` kiccha sudeepa - chitraloka.com | Kannada Movie News, Reviews | Image

kiccha sudeepa

  • ಅಂಬಿ.. ಜಲೀಲ ಸಾಂಗ್ ಹಿಟ್ಟಾಗೋಯ್ತೋ.

    hey jalila song is a total hit

    ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಮೊದಲ ಹಾಡು ಹೊರಬಿದ್ದಿದೆ. ಅಭಿಮಾನಿಗಳ ಹೃದಯದಲ್ಲಿ ಹೇ ಜಲೀಲ.. ಖಾಯಂ ಸ್ಥಾನ ಗಿಟ್ಟಿಸಿಕೊಂಡಿದ್ದಾನೆ. ಹಾಡು ವೈರಲ್ ಆಗೋಕೆ ಶುರುವಾಗಿದೆ.

    ಫುಲ್ ಬಾಟ್ಲು ವಿಸ್ಕಿ ಈಗ ಕುಡ್ದಂಗಗಾಗದೆ ಎಂದು ಶುರುವಾಗುವ ಹಾಡಿನಲ್ಲಿ ಅಂಬರೀಷ್‍ರ ಜಲೀಲ ಮತ್ತು ಕನ್ವರ್‍ಲಾಲನನ್ನು ನೆನಪಿಸ್ತಾರೆ. ಅಂಬರೀಷ್‍ರ ಇಷ್ಟದ ಆಟೋಟಗಳನ್ನೂ ಸ್ಮರಿಸುತ್ತಾರೆ. ರೇಸು, ಇಸ್ಪೀಟು, ಗೌಡ್ರ ಗತ್ತು, ಅಂಬಿಯ ಬೈಗುಳ, ಆ ಬೈಗುಳದಲ್ಲಿರೋ ಪ್ರೀತಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ.. ಹೀಗೆ ಇಡೀ ಹಾಡಿನಲ್ಲಿರೋದು ಅಂಬರೀಷ್ ಗುಣಗಾನ. ಅಂಬಿಕಾ, ಚಳಿ ಚಳಿ ಹಾಡು, ಸುಮಲತಾ ಮದ್ವೆಯನ್ನೂ ಹಾಡಿನಲ್ಲಿ ನೆನಪಿಸ್ತಾರೆ ಜೋಗಿ ಪ್ರೇಮ್. ಅಂದಂಗೆ.. ಇಡೀ ಹಾಡಿಗೆ ಸಾಹಿತ್ಯ ಪೋಣಿಸಿರೋದು ಜೋಗಿ ಪ್ರೇಮ್ ಅವರೇ.

    ಹಾಡಿನ ಕಿಕ್ಕು ಹೆಚ್ಚಿಸಿರೋದು ವಿಜಯ್ ಪ್ರಕಾಶ್. ಆ ಕಿಕ್ ಹೆಚ್ಚೋಕೆ ಕಾರಣ, ಅರ್ಜುನ್ ಜನ್ಯರ ಮ್ಯೂಸಿಕ್ಕು. ಗುರುದತ್ ಗಾಣಿಗ ನಿರ್ದೇಶನದ ಚಿತ್ರಕ್ಕೆ ಕಿಚ್ಚ ಸುದೀಪ್ ಮತ್ತು ಜಾಕ್ ಮಂಜು ನಿರ್ಮಾಪಕರು. ಅಂಬರೀಷ್ ಹಲವು ವರ್ಷಗಳ ನಂತರ ಹೀರೋ ಆಗಿಯೇ ನಟಿಸುತ್ತಿರುವ ಚಿತ್ರವಾದ್ದರಿಂದ, ಕುತೂಹಲವಂತೂ ರಾಕೆಟ್ ರೇಂಜನ್‍ನಲ್ಲಿದೆ. ವಯಸ್ಸಾದ್ರೂ ನೋಡೋ ನೋಟ ರಾಕೆಟ್ಟಂಗಿದೆ ಅಂದ್ಮೇಲೆ ಅಷ್ಟು ನಿರೀಕ್ಷೆ ಇಟ್ಟುಕೊಳ್ಳೋದ್ರಲ್ಲಿ ತಪ್ಪೇನಿಲ್ಲ.

  • ಅಂಬಿ.. ಸಂಭ್ರಮಕ್ಕೆ ದಕ್ಷಿಣ ಚಿತ್ರರಂಗದ ಸೂಪರ್‍ಸ್ಟಾರ್ಸ್

    ambi ninge vaisaitho audio launch on aug 10th

    ಅಂಬಿ ನಿಂಗೆ ವಯಸ್ಸಾಯ್ತೋ.. ರೆಬಲ್‍ಸ್ಟಾರ್ ಅಂಬರೀಷ್ ಹಲವು ವರ್ಷಗಳ ನಂತರ ಹೀರೋ ಆಗಿ ನಟಿಸಿರುವ ಸಿನಿಮಾ. ಸುದೀಪ್ ಚಿತ್ರದಲ್ಲಿ ಯಂಗ್ ಅಂಬರೀಷ್ ಆಗಿ ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಣದ ಚಿತ್ರಕ್ಕೆ ಗುರುದತ್ ಗಾಣಿಗ ಎಂಬ ಹೊಸ ಪ್ರತಿಭೆಯ ನಿರ್ದೇಶನವಿದೆ. ಶೃತಿ ಹರಿಹರನ್, ಚಿತ್ರದಲ್ಲಿ ಯಂಗ್ ಸುಹಾಸಿನಿಯಾಗಿ ನಟಿಸಿದ್ದಾರೆ. ಇಷ್ಟೆಲ್ಲ ವಿಶೇಷಗಳಿರೋ ಚಿತ್ರದ ಆಡಿಯೋ ಬಿಡುಗಡೆಯನ್ನೂ ಅದ್ಧೂರಿಯಾಗಿಯೇ ಮಾಡೋಕೆ ನಿರ್ಧರಿಸಿದೆ ಚಿತ್ರತಂಡ.

    ಆಗಸ್ಟ್ 10ಕ್ಕೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇಟ್ಟುಕೊಳ್ಳಲಾಗಿದೆ. ಆ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವು ತಾರೆಯರು ಆಗಮಿಸುವ ನಿರೀಕ್ಷೆ ಇದೆ. 

    ಇನ್ನು ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸ್ಟಾರ್‍ಗಳೂ, ಕಲಾವಿದರು, ತಂತ್ರಜ್ಞರು ತಂಡೋಪತಂಡವಾಗಿ ಅಂಬಿ.. ಹಾಡುಗಳ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 

    ಚಿತ್ರದ ಟೈಟಲ್ ನೋಡಿ, ನಂಗೆ ವಯಸ್ಸಾಯ್ತು ಅಂದ್ಕೋಬೇಡಿ. ಸಿನಿಮಾ ನೋಡಿ ಡಿಸೈಡ್ ಮಾಡಿ. ವಯಸ್ಸಾಗಿದ್ಯೋ ಇಲ್ವೋ ಅನ್ನೋದನ್ನ ಎಂದು ಅಂಬಿ ಸ್ಟೈಲ್‍ನಲ್ಲೇ ಚಾಲೆಂಜ್ ಹಾಕಿದ್ದಾರೆ ಅಂಬರೀಷ್. ಈ ಚಿತ್ರದ ಹಿಂದಿನ ಶಕ್ತಿ ಸುದೀಪ್. ಅವನಿಲ್ಲದಿದ್ದರೆ ಈ ಚಿತ್ರ ಬರುತ್ತಿರಲಿಲ್ಲ ಎಂದು ಸುದೀಪ್‍ರನ್ನು ಹೊಗಳಿದ್ದಾರೆ.

  • ಅಂಬಿ.. ಸಿನಿಮಾ.. ಕಿಚ್ಚ, ಶಿವಣ್ಣ, ಪ್ರೇಮ್ ಕಂಡಂತೆ..

    ambi ninge vaisiatho is awaited by film industry too

    ಅಂಬಿ ನಿಂಗ್ ವಯಸ್ಸಾಯ್ತೋ.. ಸಿನಿಮಾ ಮುಂದಿನ ವಾರ ರಿಲೀಸ್. ಅಂಬರೀಷ್ 14 ವರ್ಷಗಳ ನಂತರ ಮತ್ತೊಮ್ಮೆ ಹೀರೋ ಆಗಿ ನಟಿಸಿದ್ದಾರೆ ಎನ್ನುವುದೇ ಅಭಿಮಾನಿಗಳಲ್ಲಿ ಥ್ರಿಲ್. ಅಭಿಮಾನಿಗಳಂತೆಯೇ ಸ್ಯಾಂಡಲ್‍ವುಡ್ ತಾರೆಗಳೂ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

    ಶಿವರಾಜ್‍ಕುಮಾರ್ ಅವರಿಗೆ ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ಟೈಟಲ್ ಹೇಳೋದು ಸ್ವಲ್ಪ ಕಷ್ಟ. ಯಾಕಂದ್ರೆ, ಅವರಿಗೆ ವಯಸ್ಸೇ ಆಗಲ್ಲ. ಈಗಾಗಲೇ ಹಾಡು ಕೇಳಿದ್ದೇನೆ. ಚೆನ್ನಾಗಿ ಬಂದಿದೆ. ಸಿನಿಮಾ ಕೂಡಾ ಚೆನ್ನಾಗಿ ಬಂದಿರುತ್ತೆ ಅನ್ನೋದು ನನ್ನ ನಂಬಿಕೆ. ನಿದೇಶಕ ಗುರುದತ್ ಗಾಣಿಗ ಅವರಿಗೆ ವಿಶ್ ಮಾಡಿದ್ದೇನೆ. ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ ಶಿವಣ್ಣ.

    ಈ ಸಿನಿಮಾದಲ್ಲಿ ಅಂಬರೀಷ್ ಅವರನ್ನು ನೋಡಿದ ಜನ ನಿಜಕ್ಕೂ ಖುಷಿ ಪಡ್ತಾರೆ. ಸಿನಿಮಾದಲ್ಲಿ ಅಂಬರೀಷ್ ಅಪ್ಪಟ ಮಗುವಿನಂತೆ ನಟಿಸಿದ್ದಾರೆ. ಅದರಲ್ಲೂ ಸುಹಾಸಿನಿಯವರನ್ನು ಭೇಟಿ ಮಾಡುವ ದೃಶ್ಯಗಳಲ್ಲಿ ಸುದೀಪ್ ಅಪ್ಪಟ ಮಗು. ಅದನ್ನು ಗುರುದತ್ ಗಾಣಿಗ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇದು ಕಿಚ್ಚ ಸುದೀಪ್ ಮಾತು. ಸಿನಿಮಾದಲ್ಲಿ ಯಂಗ್ ಅಂಬರೀಷ್ ಆಗಿ ಕಾಣಿಸಿಕೊಂಡಿರೋ ಸುದೀಪ್ ಚಿತ್ರದ ನಿರ್ಮಾಪಕರೂ ಹೌದು.

    ನೆನಪಿರಲಿ ಪ್ರೇಮ್ ಅವರಂತೂ ಸಿನಿಮಾ ನೋಡೋಕೆ ಕಾಯುತ್ತಿದ್ದಾರೆ. ಅದಕ್ಕೆ ವಿಶೇಷ ಕಾರಣವೂ ಇದೆ. ಸಿನಿಮಾದಲ್ಲಿ ಸುದೀಪ್ ಮಾಡಿರುವ ಪಾತ್ರದಲ್ಲಿ ಮೊದಲು ಪ್ರೇಮ್ ನಟಿಸಬೇಕಾಗಿತ್ತಂತೆ. ಆಗ ನಿರ್ಮಾಪಕರು ಬೇರೆ ಇದ್ದರು. ಸುದೀಪ್ ಟೇಕ್ ಓವರ್ ಮಾಡಿದ ಮೇಲೆ ಬದಲಾವಣೆಗಳಾದವು. ಹೀಗಾಗಿ ಅಂಬಿಯಣ್ಣನ ಜೊತೆ ನಟಿಸೋ ಚಾನ್ಸ್ ಮಿಸ್ಸಾಯ್ತು ಎನ್ನುವ ಪ್ರೇಮ್, ಚಿತ್ರವನ್ನು ನೋಡೋಕೆ ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದಾರೆ.

  • ಅಂಬಿಗೆ 66.. ಡೈರೆಕ್ಟರ್‍ಗೆ 26.. ಹೇಗಾಯ್ತು ಇದೆಲ್ಲ..?

    gurudutt ganiga talks about ambi

    ರೆಬಲ್‍ಸ್ಟಾರ್ ಅಂಬರೀಷ್‍ಗೆ ಈಗಿನ್ನೂ ಜಸ್ಟ್ 66 ವರ್ಷ. ಅವರ ಸಿನಿಮಾ ಅಂಬಿ ನಿಂಗ್ ವಯಸ್ಸಾಯ್ತೋ ನಿರ್ದೇಶಕ ಗುರುದತ್ ಗಾಣಿಗಗೆ ವಯಸ್ಸು 26 ವರ್ಷ. ಬಹುಶಃ ಅಂಬರೀಷ್ ಅವರ ಸಿನಿಮಾ ನಿರ್ದೇಶಿಸಿರುವ ಅತ್ಯಂತ ಚಿಕ್ಕ ವಯಸ್ಸಿನ ಹುಡುಗ ಗುರುದತ್. ಕೆಲವರಿಗೆ ಮಾತ್ರವೇ ಅಂತಾದ್ದೊಂದು ಅದೃಷ್ಟವಿರುತ್ತೆ. ಮೊದಲ ಸಿನಿಮಾದಲ್ಲಿಯೇ ಅಂಬರೀಷ್, ಸುಹಾಸಿನಿ, ಸುದೀಪ್‍ರಂತಹ ನಟರನ್ನು ನಿಭಾಯಿಸುವ ಅದೃಷ್ಟ. ಹೇಗಾಯ್ತು ಇದೆಲ್ಲ.. ಅಂತಾ ಕೇಳಿದ್ರೆ ಅವರು ತೋರಿಸೋದು ಸುದೀಪ್ ಅವರತ್ತ.

    ಗುರುದತ್, ಕುಂದಾಪುರದ ಹುಡುಗ. ಯಕ್ಷಗಾನದಲ್ಲಿ ಆಸಕ್ತಿಯಿತ್ತು. ಆದರೆ ಕ್ರಮೇಣ ಟಿವಿ, ಸಿನಿಮಾ ಗೀಳು ಹತ್ತಿಸಿಕೊಂಡ ಗುರುದತ್ ಗಾಂಧಿನಗರಕ್ಕೆ ಬಂದ್ರು. ಅಪ್ಪ ಅಮ್ಮನ ಮಾತು ಧಿಕ್ಕರಿಸಿ ಬಂದಿದ್ದ ಕಾರಣ, ನಿತ್ಯ ಜೀವನಕ್ಕೂ ಪರದಾಟವಿತ್ತು. ಆಗ ಹೊಟ್ಟೆಪಾಡಿಗಾಗಿ ಎಲ್ಲ ಕೆಲಸವನ್ನೂ ಮಾಡಿದ ಗುರುದತ್, ಮೇಕಪ್ ಮ್ಯಾನ್‍ನಿಂದ ಹಿಡಿದು ಸೆಟ್ ಬಾಯ್‍ವರೆಗೆ ಎಲ್ಲ ಕೆಲಸವನ್ನೂ ಮಾಡಿದ್ದಾರೆ. ಹೀಗಿರುವಾಗಲೇ ಅವರು ಒಂದು ದಿನ ಸುದೀಪ್ ಕಣ್ಣಿಗೆ ಬಿದ್ದರು. ಅದೃಷ್ಟದ ಬಾಗಿಲು ತೆರೆದುಕೊಂಡಿತ್ತು.

    ನಿಂಗೆ ಒಳ್ಳೆ ಕಮ್ಯುನಿಕೇಷನ್ ಸ್ಕಿಲ್ ಇದೆ. ಏನ್ ಮಾಡಬೇಕು ಅಂದ್ಕೊಂಡಿದ್ದೀಯಾ ಅಂದ್ರಂತೆ ಸುದೀಪ್. ಡೈರೆಕ್ಟರ್ ಆಗುವ ಆಸೆಯನ್ನು ಬಿಚ್ಚಿಟ್ಟ ಗುರುದತ್ ಅವರನ್ನ ತಮ್ಮ ಜೊತೆಯಲ್ಲೇ ಅಸಿಸ್ಟೆಂಟ್ ಆಗಿ ಸೇರಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಸಂಜು ವೆಡ್ಸ್ ಗೀತಾಗೆ ನಾಗಶೇಖರ್ ಜೊತೆ ಹಾಗೂ ಎಸ್.ನಾರಾಯಣ್ ಜೊತೆ ಸ್ವಲ್ಪ ಸ್ವಲ್ಪ ಕೆಲಸ ಮಾಡಿದ್ದ ಗುರುದತ್, ಮಾಣಿಕ್ಯ ಚಿತ್ರದಲ್ಲಿ ಸಂಪೂರ್ಣವಾಗಿ ಅಸಿಸ್ಟೆಂಟ್ ಡೈರೆಕ್ಟರ್ ಆದ್ರು. ಸುದೀಪ್ ಅವರ ಸಂಬಂಧಿಯಾಗಿರೋ ಸಂಚಿತ್ ಎಂಬುವರ ಜೊತೆ ಕಿರುಚಿತ್ರಗಳಲ್ಲಿ ತೊಡಗಿಸಿಕೊಂಡ್ರು. ತಮ್ಮದೇ ಆದ ಒಂದು ಸ್ಕ್ರಿಪ್ಟ್ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದಾಗಲೇ.. ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ಆಫರ್ ಸಿಕ್ಕಿದ್ದು. ಸುದೀಪ್ ಮತ್ತು ಜಾಕ್ ಮಂಜು ಅವರೇ ನಿರ್ಮಾಪಕರು.

    ಮೊದಲ ಚಿತ್ರದಲ್ಲಿಯೇ ದೊಡ್ಡ ದೊಡ್ಡ ಸ್ಟಾರ್‍ಗಳನ್ನು ನಿರ್ದೇಶಿಸುವ ಅವಕಾಶ ಬಿಡೋಕೆ ಸಾಧ್ಯನಾ..? ಜೊತೆಗೆ ಸುದೀಪ್ ಇದ್ದರು. ಈಗ ಚಿತ್ರ ಮುಗಿಸಿದ್ದೇವೆ. ಮನೆಯಲ್ಲಿ ನನ್ನ ಸಿನಿಮಾ ಕನಸನ್ನು ವಿರೋಧಿಸಿದ್ದವರೆಲ್ಲ ಈಗ ಒಪ್ಪಿಕೊಂಡಿದ್ದಾರೆ ಎಂದು ಹೇಳೋ ಗುರುದತ್, ಮೊದಲ ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂದು ತಿಳಿದುಕೊಳ್ಳೋ ಕುತೂಹಲದಲ್ಲಿದ್ದಾರೆ

  • ಅಂಬಿಗೆ ವಯಸ್ಸಾಗುವ ಮುನ್ನ.. ಹಳ್ಳಿ ಹೈದ ಕಿಚ್ಚ.. 

    ambi ninge vaisaitho shooting image

    ಅಂಬಿ ನಿಂಗೆ ವಯಸ್ಸಾಯ್ತೊ... ಬಹಳ ವರ್ಷಗಳ ನಂತರ ಅಂಬರೀಷ್ ಪೋಷಕ ಪಾತ್ರ ಬಿಟ್ಟು, ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ. ಅಂಬರೀಷ್ ಅವರನ್ನು ಹೀರೋ ಮಾಡಿರುವ ಜಾಕ್ ಮಂಜು, ಯಂಗ್ ಅಂಬರೀಷ್ ಪಾತ್ರದಲ್ಲಿ ತೋರಿಸಿರೋದು ಸುದೀಪ್ ಅವರನ್ನ. 

    ಚಿತ್ರದಲ್ಲಿ ಸುದೀಪ್ ಹೇಗೆ ಕಾಣ್ತಾರೆ ಅನ್ನೋಕ್ಕೆ ಇನ್ನೊಂದು ಫೋಟೋ ಹೊರಗೆ ಬಿಟ್ಟಿದ್ದಾರೆ. ಅದರಲ್ಲಿ ಸುದೀಪ್ ಮತ್ತು ಶೃತಿ ಹರಿಹರನ್, ಅಪ್ಪಟ ಹಳ್ಳಿಯ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಮತ್ತು ಶೃತಿ, ಇಬ್ಬರಿಗೂ ಇಂಥಾದ್ದೊಂದು ಲುಕ್ ಹೊಸದೇ.. ಹೀಗಾಗಿಯೇ ಪೋಸ್ಟರ್‍ನಲ್ಲಿ ಫ್ರೆಶ್‍ನೆಸ್ ಇದೆ.

    ಗುರುದತ್ ನಿರ್ದೇಶನದ ಚಿತ್ರದಲ್ಲಿ 2 ಕಥೆಗಳಿವೆ. ಒಂದು 70-80ರ ದಶಕದ ಕಥೆ. ಇನ್ನೊಂದು ಈಗಿನ ಕಥೆ. 70ರ ದಶಕಕ್ಕೆ ಸುದೀಪ್, ಈಗಿನ ಕಾಲಕ್ಕೆ ಅಂಬರೀಷ್. ಸ್ಸೋ.. ಅಂಬಿಗೆ ವಯಸ್ಸಾಗುವ ಮುನ್ನ.. ಸುಹಾಸಿನಿಗೂ ವಯಸ್ಸಾಗೋ ಮೊದಲು, ತೆರೆ ಮೇಲೆ ಕಾಣಿಸಿಕೊಳ್ಳೋದು ಸುದೀಪ್ ಮತ್ತು ಶೃತಿ. ಚಿತ್ರ ಆಗಸ್ಟ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಅಂಬಿಗೆ ಸುಹಾಸಿನಿಯೇ ಜೋಡಿಯಾಗಿ ಬಂದರು..!

    suhasini to pair with ambi

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ರೆಬಲ್‍ಸ್ಟಾರ್ ಅಂಬರೀಷ್‍ಗೆ ಜೋಡಿ ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಅಂಬರೀಷ್‍ಗೆ ಜೋಡಿ ಸುಮಲತಾ ಅಲ್ಲ, ರಮ್ಯಕೃಷ್ಣಾ ಅಲ್ಲ, ಖುಷ್‍ಬೂ ಕೂಡಾ ಅಲ್ಲ. ಮೊದಲೇ ನಿಗದಿಯಾಗಿದ್ದಂತೆ ಸುಹಾಸಿನಿ.

    ಈಗಾಗಲೇ ಸುಹಾಸಿನಿ ಶೂಟಿಂಗ್‍ಗೆ ಆಗಮಿಸಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಬೆನ್ನೆಲುಬಾಗಿರುವುದು ಕಿಚ್ಚ ಸುದೀಪ್. ಗುರುದತ್ ಗಾಣಿಗ ಎಂಬ ಯುವ ಪ್ರತಿಭೆಗೆ ಚಿತ್ರ ನಿರ್ದೇಶನದ ಜವಾಬ್ದಾರಿ ನೀಡಲಾಗಿದೆ.

  • ಅಬ್ಬಬ್ಬಬ್ಬಾಬ್ಬಾಬ್ಬಬ್ಬಬ್ಬಾ.. ಕೋಟಿಗೊಬ್ಬ 3

    kotigobba 3 teaser is an absolute stunner

    ಅವನ ಇಡೀ ಕಥೆ ಹೇಳೋದು ರವಿಶಂಕರ್. ಅದೇ.. ಕೋಟಿಗೊಬ್ಬ 2ನಲ್ಲಿ ಮಂಗ ಆಗಿ ಜೈಲು ಸೇರಿರ್ತಾನಲ್ಲ.. ಅದೇ ಪೊಲೀಸ್ ಆಫೀಸರ್ ರವಿಶಂಕರ್. ಅವನೊಬ್ಬ ಇಂಟರ್ ನ್ಯಾಷನಲ್ ಕಿಲಾಡಿ ಸರ್, ನಾನು ಆಗಲೇ ಹೇಳಿದ್ದರೂ ಯಾರೂ ನಂಬಿರಲಿಲ್ಲ ಎನ್ನುತ್ತಾ ಕಥೆ ಶುರು ಹಚ್ಚಿಕೊಳ್ತಾನೆ. ಕಿಚ್ಚ ಸ್ಟೈಲಿಷ್ ಆಗಿ ಕಾಣಿಸಿಕೊಂಡು ಬೆರಗು ಹುಟ್ಟಿಸಿದ್ರೆ, ಸ್ಟಂಟುಗಳು ಮೈನವಿರೇಳಿಸುತ್ತವೆ. ಇದು ಕೋಟಿಗೊಬ್ಬ 3 ಟೀಸರ್ ಕೊಟ್ಟಿರೋ ಸಣ್ಣ ಝಲಕ್.

    ಮಲ್ಲು ಚೆಲುವೆ ಮಡೋನ್ನಾ ಸೆಬಾಸ್ಟಿಯನ್ ಹೀರೋಯಿನ್. ಕೋಟಿಗೊಬ್ಬ 2 ಮುಂದುವರಿದ ಭಾಗ ಅಂದ್ರೆ ನಿತ್ಯಾ ಮೆನನ್ ಇರಬೇಕಿತ್ತಲ್ಲವಾ ಎಂದೆನ್ನಿಸಬಹುದೇನೋ.. ಅದಕ್ಕೆ ನಿರ್ದೇಶಕ ಶಿವ ಕಾರ್ತಿಕ್ ಉತ್ತರ ಕೊಡೋದಿರಲಿ, ಸುಳಿವನ್ನೂ ಕೊಡೋದಿಲ್ಲ. ಕಿಚ್ಚನ ಜೊತೆ ಬರೋ ಆ ಮಗು ಯಾರು..? ಹುಳ ಬಿಟ್ಟಂಗೆ ಬಿಟ್ಟು ಟೀಸರ್ ಮುಗಿಸ್ತಾರೆ ಶಿವಕಾರ್ತಿಕ್.

    ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಟೀಸರ್ ಅದ್ಧೂರಿಯಾಗಿದೆ. ಬೇಸಗೆಯ ರಜಕ್ಕೇ ಬರ್ತಾನಂತೆ ಕೋಟಿಗೊಬ್ಬ. ಅಂದಹಾಗೆ.. ರವಿಶಂಕರ್ ಹೇಳೋ ಕೊನೆ ಡೈಲಾಗ್ ಏನ್ ಗೊತ್ತಾ.. ಅವನು ಇಬ್ಬರಲ್ಲ ಸಾರ್.. ಒಬ್ಬನೇ.. 

  • ಅಭಿಮಾನಿಗಳಿಗೆ ಸುದೀಪ್ ಎಚ್ಚರಿಕೆ

    sudeep tweets on frauh account

    ‘‘ಕೆಲವರು ನನ್ನ ಹುಟ್ಟುಹಬ್ಬಕ್ಕಾಗಿ ಟಿ-ಶರ್ಟ್ ಹಾಗೂ ಐಡಿ ಕಾರ್ಡ್ ಮಾಡಿಸಲು ಹಣ ಕಲೆಕ್ಟ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥವರ ಬಗ್ಗೆ ಮಾಹಿತಿ ಸಿಕ್ಕರೆ, ದಯವಿಟ್ಟು ನನಗೆ ತಿಳಿಸಿ’’ ಇದು ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ಸ್ಟೇಟಸ್.

    ಅದು ಅಭಿಮಾನಿಗಳಿಗೆ ಎಚ್ಚರಿಕೆಯೂ ಹೌದು. ಸೆಪ್ಟೆಂಬರ್ 2 ರಂದು ಸುದೀಪ್ ಹುಟ್ಟುಹಬ್ಬವಿದೆ. ಇನ್ನೂ ಒಂದೂವರೆ ತಿಂಗಳು ಟೈಮ್ ಇದೆ. ಹುಟ್ಟುಹಬ್ಬದ ನೆಪದಲ್ಲಿ ಹಣ ಹೊಡೆಯಲು ಕೆಲವು ಕಿಡಿಗೇಡಿಗಳು ಆಗಲೇ ಸಂಚು ಮಾಡಿಬಿಟ್ಟಿದ್ದಾರೆ. ಸುದೀಪ್ ಜನ್ಮದಿನ ಸೆಲೆಬ್ರೇಟ್ ಮಾಡಲು ಹಣ ವಸೂಲಿ ಮಾಡುವುದು, ಸುದೀಪ್ ಹೆಸರಿನಲ್ಲಿ  

    ಟಿ-ಶರ್ಟ್ ಹಾಗೂ ಐಡಿ ಕಾರ್ಡ್ ಮಾಡಿಸುವುದು ಹಾಗೂ ಅವುಗಳಿಗಾಗಿ ಹಣ ಕೇಳುತ್ತಿರುವುದು ಸ್ವತಃ ಸುದೀಪ್ ಗಮನಕ್ಕೆ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ನಟ ಸುದೀಪ್, ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಸುದೀಪ್ ಫ್ಯಾನ್ಸ್ ಕ್ಲಬ್ಗಳು ಕೂಡಾ ಸುದೀಪ್ ಟ್ವೀಟ್ನ್ನು ರೀಟ್ವೀಟ್ ಮಾಡಿ, ಅಭಿಮಾನಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ.

    ನಿಮ್ಮ ಬೆವರಿನ ಹಣವನ್ನು ವಸೂಲಿಗಾರರಿಗೆ ನೀಡಬೇಡಿ. ಸುದೀಪ್ ಬಯಸುವುದು ಪ್ರೀತಿ ಮತ್ತು ಅಭಿಮಾನವನ್ನು ಮಾತ್ರ ಎಂದಿದ್ದಾರೆ.

  • ಅಭಿಮಾನಿಗಳು ಹೇಳಿದ್ದು.. ಶೋ ಎಲ್ಲ ನಂದೇ..

    the villain first days shows are booked by sudeep - shivanna fans

    ಶಿವರಾಜ್‍ಕುಮಾರ್ ಮತ್ತು ಸುದೀಪ್ ಅಭಿಮಾನಿಗಳ ದೊಡ್ಡ ಹಬ್ಬ ದಿ ವಿಲನ್. ಕನ್ನಡದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ದಿ ವಿಲನ್ ಸಡಗರ ಸದ್ದು ಮಾಡ್ತಿದೆ. ಹಲವಾರು ಕಡೆ ಥಿಯೇಟರುಗಳಿಗೆ ಥಿಯೇಟರುಗಳನ್ನು ಒಬ್ಬೊಬ್ಬರೇ ಅಭಿಮಾನಿಗಳು ಬುಕ್ ಮಾಡಿಸಿ, ಕುಟುಂಬದವರು, ಸ್ನೇಹಿತರಿಗೆ ಶೋ ತೋರಿಸುತ್ತಿದ್ದಾರೆ.

    ಬೆಂಗಳೂರಿನಲ್ಲಿ 9ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಒಂದೊಂದು ಶೋವನ್ನು ಒಬ್ಬೊಬ್ಬರೇ ಬುಕ್ ಮಾಡಿದ್ದಾರೆ. ತುಮಕೂರಿನಲ್ಲೂ ಅಷ್ಟೆ, ಪ್ರಶಾಂತ್ ಟಾಕೀಸ್‍ನ ಎಲ್ಲ ಸೀಟುಗಳನ್ನೂ ಒಬ್ಬರೇ ಬುಕ್ ಮಾಡಿಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೆಜಿ ರಸ್ತೆಯ ನರ್ತಕಿ, ಗೌಡನಪಾಳ್ಯದ ಶ್ರೀನಿವಾಸ, ತಾವರೆಕೆರೆಯ ಲಕ್ಷ್ಮೀ, ಕಮಲಾನಗರದ ವೀರಭದ್ರೇಶ್ವರ, ಶಂಕರ್‍ನಗರದ ರಾಜ್‍ಮುರಳಿ, ದೊಡ್ಡಬಳ್ಳಾಪುರದ ಸೌಂದರ್ಯ ಮಹಲ್, ಮೈಸೂರಿನ ಡಿಸಿಆರ್ ಮಾಲ್, ವುಡ್‍ಲ್ಯಾಂಡ್ ಮೈಸೂರುಗಳಲ್ಲಿ ಒಬ್ಬೊಬ್ಬರೇ ಅಭಿಮಾನಿಗಳು ಇಡೀ ಶೋಗಳನ್ನೇ ಬುಕ್ ಮಾಡಿದ್ದಾರೆ.

    ತುಮಕೂರಿನಲ್ಲಿ ಶಿವಣ್ಣ ಮತ್ತು ಸುದೀಪ್ ಅಭಿಮಾನಿ ಸಂಘಟನೆಗಳ ಸದಸ್ಯರು ಒಟ್ಟಿಗೇ ಮೆರವಣಿಗೆ ನಡೆಸಲಿದ್ದಾರೆ. ಅಭಿಮಾನಿಗಳ ನಡುವೆ ಅತಿರೇಕವೇ ಹೆಚ್ಚುತ್ತಿದ್ದ ಈ ಸಮಯದಲ್ಲಿ ಸ್ಟಾರ್ ನಟರ ಅಭಿಮಾನಿಗಳೇ ಒಗ್ಗಟ್ಟಿನ ಅಭಿಮಾನ ಪ್ರದರ್ಶನ ಮಾಡ್ತಾ ಇರೋದು ಕಿಚ್ಚ ಮತ್ತು ಶಿವಣ್ಣ, ಇಬ್ಬರಿಗೂ ಖುಷಿ ಕೊಡೋದು ಖಂಡಿತಾ.

  • ಅಭಿಮಾನಿಯ ಅಕಾಲ ಮರಣಕ್ಕೆ ಕಣ್ಣೀರಿಟ್ಟ ಕಿಚ್ಚ

    sudeep mourns over his fan's death

    ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ನಟ ಸುದೀಪ್, ಅಭಿಮಾನಿಯೊಬ್ಬರ ಸಾವಿಗೆ ಕಣ್ಣೀರಿಟ್ಟಿದ್ದಾರೆ. ನಂದೀಶ್ ಎಂಬುವವರು ಸುದೀಪ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಸುದೀಪ್ ಅಭಿಮಾನಿ ಸಂಘದ ಕಾರ್ಯದರ್ಶಿಯೂ ಆಗಿದ್ದ ನಂದೀಶ್ ಅವರನ್ನು ಸುದೀಪ್ ಸಹೋದರನಂತೆ ನೋಡಿಕೊಂಡಿದ್ದರು. ಅವರು ಅಕಾಲ ಮರಣಕ್ಕೆ ತುತ್ತಾಗಿದ್ದಾರೆ.

    ಅಭಿಮಾನಿಯ ಸಾವಿಗೆ ನೊಂದ ಸುದೀಪ್ ತಮ್ಮ ಟ್ವಿಟ್ಟರ್ ಡಿಪಿಯನ್ನು ಬದಲಿಸಿ ಸಂತಾಪ ಸೂಚಿಸಿದ್ದಾರೆ. ನಂದೀಶ್ ಅವರ ಮನೆಗೆ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಿ, ಅಂತ್ಯಕ್ರಿಯೆಯಲ್ಲಿಯೂ ಪಾಲ್ಗೊಂಡಿದ್ದಾರೆ. ನಂದೀಶ್ ಅವರ ಸಾವಿಗೆ ಸುದೀಪ್ ಅವರ ಸಾವಿರಾರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

  • ಅಮೆರಿಕದಲ್ಲಿರೋ ಕನ್ನಡಿಗನಿಗೆ ಸ್ಫೂರ್ತಿಯಾದ ಕಿಚ್ಚ : ಇಷ್ಟಕ್ಕೂ ಆತ ಮಾಡಿದ್ದೇನು..?

    ಅಮೆರಿಕದಲ್ಲಿರೋ ಕನ್ನಡಿಗನಿಗೆ ಸ್ಫೂರ್ತಿಯಾದ ಕಿಚ್ಚ : ಇಷ್ಟಕ್ಕೂ ಆತ ಮಾಡಿದ್ದೇನು..?

    ಕಿಚ್ಚ ಸುದೀಪ್ ಅವರ 25ನೇ ವರ್ಷದ ಚಿತ್ರೋತ್ಸವವನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಸೆಲಬ್ರೇಟ್ ಮಾಡಿದ್ದು ಎಲ್ಲರಿಗೂ ಗೊತ್ತಿರೋದೆ. ಆ ದಿನ ವಿಕ್ರಾಂತ್ ರೋಣ ಚಿತ್ರದ ಲೋಗೋದ ಜೊತೆಗೆ ಕನ್ನಡ ಬಾವುಟವನ್ನೂ ಹಾರಿಸಿ ದುಬೈನಲ್ಲಿ ರಾಜ್ಯೋತ್ಸವ ಮಾಡಲಾಗಿತ್ತು.

    ಬುರ್ಜ್ ಖಲೀಫಾ ಮೇಲೆ ಕನ್ನಡ ಧ್ವಜ ಹಾರಿದಾಗ ಆದ ರೋಮಾಂಚನವೇ ಬೇರೆ. ನನ್ನ ಜೊತೆ ಬಂದಿದ್ದವರೆಲ್ಲರೂ ವಿಕ್ರಾಂತ್ ರೋಣ ಚಿತ್ರದ ಲೋಗೋ, ನನ್ನ 25 ವರ್ಷದ ಚಿತ್ರೋತ್ಸವ ಎಲ್ಲವನ್ನೂ ಮರೆತು ಕನ್ನಡ ಬಾವುಟದ ಬಗ್ಗೆ ಬಾವುಕರಾಗಿ ಪ್ರತಿಕ್ರಿಯಿಸಿದ್ದರು ಎಂದು ಖುಷಿಯಿಂದ ಹೇಳಿಕೊಂಡಿದ್ದರು ಸುದೀಪ್.

    ಇದು ಸುದೀಪ್ ಅವರ ಸಾಧನೆಯಾದರೆ, ಅವರ ಈ ಸಾಹಸ ಅಮೆರಿಕದಲ್ಲಿರೋ ಕನ್ನಡಿಗನಿಗೆ ಬೇರೊಂದು ರೀತಿಯಲ್ಲಿ ಸ್ಫೂರ್ತಿ ತುಂಬಿದೆ. ನ್ಯೂಯಾರ್ಕ್ನಲ್ಲಿರೋ ಶಂಕರ್ ಅನ್ನೋ ಅಭಿಮಾನಿ ಈಗ ತಮ್ಮ ಕಾರಿಗೆ ಕನ್ನಡ ಎಂದೇ ನಾಮಕರಣ ಮಾಡಿದ್ದಾರೆ.

    ನ್ಯೂಯಾರ್ಕ್ನಲ್ಲಿ ಜನ ತಮ್ಮ ಕಾರಿಗೆ ನಂಬರ್ ಪ್ಲೇಟ್ ಅಲ್ಲದೆ ತಮ್ಮದೇ ಆದ ಹೆಸರನ್ನೂ ಇಟ್ಟುಕೊಳ್ಳಬಹುದು. ಅದಕ್ಕೆ ಸ್ವಲ್ಪ ಹಣ ಕಟ್ಟಬೇಕು ಅಷ್ಟೆ. ಇತ್ತ ಸುದೀಪ್ ಅವರ ಈ ಸಾಹಸವನ್ನು ನೋಡಿದ ಶಂಕರ್, ನಂತರ ತಮ್ಮ ಕಾರಿಗೆ KANNADA ಎಂದು ನಾಮಕರಣ ಮಾಡಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸುದೀಪ್ ಅವರೇ ಸ್ಫೂರ್ತಿ ಎಂದು ಕೂಡಾ ಬರೆದುಕೊಂಡಿದ್ದಾರೆ.

    ಎಲ್ಲಾದರೂ ಇರು, ಹೇಗಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ.. ಕನ್ನಡವೇ ನಿತ್ಯ

  • ಅರೆರೆ.. ಏನಿದು.. ಒಂದೇ ಕಡೆ ಕಿಚ್ಚ, ಶ್ರೀಮುರಳಿ, ಧ್ರುವ, ಮಹೇಶ್ ಬಾಬು, ಸುನಿಲ್ ಶೆಟ್ಟಿ..!

    stars come under one roof

    ಕಿಚ್ಚ ಸುದೀಪ್ ಜೊತೆ ಶ್ರೀಮುರಳಿ, ತಾರಾ, ಸುನಿಲ್ ಶೆಟ್ಟಿ ಜೊತೆ ಶ್ರೀಮುರಳಿ, ಧ್ರುವ ಸರ್ಜಾ ಜೊತೆ ರೋರಿಂಗ್ ಸ್ಟಾರ್, ಮಹೇಶ್ ಬಾಬು ಜೊತೆ, ಸುನಿಲ್ ಶೆಟ್ಟಿ ಜೊತೆ.. ಎಲ್ಲೆಲ್ಲೂ ಕನ್ನಡ ಸ್ಟಾರುಗಳೇ..

    ಏನಿದು.. ಇವರೆಲ್ಲ ಏನು ಒಟ್ಟಿಗೇ ಸಿನಿಮಾ ಮಾಡ್ತಿದ್ದಾರಾ.. ಅಂದ್ಕೋಬೇಡಿ. 

    ರಾಮೋಜಿ ಫಿಲಂ ಸಿಟಿಯಲ್ಲಿ ಕನ್ನಡ ಸ್ಟಾರ್ಸ್ ಸಮಾಗಮವಾಗಿದೆ. ಸುದೀಪ್ ಅಭಿನಯದ ಪೈಲ್ವಾನ್, ಶ್ರೀಮುರಳಿಯ ಭರಾಟೆ, ಧ್ರುವ ಸರ್ಜಾರ ಪೊಗರು, ಮಹೇಶ್ ಬಾಬುರ ಮಹರ್ಷಿ ಚಿತ್ರಗಳು ಅಕ್ಕ ಪಕ್ಕದಲ್ಲಿಯೇ ಶೂಟಿಂಗ್ ಆಗುತ್ತಿವೆ. ಅವರ ಬಳಿ ಇವರು, ಇವರ ಬಳಿ ಅವರು ಅಪ್ಪಟ ಗೆಳೆಯರಂತೆ ಒಡನಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 

  • ಅರ್ಜುನ್ ಗೌಡನಿಗೆ ಕಿಚ್ಚನ ಬೆಂಬಲ

    ಅರ್ಜುನ್ ಗೌಡನಿಗೆ ಕಿಚ್ಚನ ಬೆಂಬಲ

    ಅರ್ಜುನ್ ಗೌಡ. ಇದೇ ವಾರ ರಿಲೀಸ್ ಆಗುತ್ತಿರೋ ಸಿನಿಮಾ. ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ನಟಿಸಿರೋ ಈ ಚಿತ್ರ ರಾಮು ಅವರ ಕೊನೆಯ ಕನಸು. ಪತಿ ರಾಮು ಅವರ ಆ ಕನಸು ನನಸು ಮಾಡೋಕೆ ಹೊರಟಿರುವುದು ನಟಿ ಮಾಲಾಶ್ರೀ. ಆ ಕನಸಿಗೆ ಹಲವರು ಶಕ್ತಿ ತುಂಬುತ್ತಿದ್ದಾರೆ. ಕಿಚ್ಚ ಸುದೀಪ್ ಸೇರಿದಂತೆ..

    ಅರ್ಜುನ್ ಗೌಡ ಚಿತ್ರದ ಬಗ್ಗೆ ಬಹಳ ಕೇಳಿದ್ದೆ. ಅದು ರೀಮೇಕ್ ಎಂದೇ ಹಲವರು ಹೇಳಿದ್ದರು. ಆದರೆ ಇದು ರೀಮೇಕ್ ಅಲ್ಲ, ಸ್ಟ್ರೈಟ್ ಸಬ್ಜೆಕ್ಟ್ ಸಿನಿಮಾ ಎಂದು ಆಮೇಲೆ ಗೊತ್ತಾಯ್ತು. ಅರ್ಜುನ್ ಗೌಡ ಚಿತ್ರವನ್ನು ನಿರ್ದೇಶಕ ಲಕ್ಕಿ ಶಂಕರ್  ತುಂಬಾ ಚೆನ್ನಾಗಿ ಮಾಡಿದ್ದಾರೆ. ಧರ್ಮವಿಶ್ ಅವರ ಮ್ಯೂಸಿಕ್ಕೂ ಚೆನ್ನಾಗಿದೆ. ನನಗೆ ಜಯಣ್ಣ ಕೇಳು ಭೋಗಣ್ಣ ಹಾಡು ಇಷ್ಟವಾಯ್ತು. ರಾಮು ಅವರ ಈ ಕನಸನ್ನು ಗೆಲ್ಲಿಸೋಣ ಎಂದಿದ್ದಾರೆ ಸುದೀಪ್.

    ಪ್ರಜ್ವಲ್, ಪ್ರಿಯಾಂಕಾ ತಿಮ್ಮೇಶ್, ಸ್ಪರ್ಶ ರೇಖಾ.. ಮೊದಲಾದವರು ನಟಿಸಿರೋ ಚಿತ್ರ ಡಿ.31ಕ್ಕೆ ರಿಲೀಸ್ ಆಗುತ್ತಿದೆ. 

  • ಅರ್ಜುನ್ ಜನ್ಯಾಗೆ ಗದರಿದ್ದೇಕೆ ಕಿಚ್ಚ ಸುದೀಪ್?

    ಅರ್ಜುನ್ ಜನ್ಯಾಗೆ ಗದರಿದ್ದೇಕೆ ಕಿಚ್ಚ ಸುದೀಪ್?

    ಕೋಟಿಗೊಬ್ಬ 3 ಸಕ್ಸಸ್ ಮೀಟ್ ಕಾರ್ಯಕ್ರಮ ನಡೆಯುತ್ತಿತ್ತು. ಚಿತ್ರತಂಡದವರೆಲ್ಲರೂ ಹಾಜರಿದ್ದರು. ಆರಂಭದಲ್ಲಿ ಎಡವಟ್ಟು ಮಾಡಿಕೊಂಡ ಕಾರಣಕ್ಕೆ

    ಸುದ್ದಿಯಾಗಿದ್ದ ಕೋಟಿಗೊಬ್ಬ 3, ನಂತರ ಮಾತಾಡಿದ್ದು ಕಲೆಕ್ಷನ್ನಿನ ಮೂಲಕ. ಸಹಜವಾಗಿಯೇ ಖುಷಿಯಾಗಿದ್ದ ಚಿತ್ರತಂಡ ಸಕ್ಸಸ್ ಮೀಟ್ ಕರೆದಿತ್ತು. ಸುದೀಪ್, ಮಡೋನ್ನಾ.. ಜೊತೆ ಸೂರಪ್ಪ ಬಾಬು, ಶೇಖರ್ ಚಂದ್ರ, ಅರ್ಜುನ್ ಜನ್ಯಾ.. ಎಲ್ಲರೂ ಕಾರ್ಯಕ್ರಮದಲ್ಲಿದ್ದರು. ಈ ಸಂದರ್ಭದಲ್ಲಿ ಅರ್ಜುನ್ ಜನ್ಯಾ ಒಂದು ಸಣ್ಣ ಎಡವಟ್ಟು ಮಾಡಿದರು.

    ಕಾರ್ಯಕ್ರಮಕ್ಕೆ ಅರ್ಜುನ್ ಜನ್ಯಾ ಆಗಮಿಸಿದಾಗ ಸುದೀಪ್ ಆಗಲೇ ಬಂದವರೊಂದಿಗೆ ಮಾತನಾಡುತ್ತಿದ್ದರು. ಜನ್ಯಾ ಸೀದಾ ಹೋದವರೇ.. ಸುದೀಪ್ ಕಾಲಿಗೆ ನಮಸ್ಕರಿಸಿದರು. ವಾಟ್ಸ್ ರಾಂಗ್ ವಿಥ್ ಯೂ.. ಎಂದು ಗದರಿದ ಸುದೀಪ್, ಜನ್ಯಾಗೆ ಬೆನ್ನು ತಟ್ಟಿದರು.

    ಅರ್ಜುನ್ ಜನ್ಯಾ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿದ್ದು ಕೆಂಪೇಗೌಡ ಚಿತ್ರದ ಮೂಲಕ. ಅಂದಿನಿಂದಲೂ ಜನ್ಯಾಗೆ ಬೆನ್ನೆಲುಬಾಗಿ ನಿಂತಿರೋದು ಸುದೀಪ್. ಅರ್ಜುನ್ ಜನ್ಯಾ ಅಣ್ಣ ಆಸ್ಪತ್ರೆಯಲ್ಲಿದ್ದಾಗ ಕೋಟಿಗೊಬ್ಬ 3 ಚಿತ್ರದ ಬಿಜಿಎಂ ಕೆಲಸ ನಡೆಯುತ್ತಿದ್ದರು. ಅಣ್ಣ ಉಳಿಯದೇ ಹೋದರೂ.. ಆ ಸಂದರ್ಭದಲ್ಲಿ ಜೊತೆಗಿದ್ದು ಧೈರ್ಯ ನೀಡಿದ್ದವರು ಸುದೀಪ್. ಹೀಗಾಗಿ ಸುದೀಪ್ ಅವರ ಬಗ್ಗೆ ಅಭಿಮಾನಕ್ಕಿಂತ ಹೆಚ್ಚು ಗೌರವ ಇಟ್ಟುಕೊಂಡಿರೋ ಜನ್ಯಾ ಅದನ್ನು ಹಲವು ಬಾರಿ ಹೇಳಿಕೊಂಡೂ ಇದ್ದಾರೆ. ಆದರೆ ಸುದೀಪ್ ಅವರಿಗೆ ಯಾರೂ ತಮ್ಮ ಕಾಲಿಗೆ ಬೀಳೋದು ಇಷ್ಟವಾಗಲ್ಲ. ಅಷ್ಟೆ...

  • ಅಹೋರಾತ್ರ V/s  ಸುದೀಪ್ ಫ್ಯಾನ್ಸ್ : ಕಂಪ್ಲೀಟ್ ಪಿಕ್ಚರ್

    ಅಹೋರಾತ್ರ V/s  ಸುದೀಪ್ ಫ್ಯಾನ್ಸ್ : ಕಂಪ್ಲೀಟ್ ಪಿಕ್ಚರ್

    ಶನಿವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಒಂದು ಘಟನೆ ನಡೆದುಹೋಯ್ತು. ಸುದೀಪ್ ಫ್ಯಾನ್ಸ್ ಎಂದು ಹೇಳಿಕೊಂಡ ಒಂದಷ್ಟು ಜನ ನೇರವಾಗಿ ಅಹೋರಾತ್ರರ ಮನೆಗೆ ನುಗ್ಗಿಬಿಟ್ಟರು. ಕೂಗಾಡಿ.. ಅರಚಾಡಿ.. ಬೆದರಿಕೆಯನ್ನೂ ಹಾಕಿ ಹೋದರು. ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಠಾಣೆಯ ಮೆಟ್ಟಿಲೇರಿದ್ದಾರೆ ಅಹೋರಾತ್ರ. ಇಷ್ಟಕ್ಕೂ ಈ ಪ್ರಕರಣ ಏನು..? ಅಹೋರಾತ್ರ ಮನೆ ಮೇಲೆ ಸುದೀಪ್ ಅಭಿಮಾನಿಗಳು ದಾಳಿ ಮಾಡಿದ್ದಾದರೂ ಏಕೆ..? ಇಷ್ಟಕ್ಕೂ ಯಾರಿದು ಅಹೋರಾತ್ರ..?

    ಅಹೋರಾತ್ರ ಎಂಬ ವ್ಯಕ್ತಿ ಹಿಂದೂ ಕಾರ್ಯಕರ್ತ. ಮೂಲ ಹೆಸರು ನಟೇಶ್. ಕೆಲವು ಕೃತಿಗಳನ್ನು ಬರೆದಿರುವ ಸಾಹಿತಿಯೂ ಹೌದು. ಇತ್ತೀಚೆಗೆ ಅಹೋರಾತ್ರ ಗುರುತಿಸಿಕೊಂಡಿದ್ದು ಉಪೇಂದ್ರ ಅವರ ಪ್ರಜಾಕೀಯ ಪಕ್ಷದಲ್ಲಿ. ಇದಿಷ್ಟೇ ಈತನ ಪರಿಚಯ.

    ಇನ್ನು ಈ ಗಲಾಟೆ ಶುರುವಾಗಿದ್ದು ಒಂದು ಜಾಹೀರಾತಿನಿಂದ. ರಮ್ಮಿ ಸರ್ಕಲ್ ಜಾಹೀರಾತಿನಲ್ಲಿ ಸುದೀಪ್ ನಟಿಸಿರುವುದು ಗೊತ್ತಿದೆಯಲ್ಲವೇ.. ಆ ಜಾಹೀರಾತು ಬಂದ ಮೇಲೆ, ಇದು ಜನನರನ್ನು ಜೂಜಾಡುವುದಕ್ಕೆ ಪ್ರೇರೇಪಿಸುವಂತಿದೆ. ಇದರಿಂದ ಹೊರಬನ್ನಿ ಎಂದು ಕೂಗಾಡಿದ ಮೊದಲಿಗ ಅಹೋರಾತ್ರ. ಸರ್ಕಾರವೇ ನೋ ಪ್ರಾಬ್ಲಂ ಎಂದಿರೋವಾಗ ಈತನದ್ದೇನು ಎಂದ ಸುದೀಪ್, ಅಹೋರಾತ್ರಿಗೆ ಉತ್ತರಿಸುವ ಗೊಡವೆಗೂ ಹೋಗಲಿಲ್ಲ. ಆದರೆ, ಸುದೀಪ್ ವಿರುದ್ಧದ ಟೀಕೆಯನ್ನು ಅಹೋರಾತ್ರ ಬಿಡಲಿಲ್ಲ. ಒಂದು ಹಂತದಲ್ಲಿ ತೀರಾ ತೀರಾ ವೈಯಕ್ತಿಕ ನಿಂದನೆಗೆ ಇಳಿದುಬಿಟ್ಟರು. ಈ ಹಂತದಲ್ಲಿ ಸುದೀಪ್ ಸುಮ್ಮನಿದ್ದರೂ ಅಭಿಮಾನಿಗಳು ಸುಮ್ಮನಿರಲಿಲ್ಲ. ಅದು ಅತಿರೇಕಕ್ಕೂ ಹೋಗಿ ಈಗ ಸುದೀಪ್ ಅಭಿಮಾನಿಗಳು ಮತ್ತು ಅಹೋರಾತ್ರ ವಿರುದ್ಧದ ಹೋರಾಟವಾಗಿದೆ. ಒಂದೂವರೆ ವರ್ಷದ ಹೋರಾಟ ಈಗ ಗಲಾಟೆ, ಕೇಸ್ ಹಂತಕ್ಕೆ ಬಂದು ನಿಂತಿದೆ.

    ಅತ್ತ ಅಹೋರಾತ್ರ ವಿರುದ್ಧ ಸುದೀಪ್ ಅಭಿಮಾನಿಗಳೂ ದೂರು ಕೊಟ್ಟಿದ್ದಾರೆ. ಯಾರೇ ಆಗಿರಲಿ, ಮನೆಗೆ ನುಗ್ಗಿ ಗಲಾಟೆ ಮಾಡುವುದು ತಪ್ಪು. ಅದರಲ್ಲಿ ಎರಡನೇ ಮಾತಿಲ್ಲ. ಆದರೆ, ಪ್ರತಿ ಹಂತದಲ್ಲೂ ಅಹೋರಾತ್ರ ಹತೋಟಿ ಮೀರಿ ಹೋಗಿದ್ದಲ್ಲದೆ, ಹಲ್ಲೆಯನ್ನು ತಮ್ಮ ಮೇಲೆ ತಾವೇ ಎಳೆದುಕೊಂಡರೇನೋ ಎನ್ನಿಸಿದರೆ.. ಪ್ರಚಾರಕ್ಕಾಗಿ ಹೀಗೆ ಮಾಡಿದರೇನೋ ಎನ್ನಿಸಿದರೆ ಅದೂ ಸತ್ಯ. ಅನುಮಾನವೇನಿಲ್ಲ.

  • ಆಕಾಶವೇ ಆರಾಧಿಸುವ.. ಕೋಟಿಗೊಬ್ಬ 3 ಏ.27ಕ್ಕೆ

    kotigobba 3's aakashave aradhisuva song on april 27th

    ಕೊರೋನಾ ಬಾರದೇ ಹೋಗಿದ್ದರೆ ಕೋಟಿಗೊಬ್ಬ 3 ಇಷ್ಟು ಹೊತ್ತಿಗೆ ಥಿಯೇಟರಿನಲ್ಲಿ ಪ್ರತ್ಯಕ್ಷವಾಗಿರುತ್ತಿತ್ತು. ಈಗ ಎಲ್ಲವೂ ನಿರಾಸೆ.. ಯಾವ ಸಿನಿಮಾಗಳು ಕೂಡಾ ಇಲ್ಲ. ಇಂಥ ಹೊತ್ತಲ್ಲಿಯೇ ಒಂದು ಗುಡ್ ನ್ಯೂಸ್ ಕೊಟ್ಟಿದೆ ಕೋಟಿಗೊಬ್ಬ 3.

    ಏಪ್ರಿಲ್ 27ರಂದು ಆಕಾಶವೇ ಆರಾಧಿಸುವ.. ಹಾಡು ರಿಲೀಸ್ ಆಗಲಿದೆ. ಈ ಲಿರಿಕಲ್ ವಿಡಿಯೋ ಸಾಂಗ್‍ಗೆ ಅರ್ಜುನ್ ಜನ್ಯ ಸಂಗೀತವಿದ್ದು, ಸಾಹಿತ್ಯ ನಾಗೇಂದ್ರ ಪ್ರಸಾದ್ ಅವರದ್ದು.

    ಸುದೀಪ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುವ ಚಿತ್ರವಿದು. ಏ.27ರಂದು ಬೆಳಗ್ಗೆ 10 ಗಂಟೆಗೆ ಆನಂದ್ ಆಡಿಯೋದಲ್ಲಿ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ. ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶನವಿದೆ. ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿರುವ ಚಿತ್ರದಲ್ಲಿ ಅಫ್ತಾಬ್ ಶಿವದಾಸನಿ, ರವಿಶಂಕರ್ ಕೂಡಾ ನಟಿಸಿದ್ದಾರೆ.

  • ಆಂಧ್ರ, ತೆಲಂಗಾಣ, ತಮಿಳುನಾಡಲ್ಲಿ ಪೈಲ್ವಾನ್ ಕ್ರೇಝ್

    pailwan craze in andhra, telangana and tmil nadu

    ಕಿಚ್ಚ ಸುದೀಪ್ ಅವರಿಗೆ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯಲ್ಲೂ ಅಭಿಮಾನಿಗಳಿದ್ದಾರೆ. ಪೈಲ್ವಾನ್ ಸಿನಿಮಾ ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅತ್ತ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪೈಲ್ವಾನನ ಕ್ರೇಝ್ ಶುರುವಾಗಿದೆ.

    ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿತ್ರದ ಪ್ರಚಾರವನ್ನು ಆಗಲೇ ಶುರು ಮಾಡಿದ್ದಾರೆ. ಪೈಲ್ವಾನನ ವ್ಯಾನ್‍ಗಳು ಸುತ್ತಾಟ ಆರಂಭಿಸಿವೆ. ಹೋದೆಡೆಯಲ್ಲೆಲ್ಲ ಅಭಿಮಾನಿಗಳು ಕಿಚ್ಚನ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಜೈಕಾರ ಜೋರಾಗಿದೆ.

    ಸುದೀಪ್ ಜೊತೆ ಸುನಿಲ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿ. ತಮಿಳುನಾಡಿನಲ್ಲೂ ಪೈಲ್ವಾನ್ ಹವಾ ಶುರುವಾಗಿದ್ದು, ಅಭಿಮಾನಿಗಳೇ ಸ್ವತಃ ವಿಡಿಯೋ ಮಾಡಿ ಹಾಡು, ಟ್ರೇಲರ್ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 12ರಿಂದ ಪೈಲ್ವಾನ್ ಹಬ್ಬ ಶುರುವಾಗಲಿದೆ.

     

  • ಆಯುಧಪೂಜೆಗೆ ದಿ ವಿಲನ್ ಹಬ್ಬ

    the villain to release on ayudha pooja

    ಅಕ್ಟೋಬರ್ 18ಕ್ಕೆ ಆಯುಧಪೂಜೆ. ಅದಾದ ಮರುದಿನ ವಿಜಯದಶಮಿ. ನಾಡಹಬ್ಬ ದಸರಾ ಸಂಭ್ರಮ. ಚಾಮುಂಡೇಶ್ವರಿ ನಾಡು ಮೈಸೂರಿನಲ್ಲಿ ಅದ್ಧೂರಿ ಅಂಬಾರಿ. ಹೀಗೆ.. ನಾಡಿಗೆ ನಾಡೇ ದಸರಾ ಸಂಭ್ರಮದಲ್ಲಿರುವಾಗ ಬರುತ್ತಾನೆ ದಿ ವಿಲನ್. ಅಕ್ಟೋಬರ್ 18ಕ್ಕೆ ದಿ ವಿಲನ್ ರಿಲೀಸ್.

    ಹಬ್ಬದ ದಿನ ರಿಲೀಸ್ ಡೇಟ್ ಹೇಳೋದಾಗಿ ಹೇಳಿದ್ದ ನಿರ್ದೇಶಕ ಪ್ರೇಮ್ ಮತ್ತು ನಿರ್ಮಾಪಕ ಸಿ.ಆರ್.ಮನೋಹರ್, ನುಡಿದಂತೆ ನಡೆದಿದ್ದಾರೆ. ಶಿವಣ್ಣ ಮತ್ತು ಸುದೀಪ್ ಅಭಿನಯದ ಸಿನಿಮಾ ಆದ ಕಾರಣ, ಎಲ್ಲೆಲ್ಲೂ ಅದ್ಧೂರಿ ಸಂಭ್ರಮವಿರುತ್ತೆ. ಹೀಗಾಗಿಯೇ ವಿತರಕರ ಜೊತೆ ಒಂದು ಸಭೆ ಮಾಡಿ ನಿರ್ಣಯ ಘೋಷಿಸಿದ್ದಾರೆ ನಿರ್ಮಾಪಕ ಸಿ.ಆರ್.ಮನೋಹರ್ ಮತ್ತು ನಿರ್ದೇಶಕ ಪ್ರೇಮ್. ನಿರೀಕ್ಷೆಯಂತೆ 1000 ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆಯಾ..? ಕಾದು ನೋಡಿ.

  • ಆಸೆಬುರುಕ ಅಪ್ಪ ಕಿಚ್ಚನ ಮನದಾಸೆಯೇನು..?

    sudeep pens down a lovely poem to his daughter saanvi

    ಕಿಚ್ಚ ಸುದೀಪ್ ಮತ್ತು ಪ್ರಿಯಾ ಅವರ ಮುದ್ದಿನ ಮಗಳು ಸಾನ್ವಿ. ಜಗತ್ತಿನಲ್ಲಿ ಎಲ್ಲ ಅಪ್ಪಂದಿರಿಗೂ ಹೆಣ್ಣು ಮಕ್ಕಳ ಮೇಲೆ ಪ್ರೀತಿ ಜಾಸ್ತಿ. ಕಿಚ್ಚ ಸುದೀಪ್ ಕೂಡಾ ಅದಕ್ಕೆ ಹೊರತಾಗಿಲ್ಲ. ಮಗಳ ಹುಟ್ಟುಹಬ್ಬದ ದಿನ ಸುದೀಪ್ ಸ್ವತಃ ಕವಿಯಾಗಿಬಿಟ್ಟಿದ್ದಾರೆ. ಆ ಕವಿತೆಯ ಸಾಲುಗಳು ಹೀಗಿವೆ ನೋಡಿ..

    ನಿನ್ನೆ ಮೊನ್ನೆ ಇದ್ದ ಹಾಗಿದೆ..

    ಹೇಗಪ್ಪಾ ನಂಬೋದು..

    ನನ್ನ ಮಗಳಿಗೀಗ 16 ವರುಷ

    ನೀ ಇಟ್ಟ ಅಂಬೆಗಾಲು..

    ಮುದ್ದಾದ ಮೊದಲುಗಳು..

    ಕೂಡಿಟ್ಟಿರುವ ನಾ ಒಂದೊಂದು ನಿಮಿಷ..

    ಎದೆಯೆತ್ತರ ಬೆಳೆದಿರೋ

    ಕನಸು ನೀನು..

    ನಿನ್ನಿಂದಲೇ ಕಲಿಯುವ ಕೂಸು ನಾನು..

    ಆಸೆಬುರುಕ ಅಪ್ಪ ನಾನು..

    ಮತ್ತೆ ಮಗುವಾಗು ನೀನು..

    ಸಾನ್ವಿಗೀಗ 16 ವರುಷ. ತಂದೆ ತಾಯಿಗಳಿಗೆ ಮಗಳು ಸದಾ ಪುಟ್ಟ ಮಗುವಾಗಿಯೇ ಇರಲಿ ಎನ್ನುವ ಹಾರೈಕೆ ಸಹಜವೇ ಬಿಡಿ.. ಆದರೆ.. ಸುದೀಪ್ ಅವರ ಆಸೆ ನೋಡಿ.. ಮಗಳು ಸಾನ್ವಿ ಮತ್ತೆ ಪುಟ್ಟ ಮಗುವಾಗಬೇಕಂತೆ.. ಅಂದರೆ.. ಸುದೀಪ್ ಕೂಡಾ ಚಿಕ್ಕೋರಾಗ್ತಾರೆ.. ಆಸೆಬುರುಕ ಅಪ್ಪನ ಪ್ರೀತಿ ಮಗಳ ಮೇಲೆ ಸದಾ ಹೀಗೆಯೇ ಇರಲಿ. ಹ್ಯಾಪಿ ಬರ್ತ್ ಡೇ ಸಾನ್ವಿ.

  • ಇಂಗ್ಲಿಷ್'ನಲ್ಲೂ ಬರ್ತಾನೆ ವಿಕ್ರಾಂತ್ ರೋಣ

    ಇಂಗ್ಲಿಷ್'ನಲ್ಲೂ ಬರ್ತಾನೆ ವಿಕ್ರಾಂತ್ ರೋಣ

    ಕನ್ನಡದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿರೋ ಸಿನಿಮಾ ವಿಕ್ರಾಂತ್ ರೋಣ. ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಹಲವು ದೇಶಗಳಲ್ಲಿ ರಿಲೀಸ್ ಮಾಡಿ ದಾಖಲೆ ಬರೆಯಲು ಹೊರಟಿರೋ ಚಿತ್ರವಿದು. ಈ ಕನ್ನಡದ ಚಿತ್ರ ಈಗ ಇಂಗ್ಲಿಷ್‍ನಲ್ಲೂ ಬರಲಿದೆ ಅನ್ನೋದು ಪಕ್ಕಾ ನ್ಯೂಸ್. ಚಿತ್ರದ ಇಂಗ್ಲಿಷ್ ಡಬ್ಬಿಂಗ್‍ನ್ನು ಸ್ವತಃ ಸುದೀಪ್ ಈಗಾಗಲೇ ಮುಗಿಸಿಕೊಟ್ಟಿದ್ದಾರೆ. ಇದೂ ಒಂದು ದಾಖಲೆಯೇ. ಇಂಗ್ಲಿಷ್ ಭಾಷೆಗೆ ಡಬ್ಬಿಂಗ್ ಮಾಡಿದ ಮೊದಲ ಕನ್ನಡ ನಟ ಸುದೀಪ್.

    ಕಿಚ್ಚ ಸುದೀಪ್, ಅನೂಪ್ ಭಂಡಾರಿ ಕಾಂಬಿನೇಷನ್‍ನ ಸಿನಿಮಾ ವಿಕ್ರಾಂತ್ ರೋಣ. ನಿರೂಪ್ ಭಂಡಾರಿ, ನೀತು ಅಶೋಕ್, ರವಿಶಂಕರ್ ಗೌಡ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರೋ ಚಿತ್ರವಿದು.

    ಜಾಕ್ ಮಂಜು ನಿರ್ಮಾಣದ ಚಿತ್ರ 3ಡಿ ವರ್ಷನ್‍ನಲ್ಲೂ ಬರಲಿದೆ. ಕನ್ನಡ, ಇಂಗ್ಲಿಷ್ ಸೇರಿದಂತೆ ಒಟ್ಟು 10 ಭಾಷೆಗಳಲ್ಲಿ ರಿಲೀಸ್ ಆಗಲಿದೆ.