` ರಾಘವೇಂದ್ರ ರಾಜ್ ಕುಮಾರ್ ಶ್ರೇಷ್ಟ ನಟ, ಮೇಘನಾ ರಾಜ್ ಶ್ರೇಷ್ಟ ನಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Raghavendra Rajkumar, Meghana Raj Image
Raghavendra Rajkumar, Meghana Raj

ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ರಾಜ್ಯ ಸರ್ಕಾರ ಚಲನಚಿತ್ರ ರಂಗದ ಸಾಧಕರಿಗೆ ಜೀವಮಾನ ಸಾಧನೆಗಾಗಿ ಮತ್ತು ಚಲನಚಿತ್ರದ ವಿವಿಧ ವಿಭಾಗಗಳಲ್ಲಿ ನೀಡುವ 2018ನೇ ಪ್ರಶಸ್ತಿಗಳು ಘೋಷಣೆಯಾಗಿವೆ. ಬಸಂತ್ ಕುಮಾರ್ ಪಾಟೀಲ್ ಅಧ್ಯಕ್ಷತೆಯ ಸಮಿತಿಯಲ್ಲಿ ಪಿ.ಎಚ್‌.ವಿಶ್ವನಾಥ್, ಮಾರ್ಸ್ ಸುರೇಶ್, ರವೀಂದ್ರ ಭಟ್  ಇದ್ದರು.  ಆಯ್ಕೆ ಸಮಿತಿಗೆ ಕಳಿಸಲಾಗಿದ್ದ 162 ಚಿತ್ರಗಳನ್ನು ವೀಕ್ಷಿಸಿದ ಸಮತಿ ವಾರ್ಷಿ ಪ್ರಶಸ್ತಿ ಮತ್ತು ಜೀವಮಾನ ಸಾಧನೆಯ ಪ್ರಶಸ್ತಿಗಳನ್ನು ಘೋಷಿಸಿದೆ.

ಜೀವಮಾನ ಸಾಧನೆ ಪ್ರಶಸ್ತಿ :

ಡಾ.ರಾಜ್‌ಕುಮಾರ್ ಪ್ರಶಸ್ತಿ -ಜೆ.ಕೆ.ಶ್ರೀನಿವಾಸ ಮೂರ್ತಿ

ಪುಟ್ಟಣ್ಣ ಕಣಗಾಲ್ ಪ್ರಶಸ್ತಿ-ಪಿ.ಶೇಷಾದ್ರಿ

ಡಾ.ವಿಷ್ಣುವರ್ಧನ್ ಪ್ರಶಸ್ತಿ-ಬಿ.ಎಸ್.ಬಸವರಾಜು

ಮೊದಲನೇ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ

ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ

ಮೂರನೇ ಅತ್ಯುತ್ತಮ ಚಿತ್ರ: ಒಂದಲ್ಲಾ ಎರಡಲ್ಲಾ

ಅತ್ಯುತ್ತಮ ನಟ: ರಾಘವೇಂದ್ರ ರಾಜ್‌ಕುಮಾರ್ (ಅಮ್ಮನ ಮನೆ)

ಅತ್ಯುತ್ತಮ ನಟಿ: ಮೇಘನಾ ರಾಜ್ (ಇರುವುದೆಲ್ಲವ ಬಿಟ್ಟು)

ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್ (ಚೂರಿಕಟ್ಟೆ)

ಅತ್ಯುತ್ತಮ ಪೋಷಕ ನಟಿ: ವೀಣಾ ಸುಂದರ್ (ಆ ಕರಾಳ ರಾತ್ರಿ)

ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಸಂತಕವಿ ಕನಕದಾಸರ ರಾಮಧಾನ್ಯ

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

ಅತ್ಯುತ್ತಮ ಮಕ್ಕಳ ಚಿತ್ರ: ಹೂವು ಬಳ್ಳಿ

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬೆಳಕಿನ ಕನ್ನಡಿ

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ದೇಯಿ ಬೈದೇತಿ

ಅತ್ಯುತ್ತಮ ಕತೆ: ಹರೀಶ್ ಎಸ್ (ನಾಯಿಗೆರೆ)

ಅತ್ಯುತ್ತಮ ಚಿತ್ರಕಥೆ: ಪಿ.ಶೇಷಾದ್ರಿ (ಮೂಕಜ್ಜಿಯ ಕನಸುಗಳು)

ಅತ್ಯುತ್ತಮ ಸಂಭಾಷಣೆ: ಶಿರಿಷಾ ಜೋಶಿ (ಸಾವಿತ್ರಿ ಭಾಯಿ ಪುಲೆ)

ಅತ್ಯುತ್ತಮ ಸಂಗೀತ ನಿರ್ದೇಶನ: ರವಿ ಬಸ್ರೂರು (ಕೆಜಿಎಫ್)

ಅತ್ಯುತ್ತಮ ಕಲಾ ನಿರ್ದೇಶನ : ಶಿವಕುಮಾರ್ (ಕೆಜಿಎಫ್)

ಅತ್ಯುತ್ತಮ ಬಾಲನಟ: ಮಾಸ್ಟರ್ ಆರೆನ್(ರಾಮನ ಸವಾರಿ)

ಅತ್ಯುತ್ತಮ ಬಾಲನಟಿ: ಬೇಬಿ ಸಿಂಚನಾ (ಅಂದವಾದ ಸಿನಿಮಾ)

ಅತ್ಯುತ್ತಮ ಗೀತ ರಚನೆ: ಡಾ.ಬರಗೂರು ರಾಮಚಂದ್ರಪ್ಪ (ಬಯಲಾಟದ ಭೀಮಣ್ಣ ಚಿತ್ರದ ಸಾವೇ ಸಾವೇ ಹಾಡು)

ಅತ್ಯುತ್ತಮ ಕಿರುಚಿತ್ರ: ಪಡುವಾರಳ್ಳಿ

ಅತ್ಯುತ್ತಮ ಹಿನ್ನಲೆ ಗಾಯಕ: ಸಿದ್ದಾರ್ಥ್ ಬೆಳ್ಮಣ್ಣು (ಸಂತಕವಿ ಕನಕದಾಸರ ರಾಮಧಾನ್ಯ ಚಿತ್ರದ ಇರುಳ ಚಂದಿರನ.. )

ಅತ್ಯುತ್ತಮ ಹಿನ್ನಲೆ ಗಾಯಕಿ: ಕಲಾವತಿ ದಯಾನಂದ (ದೇಯಿ ಬೈದೇತಿ ಚಿತ್ರದ ಗೆಜ್ಜೆಗಿರಿ ನಂದನಾ.. )

ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಯನ್ನು ಇಬ್ಬರು ಲೇಖಕರಿಗೆ ಜಂಟಿಯಾಗಿ ನೀಡಲಾಗಿದೆ. ಚಿತ್ರಕಥೆ ಹಾಗೆಂದರೇನು?  ಕೃತಿಗೆ ಎನ್‌.ಎಸ್‌.ಶಂಕರ್ ಮತ್ತು ಅಂಬರೀಶ್ ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು ಕೃತಿಗೆ ಡಾ.ಶರಣು ಹುಲ್ಲೂರು ಪ್ರಶಸ್ತಿ ಪಡೆದಿದ್ದಾರೆ.