಿಲ್ಲ. ಸಿ.ಆರ್.ಮನೋಹರ್ ನಿರ್ಮಾಣದ ದಿ ವಿಲನ್, 100 ಕೋಟಿ ಬ್ಯುಸಿನೆಸ್ ಮಾಡಿ ದಾಖಲೆ ಬರೆದರೂ ಅಚ್ಚರಿಯಿಲ್ಲ.

  • ದಿ ವಿಲನ್‍ಗೆ 50 ದಿನ.. ಸಂಭ್ರಮವೇ ಮಿಸ್ಸಿಂಗ್

    the villain completes 50 days

    ದಿ ವಿಲನ್. ಶಿವಣ್ಣ, ಸುದೀಪ್ ಕಾಂಬಿನೇಷನ್ ಎಂಬ ಕಾರಣಕ್ಕಾಗಿಯೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ. ಬಿಡುಗಡೆಯ ನಂತರ ಮಿಶ್ರ ಪ್ರತಿಕ್ರಿಯೆ ಬಂದವಾದರೂ, ಬಾಕ್ಸಾಫೀಸ್‍ನಲ್ಲಿ ಚೆನ್ನಾಗಿಯೇ ಸದ್ದು ಮಾಡಿತು. ಈಗ ಸಿನಿಮಾ 50 ದಿನ ಪೂರೈಸಿದೆ. ಆದರೆ, ಎಲ್ಲಿ ನೋಡಿದರೂ ಸಂಭ್ರಮವೇ ಕಾಣುತ್ತಿಲ್ಲ.

    ಸಿನಿಮಾ ರಿಲೀಸ್ ಆದ 4 ದಿನಗಳ ನಂತರ ಸಿನಿಮಾ ಬಗ್ಗೆ ಚಿತ್ರತಂಡ ಮಾತನಾಡುವುದನ್ನೇ ಮರೆತುಬಿಟ್ಟಿತು. ಸ್ವತಃ ಕಿಚ್ಚ ಸುದೀಪ್, ಎಲ್ಲಿ ವಿಲನ್ ಟೀಂ ಎಂದು ಪ್ರಶ್ನಿಸುವವರೆಗೆ ಚಿತ್ರ ಯಾವ್ಯಾವ ಚಿತ್ರಮಂದಿರಗಳಲ್ಲಿದೆ ಎಂಬ ಜಾಹೀರಾತೂ ಕಾಣಿಸಲಿಲ್ಲ. ಚಿತ್ರದ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದ ಕಿಚ್ಚ ಸುದೀಪ್ ಆಗಾಗ್ಗೆ ಚಾಟಿ ಬೀಸುತ್ತಲೇ ಹೋದರಾದರು, ದಿ ವಿಲನ್ ಟೀಂ.. ಅದೇಕೋ ಸೈಲೆಂಟ್ ಆಗಿಬಿಡ್ತು. ಈಗಲೂ ಅಷ್ಟೆ.. ಸ್ವತಃ ಸುದೀಪ್, ಚಿತ್ರ 50 ದಿನ ಪೂರೈಸಿದೆ ಅನ್ನೋದನ್ನು ನೆನಪಿಸಿದ್ದಾರೆ. ಅದಾದ ಮೇಲೆ ನಿರ್ದೇಶಕ ಪ್ರೇಮ್ ಖುಷಿ ಹಂಚಿಕೊಂಡಿದ್ದಾರೆ. ಆದರೂ.. ಸಂಭ್ರಮವೇ ಮಿಸ್ಸಿಂಗ್.

    ಹೀಗಾಗೋಕೆ ಏನು ಕಾರಣ..? ಗೊತ್ತಿಲ್ಲ. ಸಮ್‍ಥಿಂಗ್ ಈಸ್ ರಾಂಗ್.

  • ದಿ ವಿಲನ್‍ಗೆ ಟೆರರಿಸ್ಟ್ ಎದುರಾಳಿಯಾಗೋಕೆ ಇದೇ ಕಾರಣ

    why is the villain and the terrorist releasing on same day

    ದಿ ವಿಲನ್. ಶಿವಣ್ಣ ಮತ್ತು ಸುದೀಪ್ ಅಭಿನಯದ ಸಿನಿಮಾ. ಈ ಸಿನಿಮಾದ ಹವಾ ಹೇಗಿತ್ತೆಂದರೆ, ಹಿಂದಿನ ವಾರವೇ ಯಾವುದೇ ಹೊಸ ಸಿನಿಮಾ ಥಿಯೇಟರ್‍ಗೆ ಬರಲಿಲ್ಲ. ಆದರೆ, ದಿ ವಿಲನ್ ರಿಲೀಸ್ ದಿನವೇ ದಿ ಟೆರರಿಸ್ಟ್ ಸಿನಿಮಾ ಬರುತ್ತಿದೆ. ರಾಗಿಣಿ ದ್ವಿವೇದಿ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ಪಿ.ಸಿ.ಶೇಖರ್ ನಿರ್ದೇಶಕ. ಅಲಂಕಾರ್ ಸಂತಾನ ನಿರ್ಮಾಪಕ.

    ಇಬ್ಬರು ಸೂಪರ್‍ಸ್ಟಾರ್‍ಗಳು, ಸ್ಟಾರ್ ಡೈರೆಕ್ಟರ್, ಸ್ಟಾರ್ ಪ್ರೊಡ್ಯೂಸರ್ ಕಾಂಬಿನೇಷನ್‍ನ ಸಿನಿಮಾದ ಎದುರು ಬರೋಕೆ ಏನು ಕಾರಣ ಎಂದರೆ, ನಿರ್ಮಾಪಕ ಅಲಂಕಾರ್ ಉತ್ತರ ಇಷ್ಟೆ. ನಾವು ಮೊದಲೇ ಅಕ್ಟೋಬರ್ 18ಕ್ಕೆ ರಿಲೀಸ್‍ಗೆ ಪ್ಲಾನ್ ಮಾಡಿಕೊಂಡಿದ್ವಿ. ಯೋಜನೆ ಪ್ರಕಾರವೇ ಎಲ್ಲವೂ ನಡೆಯುತ್ತಿದ್ದಾಗ.. ಅದೇ ದಿನ ವಿಲನ್ ರಿಲೀಸ್ ಅಂತಾ ಗೊತ್ತಾಯ್ತು. ಹಾಗಂತ ನಾವು ನಮ್ಮ ಪ್ಲಾನ್ ಬದಲಿಸಿಕೊಳ್ಳಲಿಲ್ಲ. ನನಗೆ ಕಥೆ ಮೇಲೆ ಕಾನ್ಫಿಡೆನ್ಸ್ ಇದೆ ಅಂತಾರೆ ಅಲಂಕಾರ್.

    ಚಿತ್ರದ ಕಂಟೆಂಟ್ ಚೆನ್ನಾಗಿದ್ದರೆ, ಕನ್ನಡ ಪ್ರೇಕ್ಷಕರು ಯಾವತ್ತೂ ಒಳ್ಳೆಯ ಸಿನಿಮಾವನ್ನು ಕೈಬಿಡೋದಿಲ್ಲ. ಅದೊಂದೇ ನಂಬಿಕೆ ಮೇಲೆ ಚಿತ್ರವನ್ನು ತೆರೆಗೆ ತರುತ್ತಿದ್ದೇನೆ. ವಿತರಕ ಜಯಣ್ಣ ಕೂಡಾ ಚಿತ್ರಕ್ಕೆ ಸಪೋರ್ಟ್ ಕೊಟ್ಟಿದ್ದಾರೆ ಎಂದು ಖುಷಿಯಾಗಿ ಹೇಳಿಕೊಳ್ತಾರೆ ಅಲಂಕಾರ್.

    140 ಥಿಯೇಟರುಗಳಲ್ಲಿ ದಿ ಟೆರರಿಸ್ಟ್ ಸಿನಿಮಾ ರಿಲೀಸ್ ಆಗುತ್ತಿದೆ. ದಸರಾ ಹಬ್ಬದ ಸಂಭ್ರಮದ ನಡುವೆಯೇ ದಿ ವಿಲ

  • ದಿಗ್ಗಜರ ನಡುವೆ ಪೈಲ್ವಾನ್ ಸುದೀಪ್

    sudeep's phailwam photos

    ಪೈಲ್ವಾನ್.. ಸುದೀಪ್ ಬಾಕ್ಸರ್ ಆಗಿ ನಟಿಸುತ್ತಿರುವ ಚಿತ್ರ, ದಿನೇ ದಿನೇ ಕುತೂಹಲ ಹುಟ್ಟಿಸುತ್ತಿದೆ. ಚಿತ್ರದಲ್ಲಿ ಸುನಿಲ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ಅವರ ಪಾತ್ರ, ಚಿತ್ರದ ಕಥೆಯ ಕುರಿತು ನಿರೀಕ್ಷೆ ಹೆಚ್ಚುತ್ತಿದೆ.

    ಅದಕ್ಕೆ ಕಾರಣವಾಗಿರೋದು ಚಿತ್ರತಂಡದಿಂದ ಹೊರಬಿದ್ದ ಫೋಟೋಗಳು. ಮೊದಲು ಬಿಡುಗಡೆಯಾಗಿದ್ದ ಪೋಟೋದಲ್ಲಿ ಆಟೋರಾಜ ಶಂಕರ್‍ನಾಗ್ ಅಭಿಮಾನಿಗಳ ಬಳಗ ಅನ್ನೋ ಫೋಟೋ ಕಾಣಿಸಿಕೊಂಡಿತ್ತು. ಹಾಗಿದ್ದರೆ ಸುದೀಪ್ ಶಂಕ್ರಣ್ಣನ ಫ್ಯಾನ್ ಆಗಿರ್ತಾರೆ ಅನ್ನೋ ನಿರೀಕ್ಷೆ ಹುಟ್ಟಿಸಿತ್ತು. ಈಗ ಇನ್ನೊಂದು ಫೋಟೋ ಹೊರಬಿದ್ದಿದೆ.

    ಈ ಫೋಟೋದಲ್ಲಿ ಡಾ.ರಾಜ್, ವಿಷ್ಣು, ಅಂಬಿ, ರವಿಚಂದ್ರನ್, ಶಂಕರ್‍ನಾಗ್, ವಜ್ರಮುನಿ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರ ಪೋಸ್ಟರ್‍ಗಳಿವೆ. ಆ ಪೋಸ್ಟರ್‍ಗಳ ಮುಂದೆ ನಿಂತು ಚಿತ್ರತಂಡದೊಂದಿಗೆ ಫೋಸ್ ಕೊಟ್ಟಿರೋದು ಕಿಚ್ಚ ಸುದೀಪ್.

    ಹಾಗಾದರೆ, ಚಿತ್ರದ ಕಥೆ, ಸುದೀಪ್ ಪಾತ್ರ ಹೇಗಿರಬಹುದು. ನಿಮ್ಮ ಊಹೆಗೆ ಬಿಟ್ಟಿದ್ದು.

  • ದೆವ್ವಗಳನ್ನೇ ಹೆದರಿಸುವ ಐಡಿಯಾಗೆ ಕಿಚ್ಚನ ಮೆಚ್ಚುಗೆ

    sudeep praises mane maratakkidhe

    ದೆವ್ವ ಎಂದರೆ ಮನುಷ್ಯರು ಹೆದರಬೇಕು, ಆದರೆ, ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಎಲ್ಲವೂ ಉಲ್ಟಾ. ಅಲ್ಲಿ ಆಗಾಗ್ಗೆ ದೆವ್ವಗಳನ್ನೇ ಮನುಷ್ಯರು ಹೆದರಿಸುವ ಕಥೆ, ಸನ್ನಿವೇಶಗಳಿವೆ. ಪ್ರೇಕ್ಷಕರಿಗೆ ಇಷ್ಟವಾಗಿರುವುದೇ ಅದು. ಕಿಚ್ಚ ಸುದೀಪ್ ಅವರಿಗೂ ಕೂಡಾ.

    ದೆವ್ವಗಳನ್ನೇ ಹೆದರಿಸುವ ಐಡಿಯಾ ಹೊಸದು. ಕುರಿ ಪ್ರತಾಪ್, ರವಿಶಂಕರ್ ಗೌಡ, ಸಾಧು ಕೋಕಿಲ, ಚಿಕ್ಕಣ್ಣ ಅಭಿನಯ ಅತ್ಯುತ್ತಮವಾಗಿದೆ. ಶ್ರುತಿ ಹರಿಹರನ್ ಅವರನ್ನಂತೂ ತೆರೆಯ ಮೇಲೆ ನೋಡುವುದೇ ಚೆಂದ ಎಂದು ಇಡೀ ಚಿತ್ರತಂಡವನ್ನೇ ಹೊಗಳಿದ್ದಾರೆ ಕಿಚ್ಚ ಸುದೀಪ್.

    ಸ್ವಲ್ಪ ಹೊತ್ತು ಸಿನಿಮಾ ನೋಡುತ್ತೇನೆ. ಇಷ್ಟವಾದರೆ ಮಾತ್ರ ಪೂರ್ತಿ ಸಿನಿಮಾ ನೋಡುತ್ತೇನೆ ಎಂದು ಷರತ್ತು ಹಾಕಿ ಕುಳಿತ ಸುದೀಪ್, ಇಡೀ ಚಿತ್ರ ನೋಡಿ, ಮೆಚ್ಚಿದ್ದಾರೆ. ನಿರ್ದೇಶಕ ಮಂಜು ಸ್ವರಾಜ್ ಅವರ ಬೆನ್ನು ತಟ್ಟಿದ್ದಾರೆ. ನಿರ್ಮಾಪಕ ಎಸ್.ವಿ.ಬಾಬು ಫುಲ್ ಹ್ಯಾಪಿ.

  • ದೆಹಲಿಯಲ್ಲಿ ಮಂತ್ರಿಗಳ ಜೊತೆ ಕಿಚ್ಚ ಸುದೀಪ್ ಮೀಟಿಂಗ್

    ದೆಹಲಿಯಲ್ಲಿ ಮಂತ್ರಿಗಳ ಜೊತೆ ಕಿಚ್ಚ ಸುದೀಪ್ ಮೀಟಿಂಗ್

    ವಿಕ್ರಾಂತ್ ರೋಣ ಚಿತ್ರದ ಪ್ರಚಾರಕ್ಕೆ ಶ್ರೀಕಾರ ಹಾಕಿದ ಮೇಲೆ ಕಿಚ್ಚ ಸುದೀಪ್ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 10 ವರ್ಷಗಳ ನಂತರ ದೆಹಲಿಗೆ ಭೇಟಿ ಕೊಟ್ಟಿರೋ ಸುದೀಪ್ ದೆಹಲಿಯಲ್ಲಿ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಹಾಗೂ ಪ್ರಲ್ಹಾದ್ ಜೋಷಿಯವರ ಜೊತೆ ಮಾತುಕತೆ ನಡೆಸಿರೋದು ವಿಶೇಷ.

    ವಿಕ್ರಾಂತ್ ರೋಣ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಎಲ್ಲ ಭಾಷೆಗಳಲ್ಲೂ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ ಸುದೀಪ್. ಅನೂಪ್ ಭಂಡಾರಿ ನಿರ್ದೇಶನದ ಚಿತ್ರವನ್ನು ಅಷ್ಟೇ ಅದ್ಧೂರಿಯಾಗಿ ನಿರ್ಮಿಸಿರೋ ಜಾಕ್ ಮಂಜು ಚಿತ್ರದ ಪ್ರಚಾರವನ್ನು ಇನ್ನೂ ಇನ್ನೂ ಇನ್ನೂ ಅದ್ಧೂರಿ ಮಾಡಿದ್ದಾರೆ. ಇಡೀ ಚಿತ್ರತಂಡ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತುತ್ತಲೇ ಇದೆ.

    ಜುಲೈ ಕೊನೆಗೆ ರಿಲೀಸ್ ಆಗುತ್ತಿರೋ ಚಿತ್ರ 3ಡಿಯಲ್ಲಿ ಬರಲಿದ್ದು, ಸುದೀಪ್ ಎದುರು ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ದೇಸಾಯಿ ಉದ್ಘರ್ಷಕ್ಕೆ ಕಿಚ್ಚನ ಸ್ಪರ್ಶ

    sudeep dubs for desai's udgarsha trailer

    ಸುನೀಲ್ ಕುಮಾರ್ ದೇಸಾಯಿ, ಕಿಚ್ಚ ಸುದೀಪ್ ಅವರನ್ನು ಚಿತ್ರರಂಗ ಗುರುತಿಸುವಂತೆ ಮಾಡಿದ ನಿರ್ದೇಶಕ. ಸ್ಪರ್ಶ ಚಿತ್ರಕ್ಕೆ ಮುನ್ನ ಸುದೀಪ್ ನಟಿಸಿದ್ದರೂ, ಸುದೀಪ್ ಅವರೊಳಗೊಬ್ಬ ಅದ್ಭುತ ಕಲಾವಿದ ಇದ್ದಾನೆ ಎಂದು ಪರಿಚಯಿಸಿಕೊಟ್ಟವರು ದೇಸಾಯಿ. ದೇಸಾಯಿ ಅವರನ್ನು ಗುರುವಿನಂತೆ ಕಾಣುವ ಕಿಚ್ಚ ಸುದೀಪ್, ಈಗ ನ್ಯಾಷನಲ್ ಸ್ಟಾರ್.

    ಈಗ ದೇಸಾಯಿ ಅವರ ಪಂಚಭಾಷಾ ಸಿನಿಮಾಗೆ ಸುದೀಪ್ ಬಲ ತುಂಬಿದ್ದಾರೆ. ಉದ್ಘರ್ಷ ಚಿತ್ರದ ಟ್ರೇಲರ್‍ಗೆ ಧ್ವನಿ ನೀಡಿದ್ದಾರೆ ಸುದೀಪ್. ವಿಶೇಷವೆಂದರೆ, ಕನ್ನಡ ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂಗೂ ಸುದೀಪ್ ಅವರದ್ದೇ ಧ್ವನಿ ಇರಲಿದೆ. ಆರ್.ದೇವರಾಜ್ ನಿರ್ಮಾಣದ ಸಿನಿಮಾದಲ್ಲಿ ಕಬಾಲಿ ಖ್ಯಾತಿಯ ಧನ್ಸಿಕಾ, ಅನೂಪ್ ಸಿಂಗ್ ಠಾಕೂರ್, ತಾನ್ಯಾ ಹೋಪ್, ಕಬೀರ್ ಸಿಂಗ್, ಬಾಹುಬಲಿ ಪ್ರಭಾಕರ್ ಇದ್ದಾರೆ. ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. 

  • ದೊಡ್ಡ ಸಿನಿಮಾ.. ದೊಡ್ಡ ಟಿಕೆಟ್ಟು..

    the villain movie on oct 18th

    ದಿ ವಿಲನ್ ಸಿನಿಮಾ ಮುಂದಿನ ವಾರ ರಿಲೀಸ್ ಆಗ್ತಿದೆ. ಈ ಚಿತ್ರ ನೋಡೋಕೆ ನೀವು ಥಿಯೇಟರ್‍ಗೆ ಹೋದರೆ ಮಾಮೂಲಿ ಬೆಲೆಗಿಂತ ಹೆಚ್ಚಿನ ಬೆಲೆ ಕೊಡಬೇಕು. ಹೇಗಿರುತ್ತೆ ದಿ ವಿಲನ್ ಚಿತ್ರದ ಟಿಕೆಟ್ ಬೆಲೆ..? ಇಲ್ಲಿದೆ ನೋಡಿ ವಿವರ.

    ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲಿ - ಬಾಲ್ಕನಿ ದರ 50 ರೂ. ಏರಿಕೆ. ಸೆಕೆಂಡ್ ಕ್ಲಾಸ್ 18 ರೂ. ಏರಿಕೆ. ಹೀಗಾಗಿ ಬಾಲ್ಕನಿಗೆ 200 ರೂ. ಹಾಗೂ ಸೆಕೆಂಡ್ ಕ್ಲಾಸ್ ಟಿಕೆಟ್‍ಗೆ 118 ರೂ. ಕೊಡಬೇಕು. ಮಲ್ಟಿಪ್ಲೆಕ್ಸ್‍ಗಳಲ್ಲಿ ಟಿಕೆಟ್ ದರ - 400 ರೂ. ಇರಲಿದೆಯಂತೆ. 

    ಇಷ್ಟೆಲ್ಲ ಆಗಿಯೂ ಈ ದರ ಇರುವುದು ಆರಂಭದ 4 ದಿನ ಮಾತ್ರ. ನಂತರ ಟಿಕೆಟ್ ದರ ಹಳೆಯ ದರಕ್ಕೆ ಮರಳಲಿದೆ.

    ಪರಭಾಷೆಯ ಚಿತ್ರಗಳಿಗೆ ಸಡ್ಡು ಹೊಡೆಯಲೆಂದು ಕನ್ನಡದ ನಿರ್ಮಾಪಕರೊಬ್ಬರು ಅದ್ಧೂರಿಯಾಗಿ ಸಿನಿಮಾ ಮಾಡಿದಾಗ, ನಿರ್ಮಾಪಕರನ್ನೂ ಉಳಿಸಿಕೊಳ್ಳಬೇಕು. ಬೇರೆ ಭಾಷೆ ಚಿತ್ರಗಳಿಗೆ ದುಬಾರಿ ದರ ಕೊಟ್ಟು ಸಿನಿಮಾ ನೋಡುವ ಕನ್ನಡಿಗರು ಕನ್ನಡ ಸಿನಿಮಾವನ್ನೂ ನೋಡಿ ಪ್ರೋತ್ಸಾಹಿಸಲಿ ಎನ್ನುವುದು ವಿತರಕ ಜಾಕ್ ಮಂಜು ಮಾತು.

  • ನಟನ ಚತುರಾಧಿಪತಿ : ಕಿಚ್ಚನಿಗೆ ಹೆಬ್ಬುಲಿ ಹುಡ್ಗೀರ ಬಿರುದು

    kiccha gets new title from hebbuli hudgiru

    ಕಿಚ್ಚ, ಅಭಿನಯ ಚಕ್ರವರ್ತಿ ಸುದೀಪ್ ಈಗ ಅಭಿಮಾನಿಗಳ ಪಾಲಿಗೆ ಹೆಬ್ಬುಲಿ, ರನ್ನ, ಪೈಲ್ವಾನ್, ಮಾಣಿಕ್ಯ.. ಎಲ್ಲವೂ ಆಗಿದ್ದಾರೆ. ಈ ಎಲ್ಲದರ ಸಾಲಿಗೆ ಸೇರಿಕೊಂಡಿದೆ ಹೊಸ ಬಿರುದು. ಅದು ನಟನ ಚತುರಾಧಿಪತಿ.

    ಕಿಚ್ಚನಿಗೆ ಈ ಬಿರುದು ಕೊಟ್ಟಿರೋದು ಹುಡ್ಗೀರು. ಅದರಲ್ಲೂ ಹೆಬ್ಬುಲಿ ಹುಡ್ಗೀರು. ಕಿಚ್ಚನ ಮಹಿಳಾ ಅಭಿಮಾನಿ ಸಂಘವಿದು. ಇವರು ಕೊಟ್ಟಿರುವ ಬಿರುದು ನಟನ ಚತುರಾಧಿಪತಿ

  • ನಾಡಧ್ವಜಕ್ಕೆ ಪೈಲ್ವಾನ್ ನಮಸ್ಕಾರ - ಅಭಿಮಾನಿಗಳ ಜೈಕಾರ

    sudeep's gesture wins many hearts

    ರಾಜ್ಯಾದ್ಯಂತ ನವೆಂಬರ್ 1ರಂದು ರಾಜ್ಯೋತ್ಸವ ಸಂಭ್ರಮ. ಪೈಲ್ವಾನ್ ಚಿತ್ರದ ಶೂಟಿಂಗ್‍ಗಾಗಿ ಹೈದರಾಬಾದ್‍ನಲ್ಲಿರುವ ಕಿಚ್ಚ ಸುದೀಪ್ ಮತ್ತು ಪೈಲ್ವಾನ್ ಚಿತ್ರತಂಡ, ಅಲ್ಲಿಯೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ. ಚಿತ್ರೀಕರಣದ ಜಾಗದಲ್ಲೇ ಪೈಲ್ವಾನ್ ಚಿತ್ರತಂಡದ ಸದಸ್ಯರೆಲ್ಲ ಸೇರಿ, ಧ್ವಜಾರೋಹಣ ಮಾಡಿದ್ದಾರೆ. ತಾಯಿ ಭುವನೇಶ್ವರಿ ಭಾವಚಿತ್ರವನ್ನು ಪೂಜಿಸಿದ್ದಾರೆ.

    ಈ ಸಂದರ್ಭದಲ್ಲಿ ಸುದೀಪ್, ನಾಡಧ್ವಜದ ಎದುರು ಬರಿಗಾಲಿನಲ್ಲಿ ವಿನೀತರಾಗಿ ನಿಂತು ಕೈ ಮುಗಿಯುತ್ತಿರುವ ಫೋಟೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 

  • ನಾನಿದ್ದೇನೆ.. ನಾನಿರುತ್ತೇನೆ.. - ಕಿಚ್ಚನ ಆ ಮಾತೇ ಪೈಲ್ವಾನ್ ನಿರ್ಮಾಪಕಿಯ ತಾಕತ್ತು

    sudeep is the ultimate power who stood with us says swapna krishna

    ಪೈಲ್ವಾನ್, ಕನ್ನಡದ ಅದ್ದೂರಿ ಸಿನಿಮಾ. ಮುಂದಿನ ವಾರ ಪ್ರಪಂಚದಾದ್ಯಂತ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಇದು. ಅದ್ದೂರಿ ಸಿನಿಮಾ.. ಅದ್ದೂರಿ ಬಜೆಟ್.. ಅದ್ದೂರಿ ತಾರಾಗಣ. ಚಿತ್ರಕ್ಕೆ ನಿರ್ಮಾಪಕಿ ಸ್ವಪ್ನಾ ಕೃಷ್ಣ. ನಿರ್ದೇಶಕ ಕೃಷ್ಣ.

    ಇಂಥಾದ್ದೊಂದು ದುಬಾರಿ ಬಜೆಟ್‍ನ ಚಿತ್ರಕ್ಕೆ ನಿರ್ಮಾಪಕಿಯಾಗುವ ಧೈರ್ಯ ಮಾಡಿದ್ದು ಹೇಗೆ..? ಎಂಬ ಪ್ರಶ್ನೆಯನ್ನು ಸ್ವಪ್ನಾ ಮುಂದಿಟ್ಟರೆ ಅವರ ಕೊಡುವ ಉತ್ತರ `ಸುದೀಪ್'.

    ನಿರ್ದೇಶಕ ಕೃಷ್ಣ, ಪೈಲ್ವಾನ್ ಕಥೆಯನ್ನು ಸುದೀಪ್ ಅವರಿಗೆ ಹೇಳಿದಾಗ ಮೊದಲು ಇದು ನನಗಲ್ಲ ಎಂದು ವಾಪಸ್ ಕಳಿಸಿದ್ದ ಸುದೀಪ್, ಮತ್ತೆ ಕೃಷ್ಣ ಅವರನ್ನು ಕರೆಸಿಕೊಂಡರಂತೆ. ಸ್ವಪ್ನಾ ಅವರು ಕೂಡಾ ಪತಿಯ ಜೊತೆಗಿದ್ದರು.

    `ಈ ಸಿನಿಮಾವನ್ನು ನಾನು ಮಾಡುತ್ತೇನೆ. ಆದರೆ, ಚಿತ್ರದಲ್ಲಿ ದೇಹಪ್ರದರ್ಶನದ ದೃಶ್ಯಗಳ ಚಿತ್ರೀಕರಣವನ್ನು ಕೊನೆಯಲ್ಲಿಟ್ಟುಕೊಳ್ಳಬೇಕು. ಅಷ್ಟು ಹೊತ್ತಿಗೆ ನಾನು ತಯಾರಾಗಿರುತ್ತೇನೆ' ಎಂದರಂತೆ ಸುದೀಪ್. ಓಕೆ ಎಂದ ನಂತರ ಸುದೀಪ್ ಹಾಕಿದ 2ನೇ ಕಂಡೀಷನ್ ನೀವೇ ಪ್ರೊಡ್ಯೂಸ್ ಮಾಡಬೇಕು ಅನ್ನೋದು.

    ಏನು ಮಾಡೋದು ಎಂಬ ಗೊಂದಲದಲ್ಲಿದ್ದ ಸ್ವಪ್ನಾ ಕೃಷ್ಣ ತಾವೂ ಒಂದು ಷರತ್ತು ಹಾಕಿದರು. ಜೊತೆಯಲ್ಲಿರುತ್ತೇನೆ ಎಂಬ ಧೈರ್ಯ ನೀಡಿದರೆ ರೆಡಿ ಎಂದರು. ನಾನಿದ್ದೇನೆ ಅನ್ನೋ ಮಾತು ಕೊಟ್ಟರು ಸುದೀಪ್. ಅದರಂತೆಯೇ ನಡೆದುಕೊಂಡರು ಕೂಡಾ.

    ಈಗ ಪೈಲ್ವಾನ್ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿ ನಿಂತಿದೆ. ಚಿತ್ರದ ಪ್ರತಿ ಹಂತದಲ್ಲೂ ಸುದೀಪ್ ಬೆನ್ನೆಲುಬಾಗಿದ್ದಾರೆ. ಅವರು ನೀಡಿದ ಧೈರ್ಯವೇ ಇಷ್ಟು ದೊಡ್ಡ ಚಿತ್ರಕ್ಕೆ ನಿರ್ಮಾಪಕಿಯಾಗಲು ಪ್ರೇರಣೆ ಎಂದಿದ್ದಾರೆ ಸ್ವಪ್ನಾ ಕೃಷ್ಣ.

    ಸ್ವಪ್ನಾ ಕೃಷ್ಣ ಅವರಿಗೆ ನಿರ್ಮಾಣ ಹೊಸದೇನಲ್ಲ. ಅವರ್ ಆರ್‍ಆರ್‍ಆರ್ ಪ್ರೊಡಕ್ಷನ್ಸ್‍ನಲ್ಲಿ ಸೀರಿಯಲ್ ನಿರ್ಮಾಣ ಮಾಡಿದ ಅನುಭವ ಇದೆ. ನಟಿಯಾಗಿದ್ದ ಅವರಿಗೆ ಸಿನಿಮಾ ಕೂಡಾ ಹೊಸದಲ್ಲ. ಆದರೆ ಇಷ್ಟು ದೊಡ್ಡ ಕ್ಯಾನ್‍ವಾಸ್‍ನ ಪೈಲ್ವಾನ್ ಹೊಸದು. ಸುದೀಪ್ ಜೊತೆಗಿದ್ದ ಕಾರಣ ಎಲ್ಲವೂ ಸಲೀಸಾಯ್ತು ಎನ್ನುತ್ತಾರೆ ಸ್ವಪ್ನಾ.

  • ನಾಳೆ ವಿಕ್ರಾಂತ್ ರೋಣ ಟೀಸರ್ : ಯಾವ್ಯಾವ ಭಾಷೆಯಲ್ಲಿ ಯಾವ ಸ್ಟಾರ್?

    ನಾಳೆ ವಿಕ್ರಾಂತ್ ರೋಣ ಟೀಸರ್ : ಯಾವ್ಯಾವ ಭಾಷೆಯಲ್ಲಿ ಯಾವ ಸ್ಟಾರ್?

    ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾದ ಟೀಸರ್ ರಿಲೀಸ್ ಮಾಡೋಕೆ ಯುಗಾದಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಜಾಕ್ ಮಂಜು. ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದ ಟೀಸರ್ ಎಲ್ಲ ಭಾಷೆಗಳಲ್ಲಿಯೂ ರಿಲೀಸ್ ಆಗುತ್ತಿದೆ. ಆಯಾ ಭಾಷೆಗೆ ಆಯಾ ಭಾಷೆಯ ಸ್ಟಾರ್ ನಟರೇ ಇರುತ್ತಾರೆ ಅನ್ನೋದು ವಿಶೇಷ.

    ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್, ತಮಿಳಿನಲ್ಲಿ ಸಿಂಬು ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 9.55ಕ್ಕೆ ಟೀಸರ್ ರಿಲೀಸ್.

    ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಜೋಸೆಫ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ನಟಿಸಿರೋ ಚಿತ್ರ ಫ್ಯಾಂಟಸಿ ಮೂವಿ. ಅನೂಪ್ ಭಂಡಾರಿ ನಿರ್ದೇಶಕ. ಜಾಕ್ ಮಂಜು, ಶಾಲಿನಿ ಮಂಜು ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಣದ ಸಿನಿಮಾ 2022ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು