ಕಿಚ್ಚ ಸುದೀಪ್ ಅವರ ಬಿಗ್ಬಾಸ್ ಶೋನಲ್ಲಿ ಬರುವ ಅತಿಥಿಗಳು ಒಂದಲ್ಲಾ ಒಂದು ಸ್ವಾರಸ್ಯದ ಕಥೆ ಹೇಳಿಕೊಂಡೇ ಹೇಳಿಕೊಳ್ತಾರೆ. ಕಲ್ಲುಬಂಡೆಯನ್ನೂ ಮಾತನಾಡಿಸುವ ಛಾತಿಯುಳ್ಳ ಸುದೀಪ್ಗೆ ಅತಿಥಿಗಳಿಂದ ಅಂತಹ ಕಥೆಗಳನ್ನು ಹೊರತೆಗೆಸುವುದು ಹೊಸದಲ್ಲ.
ವಿಶ್ವನಾಥ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದು 1969ರಲ್ಲಿ. ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್ನಲ್ಲಿಯೇ ವಿಶ್ವನಾಥ್ ಸೊನ್ನೆ ಸುತಿದರು. ಔಟಾಗಿ ಪೆವಿಲಿಯನ್ಗೆ ವಾಪಸ್ ಆಗುವಾಗ ಪ್ರೇಕ್ಷಕರ್ಯಾರೋ ಕೊಳೆತ ಮೊಟ್ಟೆಯನ್ನು ವಿಶ್ವನಾಥ್ ಅವರತ್ತ ಎಸೆದಿದ್ದರಂತೆ.
ಅಷ್ಟೊತ್ತಿಗಾಗಲೇ ದೇಸೀ ಟೂರ್ನಿಗಳಲ್ಲಿ ಅದ್ಭುತ ಆಟವಾಡುತ್ತಿದ್ದ ವಿಶ್ವನಾಥ್, ಏನಾಗಿ ಹೋಯ್ತು ನನಗೆ ಎಂದುಕೊಂಡು ಕುಳಿತಿದ್ದಾಗ, ತಂಡದ ಕ್ಯಾಪ್ಟನ್ ಬಂದು ಧೈರ್ಯ ಹೇಳಿದರಂತೆ. ಮುಂದಿನ ಇನ್ನಿಂಗ್ಸ್ನಲ್ಲಿ ಸೆಂಚುರಿ ಹೊಡೀತಿಯ, ಬಿಡು ಎಂದು ಸಮಾಧಾನಿಸಿದ್ದರಂತೆ.
ಅದು ನಿಜವೂ ಆಯ್ತು. ಅದೇ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ವಿಶ್ವನಾಥ್ 137 ರನ್ ಹೊಡೆದರು. ಇನ್ನೂ ಒಂದು ವಿಶೇಷ ಗೊತ್ತಾ..? ಆ 137 ರನ್ನಲ್ಲಿ 100 ರನ್ ಕೇವಲ ಬೌಂಡರಿಗಳಿಂದಲೇ ಬಂದಿದ್ದವು. 25 ಬೌಂಡರಿ. ಮೊಟ್ಟೆ ಎಸೆದಿದ್ದ ಪ್ರೇಕ್ಷಕರೇ, ಎದ್ದು ನಿಂತಿ ಕಿವಗಡಚಿಕ್ಕುವಂತೆ ಚಪ್ಪಾಳೆ ತಟ್ಟಿದ್ದರು.
ಇದೆಲ್ಲವನ್ನೂ ಗುಂಡಪ್ಪ ವಿಶ್ವನಾಥ್, ಕಿಚ್ಚನ ಎದುರು ಹೇಳಿಕೊಂಡಿದ್ದಾರೆ. ಮೊಟ್ಟೆ ಹೊಡೆದ ಕೈಗಳೇ ಚಪ್ಪಾಳೆ ತಟ್ಟಿದ್ದ ಕಥೆಯಲ್ಲಿ, ಜೀವನ ಸಂದೇಶವೂ ಇದೆ. ಹೌದು ತಾನೇ.