` kiccha sudeepa - chitraloka.com | Kannada Movie News, Reviews | Image

kiccha sudeepa

  • ಇಂಡಿಯಾದಲ್ಲೇ ವಿಕ್ರಾಂತ್ ರೋಣನ ಹೊಸ ದಾಖಲೆ : ನಿಮ್ ನಿಮ್ ಭಾಷೆಯಲ್ಲೇ ನೋಡಬಹುದು..!

    ಇಂಡಿಯಾದಲ್ಲೇ ವಿಕ್ರಾಂತ್ ರೋಣನ ಹೊಸ ದಾಖಲೆ : ನಿಮ್ ನಿಮ್ ಭಾಷೆಯಲ್ಲೇ ನೋಡಬಹುದು..!

    ವಿಕ್ರಾಂತ್ ರೋಣ. ಕನ್ನಡದ ಸಿನಿಮಾ. ಹಲವು ಭಾಷೆಗಳಲ್ಲಿ ಡಬ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಸುದೀಪ್, ನೀತಾ ಜೋಸೆಫ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಸಿನಿಮಾ ರಿಲೀಸ್ ಆಗುವುದು ಜುಲೈ ಕೊನೆ ವಾರ. ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್‍ನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದರ ಜೊತೆಯಲ್ಲೇ ನೀವು ನಿಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಹೊಸ ಟೆಕ್ನಾಲಜಿಯೂ ಈ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ.

    ಸಿನಿ ಡಬ್ ಆ್ಯಪ್. ಇದರ ಮೂಲಕ ನೀವು ನಿಮಗಿಷ್ಟವಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ನೀವು ಹಿಂದಿ ವಿಕ್ರಾಂತ್ ರೋಣ ಥಿಯೇಟರಿನಲ್ಲಿ ಕುಳಿತಿದ್ದೀರಿ ಎಂದುಕೊಳ್ಳಿ. ಆದರೆ ನಿಮಗೆ ಹಿಂದಿ ಗೊತ್ತಿಲ್ಲ. ಕನ್ನಡದಲ್ಲಿಯೇ ನೋಡಬೇಕು ಎಂದುಕೊಳ್ಳುತ್ತೀರಿ. ಆಗ ಈ ಸಿನಿ ಡಬ್ ಆ್ಯಪ್ ಮೂಲಕ ನೀವು ಸಿನಿಮಾವನ್ನು ಕನ್ನಡದಲ್ಲಿಯೇ ಕೇಳಬಹುದು. ಈ ಆ್ಯಪ್ ಇದ್ದರೆ ಅದು ನೀವು ಥಿಯೇಟರಿನಲ್ಲಿ ಇರುವ ಟೈಂ ನೋಡಿಕೊಂಡು ಆಪರೇಟ್ ಆಗುತ್ತೆ. ಪೈರಸಿಯಲ್ಲಿ ಆಗಲ್ಲ. ಇದು ನಮ್ಮ ತಂಡದ ಕೆಲಸ ಎಂದು ಇಡೀ ತಂಡದ ಬೆನ್ನು ತಟ್ಟಿದ್ದಾರೆ ಕಿಚ್ಚ ಸುದೀಪ್.

    ಅಂದಹಾಗೆ ಇಂಥಾದ್ದೊಂದು ವ್ಯವಸ್ಥೆ ವಿಶ್ವಸಂಸ್ಥೆಯಲ್ಲಿದೆ. ಅಲ್ಲಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದರೂ, ಅಲ್ಲಿರೋ ಟೆಕ್ನಾಲಜಿ ಬಳಸಿಕೊಂಡು ತಕ್ಷಣವೇ ಅದು ಅನುವಾದಗೊಂಡು.. ನಿಮಗಿಷ್ಟವಾದ ಭಾಷೆಯಲ್ಲಿ ಕೇಳುವಂತ ವ್ಯವಸ್ಥೆ ಇದೆ. ಕೆಲವು ಕಾರ್ಪೊರೇಟ್ ಕಂಪೆನಿಗಳು ಇದನ್ನು ಈಗಾಗಲೇ ಅಳವಡಿಸಿಕೊಂಡಿವೆ. ಇದನ್ನು ಸಿನಿಮಾದಲ್ಲೂ ಬಳಸಬಹುದು ಅನ್ನೋದು ಕಲ್ಪನೆಯ ರೂಪದಲ್ಲಿತ್ತು. ಈ ಕಲ್ಪನೆಗೆ ಈಗ ಮೂರ್ತ ಸ್ವರೂಪ ನೀಡುತ್ತಿದೆ ಜಾಕ್ ಮಂಜು ಟೀಂ.

    ಇದು ಯಶಸ್ವಿಯಾದರೆ ಇದು ಕನ್ನಡ ಚಿತ್ರರಂಗದ ದಾಖಲೆಯಾಗಿ ಉಳಿಯಲಿದೆ. ಇಡೀ ದೇಶದ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗ ಕೊಡುವ ಕಾಣಿಕೆಯಾಗಲಿದೆ.

  • ಇದು ಅಧಿಕೃತ : ವೀರೇಶ್ ಚಿತ್ರಮಂದಿರದ 4 ದಿನದ ಗಳಿಕೆ ಎಷ್ಟು..?

    veeresh theater owner discloses pailwan 4 days collections

    ಪೈಲ್ವಾನ್ ಚಿತ್ರ ಒಂದು ಲೆಕ್ಕದ ಪ್ರಕಾರ ವಾರ ಮುಗಿಯುವ ಮೊದಲೇ 50 ಕೋಟಿಯ ಕಲೆಕ್ಷನ್ ದಾಟು ಮುನ್ನುಗ್ಗುತ್ತಿದೆ. ಅದರಲ್ಲಿ ನಿರ್ಮಾಪಕರ ಷೇರ್ ಎಷ್ಟು ಎನ್ನುವುದು ಬೇರೆಯದೇ ವಿಚಾರ. ಮತ್ತೊಂದೆಡೆ ಚಿತ್ರಕ್ಕೆ ಜನ ಇಲ್ಲ, ಥಿಯೇಟರು ಖಾಲಿ ಖಾಲಿ ಎಂಬ ಅಪಪ್ರಚಾರವೂ ನಡೆಯುತ್ತಿದೆ. ಅಫ್‍ಕೋರ್ಸ್.. ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾದಾಡುತ್ತಿರುವುದು ಸುದೀಪ್ ಫ್ಯಾನ್ಸ್.

    ಈ ಅಪಪ್ರಚಾರಗಳಿಗೆ ಸ್ವತಃ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದ ಮಾಲೀಕರಾದ ಕೆ.ವಿ.ಚಂದ್ರಶೇಖರ್ ಉತ್ತರ ಕೊಟ್ಟಿದ್ದಾರೆ.

    ಮೊದಲ 4 ದಿನಗಳಲ್ಲಿ ವೀರೇಶ್ ಸಿನಿಮಾಸ್ ಚಿತ್ರಮಂದಿರದಲ್ಲಿ ಪೈಲ್ವಾನ್ ಚಿತ್ರದ ಗಳಿಕೆ 31 ಲಕ್ಷ. ಇದು ಅವರ ಥಿಯೇಟರಿನಲ್ಲಿ ಮಾತ್ರವೇ ಆದ ಕಲೆಕ್ಷನ್ ವಿವರ.

    ಚಿತ್ರಕ್ಕೆ ಮೊದಲು ನಡೆಯುವ ಪ್ರಚಾರ ಮೊದಲ ಶೋಗಳಿಗಷ್ಟೇ ಸೀಮಿತ. ನಂತರದ್ದೇನಿದ್ದರೂ ಬಾಯಿ ಮಾತಿನ ಪ್ರಚಾರದಲ್ಲಿಯೇ ನಡೆಯಬೇಕು. ಅಪಪ್ರಚಾರದಿಂದ ಯಾವುದೇ ಚಿತ್ರವನ್ನು ಸೋಲಿಸಲು ಸಾಧ್ಯವಿಲ್ಲ. ಚಿತ್ರ ಚೆನ್ನಾಗಿದ್ದರೆ ಹೀರೋ ಯಾರೇ ಆಗಿದ್ದರೂ ಪ್ರೇಕ್ಷಕ ಪ್ರಭು ಕೈಬಿಡಲ್ಲ ಎಂದಿರುವ ಚಂದ್ರಶೇಖರ್, ಪ್ರೇಕ್ಷಕರನ್ನು ಚಿತ್ರಮಂದಿರದಿಂದ ದೂರ ತಳ್ಳುವ ಇಂತಹ ಕುತಂತ್ರಗಳನ್ನು ಕೈಬಿಡಿ, ಇದು ಚಿತ್ರರಂಗಕ್ಕೆ ಮತ್ತು ಕನ್ನಡಕ್ಕೆ ಒಳ್ಳೆಯದಲ್ಲ ಎಂದು ಮನವಿ ಮಾಡಿದ್ದಾರೆ.

     

  • ಇಂದು ದಿ ವಿಲನ್ ಟೀಸರ್ ಬಿಡುಗಡೆ ಹಬ್ಬ

    the villain teaser release festival today

    ದಿ ವಿಲನ್ ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ಭರಾಟೆಯೂ ಜೋರಾಗುತ್ತಿದೆ. ಚಿತ್ರದ ಪ್ರತೀ ಹಂತವನ್ನು ಹಬ್ಬವಾಗಿಸಿದ ನಿರ್ದೇಶಕ ಜೋಗಿ ಪ್ರೇಮ್, ಇಂದು ಟೀಸರ್ ಬಿಡುಗಡೆ ಹಬ್ಬ ಇಟ್ಟುಕೊಂಡಿದ್ದಾರೆ.

    ಇಂದು ಸಂಜೆ 7 ಗಂಟೆಗೆ ಮೆರಿಡಿಯನ್ ಹೋಟೆಲ್‍ನಲ್ಲಿ ಟೀಸರ್ ಬಿಡುಗಡೆ ಹಬ್ಬವಿದೆ. ಒಂದಲ್ಲ..ಎರಡಲ್ಲ.. 4 ಟೀಸರ್‍ಗಳು ಬಿಡುಗಡೆಯಾಗಲಿವೆ. ಎಲ್ಲವೂ ತಲಾ 10 ಸೆಕೆಂಡ್‍ಗಳ ಟೀಸರ್‍ಗಳು. ಪ್ರೇಮ್ ಈ ದಿನ ಚಿತ್ರದಲ್ಲಿನ ವಿಲನ್ ಯಾರು ಅನ್ನೋ ಸುಳಿವು ಕೊಡ್ತಾರೆ ಅನ್ನೋ ಕುತೂಹಲವಿತ್ತು. ಪ್ರೇಮ್, ಆ ಸೀಕ್ರೆಟ್‍ನ್ನು ಬಹಿರಂಗಗೊಳಿಸೋಕೆ ಸಾಧ್ಯವೇ ಇಲ್ಲ ಎಂದು ಚಿತ್ರಲೋಕದ ಜೊತೆ ಬೆಟ್ ಕಟ್ಟಿದ್ದರು. ಆ ನಿರೀಕ್ಷೆ ಕೈಗೂಡುವ ದಿನ ಇವತ್ತು.

    ಶಿವರಾಜ್‍ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಅರ್ಜುನ್ ಜನ್ಯಾ ಸೇರಿದಂತೆ ಸಮಗ್ರ ವಿಲನ್ ಟೀಂ ಈ ದಿನ ಇರಲಿದೆ. ಸಿ.ಆರ್.ಮನೋಹರ್ ನಿರ್ಮಾಣದ ಸಿನಿಮಾ, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಅದ್ಧೂರಿ ಚಿತ್ರ. ಅಕ್ಟೋಬರ್ 18ಕ್ಕೆ ರಿಲೀಸ್ ಆಗುತ್ತಿದೆ.

  • ಇಂದು ಪೈಲ್ವಾನ್ ಟ್ರೇಲರ್ ಹಬ್ಬ

    pailwan trailer festival today

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 22ರಂದು ಸಿನಿಮಾದ ಟ್ರೇಲರ್ ಹೊರ ಬರುತ್ತಿದೆ. ಇಂದು ಪೈಲ್ವಾನ್ ಹಬ್ಬ ಎನ್ನುವುದು ಫಿಕ್ಸ್ ಆಗಿದೆ. 

    ಕಿಚ್ಚ ಸುದೀಪ್, ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಅಭಿನಯದ ಪೈಲ್ವಾನ್ನಲ್ಲಿ ಸುದೀಪ್, ಕುಸ್ತಿ ಪಟುವಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಸಿಕ್ಸ್ಪ್ಯಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿವೆ. ಕೃಷ್ಣ ನಿರ್ದೇಶನದ ಚಿತ್ರಕ್ಕೆ, ಸ್ವಪ್ನಾ ಕೃಷ್ಣ ನಿರ್ಮಾಪಕ.

    ಒಟ್ಟು 5 ಭಾಷೆಗಳಲ್ಲಿ ಪೈಲ್ವಾನ್ ತೆರೆ ಕಾಣುತ್ತಿದೆ. ಎಲ್ಲ ಭಾಷೆಗಳಲ್ಲಿಯೂ, ಜಗತ್ತಿನಾದ್ಯಂತ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗಲಿದೆ. ಮೊನ್ನೆ ಮೊನ್ನೆ ತಾನೇ ಸೈರಾ ನರಸಿಂಹ ರೆಡ್ಡಿ ಟೀಸರ್ ರಿಲೀಸ್ ಆಗಿದ್ದು, ಇನ್ನು ಕಿಚ್ಚನ ಹಬ್ಬ ಶುರುವಾಗಲಿದೆ.

  • ಇಲ್ಲಿ ಹೆಬ್ಬುಲಿ.. ಅಲ್ಲಿ ಸಿಖಂದರ್ ಭಾರದ್ವಾಜ್

    sudeep is sikhander in dabang 3

    ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3ಯಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವುದು ಗೊತ್ತಿದೆಯಲ್ಲ, ಈಗ ಆ ಪಾತ್ರದ ಹೆಸರು ರಿವೀಲ್ ಆಗಿದೆ. ಹಿಂದಿಯ ದಬ್ಬಾಂಗ್ 3ಯಲ್ಲಿ ಕಿಚ್ಚನ ಪಾತ್ರದ ಹೆಸರು ಸಿಖಂದರ್ ಭಾರದ್ವಾಜ್. ಸಲ್ಮಾನ್ ಎದುರು ಖಳನಾಯಕನಾಗಿ ಅಬ್ಬರಿಸುತ್ತಿರುವ ಸುದೀಪ್, ಚುಲ್‍ಬುಲ್ ಪಾಂಡೆಯ ಜೊತೆ ಟಾಮ್ & ಜೆರ್ರಿ ಆಟವಾಡಲಿದ್ದಾರಂತೆ.

    ಸುದೀಪ್ ಬೇರೆ ಭಾಷೆಗಳಲ್ಲಿ ವಿಲನ್ ಮತ್ತು ನೆಗೆಟಿವ್ ಶೇಡ್ ಪಾತ್ರಗಳಲ್ಲಿಯೇ ಹೆಚ್ಚು ಮಿಂಚಿದವರು. ಅತ್ತ ಹಿಂದಿಯಲ್ಲಿ ಬ್ಯುಸಿಯಿದ್ದರೂ, ಕನ್ನಡದ ಕೋಟಿಗೊಬ್ಬ-3 ಚಿತ್ರವನ್ನು ಬಿಟ್ಟಿಲ್ಲ. ಆ ಚಿತ್ರದ ಶೂಟಿಂಗ್ ಯಥಾವತ್ ಪ್ಲಾನಿನಂತೆಯೇ ನಡೆದುಕೊಳ್ಳುವಂತೆ ನೋಡಿಕೊಂಡಿದ್ದಾರೆ ಸುದೀಪ್. ಸದ್ಯಕ್ಕೆ ಸುದೀಪ್ ಅಭಿನಯದ ಪೈಲ್ವಾನ್, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

  • ಈ ಅಭಿಮಾನಕ್ಕೆ ಸುದೀಪ್ ಮೌನವಾಗಿಬಿಟ್ಟರು..!

    sudeep is speechless over his 82 year old fan

    ಕಿಚ್ಚ ಸುದೀಪ್‍ಗೆ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಲ್ಲ. ಸುದೀಪ್‍ಗೆ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಭಿಮಾನಿಗಳಿದ್ದಾರೆ. ಅದು ಈಗ ಮತ್ತೊಮ್ಮೆ ಸಾಬೀತಾಗಿದೆ. ಅಂತಹ ಒಬ್ಬರು ಹಿರಿಯ ಅಭಿಮಾನಿಯೊಬ್ಬರು ಸುದೀಪ್ ಅವರನ್ನು ಮನೆಗೆ ಆಹ್ವಾನಿಸಿದ್ದಾರೆ.

    ಅವರೋ 82 ವರ್ಷದ ಅಜ್ಜಿ. ಸುದೀಪ್ ಅವರು ಚಿತ್ರರಂಗಕ್ಕೆ ಬಂದು 22 ವರ್ಷವಾದ ಹಿನ್ನೆಲೆಯಲ್ಲಿ ಶುಭ ಹಾರೈಸಿರುವ ಅವರು ``ನೀವೆಂದರೆ ನಮಗಿಷ್ಟ. ಸ್ವಂತ ಪರಿಶ್ರಮದಿಂದ ಒಳ್ಳೆಯ ಸಾಧನೆ ಮಾಡಿದ್ದೀರಿ. ನಿಮ್ಮ ಕುಟುಂಬ, ತಂದೆ ತಾಯಿಯರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಂತೆ. ಸಮಾಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದ್ದೀರಂತೆ. ಒಂದ್ಸಲ ಬಿಡುವು ಮಾಡಿಕೊಂಡು ಮನೆಗೆ ಬನ್ನಿ'' ಹೀಗೆ ಹೇಳಿರುವ ಪುಟ್ಟ ವಿಡಿಯೋವೊಂದನ್ನು ಸುದೀಪ್‍ಗೆ ಕಳುಹಿಸಿಕೊಟ್ಟಿದ್ದಾರೆ ಆ ಅಜ್ಜಿ.

    ಅಂಥಾದ್ದೊಂದು ಅಭಿಮಾನಕ್ಕೆ ಸುದೀಪ್ ಮೂಕವಿಸ್ಮಿತರಾಗದೆ ಬೇರೆ ಮಾರ್ಗವಾದರೂ ಏನಿತ್ತು..? ಖಂಡಿತಾ ಬರುತ್ತೇನೆ, ನಿಮ್ಮ ಆಶೀರ್ವಾದವೇ ನನ್ನ ಸಂಪಾದನೆ ಎಂದು ಪ್ರತಿಕ್ರಿಯಿಸಿದ್ದಾರೆ ಕಿಚ್ಚ ಸುದೀಪ್.

     

     

     

     

  • ಈ ಪೈಲ್ವಾನ್ ಎದುರು ಡಲ್ ಆಗಲೇಬೇಕು ಕಿಚ್ಚ..!

    make way for pailwan's wife

    ಹತ್ತೂರ ಸರದಾರನಾದರೂ.. ಊರು ಕಾಯೋ ಪೈಲ್ವಾನ್ ಆದರೂ ಹೆಂಡತಿ ಎದುರು ಗಂಡ ಗಂಡಾನೇ.. ಅದಕ್ಕೆ ಸುದೀಪ್ ಅವರೂ ಹೊರತಲ್ಲ. ಪತಿ ಸುದೀಪ್ ಪೈಲ್ವಾನ್ ಆಗಿ.. ದೇಹವನ್ನೆಲ್ಲ ಹುರಿಗೊಳಿಸಿ.. ಮೈಕಟ್ಟು, ಮಾಂಸಖಂಡಗಳೆಲ್ಲ ಕಾಣುವಂತೆ ತೋರಿಸಿ.. ಅಭಿಮಾನಿಗಳೆಲ್ಲ ವ್ಹಾವ್ ಎನ್ನುವಂತೆ ಮಾಡಿದ್ದಾರೆ.

    ಆದರೆ, ಇವರು ಅದೇ ಸುದೀಪ್ ಬೆನ್ನ ಹಿಂದೆ ನಿಂತು.. ಪೈಲ್ವಾನ್ ಸ್ಟೈಲಲ್ಲಿ ರೆಟ್ಟೆ ತೋರಿಸಿ.. ಹೆಂಗೆ ಎಂದಿದ್ದಾರೆ. ನಂಗಿಂತ ನೀನೇ ಪವರ್‍ಫುಲ್ ಎನ್ನಲೇಬೇಕು ಕಿಚ್ಚ. ಎಷ್ಟೆಂದರೂ.. ಅವರು ಪ್ರಿಯಾ ಸುದೀಪ್. 

  • ಈಗ ಜೊತ್ತೆ ಮತ್ತೆ ಗುದ್ದಾಡಬೇಕು ಕಿಚ್ಚ..!

    pailwan to clash wih gang leader at box office

    ಈಗ, ಸುದೀಪ್ ವೃತ್ತಿ ಜೀವನದ ಮೈಲುಗಲ್ಲು. ರಾಜಮೌಳಿ ನಿರ್ದೇಶನದ ಈಗ ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಸುದೀಪ್, ಇಡೀ ಭಾರತದಲ್ಲಿ ಸ್ಟಾರ್ ಆದರು. ಆ ಚಿತ್ರದಲ್ಲಿ ಸುದೀಪ್ ಪ್ರತಿನಾಯಕನ ಪಾತ್ರ ಮಾಡಿ ಮಿಂಚಿದ್ದರು. ಈಗ ಚಿತ್ರದಲ್ಲಿ ಸುದೀಪ್ ವಿಲನ್ ಆದರೆ, ಈಗ ಆಗಿದ್ದುದು ನಾನಿ.ಅವರಿಬ್ಬರೂ ಈಗ 7 ವರ್ಷಗಳ ನಂತರ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ.

    ಪೈಲ್ವಾನ್ ಬಿಡುಗಡೆ ಸಮಯದಲ್ಲೇ ನಾನಿ ನಟಿಸಿರುವ ಗ್ಯಾಂಗ್ ಲೀಡರ್ ರಿಲೀಸ್ ಆಗುತ್ತಿದೆ. ಪೈಲ್ವಾನ್ ತೆಲುಗಿನಲ್ಲೂ ಬರುತ್ತಿರುವುದರಿಂದ ಬಾಕ್ಸಾಫೀಸಿನಲ್ಲಿ ಸುದೀಪ್ ಪೈಲ್ವಾನ್ ಮತ್ತು ನಾನಿಯ ಗ್ಯಾಂಗ್ ಲೀಡರ್ ಸ್ಪರ್ಧಿಸಲೇಬೇಕು. ಸುದೀಪ್ ಅವರಂತೆಯೇ ನಾನಿಗೂ ತೆಲುಗಿನಲ್ಲಿ ದೊಡ್ಡ ಮಾರ್ಕೆಟ್ ಇದೆ. ಒನ್ಸ್ ಎಗೇಯ್ನ್ ಈಗ ಕೃಪೆ.

    ಈ ಮುಖಾಮುಖಿಯಲ್ಲಿ ಯಾರು ಗೆಲ್ತಾರೆ..? ಪೈಲ್ವಾನ್ ಗೆಲ್ಲಲಿ ಎನ್ನುವುದು ಕಿಚ್ಚನ ಅಭಿಮಾನಿಗಳ ಆಸೆ. ಅದಕ್ಕೆ ತಕ್ಕಂತೆ ನಿರ್ದೇಶಕ ಕೃಷ್ಣ, ಚಿತ್ರದ ಟ್ರೇಲರ್, ಹಾಡುಗಳ ಮೂಲಕ ದೊಡ್ಡ ಸೆನ್ಸೇಷನ್ ಸೃಷ್ಟಿಸಿದ್ದಾರೆ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿತ್ರವನ್ನು ಅದ್ಭುತವಾಗಿ ಪ್ರಮೋಟ್ ಮಾಡಿದ್ದಾರೆ. ಇದೆಲ್ಲದರ ಜೊತೆಗೆ ಸುದೀಪ್ಗೆ ರಾಜಮೌಳಿ ಹಾರೈಕೆಯೂ ಇದೆ. ಪೈಲ್ವಾನ್ ಗೆಲ್ಲಲಿ.

  • ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಹಬ್ಬ

    ಉಪ್ಪಿ ಹುಟ್ಟುಹಬ್ಬಕ್ಕೆ ಕಬ್ಜ ಹಬ್ಬ

    ಉಪೇಂದ್ರ ನಟಿಸುತ್ತಿರುವ ಬಹುಭಾಷಾ ಸಿನಿಮಾ ಕಬ್ಜ. ಉಪೇಂದ್ರ ಜೊತೆ ಸುದೀಪ್ ಕೂಡಾ ಪ್ರಧಾನ ಪಾತ್ರದಲ್ಲಿದ್ದಾರೆ. ಶ್ರಿಯಾ ಸರಣ್ ನಾಯಕಿಯಾಗಿರೋ ಚಿತ್ರದಲ್ಲಿ ಡ್ಯಾನಿಷ್ ಅಖ್ತರ್ ಸೈಫಿ, ನವಾಬ್ ಷಾ, ಕಬೀರ್ ಸಿಂಗ್ ದುಲ್ಹಾನ್, ಪೊಸಾನಿ ಮುರಳಿ ಕೃಷ್ಣ, ಮುರಳೀಕೃಷ್ಣ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಈ ಚಿತ್ರದ ಟೀಸರ್ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಸೆಪ್ಟೆಂಬರ್ 18ರಂದು ಉಪ್ಪಿ ಹುಟ್ಟುಹಬ್ಬ. ಅದಕ್ಕೆ ಮುನ್ನ ಸೆ.17ರಂದು ಕಬ್ಜ ಟೀಸರ್ ಬಿಡುಗಡೆಯಾಗಲಿದೆ.

    ಕೆಜಿಎಫ್ ಯಶಸ್ಸು ಸಿನಿಮಾ ಮೇಕರ್‍ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸಿದೆ. ಸಿನಿಮಾದ ಬಜೆಟ್ ಮತ್ತು ಕ್ಯಾನ್ವಾಸ್ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಆರ್.ಚಂದ್ರು. ಎಂಟಿಬಿ ನಾಗರಾಜ್ ಅರ್ಪಿಸುತ್ತಿರುವ ಚಿತ್ರಕ್ಕೆ ಆರ್.ಚಂದ್ರು ಅವರೇ ನಿರ್ಮಾಪಕ.

  • ಉಪ್ಪು, ಖಾರ, ಸಿಹಿ ಬಿಟ್ಟ ಪೈಲ್ವಾನ್ ಇಳಿಸಿಕೊಂಡ ದೇಹ ತೂಕ ಎಷ್ಟು..?

    sudeep had to foloow strict diet and rigorous workouts for pailwan

    ಪೈಲ್ವಾನ್‍ಗೂ ಮೊದಲು ಬಂದ ಸಿನಿಮಾಗಳಿಗೂ, ಪೈಲ್ವಾನ್‍ಗೂ ಇರುವ ಅತಿ ದೊಡ್ಡ ವ್ಯತ್ಯಾಸ ಸುದೀಪ್‍ರ ಫಿಟ್‍ನೆಸ್. ಹುರಿಗಟ್ಟಿದ ದೇಹ, ಕಟ್ಟುಮಸ್ತಾದ ತೋಳು, ಮೀನಖಂಡ ಉಬ್ಬಿರುವಂತ ಕಾಲು, ಅಗಲಗೊಂಡಿರುವ ಎದೆ, ಮಡಿಕೆಯಾಗಿರುವ ಹೊಟ್ಟೆ.. ಎಲ್ಲವೂ ಡಿಫರೆಂಟ್. ಅದೆಲ್ಲವನ್ನೂ ಸುದೀಪ್ ಏಕಾಏಕಿ ಸಾಧಿಸಿದ್ದಲ್ಲ. ಅದರ ಹಿಂದೆ ಸುದೀರ್ಘ ಶ್ರಮವಿದೆ.

    `ವಿಲನ್ ಮಾಡುವಾಗ ಸ್ವಲ್ಪ ದಪ್ಪಗಾಗಿದೆ. ಓವರ್ ವೇಯ್ಟ್ ಎನ್ನಬಹುದು. ಆದರೆ, ಪೈಲ್ವಾನ್ ಒಪ್ಪಿಕೊಂಡಾಗ ದೈಹಿಕವಾಗಿ ಸಿದ್ಧವಾಗುವುದಕ್ಕಿಂತ ಮಾನಸಿಕವಾಗಿ ಸಿದ್ಧವಾಗಬೇಕು. ಪೈಲ್ವಾನ್‍ಗೆ ಮೊದಲು ಅನುಸರಿಸಿದ ಜಿಮ್, ಲೈಫ್‍ಸ್ಟೈಲ್ ಎಲ್ಲವೂ ಶಿಸ್ತುಬದ್ಧ. ಊಟದಲ್ಲಿ ಉಪ್ಪು, ಖಾರ ಇರಲಿಲ್ಲ. ಸ್ವೀಟ್ ಮುಟ್ಟುವಂತೆಯೇ ಇರಲಿಲ್ಲ. ಲಿಕ್ಕರ್ ದೂರ ದೂರ. ದಿನಕ್ಕೆ 5 ಹೊತ್ತು ಊಟ. ಆದರೆ, ಇಷ್ಟೇ ಗ್ರಾಂ ತಿನ್ನಬೇಕು ಎನ್ನುವ ಷರತ್ತು. ನಿದ್ದೆಯೂ ಅಷ್ಟೇ. ಟ್ರೈನರ್ ಹೇಳಿದ್ದಕ್ಕಿಂತ ನಿಮಿಷವೂ ಹೆಚ್ಚಾಗುವಂತಿಲ್ಲ. ಕಡಿಮೆಯೂ ಆಗುವಂತಿಲ್ಲ. ಹೀಗೆ ಅನುಸರಿಸಿದ ಶಿಸ್ತುಬದ್ಧ ಡಯಟ್ ಕೊಟ್ಟ ದೇಹ ಇದು' ಎನ್ನುತ್ತಾರೆ ಸುದೀಪ್.

    ಪೈಲ್ವಾನ್ ಕನ್ನಡದ ಸಿನಿಮಾ ಎನ್ನುವುದಕ್ಕಿಂತ ಭಾರತೀಯ ಸಿನಿಮಾ ಎನ್ನುವ ಸುದೀಪ್, ಕೃಷ್ಣ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ಭರವಸೆ ಇಟ್ಟುಕೊಂಡಿದ್ದಾರೆ. ಇದೇ ವಾರ ರಿಲೀಸ್ ಆಗುತ್ತಿರುವ ಪೈಲ್ವಾನ್ ಹಬ್ಬದ ವಾತಾವರಣ ಸೃಷ್ಟಿಸಿದೆ.

    ಅಂದಹಾಗೆ ಪೈಲ್ವಾನ್ ಶುರು ಮಾಡಿದಾಗ 89 ಕೆಜಿ ತೂಕವಿದ್ದ ಸುದೀಪ್, ತಮ್ಮ ದೇಹದ ತೂಕವನ್ನು 73 ಕೆಜಿಗೆ ಇಳಿಸಿಕೊಂಡರಂತೆ. ಅಂದ್ರೆ 16 ಕೆಜಿ ತೂಕ ಇಳಿಕೆ.

  • ಉಸಿರೇ ಉಸಿರೇ ಚಿತ್ರದಲ್ಲಿ ಸುದೀಪ್ : ವಿಡಿಯೋ ಲೀಕ್ ಆಗಿದ್ದು ಹೇಗೆ..?

    ಉಸಿರೇ ಉಸಿರೇ ಚಿತ್ರದಲ್ಲಿ ಸುದೀಪ್ : ವಿಡಿಯೋ ಲೀಕ್ ಆಗಿದ್ದು ಹೇಗೆ..?

    ಕರ್ನಾಟಕ ಬುಲ್ಡೋಜರ್ ತಂಡದ ಆಟಗಾರ ರಾಜೀವ್ ನಟಿಸುತ್ತಿರುವ ಸಿನಿಮಾ ಉಸಿರೇ ಉಸಿರೇ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಈಗ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಪ್ರಮುಖ ದೃಶ್ಯವೊಂದರಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಆ ಚಿತ್ರದ ದೃಶ್ಯವೊಂದು ಇದ್ದಕ್ಕಿದ್ದಂತೆ ವೈರಲ್ ಆಗಿ ಹೋಗಿದೆ. ಇನ್ನೂ ಚಿತ್ರವೇ ಕಂಪ್ಲೀಟ್ ಆಗಿಲ್ಲ. ಹೀಗಿರುವಾಗಲೇ ವಿಡಿಯೋ ಲೀಕ್ ಆಗಿದ್ದು ಹೇಗೆ? ಇನ್ನು ಈ ಚಿತ್ರದಲ್ಲಿ ಸುದೀಪ್ ಹೀರೋ ಅಲ್ಲ. ಅತಿಥಿನ ನಟನಾಗಿ ನಟಿಸುತ್ತಿದ್ದಾರೆ ಅಷ್ಟೆ.

    ಲೀಕ್ ಆಗಿರುವ ದೃಶ್ಯದಲ್ಲಿ ರಸ್ತೆಯಲ್ಲಿ ಅಪಘಾತವಾಗಿರುವ ಯುವಕನೊಬ್ಬನಿಗೆ ಸುದೀಪ್ ನೀರು ಕುಡಿಸಿ ಆರೈಕೆ ಮಾಡುತ್ತಾರೆ. ಅಪಘಾತಕ್ಕೆ ಒಳಗಾದವರ ಬಗ್ಗೆ ಸ್ಥಳದಲ್ಲಿದ್ದವರು ಮೊಬೈಲ್ ವಿಡಿಯೋ ಮಾಡುವುದಕ್ಕಿಂತ ಸಹಕರಿಸಿ, ನೆರವು ನೀಡುವುದು ಒಳ್ಳೆಯದು. ನೋಡಿ, ನಮ್ಮ ಸುದೀಪಣ್ಣನ್ನ ನೋಡಿ ಕಲೀರಿ ಎಂಬ ಸಂದೇಶದೊಂದಿಗೆ ವಿಡಿಯೋ ವೈರಲ್ ಆಯ್ತು. ಈಗ ಸುದೀಪ್ ಬೇರೆ ರಾಜಕಾರಣಿಯೂ ಹೌದು. ಸಿಎಂ ಬೊಮ್ಮಾಯಿಯವರಿಗೆ ಬೆಂಬಲ ಘೋಷಿಸಿ ಪರ-ವಿರೋಧ ಎರಡನ್ನೂ ಕಟ್ಟಿಕಕೊಂಡಿದ್ದಾರೆ. ಹೀಗಾಗಿ ಬೇರೆಯದೇ ವಾದವೂ ಬಂತು.

    ಆದರೆ ಇದು ಸಿನಿಮಾ ಲೋಕ. ಉಸಿರೇ ಉಸಿರೇ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹೀರೊ. ರಾಜೀವ್ಗೆ ಶ್ರೀಜಿತ ಹೀರೊಯಿನ್. ಇವರೊಂದಿಗೆ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ.ಎಂ.ವಿಜಯ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಶೂಟಿಂಗ್ ವೇಳೆ ಯಾರೋ ತೆಗೆದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಒಮ್ಮೆ ಭಾವುಕರಾಗಿದ್ದಂತೂ ನಿಜ. ಕಿಚ್ಚ ಸುದೀಪ್ ಟೀಕೆಗಳಿಗೆ ಕಿವಿಗೊಡದೆ ತಮ್ಮಷ್ಟ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.

  • ಎದ್ದೇಳು ಮಂಜುನಾಥ ಅಂದ್ರೆ ಎದ್ದಿದ್ದು ಸುದೀಪ್

    big boss 5

    ಎದ್ದೇಳು ಮಂಜುನಾಥ ಅಂದ್ರೆ, ತಕ್ಷಣ ನೆನಪಾಗೋದು ನಟ ಜಗ್ಗೇಶ್. ಆದರೆ, ಈ ಹಾಡಿಗೆ ಇಗ ಎದ್ದೇಳೋ ಸರದಿ ಸುದೀಪ್ ಅವರದ್ದು. ಅಂದಹಾಗೆ ಇದು ಬಿಗ್‍ಬಾಸ್ ಶೋ ಆರಂಭದ ಮೊದಲ ಪ್ರೋಮೋ.

    ಹಾಲಿವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‍ವುಡ್, ಕ್ರಿಕೆಟ್ಟು...ಎಲ್ಲಿಂದ ಟೈಂ ಅಡ್ಜಸ್ಟ್ ಮಾಡ್ತಾರೋ ಎಂದು ಇಬ್ಬರು ಯುವಕರು ಮಾತನಾಡ್ತಿರೋವಾಗ್ಲೇ ಎದ್ದೇಳು ಮಂಜುನಾಥದ ಹಾಡು ಕೇಳಿಸುತ್ತೆ. ನಿದ್ದೆ ಮಾಡೋಣ ಎಂದುಕೊಂಡ ಸುದೀಪ್ ಅವರನ್ನು ಬಡಿದೆಬ್ಬಿಸುವುದು ಎದ್ದೇಳು ಮಂಜುನಾಥ..ಎದ್ದೇಳಲೋ.. ಹಾಡು. 

    ಅಲ್ಲಿಗೆ ಬಿಗ್‍ಬಾಸ್ ಶುರುವಾಯ್ತಾ..? ಹೌದು ಸ್ವಾಮಿ..

  • ಎಲ್ಲಿದೆ ವಿಲನ್ ಟೀಂ..? - ಕೇಳಿದ್ದು ಕಿಚ್ಚ ಸುದೀಪ್..!

    sudeep looking for the villain's team

    ದಿ ವಿಲನ್ ಚಿತ್ರತಂಡ ಎಲ್ಲಿದೆ..? ನಾನವರನ್ನು ಹುಡುಕುತ್ತಿದ್ದೇನೆ. ದಯವಿಟ್ಟು ಯಾರಾದರೂ ಸಿಕ್ಕರೆ, ಅವರಿಗೆ ನಾನು ಹುಡುಕುತ್ತಿದ್ದೇನೆ ಎನ್ನುವುದನ್ನು ತಿಳಿಸಿ. ಹೀಗಂತ ಸ್ವತಃ ಹೇಳಿಕೊಂಡಿರೋದು ಕಿಚ್ಚ ಸುದೀಪ್. 

    ದಿ ವಿಲನ್ ಸಿನಿಮಾ ರಿಲೀಸ್ ಆಗಿ ಎರಡು ವಾರ ಪೂರೈಸಿದೆ. ಚಿತ್ರಮಂದಿರಗಳ ಸಂಖ್ಯೆ ಬಿಡುಗಡೆಯ ನಂತರ ಹೆಚ್ಚುತ್ತಿದೆ. ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆಯುತ್ತಿದೆ. ಆದರೆ, ಚಿತ್ರದ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ಸಣ್ಣದೊಂದು ಜಾಹೀರಾತು ಕೂಡಾ ಇಲ್ಲ. ಸುದೀಪ್ ಬೇಸರಕ್ಕೆ ಕಾರಣ ಇದೇ..

    ಮರಾಠಿ ಪತ್ರಿಕೆಗಳಲ್ಲಿ ದಿ ವಿಲನ್ ಸಿನಿಮಾ ಪ್ರದರ್ಶನದ ಜಾಹೀರಾತುಗಳು ಇರುವುದನ್ನು ಅಭಿಮಾನಿಯೊಬ್ಬರು ಸುದೀಪ್‍ಗೆ ಕಳಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್, ತಮ್ಮ ಬೇಸರವನ್ನು ಈ ರೀತಿ ಹೊರಹಾಕಿದ್ದಾರೆ.

    ಈಗ ಉತ್ತರಿಸಬೇಕಾದವರು ನಿರ್ಮಾಪಕ ಸಿ.ಆರ್.ಮನೋಹರ್. ನಿರ್ದೇಶಕ ಜೋಗಿ ಪ್ರೇಮ್. 

  • ಏ. 15. ಬೆಳಗ್ಗೆ 11.10ಕ್ಕೆ ರೋಣ ಹೇಳಲಿರೋ ಸಸ್ಪೆನ್ಸ್ ಏನು..?

    ಏ. 15. ಬೆಳಗ್ಗೆ 11.10ಕ್ಕೆ ರೋಣ ಹೇಳಲಿರೋ ಸಸ್ಪೆನ್ಸ್ ಏನು..?

    ವಿಕ್ರಾಂತ್ ರೋಣ. ಕಿಚ್ಚ ಸುದೀಪ್ ನಟಿಸಿರುವ ಹೊಸ ಸಿನಿಮಾ. ಚಿತ್ರದ ಬಗ್ಗೆ ದಿನ ದಿನಕ್ಕೂ ನಿರೀಕ್ಷೆಗಳನ್ನು ಮುಗಿಲು ಮುಟ್ಟಿಸುತ್ತಿರುವ ವಿಕ್ರಾಂತ್ ರೋಣ ಚಿತ್ರತಂಡ ಈಗೊಂದು ಹೊಸ ಡೇಟ್ ಮತ್ತು ಟೈಂ ಘೋಷಿಸಿದೆ. ಏಪ್ರಿಲ್ 15, ಬೆಳಗ್ಗೆ 11.10.

    ಆಗ ಚಿತ್ರತಂಡ ಚಿತ್ರದ ಕುರಿತ ಯಾವುದೋ ಒಂದು ವಿಷಯವನ್ನು ಘೋಷಿಸಲಿದೆ. ಅದೇನು ಅನ್ನೋದೇ ಸಸ್ಪೆನ್ಸ್. ಚಿತ್ರೀಕರಣವನ್ನು ಹೆಚ್ಚೂ ಕಡಿಮೆ ಮುಗಿಸಿದ್ದರೂ ಇದೂವರೆಗೆ ಹೀರೋಯಿನ್ ಯಾರು ಅನ್ನೋ ಗುಟ್ಟನ್ನೇ ಬಿಟ್ಟುಕೊಟ್ಟಿಲ್ಲ. ಶ್ರದ್ಧಾ ಶ್ರೀನಾಥ್ ಇರಬಹುದು ಎಂಬ ಸುದ್ದಿ ಹೊರಬಿತ್ತಾದರೂ, ಅತ್ತ ನಿರ್ಮಾಪಕ ಜಾಕ್ ಮಂಜುನೂ ಯೆಸ್ ಎನ್ನಲಿಲ್ಲ. ಇತ್ತ ಶ್ರದ್ಧಾ ಕೂಡಾ ನೋ ಎನ್ನಲಿಲ್ಲ.  ಡೈರೆಕ್ಟರ್ ಅನೂಪ್ ಭಂಡಾರಿಯೂ ಹ್ಞಾಂಹ್ಞೂಂ ಎನ್ನಲಿಲ್ಲ. ಬ್ರೇಕ್ ಆಗಲಿರೋ ಸಸ್ಪೆನ್ಸ್ ಅದೇನಾ..?

    ಅಥವಾ ಚಿತ್ರದ ರಿಲೀಸ್ ಡೇಟ್‍ನ್ನೇ ಅನೌನ್ಸ್ ಮಾಡ್ತಾರಾ..? ವೇಯ್ಟ್.. ಏಪ್ರಿಲ್ 15, ಬೆಳಗ್ಗೆ 11.10.

  • ಏನು ಮಾಡಲಿ ಹೊಡೀತು ಕಿಚ್ಚನ ಕಣ್ಣು..

    pailwan dance number completed

    ಏನು ಮಾಡಲಿ ಹೊಡೀತು ಕಣ್ಣು.. ಎಂದು ಕಿಚ್ಚ ಹಾಡಿ ಕುಣಿಯುತ್ತಿದ್ದರೆ, ಕಣ್ಣು ಹೊಡೆಸಿಕೊಂಡ ಹುಡುಗಿ ಆಕಾಂಕ್ಷಾ ಸಿಂಗ್ ಕಣ್ಣು ಇರೋದೇ ಹೊಡೆಯೋಕೆ ಎಂಬಂತೆ ಹೆಜ್ಜೆ ಹಾಕಿದ್ದಾರೆ. ಇದು ಪೈಲ್ವಾನ್ ಚಿತ್ರದ ಐಟಂ ನಂಬರ್ ಪೆಪ್ಪಿ ನಂಬರ್ ಹಾಡು. ಮುಂಬೈನಲ್ಲಿ ಶೂಟಿಂಗ್ ಮುಗಿದಿದೆ.

    ಬಾಲಿವುಡ್ ಸ್ಟಾರ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ, ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡೂ ಆಟದ ಕಥೆಯಿದೆ.

  • ಐಎಂಡಿಬಿ 2023ರ ಬಹುನಿರೀಕ್ಷಿತ ಸಿನಿಮಾ : ಕನ್ನಡಕ್ಕೆ ಒಂದೇ ಸಿನಿಮಾ

    ಐಎಂಡಿಬಿ 2023ರ ಬಹುನಿರೀಕ್ಷಿತ ಸಿನಿಮಾ : ಕನ್ನಡಕ್ಕೆ ಒಂದೇ ಸಿನಿಮಾ

    ಐಎಂಡಿಬಿ ರೇಟಿಂಗ್‍ನಲ್ಲಿ ಕಳೆದ ವರ್ಷ ಟಾಪ್ 10ನಲ್ಲಿ ಕನ್ನಡದ್ದೇ ಮೂರು ಚಿತ್ರಗಳಿದ್ದವು. ಕೆಜಿಎಫ್, ಕಾಂತಾರ  ಹಾಗೂ 777 ಚಾರ್ಲಿ ಚಿತ್ರಗಳು ಐಎಂಡಿಬಿ ಟಾಪ್ ರೇಟಿಂಗ್‍ನಲ್ಲಿದ್ದವು. ಐಎಂಡಿಬಿ ಈ ವರ್ಷದ ಟಾಪ್ ನಿರೀಕ್ಷಿತ ಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆ ಲಿಸ್ಟಿನಲ್ಲಿ ಸ್ಥಾನ ಪಡೆದಿರುವ ಚಿತ್ರಗಳಲ್ಲಿ ಕನ್ನಡದ್ದು ಎಂದು ಇರುವುದು ಒಂದೇ ಒಂದು ಸಿನಿಮಾ.

    ಮೊದಲ ಸ್ಥಾನದಲ್ಲಿರೋದು ಇದೇ ತಿಂಗಳು ರಿಲೀಸ್ ಆಗುತ್ತಿರುವ ಶಾರೂಕ್-ದೀಪಿಕಾ ಪಡುಕೋಣೆ ಅಭಿನಯದ ಪಠಾಣ್.

    2ನೇ ಸ್ಥಾನದಲ್ಲಿ ತೆಲುಗಿನ ಚಿತ್ರ ಪುಷ್ಪ 2 ಇದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ.

    3ನೇ ಸ್ಥಾನದಲ್ಲಿ ಜವಾನ್, 4ನೇ ಸ್ಥಾನದಲ್ಲಿ ಆದಿಪುರುಷ್ ಇದ್ದರೆ, 5ನೇ ಸ್ಥಾನದಲ್ಲಿ ಪ್ರಶಾಂತ್ ನೀಲ್-ಪ್ರಭಾಸ್-ಹೊಂಬಾಳೆ ಜೋಡಿಯ ಸಲಾರ್ ಇದೆ. ಇದೇ ವಾರ ರಿಲೀಸ್ ಆಗುತ್ತಿರುವ ವಾರಿಸು, ದಳಪತಿ 67, ದಿ ಆರ್ಚಿಸ್, ಡಂಕಿ, ಟೈಗರ್ 3, ಕಿಸಿ ಕಾ ಭಾಯ್ ಕಿಸೀ ಕಾ ಜಾನ್, ಅನಿಮಲ್ ಏಜೆಂಟ್, ಇಂಡಿಯನ್ 2, ಶೆಹಜಾದೆ, ಬಡೇ ಮಿಯಾ ಚೋಟೇ ಮಿಯಾ ಹಾಗೂ ಭೋಲಾ ಚಿತ್ರಗಳಿವೆ.

    ಈ ಲಿಸ್ಟಿನಲ್ಲಿ 7ನೇ ಸ್ಥಾನದಲ್ಲಿರೋ ಚಿತ್ರ ಆರ್.ಚಂದ್ರು ನಿರ್ದೇಶನದ ಉಪೇಂದ್ರ-ಸುದೀಪ್ ಕಾಂಬಿನೇಷನ್ನಿನ ಕಬ್ಜ.

    ಲಿಸ್ಟಿನಲ್ಲಿ ಶಾರೂಕ್`ರ 3 ಸಿನಿಮಾ ಪಠಾಣ್, ಜವಾನ್ ಮತ್ತು ಡಂಕಿ ಹಾಗೂ ಶಾರೂಕ್ ಮಗಳು ಸುಹಾನಾ ಖಾನ್ ನಟಿಸಿರುವ ದಿ ಆರ್ಚಿಸ್ ಚಿತ್ರಗಳಿವೆ. ಸಲ್ಮಾನ್ ಖಾನ್`ರ 2 ಚಿತ್ರಗಳಿವೆ. ಕಾರ್ತಿಕ್ ಆರ್ಯನ್`ರ ಶೆಹಜಾದೆ, ತೆಲುಗಿನ ಅಲಾ ವೈಕುಂಠಪುರಂಲೋ ಚಿತ್ರದ ರೀಮೇಕ್. ಭೋಲಾ ಚಿತ್ರಕ್ಕೆ ಅಜಯ್ ದೇವಗನ್ ಹೀರೋ. ಅದು ತಮಿಳಿನ ಖೈದಿ ಚಿತ್ರದ ರೀಮೇಕ್.

    ಕಳೆದ ವರ್ಷವೂ ಕೂಡಾ ಕನ್ನಡದ ಚಿತ್ರಗಳು ಲಿಸ್ಟಿನಲ್ಲಿರಲಿಲ್ಲ. ಕೆಜಿಎಫ್ ಹಾಗೂ ಆರ್.ಆರ್.ಆರ್. ಬಿಟ್ಟರೆ ದಕ್ಷಿಣದ ಚಿತ್ರಗಳನ್ನು ಲಿಸ್ಟಿನಲ್ಲೇ ಇಟ್ಟಿರಲಿಲ್ಲ ಐಎಂಡಿಬಿ. ಬಾಲಿವುಡ್ ಚಿತ್ರಗಳೇ ಮೇಲುಗೈ ಸಾಧಿಸಿದ್ದವು. ವರ್ಷದ ಕೊನೆಗೆ ಐಎಂಡಿಬಿ ಲಿಸ್ಟಿನಲ್ಲಿಯೂ ಇದ್ದು, ಪ್ರೇಕ್ಷಕರನ್ನೂ ಆಕರ್ಷಿಸಿದ ಚಿತ್ರಗಳು ಕೆಜಿಎಫ್ ಮತ್ತು ಆರ್.ಆರ್.ಆರ್. ಮಾತ್ರ. ಈ  ವರ್ಷವೂ ದಕ್ಷಿಣದ ಚಿತ್ರಗಳೇ ಮೇಲುಗೈ ಸಾಧಿಸುವ ನಿರೀಕ್ಷೆ ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗದ್ದು.

  • ಐಟಿ ಓವರ್ : ಬಿಗ್‍ಬಾಸ್ ಶೂಟಿಂಗ್‍ಗೆ ಸುದೀಪ್

    sudeep shoots for weekened episode after it raid

    ದಿಢೀರ್ ಐಟಿ ದಾಳಿ ಹಿನ್ನೆಲೆಯಲ್ಲಿ ಪೈಲ್ವಾನ್ ಚಿತ್ರದ ಶೂಟಿಂಗ್‍ನಿಂದ ನೇರ ಮನೆಗೆ ಬಂದಿದ್ದ ಕಿಚ್ಚ ಸುದೀಪ್ ಮನೆಯಲ್ಲಿ ಐಟಿ ರೇಡ್ ಮುಗಿದಿದೆ. ಬೆಳಗ್ಗೆ 5.30ರ ಸುಮಾರಿಗೆ ಐಟಿಯವರು ಎಲ್ಲ ತನಿಖೆ ಮುಗಿಸಿ, ಕೆಲವು ದಾಖಲೆ ಪತ್ರಗಳೊಂದಿಗೆ ತೆರಳಿದ್ದಾರೆ.

    ಐಟಿ ತನಿಖೆಯುದ್ದಕ್ಕೂ ಸುದೀಪ್ ನಿರಾಳರಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಶುರುವಾಗಿದ್ದ ಐಟಿ ತನಿಖೆ, ಸತತ ಎರಡು ದಿನ ನಡೆದಿತ್ತು. ಐಟಿ ಅಧಿಕಾರಿಗಳು ಮನೆಯಿಂದ ತೆರಳುತ್ತಿದ್ದಂತೆ, ಸುದೀಪ್ ನೇರವಾಗಿ ಬಿಗ್‍ಬಾಸ್ ಮನೆಗೆ ತೆರಳಿದ್ದಾರೆ. ವೀಕೆಂಡ್ ವಿತ್ ಸುದೀಪ್ ಕಾರ್ಯಕ್ರಮದ ಶೂಟಿಂಗ್‍ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

  • ಐಟಿ ದಾಳಿಗೆ ಭಯ ಯಾಕೆ..? ಅವರೇನು ವಿಲನ್‍ಗಳಲ್ಲ - ಸುದೀಪ್

    why get afrraid of income tax raids says sudeep

    ಐಟಿ ದಾಳಿ ಕುರಿತಂತೆ ಅದೆಲ್ಲ ಮುಗಿದ ಮೇಲೆ ಮಾತನಾಡುತ್ತೇನೆ ಎಂದಿದ್ದ ಸುದೀಪ್ ಮಾತನಾಡಿದ್ದಾರೆ. ಐಟಿ ರೇಡ್ ಮುಗಿಯುತ್ತಿದ್ದಂತೆ, ಬಿಗ್‍ಬಾಸ್ ಶೂಟಿಂಗ್‍ಗೆ ತೆರಳಿದ್ದ ಸುದೀಪ್, ನಿರ್ದೇಶಕರ ಸಂಘದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ``ಯಾರೋ ಹೇಳಿಸಿ.. ಮಾಡಿಸೋಕೆ ಅದು ಐಟಿ ಡಿಪಾರ್ಟ್‍ಮೆಂಟ್. ಅದೆಲ್ಲ ಸಾಧ್ಯವಿಲ್ಲ. ಏನೋ ಮಾಹಿತಿ ಬೇಕಾಗಿದೆ. ಎಲ್ಲೋ.. ಏನೋ.. ಅನುಮಾನ ಬಂದಿದೆ. ಬಂದಿದ್ದಾರೆ. ಮಾಹಿತಿ ತೆಗೆದುಕೊಂಡಿದ್ದಾರೆ. ಅವರೇನು ವಿಲನ್‍ಗಳಲ್ಲ. ನನಗೂ ಇದು ಹೊಸತು. ಆದರೆ, ಭಯ ಪಡೋ ಅಗತ್ಯವೇನೂ ಇಲ್ಲ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ'' ಎಂದು ಹೇಳಿದ್ದಾರೆ ಸುದೀಪ್.

    ಐಟಿ ದಾಳಿಗಿಂತ ಹೆಚ್ಚಾಗಿ ಆ ಬಗ್ಗೆ ಹರಿದಾಡುತ್ತಿರುವ ಗಾಸಿಪ್ಪುಗಳು ಅಚ್ಚರಿಯುಂಟು ಮಾಡಿವೆ ಎಂದಿದ್ದಾರೆ ಸುದೀಪ್.

  • ಒಟಿಟಿಗೆ ಕಬ್ಜ : ಏ.14ಕ್ಕೆ ರಿಲೀಸ್

    ಒಟಿಟಿಗೆ ಕಬ್ಜ : ಏ.14ಕ್ಕೆ ರಿಲೀಸ್

    ಪ್ಯಾನ್ ಇಂಡಿಯಾ ರಿಲೀಸ್ ಆದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಒಟಿಟಿಗೆ ಬರ್ತಿದೆ. ಸಿನಿಮಾ ರಿಲೀಸ್ ಆಗಿ ಒಂದು ತಿಂಗಳೊಳಗೆ ಕಬ್ಜ ಒಟಿಟಿಗೆ ಲಗ್ಗೆ ಎಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಬ್ಜ ಮೊದಲ ಭಾಗ ಮಾರ್ಚ್ 17 ಅಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ರಿಲೀಸ್ ಆಗಿತ್ತು. ಇದೀಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರೆಲ್ಲ ಈಗ ಮನೆಯಲ್ಲೇ ಕುಳಿತು ವೀಕ್ಷಿಸುವ ಸಮಯ ಹತ್ತಿರವಾಗಿದೆ.

    ಕಬ್ಜ ರೆಟ್ರೋ ಶೈಲಿಯಲ್ಲಿ ಮೂಡಿಂಬದ ಸಿನಿಮಾ. ಇದು ಎರಡು ಪಾರ್ಟ್ ನಲ್ಲಿ ಸಿದ್ಧವಾಗಿದೆ. ಆರ್. ಚಂದ್ರು ನಿರ್ದೇಶನದ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋ  ಮೂಲಕ  ಸ್ಟ್ರೀಮಿಂಗ್ ಆಗಲಿದೆ.

    ಮೊದಲ ಭಾಗದಲ್ಲಿ ಅರ್ಥ ಕಥೆಯನ್ನು ಮಾತ್ರ ತೋರಿಸಲಾಗಿದೆ. ಪೈಲೆಟ್ ಆಗಬೇಕು ಎಂದುಕೊಂಡ ಕಥಾನಾಯಕ ಅನಿವಾರ್ಯವಾಗಿ ಭೂಗತ ಜಗತ್ತಿಗೆ ಎಂಟ್ರಿ ನೀಡುತ್ತಾನೆ. ನಂತರ ದೊಡ್ಡ ಡಾನ್ ಆಗಿ ಮೆರೆಯುತ್ತಾನೆ. ಉಪೇಂದ್ರ ವರ್ಲ್ಡ್ ಡಾನ್ ಪಾತ್ರ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಶಿವರಾಜ್ಕುಮಾರ್ ಕ್ಲೈಮ್ಯಾಕ್ಸ್ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.  ಶಿವಣ್ಣ ಪಾತ್ರದ ಬಗ್ಗೆ 2ನೇ ಭಾಗದಲ್ಲಿ ರಿವೀಲ್ ಆಗಲಿದೆ. ರವಿ ಬಸ್ರೂರು ಸಂಗೀತ  ಸಿನಿಮಾಗೆ ಇದೆ. ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ.  

  • ಒಡಿಶಾ ಸಮುದ್ರತೀರದಲ್ಲಿ ಕಿಚ್ಚನ ಮರಳುಶಿಲ್ಪ

    ಒಡಿಶಾ ಸಮುದ್ರತೀರದಲ್ಲಿ ಕಿಚ್ಚನ ಮರಳುಶಿಲ್ಪ

    ಒಡಿಶಾದ ಸಮುದ್ರ ತೀರ. ಅಲ್ಲಿ ಅರಳಿದೆ 20 ಅಡಿ ಅಗಲದ 7 ಅಡಿ ಎತ್ತರದ ಮರಳುಶಿಲ್ಪ. ಮಾನಸ್ ಕುಮಾರ್ ಎಂಬ ಮರಳುಶಿಲ್ಪಿಯ ಕುಸುರಿಯ ಕಲಾಕೃತಿಯದು. ಸೆಪ್ಟೆಂಬರ್ 2ರಂದು ಕಿಚ್ಚನ ಹುಟ್ಟುಹಬ್ಬವಿರುವ ಕಾರಣ ವಿಶೇಷವಾಗಿ ಸುದೀಪ್`ಗೆ ಶುಭ ಕೋರಿ ಈ ಮರಳುಶಿಲ್ಪ ನಿರ್ಮಿಸಿದ್ದಾರೆ ಮರಳುಶಿಲ್ಪಿ ಮಾನಸ್ ಕುಮಾರ್.

    ಈ ಶಿಲ್ಪಕ್ಕಾಗಿ 20 ಟನ್ ಮರಳು ಬಳಸಿದ್ದಾರಂತೆ. ಯಾವ ರೀತಿ ಇರಬೇಕು, ಯಾವ ಫೋಟೋ ಇದ್ದರೆ ಚೆನ್ನ ಹಾಗೂ ಕನ್ನಡದ ಬರವಣಿಗೆ ಬಗ್ಗೆ ಆ ಮರಳುಶಿಲ್ಪಿಗೆ ಮಾಹಿತಿ ನೀಡಿರುವುದು ವೀರಕಪುತ್ರ ಶ್ರೀನಿವಾಸ್.

    ದಕ್ಷಿಣ ಭಾರತದಲ್ಲಿ ಈ ಗೌರವಕ್ಕೆ ಪಾತ್ರರಾದ ಎರಡನೇ ಕಲಾವಿದ ಸುದೀಪ್. ಈ ಹಿಂದೆ ವಿಷ್ಣುವರ್ಧನ್ ಅವರಿಗೆ ಇದೇ ರೀತಿ ಮರಳು ಶಿಲ್ಪದ ಮೂಲಕ ಗೌರವ ಸಲ್ಲಿಸಲಾಗಿತ್ತು. ಇತ್ತೀಚೆಗಷ್ಟೇ ಭಾರತೀಯ ಅಂಚೆ ಇಲಾಖೆ ಸುದೀಪ್ ಹೆಸರಲ್ಲಿ ಪೋಸ್ಟ್ ಕವರ್ ಬಿಡುಗಡೆ ಮಾಡುತ್ತಿರುವ ಬೆನ್ನಲ್ಲೇ ಸುದೀಪ್ ಅವರಿಗೆ ಅಭಿಮಾನಿಗಳಿಂದ ಇನ್ನೊಂದು ವಿಶೇಷ ಗೌರವ ಸಂದಿದೆ.